Monday, September 22, 2014

Filled Under:
, ,

ಯಾರಿಗುಂಟು ಯಾರಿಗಿಲ್ಲ - ಅ. ನ. ಕೃ

Yaariguntu Yaarigilla - A Na Krishnaraya (A Na Kru)


ಸಾವಿರಾರು ಜನ ಪ್ರತಿದಿನ ಬೆಂಗಳೂರಿಗೆ ವಲಸೆ ಬರುತ್ತಾರೆ, ಕೆಲಸಕ್ಕೆ, ವಿಧ್ಯಭಾಸ್ಯಕ್ಕೆ ಇಲ್ಲ ದುಡ್ಡಿಗಾಗಿ. ಬರುವ ಬಹುತೇಕ ಜನರು ಹಳ್ಳಿಗಳಿಂದ ಬರುತ್ತಾರೆ. ಬರುವ ಕಾರಣ ಯಾವುದಾದರು ಇರಬಹುದು ಆದರೆ ಬರುವ ಎಲ್ಲರು ಬೆಂಗಳೂರಿಗೆ ಬಂಡಿ ಇಳಿದ ಮೇಲೆ ಏಳುವುದು ಒಂದು ಮಾತು ಎಂಥಾ ಊರಪ್ಪ ಇದು. ಮಂಡ್ಯದಿಂದ ಬರುವು ಬಡ ರೈತ ಇರಬಹುದು ಇಲ್ಲ ದೂರದ ಉತ್ತರ ಪ್ರದೇಶದ ಪಾನಿ ಪೂರಿ ಮಾಡುವವನಿರಬಹುದು ಎಲ್ಲರ ಉದ್ಗಾರ ಇದ ಆದಾದ ಮೇಲೆ ತಲೆಯಲ್ಲಿ ಓಳೆಯುವುದು ಇಲ್ಲಿ ಎರಡು ಹೊತ್ತಿನ ಊಟಕ್ಕೆ ಮೋಸ ಇಲ್ಲ ಅಂತ.

ಬಹುತೇಕ ಜನ ಬಂದವರು ತಿಂಗಳು ಕಳೆಯುವುದೊರಳಗೆ ಬದಲಾಗುತ್ತಾರೆ, ಬೆಂಗಳೂರಿನ ವೇಗಕ್ಕೆ, ತಿಕ್ಕಾಟಗಳಿಗೆ, ಮೋಸಕ್ಕೆ ಮತ್ತು ಪರಿಸರಗಳಿಂದ ಬೆಂಗಳೂರಿನ ಕೋಟಿ ಜನರಲ್ಲಿ ಒಂದಾಗುತ್ತಾರೆ. ಯಾರು ಯಾವ ಆಮೇಶಕ್ಕು ಒಳಗಾಗದೆ, ವೇಗಕ್ಕೆ ಹೆದರದೆ, ಮೋಸಕ್ಕೆ ಪ್ರತಿ ಮೋಸ ಮಾಡದೆ, ಪರಿಸರಕ್ಕೆ ಹೊಂದಿಕೊಂಡು ತನ್ನತನವನ್ನು ಉಳಿಸಿಕೊಲ್ಲುತ್ತಾರೋ ಅವರೇ ತಮ್ಮ ಮುಗ್ದತೆ ಉಳಿಸಿಕೊಳ್ಳುತ್ತಾರೆ ಇಲ್ಲ ಅಂದ್ರೆ ಬೆಂಗಳೂರಿನ ತಾಳಕ್ಕೆ ಕುಣಿದರೆ ರಕ್ತ ಬೀಜಾಸುರನ ಒಂದು ಬೀಜವಾಗಿ ಬೇರೆಯವರಿಗೆ ಚಿಂತೆಯಾಗಿಬಿಡುತ್ತಾರೆ. 

ಇದು ಇಂದಿನ ಮಾತಲ್ಲ ನಿನ್ನೆಯ ಮಾತಲ್ಲ ಇಲ್ಲ ದಶಕದ ಮಾತಲ್ಲ ಇದು ಎಲ್ಲ ಕಾಲಕ್ಕೂ ಸರಿ ಹೊಂದುವಂತದ್ದು. ಊರುಗಳು ಬೇರೆಯಾಗಬಹುದು, ಇಂದು ಬೆಂಗಳೂರು, ನಿನ್ನೆ ಮುಂಬೈ ಅದರ ಹಿಂದೆ ಡೆಲ್ಲಿ ಹೀಗ, ಆದರೆ ಒಂದು ಕೊಂಪೆಯಲ್ಲಿ ತಮ್ಮ ತನವನ್ನು ಉಳಿಸಿಕೊಳ್ಳದ್ದಿದ್ದರೆ ಕಷ್ಟಗಳಲ್ಲಿ ಬೆಂದುಹೊಗುತ್ತಾರೆ. ಇದೆ ಮಾತುಗಳು ಅ. ನ. ಕೃ. ರವರ ೧೯೬೩ ನೆ ಇಸಿವಿಯ "ಯಾರಿಗುಂಟು ಯಾರಿಗಿಲ್ಲ" ಕಾದಂಬರಿಯ ಕಥಾ ವಸ್ತು.  

ಈ ಕಾದಂಬರಿಯಲ್ಲಿ ಬರುವ ಗಣಪಯ್ಯ ಬಡತನದಿಂದ ಬೆಂದು ಮೈಸೂರಿನ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ಪರಿಚವಾಗುವ ರಾಮಚಂದ್ರ ಒಂದು ಹೋದ ಲೋಕವನ್ನೇ ತೋರಿಸುತ್ತಾನೆ. ಮೊದಲಿಗೆ ಹೊಲಸು ಎನಿಸುವ ಆ ಲೋಕದ ಕಾರ್ಯಗಳು ಮತ್ತು ಎಂದಿಗೂ ಅಂತ ಕಾರ್ಯಗಳನ್ನು ಮಾಡಬಾರದು ಎಂದುಕೊಳ್ಳುತ್ತಾ ಕೊನೆಯಲ್ಲಿ ದುಡ್ಡಿನ ಮದದಲ್ಲಿ ಆ ಪಾಪ ಕಾರ್ಯದಲ್ಲಿ ಮುಲಿಗಿ ತನ್ನ ಸರ್ವಸ್ಯವನ್ನು ಕಳೆದುಕೊಳ್ಳುತ್ತಾನೆ. 

**** ಒಳ್ಳೆ ಪುಸ್ತಕಗಳು ಹಾಗೆ ಯಾವಗಲು ತಮ್ಮ ಕಳೆಯನ್ನು ಕಳೆದುಕೊಳ್ಳುವುದಿಲ್ಲ. ಅ. ನ. ಕೃ. ರವರ ಈ ಕಾದಂಬರಿಯನ್ನು ಬರೆದ್ದಿದ್ದು ೧೯೬೩ರಲ್ಲಿ ಆದರೆ ಇದೆ ಸನ್ನಿವೇಶಗಳು ಈಗಲೂ ಪ್ರಸ್ತುತ ಮತ್ತು ಮುಂದೆಯೂ ಕೂಡ. ನಾವು ಒಂದು ಆದರ್ಶವನ್ನು ಇಟ್ಟುಕೊಂಡು ಜೀವನ ಸಾಗಿಸಿದರೆ ಯಾವತ್ತಿದ್ದರು ಗೆಲವು ಕಂಡಿತ, ಆದರ್ಶವನ್ನು ಬಲಿ ಕೊಟ್ಟು ಬೇಗ ಗೆಲುವನ್ನು ಸಾಧಿಸಿಬಿಡಬೇಕು ಎಂದರೆ ಅದು ಅಲ್ಪಾಯುಶಿ ಗೆಲುವು ಶಾಶ್ವತವಲ್ಲ. 




0 comments:

Post a Comment