Sunday, July 27, 2014

ಮಾರ್ಜಾಲ ಸನ್ಯಾಸಿ - ಅ. ನ. ಕೃ

Maarjaala Sanyasi - A Na Krishnaraya




ಬೆಳ್ಳಿಗ್ಗೆ ಎದ್ದು ಯಾವುದೇ ಕನ್ನಡ ಚಾನೆಲ್ ಹಾಕಿದರೆ ಬರುವುದು ಅಂದಿನ ಜೋತಿಷ್ಯ, ಇದು ಒಂದಲ್ಲ ಎಲ್ಲಾ ಚನ್ನೆಲ್ ನಲ್ಲೂ ಕೂಡು, ಯಾಕೆ? ಯಾಕೆಂದರೆ ಚಾನೆಲ್ ಗೆ ಟಿ ಅರ್ ಪಿ ಬೇಕು ಮತ್ತು ಜನರಿಗೆ ತಮ್ಮ ಕಷ್ಟಗಳು ದೂರವಾಗಬೇಕು. ಒಂದು ಚಾನೆಲ್ ನಲ್ಲಿ ಬರುವ ಫೋನ್ ಕರೆಗಳನ್ನು ಆಲಿಸಿದರೆ ಒಬ್ಬರಿಗೂ ಒಂದೊಂದು ಕಷ್ಟಗಳು ಅದನ್ನು ನಿವಾರಿಸಲು ಕಾದಿ ಹುಟ್ಟು ಜನರು ಒಂದೊಂದು ಉಪಾಯಗಳನ್ನು ಹೇಳುತ್ತಾರೆ. ಅದನ್ನೆಲ್ಲಾ ಮಾಡಿದರೆ ಅವರ ಕಷ್ಟಗಳು ನಿವಾರಣೆಯಾಗುತ್ತದ, ಇಲ್ಲ ಮತ್ತೆ ಫೋನ್ ಮಾಡುವುದು ಯಾಕೆ? ಯಾಕೆಂದರೆ ಅವರಿಗೆ ತಮ್ಮ ಕಷ್ಟಗಳನ್ನು ನಿವಾರಿಸಲು ಆಸ್ವಷಣೆಗಳು ಬೇಕು ಮತ್ತು ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಒಂದು ಸುಲುಭ ಮಾರ್ಗ ಬೇಕು, ಇದನ್ನು ಅರ್ಥ ಮಾಡಿಕೊಂಡ ಚಾನೆಲ್ ಗಳು ಮತ್ತು ಸುಳ್ಳು ಜೋತಿಷ್ಯ ಶಾಸ್ತ್ರಿಗಳು ಗೊಡ್ಡು ಆಶ್ವಾಷನೆಗಳ್ಳನ್ನು ಕೊಟ್ಟು ಇಬ್ಬರು ದುಡ್ಡು ಮಾಡುತ್ತಾರೆ. ಇದೆ ಅ. ನ. ಕೃ ರವರ 'ಮಾರ್ಜಾಲ ಸನ್ಯಾಸಿಯ' ಕಥೆಯ ಎಳೆ. ನನಗೆ ಜೋತಿಷ್ಯದಲ್ಲಿ ನಬಿಕೆ ಇದ್ದರು ಪ್ರತಿ ದಿನ ಚನ್ನೆಲ್ ಗಳಲ್ಲ್ಲಿ ಹೇಳುವ ಊಹಾಪೋಹಗಳಲ್ಲಿ ಅಲ್ಲ.

ಮಹಾದೇವ ಶಾಸ್ತ್ರಿಗಳು ತುಂಬ ಮೇಧಾವಿಗಳು ಮತ್ತು ಜೋತಿಷ್ಯ ಹೇಳುವುದರಲ್ಲಿ ಅಷ್ಟೇ ನಿಪುನರು, ಅವರ ಮಗ ನರಹರಿ ಕೂಡ ಅಷ್ಟೇ. ನರಹರಿ ಮಾಡುವೆ ಮಾಡಿಕೊಳ್ಳಲು ಒಪ್ಪಿರುವುದಿಲ್ಲ ಯಾಕೆಂದರೆ ಅವನ ಭವಿಷ್ಯದಲ್ಲಿ ಮದುವೆಯಾದರೆ ಮರಣ ಎಂದು ಬರೆದಿರುತ್ತದೆ ಎಂದು ತಂದೆಗೆ ಹೇಳಿದಾಗ ಅವರು ಅವನ ಜಾತಕ ನೋಡಿ ನಿನ್ನ ಶಾಸ್ತ್ರ ತಪ್ಪಿ ಎಂದು ಹೇಳಿ ಮಾಡುವೆ ಮಾದಿಸುತ್ತಾರೆ. ಮಾಡುವೆಯಾದ ಮೇಲೆ ನರಹರಿ ಸಾಯುತ್ತಾನೆ. ತಂದೆಗೆ ತನ್ನ ತಪ್ಪು ಅರಿವಾಗಿ ಜೋತಿಷ್ಯ ಹೇಳುವುದನ್ನು ಬಿಡುತ್ತಾರೆ ಮತ್ತು ಅವರ ಆರೈಕೆಯನ್ನು ಸೇಸೋ ನೋಡಿಕೊಂಡು ಮಾವನ ಮನೆಯಲ್ಲಿ ಇರುತ್ತಾಳೆ/

ಕಷ್ಯಪ್ನವರ ಮಗ ಜೋತಿಷ್ಯದಲ್ಲಿ ತುಂಬ ಆಸಕ್ತಿ. ಕಷ್ಯಪ್ನವರು ಮಹಾದೇವಶಾಸ್ತ್ರಿಗಳ ಮನೆಗೆ ಹೋಗಿ ಅವರ ಮಗನಿಗೆ ಜೋತಿಷ್ಯ ಹೇಳಿಕೊಡಿ ಎಂದು ಒಪ್ಪಿಸುವಷ್ಟ್ರಲ್ಲಿ ಸಾಕುಸಾಕಗುತ್ತದೆ. ಸುಬ್ಬು ಕಷ್ಯಪ್ನವರ ಮಗ ಡಿಗ್ರಿ ಓದಿಕೊಂಡು ಮಹಾದೇವಶಾಸ್ತ್ರಿಗಳ ಮನೆಗೆ ಹೋಗಿ ಜೋತಿಷ್ಯ ಕಲಿಯುತ್ತಿರುತ್ತಾನೆ. ಅವರ ಸೊಸೆಗೆ ಲಕ್ಷ್ಮದೇವಿಗೆ ಸುಬ್ಬು ಮೇಲೆ ಇಷ್ಟವಾಗಿ ಶಾಸ್ತ್ರಿಗಳು ಮನೆಯಲ್ಲಿ ಇಲ್ಲವಾದಾಗ ಸುಬ್ಬುವನ್ನು ಮೋಹಿಸುತ್ತಾಳೆ. ಸುಬ್ಬುಗೆ ಮದುವೆಯಾಗಿಗಿದ್ದರು ಅವನು ಇದಕ್ಕೆ ಒಪ್ಪಿ ಗುರುದ್ರೋಹಕ್ಕೆ ಕೈ ಹಾಕುತ್ತಾನೆ.

ಲಕ್ಷ್ಮಿಯ ಮೋಹಕ್ಕೆ ಸಿಲುಕು ಅವನು ಮನೆ ಬಿಟ್ಟು ಅವಳೊಂದಿಗೆ ಬೊಂಬೆಗೆ ಹೋಗಿ ಜೋತಿಷ್ಯ ಹೇಳಲು ಶುರು ಮಾದುತ್ತಾನೆ. ಅವನ ಜೋತಿಷ್ಯಕೀ ಮರುಳಾಗಿ ಹೋಟೆಲ್ ಮಾಲೀಕರು ಸಿನೆಮಾ ತಾರೆಯರು. ಸ್ಟುಡಿಯೋ ಮಾಲೀಕರು, ನಿರ್ದೆಶಕರು ಮುಗಿಬಿಳುತ್ತಾರೆ. ಇದನ್ನು ಕಂಡ ಸುಬ್ಬು ಸುಳ್ಳು ಸುಳ್ಳು ಜೋತಿಷ್ಯ ಹೇಳಲು ಶುರು ಮಾಡುತ್ತಾನೆ. ಅವನು ಬೆಂಗಳೂರುರಿಗೆ ಅವರ ಅಮ್ಮನನ್ನು ನೋಡಲು ಬಂದಿರುವಾಗ ಲಕ್ಷ್ಮಿ ಸ್ಟುಡಿಯೋ ಮಾಲಿಕರೊಂಡಿಕೆ ಸಂಬಂಧ ಬೆಳೆಸುತ್ತಾಳೆ. ಸುಬ್ಬು ಅವರ ತಾಯಿಯ ಸಂಸ್ಕರ ಮುಗಿಸಿಕೊಂಡು ಬಾಂಬೆಗೆ ಹೋಗುವಾಗ ಅವನಿಗೆ ಲಕ್ಷ್ಮಿಯ ನಿಜ ಸ್ವರೋಪ್ಪ ತಿಳಿದು ದುಃಖಿಸುತ್ತಾನೆ.


Wednesday, July 23, 2014

ಮುಯ್ಯಿಗೆ ಮುಯ್ಯಿ - ಅ. ನ. ಕೃ

Muyyige Muyyee - A Na Krishnaraya



ಒಬ್ಬರ ಏಳಿಗೆ ಕಂಡು ಒಬ್ಬರಿಗೆ ಆಗುವುದಿಲ್ಲ, ಅವರನ್ನು ಹೇಗಾದರೂ ಮಾಡಿ ಮಣ್ಣು ಮುಕ್ಕಿಸಬೇಕು, ಅವರ ಹೆಸರನ್ನು ಹಾಳು ಮಾಡಬೇಕು ಎಂದು ಒಳಗೊಳಗೇ ಮಸಲತ್ತು ಮಾದುತ್ತಿರುತ್ತಾರೆ. ಇದು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ಕೆಲವರಿಗೆ ಒಂದು ಸುಖ ಸಂಸಾರ ಕಂಡರೆ ಆಗುವುದಿಲ್ಲ ಅವರ ಸಂಸಾರದಲ್ಲಿ ಹುಲಿ ಹಿಂಡಲು ಹಾತೊರೆಯುತ್ತಿರುತ್ತಾರೆ, ಅವರಿಗೆ ಒಂದು ಸಣ್ಣ ಅವಕಾಶ ಸಿಕ್ಕರೂ ಅದನ್ನು ಉಪಯೋಗಿಸಿ ಚಿಕ್ಕದ್ದನ್ನು ದೊಡ್ಡದ್ದು ಮಾಡಿ, ಗುಡ್ಡವನ್ನು ಬೆಟ್ಟ ಮಾಡಿ, ಇಲಿಯನ್ನು ಹುಲಿ ಮಾಡಿ ಇತರರ ಮುಂದೆ ಸುದ್ದಿ ಹರಡುತ್ತಾರೆ, ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಾರೆ. ಆದರೆ ಒಬ್ಬ ಮನುಷ್ಯ ತನ್ನ ಗುಣ ಒಳ್ಳೆಯದಾಗಿದ್ದಲ್ಲಿ, ನಡತೆಯಲ್ಲಿ ಯಾವ ದೋಷ ಇಲ್ಲದ್ದಿದ್ದಲ್ಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ತಾನಾಹಿತು ತನ್ನ ಕೆಲಸವಾಹಿತು ಎಂದು ಕ್ರಮೇಣ ಸುಳು ಸುದ್ದಿಗಳು ತಣ್ಣಗಾಗಿ ಸುಳ್ಳು ಸುದ್ದಿ ಹಬ್ಬಿಸುವವರ ನಿಜ ಮರ್ಮ ತಿಲಿಯುತ್ತದೆ, ಇದೆ ಅ. ನ. ಕೃ. ರವರ 'ಮುಯ್ಯಿಗೆ ಮುಯ್ಯಿ' ಕಾದಂಬರಿಯ ಎಳೆ. 

ಅ. ನ. ಕೃಷ್ಣರಾಯ ರವರ ಬಹುತೇಕೆ ಕಾದಂಬರಿಗಳು ಸಾಮಜದಲ್ಲಿ ಕಾಡುತ್ತಿರುವ ಸಮಸ್ಯೆಗಳು ಮತ್ತು ಅದನ್ನು ಹೇಗೆ ನಿಭಾಹಿಸಬೇಕು ಎಂಬುದರ ಸುತ್ತ ರಚಿತವಾಗಿವೆ. ಅವರ ಕಾದಂಬರಿ 'ನಗ್ನ ಸತ್ಯ' , 'ಶನಿ ಸಂತಾನ' ಮತ್ತು 'ಸಂಜೆಗತ್ತಲು' ಕಾದಂಬರಿ ವೇಶ್ಯವಾಟಿಕೆ ಕುರಿತಾದರೆ 'ಮುಯ್ಯಿಗೆ ಮುಯ್ಯಿ' , 'ಮಾರ್ಜಾಲ ಸನ್ಯಾಸಿ' ಮಂತ್ರ ತಂತ್ರಗಳ ಸುತ್ತ ಸುಲಿದಾದುತ್ತದೆ. 

'ಮುಯ್ಯಿಗೆ ಮುಯ್ಯಿ' ಕಾದಮ್ಬರಿಯಲ್ಲಿ ಬರುವ ನಾರಾಯಣ ಶಾಸ್ತ್ರಿಗಳು, ನಾಗಪ್ಪ , ಸಂಬು, ಸೀತಮ್ಮ, ಕಾಳಚಾರಿ ಎಲ್ಲ ಈ ಸಮಾಜದ ಒಂದೊಂದು ಮುಖಗಳಾಗಿ ತೊರಿಸಿದ್ದಾರೆ. ನಾರಾಯಣ ಶಾಸ್ತ್ರಿಗಳು ಹುಲ್ಲೂರಿನಲ್ಲೂ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ತುಂಬಾ ಪ್ರಸಿದ್ದರು, ಅವರ ನಡೆ ನುಡಿಗಳು ಮತ್ತು ಶ್ರದ್ದೆ ಇಂದ ಗಳಿಸಿದ ಹೆಸರದು. ಅವರ ಇಬ್ಬರು ಮಕ್ಕಳು ವಿಶ್ವೇಶ್ವರ ಮತ್ತು ಸಾಂಬ, ವಿಶ್ವೇಶ್ವರ ತಡೆ ಹಾಗೆ ಮೃದು ಸ್ವಭಾವ ಅವರ ಹಾದಿಯಲ್ಲೇ ಪೌರೋಹಿತ್ಯ ಮಾಡುತ್ತಿದ್ದಾನೆ ಆದರೆ ಸಾಮ್ಬುಗೆ ಮಂತ್ರ ಇತ್ಯಾದಿಗಳಲ್ಲಿ ಆಸಕ್ತಿ ಇಲ್ಲ. ಇಗೆ ಒಂದು ದಿನ ಪೌರೋಹಿತ್ಯಕ್ಕೆ ಹೋದಾಗ ವಿಶ್ವೇಶ್ವರ ತಮ್ಮ ಸಾಂಬನನ್ನು ಕರೆದುಕೊಂಡು ಹೋದ, ನದಿಯಲ್ಲಿ ಸ್ನಾನ ಮಡಿ ಮುಗಿಸಿದಾಗ ಅವನ ದೇಹದಲ್ಲಿ ನರಸಿಂಹ ಶಾಸ್ತ್ರಿಗಳ ಆತ್ಮ ಸೆರಿಕೊಲ್ಲುತ್ತದೆ. ಈ ವಿಷಯ ಎಲ್ಲ ದಿಕ್ಕುಗಳಲ್ಲಿ ಹಬ್ಬಿ ಅವನ ಹೆಸರು ಗಳಿಸುತ್ತಾನೆ, ಆದರೆ ಇದರಿಂದ ನಾರಯಾಣ ಶಾಸ್ತ್ರಿಗಳಿಗೆ ವಿಶ್ರಾಂತಿ ಇಲ್ಲ, ಅವರು ತಮ್ಮ ಗುರುಗಳಾದ  ನರಸಿಂಹ ಶಾಸ್ತ್ರಿಗಳ ಬಾಲಿ ತಮ್ಮ ದುಃಖ ವನ್ನು ಹೇಳಿಕೊಳ್ಳುತ್ತಾರೆ, ಇದನ್ನು ಕೇಳಿದ ಆತ್ಮ ಸಾಂಬನ ದೇಹವನ್ನು ಬಿಟ್ಟು ಹೊಗುತ್ತದೆ. ಇದನೆಲ್ಲ ನಾಗಪ್ಪ ದೊರದಲ್ಲೇ ನಿಂತು ಗಮನಿಸುತ್ತಿದ್ದ. 

ನಾಗಪ್ಪ ಮತ್ತು ಕಾಳಚಾರಿ ಒಂದು ಕಾಲದಲ್ಲಿ ಸ್ನೇಹಿತರು, ಇವರಿಗೆ ಶ್ರೀಕಂಠಪ್ಪ ಸ್ನೇಹಿತ. ಶ್ರೀಕಂಠಪ್ಪ  ಭದ್ರಮ್ಮನನ್ನು ಮದುವೆಯಾಗುತ್ತನೆ, ನೋಡಲು ತುಂಬಾ ಸುಂದರವಾಗಿ ಕಾಣುವ ಭದ್ರಮ್ಮನನ್ನು ಕಾಳಚಾರಿ ಮೋಹಿಸಲು ಪ್ರಯತ್ನಿಸುತ್ತಾನೆ. ಇದರಿನ ಕೋಪಗೊಂಡ ಶ್ರೀಕಂಠಪ್ಪ ಮತ್ತು ನಾಗಪ್ಪ ಬುದ್ದಿ ಹೇಳಲು ಹೋಗುತ್ತಾರೆ ಆದರೆ ಅದು ಫಲಿಸುವುದಿಲ್ಲ. ಕಾಳಾಚಾರಿ ಮಂತ್ರ ವಿದ್ಯೆಇಂದ ಶ್ರೀಕಂಠಪ್ಪ ನನ್ನು ಕೊಂದು ಭದ್ರಮ್ಮನನ್ನು ವಶೀಕರಣ ಮಾಡಿಕೊಂಡು ಅವನ ಮನೆಯಲ್ಲಿ ಇತ್ತುಕೊನ್ದಿರುತ್ತಾನೆ. ನಾಗಪ್ಪ ಅವನ ವಿರುದ್ದ ಮಂತ್ರ ಪ್ರಯೋಗ ಮಾಡಬಾರದು ಎಂದು ಅವನನ್ನು ಅಂಗ ಊನ್ಯತೆ ನಾಡಿ ಮೂಲೆಗುಂಪ್ಪಾಗಿಸುತ್ತಾನೆ. 

ಕಾಳಾಚಾರಿಯ ಕಾಟ ಹದ್ದುಮೀರಿ ಹೋಗಲು  ನಾರಯಾಣ ಶಾಸ್ತ್ರಿಗಳ  ಬಳಿ ಚಳುವಚಾರ್ರಿ ಬಂದು ಅವರ ಮಗಳನ್ನು ಕಾಪಾಡಲು ಬೆಡಿಕೊಳ್ಳುತ್ತಾನೆ. ಅವನಿಗೆ ಊರ ಪಟೇಲರ ಸಹಾಯ ಪಡೆದು ಪಡುವೆ ಮಾಡಿಸುತ್ತಾರೆ. ಆದರೆ ಕಾಳಾಚಾರಿಯ ಮಂತ್ರ ಪ್ರಯೋಗದಿಂದ ಅವಳನ್ನು ರಕ್ತ ಕಾರಿ ಸಾಯುವಂತೆ ಮಾಡುತ್ತನೆ. ಅದರಿಂದ ನಾರಯಾಣ ಶಾಸ್ತ್ರಿಗಳತುಂಬಾ ಕುಸಿದು ಹೊಗುತ್ತಾರೆ, ಅವಳ ಹತ್ಯೆಗೆ ನಾನೇ ಕಾರಣ ಎಂದು ಮನಸ್ಸಿಗೆ ನೋವು ಮಾದಿಕೊಲ್ಲುತ್ತಾರೆ. ಇದನ್ನು ನೋದದಾಗದೆ ಸಾಂಬ ಕಾಲಚಾರಿಯನ್ನು ಎದುರಿಸಲು ನಾಗಪ್ಪನ ಬಾಲಿ ಮಂತ್ರ ವಿದ್ಯೆ ಕಲಿಯಲು ಬರುತ್ತಾನೆ. ಮುಂದೆ ಇದರಿಂದಾಗುವ ಪರಿಣಾಮ ಮತ್ತು ಕಾಲಾಚಾರಿಯನ್ನು ಹೇಗೆ ಸೋಲಿಸುತ್ತಾನೆ ಮತ್ತು ಇದರಿಂದ ನಾರಯಾಣ ಶಾಸ್ತ್ರಿಗಳ ಮೇಲೆ ಆಗುವ ಪರಿಣಾಮವನ್ನು ಓದಿಯೇ ನೋಡಬೇಕು. 



Sunday, July 20, 2014

ಜಾಣರ ಚಮತ್ಕಾರ - ಎನ್ ನರಸಿಂಹಯ್ಯ

Janara Chamatkara - Narashimaiah N



ನಿಮಗೆ ಸಿನೆಮಾ ನೋಡುವ ಅಭ್ಯಾಸವಿದ್ದರೆ ಇಂಗ್ಲಿಷ್ ಭಾಷೆಯ "Strangers On A Train (1951)" ನೋಡಿರಬಹುದು ನೋಡಿಲ್ಲ ಅಂದ್ರೆ ಆ ಕೆಥೆ ಹೇಗೆ ಹೋಗುತ್ತದೆ, ಇಬ್ಬರು ಅಪರಿಚತರು ತಮ್ಮ ಸಂಭಂದಗಳಿಂದ ಬೇಸತ್ತಿರುವ ವಿಚಾರವನ್ನು ಒಬ್ಬರಿಗೊಬ್ಬರು ಹೆಲಿಕೊಲ್ಲುತ್ತಾರೆ, ಆ ಸಂಬಂದಗಳಿಂದ ಮುಕ್ತಿ ಸಿಗಬೇಕಾದರೆ ಅವರರನ್ನು ಕೊಲೆಮಾಡಬೇಕು ಮತ್ತು ಒಬ್ಬರು ಇನ್ನೊಬ್ಬರ ಪತ್ನಿಯನ್ನು ಕೊಂದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ನಿರದರಿಸುತ್ತಾರೆ. ಇದೆ ಆ ಸಿನಿಮಾ ಕಥೆ. ನರಸಿಂಹಯ್ಯನವರ 'ಜಾಣರ ಚಮತ್ಕಾರ' ಕಾದಂಬರಿಯ ಕಥೆಯು ಸರಿಸುಮಾರು ಇದೆ.

ರೂಪನಗರದಲ್ಲಿ ಎರಡು ಕೊಲೆಯಾಗುತ್ತದೆ, ಎರಡಕ್ಕೂ ಯಾವುದೇ ಸಂಬಂದವಿರುವುದಿಲ್ಲ, ಎರಡು ಕೊಲೆಗಳು ಒಬ್ಬನೇ ಕೊಲೆಗಾರ ಮಾಡಿದನೆಂದು ಪೊಲೀಸರು ಎನಿಸುತ್ತಾರೆ. ಕೊಲೆಗಳು ನೆಡೆದು ಐದು ತಿಂಗಳಾದರೂ ಕೊಲೆಗಾರ ಸಿಗುವುದಿಲ್ಲ, ಯಾವ ಸುಳಿವು ಇಲ್ಲದೆ ಕೊಲೆಗಳು ಆಗಿರುತ್ತಾವೆ. ಎರಡೆನೇ ಕೊಲೆಯಲ್ಲಿ ಬೆರಳಚ್ಚಿನ ಗುರುತು ಇದ್ದರು ಅದು ಯಾರಿಗೂ ಹೊಲಿಕೆಯಾಗುವುದಿಲ್ಲ. ಇದರಿಂದ ಬೇಸತ್ತ ಪತ್ತೇದಾರಿ ಮತ್ತು ಪೋಲಿಸರು ಕೈ ಚೆಲ್ಲಿ ಕೋತಿರುತ್ತಾರೆ. ಆಗಲೇ ಮೂರನೇ ಕೊಲೆಯಾಗುತ್ತದೆ ಆವಾಗ ಪತ್ತೆದಾರ ಮಧುಸೂದನನಿಗೆ ಯಾಕೆ ಈ ಕೊಲೆಗಳು ಒಬ್ಬರನೊಬ್ಬರು ಪರಿಚವಿಲ್ಲದ ಸ್ನೇಹಿತರು ಮಾಡಿರಬಾರದು ಎಂದು ಎನಿಸುತ್ತದೆ. ಅದೇ ಸಂಶಯ ಕೊಲೆಗಾರರನ್ನು ಹಿಡಿಯಲು ನೆರವಾಗುತ್ತದೆ.


Saturday, July 19, 2014

ಗೂಢಾಚಾರಿಯ ಗುರು - ಎನ್ ನರಸಿಂಹಯ್ಯ

Goodachariya Guru - Narashimaiah N






ಕಾದಂಬರಿಯ ಹೆಸರೇ ಹೇಳುವಂತೆ ಇದೊಂದು ಪತ್ತೇದಾರಿ ಕಾದಂಬರಿ. ಈ ಕಾದಂಬರಿ ಹೆಣ್ಣು ಹೊನ್ನು ಮಣ್ಣು ಜನರಿಗೆ ಅದರಲ್ಲೂ ಸಂಬಂಧಿಕರಲ್ಲಿ ಮತ್ತು ಮಕ್ಕಳಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಈ ಕಾದಂಬರಿಯಲ್ಲಿ ನರಸಿಂಹಯ್ಯನವರು ತುಂಬ ಸರಳವಾಗಿ ಹೇಳಿದ್ದಾರೆ. ಆಂಗ್ಲ ಭಾಷೆಯ ಪತ್ತೇದಾರಿ ಓದುವವರಿಗೆ ನರಸಿಂಹಯ್ಯನವರು ಕಾದಂಬರಿ ತುಂಬ ಸರಳವಾದುದ್ದು ಮತ್ತು ನೆರವಾದುದ್ದು ಎನಿಸಬಹುದು, ಅದು ನಿಜ ಕೂಡ ಆದರೆ ಅವರ ಒಂದೊಂದು ಕಾದಂಬರಿಯು ಜೀವನಕ್ಕೆ ಒದೊಂದು ಪಾಠ ಹೆಲಿಕೊದುತ್ತದೆ. 

ಹರಿಯಪ್ಪ ಪತ್ತೇದಾರಿ ಮಧುಸೂದನನ್ನು ತಮ್ಮ ಜೀವಕ್ಕೆ ಆಪಾಯವಿದೆ ಎಂದು ಹುಡುಕಿಕೊಂಡು ಬರುತ್ತಾರೆ. ಹರಿಯಪ್ಪನನ್ನು ಕಾಫಿ ಕುಡಿಯುವಾಗ ವಿಷ ಬೆರಸಿ, ಟ್ಯಾಕ್ಸಿ ಯಲ್ಲಿ ಮತ್ತು ದೊಣ್ಣೆಯಿಂದ ಹೊಡೆದು ಸಾಯಿಸಲು ಪ್ರಯತ್ನಿಸಿದ್ದಾರೆ, ಇನ್ನು ಮುಂದೆ ಏನು ಕಾದಿಯೋ ಎಂದು ಜೀವಕ್ಕೆ ಹೆದರಿ ಮಧುಸೂದನನ್ನು ಕಂಡು ಅವರ ಸಮಸ್ಯೆಗೆ ಪರಿಹಾರ ಹುಡುಕಲು ಕೆಲುತ್ತಾರೆ. ಅವರ ತಮ್ಮ ಜೂಜಿನಲ್ಲಿ ಎಲ್ಲ ಅಸ್ತಿ ಕಳೆದುಕೊಂಡಿರುತ್ತಾನೆ, ಅವರ ಅಳಿಯ ತಾಗಿಯ ಮಗ ಮತ್ತು ಅವರ ತಂಗಿ ಸತ್ತ ಮೇಲೆ ಅವನ್ನು ತಂದು ಸಾಕಿ ಅವರ ಮಗಳಿಗೆ ಕೊಟ್ಟು ಮಾಡುವೆ ಮಾಡುತ್ತಾರೆ, ಇವರಿಬ್ಬರು ಮಧುಸೂದನ ಮುಂದೆ ಸಂಶಯಾಸ್ಪದ ವ್ಯಕ್ತಿಗಳು. ಹರಿಯಪ್ಪನವರು ತಮ್ಮ ಆಸ್ತಿಯಲ್ಲ ಅವರ ಮಗಳ ಹೆಸರಿಗೆ ಮತ್ತು ಮೊಮ್ಮೊಗು ಹುಟ್ಟಿದ ಮೇಲೆ ಅದಕ್ಕೆ ಸೇರುವಾಗೆ ವಿಲ್ ಬರೆದಿದ್ದಾರೆ, ಅದಕ್ಕೆ ಕೋಪಗೊಂಡ ಅಳಿಯ ಕೊಲೆಯ ಪ್ರಯತ್ನ ಮಾದಿರಬಹುದು.

ಕಾದಂಬರಿ ಯಾವ ಯಾವ ತಿರುವು ಪಡೆದುಕೊಳ್ಳುತ್ತದೆ ಮತ್ತು ಕೊಲೆ ಯತ್ನ ಮಾಡಿದವರು ಯಾರು ಎಂದು ಓದಿ ನೋಡಬೇಕು. ನರಸಿಂಹಯ್ಯನವರು ಕಾದಂಬರಿಗಳು ತುಂಬ ಕುತೂಹಲಕಾರಿಯಾಗಿ ಮತ್ತು ಸರಳವಾಗಿ ಮತ್ತು ಓದುವವರ ಬಹಳ ಸಮಯ ಹಾಳುಮಾದೆ ಶೀಗ್ರದಲ್ಲಿ ಮುಗಿಯುವ ಹಾಗೆ ಚೊಕ್ಕವಾಗಿ ಬರೆಯುತ್ತಾರೆ. 


Monday, July 14, 2014

ಮಾತು ಕ(ವಿ)ತೆ - ಎಚ್. ದುಂಡಿರಾಜ್

Maatu Kavite - H. Dundiraj 


ಕವಿತೆ ನೀನೇಕೆ ಪದಗಳಲ್ಲಿ ಅವಿತೆ ಎಂದು ವೈಎನ್‌ಕೆ ತಮ್ಮ ಚುಟುಕವೊಂದರಲ್ಲಿ ಬರೆದಿದ್ದರು. ಕನ್ನಡದಲ್ಲಿ ಚುಟುಕಗಳಿಗೆ ತಮ್ಮದೇ ಆದ ಇತಿಹಾಸ ಪರಂಪರೆ ಇದೆ. ಈ ಸಾಲಿನಲ್ಲಿ ಈಗಿನ ದೊಡ್ಡ ಹೆಸರು ಡುಂಡಿರಾಜ್. ಚಿಕ್ಕ ಕವನಗಳಿಗೆ ದೊಡ್ಡ ಹೆಸರು ಅವರದು. ಡುಂಡಿರಾಜರ ಬೀಸಣಿಗೆಗಳಲ್ಲಿ ನಾನೂ ಒಬ್ಬ. ಡುಂಡಿರಾಜರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆ, ಓದದ ಕನ್ನಡ ಓದುಗ ಇರಲಾರರು. ವಾರಪತ್ರಿಕೆ, ಮಾಸಪತ್ರಿಕೆ, ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ ಚುಟುಕಗಳನ್ನು ಫಿಲ್ಲರ್ ರೀತಿಯಲ್ಲಿ ಬಳಸುವ ಪದ್ಧತಿ ಇದೆಯಾದರೂ ಬಹಳಷ್ಟು ಮಂದಿ ಓದುಗರು ಈ ಚುಟುಕಗಳನ್ನು ಮತ್ತು ನಗೆಹನಿಗಳನ್ನು ಮೊದಲು ಓದಿ ನಂತರ ಇತರೆ ಲೇಖನಗಳನ್ನು ಓದುತ್ತಾರೆ ಎಂಬುದೂ ಸತ್ಯ. ಇಷ್ಟೆಲ್ಲ ಡುಂಡಿರಾಜ್ ಮತ್ತು ಅವರ ಚುಟುಕಗಳ ಬಗ್ಗೆ ಹೇಳಿರುವುದು ನೋಡಿದರೆ ನಾನಿಲ್ಲಿ ಬರೆಯಹೊರಟಿರುವುದು ಅವರ ಇನ್ನೊಂದು ಚುಟುಕಗಳ ಸಂಗ್ರಹದ ಬಗ್ಗೆ ಎಂದುಕೊಳ್ಳುತ್ತೀರೇನೋ. ಆದರೆ ವಸ್ತು ಸ್ಥಿತಿ ಅದಲ್ಲ. ಡುಂಡಿರಾಜ್ ಅವರು ದಿನಪತ್ರಿಕೆಯೊಂದರಲ್ಲಿ “ಮಾತು ಕ(ವಿ)ತೆ” ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಾರೆ. ಇದರಲ್ಲಿ ಗದ್ಯ ಮತ್ತು ಪದ್ಯಗಳ ಸಮ್ಮಿಶ್ರಣವಿದೆ. ಈ ಅಂಕಣದ ೪೫ ಲೇಖನಗಳನ್ನು ಅಂಕಿತ ಪುಸ್ತಕ ಪ್ರಕಾಶನದವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಹೆಸರೂ “ಮಾತು ಕ(ವಿ)ತೆ”.

ಸುಮಾರು ೨೫-೩೦ ವರ್ಷಗಳಿಂದ ಬರೆಯುತ್ತಿರುವ ಡುಂಡಿರಾಜರ ಲೇಖನಿಯ ಮೊನಚು ಇನ್ನೂ ಹಾಗೆಯೇ ಇದೆ. ನಮ್ಮಲ್ಲಿ ಬಹುಪಾಲು ಲೇಖಕರು ಇಪ್ಪತ್ತು ವರ್ಷಗಳ ಬರೆವಣಿಗೆಯ ನಂತರ ಮೊನಚು ಕಳೆದುಕೊಂಡಿರುತ್ತಾರೆ. ಹಾಸ್ಯ ಲೇಖಕರ ಮಟ್ಟಿಗಂತೂ ಇದು ಬಹುಮಟ್ಟಿಗೆ ಅನ್ವಯವಾಗುತ್ತದೆ. ಆದರೆ ಡುಂಡಿರಾಜ್ ಇದಕ್ಕೆ ಅಪವಾದ. ಅವರ ಇತ್ತೀಚೆಗಿನ ಚುಟುಕದಲ್ಲೂ ಹೊಸತನ, ಸೃಜನಶೀಲತೆ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಇದೆ. ಅವರ ಗದ್ಯಕ್ಕೂ ಇದು ಅನ್ವಯಿಸುತ್ತದೆ. “ಪರ್ಯಾಯ ಸಮ್ಮೇಳನ ಮುಂದಿನ ವರ್ಷ ನಡೆಯದಿದ್ದುದರಿಂದ ಸಾಹಿತಿಗಳಿಗೆ ಕ.ಸಾ.ಪ. ಸಮ್ಮೇಳನದಲ್ಲಿ ಭಾಗವಹಿಸುವುದಲ್ಲದೆ ಪರ್ಯಾಯ ಮಾರ್ಗವೇ ಇರಲಿಲ್ಲ” ಎಂಬ ವಾಕ್ಯವನ್ನೇ ನೋಡಿ. ಚುಟುಕದಲ್ಲಿ ಡುಂಡಿರಾಜ್ ಮಾಡುವ ಮೋಡಿಯೇ ಇಲ್ಲಿಯೂ ಕಾಣಸಿಗುತ್ತದೆ.

ಲೇಖನದ ಹೆಸರೇ ಹೇಳುವಂತೆ ಇದರಲ್ಲಿ ಗದ್ಯ ಮತ್ತು ಪದ್ಯಗಳ ನವಿರಾದ ಮಿಶ್ರಣವಿದೆ. ಡುಂಡಿರಾಜರು ತಮ್ಮದೇ ಚುಟುಕಗಳನ್ನು ಅಲ್ಲಲ್ಲಿ ಸೂಕ್ತವಾಗಿ ಬಳಸಿರುವುದಲ್ಲದೆ ಇತರೆ ಖ್ಯಾತ ಕವಿಗಳ ಚುಟುಕಗಳನ್ನೂ ಸೇರಿಸಿಕೊಂಡಿದ್ದಾರೆ. ಉದಾಹರಣೆಗೆ ವೈಎನ್‌ಕೆಯವರ “ಸುಲೋಚನೆ ಸುಲೋಚನೆ ಏನು ನಿನ್ನ ಆಲೋಚನೆ”. ಕೆಲವು ಲೇಖನಗಳ ಶೀರ್ಷಿಕೆಗಳೇ ಕಾವ್ಯಮಯವಾಗಿ ಆಕರ್ಷಕವಾಗಿವೆ. ಉದಾ -“ಯಾವ ಮೋಹನ ಆಳ್ವ ಕರೆದರು ಮೂಡುಬಿದಿರೆಗೆ ಇವರನು”, “ಮರಳಿ ಮಂಗಳೂರಿನ ಮರಳಿಗೆ”. ಪುಸ್ತಕದ ಇನ್ನೊಂದು ಆಕರ್ಷಣೆ ಹರಿಣಿಯವರ ವ್ಯಂಗ್ಯಚಿತ್ರಗಳು.

ಅಂಕಣ ಬರೆಹಗಾರರು ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ತಮ್ಮ ಅಂಕಣದಲ್ಲಿ ಬರೆಯುವ ಪದ್ಧತಿ ಇದೆ. ಡುಂಡಿರಾಜರೂ ಅದನ್ನು “ನಗಿಸುವವರ ಡೆಮಾಕ್ರಟಿಕ್ ಅಲೆಯನ್ಸ್ (NDA)” ಲೇಖನದಲ್ಲಿ ಮಾಡಿದ್ದಾರೆ. ಇದನ್ನು ಓದುವಾಗ ನಾವು ಮಾನಸಿಕವಾಗಿ ಆ ಕಾಲಕ್ಕೆ ಹಿಂದಕ್ಕೆ ತೆರಳಿದರೆ ಹೆಚ್ಚು ಸ್ವಾರಸ್ಯವನ್ನು ಅನುಭವಿಸಬಹುದು. ಅಂಕಣ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವವರಿಗೆ ನನ್ನದೊಂದು ಚಿಕ್ಕ ವಿನಂತಿ. ದಯವಿಟ್ಟು ಲೇಖನದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಲೇಖನ ಪ್ರಕಟವಾದ ದಿನಾಂಕವನ್ನೂ ನಮೂದಿಸಿ. ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ಡುಂಡಿರಾಜರು ಬ್ಯಾಂಕ್ ಚಳವಳಿಯ ಬಗ್ಗೆಯೂ ತಮ್ಮ ಅಂಕಣದಲ್ಲಿ ಬರೆದಿದ್ದರು ಮಾತ್ರವಲ್ಲ ತಾವು ಬ್ಯಾಂಕ್ ಉದ್ಯೋಗಿಯಾಗಿ ಬ್ಯಾಂಕ್ ನೌಕರರ ಚಳವಳಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಆ ಲೇಖನವನ್ನು ಈ ಪುಸ್ತಕದಲ್ಲಿ ಸೇರಿಸಿಲ್ಲ.

ಮೂಲ:- http://goo.gl/V7RWdw


Saturday, July 12, 2014

ಹೇಮರೆಡ್ಡಿ ಮಲ್ಲಮ್ಮನ ಕಥೆಯು - ಕುಂ. ವೀ.

Hemareddy Mallammana Katheyu - Kum. Verrabadrappa



ನಾವೆಲ್ಲ ಎಲ್ಲಾ ಊರು ಜಾಗಗಳನ್ನು ನೋಡುವುದಕ್ಕೆ ಆಗೋಲ್ಲ, ಒಂದು ಚಿತ್ರ ನೋಡಿದರೆ ಒಂದು ಊರಿನ ಒಂದು ಭಾಗ ನೋಡಬಹುದೇ ಒರತು ಅಲ್ಲಿ ವಾಸಿಸುವ ಜನರ ಜೀವನ, ದಿನಚರಿ ಮತ್ತು ಕಷ್ಟ ಸುಖಗಳುನನ್ನು ತಿಳಿಯಲಾಗುವುದಿಲ್ಲ ಆದರೆ ಒಬ್ಬ ಅತ್ಯುತ್ತಮ ಕಾದಂಬರಿಕಾರ ನಮ್ಮನ್ನು ಒಂದು ಕಾದಂಬರಿಯ ಪಾತ್ರವನ್ನಾಗಿಸಿ ಆ ನಾಡಿನ ಸಂಪೂರ್ಣ ಚಿತ್ರಣವನ್ನು ನಮ್ಮ ಅನುಭವಕ್ಕೆ ತರುತ್ತಾರೆ, ಅಂತ: ಒಂದು ಕಾದಂಬರಿಯೇ ಕುಂ. ವೀ. ಯವರ  "ಹೇಮರೆಡ್ಡಿ ಮಲ್ಲಮ್ಮನ ಕಥೆಯು".

ನಾನು ಹಂಪಿಗೆ ಹೋಗುವಾಗ ಬಳ್ಳಾರಿ ನೋಡಿನೇ ಹೊರತು ಅಲ್ಲಿನ ಜೀವನ ನೋಡಿಲ್ಲ, ಆಂಧ್ರ ಪ್ರದೇಶವನ್ನು ಇನ್ನು ಮುಟ್ಟಿಲ್ಲ ಮತ್ತು ನಕ್ಷಲ್ ಬಗ್ಗೆ ಪೇಪರ್ ನಲ್ಲಿ ಓದಿದೇನೆ ಒರತು ಅವರ ಪ್ರಭಾವ ಗೊತ್ತ್ಲಿಲ್ಲ ಆದರೆ ಈ ಕಾದಂಬರಿ ಓದುವಾಗ ಇದೆಲ್ಲ ನನ್ನ ಕಣ್ಣ ಮುಂದೆ ನೆಡೆದಿ ಎನ್ನುವ ಮಟ್ಟಿಗೆ ಪರಿಣಾಮ ಬೀರಿದೆ. ನನ್ನ ಪ್ರಕಾರ ಈ ರೀತಿ ಅನುಭವ ಕೊಡುವ ಯಾವುದೇ ಭರಹಗಾರ ಒಬ್ಬ ಶ್ರೇಷ್ಠ ಭರಹಗಾರರಲ್ಲಿ ಒಬ್ಬರು. ಅದಕ್ಕೆ ಕನ್ನಡಿಯಂತೆ ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್  ಕುಮಾರ್  ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ  ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ತೆಲುಗಿನ 150 ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯೇ ಅವುಗಳನ್ನು ಪ್ರಕಟ ಮಾಡಿದೆ.


ಈ ಕಾದಂಬರಿಯಲ್ಲಿ ಎರಡು ಕಾದಂಬರಿ ಇದೆ,  ಬೇರೆ ಬೇರೆ ಯಲ್ಲ  ಒಂದರೊಳಗೊಂದು. ಈ ಕಾದಂಬರಿಯಲ್ಲಿ ಬರುವ ಮೇಸ್ಟ್ರು ಅವರ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಆದರಿಸಿ ಒಂದು ಕಾದಂಬರಿ ಬರೆಯುತ್ತಿರುತ್ತಾರೆ. ಇಲ್ಲಿನ ಕಥೆ ಕರ್ನಾಟಕ ಮತ್ತು ಆಂಧ್ರ ಗಾಡಿಯಲ್ಲಿ ಇರುವ ಕುಗ್ರಾಮ ವಾಗಿಲಿಯ ಸುತ್ತ ಮುತ್ತು ನೆಡೆಯುತ್ತದೆ. ಅಲ್ಲಿನ ಬಡತನ, ಶ್ರೀಮಂತರ ದಬ್ಬಾಳಿಕೆ, ಹಿಂದುಳಿದ ಜನರ ಅವಿದ್ಯಾವಂತಿಕೆ ಎಲ್ಲವನ್ನು ನಮ್ಮ ಎದುರಿದೆ ನಡೆಯುತ್ತಿದೆ ಎನ್ನುವಷ್ಟು ಸುಚಿತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿ ಇರುವ ನಕ್ಸಲ್ ವಾದಿಗಳು, ಕೊಲೆಗಾರರು, ಪೋಲಿಸರು, ರಾಜಕಾರಣಿಗಳು ತಮ್ಮ ತಮ್ಮ ಸ್ವರ್ತದ ಬುದ್ದಿಯಿಂದ ವಾಗಿಲಿಯನ್ನು ಇನ್ನು ಕುಗ್ರಾಮವಾಗಿ ಇರಿಸಿರುವರು, ಅಲ್ಲಿಗೆ ಬರುವ ಜಲದರನ ನಾಟಕದ ಕಂಪನಿ ಇದನ್ನು ಹೇಗೆ ಬದಲಾಯಿಸುತ್ತದೆ ಜನರು ಹೇಗೆ ಬದಲಾಗುತ್ತಾರೆ ಮತ್ತು ವಾಗಿಲಿಯ ಪ್ರಗತಿಯ ಬಾಗಿಲು ಹೇಗೆ ತೆಗೆಯುತ್ತದೆ ಎಂದು ಟೀಚರ್ ದೃಷ್ಟಿಯಲ್ಲಿ ತೊರಿಸಿದ್ದಾರೆ.

ಇದರಲ್ಲಿ ಬರುವ ಸನಿವೇಶಗಳು ನಾವು ನಮ್ಮ ಸುತ್ತ ಮುತ್ತ ಇಗಲು ನೋಡಬಹುದು, ಲಂಚಕೋರರು, ಕೊಲೆಗಾರರು, ಬುಟಾಟಿಕೆಯ ಸ್ವಾಮಿಗಳು, ಕಳ್ಳರು, ಇವೆಲ್ಲ ಕುಗ್ರಾದಲ್ಲೇ ಅಲ್ಲ ನಮ್ಮು ಊರಿನಲ್ಲೂ ನಡೆಯುತ್ತಿದೆ ಮತ್ತು ಮುಂದೇನು ನಡೆಯುತ್ತಿರುತ್ತದೆ ಇದನ್ನು ಎಲ್ಲ ಮೀರಿ ನಾವು ಹೇಗೆ ಬಾಳಬೇಕು ಮತ್ತು ನಮ್ಮ ಸುತ್ತ ಮುತ್ತ ಇರುವವರನ್ನು ನಮ್ಮ ಜೊತೆ ಹೇಗೆ ಏಳಿಗೆಯ ಕಡೆದೆ ಕರೆದು ಕೊಂದು ಹೋಗಬೇಕು ಎನ್ನುವುದನ್ನು ಇಲ್ಲಿ ಸ್ಕೂಲ್ ಟೀಚರ್ ಮೂಲಕ ಹೇಳಿಸಿದ್ದಾರೆ.