Tuesday, December 31, 2013

ಯಕ್ಷಪ್ರಶ್ನೆ - ತಾ.ರಾ.ಸು

Yaksha Prashne = Ta Ra Su

 


ಮುನ್ನುಡಿಯಿಂದ:

ನನ್ನ ಈ ಹೊಸ ಕಾದಂಬರಿಗಿಟ್ಟ ಹೆಸರನ್ನು ಒದುತ್ತಿದ್ದಹಾಗೇ ವಾಚಕರಿಗೆ 'ಮಹಾಭಾರತ'ದಲ್ಲಿ ಬರುವ ಯಕ್ಷ ಪ್ರಶ್ನೆಯ ಕಥಾಭಾಗ ನೆನಪಿಗೆ ಬರುವುದು ಸ್ವಾಭಾವಿಕ.

ಕಾಡಿನ ಅಲೆತದಿಂದ ಬಾಯಾರಿ, ಕೊಳ ಒಂದಕ್ಕೆ ನೀರು ಕುಡಿಯಲೆಂದು ಬಂಡ ಪಂಚ ಪಾಂಡವರಲ್ಲಿ ಮೊದಲನೆಯ ನಾಲ್ವರು, ಆ ಕೊಳದಲ್ಲಿ ವಾಸವಾಗಿದ್ದ ಯಕ್ಷನೊಬ್ಬನು ಕೇಳಿದ ಜೀವನದ ಮೂಲಭೂತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ,ನೀರು ಕುಡಿಯಲು ಹೋಗಿ ಮೃತರಾಗುತ್ತಾರೆ. ಕೊನೆಗೆ ಧರ್ಮರಾಯ ಆ ಪ್ರಶ್ನೆಗೆಲ್ಲಕ್ಕೂ ಉತ್ತರ ಕೊಟ್ಟು,ಯಕ್ಷನನ್ನು ತ್ರುಪ್ತಿಪಡಿಸಿ, ತನ್ನ ತಮ್ಮಂದಿರನ್ನು ಬದುಕಿಸಿ ಕೊಳ್ಳುತ್ತಾರೆ.

ಇದು ಸ್ಥೂಲವಾಗಿ 'ಮಹಾಭಾರತ'ದಲ್ಲಿ ಬರುವ ಕಥೆ. ಇದೊಂದು ಕುತೂಹಲಕಾರಿಯಾದ, ರಮ್ಯ ಕಥೆಯಾಗಿದ್ದಂತೆಯೇ ಸಾಂಕೇತಿಕ ಮಹತ್ವವನ್ನು  ಪಡೆದ ವಿಷಯವಾಗಿಯೂ ಇದೆ.

ಬಾಳಿನ ಸುಖ ಸಂತೋಷಗಳಿಗಾಗಿ ಬಾಯಾರಿ, ಅವುಗಳ ತೃಪ್ತಿಯತ್ತ ಧಾವಿಸುವ ಮನುಷ್ಯ, ಆ ಸಮಯದಲ್ಲಿ ಬಾಳಿನ ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಂಥ ಸವಾಲುಗಳನ್ನು ಎದುರುಸಿ, ಉತ್ತರ ಕೊದಬಲ್ಲವನು ಬದುಕುತ್ತಾನೆ, ಇಲ್ಲವಾದವನು ಸೋತು,ಜೀವನ್ಸ್ಮ್ರುತನಾಗುತ್ತಾನೆ, ನಮ್ಮ ಸುತ್ತಲ ಬಾಳಿನಲ್ಲಿ, ಇಂಥ ಸಮಯದಲ್ಲಿ, ಗೆಲ್ಲುವವರಿಗಿಂತ ಸೋಲುವವರೇ ಹೆಚ್ಚು. ಇದು ದಿನದಿನವೂ ನಾವು ಕಂಡುಕೊಂಡ ಸತ್ಯ. 

ನಿತ್ಯಜೀವನದಲ್ಲಿ, ಸಾಮಾನ್ಯ ಮಾನವನ ಬಾಳು ಎದುರಿಸಬೇಕಾದ ಹಲವಾರು ಸವಾಲುಗಳಲ್ಲಿ ಲೈಂಗಿಕ ಸಮಸ್ಯೆಯೂ ಇದನ್ನು ಕಾಮವೆನ್ನಿ, ಪ್ರೇಮವೆನ್ನಿ, ಎನಾದರೊ ಹೆಸರಿಟ್ಟು ಕರೆಯಿರಿ - ಒನ್ದು. ಅತ್ಯಂತ ಸಾಮಾನ್ಯ ಮನುಷ್ಯನ ಬಾಳೂ ಈ ಸಮಸ್ಯಯ ಆಘಾತಕ್ಕೆ ಹೊರತಾಗಿಲ್ಲ. ನಮ್ಮ ಸುತ್ತಲು ಸಹಸ್ತ್ರಾರು ಕುಟುಂಬಗಳಲ್ಲಿ ವ್ಯಕ್ತವಾಗಿಯೋ, ಅವ್ಯಕತವಾಗಿಯೋ ಕಾಣುವ ಸುಖ ಸಂತೋಷ, ದುಃಖ = ದುರಂತಗಳ ಬುನಾದುಯಲ್ಲಿ, ಈ ಸಮಸ್ಯ ಕಂಡ ಹಾಗೆಯೋ, ಕಾನದಮ್ತೆಯೋ ಹುದುಗಿದೆ. ಮಾನವನ ಬಾಳಿನ ಈ ಸುಖಾಂತ, ದುರಂತಗಳಿಗೆ, ಸಾಮಾನ್ಯ ಮಾನವ ವಿಧಿ ಎಂಬ ಕಾರಣವನ್ನು ಆರೋಪಿಸಿ ಸಮಾಧಾನ ಪಡೆಯಲೆತ್ನಿಸಿದರೆ, ಮನೋವಿಜ್ಞಾನಿ ಮಾನವನ ಸುಪ್ತ ಚಿತ್ತದಲ್ಲಿ ಹುದುಗಿರುವ ಕಾರಣಗಳನ್ನು ಬೆದಕಿ, ಹಲವಾರು ಹೆಸರಿನ ವೈಜ್ಞಾನಿಕ ಕಾರನಗನ್ನು ತೋರಿಸುತ್ತಾನೆ.

ವಿಧಿಯೆಂದೇ ಹೇಳಲಿ, ಗತ ಘಟನೆಯ ಪ್ರಭಾವದಿಂದ ಸುಪ್ತ ಚಿತ್ತಕ್ಕಾದ ಆಘಾತದ ಪರಿಣಾಮವೆಂದೇ ಹೇಳಲಿ, ಏನಾದರೂ ಜನ್ನ ಮಹಾಕವಿ ಹೇಳಿದ ಮಾತು, 'ಮನಸಿಜನ ಮಾಯೆ ವಿಧಿ ವಿಲಸನದ ನರಂಬಡೆಯೆ ಕೊಂದು ಕೂಗದೆ ನರರಂ'ಎಂಬ ನಿತ್ಯಸತ್ಯ.

ಆ ಸತ್ಯವೇ ಇಲ್ಲಿ. ಈ ಕಾದಂಬರಿ ರೂಪವಾಗಿ ಚಿತ್ರಿಸವಾಗಿದೆ