Wednesday, September 24, 2014

ಥ್ರಿಲ್ಲರ್ - ಯಂಡಮೂರಿ ವೀರೇಂದ್ರನಾಥ್

Thriller - Yandamoori Veerendranath, Saritha Gnananada



ಪ್ರತಿಯೊಂದು ಕಾದಂಬರಿಕಾರರಿಗೂ ಅವರು ಬರೆಯುವ ಕಾದಂಬರಿಯಲ್ಲಿ ಅವರು ಇರುವ ನೆಲೆಯ ಅಂಶ ಮತ್ತು ಆ ನೆಲೆಯ ಭಾಷೆಯ ಒಂದು ಭಾಗವಾದರೂ ಅಡಕವಾಗಿರುತ್ತದೆ. ಅದೇ ರೀತಿ ಓದುಗನಿಗೂ ಕಾದಂಬರಿ ಓದುವಾಗ ಅದರಲ್ಲಿಯ ಭಾಷೆಯ ಮತ್ತು ನೆಲೆಯ ಅಂಶಗಳು ಕಾಣುತ್ತದೆ. ಕುವೆಂಪುರವರ ಕಾದಂಬರಿ ಓದಬೇಕಾದರೆ ಕಾಡುವ ಮಲೆನಾಡು, ತೇಜಸ್ವಿರವರ ಪರಿಸರ ಪ್ರಜ್ಞೆ, ಕಾರಂತರ ಸಾಮಾಜಿಕ ಕಾಳಜಿ, ದೇವನೂರು ಮಹಾದೇವ ರವರ ಹಳ್ಳಿಯ ಬಡತನ ಹೀಗೆ ಕನ್ನಡದ ಪ್ರತಿಯೊಬ್ಬ (ಭೈರಪ್ಪ ಮತ್ತು ಇನ್ನು ಎರಡು ಮೂರು ಕಾದಂಬರಿಕಾರರನ್ನು ಹೊರತುಪಡಿಸಿ) ಅವರದೇ ಆದ ಒಂದು ಸಾಮಾನ್ಯ ಅಂಶ ಇರುತ್ತದೆ, ಅವರು ಬೆಳೆದ ಪರಿಸರ, ಓದಿದ ರೀತಿ, ಹುಟ್ಟಿದ ಊರು, ಇದು ಯಾವುದೇ ಆಗಿರಬಹುದು. ಹಾಗೆ ನಾನು ನೋಡಿದ ಕನ್ನಡ ಕಾದಂಬರಿ ಓದುವ ಜನ ಒಬ್ಬ ಕಾದಂಬರಿಕಾರನಲ್ಲಿ ಜನಸಾಮಾನ್ಯರಿಗೆ ಹತ್ತಿರವಾದ ವಿಷಯಗಳನ್ನು ಬಳಿಸಿ ಅದರ ಸುತ್ತ ಒಂದು ಸುಂದರವಾದ ಎಣೆಯನ್ನು ಪೋಣಿಸಿ ಕಾದಂಬರಿ ರಚಿಸಬೇಕೆಂದು ಬಯಸುತ್ತಾನೆ. ಹೀಗೆ ಹಹೆಣೆದ ಕಾದಂಬರಿಗಳು ತುಂಬಾ ದಿನ ಜನರ ಮನಸ್ಸಿನ್ನಲ್ಲಿ ಉಳಿಯುತ್ತದೆ. 'ಮಲೆಗಳಲ್ಲಿ ಮದುಮಗಳು'ಯಲ್ಲಿನ ಮಲೆನಾಡಿನ ಜೀವನ, 'ಜುಗಾರಿ ಕ್ರಾಸ್'ನ ಕಾಲೇಜ್ ಹುಡುಗರ ರೀತಿ, 'ಮೂಕಜ್ಜಿಯ ಕನಸಿ'ನ ಇತಿಹಾಸ, 'ಪರ್ವ' ದ ಮಹಾಭಾರತದ ಅಂಶ ಹೀಗೆ ಒಂದು ಕಾದಂಬರಿಯಲ್ಲಿನ ಕಥೆಯ ಒಂದು ಪಾತ್ರವಾಗಿ ಓದುದ  ಬೇರೆಯದ್ದಿದ್ದರೆ ಆ ಕಾದಂಬರಿ ಕಾಲವನ್ನು ಮೀರಿ ನಿಲ್ಲುವುದಿಲ್ಲ.

ಕಾಲಕ್ಕೆ ಸಿಕ್ಕಿ ಸೋತು ಹೋದ ಕಾದಂಬರಿಗಲಿಗೇನು ಕನ್ನದಲ್ಲಿ ಬರವಿಲ್ಲ. ಒಂದು ತಿಂಗಳು ಮನದಲ್ಲಿ ಇದ್ದು ಹಾರಿಹೋಗುವ ಕಾದಂಬರಿಗಳು ಸಾವಿರಾರು. ಕಾರ್ನಾಡರ ನಾಟಕಗಳು, ಅನಂತಮೂರ್ತಿ ರವರ ಕಾದಂಬರಿಗಳು ( ಸಂಸ್ಕಾರವನ್ನು ಹೊರತುಪಡಿಸಿ) ಮತ್ತು ಬಹುತೇಕ ನವ್ಯ ಕಾದಂಬರಿಕಾರರ ಕಾದಂಬರಿಗಳು ಯಾರಿಗೂ ನೆನಪಿರುವುದಿಲ್ಲ, ಯಾಕೆ ಹೀಗೆ ಅಂದರೆ ಅವರು ಸತ್ಯಕ್ಕೆ ದೂರದ ಕಾದಂಬರಿಗಳನ್ನು ಬರೆಯುತ್ತಾರೆ. ಕನ್ನಡಿಗರು ಒಳ್ಳೆಯ ವಿಷಯಕ್ಕೆ ಯಾವಾಗೂ ಪ್ರೋತ್ಸಾಹ ಕೊಡುತ್ತಾರೆ ಮತ್ತು ಮುಂದೇನು ಕೊಡುತ್ತಾರೆ, ಸಿನೆಮ ದಲ್ಲಿ ಮುಗಾರು ಮಳೆ, ಲುಸಿಯಾ ಇರಬಹುದು ಇಲ್ಲ ಕಾದಂಬರಿಯಲ್ಲಿ 'ಕರ್ಮ' ಇರಬಹುದು, ಕರ್ನಾಟಕದಲ್ಲಿ ಒಳ್ಳೆಯದಕ್ಕೆ ಜನ ಪ್ರೋತ್ಸಾಹ ಕೊಡೋದಿಲ್ಲ ಅನ್ನುವವರು ತಮ್ಮ ಕೆಲಸನ್ನು ಮತ್ತೆ ನೋಡಿಕೊಳ್ಳಬೇಕು. 

ಇಷ್ಟೆಲ್ಲಾ ಪೀಟಿಕ ಯಾಕೆಂದರೆ ನಾನು ಇತ್ತೀಚಿಗೆ ಓದಿದ ಯಂಡಮೂರಿ ವೀರೇಂದ್ರನಾಥ್ ರವರ 'ಥ್ರಿಲ್ಲರ್' ಕಾದಂಬರಿ ಓದುವಾಗ ಬಂದ ಆಲೋಚನೆಗಳೇ ಇವು. ಇಲ್ಲಿ ಕಥೆಯ ನಾಯಕಿ ಅಂಗಡಿಯಲ್ಲಿ ಪುಸ್ತಕ ನೋಡದೆ ಕಾದಂಬರಿಯನ್ನು ಖರಿದಿಸುತ್ತಾಳೆ ಆಮೇಲೆ ಮನೆಗೆ ಬಂದು ನೋಡುವ ವೇಳೆ ಆ ಪುಸ್ತಕ ಖಾಲಿ ಇರುತ್ತದೆ. ಅಂಗಡಿಯವನನ್ನು ವಿಚಾರಿಸಲು ಹೋದಾಗ ಅದು ಬರಿ ಪ್ರಮೋಷನ್ ಪ್ರತಿ, ಕಾದಂಬರಿ ಇನ್ನು ಬರೆದೆ ಇಲ್ಲ ಎಂದು ಏಳುತ್ತಾನೆ. ಮತ್ತೆ ಮುಂದೆ ನಡೆಯುವ ಘಟನೆಗಳನ್ನು ವಿದ್ಯಾದರಿ ಆ ಖಾಲಿ ಪುಸ್ತಕದಲ್ಲಿ ಬರೆಯುತ್ತಾಳೆ. ಬರೆದು ಮುಗಿಸುವ ವೇಳೆಗೆ ವಾಸ್ತವಕ್ಕೆ ನಿಲುಕದಂತ ಘಟನೆಗಳು ನಡೆಯುತ್ತವೆ. ಕೊನೆಯಲ್ಲಿ ವಿದ್ಯಾದರಿಯನ್ನು ಪ್ರೀತಿಸಿದ ಅನುದೀಪ್ ಕಾಲವನ್ನೇ ಹಿಂದೆ ಮಾಡಿ ಅವನ ನೆನಪನ್ನು ವಿದ್ಯಾದರಿಯ ಮನಸ್ಸು ಮತ್ತು ಬುದ್ದಿಯಿಂದ ಮರೆಸುತ್ತಾನೆ. ಈ ಎರಡು ಘಟನೆಗಳ ಮಧ್ಯೆ ಹತ್ತಾರು ಪಾತ್ರಗಳು ಬಂದು ಹೋಗುತ್ತವೆ ಅವಲ್ಲ ಲೆಕ್ಕಕ್ಕೆ ಇಲ್ಲ ಎಂದು ಹೇಳಬಹುದು. 

ಇಲ್ಲಿ ಅಂಗಡಿಯವನು ಖಾಲಿ ಪುಸ್ತಕ ಮಾರಿದ ಮೇಲೆ ಆ ಕಾದಂಬರಿಯ ಕಾದಂಬರಿಕಾರನಿಗೆ ಫೋನ್ ಮಾಡಿ ವಿದ್ಯದರಿ ಇದನ್ನು ಕೊಂದ ವಿಷಯ ತಿಳಿಸುತ್ತಾನೆ. ಅದಕ್ಕೆ ಆ ಕಡೆಯಿಂದ ಇನ್ನು ಹದಿನೈದು ದಿನದಲ್ಲಿ ಕಾದಂಬರಿ ಪ್ರಕಟವಾಗುತ್ತೆ ಎಂದು ತಿಲಿಸ್ಸಲು ಹೇಳುತ್ತಾನೆ. ಕಾದಂಬರಿ ಪೂರ್ತಿಯಾದ ಮೇಲೆ ಈ ಮೇಲೆ ಮಾತಿಗೆ ಏನು ಬೆಲೆನೇ ಇಲ್ಲ ಎಂದು ಗೊತ್ತಾದುತ್ತದೆ. ಕೊನೆಯಲ್ಲಿ ಆ ಖಾಲಿ ಪುಸ್ತಕದ ಕಾದಂಬರಿಕಾರ ಏನು ಮಾಡುತ್ತಾನೆ ಗೊತ್ತಾಗುವುದಿಲ್ಲ, ಯಾವ ಆದಾರದ ಮೇಲೆ ಹದಿನೈದು ದಿನದಲ್ಲಿ ಕಾದಂಬರಿ ಪ್ರಕಟವಾಗುತ್ತೆ ಎಂದು ಹೇಳುತ್ತಾನೆ ಎಂದೂ ಗೊತ್ತಾಗುವುದಿಲ್ಲ. ಹೀಗೆ ಒಂದರ ಮೇಲೊಂದು ಕಥೆಯಲ್ಲಿನ ಹುಳುಕುಗಳು ತೋರುತ್ತದೆ. ಕೊನೆಯಲ್ಲಿ ನಾನಾ ಅನಿಸುದ್ದು ಒಂದೇ ಅನಿಸಿಕೆ ಕನ್ನಡಿಗರಿಗೆ ವಾಸ್ತವಕ್ಕೆ ಹತ್ತಿರವಾದ ಕಾಲ್ಪನಿಕ ವಸ್ತು ಮುಖ್ಯ ಎಂದು. ಅಂದ ಹಾಗೆ ಹೇಳಿದ್ದು ಮರೆತೇ ಇದು ತೆಲೆಗು ಭಾಷೆಯಲ್ಲಿ ಪ್ರಕಟವಾದ ಪುಸ್ತಕ ಕನ್ನಡಕ್ಕೆ ಸರಿತಾ ಜ್ಞಾನಾನಂದ ರವರು ಅನುವಾದಿಸಿದ್ದಾರೆ. 



Monday, September 22, 2014

ಯಾರಿಗುಂಟು ಯಾರಿಗಿಲ್ಲ - ಅ. ನ. ಕೃ

Yaariguntu Yaarigilla - A Na Krishnaraya (A Na Kru)


ಸಾವಿರಾರು ಜನ ಪ್ರತಿದಿನ ಬೆಂಗಳೂರಿಗೆ ವಲಸೆ ಬರುತ್ತಾರೆ, ಕೆಲಸಕ್ಕೆ, ವಿಧ್ಯಭಾಸ್ಯಕ್ಕೆ ಇಲ್ಲ ದುಡ್ಡಿಗಾಗಿ. ಬರುವ ಬಹುತೇಕ ಜನರು ಹಳ್ಳಿಗಳಿಂದ ಬರುತ್ತಾರೆ. ಬರುವ ಕಾರಣ ಯಾವುದಾದರು ಇರಬಹುದು ಆದರೆ ಬರುವ ಎಲ್ಲರು ಬೆಂಗಳೂರಿಗೆ ಬಂಡಿ ಇಳಿದ ಮೇಲೆ ಏಳುವುದು ಒಂದು ಮಾತು ಎಂಥಾ ಊರಪ್ಪ ಇದು. ಮಂಡ್ಯದಿಂದ ಬರುವು ಬಡ ರೈತ ಇರಬಹುದು ಇಲ್ಲ ದೂರದ ಉತ್ತರ ಪ್ರದೇಶದ ಪಾನಿ ಪೂರಿ ಮಾಡುವವನಿರಬಹುದು ಎಲ್ಲರ ಉದ್ಗಾರ ಇದ ಆದಾದ ಮೇಲೆ ತಲೆಯಲ್ಲಿ ಓಳೆಯುವುದು ಇಲ್ಲಿ ಎರಡು ಹೊತ್ತಿನ ಊಟಕ್ಕೆ ಮೋಸ ಇಲ್ಲ ಅಂತ.

ಬಹುತೇಕ ಜನ ಬಂದವರು ತಿಂಗಳು ಕಳೆಯುವುದೊರಳಗೆ ಬದಲಾಗುತ್ತಾರೆ, ಬೆಂಗಳೂರಿನ ವೇಗಕ್ಕೆ, ತಿಕ್ಕಾಟಗಳಿಗೆ, ಮೋಸಕ್ಕೆ ಮತ್ತು ಪರಿಸರಗಳಿಂದ ಬೆಂಗಳೂರಿನ ಕೋಟಿ ಜನರಲ್ಲಿ ಒಂದಾಗುತ್ತಾರೆ. ಯಾರು ಯಾವ ಆಮೇಶಕ್ಕು ಒಳಗಾಗದೆ, ವೇಗಕ್ಕೆ ಹೆದರದೆ, ಮೋಸಕ್ಕೆ ಪ್ರತಿ ಮೋಸ ಮಾಡದೆ, ಪರಿಸರಕ್ಕೆ ಹೊಂದಿಕೊಂಡು ತನ್ನತನವನ್ನು ಉಳಿಸಿಕೊಲ್ಲುತ್ತಾರೋ ಅವರೇ ತಮ್ಮ ಮುಗ್ದತೆ ಉಳಿಸಿಕೊಳ್ಳುತ್ತಾರೆ ಇಲ್ಲ ಅಂದ್ರೆ ಬೆಂಗಳೂರಿನ ತಾಳಕ್ಕೆ ಕುಣಿದರೆ ರಕ್ತ ಬೀಜಾಸುರನ ಒಂದು ಬೀಜವಾಗಿ ಬೇರೆಯವರಿಗೆ ಚಿಂತೆಯಾಗಿಬಿಡುತ್ತಾರೆ. 

ಇದು ಇಂದಿನ ಮಾತಲ್ಲ ನಿನ್ನೆಯ ಮಾತಲ್ಲ ಇಲ್ಲ ದಶಕದ ಮಾತಲ್ಲ ಇದು ಎಲ್ಲ ಕಾಲಕ್ಕೂ ಸರಿ ಹೊಂದುವಂತದ್ದು. ಊರುಗಳು ಬೇರೆಯಾಗಬಹುದು, ಇಂದು ಬೆಂಗಳೂರು, ನಿನ್ನೆ ಮುಂಬೈ ಅದರ ಹಿಂದೆ ಡೆಲ್ಲಿ ಹೀಗ, ಆದರೆ ಒಂದು ಕೊಂಪೆಯಲ್ಲಿ ತಮ್ಮ ತನವನ್ನು ಉಳಿಸಿಕೊಳ್ಳದ್ದಿದ್ದರೆ ಕಷ್ಟಗಳಲ್ಲಿ ಬೆಂದುಹೊಗುತ್ತಾರೆ. ಇದೆ ಮಾತುಗಳು ಅ. ನ. ಕೃ. ರವರ ೧೯೬೩ ನೆ ಇಸಿವಿಯ "ಯಾರಿಗುಂಟು ಯಾರಿಗಿಲ್ಲ" ಕಾದಂಬರಿಯ ಕಥಾ ವಸ್ತು.  

ಈ ಕಾದಂಬರಿಯಲ್ಲಿ ಬರುವ ಗಣಪಯ್ಯ ಬಡತನದಿಂದ ಬೆಂದು ಮೈಸೂರಿನ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ಪರಿಚವಾಗುವ ರಾಮಚಂದ್ರ ಒಂದು ಹೋದ ಲೋಕವನ್ನೇ ತೋರಿಸುತ್ತಾನೆ. ಮೊದಲಿಗೆ ಹೊಲಸು ಎನಿಸುವ ಆ ಲೋಕದ ಕಾರ್ಯಗಳು ಮತ್ತು ಎಂದಿಗೂ ಅಂತ ಕಾರ್ಯಗಳನ್ನು ಮಾಡಬಾರದು ಎಂದುಕೊಳ್ಳುತ್ತಾ ಕೊನೆಯಲ್ಲಿ ದುಡ್ಡಿನ ಮದದಲ್ಲಿ ಆ ಪಾಪ ಕಾರ್ಯದಲ್ಲಿ ಮುಲಿಗಿ ತನ್ನ ಸರ್ವಸ್ಯವನ್ನು ಕಳೆದುಕೊಳ್ಳುತ್ತಾನೆ. 

**** ಒಳ್ಳೆ ಪುಸ್ತಕಗಳು ಹಾಗೆ ಯಾವಗಲು ತಮ್ಮ ಕಳೆಯನ್ನು ಕಳೆದುಕೊಳ್ಳುವುದಿಲ್ಲ. ಅ. ನ. ಕೃ. ರವರ ಈ ಕಾದಂಬರಿಯನ್ನು ಬರೆದ್ದಿದ್ದು ೧೯೬೩ರಲ್ಲಿ ಆದರೆ ಇದೆ ಸನ್ನಿವೇಶಗಳು ಈಗಲೂ ಪ್ರಸ್ತುತ ಮತ್ತು ಮುಂದೆಯೂ ಕೂಡ. ನಾವು ಒಂದು ಆದರ್ಶವನ್ನು ಇಟ್ಟುಕೊಂಡು ಜೀವನ ಸಾಗಿಸಿದರೆ ಯಾವತ್ತಿದ್ದರು ಗೆಲವು ಕಂಡಿತ, ಆದರ್ಶವನ್ನು ಬಲಿ ಕೊಟ್ಟು ಬೇಗ ಗೆಲುವನ್ನು ಸಾಧಿಸಿಬಿಡಬೇಕು ಎಂದರೆ ಅದು ಅಲ್ಪಾಯುಶಿ ಗೆಲುವು ಶಾಶ್ವತವಲ್ಲ. 


Monday, September 15, 2014

ಗ್ರಾಮಮುಖಿ -

Grama Mukhi 

 

ಕನ್ನಡ ಪ್ರಭ - ೧೪ ಸೆಪ್ಟೆಂಬರ್ ೨೦೧೪
ವಿಮರ್ಶೆ - ವಾಸುದೇವ ಶೆಟ್ಟಿ 

ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಗ್ರಾಮದ ಕಡೆ ಮುಖ ಮಾಡಿ ಕಳೆದ ಹತ್ತು ವರ್ಷಗಳಿಂದ ಅಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಿದ್ದಾರೆ. ಚಿಂತಕರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಹಳ್ಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ರಾಜ್ಯದ ಇತರ ಭಾಗಗಳ ಕಲೆ ಸಂಸ್ಕೃತಿಯನ್ನು ತಮ್ಮ ಹಳ್ಳಿಯ ಜನರಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಳ್ಳಿಯ ಋಣವನ್ನು ತೀರಿಸುತ್ತಿದ್ದೇನೆ ಎಂಬ ಭಾವನೆ ಅವರದು.

ನಾಗತಿಹಳ್ಳಿಯ ಸಂಸ್ಕೃತಿ ಹಬ್ಬದ ಹತ್ತು ವರ್ಷದ ಸಂದರ್ಭದಲ್ಲಿ ಒಂದು ಆಕರ ಗ್ರಂಥವನ್ನು ತರುವ ಯೋಜನೆಯ ಫಲವಾಗಿ ‘ಗ್ರಾಮಮುಖಿ’ ಎಂಬ ಹಳ್ಳಿಗಾಡಿನ ಬದುಕಿಗೆ ಚಿಕಿತ್ಸಕ ಚಿಂತನ ಬರೆಹಗಳ ಸಂಕಲನ ಹೊರಬಂದಿದೆ. ಸಂಸ್ಕೃತಿ ಹಬ್ಬದ ಮೂಲಕ ನಾಗತಿಹಳ್ಳಿಯಲ್ಲಿ ನಡೆಯುತ್ತಿರುವ ಪ್ರಯೋಗಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಗ್ರಾಮಭಾರತದ ತಲ್ಲಣಗಳನ್ನು ದಾಖಲಿಸುವ ಪ್ರಯತ್ನ ಕೂಡ ಇದಾಗಿದೆ. ತಲ್ಲಣದ ನೆಲೆಗಳ ಅನುಸಂಧಾನದ ಜೊತೆಗೆ ಅದಕ್ಕೆ ಸೂಕ್ತ ಪರಿಹಾರವನ್ನೂ ಸೂಚಿಸಲು ಇದರಲ್ಲಿ ಪ್ರಯತ್ನಿಸಲಾಗಿದೆ.

ನಮ್ಮ ಯುವಕರು ಹಳ್ಳಿಗಳನ್ನು ಏಕೆ ತೊರೆಯುತ್ತಿದ್ದಾರೆ? ಇದು ಮೂಲಭೂತವಾದ ಪ್ರಶ್ನೆ. ಪಟ್ಟಣಗಳಲ್ಲಿ ಇರುವಂಥ ಸೌಲಭ್ಯಗಳು ಹಳ್ಳಿಗಳಲ್ಲೂ ದೊರೆಯುವಂತಾದರೆ ಅವರು ಹಳ್ಳಿಗಳನ್ನು ಬಿಡುವುದೇ ಇಲ್ಲ ಅಲ್ಲವೆ! ಗ್ರಾಮೀಣ ಬದುಕಿನ ಉಸಿರಿರುವುದು ಕೃಷಿಯಲ್ಲಿ. ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಿಕೊಳ್ಳಬಹುದು, ಇರುವ ಭೂಮಿಯಲ್ಲಿ ಯಾವ ರೀತಿಯಿಂದ ಅಧಿಕ ಇಳುವರಿಯನ್ನು ತೆಗೆಯಬಹುದು, ತಾವು ಬೆಳೆದುದನ್ನು ಹೇಗೆ ಮಾರುಕಟ್ಟೆ ಮಾಡಬಹುದು, ಹೊಸ ಕೃಷಿ ಉಪಕರಣಗಳನ್ನು ಉಪಯೋಗಿಸುವುದು ಹೇಗೆ, ಸಾವಯವ ಕೃಷಿಯನ್ನು ಹೇಗೆ ಮಾಡಬೇಕು, ಸ್ವಾವಲಂಬನೆಯನ್ನು ಗಳಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಯು ಅವರಿಗೆ ದೊರೆಯಬೇಕು. ಕೃಷಿಕನೊಬ್ಬ ತನ್ನ ತುಂಡು ಭೂಮಿಯ ಜೊತೆಯಲ್ಲಿ ಎರಡು ಹಸುವನ್ನು ಸಾಕಿದರೆ ಹೈನುಗಾರಿಕೆಯಿಂದಲೂ ಹಣವನ್ನು ಮಾಡಬಹುದು. ಜೇನು ಸಾಕಣೆ ಮಾಡಬಹುದು, ತನಗೆ ತಿಳಿದ ಇತರ ಕಸುಬನ್ನು ಲಾಭದಾಯಕವಾಗಿ ಹಳ್ಳಿಯಿಂದಲೇ ನಡೆಸುವುದು ಹೇಗೆ ಎಂಬ ಮಾರ್ಗದರ್ಶನ ಅವರಿಗೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ನಾಗತಿಹಳ್ಳಿಯಲ್ಲಿ ಚಂದ್ರಶೇಖರ ಅವರು ಕಳೆದ ಹತ್ತು ವರ್ಷಗಳಿಂದ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ತಮ್ಮೂರಿನ ರೈತರನ್ನು ಪ್ರಗತಿಪರ ರೈತರಿರುವ ರಾಜ್ಯದ, ಹೊರ ರಾಜ್ಯದ ಇತರ ಭಾಗಗಳಿಗೆ ತಮ್ಮದೇ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತಾರೆ. ತಮ್ಮೂರಿನ ರೈತರಿಗೆ ವಿಮಾನ ಪ್ರಯಾಣ ಮಾಡಿಸಿದ ಅಗ್ಗಳಿಕೆಯೂ ಅವರಿಗಿದೆ. ಇವೆಲ್ಲ ಒಂದು ಸಾಂಸ್ಕೃತಿಕ ದಾಖಲೆಯಾಗಿ ಇಲ್ಲಿ ನಮೂದಾಗಿದೆ.
ಈ ಕೃತಿಯು ನಾಗತಿಹಳ್ಳಿಯಲ್ಲಿ ನಡೆದಿರುವ ಕಾರ್ಯಕ್ರಮಗಳ ವರದಿಯಲ್ಲ. ಅಲ್ಲಿಯ ಪ್ರಯೋಗಗಳ ಪರಾಮರ್ಶೆಯ ಜೊತೆಗೆ ಗ್ರಾಮಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರುವ ತಜ್ಞರಿಂದ ಬರೆಸಿದ ಲೇಖನಗಳೂ ಇದರಲ್ಲಿವೆ.

ಹಿ.ಶಿ.ರಾಮಚಂದ್ರಗೌಡರು ಬರೆದ ‘ರೈತ ಚಳವಳಿಯ ನಾಳೆಗಳು’ ಎಂಬ ಲೇಖನ ಇದರಲ್ಲಿದೆ. ಕಾರ್ಪೋರೆಟ್ ವರ್ಗ ಹೇಗೆ ಮಧ್ಯಮವರ್ಗದಿಂದ ಬಂದ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತದೆ, ಆ ಮೂಲಕ ತಾನು ಹೇಗೆ ಗಟ್ಟಿಯಾಗಿ ಬೇರಿಳಿಸುತ್ತ ಹೋಗುತ್ತದೆ ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ. ರಾಜಕಾರಣದ ಮೇಲೆ ಹತೋಟಿಯನ್ನು ಸಾಧಿಸಬಹುದಾಗಿದ್ದ ಮತೀಯ ಅಥವಾ ಧಾರ್ಮಿಕ ಶಕ್ತಿಗಳು ಹಣಕ್ಕಾಗಿ ರಾಜಕಾರಣಿಗಳನ್ನು ಅವರ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿ ಬೇಡುತ್ತವೆ ಎಂದು ಹೇಳುತ್ತಾರೆ. ಹೀಗಿರುವಾಗ ಮಾರ್ಗದರ್ಶನ ಮಾಡುವವರು ಯಾರು? ಈ ಲೇಖನದಲ್ಲಿ ಗೌಡರು ೧೭ ಸಲಹೆಗಳನ್ನು ನೀಡಿದ್ದಾರೆ.

ಬದಲಾದ ಕಾಲದಲ್ಲಿ ಜನಪದ ಕಲೆಗಳ ಬಗ್ಗೆ ಡಾ.ಡಿ.ಕೆ.ರಾಜೇಂದ್ರ, ಗ್ರಾಮೀಣ ಕೃಷಿ ಮತ್ತು ಯುವ ಜನತೆಯ ಕುರಿತು ಎನ್.ಕೇಶವಮೂರ್ತಿ, ಹಸಿರು ಊರಿನ ಹಸಿದ ಚಿತ್ರಗಳ ಬಗ್ಗೆ ಶಿವಾನಂದ ಕಳವೆಯವರು, ಮರೆಯಾಗುತ್ತಿರುವ ಪಾರಂಪರಿಕ ಕಸಬುಗಳ ಬಗ್ಗೆ ವ.ನಂ. ಶಿವರಾಂ, ಹಳ್ಳಿಗಳಲ್ಲಿ ವಿದ್ಯಾವಂತರ ಸಾಮಾಜಿಕ ಜವಾಬ್ದಾರಿಗಳ ಕುರಿತು ಗಂಗಾಧರ ಹಿರೇಗುತ್ತಿಯವರು ಬರೆದಿದ್ದಾರೆ. ಕೃಷಿಯಿಂದ ಲಾಭ ಮಾಡಬಹುದು ಎಂಬ ಮಾತನ್ನು ಡಿ.ಚಂದ್ರಶೇಖರ ಚೌಟ ಹೇಳಿದ್ದಾರೆ. ಇಂಥ ೨೧ ಲೇಖನಗಳು ಈ ಭಾಗದಲ್ಲಿವೆ.

ಸಂಸ್ಕೃತಿ ಹಬ್ಬ ನಡೆದುಬಂದ ದಾರಿಯ ಬಗ್ಗೆ ಎರಡನೆ ಭಾಗದಲ್ಲಿ ೨೪ ಲೇಖನಗಳಿವೆ. ಸಂಸ್ಕೃತಿ ಹಬ್ಬದಲ್ಲಿ ಪಾಲ್ಗೊಂಡವರ ಅನುಭವ ಕಥನಗಳು ಇದರಲ್ಲಿವೆ.

ಇದರಲ್ಲಿ ನಾಗತಿಹಳ್ಳಿ ಚಂದ್ರಶೇಖರ ಅವರ ಸಂದರ್ಶನವೂ ಇದೆ. ಅದರಲ್ಲಿ ಅವರು, ‘... ಹಳ್ಳಿಯ ಜನತೆ ಪ್ರವಾಹದೋಪಾದಿಯಲ್ಲಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ನೆಮ್ಮದಿ ನೆಲಸಿದರೆ ಈ ವಲಸೆ ತಪ್ಪುತ್ತದೆ. ಯಾವ ದೇಶ ಹಳ್ಳಿಗಳಿಗೆ ನೆಮ್ಮದಿಯನ್ನು ವಿಸ್ತರಿಸುವುದಿಲ್ಲವೋ ಅಂಥ ದೇಶದ ಮಹಾನಗರಗಳು ಕೊಚ್ಚೆಗುಂಡಿಗಳಾಗಿರುತ್ತವೆ. ಈಗ ಚಳುವಳಿಗಳು ಸ್ತಬ್ಧಗೊಂಡಿವೆ. ನಾಯಕತ್ವದ ಶೂನ್ಯತೆ ಇದೆ. ಈ ಹೊತ್ತಿನಲ್ಲಿ ವೈಯಕ್ತಿಕ ನೆಲೆಯಲ್ಲಿ ಪ್ರಯೋಗಗಳು ಆರಂಭವಾಗಬೇಕು. ಎಲ್ಲ ತರುಣರೂ ತಮ್ಮ ಹಳ್ಳಿಗಳತ್ತ ಮುಖ ಮಾಡಬೇಕು. ಆದರೆ ಇದು ಯಾವುದೇ ರಾಜಕೀಯ ಉದ್ದೇಶದಿಂದ ಪ್ರೇರಿತವಾಗಿರಬಾರದು’ ಎಂದು ಹೇಳಿದ್ದಾರೆ. ಈ ಕೃತಿಯಿಂದ ಕೆಲವರಾದರೂ ಪ್ರೇರಣೆ ಪಡೆದು ತಮ್ಮ ಊರ ಕಡೆ ಮುಖ ಮಾಡಿದರೆ ಅದೇ ಸಾರ್ಥಕ.

ಈ ಕೃತಿಯ ಗೌರವ ಸಂಪಾದಕರು ಡಾ.ಡಿ.ಕೆ.ಚೌಟ ಮತ್ತು ಸಂಪಾದಕರು ಶಿವಕುಮಾರ ಕಾರೇಪುರ ಅವರು.
 
ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ಪುಟಗಳು ೨೯೬ ಬೆಲೆ ₹ ೧೫೦