Tuesday, December 31, 2013

ಯಕ್ಷಪ್ರಶ್ನೆ - ತಾ.ರಾ.ಸು

Yaksha Prashne = Ta Ra Su

 


ಮುನ್ನುಡಿಯಿಂದ:

ನನ್ನ ಈ ಹೊಸ ಕಾದಂಬರಿಗಿಟ್ಟ ಹೆಸರನ್ನು ಒದುತ್ತಿದ್ದಹಾಗೇ ವಾಚಕರಿಗೆ 'ಮಹಾಭಾರತ'ದಲ್ಲಿ ಬರುವ ಯಕ್ಷ ಪ್ರಶ್ನೆಯ ಕಥಾಭಾಗ ನೆನಪಿಗೆ ಬರುವುದು ಸ್ವಾಭಾವಿಕ.

ಕಾಡಿನ ಅಲೆತದಿಂದ ಬಾಯಾರಿ, ಕೊಳ ಒಂದಕ್ಕೆ ನೀರು ಕುಡಿಯಲೆಂದು ಬಂಡ ಪಂಚ ಪಾಂಡವರಲ್ಲಿ ಮೊದಲನೆಯ ನಾಲ್ವರು, ಆ ಕೊಳದಲ್ಲಿ ವಾಸವಾಗಿದ್ದ ಯಕ್ಷನೊಬ್ಬನು ಕೇಳಿದ ಜೀವನದ ಮೂಲಭೂತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ,ನೀರು ಕುಡಿಯಲು ಹೋಗಿ ಮೃತರಾಗುತ್ತಾರೆ. ಕೊನೆಗೆ ಧರ್ಮರಾಯ ಆ ಪ್ರಶ್ನೆಗೆಲ್ಲಕ್ಕೂ ಉತ್ತರ ಕೊಟ್ಟು,ಯಕ್ಷನನ್ನು ತ್ರುಪ್ತಿಪಡಿಸಿ, ತನ್ನ ತಮ್ಮಂದಿರನ್ನು ಬದುಕಿಸಿ ಕೊಳ್ಳುತ್ತಾರೆ.

ಇದು ಸ್ಥೂಲವಾಗಿ 'ಮಹಾಭಾರತ'ದಲ್ಲಿ ಬರುವ ಕಥೆ. ಇದೊಂದು ಕುತೂಹಲಕಾರಿಯಾದ, ರಮ್ಯ ಕಥೆಯಾಗಿದ್ದಂತೆಯೇ ಸಾಂಕೇತಿಕ ಮಹತ್ವವನ್ನು  ಪಡೆದ ವಿಷಯವಾಗಿಯೂ ಇದೆ.

ಬಾಳಿನ ಸುಖ ಸಂತೋಷಗಳಿಗಾಗಿ ಬಾಯಾರಿ, ಅವುಗಳ ತೃಪ್ತಿಯತ್ತ ಧಾವಿಸುವ ಮನುಷ್ಯ, ಆ ಸಮಯದಲ್ಲಿ ಬಾಳಿನ ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಂಥ ಸವಾಲುಗಳನ್ನು ಎದುರುಸಿ, ಉತ್ತರ ಕೊದಬಲ್ಲವನು ಬದುಕುತ್ತಾನೆ, ಇಲ್ಲವಾದವನು ಸೋತು,ಜೀವನ್ಸ್ಮ್ರುತನಾಗುತ್ತಾನೆ, ನಮ್ಮ ಸುತ್ತಲ ಬಾಳಿನಲ್ಲಿ, ಇಂಥ ಸಮಯದಲ್ಲಿ, ಗೆಲ್ಲುವವರಿಗಿಂತ ಸೋಲುವವರೇ ಹೆಚ್ಚು. ಇದು ದಿನದಿನವೂ ನಾವು ಕಂಡುಕೊಂಡ ಸತ್ಯ. 

ನಿತ್ಯಜೀವನದಲ್ಲಿ, ಸಾಮಾನ್ಯ ಮಾನವನ ಬಾಳು ಎದುರಿಸಬೇಕಾದ ಹಲವಾರು ಸವಾಲುಗಳಲ್ಲಿ ಲೈಂಗಿಕ ಸಮಸ್ಯೆಯೂ ಇದನ್ನು ಕಾಮವೆನ್ನಿ, ಪ್ರೇಮವೆನ್ನಿ, ಎನಾದರೊ ಹೆಸರಿಟ್ಟು ಕರೆಯಿರಿ - ಒನ್ದು. ಅತ್ಯಂತ ಸಾಮಾನ್ಯ ಮನುಷ್ಯನ ಬಾಳೂ ಈ ಸಮಸ್ಯಯ ಆಘಾತಕ್ಕೆ ಹೊರತಾಗಿಲ್ಲ. ನಮ್ಮ ಸುತ್ತಲು ಸಹಸ್ತ್ರಾರು ಕುಟುಂಬಗಳಲ್ಲಿ ವ್ಯಕ್ತವಾಗಿಯೋ, ಅವ್ಯಕತವಾಗಿಯೋ ಕಾಣುವ ಸುಖ ಸಂತೋಷ, ದುಃಖ = ದುರಂತಗಳ ಬುನಾದುಯಲ್ಲಿ, ಈ ಸಮಸ್ಯ ಕಂಡ ಹಾಗೆಯೋ, ಕಾನದಮ್ತೆಯೋ ಹುದುಗಿದೆ. ಮಾನವನ ಬಾಳಿನ ಈ ಸುಖಾಂತ, ದುರಂತಗಳಿಗೆ, ಸಾಮಾನ್ಯ ಮಾನವ ವಿಧಿ ಎಂಬ ಕಾರಣವನ್ನು ಆರೋಪಿಸಿ ಸಮಾಧಾನ ಪಡೆಯಲೆತ್ನಿಸಿದರೆ, ಮನೋವಿಜ್ಞಾನಿ ಮಾನವನ ಸುಪ್ತ ಚಿತ್ತದಲ್ಲಿ ಹುದುಗಿರುವ ಕಾರಣಗಳನ್ನು ಬೆದಕಿ, ಹಲವಾರು ಹೆಸರಿನ ವೈಜ್ಞಾನಿಕ ಕಾರನಗನ್ನು ತೋರಿಸುತ್ತಾನೆ.

ವಿಧಿಯೆಂದೇ ಹೇಳಲಿ, ಗತ ಘಟನೆಯ ಪ್ರಭಾವದಿಂದ ಸುಪ್ತ ಚಿತ್ತಕ್ಕಾದ ಆಘಾತದ ಪರಿಣಾಮವೆಂದೇ ಹೇಳಲಿ, ಏನಾದರೂ ಜನ್ನ ಮಹಾಕವಿ ಹೇಳಿದ ಮಾತು, 'ಮನಸಿಜನ ಮಾಯೆ ವಿಧಿ ವಿಲಸನದ ನರಂಬಡೆಯೆ ಕೊಂದು ಕೂಗದೆ ನರರಂ'ಎಂಬ ನಿತ್ಯಸತ್ಯ.

ಆ ಸತ್ಯವೇ ಇಲ್ಲಿ. ಈ ಕಾದಂಬರಿ ರೂಪವಾಗಿ ಚಿತ್ರಿಸವಾಗಿದೆ



Friday, November 22, 2013

ಕನಕ ಮುಸುಕು - ಕೆ ಎನ್ ಗಣೇಶಯ್ಯ

Kanaka Musuku -  K. N. Ganeshaiah

ನಾಗೇಶ ಹೆಗಡೆರವರು ಬರೆದಿರುವ ಮುನ್ನುಡಿಯಿಂದ :
"ಕನಕ ಮುಸುಕು" ಕಾದಂಬರಿ ೨೦೦೫ರ ಕೊನೆಯಲ್ಲಿ "ಸುಧಾ" ವಾರಪತ್ರಿಕೆಯಲ್ಲಿ ವಾರವಾರವೂ ಬರತೊಡಗಿದಾಗ ಅದು ಕೇವಲ ಧಾರಾವಾಹಿಯಾಗಿ ಬರಲಿಲ್ಲ, ನಿಂತ ನೀರಂತಿದ್ದ ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಧಾರೆಯಾಗಿ ಬನ್ತು. ಕನ್ನಡ ಓದುಗರಿಗೆ ಮಿಂಚಿನ ಪುಳಕ ನೀಡುತ್ತ ಬಂತು.
ಅದುವರೆಗೆ ಕನ್ನಡದಲ್ಲಿ ಚಾರಿತ್ರಿಕ ಕಥಾನಕಗಳು ಅದೆಷ್ಟೋ ಬಂದಿದ್ದವು, ಮಾಸಲೆ ಸೇರಿಸಿದ ಪತ್ತೇದಾರಿ ಕಾದಂಬರಿಗಲಂತೂ ಲೆಕ್ಕವಿಲ್ಲದಷ್ಟು ಬಂದಿದ್ದವು. ಆದರೆ ಅವೆರಡರ ಸಂಗಮದಂತೆ ಐತಿಹಾಸಿಕ ಘಟನೆಗಳ ನೆಲೆಗಟ್ಟಿನಲ್ಲಿ ಇಂದಿನ ವಿದ್ಯಮಾನಗಳನ್ನು ರೋಚಕವಾಗಿ ಹೆಣೆದ ಚಾರಿತ್ರಿಕ ಥ್ರಿಲ್ಲರ್ ಮಾತ್ರ ನಮ್ಮ ಭಾಷೆಯಲ್ಲಿ ಇರಲ್ಲಿಲ್ಲ. ಈಚೆಗಷ್ಟೇ ಇಂಗ್ಲೀಷಿನಲ್ಲಿ ಡ್ಯಾನ್ ಬ್ರೌನನ "ಡಾ ವಿನ್ಸಿ ಕೋಡ್" ಹೆಸರಿನ ಚಾರಿತ್ರಿಕ ಥ್ರಿಲ್ಲರ್ ಜನಪ್ರಿಯತೆಯಾ ಉತ್ತುಂಗಕ್ಕೇರಿ ಭಾರತಿಯ ಓದುಗರ ಕೈಯಿಂದ ಕೈಗೆ ದಾಟುತ್ತಿದ್ದಾಗ "ನಮ್ಮ ಕಾದಮ್ಬರಿಕಾರರಿಗೇಕೆ ಇಂಥದ್ದೊಂದು ವಿಷಯ ಹೊಳೆಯುವುದಿಲ್ಲ?" ಎಂದು ಅನೇಕರು ಚರ್ಚಿಸಿದ್ದು ಉನ್ತು. ಚರ್ಚೆ ಇನ್ನು ಪೂರ್ತಿಗೊಳ್ಳುವ ಮೊದಲೇ,ಚರ್ಚೆ ಮೂಕ್ತಾಯ ಹಾಡುವಂತೆ ಕಾಣಿಸಿಕೊಂಡಿತು "ಕನಕ ಮುಸುಕು"

ಕನ್ನಡದ ಮಟ್ಟಿಗೆ ಹೊಸದೊಂದು ಮೈಲಿಗಲ್ಲು ಅನ್ನುವಂತೆ ಈ ಕಾದಂಬರಿಯಲ್ಲಿ ಅನೇಕ ಹೊಸತುಗಳಿವೆ. ಮೊದಲೆನೆಯದಾಗಿ ಗ್ರಂಥಕರ್ತರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು, ಇನ್ನೂ ವಿಶೇಷ ಉಪನ್ಯಾಸ, 'ಏಟ್ರಿ'ಯಂಥ ಜನಪರ ಸಂಘಟನೆಯ ಕೆಲಸ. ಅನೇಕ ಸಂಘ ಸಂಸ್ಥೆಗಳಿಗೆ ಸಲಹಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ.

ಇವರ ಈ ಚೊಚ್ಚಲ ಕಾದಂಬರಿಯ ಹಸ್ತಪ್ರತಿ ನನ್ನ ಕೈ ತಲುಪಿದಾಗ ನಾನು ಅದೇ ತಾನೆ 'ಸುಧಾ'ದ ಊಸ್ತುವಾರಿ ವಹಿಸಿಕೊಂಡಿದ್ದೆ. ನನ್ನ ಪತ್ರಿಕೆಗೆ ಹೊಸ ಹೊಳಪು ಕೊಡಬೇಕು, ಹೊಸ ಛಾಪು ಮೂಡಿಸಬೇಕು , ಎಳೆಯ ಪೀಳಿಗೆಯನ್ನು ಆಕರ್ಷಿಸಬೇಕು ಎಂಬೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಜೋಡಿಸುವಾಗ ತಾನಾಗಿ ಬಂಡ ಕೃತಿ ಇದು. ಪ್ರಸಿದ್ದ ವಿಜ್ಞಾನಿಯೆಂದು ಖ್ಯಾತಿ ಪಡೆದ ಡಾ. ಗಣೇಶಯ್ಯನವರ ಬಗ್ಗೆ ಗೊತ್ತಿತ್ತಾದರೂ ಇವರು ಕನ್ನಡ ಕಾದಂಬರಿ ಬರೆಯುತ್ತಾರೆಂಬುದೇ ಅಚ್ಚರಿಯ ಸಂಗತಿಯಾಗಿತ್ತು. ಕುತೂಹಲದಿಂದ ನಾಲ್ಕಾರು ಪುಟಗಳನ್ನು ಮಗುಚಿದಾಗ ಅಲ್ಲಿ ಬಳಸಿದ್ದ ಪ್ರಬುದ್ದ ಭಾಷೆ, ಚುರುಕಿನ ನಿರೂಪಣೆ ಮೊದಲ ನೋಟಕ್ಕೇ ಗಮನ ಸೆಳೆಯಿತು. ಮನೆಗೆ ಒಯ್ದು ಒಂದೇ ಕಂತಿನಲ್ಲಿ ಓದಿ ಮುಗಿಸಿದ್ದಾಯಿತು.

ಹೊಸ ಸಾಹಿತಿಯೊಬ್ಬರನ್ನು ಹೊಸ ರೀತಿಯಲ್ಲಿ ಓದುಗರಿಗೆ ಪರಿಚಯಿಸುವ ಮಾರ್ಗವನ್ನು ದಾ. ಗಣೇಶಯ್ಯ ನಮಗೆ ತೋರಿಸಿಕೊಟ್ಟರು. 'ಕನಕ ಮುಸುಕು' ಪ್ರಕಟಿಸುವ ಮೊದಲು ಅವರೇ ರಚಿಸಿದ ಇನ್ನೊಂದು ಐತಿಹಾಸಿಕ ನೀಳ್ಗತೆ 'ಶಾಲಭಂಜಿಕೆ'ಯನ್ನು ಅವರು ಪ್ರಕಟಣೆಗೆ ಕಳುಹಿಸಿದರು. ಅದು 'ಸುಧಾ'ದ ವಿಶೇಷ ಮೂಖಪುಟ ಕತೆಯಾಗಿ ಪ್ರಕಟವಾದಾಗ ಓದುಗರ ಅಪಾರ ಮೆಚ್ಚುಗೆ ಪಡೆಯಿತು. ಸಮಕಾಲೀನ ನೈಜ ವರದಿಯಿಂದ ಮೆಲ್ಲಗೆ ಗತಕಾಲಕ್ಕೆ ಜಾರಿಕೊಳ್ಳುವ ರೋಚಕ ಹಂದರದಿಂದಾಗಿ ಅದು ನೈಜ ಕತೆಯೆ, ಕಾಲ್ಪನಿಕ ಸೃಷ್ಟಿಯ ಎಂಬುದು ಮೊದಲ ಓದಿಗೆ ಗೊತ್ತಾಗದಂಥ ನೀರುಪಣಾ ಕೌಶಲವನ್ನು ಓದುಗರ ಮೆಲಕು ಹಾಕುತ್ತಿದ್ದಂತೆಯೇ ಹೊಸ ಕಾದಂಬರಿಕಾರನೊಬ್ಬನ ಆಗಮನಕ್ಕೆ ವೇದಿಕೆ ಸಜ್ಜಾಗಿತ್ತು. 'ಕನಕ ಮುಸುಕು' ಕೂಡ ಅಷ್ಟೆ ಮುಸುಕಿನ ಜೋಳದ ಮೂಲಸ್ಥಾನ ನಿಷ್ಕರ್ಷೆಯ ಬಗೆಗಿನ ಸಮಕಾಲೀನ ಸಮಸ್ಯೆಯೊಂದರ ಮುಡುಕು ತೆರೆಯುವ ಲೇಖನದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಸುದೀರ್ಘ ಕಥಾಹಂದಕ್ಕೊಂದು ಕೌತುಕದ ನೆಲೆಗಟ್ಟು ಸಿದ್ದವಾಗುತ್ತದೆ.

ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳು ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಓದುಗರ ಕುತೂಹಲವನ್ನು ಹಿಂದೆಯೂ ಅಲ್ಲಲ್ಲಿ ಕೆನೆಕಿದ್ದ, ಇಂದಿಗೂ ಒಗಟಾಗಿಯೇ ಉಳಿದ 'ಸಿರಿಭೂವಲಯ'ದ ಪರಿಕಲ್ಪನೆಯನ್ನು ತೀರ ಸಹಜವೆಂಬಂತೆ ಕಥೆಯಲ್ಲಿ ಸೇರಿಸಿದ್ದು, ತಾಳೆಗರಿಯ ಲಿಪಿಯಲ್ಲಿ ಅಂಕಾಕ್ಷರ ಸೂತ್ರಗಳ ಮೂಲಕ ಜೈನ ಸಿರಿಸಂಪತ್ತಿನ ಕೀಲಿಕೈಯನ್ನು ಬಚ್ಚಿಟ್ಟಿದ್ದು ಎಲ್ಲವೂ ಮೂಂದಿನ ಅಧ್ಯಾಯಾಕ್ಕಾಗಿ ಕಾಡು ಕೂರುವಂತೆ ಮಾದುತ್ತೆ. ಇಂದು ನೆನ್ನೆಗಳ ಮಧ್ಯೆ ತಾಕಲಾತವಾಡುತ್ತ ಘಟನೆಗಳು ತೆರೆದುಕೊಳ್ಳುತ್ತವೆ. ಸಿನಿಮಾ ರೀಲಿನಂತೆ, ನವೆಂಬರ್ 6 ರಿಂದ ಗಂಟೆ ಗಂಟೆ ಲೆಕ್ಕಾಚಾರದಂತೆ ಹತ್ತು ದಿನಗಳಲ್ಲಿ ಕಥೆಯನ್ನು ಮುಗಿಸುವ ಜಾಣ್ಮೆ ಕೂಡ ಕನ್ನಡದ ಈಚಿನ ಓದುಗರಿಗೆ ಹೊಸದೆಂದೇ ಹೆಲಬಹುದು. ಸೇಟಲೈಟ್ ಚಾನೆಲ್, ಸೆಲ್ ಫೊನೆ. ಈ-ಮೇಲ್, ನೆಟ್ ಚಾಟ್ ಗಳ  ಈ ಯುಗದಲ್ಲಿ ಕಾದಂಬರಿಯ ನಾಯಕಿಯೂ ಅಂಥದ್ದೇ ಹೈ -ಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾವೆಲ್ ಮಾಡುತ್ತ ಭೂತ=ಭವಿಷ್ಯಗಳನ್ನು ಬೆಸೆಯುವ ಕರಿಕಾರ್ತಿಯಾಗಿರುವುದು ಇಂಗ್ಲಿಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೋದ ಪೀಳಿಗೆಗೂ ಆಕ್ರಶಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದ್ದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ.
ಇವೆಲ್ಲವುಗಳ ಹಿಂದಿನ ಸೃಜನಶೀಲ ಮನಸ್ಸು ನಮ್ಮನ್ನು ಅಚ್ಚರಿಗೊಳಿಸಬೇಕು. ವಿಜ್ಞಾನಿಯೊಬ್ಬ ತನ್ನ ಸಂಶೋಧನ ಕ್ಷೇತ್ರದ ಮಾಹಿತಿಗಳನ್ನು ಥ್ರಿಲ್ ಕೊಡುವ ಕಥಾ ರೂಪದಲ್ಲಿ ಹಣೆಯುವುದು ಅಷ್ಟೇನು ಸವಾಲಿನ ಕೆಲಸವಾಗಲಾರದು. ಇಲ್ಲಿ ಹಾಗಲ್ಲ, ಇತಿಹಾಸದ ಗರ್ಭದಲ್ಲಿ ಅಡಗಿದ ಸಂಗತಿಗಳನ್ನು ಸಾಧಾರ ಹೊರಕ್ಕೆಳೆದು, ವರ್ತಾಮಾನದೊಂದಿಗೆ ಬೆರೆಸಿ ಕಲ್ಲತ್ಮಾಕ ಹೆನೆಗೆ ಮಾಡಿದ್ದು ಅಪರೂಪದ ಸಾಧನೆಯೇ ಸರಿ.
ಅಲ್ಲಲ್ಲಿ ಕಡೆದಿಟ್ಟ ಕಲ್ಲುಳುಗಳ ಅವಶೇಷಗಳಲ್ಲಿ ಗತಕಾಲದ ನಮ್ಮ ರೋಚಕ ಚರಿತ್ರೆಗಳು ಹೂತುಹೊಗಿವೆ; ಇಲ್ಲವೇ ನೀರಸ ಪಠ್ಯಗಳಾಗಿ ಶಿಕ್ಷಕರ ನೋಟ್ ಬುಕ್ ಗಳಿಂದ ವಿದ್ಯಾರ್ಥಿಗಳ ನೋಟ್ ಬುಕ್ ಗಳಿಗೆ ದಾಟಿ ಯಾರನ್ನು ತಟ್ಟದೆ ಸಾಗುತ್ತಿವೆ. ಚರಿತ್ರೆಯ ಬಗೆಗಿನ ಅಂಥ ಅಸಡ್ಡೆಯನ್ನು ನಿವಾರಿಸಿ ಹೊಸ ಸಂಶೋಧನೆಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇ ಪಕ್ಷ ಅಲಿದಿಳಿದ ಶಿಲ್ಲಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ತ್ರಿಲ್ಲೆರ್ಗಳ ಅಗತ್ಯ ತುಂಬಾ ಇದೆ. ಅದನ್ನು ಸಮಕಾಲೀನ ವಿಜ್ಞಾನಿಯೊಬ್ಬರು ತೋರೀಸಿಕೊಟ್ಟಿದ್ದಾರೆ. ಮುಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಹಿಸುವಂತೆ ಹೊಸ ದೇವಿಗೆ ಹಚ್ಚಿದ್ದಾರೆ.
ದಾ. ಗಣೇಶಯ್ಯ ಕನ್ನಡಕ್ಕೆ ದಕ್ಕಿದ ಹೊಸ ಆಸ್ತಿ.

ಮೂಲhttp://goo.gl/x3yM9L
ಡಾ. ಕೆ. ಎನ್. ಗಣೇಶಯ್ಯನವರು ಭಾರತದ ಪುರಾತನ ಮತ್ತು ಸವಿಸ್ತಾರವಾದ ಇತಿಹಾಸವನ್ನು ಅಡಿಗಲ್ಲಾಗಿ ಇಟ್ಟುಕೊಂಡು, ಇಂದಿನ ಮನುಷ್ಯನ ಅತಿ ಆಸೆಯನ್ನು ಕಟ್ಟಡದ ಇಟ್ಟಿಗೆಗಳಂತೆ ಬಳಸುತ್ತಾ ಅತ್ಯಂತ ರೋಚಕವಾಗಿ ಕಥೆಯನ್ನು ನಮಗೆ ಹೇಳುತ್ತಾ ಹೋಗುತ್ತಾರೆ. ಅವರಿಗೆ ಗೊತ್ತು ನಮ್ಮ ಕನ್ನಡದ ಓದುಗರಿಗೆ ತೀರ ಹೊಸ ಅಥವಾ ತೀರ ಹಳೆಯದನ್ನು ಹೇಳಿದರೆ ಓದಲಾರರು ಎಂದು. ಹಾಗಾಗಿ ಎಷ್ಟು ಬೇಕೋ ಹೊಸ ತಂತ್ರಜ್ಞಾನವನ್ನು ಬಳಸಿ ಭಾರತ/ಕರ್ನಾಟಕದ ಸಂಸ್ಕೃತಿ ಗೆ ಒಗ್ಗುವ ಹಾಗೆ ಕಥೆಯನ್ನು ಬಿಡಿಸಿಡುತ್ತಾರೆ. ಇನ್ನೊಂದು ಮುಖ್ಯವಾಗಿ ಹೇಳಬೇಕಾದ್ದು ಪ್ರತಿ ಕಾದಂಬರಿಗೆ ಇವರು ಮಾಡುವ ಸಂಶೋಧನೆ. ಇತಿಹಾಸದಲಿ ಎಲ್ಲೋ ಕರಗಿಹೋದ/ಮರೆಯಾದ ಸತ್ಯಗಳನ್ನು ಹೇಳುತ್ತಾ ಹೋಗುತ್ತಾರೆ. ಮೂಲತಹ ಕೃಷಿ ವಿಜ್ಞಾನಿಗಳಾಗಿರುವ ಇವರು ಸಸ್ಯ ಥಳಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. 'ಕಪಿ ಲಿಪಿ ಸಾರ' ದಲ್ಲಿ ಇವರು 'ಸಂಜೀವಿನಿ' ಯನ್ನು ಹುಡುಕುವ ಕಥೆಯನ್ನು ಹೇಳುತ್ತಾರೆ. ಅಷ್ಟೇ ಅಲ್ಲದೆ ರಾಮಾಯಣ ಆದಮೇಲೆ ಹನುಮಂತ ಎಲ್ಲಿ ಹೋದ? ಅಂಡಮಾನ್ ಗೆ ಅಂಡಮಾನ್ ಅಂತಾನೆ ಯಾಕೆ ಕರಿತಾರೆ?. ಹಾಗೂ ಜೀವ ವಿಜ್ಞಾದಲ್ಲಿ ಇತ್ತೆಚೆಗಾಗಿರುವ ಬೆಳವಣಿಗೆಗಳು ಇತ್ಯಾದಿಗಳನ್ನೂ ಬಳಸಿ ಸುಂದರವಾದ ಅಷ್ಟೇ ಕುತೂಹಲಕರವಾದ ಒಂದು ಲೋಕವನ್ನೇ ಸೃಷ್ಟಿಸುತ್ತಾರೆ.
ಇಷ್ಟೆಲ್ಲಾ ಹೇಳಿದಮೇಲೆ ನಾನು ಅವರ ಅಭಿಮಾನಿಯಾಗಿದ್ದೀನಿ ಅಂತ ಬಿಡಿಸಿ ಬೇರೆ ಹೇಳಬೇಕಾಗಿಲ್ಲ ಅಲ್ಲವೇ. ಹಾಗಾಗಿ ಮತ್ತೆರಡು ಪುಸ್ತಕ ತಂದಿರುವೆ ಇವರದೇ :) ಅದರಲ್ಲಿ ಒಂದನ್ನು ಮುಗಿಸಿರುವೆ. ಆ ಪುಸ್ತಕದ ಹೆಸರು 'ಕನಕ ಮುಸುಕು'. ಈ ಕಾದಂಬರಿಯ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕೆಂದರೆ, ಇಸ್ರೋ ಸಂಸ್ಥೆಯ ಚಿತ್ರ ಒಂದು ಕರ್ನಾಟಕದ ಸೋಮನಾಥ ಪುರದ ಸುತ್ತ ಅಸ್ವಾಭಾವಿಕ ದಿಬ್ಬಗಳನ್ನು ತೋರಿಸುತ್ತದೆ. ಇದನ್ನು ಅರ್ಥೈಸಲು ಹೋದಾಗ ಕೆಳಗಿನ ಕಥೆ ನಮ್ಮ ಮುಂದೆ ಹರಡಿಕೊಳ್ಳುತ್ತದೆ:

ಚಂದ್ರಗುಪ್ತ ಮೌರ್ಯ ಜೈನ ಸನ್ಯಾಸಿಯಾಗಿ ತನ್ನ ರಾಜ್ಯ ತ್ಯಜಿಸಿ ಉತ್ತರ ಭಾರದಿಂದ ದಕ್ಷಿಣ ಭಾರತಕ್ಕೆ ಜೈನ ಮತದ ಪ್ರಚಾರಕನಾಗಿ ಶ್ರವಣಬೆಳಗೊಳಕ್ಕೆ ಬರುತ್ತಾನೆ. ಇದು ನಾವೆಲ್ಲಾ ಓದಿರುವ/ಕೇಳಿರುವ ಸತ್ಯ. ಆದರೆ ಸ್ವಲ್ಪ ತಾರ್ಕಿಕವಾಗಿ ಯೋಚಿಸಿರುವ ಗಣೇಶಯ್ಯನವರು ಹಾಗೂ ಅಷ್ಟೇ ಆಳವಾಗಿ ಇದರ ವಿವರವನ್ನು ತಿಳಿದಿರುವ ಅವರು ಕೆಲವು ವಿಷಯಗಳನ್ನು ಗಮನಿಸಿದ್ದಾರೆ. ಹಲವಾರು ಶಾಸನಗಳು ಹೇಳಿರುವಂತೆ ಚಂದ್ರಗುಪ್ತ ಮೌರ್ಯನ ಜೊತೆ ಸುಮಾರು ೧೨೦೦೦ ಜೈನ ಮುನಿಗಳು ಬರುತ್ತಾರೆ!! ಯಾಕೆ? ಇಂತಹ ಪ್ರಶ್ನೆಗಳು ಕೊನೆಗೆ ಕೈ ಮಾಡಿ ತೋರಿಸುವ ಉತ್ತರ ಸುಮಾರು ೫೦೦ ಟನ್ ಚಿನ್ನದ ಕಡೆಗೆ. ಈ ಚಿನ್ನವನ್ನು ಮುಸುಕಿನಿ ಜೋಳದ ತೆನೆಯ ರೂಪದಲ್ಲಿ ಮುಸುಕಿನ ಜೋಳದ ತೆನೆಗಳ ಜೊತೆಗೆ ಉತ್ತಮ camouflage ಮಾಡಿ ತರುತ್ತಾರೆ . ಹಾಗಾಗಿ ಕನಕ ಮುಸುಕು.

ಚಂದ್ರಗುಪ್ತ ಮೌರ್ಯ ನಿಂದ ಶುರುವಾಗುವ ನಿಧಿಯ ರಹಸ್ಯ ಹೊಯ್ಸಳ ಸಾಮ್ರಾಜ್ಯ ದ ಶಕುಂತಲೆಯಲ್ಲಿ ಕೊನೆಗೊಳ್ಳುತ್ತದೆ. ಈ ನಿಧಿಯನ್ನು ಹುಡುಕಲು ಹೊರಡುವ ಕಾದಂಬರಿಯ ನಾಯಕಿ, ಆಕೆಯ ಗಂಡ, ಆಕೆಯ ಗುರು ಹಾಗೂ ಸಕಾರಣಗಳಿಗೆ ಇದನ್ನು ಮುಚ್ಚಿಡಲು ಪ್ರಯತ್ನಿಸುವ ಜೈನ ಧರ್ಮದ ಹಿರಿಯ ನಾಯಕರುಗಳು ಹಾಗೂ ಇಷ್ಟೆಲ್ಲಾ ಸಾಲದು ಎಂಬಂತೆ ನಾಯಕಿಯನ್ನು ಬೆನ್ನು ಹತ್ತುವ ಅಂತರಾಷ್ಟ್ರೀಯ ಕಳ್ಳರ ಗ್ಯಾಂಗ್. ಇನ್ನೇನು ಬೇಕು ಹೇಳಿ ಕಥೆಯನ್ನು ಇನ್ನಷ್ಟು ರೋಚಕವಾಗಿಸಲು? ಇಷ್ಟೆಲ್ಲಾ ಇದ್ದರು ಗಣೇಶಯ್ಯ ಕಥೆಯ ಮುಖ್ಯ ಲಹರಿಯನ್ನು ಬೇರೆ ಕಡೆಗೆ ಹರಿಯ ಬಿಡದೇ ಓದುಗನನ್ನು ಕಾದಂಬರಿ ಮುಗಿಯುವವರೆಗೂ ಕಟ್ಟಿ ಕೂರಿಸುತ್ತಾರೆ.
ನಾನು ಸುಮಾರು ೪ ವರ್ಷದ ಹಿಂದೆ ಬೆಂಗಳೂರಿನಬಳಿ ಇರುವ ದೇವರಾಯನ ದುರ್ಗಕ್ಕೆ ಹೋದಾಗ ಅಲ್ಲಿ ಒಬ್ಬ ಹೇಳಿದ್ದ ವಿಷ್ಣು ವರ್ಧನನ ಹೆಂಡತಿ ಶಾಂತಲೆ ಇಲ್ಲೇ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಳು ಎಂದು. ಆಗಿನಿಂದ ನನಗೆ ಒಂದು ವಿಷ್ಯ ಅರ್ಥ ಆಗಿರಲಿಲ್ಲ. ಬೇಲೂರುಹಳೆಬೀಡಿನಲ್ಲಿದ್ದ ಶಕುಂತಲೆಗೂ ಇಲ್ಲಿಗೂ ಏನು ಸಂಬಂಧ, ಇಲ್ಲಿ ಬಂದು ಸಾಯುವನ್ತದ್ದು ಏನಾಗಿತ್ತು? ಈ ಪ್ರಶ್ನೆ ಗೆ ಕನಕ ಮುಸುಕು ತಕ್ಕಷ್ಟು ಉತ್ತರ ಕೊಟ್ಟಿತು. ಇಷ್ಟೇ ಅಲ್ಲದೆ ಮುಸಿಕಿನ ಜೋಳದ ಇತಿಹಾಸ ಮತ್ತು ಅದು ಏಷ್ಯಗೆ ಬಂದ ಬಗೆಗೆ ಇಂದಿಗೂ ಇರುವ ಕಗ್ಗಂಟು ಗಳನ್ನೂ ಕುತೂಹಲಕಾರಿಯಾಗಿ ಕಥೆಯ ಮಧ್ಯದಲ್ಲಿ ಗೊತ್ತಿಲ್ಲದಂತೆಯೇ ನಮಗೆ ತಿಳಿಸುತ್ತಾರೆ. ಇದಲ್ಲದೆ ರಾಜಕಾರಣ ಮತ್ತು ಧರ್ಮ/ಜಾತಿ ಇವೆರಡರ ಮಧ್ಯ ಇರುವ ಬಿಡಿಸಲಾಗದ ನಂಟನ್ನು ತಿಳಿಯಾಗಿ ಹೇಳುತ್ತಾರೆ. ಜೈನ, ವೈಷ್ಣವ, ಶೈವ, ಇಸ್ಲಾಂ ಮತ್ತು ಕ್ರಿಸ್ತ ಧರ್ಮ ಗಳ ಹಿಂದಿನ ತಿಕ್ಕಾಟಗಳು ನೋಡ ಸಿಗುತ್ತವೆ. ಇಷ್ಟೆಲ್ಲಾ ಸಾಕಾಗುವುದಿಲ್ಲ ಎಂದರೆ ದೊಡ್ಡವರ ಸಣ್ಣತನಗಳು ಹಾಗೂ ನಿಮಗೆ cryptography ಬಗ್ಗೆ ಉತ್ಸಾಹವಿದ್ದರೆ ಹಿಂದಿನ ಕಾಲದಲ್ಲಿ ಬಳಸಿದ ಕೊಡೆಡ್ ಸಂದೇಶಗಳನ್ನು ಸೇರಿಸಿ ನಮ್ಮನ್ನು ಚಕಿತಗೊಳಿಸುತ್ತಾರೆ.


Sunday, November 17, 2013

ಮರಣದ ಮರ್ಮ - ಎನ್ ನರಸಿಂಹಯ್ಯ

Marnada Marma -  Narashimaiah N

 

 

ಮುನ್ನುಡಿಯಿಂದ :

ಸಾಂಸಾರಿಕ ಜೀವನದ ಚಕ್ರವು ಸುಗುಮವಾಗಿ ಉರುಳಲು ದಂಪತಿಯರ ಪರಸ್ಪರ ಹೊಂದಾಣಿಕೆಯ ಪ್ರೀತಿವಿಶ್ವಾಸ ಅಥತ್ಯವಶ್ಯಕ. ಒಬ್ಬರನ್ನೊಬ್ಬರು ಹೊಂದಿಕೊಂಡು ಹೋಗದ ಬಾಳು ಜೋಡೆತ್ತಿನ ಗಾಡಿಗೆ ಒಂಟಿ ಎತ್ತನ್ನು ಕಟ್ಟಿದಂತಾಗುವುದು. ಹಿರಿಯರು ನಿಶ್ಚಿಯ ಮಾಡಿದ ಹೆಣ್ಣು=ಗಂಡುಗಳನ್ನು ಮಾಡುವೆ ಮಾಡಿಕೊಳ್ಳುವ ಕಾಲ ತಪ್ಪಿ, ಗನ್ದುಹೆಣ್ಣುಗಳೇ ಪರಸ್ಪರ ಒಪ್ಪಿ ಮದುವೆಯಾಗುವ ಕಾಲವೀಗ ನಡೆಯುತ್ತಿದೆ.

ತಂದೆತಾಯಿಯರ ನಿರ್ಬಂಧಕ್ಕೊಳಗಾಗಿ ಬೇಡವಾದ ಹೆಣ್ಣುಗಳನ್ನು ಗಂಡುಗಳೇ ಆಗಲೀ, ಗಂಡುಗಳನ್ನು ಹೆಣ್ಣುಗಳೇ ಆಗಲಿ ಮದುವೆಯಾದರೆ ಆ ಸಂಸಾರ ಜೀವನದಲ್ಲಿ ಸಂತೋಷವಿರದೆ ಏನಾದರೊಂದು ಏರುಪೇರುಗಳ ತೊಡಕಿನ ಸಮಸ್ಯಗಳಿದ್ದೇ  ಇರುತ್ತದೆ. ಗಂದಹೆಂಡಿರಲ್ಲಿ ಪ್ರೀತಿವಿಶ್ವಾಸವಿದ್ದು ಜಗಳಗಳಾದರೆ ಗಂಡ ಹೆಂಡಿರ ಜಗಳ ಉಂಡು ಮಲದುವತನಕ ಎಂಬಂತೆ ಹಗಲು ಜಗಳ ಆಡಿದವರು ರಾತ್ರಿ ಪರಸ್ಪರ ಪ್ರೀತಿಯಿಂದ ಮಾತಾನಾಡುತ್ತಾ ಬೆಳಿಗ್ಗೆ ಆಡಿದ ಜಗಳವನ್ನು ಮರೆಯುವರು. ಪ್ರೀತಿವಿಶ್ವಾಸವಿಲ್ಲದವರಲ್ಲಿ ಯಾರೇನು ಕೆಲಸ ಮಾಡಿದರೂ ತಪ್ಪಾಗಿ ಕಾಣುವುದು.

ಈ ಪತ್ತೆದಾರಿ ಕಾದಂಬರಿಯನ್ನು ಅಂತಹ ಒಂದು ಸಮಸ್ಯೆಯನ್ನು ಉಪಯೋಗಿಸಿಕೊಂಡು ವಿಲಕ್ಷಣ ಸನ್ನಿವೇಶ, ಘಟನೆಯೊಡನೆ ಬರೆದಿತ್ತೇನೆ. ಅಂದಮಾತ್ರಕ್ಕೆ ಇವರ ಪಾತ್ರಪರಿಚಯಗಳು ಸಮಾಜದ ಯಾವ ವ್ಯಕ್ತಿಗೂ ಅನ್ವಯಿಸದು, ಕಥಾವಿವರಣೆ, ಪಾತ್ರ ಪರಿಚಯವು ನನ್ನ ಸ್ವಯಂ ಕಲ್ಪಿತವಾಗಿರುತ್ತೆ.



ನಾನೇಕೆ ಬರಯುತ್ತೇನೆ ? - ಎಸ್ ಎಲ್ ಭೈರಪ್ಪ

Naneke Bareyuthene - S L Bhyrappa

 

ಭೈರಪ್ಪನವರು ಕನ್ನಡದ ಬಹು ಜನಪ್ರಿಯ ಲೇಖಕರು. ಅವರು ನೈಜತೆಗೆ ಹತ್ತಿರವಾಗಿ ಬರಯುತ್ತಾರೆ, ಅವರು ಬರಯುವ ಕಠೋರ ಸತ್ಯ ಕೆಲವರಿಗೆ ಹಿಡಿಸುವುದಿಲ್ಲ. ಅದಕ್ಕಾಗಿ ಅವರನ್ನು ಹೀಗೆಳೆಯುದು ಸಾಮಾನ್ಯ. ನಾವು ಯಾವುದೇ ಒಬ್ಬ ಲೇಖಕರ ಬರವಣಿಗೆಯನ್ನು ಟೀಕಿಸುವ ಮುನ್ನ ಅವರು ಯಾಕೆ ಮತ್ತು ಯಾವ ದೃಷ್ಟಿಕೋನದಿಂದ ಬರೆದ್ದಿದ್ದಾರೆ ಎಂದು ತಿಳಿದಿಕೊಳ್ಳಬೇಕು. ಲಿಲಿಯುವ ಮುನ್ನವೇ ಎಲ್ಲಾರು ಊಹ ಫೋಹಗಳನ್ನೂ ಹುಟ್ಟು ಹಾಕಿ ಲೇಖಕರ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಾರೆ. ಈ ಪುಸ್ತಕ ಭೈರಪ್ಪನವರು ಅವರು ಯಾವ ವಿಷಯವನ್ನು ಇಟ್ಟಿಕೊಂಡು ಅವರ ಕಾದಂಬರಿಗಳನ್ನು ಬರೆದ್ದಿದ್ದಾರೆ ಎಂದು ವಿವರಿಸುತ್ತಾರೆ.

ಈ ಪುಸ್ತಕದಲ್ಲಿ ಅವರು ಕಳೆದ ಹತ್ತು ವರ್ಷಗಳಿಂದ ಬರೆದ ಲೇಖನಗಳ ಸಂಗ್ರಹವಿದೆ. ಅವರು ಬರೆದ ಸಂದರ್ಭ ಮತ್ತು ಕಾಲವನ್ನು ಬರೆದ್ದಿದ್ದಾರೆ.

ಪುಸ್ತಕದಿಂದ:

"ನಾವು ಇಂಥಹದೇ ಕಾರಣಕ್ಕಾಗಿ ಬರಯುತ್ತೇವೆಂದು ಎಲ್ಲ ಲೇಖಕರೂ ತಮ್ಮ ಜೀವನದುದ್ದಕ್ಕೂ ಮಾರ್ಗದರ್ಶಿಯಾಗುವಂಥ ಗುರಿಯನ್ನು ಖಚಿತಮಾಡಿಟ್ಟುಕೊಂಡಿರುವುದು ಸಾಧ್ಯವಿಲ್ಲ. ಉಳಿದವರ ಮಾತು ಹೋಗಲಿ ನನ್ನ ಬರವಣಿಗೆಯ ಗೊತ್ತುಗುರಿಗಳು ಇನ್ನು ಒಂದು ವಾರದ ನಂತರ ಯಾವ ಧಾಟಿಯಲ್ಲಿ ಹೋಗುತ್ತದೆ ಎಂದು ಈ ದಿನ ನಿಶ್ಚಯವಾಗಿ ಹೇಳಲಾರೆ. ಕಳೆದ ಹದಿನೇಳು ವರ್ಷದಿಂದ, ಎಂದರೆ ೧೯೫೯ ರಿಂದ ಬರೆಯುತ್ತಿದ್ದೇನೆ. ಈ ಅವದಿಯಲ್ಲಿ ನನ್ನ ಬರವಣಿಗೆಯ ಯಾಕೆ ಏನುಗಳನ್ನು ಹಲವು ಬಾರು ವಿಮರ್ಷಿಸಿಕೊಂಡಿದ್ದೇನೆ, ಬದಲಿಸಿಕೊಂಡಿದ್ದೇನೆ. ಎಷ್ಟೋ ಸಲ ನಾನು ಪ್ರಜ್ಞೆಯ ಮಟ್ಟದಲ್ಲಿ ಆಲೋಚಿಸಿದ್ದ ರೀತಿಯನ್ನು ಮೀರಿ ಕೃತಿಗಳು ಸ್ವರೂಪ ತೆಳೆದಿದೆ. ಅವುಗಳ ಹೊಸ ಬೆಳಕಿನಲ್ಲಿ ನನ್ನ ಬರವಣಿಗೆಯ ದಿಕ್ಕು ಯಾವುದು ಉಂಟು. ಈ ಅರ್ಥದಲ್ಲಿ ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಯ ಉತ್ತರವೂ ಸಮಗ್ರವಾಗಿ ನನಗೇ ಪೂರ್ತಿಯಾಗಿ ಅರಿವಿಗೆ ಬಂದಿಲ್ಲವೆಂದು ಹೇಳಬಹುದು. ನನ್ನ ಬರವಣಿಗೆಯ ಆರಂಭಬಿಂದುವಿನಿಂದ ಇದುವರೆಗೆ ಬದಲಾದ ಕೆಲವು ಮೂಖ್ಯ ತಿರುವುಗಳನ್ನು ಸಮೀಕ್ಷಿಸಿ ಈಗ ಯಾವ ನಿಲುವಿಗೆ ಬಂದಿರುವೆನೆಂದು ಸೂಚಿಸುವ ಪ್ರಯತ್ನವನ್ನಷ್ಟೇ ಇಲ್ಲಿ ಮಾಡುತ್ತೇನೆ "

ಭೈರಪ್ಪವನರ ಕಾಬರಿಗಳ ಇಂದಿರುವ ಮತ್ತು ಅವರ ಅನಿಸಿಕೆಗಳನ್ನು ತಿಳಿಯಬೇಕಾದರೆ ಈ ಪುಸ್ತಕವನ್ನು ಓದಲೆಬೇಕು


ವೇದವ್ಯಾಸರು ಮಹಾಭಾರತವನ್ನು ಬರೆದಿದ್ದು ಯಾಕೆ ? = ನಿರುಪಾಮಾ

Vedavyasaru Mahabharathavannu Baredaddu Eke? - Nirupama

 

ಭಾರತದ ಎಲ್ಲಾ ಜನರಿಗೆ ಮಹಾಭಾರತ ಮತ್ತು ರಾಮಾಯಣ ಮಹಾ ಕಥೆಗಳ ಬಗ್ಗೆ ಗೊತ್ತು ಆದರೆ ಭಾಹುತೇಕ ಜನರು ಇದೊಂದು ಕಥೆಯಾಗಿ ನೋಡುತ್ತಾರೆ ಹೊರತು ಇದು ನಮ್ಮ ಸುಖ ಜೀವನಕ್ಕೆ ದಾರಿ ಎಂದು ನೋಡುವುದಿಲ್ಲ, ಡಾ. ನಿರುಪಮರವರು ಮಹಾಭಾರತವನ್ನು ವೇದವ್ಯಾಸರು ವಿಶ್ವದ ಜನರಿಗೆ ಯಾಕೆ ಕೋಡಿಯಾಗಿ ಕೊಟ್ಟರು ಮತ್ತು ಅದರಲ್ಲಿ ಇರುವ ವಿಶೇಷ ಸಂದೇಶ ವನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ.

ವೇದವ್ಯಾಸರು ರಚಿಸಿರುವ ಮಹಾಬಾರತ ಒಂದು ಮಹಾಕಾವ್ಯ. ಇಲ್ಲಿ ಬರುವ ಶ್ರೀ ಕೃಷ್ಣ, ಅರ್ಜುನ, ದುರ್ಯೋದನ, ಕುಂತಿ, ಮತ್ತು ಇತರೆ ಪಾತ್ರಗಳಿಂದ ಹೇಳಿಸುವ ಜೀವನದ ದಾರಿ, ನಾವು ಹೇಗೆ ಜೀವನ ಮಾಡಬೇಕು, ಹೇಗೆ ಆದರ್ಶವಾಗಿರಬೇಕು ಇಲ್ಲಾದಿದ್ದರೆ ದುರ್ಯೋದನನ ರೀತಿ ದಾರಿತಪ್ಪುತ್ತರೆ. ಇಲ್ಲಿ ನಿರುಪಮರವರು ಬರೆಯುತ್ತಾರೆ

"ಮಹಾಭಾರತದಲ್ಲಿ ವೇದವ್ಯಾಸರು ಶ್ರೀ ಕೃಷ್ಣನ ಮೂಖದಿಂದ ಗೀತೋಪನಿಶತ್ತನ್ನು ನಿಕ್ಷಿಪ್ತಗೊಳಿಸಿ ಈ ಗ್ರಂಥಗೌರವವನ್ನು ಹೆಚ್ಚಿಸಿದ್ದಾರೆ. ಮಹಾಭಾರತದ ರಚನೆ ವೇದವ್ಯಾಸರ ಧರ್ಮಸಾಧನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಕಾಲ ಕಳೆದಂತೆ ನಾಗರಿಕತೆ ಬೆಳೆದಂತೆ ಯಾವುದೇ ಒಂದು ಕ್ಷೇತ್ರದ ಮೂಲ ವಿಸ್ತಾರಗೊಳ್ಳುತ್ತ ಹೊಸ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತ ಆಗಿ ಆಳತೆಗೆ ಮೀರಿ ಬೆಳೆಯುತ್ತ ಹೋಗುತ್ತಾರೆ. ಅದು ಜ್ಞಾನದ ಸಹಜ ಸ್ವಭಾವ. ಇದರಿಂದಾಗಿ ಅದು ಒಂದು ಹಂತದಲ್ಲಿ ಸಂಕೀರ್ಣಗೊಂಡು ಅಗಮ್ಯವಾಗಲಾರಂಭಿಸುತ್ತದೆ ಗೋದಲ ಗಳೇರ್ಪಟ್ಟು ಸಂದಿಗ್ಥತೆಯನ್ನೊಡ್ಡುತ್ತದೆ. ಹೀಗೆ ಗೋಜಲು ಗೋಜಲಾಗಿ ಬೆಳೆದದ್ದನ್ನು ಎಳೆಬಿಡಿಸಿ ಬೇರ್ಪಡಿಸುವುದು, ವರ್ಗೀಕರಿಸಿ ಕ್ರಮಬದ್ದ ಮಾಡುವುದು ಅನಿವಾರ್ಯವಾಗುತ್ತದೆ. ಇದು ಬಹು ಕಷ್ಟಸಾಧ್ಯವಾದ ಕಾರ್ಯ. ಹೀಗೆ ಹಿಂದೆ ಒಂದು ಕಾಲದಲ್ಲಿ ವೇದವು ಅಪಾರವಾಗಿ ಬೆಳೆದು ಕೀಂಕಾರಣ್ಯದಂತೆ ವ್ಯಾಪಿಸಿತು, ಅವುಗಳಲ್ಲಿ ಕ್ಲಿಷ್ಟತೆ, ಸಂದಿಗ್ಥತೆ ತೋರಿತು ಅದ್ವಿತೀಯ ಪ್ರತಿಭಾ ಸಂಪನ್ನರೂ, ಆಪಾರ ತಪೋನಿಧಿಯೂ ಆಗಿದ್ದು ವ್ಯಾಸಋಷಿ ಈ ಸಿಕ್ಕು ಸಿಕ್ಕಗಿದ್ದ ವೇದಸಾಹಿತ್ವವನ್ನು ವಿಂಗಡಿಸಿ, ಕ್ರಮಬದ್ದವಾಗಿ ಸುಗುಮವಾಗುವಂತೆ ಮಾಡಿ ವೇದವ್ಯಾಸರೆಂದು ಪ್ರಸಿದ್ದರಾದರು. "

ಹೀಗೆ ನಿರುಪಮರವರು ರಾಮಾಯಣ ಮತ್ತು ಮಹಾಭಾರತವನ್ನು ವಾಲ್ಮೀಕಿ ಮತ್ತು ವೇದವ್ಯಾಸರು ಏಕೆ ಬರೆದರು, ಅವರ ಉದ್ದೇಶಗಳೇನು ಎಂದು ಈ ಪುಸ್ತಕದಲ್ಲಿ ಬರೆದಿದ್ದಾರೆ.

 

 



Saturday, November 16, 2013

ಮೂಕಧಾತು - ಕೆ ಎನ್ ಗಣೇಶಯ್ಯ

Mooka Dhatu  - K. N. Ganeshaiah

 

 

ಮೂಖ ಧಾತು ಗಣೇಶಯ್ಯನವರ ಹೊಸ ಕಾದಂಬರಿ. ಗಣೇಶಯ್ಯನವರು ಚರಿತ್ರೆಯ ಘಟನೆಗಳನ್ನು ಮತ್ತು ತಮ್ಮ ಕಾಲ್ಪನಿಕ ಕಥೆ ಎಣೆಯುವ ಶಕ್ತಿಯನ್ನು ಊಪಯಗಿಸಿ ಕಣ್ಣಿಗೆ ಕಟ್ಟಿದಹಾಗೆ ಕಾದಂಬರಿಗೆ ಜೀವ ತುಂಬುತ್ತಾರೆ. ನಮ್ಮ ಅಂದರೆ ಭಾರತೀಯ ಸಂಸ್ಕೃತಿಯನ್ನು ಎಲ್ಲ ಪುಟಗಳಲ್ಲಿ ಎತ್ತಿ ಹಿಡಿಯತ್ತಾರೆ. ನಾನು ಒದುದಿದ ಬಹುಥೇಕ ಕಾದಂಬರಿಗಳು ಪ್ರಾಚೀನ ಭಾರತದ ಸಂಸ್ಕೃತಿಯನ್ನು ಹೀಗೆಳೆಯುವ ಪ್ರಯತ್ನ ಮಾಡಿದರೆ ಮತ್ತೆ ಕೆಲವರು ಭಾರತವನ್ನು ತೆಗಳಿದರೆ ಮಾತ್ರ ತಮ್ಮ ಕಾದಂಬರಿಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತವೆ ಅನ್ನೋ ರೀತಿಯಲ್ಲಿ ನಮ್ಮೆ ಭಾರತವನ್ನು ಬೆತ್ತಲೆ ಮಾಡಿ ನಿಲ್ಲಿಸುತ್ತಾರೆ. ಆದರ ಗಣೇಶಯ್ಯನವರ ಭಾರತದ ಅಧ್ಯತಿಮಿಕ,  ವೈಜ್ಞಾಯನಿಕ ಮತ್ತು ಸಾಂಸ್ಕ್ರುತಿಕ ಕೊಡಿಗೆಗಳನ್ನು ಎತ್ತಿ ಹಿಡಿಯುತ್ತಾರೆ. ಒಂದು ಕಾದಂಬರಿಯನ್ನು ಬರೆಯುವಾಗ ಅವರು ಮಾಡುವ ಆಳದ ಅಧ್ಯಯನ ಯಾರಿಗಾದರು ಬೆರಗು ಮೂಡಿಸುವಂಥದ್ದು. ಅವರು ಯಾದುದೆ ಮಾತನ್ನು ಗಾಳಿಯಲ್ಲಿ ಎತ್ತಿದ ಊಹ ಪೋಹಗಳಂತೆ ಬರವಣಿಗೆಯಲ್ಲಿ ಬಳಸುವುದಿಲ್ಲ, ಅವರ ಎಲ್ಲ ಮಾತುಗಳಿಗೂ ಪುಷ್ಟಿ ಮತ್ತು ಪುರವಗಳನ್ನು ಕೊದುತ್ತಾರೆ.
 

ಧಾತು(ಡಿಎನ್ಎ) ಎಲ್ಲ ಜೀವಗಳ ಒಂದು ಅತಿ ಮೂಖ್ಯ ಮತ್ತು ಮೂಲಭೂತ ಅಂಶ. ನಮ್ಮ ಬಹುತೆಕ ಕಾರ್ಯಗಳು, ಗುಣಗಳು, ಮತ್ತು ಚಟುವಟಿಕೆಗಳು ಈ ಧಾತುವಿನ ಮೇಲೆ ಅವಲಂಬಿಸಿರುತ್ತದೆ. ನಮ್ಮು ಅಸೆ, ಪ್ರೀತಿ, ಸ್ವಾರ್ಥ, ... ಇತರೆ ಗುಣಗಳು ನಮ್ಮ ಈ ಧತುವಿನಲ್ಲಿ ಇರುತ್ತದೆ ಎಂದು ವಿಜ್ಞಾಯನಿಗಳು ಸಂಶೋಡಿಸಿ ದೃಡಪಡಿಸಿರುತ್ತಾರೆ. ಈ ಕಾದಂಬರಿಯಲ್ಲಿ ಆ ಧಾತುವಿನ ಎಳೆಯನ್ನು ಇಟ್ಟಿಕೊಂಡು ಎಣೆದಿರುರುವ ಒಂದು ಒಳ್ಳೆಯ ಕಾದಂಬರಿ. ಇಲ್ಲಿ ಕ್ರಿ.ಶ. ೧೧೫ ರಲ್ಲಿ ಭಾರತದಲ್ಲಿ ಆಗುತ್ತಿದ್ದ ಬೌದ್ಧ ಧರ್ಮದ ಜನಪ್ರಿಯತೆ ಮತ್ತು ಅವರ ಸಂಶೋದನೆ ಇಂದ ಹಿಡಿದು ಈಗಿನ ೨೦೧೨ ರ ವರಗೆ ಕಥೆಯನ್ನು ಎಣೆದ್ದಿದ್ದಾರೆ. ನಮ್ಮ ಸ್ವರ್ಹ್ತ ಧಾತುವನ್ನು ನಿಷ್ಕ್ರಿಯಗೊಳಿಸಲು ನಗರ್ಜುನರು ಕಂಡು ಹಿಡಿದ್ದಿದ್ದ ಪುಡಿ ಮತ್ತು ಬೂದಿಗಳ ತಯಾರಿಕೆಯ ಪುಸ್ತಕಗಳು ರಾಜರಿದ ರಾಜರಿಗೆ ವರ್ಗವನಣೆಯಾಗಿ ಕೊನೆಗೆ ಚೀನಾ ದೇಶ ಸೇರುತ್ತದೆ. ಇದರ ರಹಸ್ಯ ತಿಳಿದ ಚೀನಾದವರು ಅದನ್ನು ಭೂಮಂಡಲಕ್ಕೆ ಹವಯಲ್ಲಿ ವೈರಸ್ ರೀತಿ ಹರಡಿ ಎಲ್ಲರ ಅದಿಪತಿಯಾಗಿ ಮೆರೆಯಬೇಕು ಎಂದು ವಿಜ್ಞಯನಿಗಳನ್ನು ಬಂದಿಸಿ ಅವರಿಂದ ಅದಕ್ಕೆ ಬೇಕಾಗುವ ಕಾರ್ಯಗಳನ್ನು ಮಾಡಿಸುತ್ತಾರೆ. ಅದು ಹೇಗೆ ಅಂತ್ಯವಾಗುತ್ತದೆ ಮತ್ತು ಅದರ ಇಂದೇ ಯಾರು ಯಾರು ಕೆಲಸ ಮಾದಿತ್ತಾರೆ ಎನ್ನುವುದನ್ನು ಕಾದಂಬರಿ ಓದಿ ತಿಳಿಯಬೇಕು.

ಹಿನ್ನುಡಿ ಇಂದ :

ಈ ಕಾದಂಬರಿಯಲ್ಲಿ ಮೂರು ವಿಷಯಗಳನ್ನು ನಾನು ಮುಖಾಮುಖಿಯಾಗಿ ತರಲು ಪ್ರಯತ್ನಿಸಿರುವುದನ್ನು ಓದುಗರು ಗಮನಿಸಿರುತ್ತಾರೆ. ಆದರೂ, ಅವನ್ನು ನಾನು ಮತ್ತೆ ಚರ್ಚೆಗೆ ತರಲು ಬಯಸುತ್ತೇನೆ.

೧. ದೇವರು, ಧರ್ಮ ಮತ್ತು ವಿಜ್ಞಾನ

ಧರ್ಮ ಮತ್ತು ವಿಜ್ಞಾನಗಳ ನಡುವೆ ಇರಬಹುದಾದ ಸಾಮರಸ್ಯ ಮತ್ತು ವೈರುಧ್ಯ ಹಲವು ರೀತಿಯ ಜಿಜ್ಞಾಸೆಗಳಿಗೆ ಕಾರಣವಾಗಿದ್ದು ಅದು ಎಂದಿಗೂ ಬಗೆಹರಿಯದ ಕಗ್ಗಂಟಾಗಿಯೆ ಉಳಿದಿದೆ-ಉಳಿಯುತ್ತದೆ. ಧರ್ಮ ಮತ್ತು ವಿಜ್ಞಾನಗಳೆ ರಡೂ ಸಹ ಸತ್ಯಾನ್ವೇಷಣೆಯ ವಿಭಿನ್ನ ದಾರಿಗಳಷ್ಟೆ ಎಂಬ ವಾದವು ಅವೆರಡರ ಸಾಮರಸ್ಯತೆಯನ್ನು ಸಮರ್ಥಿಸಿಕೊಂಡರೆ, ಆ ಸತ್ಯವನ್ನು ಹುಡುಕಲು ಅವು ಅನುಸರಿಸುವ ವಿಭಿನ್ನವಾದ ವಿಧಾನಗಳು ಅವುಗಳ ಮಧ್ಯದ ವೈರುಧ್ಯವನ್ನು ದೃಷ್ಟೀಕರಿಸುತ್ತವೆ. ಆದರೆ ಧರ್ಮವು ಆಧ್ಯಾತ್ಮಿಕ ರೂಪದಲ್ಲಿ ವಿಜ್ಞಾನದ ಎದುರು ನಿಂತಾಗ ಇಂತಹ ಹಲವು ವೈರುಧ್ಯಗಳು ಮಾಯವಾಗುತ್ತವೆ. ಅಷ್ಟೆ ಅಲ್ಲ, ಕೆಲವೊಮ್ಮೆಯಂತೂ ವಿಜ್ಞಾನ ಮತ್ತು ಆಧ್ಯಾತ್ಮಗಳ ನಡುವಿನ ಅಂತರವೂ ಸಹ ಕಡಿಮೆಯಾಗುತ್ತದೆ. ಉದಾಹರಣೆಗೆ,
ಕೆಲವು ವೇದ-ಉಪನಿಷತ್ತುಗಳಲ್ಲಿ ಕಂಡುಬರುವ ಪ್ರಕೃತಿಯ ವಿಸ್ಮಯದ ಹುಡುಕಾಟವು, ನಮ್ಮ ಅಸ್ತಿತ್ವದ ಅರ್ಥ ಅಥವ ಅದರ ಉದ್ದೇಶಕ್ಕಾಗಿ, ವಿಜ್ಞಾನಿಗಳು ತೊಡಗಿಕೊಳ್ಳುವ ಹುಡುಕಾಟದಿಂದ ಯಾವುದೇ ರೀತಿಯಲ್ಲಿ ಭಿನ್ನವೆನಿಸದು. ಇನ್ನು ವೃಕ್ಷಾಯುರ್ವೇದಗಳು, ಬೌದ್ಧ ಧರ್ಮದ ಆಧ್ಯಾತ್ಮಿಕತೆಯೊಂದಿಗೆ ಗುರುತಿಸಿಕೊಳ್ಳುವ ಯೋಗ, ಧ್ಯಾನಗಳಂತೂ ಆಯಾ ಕಾಲ ಘಟ್ಟಗಳ ವಿಜ್ಞಾನ ಭಂಡಾರಗಳೆಂದೆ ಪರಿಗಣಿಸಬಹುದು.

ಹೀಗಿದ್ದೂ, ವಿಜ್ಞಾನ ಮತ್ತು ಧರ್ಮಗಳು ಹಲವು ವಿಷಯಗಳಲ್ಲಿ ತದ್ವಿರುದ್ದ ದೃಷ್ಟಿಯನ್ನು ಹೊಂದಿರುವುದು ಎಲ್ಲರಿಗೂ ವಿದಿತ. ಅಂತಹ ಒಂದು ಅತೀ ಪರಿಚಿತ ವಸ್ತುವೆಂದರೆ- ದೇವರು!
ದೇವರು ಕೇವಲ ನಂಬಿಕೆಯೆ?
ಅಥವಾ..
ದೇವರು ನಾವರಿಯದ ಸತ್ಯದ ಪರಿಕಲ್ಪನೆಯೆ?
ಅಥವಾ...
ವಿಜ್ಞಾನದ ಭಾಷೆಯ ಕ್ಲಿಷ್ಟತೆಗೆ ಸಿಕ್ಕಿಹಾಕಿಕೊಂಡಿರುವ ನಮ್ಮ ನಾಗರೀಕತೆಯು,  ದೇವರ ಮೂಲ ಅರ್ಥವನ್ನು ನಿರೂಪಿಸಲಾಗದೆ ತೊಳಲಾಡುತ್ತಿದೆಯೆ? ಧರ್ಮಗಳು ಉಪಯೋಗಿಸುವ ದೇವರ ಬಗೆಗಿನ ವ್ಯಾಖ್ಯಾನವನ್ನು ವೈಜ್ಞಾನಿಕವಾಗಿಯೂ ವಿಶ್ಲೇಷಿಸ ಬಹುದೆ? ಅಂತಹ ಪ್ರಯತ್ನ ಮಾಡುವುದರಿಂದ ವಿಜ್ಞಾನದ ವಾಸ್ತವಿಕತೆಗೆ ಕುತ್ತು ಬರುವ ಸಂಭವವಿದೆಯೆ? ಇಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ ನಾನು ಡಾ| ಜೋಶಿಯ ವ್ಯಕ್ತಿತ್ವವನ್ನು ನಿರೂಪಿಸಿ ದ್ದೇನೆ.

೨. ಆಸೆ ಮತ್ತು ನಾಗರೀಕತೆ

ಆಸೆಯೆ ದುಃಖಕ್ಕೆ ಮೂಲ, ಆಸೆಯನ್ನು ತೊರೆದಾಗಲೆ ಮಾನವನಿಗೆ ಸುಖ, ಎಂದು ಬೌದ್ಧಧರ್ಮಾದಿಯಾಗಿ ಎಷ್ಟೋ ಧರ್ಮ-ಬೋಧನೆಗಳು ಸಾರಿವೆ, ಸಾರುತ್ತಿವೆ.  ಪ್ರಪಂಚದಾದ್ಯಂತ ಈ ನಂಬಿಕೆಯನ್ನು ಒಂದು ಪ್ರಮುಖವಾದ ಆದರ್ಶವೆಂದೂ ಪರಿಗಣಿಸಲಾಗಿದೆ. ಆಸೆಗಳು ಮಾನವನನ್ನು ಲೋಲುಪ್ತತೆಗೆ ನೂಕಿ, ಆತ ಪ್ರಕೃತಿಯ ಸಂಪತ್ತನ್ನು ಹಿಂಡಿ ಹೀರುವಂತೆ ಮಾಡಿ, ಇಡೀ ನಾಗರೀಕತೆಯನ್ನು ಮತ್ತು ಪ್ರಪಂಚವನ್ನು ವಿನಾಶದತ್ತ ಕರೆದೊಯ್ಯುತ್ತವೆ ಎನ್ನುವುದು ಈ ವಾದದ ಒಂದು ಪ್ರಮುಖ ಆಯಾಮ. ಪ್ರಸ್ತುತದಲ್ಲಿ ಪ್ರಪಂಚದ ಹಲವು ವಿದ್ಯಮಾನಗಳು ಇದಕ್ಕೆ ಪುರಾವೆ ಒದಗಿಸುತ್ತಿರು ವಂತೆಯೂ ಕಾಣುತ್ತಿದೆ.

ಆದರೆ ಆಸೆಗಳೆ ಮಾನವನ ಸೃಜನಾತ್ಮಕತೆಗೆ ಅಧಾರವಲ್ಲವೆ? ಮಾನವನಲ್ಲಿ ಆಸೆಗಳೆ ಇಲ್ಲದಿದ್ದಲ್ಲಿ ನಮ್ಮ ನಾಗರೀಕತೆಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವೆ? ವಿಕಾಸವಾದದ ಹಿನ್ನೆಲೆಯಿಂದ ನೋಡಿದಾಗ, ಯಾವುದೇ ಗುಣ ಆಯಾ ಪ್ರಬೇಧದ ಉನ್ನತಿಗೆ ಉಪಯೋಗವಾಗದಿದ್ದಲ್ಲಿ, ಅದು ವಿಕಾಸಗೊಳ್ಳದು. ಹಾಗಿರುವಾಗ, ಮಾನವ ನಲ್ಲಿ ವಿಶೇಷವಾಗಿ ವಿಕಾಸಗೊಂಡಿರುವ ಈ ಆಸೆಗಳಿಂದ ಮಾನವ ಸಮೂಹಕ್ಕೆ, ಸಮಾಜಕ್ಕೆ ಪ್ರಯೋಜನವಿದೆಯೆಂದು ಭಾವಿಸಬಹುದೆ? ಬಹುಶಃ ಇದರಿಂದಲೆ ಆಸೆ ರಹಿತ ಮಾನವರು (ನಿಸ್ವಾರ್ಥಿಗಳು) ಅಥವ ಮಿತ-ಆಸೆಗಳುಳ್ಳವರು ವಿರಳವಿರಬಹುದೆ? ಇಂತಹ ಪ್ರಶ್ನೆಗಳು ಆಸೆಗಳ ಬಗೆಗಿರುವ ಧಾರ್ಮಿಕ ವಾದಕ್ಕೆ ಪ್ರತಿರೋಧವನ್ನು ಒಡ್ಡುವುದು ಸಹಜ.

ಈ ದ್ವಂದಕ್ಕೆ ಉತ್ತರ ಹುಡುಕುವಲ್ಲಿ 'ಆಸೆ'ಗಳ ವ್ಯಾಖ್ಯಾನ ಅತಿ?ಮುಖ್ಯ, ಆದರೆ ಅದು ಬಹುಶಃ ಅಸಾಧ್ಯ. ನಮಗಿರುವ ಹಲವು ರೀತಿಯ ಸ್ವಾಭಾವಿಕ ಬಯಕೆಗಳಾದ - ಹಸಿವು, ದಾಹ, ಕಾಮ, ನಿದ್ದೆ, ಇಂತಹವು ನಮ್ಮ ಉಳಿವಿಗೆ, ಪುನರಾಭಿವೃದ್ದಿಗೆ ಪೂರಕವಾಗಿ ವಿಕಾಸಗೊಂಡಿರುವ ಅವಶ್ಯಕತೆಗಳು. ಆದರೆ, ಅವಕ್ಕೂ ಮಿಗಿಲಾಗಿ ಮಾನವಲ್ಲಿ ಉದ್ಭವಿಸುವ ಬಯಕೆಗಳು ಅಥವ ಆಸೆಗಳು, ಬಹುಪಾಲು ನಮ್ಮ ಚಿಂತನಾ ಶಕ್ತಿಯ ವಿಕಾಸದೊಂದಿಗೆ ಬೆಳೆದಿರುವ ಮನಸ್ಸಿನ ಲಹರಿಗಳು. ಹಾಗಾಗಿ ಮನಸ್ಸನ್ನು ಅಂತಹ ಆಸೆಗಳಿಂದ ಮುಕ್ತಗೊಳಿಸಬೇಕೆಂದರೆ ಆತನ ಯೋಚನಾಶೀಲತೆಯನ್ನೆ ಜಡವಾಗಿಸಬೇಕಾಗಬಹುದು. ಮಾನವ ಹಾಗೆ ಯೋಚನಾರಹಿತನಾದಲ್ಲಿ ಅವನ ಆವಿಷ್ಕಾರ ಶಕ್ತಿ ಕುಂದಿ, ನಾಗರೀಕತೆಗೆ ಆಪತ್ತು ಬರುವ ಸಾಧ್ಯತೆ ಇದೆ ಎನ್ನುವ ಅಂಶ ಧರ್ಮ ಬೋಧನೆಗಳನ್ನು ಕಣ್ಣುಮುಚ್ಚಿ ಸ್ವೀಕರಿಸಿರುವ ಸಮಾಜಕ್ಕೆ ಎಚ್ಚರಿಕೆಯನ್ನು ನೀಡುತ್ತದೆ. ಹಾಗಾಗಿ ವಿಜ್ಞಾನ, ಆಧ್ಯಾತ್ಮಿಕತೆ ಮತ್ತು ಧರ್ಮಗಳು ಈ ವಿಷಯವನ್ನು ಅತಿ ಸೂಕ್ಷ್ಮವಾಗಿ ಚರ್ಚಿಸಬೇಕಿದೆ.

೩. ಸ್ವಾರ್ಥ ಮತ್ತು ಜೀವ

ಸ್ವಾರ್ಥವನ್ನು ತುಚ್ಛವಾಗಿ ಕಾಣುವ ನಮ್ಮ ಸಂಸ್ಕೃತಿ ಅಚ್ಚರಿಪಡಬೇಕಾದ ವಿಷಯ ವೆಂದರೆ ಆ ಸ್ವಾರ್ಥವು ಎಲ್ಲ ಜೀವಿಗಳ ವಿಕಾಸಕ್ಕೆ ಇಂಧನವಾಗಿರುವುದಷ್ಟೆ ಅಲ್ಲದೆ, ವಿಕಾಸದ ಹಾದಿಯಲ್ಲಿ ಮಾನವ ಕಾಣಿಸಿಕೊಳ್ಳುವ ಗತಿಯನ್ನು ನಿರ್ಣಯಿಸುವ ಅಗೋಚರ ಶಕ್ತಿಯಾಗಿದೆ ಕೂಡ. ಆ ಸ್ವಾರ್ಥವಿಲ್ಲದಿದ್ದಲ್ಲಿ ನಾವು ನಮ್ಮ ಮಕ್ಕಳನ್ನು ಸಾಕಿ ಸಲಹುತ್ತಿರಲಿಲ್ಲ; ಅವರನ್ನು ಬೆಳೆಸಿ ಕಾಪಾಡುತ್ತಿರಲಿಲ್ಲ. ಅದು ನಮ್ಮೆಲ್ಲರ ಹುಟ್ಟಿಗೆ, ಉಳಿವಿಗೆ, ವಿಕಾಸಕ್ಕೆ, ಆಧಾರ. ಹೀಗಿರುವಾಗ ಆ ಸ್ವಾರ್ಥಕ್ಕೆ ಕಡಿವಾಣ ಹಾಕುವುದೆಂದರೆ? ಇದು ಪ್ರಕೃತಿ ನಿಯಮಕ್ಕೆ ವಿರೋಧ ಮಾಡಿದಂತೆ.

ಆದರೆ..ಮಾನವ ಜೀವವಿಕಾಸದ ಹೊರತಾಗಿ ನಾಗರೀಕತೆಯನ್ನು ನಿರ್ಮಿಸಿದ್ದಾನೆ, ಸಂಸ್ಕೃತಿಯನ್ನು ಬೆಳೆಸಿ ರೂಢಿಸಿಕೊಂಡಿದ್ದಾನೆ. ಅವನಲ್ಲಿ ಸಂಸ್ಕೃತಿಯ ವಿಕಾಸ, ಜೀವವಿಕಾಸಕ್ಕಿಂತ ವೇಗವಾಗಿ ನಡೆಯುತ್ತಿದೆ. ಈ ವಿಕಾಸದಲ್ಲಿ ಸ್ವಾರ್ಥಕ್ಕೆ ಜಾಗವಿಲ್ಲ, ಅದರ ಅವಶ್ಯಕತೆಯಿಲ್ಲ ಎಂದು ಕೆಲವರು ವಾದಿಸಬಹುದು. ಆದರೆ..

ಸಕಲ ಜೀವಿಗಳ ಪುನರಾಭಿವೃದ್ಧಿಗೆ ಮೂಲಾಧಾರವಾದ ಈ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ, ಅದು ಜೀವವನ್ನೇ ಬೆಳೆಯದ ಹಾಗೆ ಮಾಡಿದಂತೆ. ವಿಕಾಸದ ಕತ್ತು ಹಿಸುಕಿದಂತೆ. ಹಾಗಾಗಿ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ ಈ ಭೂಮಿಯ ಮೇಲೆ ಮಾನವನನ್ನೂ ಮೀರಿದ ಜೀವಪ್ರಭೆಯೊಂದು ವಿಕಾಸಗೊಳ್ಳುವುದನ್ನು ತಡೆದಂತೆ. ಆ ಹಕ್ಕು ನಮಗಿದೆಯೆ? ನಾವು ಅಂತಹ ವಿಕಾಸವಿರೋಧಿ ಕ್ರಮಗಳನ್ನು ಪ್ರೇರೇಪಿಸ ಬಹುದೆ? ಅದು ಪ್ರಕೃತಿವಿರೋಧವಲ್ಲವೆ?

ಇವೆಲ್ಲವೂ ಈ ಕಾದಂಬರಿಯ ರಚನೆಯ ಸಮಯದಲ್ಲಿ ನನ್ನಲ್ಲಿ ಮೂಡಿದ ಪ್ರಶ್ನೆಗಳು, ದ್ವಂದ್ವಗಳು. ಹಾಗಾಗಿ ಈ ಮೂರೂ ವಿಷಯಗಳನ್ನು ಸಾಧ್ಯವಾದಷ್ಟೂ ಮುಖಾಮುಖಿಯಾಗಿ ತರಲು ಪ್ರಯತ್ನಿಸಿದ್ದೇನೆ. ಇದೇ ಕಾರಣದಿಂದ ಇಲ್ಲಿ ಕತೆ ನಿಮಿತ್ತ ಮತ್ತು ಈ ವಿಷಯಗಳ ಮುಖಾಮುಖಿ ಚರ್ಚೆ ಈ ಕಾದಂಬರಿಯ ಮೂಲ ಉದ್ದೇಶ. ಆ ವಿಷಯಗಳೆ ಈ ಕಾದಂಬರಿಯ ಮನೆಯೊಳಗಿನ ಕುಟುಂಬದ ಜೀವಂತ ವ್ಯಕ್ತಿಗಳು. ಕತೆ ಕೇವಲ ಇಟ್ಟಿಗೆ, ಗೋಡೆ, ಸುಣ್ಣ.

ಈ ಮೂರೂ ವಿಷಯಗಳ ಇನ್ನೂ ಹಲವಾರು ಆಯಾಮಗಳನ್ನು ನಾನು ಕಾದಂಬರಿಯಲ್ಲಿ ಚರ್ಚಿಸುವ ಇಚ್ಛೆ ಇತ್ತಾದರೂ, ಅಂತಹ ಎಲ್ಲ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗದ ಕಾರಣ ಕೆಲವು ಕೋನಗಳ ಮಂಥನವನ್ನು ಓದುಗರಿಗೆ ಬಿಟ್ಟಿದ್ದೇನೆ. ಇದನ್ನು ಓದುಗರು ಗಮನಿಸುವರೆಂದು ಆಶಿಸುತ್ತೇನೆ.

 



Tuesday, August 27, 2013

ಚೋಮನ ದುಡಿ - ಶಿವರಾಮ ಕಾರಂತ

Chomana Dudi - Shivarama Karanth




ಈ ಕಾದಂಬರಿಯಲ್ಲಿ ಬಹಳವಾಗಿ ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ಜೀವನಚಿತ್ರವಿದೆ. ಅಸ್ಪೃಶ್ಯರಾದ ಹೊಲೆಯರ ತಂಡದಲ್ಲಿ ಮೇರ, ಬೈರ, ಅಜಿಲ, ಮಾರಿ - ಎಂದು ನಾಲ್ಕಾರು ಬೇರೆ ಬೇರೆ ಭಾಗಗಳಿವೆ. ಅವರಲ್ಲಿ ಮೇರರು ಸಾಗುವಳಿಯನ್ನು ಮಾಡಿಕೊಂಡಿರಲು ಸಾಧ್ಯವಿದೆ. ಆದರೆ, ತೀರ ಕೆಳಗಿನವರೆಂದು ಎಣಿಸಲ್ಪಡುವ ಮಾರಿ ಹೊಲೆಯರಿಗೆ ಅಷ್ಟು ಅವಕಾಶವನ್ನು ಸಮಾಜ ಕೊಡುತ್ತಲಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಈ ಜನರನ್ನು ಇಂದಿಗೂ ಕೂಲಿಗೆ ಕರೆಯುವುದಿಲ್ಲ. ಆದರೆ ದಕ್ಷಿಣ ಭಾಗದಲ್ಲಿ ಹೊಲಗೆಲಸಗಳಿಗೇನೋ ಕರೆಯುತ್ತಾರೆ. ಅಂಥ ಬಳಗದ ಜೀವಿಯು ಚೋಮ. ಈತನೇ ಈ ಕಾದಂಬರಿಯ ಕಥಾನಾಯಕ.

ಚೋಮನದುಡಿ’ಯು ಕಾರಂತರ ಸಾಮಾಜಿಕ ದರ್ಶನಕ್ಕೆ ಹಿಡಿದ ಕನ್ನಡಿಯಂಥ ಕಾದಂಬರಿಯಾಗಿದೆ. ಈ ದೇಶದ ವಿದ್ಯಾವಂತರೆಲ್ಲ ಬ್ರಿಟಿಷರನ್ನು ಭಾರತದಿಂದ ಹೊರ ಹಾಕಿದರೆ, ನಮ್ಮ ಬಹುತೇಕ ಸಮಸ್ಯೆಗಳೆಲ್ಲ ಪರಿಹಾರವಾಗಿ ಬಿಡುತ್ತವೆ ಎಂದು ಕನಸು ಕಾಣುವ ಕಾಲದಲ್ಲಿ ಕಾರಂತರು ಚೋಮನದುಡಿಯಂಥ ಪುಟ್ಟ ಕಾದಂಬರಿಯನ್ನು ಬರೆದರು. ಕಾರಂತರ ಪ್ರಕಾರ ಈ ನಾಡಿನ ಸಮಸ್ಯೆ ಭೂಮಿಯ ಅಸಮರ್ಪಕ ಹಂಚಿಕೆಯಲ್ಲಿದೆ. ಈ ಸಮಸ್ಯೆಯು ಅಸ್ಪೃಶ್ಯತೆಯಂಥ ಪಿಡುಗಿನೊಂದಿಗೆ ಸೇರಿಕೊಂಡು, ಪರಿಸ್ಥಿತಿ ತೀರ ಸಂಕೀರ್ಣವಾಗಿದೆ.

ಚೋಮನದುಡಿ ಕಾದಂಬರಿಯಲ್ಲಿ ಮೂರು ಭಿನ್ನಭಿನ್ನ ವರ್ಗಕ್ಕೆ ಸೇರಿದ ಜನರಿದ್ದಾರೆ. ಮೊದಲನೆಯ ವರ್ಗವು ಪಾರಂಪರಿಕ ನಂಬಿಕೆಯನ್ನು ಪ್ರಕಟಪಡಿಸುವ, ಯಾವುದೇ ಬದಲಾವಣೆಯನ್ನು ಒಪ್ಪಲು ತಯಾರಿಲ್ಲದ ಸಂಕಪ್ಪಯ್ಯ ಮತ್ತು ಅವನ ತಾಯಿಯದು. ಎರಡನೆಯದು, ಇಂಥ ನಂಬಿಕೆಗಳ ಕಾರಣವಾಗಿಯೇ ಶೋಷಣೆಗೊಳಗಾಗುವ ಚೋಮ ಮತ್ತು ಅವನ ಕುಟುಂಬ ವರ್ಗದ್ದು. ಮೂರನೆಯದು, ಮೇಲಿನೆರಡೂ ಲೋಕಕ್ಕೆ ಅಪರಿಚಿತವಾಗಿರುವ, ಆದರೆ ಆಧುನಿಕ ತಿಳುವಳಿಕೆ ಮತ್ತು ಕಾನೂನುಗಳ ಸಹಾಯದಿಂದ, ಜನಪರ ಎಂದು ತೋರಿಸಿಕೊಳ್ಳುವ, ಸಂಪ್ರದಾಯಗಳಿಗೆ ಇದಿರಾಗಿರುವ ಕ್ರಿಶ್ಚಿಯನ್ ಲೋಕ. ಈ ಮೂರು ಲೋಕಗಳ ನಡುವಣ ಸಂಘರ್ಷವೇ ಕಾದಂಬರಿಯ ಉಸಿರು. ಸಂಘರ್ಷವನ್ನು ಕಾರಂತರು ನಿರ್ವಹಿಸಿದ ರೀತಿಯೇ ಅವರನ್ನು ದಲಿತ ಬಂಡಾಯ ಬರಹಗಾರರಿಗಿಂತ ಭಿನ್ನವಾಗಿ ನೋಡುವಂತೆ ಮಾಡಿದೆ.




Friday, August 16, 2013

ದ್ಯಾವನೂರು ಹಾಗು ಒಡಲಾಳ - ದೇವನೂರು ಮಹಾದೇವ

Dyavanooru Hagu Odalaala - Devanura Mahadeva


ದ್ಯಾವನೂರು ಕಥಾಸಂಕಲನ:-

೧. ಮಾರಿಕೊಂಡವರು
೨. ಗ್ರಸ್ತರು
೩. ಒಂದು ದಹನದ ಕಥೆ
೪. ದತ್ತ
೫. ಡಾಂಬರು ಬಂದುದು
೬. ಮೂಡಲ ಸೇಮೇಲಿ ಕೊಲೆಗಿಲೆ ಮೂಂತಾಗಿ
೭. ಅಮಾಸ

ನನ್ನ ಮೇಲೆ ಅತಿಗಾಢವಾಗಿ ಪರಿಣಾಮ ಮಾಡಿ ನನ್ನ ಈವರೆಗಿನ ಬರವಣಿಗೆಯ ಮಿತಿಗಳಿಗೆ ನನ್ನ ಕಣ್ತೆರೆಯಿಸಿದ ಈ "ದ್ಯಾಅನೂರು" ಕಥಾ ಸ೦ಕಲನವನ್ನು ಮೊದಲ ಬಾರಿಗೆ ಓದಿದಾಗ ಅದರ ತಾಜಾತನಕ್ಕೆ ಮನಸ್ಸು ತೆರೆಯುತ್ತಿರುವಫ಼ಲೇ ಅದು ಪ್ರಕಟಿಸಿದ ಸತ್ಯಗಳಿ೦ದಾಗಿ ಓದಿನ ಕೊನೆಯಲ್ಲಿ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿ೦ತ್ತದ್ದು ಹರವಾದ ಕೃತಜ್ಞತಾಭಾವ.

ದೇವನೋರು ಮಹಾದೇವರ ಬರವಣೆಗೆಯಲ್ಲಿ ನಮಗೆ ತಪ್ಪದೇ ಜೂಮ್ಮುದಟ್ಟಿಸಿವುದು ಇಲ್ಲಿ ಬಂದ ಅನುಭವದ ಪ್ರಾಮಾಣಿಕತೆ ಹಾಗೂ ಈ ಅನುಭವ ಯಾವ ಒಂದು ಸುಳ್ಳಿನ ಅಪಸ್ವರ ಅಬ್ಬಿಸದೇ ಅಷ್ಟೇ ಪ್ರಾಮಾಣಿಕವಾಗಿ ಭಾಷೆಯಲ್ಲಿ ಸಶರೀರವಾಗುವ ಸಾಚಾ ರೀತಿ. ಹೀಗೆ ತಾನು ಹಿಡಿದಿಟ್ಟ ಅನುಭವ ಅದರ ಹುಟ್ಟಿಗೆ ಕಾರಣವಾದ ಸಾಮಾಜಿಕ ಸಂದರ್ಭದಲ್ಲಿ ನಿಜವಾಗುವಾಗಲೇ ಅದರ ಮಾನವೀಯ ಆಯಾಮಗಳನ್ನು ಸ್ಪಷ್ಟವಾಗಿ, ಆದರೂ ಕಳತಮಕವಾಗಿ, ಆದ್ದರಿಂದಲೇ ನಮಗೆ ನೇರವಾಗಿ ಮುಟ್ಟುವಂತೆ ತೆರೆದು ತೋರಿಸುವಲ್ಲಿ, ತೋರಿಸಿ ಆ  ಸಂದರ್ಭವನ್ನೇ ಹೊಸ ಬೆಳಕಿನಲ್ಲಿ ನೋಡುವಂತೆ ಮಾಡುವುದರಲ್ಲಿ ಇಲ್ಲಿಯ ಪ್ರತಿಯೋದು ಕತೆಯೂ ಅಸಾಧಾರಣವಾದ ಯಸಸ್ಸುನ್ನು ಹಳಿಸಿದೆ.


                                                                                                    - ಯಶವಂತ ಚಿತ್ತಾಲ

ಒಡಲಾಳ :-

ಜಗತ್ಪ್ರಸಿದ್ದ ಕಲ್ಲವಿದ ವ್ಯಾನಗೋ ಸಮಗ್ರ ಕಲಾಕೃತಿ ಸರಣಿಗೂ, ಒಡಲಾಳದ ಕಥೆಯ ಘಟನಾವಳಿಗಳಿಗೂ ಒಂದು ಆಶ್ಚರ್ಯಕರವಾದ ಸಾಮ್ಯತೆಯಿದೆ. ಮತ್ತು ಸೃಸ್ಟೀಕರಿಸಿ ಹೇಳುದಾದರೆ ವ್ಯಂಗೋನ 'ಫೋಟಾಟೋ ಈಟರ್ರ್ಸ್' ಕೃತಿಗೂ ಒಡಲಾಳದ ಕಡ್ಲೇಕಾಯಿ ತಿನ್ನುವ ಪ್ರಸಂಗಕ್ಕೂ ಇರುವ ಸಾಮಾನ್ಯ ಅಂಶವಂದರೆ - ಎರಡೂ ಪ್ರಸಂಗಗಳು ಕತ್ತಲೆಯ ರಾತ್ರಿಯಲ್ಲಿ, ದೀಪದ ಕೃತಕ ಬೆಳಕಿನಲ್ಲಿ ನಡೆಯುತ್ತಿದ್ದು ನಿಜಕ್ಕೂ ಹಸಿದವರ 'ಯಜ್ಞ'ವಾಗಿ ತೊರಿಬರುತ್ತವೆ. ಮತ್ತೊಂರ್ಥದಲ್ಲಿ ಅನೇಕ ಆವೃತ್ತಿಗಳಲ್ಲಿರುವ  'ಲಾಸ್ಟ್ ಸಪ್ಪರ್' ಪೇಂಟಿಂಗ್ಗಳ ಧಾರ್ಮಿಕ ತೀವ್ರತೆಯ ಫೋಟಾಟೋ  ಈಟರ್ರ್ಸ್'  ಮತ್ತು ಒಡಲಾಳದ ಈ ಪ್ರಸಂಗಕ್ಕೆ ಸಹಜವಾಗಿಯೇ ದಕ್ಕಿದೆ.

                                                                                                     - ಅನಿಲ್ ಕುಮಾರ್  

 

ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ದೇವನೂರು ಒಬ್ಬರು. ತಮ್ಮ ಅಪಾರ ಜೀವನಾನುಭವದೊಂದಿಗೆ ಬರೆದ ದೇವನೂರು ಮಹದೇವ ಅವರು ತಮ್ಮ ಸಾಹಿತ್ಯ ಕೃತಿಗಳಲ್ಲಿ ದಲಿತರ ಬದುಕಿನ ಸಮರ್ಥವಾದ ಅನಾವರಣ ಮಾಡಿದವರು. ಇವರು ಕಥನ ಸಾಹಿತ್ಯವನ್ನು ನಂಬಿ ಮುಖ್ಯವಾದ ಮೂರು ಕೃತಿಗಳನ್ನು ಮಾತ್ರ ರಚಿಸಿದ್ದಾರೆ. ಅವುಗಳೆಂದರೆ ದ್ಯಾವನೂರು (ಕಥಾಸಂಕಲನ); ಒಡಲಾಳ (ಕಿರುಕಾದಂಬರಿ); ಕುಸುಮಬಾಲೆ (ಕಾದಂಬರಿ). ಈ ಮೂರು ಕೃತಿಗಳು ಅನುಕ್ರಮವಾಗಿ 53, 52, 77 ಪುಟಗಳಷ್ಟು ಮಾತ್ರವಾಗುತ್ತದೆ. ಈ ಬಗ್ಗೆ ಡಾ. ಹಾ.ಮಾ. ನಾಯಕರು ತಮ್ಮ ಅಂಕಣ ಬರಹವೊಂದರಲ್ಲಿ ಹೀಗೆ ಹೇಳಿದ್ದಾರೆ: ತರುಣ ಲೇಖಕರಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನಿಮರ್ಿಸಿಕೊಂಡಿರುವ ದೇವನೂರು ಮಹದೇವ ಅವರು ಬರೆದಿರುವುದು ಬಹಳವಲ್ಲ. ಇವರಷ್ಟು ಸ್ವಲ್ಪವೇ ಬರೆದು, ಇಷ್ಟೊಂದು ಪ್ರಸಿದ್ಧಿ ಪಡೆದ ಇನ್ನೊಬ್ಬರನ್ನು ಕನ್ನಡದಲ್ಲಿ ನಾನು ಕಾಣೆ. ಈ ಮಾತು ದೇವನೂರು ಅವರ ಸಾಹಿತ್ಯ ಗಾತ್ರದಲ್ಲಿ ಕಿರಿದಾದರೂ ಪಾತ್ರದಲ್ಲಿ ಮಹತ್ವದ್ದು ಎಂಬುದನ್ನು ನೆನಪಿಸುತ್ತದೆ. ದಲಿತ ಬಂಡಾಯ ಸಾಹಿತ್ಯ ಚಳವಳಿಯಲ್ಲಿದ್ದ ಇತರೆ ಸಹ ಬರಹಗಾರರಿಗೆ ಸಿಗದಷ್ಟು ಮಾನ್ಯತೆ, ಪ್ರಸಿದ್ಧಿ ಇವರಿಗೇಕೆ ಸಿಕ್ಕಿತು? ಎಂದು ಪ್ರಶ್ನಿಸಿಕೊಂಡರೆ ಸಿಗುವ ಉತ್ತರ ಒಂದೇ: ಅದೆಂದರೆ ದೇವನೂರು ಅವರು ತಮ್ಮದೇ ವಿಶಿಷ್ಟವಾ ದೃಷ್ಟಿಯಲ್ಲಿ ದಲಿತ ಲೋಕವನ್ನು ಗಮನಿಸುವುದರಿಂದ ಹಿಡಿದು ಅದರ ಅಭಿವ್ಯಕ್ತಿಯವರೆಗೂ ಅದನ್ನು ಅನನ್ಯವಾಗಿಯೇ ಧ್ಯಾನಿಸುತ್ತಾರೆ. ಹಾಗಾಗಿಯೇ ಅಗಾಧ ಸಂಖ್ಯೆಯ ಓದುಗರು ಹಾಗೂ ಅಭಿಮಾನಿಗಳನ್ನು ಪಡೆದರು. ಇಂಥ ಜನಪ್ರಿಯತೆಗೆ ಸಾಕ್ಷಿಯೆಂಬಂತೆ ರಾಜ್ಯಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವದಂತಹ ಪ್ರತಿಷ್ಠತೆ ಪ್ರಶಸ್ತಿಗಳು ಬಂದಿವೆ. ಇವೆಲ್ಲವಕ್ಕೂ ಕಳಸವಿಟ್ಟಂತೆ 2011 ರಲ್ಲಿ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಕೂಡ ಬಂದಿದೆ. ಇವರ ಮೂರು ಕೃತಿಗಳಲ್ಲಿ ಕುಸುಮಬಾಲೆ ಕಾದಂಬರಿ ತನ್ನ ವಸ್ತು, ವಿಶೇಷವಾಗಿ ಅಭಿವ್ಯಕ್ತಿ ವಿಷಯದಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದೊಳಗೆ ತೀವ್ರವಾದ ಟೀಕೆ ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಇನ್ನೂ ಒಡಲಾಳ ಹಾಗೂ ದ್ಯಾವನೂರು ಕೃತಿಗಳು ಎಲ್ಲಾ ರೀತಿಯ ಓದುಗರನ್ನು ತಮ್ಮೆಡೆಗೆ ಆಕಷರ್ಿಸಿವೆ. ಮಹದೇವ ಅವರು ಹೀಗೆ ಸಾಹಿತ್ಯ ಕೃತಿಗಳಿಂದ ಮಾತ್ರವೆ ಗಮನಾರ್ಹವೆನಿಸದೆ ತನ್ನ ಬದುಕಿನ ರೀತಿ-ನೀತಿಗಳ ವಿಷಯದಲ್ಲೂ ಅನನ್ಯವೆನಿಸಿದ್ದಾರೆ. ಅತೀ ಕೆಟ್ಟ ಬಡತನದಿಂದ ಬಂದ ಇವರು ಹಾಸ್ಟೆಲ್ ಸೌಲಭ್ಯಗಳ ಸಹಕಾರದೊಂದಿಗೆ ವಿದ್ಯಾಭ್ಯಾಸ ಆರಂಭಿಸಿ, ಓದು-ಬರಹದ ಕಡೆ ಆಸಕ್ತಿ ತೋರಿದವರು. ಗಾಂಧಿ-ಅಂಬೇಡ್ಕರ್-ಲೋಹಿಯಾ ಅವರಂಥ ಸಾಮಾಜವಾದಿಗಳ ಬರಹಗಳಿಂದ ಆಲೋಚನೆ ಹಾಗೂ ಬದುಕಿನ ಕ್ರಮಗಳನ್ನೇ ಬದಲಾಯಿಸಿಕೊಂಡರು. ಈ ಹಿನ್ನೆಲೆಯೊಳಗೆ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಮತ್ತು ಹೋರಾಟಗಳ ಕಡೆ ಆಸಕ್ತಿ ಬೆಳೆಸಿಕೊಂಡು ಅಂಥ ಕಾರ್ಯಗಳಲ್ಲಿ ಮಗ್ನರಾದರು. ಹೋರಾಟಕ್ಕೆ ಸ್ಪೂರ್ತಿ ಹಾಗೂ ಬೆನ್ನೆಲುಬಾಗಿದ್ದ ಮಾನವ,  ಸುದ್ದಿ ಸಂಗಾತಿ, ಪಂಚಮ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳೊಮದಿಗೆ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಒಬ್ಬರಾದರು. ಇಂಥ ಸಾಮಾಜಿಕ ಚಟುವಟಿಕೆಗಳ ಪರಿಣಾಮವಾಗಿ ಅವರ ವೈಯುಕ್ತಿಕ ಬದುಕಿನಲ್ಲಿಯೂ ಗಮನಿಸಲೇಬೇಕಾದ ಎರಡು ಘಟನೆಗಳು ಜರಗಿವೆ. ಅವುಗಳಲ್ಲಿ ಒಂದು: ಭಾರತೀಯ ಹಿಂದೂ ಸಾಂಪ್ರದಾಯಿಕ ಸಮಾಜದಲ್ಲಿ ಬದುಕನ್ನೇ ಕಳೆದುಕೊಂಡಿದ್ದ ವಿದವೆಯೊಬ್ಬರನ್ನು ವಿವಾಹವಾಗಿದ್ದು. ಎರಡು: ಮೈಸೂರಿನ ಪ್ರತಿಷ್ಠಿತ ಭಾರತೀಯ ಭಾಷಾ ಸಂಸ್ಥಾನ (ಸಿ.ಐ.ಐ.ಎಲ್.)ದಲ್ಲಿ ಸಿಕ್ಕಿದ್ದ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ರೈತನಾದುದು. ಹೀಗೆ ಇಡೀ ಕನರ್ಾಟಕದ ದಲಿತರ ಬೌದ್ಧಿಕ ನಾಯಕನಾಗಿ ಬೆಳೆದು ನಿಂತ ದೇವನೂರು ಮಹದೇವ ಅವರಿಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಮಾನ್ಯತೆ ಮತ್ತು ಅವಕಾಶಗಳು ದೊರೆತವು. ಈ ಅವಕಾಶಗಳ ಗುಂಗಿನಲ್ಲಿ ದೇವನೂರು ಅಪ್ಪಟ ಸ್ವಾರ್ಥ ರಾಜಕಾರಣಿಯಂತೆ ವರ್ತಿಸಿದರು ಎಂಬಂಥಹ ಅಪವಾದಗಳೂ ಇವರ ಮೇಲಿವೆ. ಇವೆಲ್ಲ ಸಂಗತಿಗಳ ನಡುವೆ ಮತ್ತೆ ಮತ್ತೆ ಚರ್ಚೆಗೆ ಬಂದದ್ದು ಗಮನಿಸಲೇಬೇಕಾದ ಸಂಗತಿ. ಇಂಥ ರೋಚಕ ಬೆಳವಣಿಗೆಯನ್ನು ಗಮನಿಸಿದಂತಹ ಎಂತಹವರೂ ದೇವನೂರು ಅವರ ಸಾಹಿತ್ಯವನ್ನು ಓದುವ ಅಭಿಲಾಷೆ ವ್ಯಕ್ತಪಡಿಸುತ್ತಾರೆ. ಇಂಥ ಅಭಿಲಾಷೆಗಳ ಭಾಗವಾಗಿ ಪ್ರಸ್ತುತ ಲೇಖನದಲ್ಲಿ ಒಡಲಾಳ ಕಿರು ಕಾದಂಬರಿಯ ವಿವೇಚನೆಯನ್ನು ನಡೆಸಲಾಗಿದೆ. 

         1978ರಲ್ಲಿ ಪ್ರಕಟವಾದ ದೇವನೂರು ಮಹದೇವ ಅವರ 52 ಪುಟಗಳ ಕಿರು ಕಾದಂಬರಿ ಒಡಲಾಳ. ದಲಿತ ಕುಟುಂಬದ ಕಥೆಯೊಂದರ ಮೂಲಕ ಇಡೀ ದಲಿತ ಲೋಕದ ವಾಸ್ತವವನ್ನು ನೈಜವಾಗಿ ದಾಖಲಿಸುತ್ತಲೇ ಅವರ ಬಿಡುಗಡೆಯ ಹಾದಿಗಳ ಬಗ್ಗೆ ಚಿಂತಿಸುವಂತೆ ಮಾಡುವ ಈ ಕೃತಿ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನಗಳಿಸಿದೆ. ಇಡೀ ಈ ಕಿರು ಕಥನವನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಿ ಚಚರ್ಿಸಬಹುದಾಗಿದೆ. ಈ ಭಾಗಗಳ ವಿವರಗಳನ್ನು ನೋಡುವಾಗ ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ ಹಾಗೂ ಕುಟುಂಬದ ಸದಸ್ಯರ ವೈಯುಕ್ತಿಕ ಪರಿಚಯವೂ ಕೃತಿಯ ಅರ್ಥ ಗ್ರಹಿಕೆಗೆ ಅನಿವಾರ್ಯವಾಗುತ್ತದೆ. ಹಾಗೆಯೇ ಈ ಎಲ್ಲಾ ವಿಷಯಗಳನ್ನು ದಾಖಲಿಸುವ ಲೇಖಕರು ತನ್ನ ಅಭಿವ್ಯಕ್ತಿಗೆ ತುಂಬಿರುವ ಅರ್ಥ ಮತ್ತು ಆಶಯಗಳನ್ನು ಗಮನಿಸಬೇಕಾಗುತ್ತದೆ. ಕೊನೆಯಲ್ಲಿ ಕೃತಿಯ ಮತ್ತೊಂದು ಅನನ್ಯ ಸಂಗತಿಯಾಗಿರುವ ಭಾಷೆಯ ಬಗೆಗೆ ವಿಚಾರ ಮಾಡಬೇಕಾಗುತ್ತದೆ. ಆದ್ದರಿಂದ ಮೇಲೆ ಉಲ್ಲೇಖಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಾದಂಬರಿಯ ಹಲವಾರು ವಿಚಾರಗಳನ್ನು ವಿವರಿಸಬಹುದಾಗಿದೆ. 
ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ
         ನಾಲ್ಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ಸಾಕವ್ವನ ಹಟ್ಟಿ. ಇದರ ಯಜಮಾನಿ ಸಾಕವ್ವ. ಇವರ ಮನೆಯಲ್ಲಿ ಯಜಮಾನಿಯಾಗಿ ಸಾಕವ್ವ: ಕಾಳಣ್ಣ, ಸಣ್ಣಯ್ಯ, ಗುರುಸಿದ್ಧ ಎನ್ನುವ ಮೂರು ಜನ ಗಂಡುಮಕ್ಕಳು; ಗೌರಮ್ಮ, ಪುಟ್ಟಗೌರಿ ಎಂಬ ಇಬ್ಬರು ಹೆಣ್ಣು ಮಕ್ಕಳು: ಅಷ್ಟೇ ಅಲ್ಲದೆ ಕಾಳಣ್ಣನ ಹೆಂಡತಿ; ಸಣ್ಣಯ್ಯನ ಹೆಂಡತಿ ಚಲುವಮ್ಮ ಹಾಗೂ ಈಕೆಯ ಮಕ್ಕಳಾದ ದುಪ್ಪಟೀಕಮೀಷನರ್ ಮತ್ತು ಶಿವು. ಇಷ್ಟೊಂದು ಸದಸ್ಯರ ಈ ಕುಟುಂಬ ಹೆಂಚು ಹೊದಿಸಿದ ಒಂದು ಮನೆ; ಹುಲ್ಲು ಹೊದಿಸಿದ ಮತ್ತೊಂದು ಮನೆ. ಇವುಗಳ ಜೊತೆಗೆ ಒಂದು ನೆರಕೆಯಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬಕ್ಕಿರುವ ಆಸ್ತಿ 4 ಎಕರೆ ಜಮೀನು. ಒಂದಿಷ್ಟು ಕೋಳಿಗಳು. ಮನೆಯಲ್ಲಿ  ಆರ್ಥಿಕವಾಗಿ ಯಾವುದೇ ಭದ್ರತೆಯಿಲ್ಲ. ಕುಟುಂಬದ ಸದಸ್ಯರೆಲ್ಲರಿಗೆ ಉದ್ಯೋಗವೂ ಇಲ್ಲ. ಜಮೀನಿದ್ದರೂ ಮಳೆಗಳಿಲ್ಲದ ಕಾರಣ ಯಾವುದೇ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ. ಹಾಗಾಗಿ ಒಂದೊತ್ತಿನ ಕೂಳಿಗೂ ಒದ್ದಾಡುವಂತಹ ಸ್ಥಿತಿ. ಅಂದಿನ ಆಹಾರವನ್ನು ಅಂದೇ ಸಂಪಾದಿಸುವ ಒತ್ತಡ ಇಲ್ಲಿದೆ. ಮಂಡಕ್ಕಿ  ಕಾಪಿ ನೀರು ಈ ಕುಟುಂಬದ ಸಾಮಾನ್ಯ ಆಹಾರ. ಮನೆಯಲ್ಲಿ ಎಣ್ಣೆ ಕ್ಯಾನು, ಹಿಟ್ಟಿನ ಡಬ್ಬಿ, ಕಾಳಿನ ಚೀಲಗಳು ಇವೆಯಾದರೂ ಇವೆಲ್ಲವೂ ಖಾಲಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೊಟ್ಟೆಗಿಲ್ಲದ ಈ ಕುಟುಂಬದ ಸದಸ್ಯರಲ್ಲಿ ಕೆಲವರು ಅನಿವಾರ್ಯವಾಗಿ ಕಳವು ಮಾಡುವಂತಹ ಒತ್ತಡಕ್ಕೆ ಒಳಗಾಗಿದ್ದಾರೆ. ಇನ್ನೂ ಕೆಲವರು ಇಂಥ ದುಸ್ಥಿತಿಯಿಂದ ದೂರ ಸರಿಯುವ ಪ್ರಯತ್ನದಲ್ಲಿದ್ದಾರೆ. ಆಧುನಿಕ ಕಾಲದ ಮಹತ್ವದ ಬೆಳವಣಿಗೆಗಳಿಂದಾಗಿ ಈ ಕುಟುಂಬದ ಪ್ರಾಚೀನ ದುಡಿಮೆಯ ಮಾರ್ಗಗಳು ಮೂಲೆಗುಂಪಾಗಿವೆ. ಇದಕ್ಕೆ ಗೋಡೆಯ ದೊಡ್ಡ ಮೊಳೇಲಿ ನೂಲೊ ರಾಟೆಯ ಕತ್ತಿಗೆ ಹಗ್ಗ ಬಿಗಿದು ನೇಣಾಕಿತ್ತು ಎಂಬ ಕಾದಂಬರಿಯ ಮಾತು ಸಮರ್ಥನೆಯನ್ನು ಒದಗಿಸುತ್ತದೆ. ಈ ಎಲ್ಲಾ ವಿವರಗಳು ಸಾಕವ್ವನ ಕುಟುಂಬ   ಆರ್ಥಿಕವಾಗದ  ದುಸ್ಥಿತಿಯನ್ನು ದರ್ಶಿಸುತ್ತವೆ ಕುಟುಂಬದ ಈ ಸ್ಥಿತಿಗೆ ಕಾಲದ ಮಹಿಮೆ ಹಾಗೂ ಆ ಸಮಾಜದಲ್ಲಿದ್ದ ಜಮೀನ್ದಾರಿ ಪದ್ಧತಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳೇ ಕಾರಣ ಎಂಬುದನ್ನು ಮಾರ್ಮಿಕವಾಗಿ ಸೂಚಿಸಲಾಗಿದೆ. 
ಸಾಕವ್ವನ ಕೋಳಿ ಕಳವು
          ಇಡೀ ಕಾದಂಬರಿಯ ಕೇಂದ್ರ ಸಮಸ್ಯೆಯೆ ಸಾಕವ್ವನ ಕೋಳಿ ಕಳವಿನ ಪ್ರಸಂಗ. ಕಾದಂಬರಿ ಶುರುವಾಗುವುದೇ ಈ ಘಟನೆಯಿಂದ. ಸಾಕವ್ವ ತನ್ನ ಮನೆಯಲ್ಲಿದ್ದ ಕೋಳಿಗಳಲ್ಲಿ ಒಂದು ಕೋಳಿಯನ್ನು ದೇವರಿಗೆಂದು ಬಿಟ್ಟಿದ್ದು, ಅದೇ ಕೋಳಿಯನ್ನು ಯಾರೋ ಕದ್ದೊಯ್ಯುತ್ತಾರೆ. ಇದು ಸಾಕವ್ವನ ಮನಸ್ಸಿನಲ್ಲಿ ಹಲವಾರು ಆತಂಕಗಳನ್ನು ಹುಟ್ಟು ಹಾಕುತ್ತದೆ. ಇದ್ದ ಆಸ್ತಿಯ ಭಾಗವಾಗಿದ್ದ ಕೋಳಿ ಕಳುವಾಯಿತಲ್ಲ ಎಂಬ ಸಂಕಟ. ದೇವರಿಗೆ ಬಿಟ್ಟ ಕೋಳಿಯಾದ್ದರಿಂದ ದೇವರ ಅವಕೃಫೆಯಾಗುವುದೆಂಬ ಭಯ. ಈ ಹಿನ್ನೆಲೆಯ ಒಳಗೆ ಸಾಕವ್ವ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಾಳೆ. ಅವುಗಳಲ್ಲಿ ನನ್ನ ಕೋಳಿ ಕದ್ದು ತಿಂದವರ ಮನೆ ಹಾಳಾಗಲಿ ಎಂಬುದು ಒಂದು. ಮತ್ತೊಂದು ದೇವರು ತನ್ನ ಪಾಲನ್ನು ತಾನು ರಕ್ಷಿಸಿಕೊಳ್ಳಲಾಗಲಿಲ್ಲ ಎಂಬ ದೇವರ ಅಸ್ತಿತ್ವವನ್ನು ಪ್ರಶ್ನಿಸುವಂಥ ಭಾವನೆ. ಅನಂತಮೂರ್ತಿ ಅವರು ತಮ್ಮದೊಂದು ಲೇಖನದಲ್ಲಿ ವಿವರಿಸಿರುವಂತೆ ಸಾಕವ್ವನ ಇಲ್ಲಿನ ನೋವು ಹುಂಜ ದೇವರದ್ದು ಎನ್ನುವುದಾಗಲಿ, ಬಾಳ ಬೆಲೆ ಬಾಳುವಂತಹದ್ದು ಎನ್ನುವುದಾಗಲಿ ಮುಖ್ಯವಾಗದೆ ಹುಂಜ ನನ್ನದು ಎನ್ನುವ ಹಕ್ಕುಸ್ವಾಮ್ಯ ಸೂಚಕ ಸಂಬಂಧಿಯಾದುದು. 
           ಕಳೆದ ಹುಂಜದ ಬಗ್ಗೆ ಸಾಕವ್ವನನ್ನು ಬಿಟ್ಟರೆ ಕುಟುಂಬದ ಮತ್ಯಾರು ತಲೆಕೆಡಿಸಿಕೊಂಡವರಿಲ್ಲ. ಹುಂಜ ಕಳೆದ ದಿನದಿಂದಲೇ ಸಾಕವ್ವ ತನ್ನ ಮಗನೋ, ಮಗಳೋ ಕಳೆದುಕೊಂಡವಳಂತೆ ವತರ್ಿಸುತ್ತಾಳೆ. ಮೊದಲ ದಿನ ಬರಬಹುದು ಎಂಬ ಆಶಾ ಭಾವನೆ ಸುಳ್ಳಾದ ನಂತರ ಸಾಕವ್ವ ಹುಚ್ಚಳಂತೆ ಕೊ... ಕೊ... ಬಾ... ಬಾ... ಎಂದು ಕೂಗುತ್ತಾ ಊರ ತುಂಬಾ ತಿರುಗುತ್ತಾಳೆ. ಸಿಕ್ಕ ಸಿಕ್ಕವರ ಮೇಲೆ ಅನುಮಾನ ಪಡುತ್ತಾಳೆ. ವಿಶೇಷವಾಗಿ ಸವತಿ ಕೆಂಪಮ್ಮನ ಮೇಲೆ ಬಲವಾದ ಅನುಮಾನ ಪಟ್ಟು ಅವಳ ತಿಪ್ಪೆಯನ್ನು ಕೆದರಿ ನೋಡುತ್ತಾಳೆ. ಮೊಮ್ಮಗ ಶಿವುನನ್ನು ಜೊತೆಗೆ ಕರೆದುಕೊಂಡು ಊರಿನ ಮನೆ ಮನೆಯಲ್ಲಿ ಏನು ಸಾರು ಮಾಡಿದ್ದಾರೆ ಎಂಬುದನ್ನು ಪರೀಕ್ಷಿಸುತ್ತಾಳೆ. ಸದಾ ಹುಂಜದ ಧ್ಯಾನನದಲ್ಲೇ ಇರುವ ಸಾಕವ್ವ ಕಳೆದ ಹುಂಜನನ್ನು ಪಡೆಯುವ ಹಂಬಲದಲ್ಲಿದ್ದಾಳೆ. ಜೊತೆಗೆ ಈ ವಿಷಯದ ಬಗ್ಗೆ ಕುಟುಂಬದ ಯಾವ ಸದಸ್ಯರು ಗಮನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಈ ಪ್ರಸಂಗವನ್ನು ಕೊನೆಗೊಳಿಸುವ ಕಾದಂಬರಿಯ ಕ್ರಮ ವಾಸ್ತವಸ್ಥಿತಿಗತಿಗೆ ಅನುಗುಣವಾಗಿದೆ. ಹುಂಜನನ್ನು ಹುಡುಕಲು ಮಾದರಿಗಾಗಿ ಸಾಕವ್ವನ ಮತ್ತೊಂದು ಕೋಳಿ ಪಡೆದು ಪೊಲೀಸರು ದೂಳೆಬ್ಬಿಸಿಕೊಂಡು ಜೀಪಲ್ಲಿ ತೆರಳುವ ದೃಶ್ಯ ಅತ್ಯಂತ ಧ್ವನಿಪೂರ್ಣವಾಗಿದೆ. ಒಂದು ಹುಂಜ ಕಳೆದುಕೊಂಡ ಸಾಕವ್ವ ಅದನ್ನು ಪಡೆಯುವುದಕ್ಕಾಗಿ ಮತ್ತೊಂದು ಅಂತಹದ್ದೇ ಹುಂಜವನ್ನು ಕಳೆದುಕೊಂಡು ಪಡುವ ಯಾತನೆ ಇಡೀ ದಲಿತ ಲೋಕದ ಅಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ. 
ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಮೂಟೆ ಕಳುವು
       ಕಾದಂಬರಿಯಲ್ಲಿ ಬರುವ ಮತ್ತೊಂದು ಕಳುವಿನ ಪ್ರಸಂಗ ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಕಳವಿನ ಪ್ರಸಂಗ. ಬಂಡವಾಳಶಾಹಿ ಎತ್ತಪ್ಪ, ಸಾಕವ್ವನ ಕುಟುಂಬಕ್ಕೆ ಎಲ್ಲಾ ವಿಷಯಗಳಲ್ಲಿ ವಿರುದ್ಧ. ಬಡತನದ ಭಾಗವಾಗಿ ಸಾಕವ್ವನ ಕುಟುಂಬದ ಹಿರಿಮಗ ಕಾಳಣ್ಣ ಎತ್ತಪ್ಪನ ಮಿಲ್ಲಿನಿಂದ ಒಂದು ಕಡ್ಲೆಕಾಯಿ ಮೂಟೆಯನ್ನು ಹೊತ್ತು ತಂದು ಬೆಂಕಿ ಹಾಕಿ ಅದರ ಸುತ್ತ ತನ್ನ ಕುಟುಂಬದ ಸದಸ್ಯರೆಲ್ಲರನ್ನು ಕೂರಿಸಿಕೊಂಡು ತಿನ್ನುವ ಸಂದರ್ಭದಲ್ಲಿ ಅವರೆಲ್ಲರೂ ಸಾಹುಕಾರ್ ಎತ್ತಪ್ಪನ ಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಇವರ ಮಾತುಗಳಿಂದಲೇ ತಿಳಿದು ಬರುವ ಎತ್ತಪ್ಪನ ಅಂತಸ್ತು ಹೀಗಿದೆ: ಎತ್ತಪ್ಪನ ದನದ ಹಟ್ಟಿ, ಅಲ್ಲಿರೋ ದನ ಹಾಗೂ ಎಮ್ಮೆಗಳು ಉನ್ನತ ಸ್ಥಿತಿಯಲ್ಲಿವೆ. ಅಂದ ಮೇಲೆ ಮನೆ-ಮನುಷ್ಯರ ಬಗ್ಗೆ ಹೇಳುವುದೇ ಬೇಡ. ಇವರ ಮನೆಯ ಮಗಳ ಮದುವೆ ಅಂಥ ಎಲ್ಲಾ ಸೂಚನೆಗಳನ್ನು ನೀಡುತ್ತದೆ. ಇಂತಹವರ ಸ್ವತ್ತು ಕಳುವಾದಾಗ ವ್ಯವಸ್ಥೆಯ ಭಾಗವಾದ ಪೊಲೀಸ್ ವ್ಯವಸ್ಥೆ ಸ್ಪಂಧಿಸುವ ರೀತಿ ಕಾನೂನು ಇದ್ದವರಿಗೊಂದು ಇಲ್ಲದವರಿಗೆ ಇನ್ನೊಂದು ಎಂಬ ನಾಣ್ನುಡಿಯನ್ನು ನೆನಪಿಸುತ್ತದೆ. 
        ಈ ಸಂದರ್ಭದಲ್ಲಿ ಬೆಂಕಿಯ ಮುಂದೆ ಕುಳಿತು ಸಾಕವ್ವನ ಕುಟುಂಬದ ಸದಸ್ಯರು ಚರ್ಚಿಸುವ ವಿಷಯಗಳು ಅತ್ಯಂತ ಪ್ರಮುಖವಾಗಿವೆ. ಮುಖ್ಯವಾಗಿ ಸಾಹುಕರ್ ಎತ್ತಪ್ಪನ ಕುಟುಂಬದಂತೆ ಶ್ರೀಮಂತ ಸ್ಥಿತಿಗೆ ತಲುಪುವ ಕನಸು ಕಾಣುತ್ತಾರೆ. ಅಷ್ಟೆ ಅಲ್ಲ ಎತ್ತಪ್ಪನ ದನ-ಎಮ್ಮೆಗಳು ಆನೆಗಳಂತಿದ್ದು ಅವುಗಳಲ್ಲಿ ಒಂದು ಸತ್ತರೆ ಸಾಕು ನಮ್ಮ ಇಡೀ ಹಟ್ಟಿ ಸಂತೃಪ್ತವಾಗುತಿತ್ತು ಎಂಬ ತತ್ಕ್ಷಣದ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿನ ಕದ್ದು ತಂದ ಕಡ್ಲೆಕಾಯಿಯಲ್ಲೇ ಸ್ವಲ್ಪ ಭಾಗವನ್ನು ಹಸಿದ ಇತರೆ ವ್ಯಕ್ತಿಗಳಿಗೂ ನೀಡುತ್ತಾರೆ. ಗುರುಸಿದ್ಧ ಅಸ್ಪೃಶ್ಯತೆಯ ವಿರುದ್ಧದ ತನ್ನ ಹೋರಾಟದ ವಿವರಗಳನ್ನು ನೀಡುವುದು ಕೂಡ ಇಲ್ಲಿಯೇ ಎಂಬುದನ್ನು ಗಮನಿಸಬೇಕು. ಹಾಗಾಗಿಯೇ ಕಾದಂಬರಿಯ ಈ ಸಂದರ್ಭ ಓದುಗರಲ್ಲಿ, ವಿಮರ್ಶಕರಲ್ಲಿ ಹಲವು ರೀತಿಯ ವಾಗ್ವಾದಗಳನ್ನು ಎಬ್ಬಿಸಿದೆ. ಮುಖ್ಯವಾದ ಅಂಥ ಒಂದೆರಡು ಅಭಿಪ್ರಾಯಗಳನ್ನು ಗಮನಿಸುವುದಾದರೆ,ಅನಂತಮೂರ್ತಿ  ಅವರು ಬೆಂಕಿ ಮುಂದೆ ಕುಟುಂಬದ ಎಲ್ಲಾ ಸದಸ್ಯರು ಕದ್ದು ತಂದ ಕಡ್ಲೆಕಾಯಿಯನ್ನು ತಿನ್ನುವ ಈ ಸಂದರ್ಭ ಯಜ್ಞ ಕಾರ್ಯದಂತೆ ಕಾಣುತ್ತದೆ ಎನ್ನುತ್ತಾರೆ. ಈ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಮ.ನ.ಜವರಯ್ಯ ಅವರು ಇಂಥ ಅತಿರೇಕದ ಹೋಲಿಕೆಗಳಿಗಿಂತ ವಾಸ್ತವ ನೆಲೆಯಲ್ಲಿ ನೋಡಬೇಕೆಂದು ಅಭಿಪ್ರಾಯ ಪಟ್ಟು ಅಂಥ ವಾಸ್ತವ ನೆಲೆಯಲ್ಲಿ ಮೂರು ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಅವುಗಳಲ್ಲಿ ಮೊದಲನೆಯದಾಗಿ ಉಳ್ಳವರ ಸಂವೃದ್ಧಿಗಾಗಿ ದುಡಿದು ತಾವು ಮಾತ್ರ ಉಪವಾಸ ಬೀಳಬೇಕೆಂಬ ಅವ್ಯಕ್ತ ಆಕ್ರೋಶ ಒಡಲ ಬಡಬಾಗ್ನಿಯಾಗಿ ಕಡ್ಲೆಕಾಯಿ ನಾಮಾವಶೇಷವಾಯಿತು. ಎರಡನೆಯದಾಗಿ, ಕಡಲೆಯ ಕಾಯಿಯ ಒಂದು ಸಿಪ್ಪೆಯೂ ಸಿಗದಿದ್ದುದು, ದುಡಿದ ಒಡಲಿಂದ ಎದ್ದ ಕಿಚ್ಚಿಗೆ ಉಳ್ಳವರ ಸಿರಿತನ, ಧರ್ಪ, ಅನ್ಯಾಯಗಳೆಲ್ಲವೂ ಕಡಲೆ ಕಾಯಿಯಂತೆ ಸುಟ್ಟು ಬೂದಿಯಾದವು. ಮೂರನೆಯದಾಗಿ, ಕಡ್ಲೆಕಾಯಿಯನ್ನು ಹಸಿದ ಒಡಲುಗಳೆಲ್ಲ ಸುತ್ತುವರೆದು ತಿನ್ನುವ ಚಿತ್ರದಿಂದ ಹಸಿವು ಮನೆ ಮಂದಿಯನ್ನೆಲ್ಲ ಕಿತ್ತು ತಿಂದಿತು ಅಥವಾ ಮನೆಮಂದಿಯೆಲ್ಲ ಸೇರಿ ಹಸಿವನ್ನು ಕಿತ್ತು-ಕಿತ್ತು ತಿಂದರು ಎಂಬ ಧ್ವಂದ್ವಾರ್ಥ ಇರಬಹುದು. ಹೀಗೆ ಹಲವಾರು ಅರ್ಥಗಳನ್ನು ಪ್ರಸ್ತುತ ಪ್ರಸಂಗದಿಂದ ಅರಿಯಬಹುದಾಗಿದೆ.
ಕಥನದ ಕೆಲವು ಪ್ರಮುಖ ಪಾತ್ರಗಳು ಮತ್ತು ಘಟನೆಗಳು
ಒಡಲಾಳ ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ವಿಶೇಷವಿದೆ. ಇಲ್ಲಿ ಬರುವ ಪಾತ್ರಗಳೆಂದರೆ: ಮನೆಯ ಯಜಮಾನಿ ಸಾಕವ್ವ, ಹಿರಿಮಗ ಕಾಳಣ್ಣ ಮತ್ತು ಆತನ ಮಡದಿ, ಕಿರಿಮಗ ಸಣ್ಣಯ್ಯ ಮತ್ತು ಆತನ ಹೆಂಡತಿ ಚಲುವಮ್ಮ ಹಾಗೂ ಇವರ ಮಕ್ಕಳು, ಮದುವೆಯಾದರೂ ಗಂಡನ ಬೇಜವ್ಬಾರಿ ಕಾರಣಕ್ಕೆ ತವರು ಮನೆ ಸೇರಿರುವ ಗೌರಮ್ಮ ಹಾಗೂ ಆಕೆಯ ಮಗ ಶಿವು, ಮತ್ತೊಬ್ಬ ದುಪ್ಟಿಕಮಿಷನರ್, ಮನೆಯ ಕಿರಿಮಗಳು ಪುಟ್ಟಗೌರಿ, ಕಿರಿಮಗ ಗುರುಸಿದ್ಧ. ಇವರಲ್ಲದೆ ಪೊಲೀಸ್ ರೇವಣ್ಣ, ಸಾಹುಕಾರ್ ಎತ್ತಪ್ಪ ಮೊದಲಾದವರು. ಇಷ್ಟು ಪಾತ್ರಗಳಲ್ಲಿ ನಮ್ಮ ಗಮನ ಸೆಳೆಯುವ ಪಾತ್ರಗಳಾಗಿ ಸಾಕವ್ವ, ಶಿವು, ಪುಟ್ಟಗೌರಿ, ಗುರುಸಿದ್ಧ ಅವರುಗಳು ಕಂಡುಬರುತ್ತಾರೆ.
ಸಾಕವ್ವ
ಅತ್ಯುತ್ತಮ ಪಾಲಕಿ-ಪೋಷಕಿ. ಈಕೆಯ ಸಿಟ್ಟು-ಸೆಡವು-ದ್ವೇಷಗಳೆಲ್ಲ ಕುಟುಂಬದ ಉದ್ಧಾರ ಸೂತ್ರಗಳು. ವೃದ್ಧಾಪ್ಯದಲ್ಲೂ ಛಲಗಾರ್ತಿ ಸೊಸೆ ಚಲುವಮ್ಮನ ಜೊತೆ ಆಸ್ತಿನೆಪದಲ್ಲಿ ಮಾಡಿದ ಜಗಳದಲ್ಲಿ, ಕಳೆದ ಹುಂಜಕ್ಕಾಗಿ ಪರದಾಡಿದ ಕ್ರಮದಲ್ಲಿ ಸವತಿ ಕೆಂಪಮ್ಮನ ಮೇಲಿನ ದ್ವೇಷದಲ್ಲಿ ಇವೇ ಮೊದಲಾದ ಪ್ರಸಂಗಗಳಲ್ಲಿ ಸಾಕವ್ವನ ಅಂತರಾಳ ಸ್ಪಷ್ಟವಾಗುತ್ತದೆ.
ಗುರುಸಿದ್ಧ
ಮನೆಯ ಹಕ್ಕುದಾರನಾದರೂ ಕುಟುಂಬಕ್ಕೆ ಅತಿಥಿ, ಗಾರೆ ಕಾಂಟ್ರ್ಯಾಕ್ಟು, ರೇಷ್ಮೆಗೂಡು ವ್ಯಾಪಾರ ವೃತ್ತಿಯನ್ನು ಮಾಡುತ್ತಿದ್ದಾನೆ. ಪಟ್ಟಣದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಗುರುಸಿದ್ಧ ವ್ಯವಸಾಯದಂತಹ ಸಾಂಪ್ರದಾಯಿಕ ವೃತ್ತಿಗಳಿಂದ ನಿದರ್ಿಷ್ಟ ವರಮಾನವಿಲ್ಲವೆಂದು ತೀಮರ್ಾನಿಸಿದ್ದಾನೆ. ಕೈಗೆ ವಾಚು, ಓಡಾಡಲು ಸೈಕಲ್ ಹೊಂದಿರುವ ಈತ ಪಟ್ಟಣದ ಮೇಲ್ಜಾತಿಗೆ ಸೇರಿದ ಶಿವಪ್ಪನ ಹೋಟೆಲಿನಲ್ಲಿ ಸಮಾನ ಸತ್ಕಾರ ಪಡೆಯಲೆತ್ನಿಸುತ್ತಿದ್ದಾನೆ. ಪೇಟೆಯ ಸಂಪರ್ಕದ ಪರಿಣಾಮ ಬೆಲ್ಲದ ಕಾಪಿಗಿಂತ ಸಕ್ಕರೆ ಟೀಗೆ ಒಗ್ಗಿಹೋಗಿದ್ದಾನೆ. ಇಂಥ ಕೆಲವು ಕಾರಣಗಳಿಗಾಗಿಯೇ ಕುಟುಂಬದಿಂದ ದೂರ. ಇದೇನೆ ಇದ್ದರೂ ಮನೆಯವರಿಗೆ ಈತ ಹೀರೋ ಆಗಿರುವುದಂತೂ ಸತ್ಯ. ಸಾಕವ್ವನ ಮನೆಯನ್ನು ಕಡಲೆ ಕಾಯಿಗಾಗಿ ತಲಾಶ್ ಮಾಡುವ ಸಂದರ್ಭದಲ್ಲಿ ಈತನ ಕೆಂಗಣ್ಣು ಪೊಲೀಸರಲ್ಲಿ ನಡುಕ ಹುಟ್ಟಿಸುತ್ತದೆ. ಗುರುಸಿದ್ಧನ ಈ ಎಲ್ಲಾ ಚಟುವಟಿಕೆಗಳನ್ನು ಗಮನಿಸಿದರೆ ದಲಿತರ ಉದ್ದಾರಕ್ಕಾಗಿ ಉದಯಿಸಲಿದ್ದ ದಲಿತ ಸಂಘರ್ಷ ಸಮಿತಿಯ ತತ್ವಗಳ ಮೊಳಕೆಗಳು ಕಾಣಿಸುತ್ತವೆ. 
ಪಟ್ಟಗೌರಿ
ಈ ಮನೆಯ ಸಂಕಷ್ಟ ಕೇಳಲಾರದೆ ನಾನು ಎಂದು ಈ ಮನೆಯನ್ನು ಬಿಟ್ಟೇನು ಎಂಬ ಭಾವನೆಯೊಳಗೆ ಈಕೆ ಬದುಕುತ್ತಿದ್ದಾಳೆ. ಮನೆಯ ಗೋಡೆಯ ಮೇಲೆ ಬಣ್ಣದಲ್ಲಿ ನವಿಲು ಬಿಡಿಸುವ ಪುಟ್ಟಗೌರಿ ಶೂನ್ಯದಲ್ಲಿ ಏನನ್ನಾದರೂ ಸೃಷ್ಟಿಸುವ ಭಾಗವಾಗಿ ಕಂಡುಬರುತ್ತಾಳೆ. ಅಷ್ಟೇ ಅಲ್ಲ ಕಡಲೆಕಾಯಿ ತಿನ್ನಲು ಮಾರಿಗುಡಿಯಲ್ಲಿ ನಾಟಕದ ತಾಲೀಮು ಮಾಡುತ್ತಿದ್ದ ಗುರುಸಿದ್ಧನನ್ನು ಕರೆತರಲು ಶಿವೂನ ಜೊತೆಗೂಡಿ ಹೋಗಿ ಬಂದುದು ಇವಳ ಕ್ರಿಯಾ ಶೀಲತೆಯನ್ನು ಸೂಚಿಸುತ್ತದೆ.
ಶಿವು
ಗೌರಮ್ಮನ ಎರಡನೇ ಮಗನಾದ ಶಿವು ಶಾಲೆಗೆ ಹೋಗುತ್ತಿದ್ದಾನೆ. ಅಕ್ಷರಸ್ಥನಾಗಿ ಮುಂದಿನ ಕುಟುಂಬದ ಬೆಳಕಾಗುವ ಸೂಚನೆಯಿದೆ. ಅದಕ್ಕಾಗಿಯೇ ಸಾಕವ್ವ ತನ್ನ ಕಳೆದುಹೋದ ಹುಂಜವನ್ನು ಹುಡುಕಲು ಶಿವೂನ ಸಹಾಯ ಪಡೆಯುತ್ತಾಳೆ. ಹಾಗೆಯೇ ಅಡವಿಟ್ಟ ಪಾತ್ರೆಗಳ ವ್ಯವಹಾರದ ಲೆಕ್ಕ ಹೇಳುವುದಕ್ಕೂ ಶಿವೂ ಬೇಕಾಗಿದ್ದಾನೆ. ಪುಟ್ಟಗೌರಿಯು ಬಿಡಿಸುವ ನವಿಲುಗಳ ಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲಂಥವನು ಆಗಿದ್ದಾನೆ. ಒಟ್ಟಾರೆ ದಲಿತ ಕುಟುಂಬಗಳಿಗೆ ಶಿಕ್ಷಣ ಬೆಳಕಾಗುತ್ತದೆ ಎಂಬ ಆಶಯ ಇಲ್ಲಿದೆ.
ಪುಟ್ಟಗೌರಿ ನವಿಲು ಚಿತ್ರ ಬಿಡಿಸುವ ಸಂದರ್ಭ
         ಪುಟ್ಟಗೌರಿ ತನ್ನ ಮನೆಯ ಗೋಡೆಯ ಮೇಲೆ ನವಿಲಿನ ಚಿತ್ರ ಬಿಡಿಸುತ್ತಾಳೆ. ಚಿತ್ರ ಬಿಡಿಸಿದ ಕ್ರಮ ಇಲ್ಲಿ ಗಮನಾರ್ಹ. ಪ್ರಸ್ತುತ ವ್ಯವಸ್ಥೆಯೊಳಗೆ ಯಾವುದೇ ಚಿತ್ರಬಿಡಿಸುವಾಗಲೂ ಮೇಲಿನಿಂದ ಕೆಳಕ್ಕೆ ಅಂದರೆ ತಲೆಯಿಂದ ಪಾದಕ್ಕೆ ಬರುವುದು ಸಂಪ್ರದಾಯ. ಈ ಕ್ರಮ ಸಮಾಜದ ಏಣಿ-ಶ್ರೇಣಿ ವ್ಯವಸ್ಥೆಯನ್ನು ಸಮಥರ್ಿಸುವ ಭಾಗವೆನ್ನಬಹುದು. ಒಂದು ವ್ಯವಸ್ಥೆಯ ಪ್ರಕಾರ ಶಿರ ಶ್ರೇಷ್ಟಾಂಗ ಆದ್ದರಿಂದಲೇ ಶಿರಕ್ಕೆ ಮೊದಲ ಸ್ಥಾನ. ಪಾದ ಕನಿಷ್ಟ ಹಾಗಾಗಿಯೇ ಪಾದಗಳಿಗೆ ಕೊನೆಯ ಸ್ಥಾನ. ಆದರೆ ಪುಟ್ಟಗೌರಿ ತನ್ನ ನವಿಲಿನ ಚಿತ್ರವನ್ನು ಪಾದದಿಂದಲೇ ಅರಂಭಿಸುತ್ತಾಳೆ. ವ್ಯವಸ್ಥೆಯ ತಿಳುವಳಿಕೆಯನ್ನು ಒಡೆದುಹಾಕಿ ಪಾದಕ್ಕೆ ಮೊದಲ ಸ್ಥಾನ ಕಲ್ಪಿಸುವ ಆಲೋಚನೆ ಇಲ್ಲಿ ಪ್ರಧಾನವಾಗಿರುವಂತಿದೆ. ಇಡೀ ಶರೀರವನ್ನು ಹೊತ್ತು ತಿರುಗುವ ಪಾದಗಳಿಗೆ ಮೊದಲು ಸ್ಥಾನ ನೀಡಬೇಕೆಂಬ ಇಲ್ಲಿನ ಆಶಯಕ್ಕೆ ಸಾಮಾಜಿಕ ಏಣಿ-ಶ್ರೇಣಿ ತತ್ವವನ್ನು ತಿರುಗ-ಮುರುಗಾಗಿಸುವ ಕಲ್ಪನೆಯಿದೆ. ಹಾಗೆಯೇ ಆ ಮನೆಯನ್ನು ಪೊಲೀಸರು ತಲಾಶ್ ಮಾಡುವ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲರೂ ಹೆದರಿ ನಿಂತಿರುವಾಗ ಗೋಡೆಯ ಮೇಲಿನ ನವಿಲು ಚಿತ್ರಗಳು ನರ್ತಿಸುತ್ತವೆ. ಈ ನರ್ತನವನ್ನು ವಿಶೇಷವಾಗಿ ಶಿವು ಮಾತ್ರ ಗಮನಿಸುತ್ತಾನೆ. ಇಂಥ ಎಲ್ಲಾ ಸೂಕ್ಷ್ಮಗಳು ಲೇಖಕರ ಸಮಕಾಲೀನ ಸ್ಪಂದನೆಯನ್ನು ಸೂಚಿಸುತ್ತವೆ.
ಶಿವು ಮತ್ತು ಸಾಕವ್ವನ ನಡುವಿನ ಒಂದು ಚರ್ಚೆ
             ಸಾಕವ್ವ ತನ್ನ ಹುಂಜವನ್ನು ಕಳೆದ ಆ ಹುಂಜವನ್ನು ಹುಡುಕುವ ಹಲವು ಪ್ರಯತ್ನಗಳನ್ನು ನಡೆಸುತ್ತಾಳೆ. ಅಂಥ ಪ್ರಯತ್ನಗಳಲ್ಲಿ ಶಿವುವನ್ನು ಕರೆದುಕೊಂಡು ಈ ಹುಂಜವನ್ನು ಪತ್ತೆಹಚ್ಚಲು ಹೊರಡುತ್ತಾಳೆ. ಆ ಸಂದರ್ಭದಲ್ಲಿ ಶಿವು ಮತ್ತು ಸಾಕವ್ವನ ನಡುವೆ ಯಮಲೋಕ ಕೇಂದ್ರಿತವಾದ ಚರ್ಚೆಯೊಂದು ನಡೆಯುತ್ತದೆ. ಇವರಿಬ್ಬರೂ ಹುಂಜ ಹುಡುಕಲು ಹೊರಟಾಗ ಸಂಜೆಗತ್ತಲು. ಶಿವು ನನಗೆ ಹೆದರಿಕೆಯಾಗುತ್ತದೆ ನಾನು ಬರಲಾರೆ ಎನ್ನುತ್ತಾನೆ. ಅದಕ್ಕೆ ಸಾಕವ್ವ ನಾನಿದ್ದೀನಲ್ಲ ಏತಕ್ಕೆ ಭಯ ಯಮದೂತರು ಬಂದರು ನಾವು ಹೆದರಬೇಕಿಲ್ಲ ಎಂಬ ಧೈರ್ಯವನ್ನು ತುಂಬುತ್ತಾಳೆ. ಹಾಗೆಯೇ ಇವರಿಬ್ಬರ ಮುಂದುವರಿದ ಚಚರ್ೆಯಲ್ಲಿ ಸಾಕವ್ವ, ಯಮದೂತರು ಬಂದು ನಮ್ಮನ್ನು ಎಳೆದೊಯ್ಯುತ್ತೇವೆ ಎಂದರೆ ನನ್ಯಾಕ ಎಳ್ಕಂಡು ವೋದೀರಿ ಮೂದೇವ್ಗಳ ನನೇ ಬರ್ತೀನಿ ನಡೀ ಅಂತೀನಿ. ಅವರಿಗಿಂತ ಮೊದಲು ಯಮಧರ್ಮನ ಮುಂದೆ ನಾನೇ ನಿಲ್ತೀನಿ ಎಂದಾಗ ಶಿವು ಅದ್ಕೂನೂ ನಿಂಗ ಹೆದ್ರಕ ಆಗಲ್ವಾ ಎಂಬ ಮುಗ್ದ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಸಾಕವ್ವ ಅಯ್ ನರಲೋಕದಲ್ಲಿ ನಾನು ಪಟ್ಟ ಕಷ್ಟಕ್ಕಿಂತ ಆ ಸೀಕ್ಸ ಎಲ್ಲಾದ್ದು ತಗಾ ಅವ್ನ ಜೊತಲೂ ಅದ್ನೆ ಅಂತೀನಿ ಕನಾ ನನ್ನ ಅಂಥ ಮಾತನ್ನು ಕೇಳಿದ ಯಮ ನನ್ನ ಧೈರ್ಯ ಮೆಚ್ಚಿ ಏನುವರ ಬೇಕು ಕೇಳು ಅಂಥಾನೆ ಆಗ ನಾನು ನೋಡು ಸ್ವಾಮಿ ನನ್ನ ಮೊಮ್ಗೂಸು ನರಲೋಕದಲಿ ರಾಜ್ಭಾರ ಮಾಡುವಂಥ ವರ ಕೊಡು ಅಷ್ಟೆ ಸಾಕು ಅಂತೀನಿ ಎನ್ನುತ್ತಾಳೆ. ಈ ಪ್ರಸಂಗದಲ್ಲಿ ಪ್ರಮುಖವಾದ ಎರಡು ಅಂಶಗಳನ್ನು ಗಮನಿಸಿಬೇಕು. ಒಂದು: ನರಲೋಕದ ಕಷ್ಟಗಳಿಗಿಂತ ಯಮ ಲೋಕದ ಕಷ್ಟಗಳು ಏನೇನೂ ಅಲ್ಲ ಎನ್ನುವ ಮಾತು ದಲಿತರ ಬದುಕು ನರಕಕ್ಕಿಂತ ಹೀನಾಯವಾದುದು ಎಂಬ ವಾಸ್ತವ ಸತ್ಯವನ್ನು ಮನವರಿಕೆ ಮಾಡುವ ಪ್ರಯತ್ನ  ಇಲ್ಲಿದೆ. ಎರಡು: ಯಮಧರ್ಮನಲ್ಲಿ ಸಾಕವ್ವ ನನ್ನ ಮೊಮ್ಮಗ ರಾಜ್ಯಭಾರ ಮಾಡಬೇಕೆಂಬ ಬೇಡಿಕೆ ನಿಜ ಜೀವನದಲ್ಲಿ ಬೇಕಾಗಿರುವ ಆದರೆ ಅಸಾಧ್ಯವೆನಿಸುವ ಈ ಕನಸು ದಲಿತರೆಲ್ಲರ ಸ್ವಾಭಾವಿಕ ಕನಸು ಎಂಬುದನ್ನು ತಿಳಿಯಬಹುದಾಗಿದೆ. ಲೇಖಕರು ಪ್ರಜ್ಞಾಪೂರ್ವಕವಾಗಿ ಇಂಥ ಸನ್ನಿವೇಶಗಳನ್ನು ಸೃಷ್ಟಿಸುವುದರ ಮೂಲಕ ದಲಿತರ ವಿಮೋಚನೆಯ ಹಾದಿಗಳನ್ನು ಹುಡುಕುತ್ತಿದ್ದಾರೆ ಎನ್ನಬಹುದು.
ಕಥನದ ಭಾಷೆ 
        ಕನ್ನಡ ಸಾಹಿತ್ಯಕ್ಕೆ ದಲಿತ ಸಾಹಿತ್ಯವು ಒಂದು ಹೊಸ ಆಯಾಮವನ್ನೇ ತಂದುಕೊಟ್ಟಿರುವುದು ನಮೆಲ್ಲರಿಗೂ ತಿಳಿದ ವಿಷಯ. ದಲಿತ ಕುಟುಂಬಗಳ ದಿನ ನಿತ್ಯದ ವಿಷಯಗಳು ಹಾಗೂ ಪ್ರಾದೇಶಿಕ ಭಾಷೆ ಸಾಹಿತ್ಯದಲ್ಲಿ ಸ್ಥಾನವನ್ನು ಪಡೆದಿದ್ದು, ಸಾಹಿತ್ಯವು ಮುಖ್ಯ ವಾಹಿನಿಯ ವಸ್ತು ಮತ್ತು ಭಾಷೆಯ ಮೇಲೆ ಅವಲಂಬಿಸಬೇಕಾಗಿಲ್ಲ ಎಂಬ ಸ್ಪಷ್ಟ ಸಂದೇಶ ಇಲ್ಲಿದೆ. ದೇವನೂರು ಮಹದೇವ ಅವರ ಈ ಕಥನದಲ್ಲಿ ಮೈಸೂರಿನ ಪ್ರಾದೇಶಿಕ ಭಾಷೆಯ ಬಳಕೆಯಾಗಿದ್ದು ಸಂವಹನಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ದಿನ ನಿತ್ಯದ ಬಳಕೆಯ ಭಾಷೆ ಇದ್ದಾ ಹಾಗೆಯೇ ಬಳಕೆಗೊಂಡಿದೆ. ತಿಪ್ಗ ಬಂದಿದ್ದಿಕಾ ಕೂಸು ಅಷ್ಮಿಯಾ, ತಗಾ ಅದ್ಯಾರೊ ಒಬ್ಬಳು ಕುಟ್ಟೋ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ, ನಿಂಗೆ ಹೆದ್ರಕ ಆಗಲ್ವಾ, ಇಂಥ ಭಾಷೆಯ ಮೂಲಕ ದಲಿತರ ಸಮುದಾಯಗಳ ಬಳಕೆಯ ಭಾಷೆ ಕಂಡುಬರುತ್ತದೆ.
             ಒಟ್ಟಾರೆ ದೇವನೂರು ಮಹಾದೇವ ಅವರ ಒಡಲಾಳ ದಲಿತ ಲೋಕದ ಚಿತ್ರಣವನ್ನು ನೀಡುತ್ತಲೆ ಅವರ ಬದುಕಿನ ದುರಂತಗಳನ್ನು ಅನಾವರಣ ಮಾಡಿದ್ದಾರೆ. ದಲಿತರ ದುರಂತ ಸ್ಥಿತಿಯೊಳಗೆ ಇರುವ ಅವರ ಸೃಜನಶೀಲತೆಯ ಕಡೆಗೂ ಬೆರಳು ತೋರಿಸಿದ್ದಾರೆ.

ಮೂಲ:=  http://goo.gl/zNavnX



Saturday, July 13, 2013

ಗ್ರಹಣ - ಎಸ್ ಎಲ್ ಭೈರಪ್ಪ

Grahana - S L Bhyrappa



ಭಾರತೀಯ ‘ಗ್ರಹಣ’ ಎನ್ನುವುದಕ್ಕಿಂತ ಇಂಗ್ಲೀಷಿನ ‘ಎಕ್‌ಲಿಪ್ಸ್’ ಎಂಬ ಶಬ್ದವು ಹೆಚ್ಚು ವೈಜ್ಞಾನಿಕವಾದುದು ಎಂದು, ಬೌದ್ಧಿಕ ಮಾರ್ಗದರ್ಶಕರಾದ ಪ್ರಿನ್ಸಿಪಾಲರು ಭಾಷಣ ಮಾಡುತ್ತಾರೆ.

ಮತ ಧಾರ್ಮಿಕ ಆಧಾರವಿಲ್ಲದ ಶುದ್ಧ ನೀತಿಯನ್ನು ಬೆಳೆಸಲು ಯತ್ನಿಸುವ ಸ್ವಾಮಿಗಳು ಲೇಡಿ ಡಾಕ್ಟರನ್ನು ವಿವಾಹವಾಗಲು ಯತ್ನಿಸುತ್ತಾರೆ.

ತೋರಿಕೆ - ವಾಸ್ತವತೆ, ಸಂಪ್ರದಾಯ - ಹೊಸ ದೃಷ್ಟಿ, ಸತ್ಯ - ಅಸತ್ಯಗಳು ದಿಕ್ಕು ತಪ್ಪಿಸುವಂತೆ ಒಂದರೊಳಗೊಂದು ಹೆಣೆದುಕೊಂಡಿರುತ್ತವೆ. ಇವೆಲ್ಲವೂ ಪರಸ್ಪರ ಪೂರಕವಾದ ಸಂಕೇತಗಳಲ್ಲಿ ಅಭಿವ್ಯಕ್ತವಾಗಿ ಈ ಕೃತಿಯ ಆಳ ಎತ್ತರಗಳನ್ನು ಹೆಚ್ಚಿಸಿವೆ. ಜೀವನದ ಹಲವು ಮೂಲಭೂತ ಪ್ರಶ್ನೆಗಳು ಈ ಕಿರುಕಾದಂಬರಿಯಲ್ಲಿ ಸಮರ್ಥವಾಗಿ ಕಾಣಿಸಿಕೊಂಡಿವೆ.
(ಬ್ಲರ್ಬ್)


ಮಠದ ಸ್ವಾಮೀಜಿ ಇದ್ದಕ್ಕಿದ್ದಂತೆ ಮಠ ತೊರೆದು ಉತ್ತರಾಧಿಕಾರಿಯನ್ನೂ ನೇಮಿಸದೆ ಹಿಮಾಲಯಕ್ಕೆ ಹೋದ ನಂತರ ಊರಿನಲ್ಲಿ ಭೀಕರ ಮಳೆಯಿಂದಾಗ ಮಠ ಸೇರಿದಂತೆ ಹಲವು ಮನೆಗಳು ಕೊಚ್ಚಿಹೋಗಿದ್ದವು, ಏನು ಮಾಡಲು ತೋಚದ ಗೌಡರ ಕನಸಿನಲ್ಲಿ ಒಂದು ರಾತ್ರಿ ಕಾಣಿಸಿಕೊಂಡಿದ್ದ ಗುರುಗಳು ನಿನ್ನ 5 ನೇ ತಲೆಮಾರಿನಲ್ಲಿ ಮಠ ಉದ್ದಾರವಾಗುತ್ತೆ ಅಂತ ಹೇಳಿದ್ದರಂತೆ.

***********

ದಾನದಲ್ಲಿ ಎತ್ತಿದ ಕೈಯಾದ ಅಪ್ಪೇಗೌಡರು 5ನೇ ತಲುಮಾರಿನವರು, ಅವರ ಕಾಲದಲ್ಲೇ ಮಠ ಮೊದಲಿನಂತೆ ಸ್ವಾಮೀಜಿಯನ್ನು ಹೊಂದಿ ಅಷ್ಟೇ ಹೆಗ್ಗಳಿಕೆಯನ್ನು ಮರಳಿ ಪಡೆಯುವುದೆಂದು ಆ ಸಮಯಕ್ಕಾಗಿ ಕಾಯುತ್ತಿದ್ದರು..

ಅದೊಂದು ದಿನ ಊರಿಗೊಬ್ಬ ಹಿಮಾಲಯದಿಂದ ಬಂದಿದ್ದ ಸನ್ಯಾಸಿಯು ಪ್ರತಿದಿನ 7 ಮನೆಗಳಲ್ಲಿ ಬಿಕ್ಷೆ ಎತ್ತುತ್ತಿದ್ದ ವಿಷಯ ತಿಳಿದು ಅವರನ್ನು ಕಂಡೂ ಬಂದಾಯಿತು.. ಅದೇ ದಿನ ರಾತ್ರಿ ಆತನ ಕನಸಿನಲ್ಲಿ ಮಠಕ್ಕೊಬ್ಬ ಸ್ವಾಮಿ ಬಂದಿದ್ದಾನೆಂಬ ಕನಸು ಬೇರೆ..

ಶಾಸ್ತ್ರಿಗಳು, ಹಾಗೂ ಪ್ರಿನ್ಸಿಪಾಲರೊಡನೆ ಆ ಸನ್ಯಾಸಿಯ ಬಳಿ ಹೋದ ಅಪ್ಪೇಗೌಡರು ಮಠಕ್ಕೆ ಬರಲು ಬೇಡಿಕೊಂಡರು.. ಅದಕ್ಕೊಪ್ಪದ ಆತ ನಾನು ಸ್ವಾಮಿ ಯಲ್ಲ, ಅಂತ ಹೇಳಿದವನೇ ಎಲ್ಲೋ ಹೊರಟುಬಿಟ್ಟ, ಕೆಲ ದಿನಗಳ ನಂತರ ಆ ಸನ್ಯಾಸಿ ವಾಪಸು ಬಂದು ಊರಿನಲ್ಲಿ ನೆಲಸಲು ಒಪ್ಪಿದ ಕೆಲ ಷರತ್ತುಗಳೊಂದಿಗೆ, ಆ ಸನ್ಯಾಸಿಯ ಉದ್ದೇಶವೊಂದೇ ದೇವಸ್ಥಾನ ಪೂಜೆ ಪುನಸ್ಕಾರಗಳಿಗಿಂತ ಶಾಲೆ, ಆಸ್ಪತ್ರೆ ಹೀಗೆ ಜನರಿಗೆ ಉಪಕಾರವಾಗುವಂತಹ ಸೇವೆಗಳನ್ನು ಮಾಡುವುದು.. ಆದರೆ ಮಠದ ಸ್ವಾಮೀಜಿ ಅಂತ ಸನ್ಯಾಸಿ ಕರೆಸಿಕೊಳ್ಳಲು ಒಪ್ಪದೇ ಹೋದರೆ ದಾನ ಹುಟ್ಟುವುದು ಕಷ್ಟ ಮಠ ಉದ್ದಾರ ಆಗುವುದು, ಶಾಲೆ, ಕಾಲೇಜು ಕಟ್ಟುವುದು ಅಸಾದ್ಯದ ಮಾತೇ ಸರಿ ಎಂದು ಶಾಸ್ತ್ರಿಗಳು, ಅಪ್ಪೇಗೌಡರ ಮಾತಿಗೆ ಸನ್ಯಾಸಿ ಮೌನಂ ಸಮ್ಮತಿ ಲಕ್ಷ್ಮಣಂ ನಂತಿದ್ದರು….

ಕೊಡುಗೈ ದಾನಯಾದ ಅಪ್ಪೇಗೌಡರ ಸಹಕಾರದೊಂದಿಗೆ, ಶಾಸ್ತ್ರಿಗಳು, ಪ್ರಿನ್ಸಿಪಾಲರು, ಎಂ.ಎಲ್.ಎ ಚಂದ್ರಪ್ಪ ನವರು ಸ್ವಾಮೀಯ ಹೆಸರಿನ ಬಲದಿಂದಲೇ ದಾನ ಸಂಗ್ರಹಿಸಿ ಶಾಲಾ ಕಾಲೇಜು, ಆಸ್ಪತ್ರೆ ಮುಂತಾದವನ್ನು ಕಟ್ಟಿಸುವಲ್ಲಿ ಯಶಸ್ವಿಯಾದರು… ಆದರೆ ಸ್ವಾಮೀಜಿಯು ಯಾವತ್ತೂ ಸ್ವಾಮೀಜಿಯ ರೀತಿ ನಡೆದುಕೊಂಡಿದ್ದೇ ಇಲ್ಲ.. ಅಸಲಿಗೆ ಆತ ನಾನು ಸ್ವಾಮೀಜಿ ಎಂದು ಯಾರ ಬಳಿಯೂ ಬಾಯಿ ಬಿಟ್ಟು ಒಪ್ಪಿಕೊಂಡಿರಲಿಲ್ಲ.. ಅವರ ಉದ್ದೇಶವೊಂದೇ ಸಮಾಜ ಸೇವೆ… ಮಠದ ಶಿಷ್ಟಾಚಾರದಂತೆ ಅವರು ನಡೆದುಕೊಳ್ಳಲಿಲ್ಲ.. ಉಳಿದುಕೊಳ್ಳಲಿಕ್ಕೆ ಅವರೇ ಒಂದು ಗುಡಿಸಲು, ಮುಕ್ಕಾಲು ಎಕರೆಯಲ್ಲಿ ಮೈ ಬಗ್ಗಿಸಿ ಅವರೇ ಅವರ ಅನ್ನವನ್ನು ದುಡಿದುಕೊಳ್ಳುತ್ತಿದ್ದರು… ಬರ ಬರುತ್ತಾ ಅವರು ಕಟ್ಟಿದ ಸಮಿತಿಯ ಅಧ್ಯಕ್ಷಗಿರಿಯಿಂದ ಹೊರಗಿದ್ದು ಶಾಲಾ ಕಾಲೇಜುಗಳ ಜವಾಬ್ದಾರಿಯನ್ನು ನಾನಿಲ್ಲದೇ ನಡೆಯುವುದು ಕಲಿಯಬೇಕು ಅಂದರು…

ರಾತ್ರಿಯೂಟ ಮುಗಿಸಿ ಹೊರಬಂದ ಶಾಸ್ತ್ರಿಗಳಿಗೆ ಬಾಗಿಲಿನ ಬಳಿ ನಿತ್ರಾಣವಾಗಿ ಕುಳಿತುಕೊಂಡಿದ್ದ ಯಜಮಾನ ಅಪ್ಪೇಗೌಡರು ಕಾಣಿಸಿದ್ದು ನಂತರ ಅವರು ಹೇಳಿದ್ದು ಕೇಳಿ ಶಾಸ್ರ್ತಿಗಳು ಗರಬಡಿದವರಂತಾದರು… ಸ್ವಾಮೀಜಿಗಳು ವೈದ್ಯೆ ಸರೋಜಳನ್ನು ಮೋಹಿಸಿದರೇ!!!! ಅಲ್ಲಿಂದ ಶುರುವಾಗೋದೆ ಅಸಲಿ ಗ್ರಹಣ….

ಮೂಲ: - http://goo.gl/smTbE




Saturday, June 15, 2013

ಸಾಕ್ಷಿ - ಎಸ್ ಎಲ್ ಭೈರಪ್ಪ

Saakshi- S L Bhyrappa






ಒಂದು ಸುಳ್ಳನ್ನು ಹೇಳಿ ಅದರಿಂದ ಆದ ಸತ್ಯವೃತಭಂಗಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಂಡ ಪರಮೇಶ್ವರಯ್ಯ , ಗಂಡನಿಂದಲೇ ಬಲಾತ್ಕಾರಕ್ಕೊಳಗಾಗುವ ಸಾವಿತ್ರಿ , ಲೋಭಿ ಮಾವನ ಕೋಟ್ಯಾಂತರ ಆಸ್ತಿಗೆ ಒಡೆಯನಾಗುವ ಅವಕಾಶ ಬಂದರೂ ಅದರಿಂದ ಮಾವನ ಆತ್ಮಕ್ಕೆ ಶಾಂತಿ ಸಿಗಲಾರದೇನೋ ಎಂದು ೬.೫ ಲಕ್ಷ ರೂಪಾಯಿಗಳನ್ನು ಮಾವನ ಚಿತೆಯೊಂದಿಗೆ ಸುಟ್ಟು ಹಾಕುವ ರಾಮಕೃಷ್ಣಯ್ಯ , ಗಾಂಧಿವಾದದ ಕನಸ್ಸಿನಲ್ಲಿ ವರ್ತಮಾನದೊಂದಿಗೆ ರಾಜಿಯಾಗಲು ಹೆಣಗಾಡಿ ,ಮಾಡಿದ ಒಂದು ತಪ್ಪಿಗೆ ಪ್ರಾಯಶ್ಚಿತ್ತ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕೊನೆಯ ಕ್ಷಣದಲ್ಲಿ ಸಾವಿಗೆ ಅರ್ಥ ಕಾಣದೇ ಹಿಂತಿರುಗಿ ಬಂದು ತನ್ನದೇ ದಾರಿಯಲ್ಲಿ ಗ್ರಾಮಾಭಿವೃದ್ಧಿಗೆ ಪ್ರಯತ್ನಿಸುವ ಸತ್ಯನಾರಾಯಣಪ್ಪ ಇವರುಗಳ ಸುತ್ತ ಹೆಣೆಯಲ್ಪಟ್ಟ ಕಥೆ ಹೆಸರೇ ಹೇಳುವಂತೆ ಒಂದು ಸಾಕ್ಷಿಯ ’ಪ್ರಜ್ಞೆ’ಯ ಸುತ್ತ ಹಬ್ಬಿಕೊಳ್ಳುತ್ತದೆ. ತಾನಾಡಿದ ಸುಳ್ಳಿನ (ನಿಜವೆಂದರೆ ಸತ್ಯವನ್ನಾಡದೇ ಸುಮ್ಮನುಳಿದ) ಪರಿಣಾಮ ಮತ್ತಿಷ್ಟು ಘೋರ ಎಂದು ಭಾವಿಸಿ , ನಿಜವಾದ ಪರಿಣಾಮವನ್ನು ತಿಳಿಯದೇ ತನ್ನನ್ನು ಶಿಕ್ಷಿಸಿಕೊಂಡ ಪರಮೇಶ್ವರಯ್ಯನ ಪ್ರೇತಕ್ಕೆ ನಿಯಂತೃನು, ನಿಜವನ್ನು ತಿಳಿವ ಅವಕಾಶ ಕೊಟ್ಟು ಭೂಮಿಗೆ ಕೇವಲ ಸಾಕ್ಷಿ ಮಾತ್ರ ಅಸ್ತಿತ್ವದಲ್ಲಿ ಕಳಿಸಿದಾಗ , ಯಾವ ಕರ್ಮ ಮತ್ತು ಯಾರ ಭಾವಗಳನ್ನು ಬದಲಾಯಿಸಲಾಗದ ಆ ಪ್ರೇತ ನೊಡುವ ಅದರ ಮಾನವ ಜನ್ಮದ ಸಂಬಂಧಿಕರ ಬದುಕಿನ ಚಿತ್ರಣವೇ ’ಸಾಕ್ಷಿ’ .


ಬದುಕಿನಲ್ಲಿ ಸಾಕಷ್ಟು ನೋವನ್ನುಂಡು ಅದರಲ್ಲಿಯೂ ಸತ್ತವರ ಮರ್ಯಾದೆ ತೆಗೆಯುವ ಹಕ್ಕು ತನಗಿಲ್ಲ ಎಂದು ಮೌನಕ್ಕೆ ಶರಣಾಗಿ , ಸತ್ಯವೇ ತನ್ನ ಜೀವನಾಧಾರ ಎಂದು ಭಾವಿಸಿ ಬದುಕಿದ ಪರಮೇಶ್ವರಯ್ಯ ಮಗಳ ಹಠಕ್ಕೆ ಮಣಿದು ತನಗೆ ಸರ್ವಥಾ ಇಷ್ಟವಿಲ್ಲದೇ ಇದ್ದರೂ ಮಾಡುವ ( ಮಾಡಲು ತನ್ನ ನಿರ್ಲಿಪ್ತಿಯಿಂದಲೇ ಒಪ್ಪುವ) ಎರಡು ಕಾರ್ಯಗಳು ಇಡೀ ಕುಟುಂಬದ ಮೇಲೆ ಬೀರುವ ಪರಿಣಾಮಗಳು ೩೨೦ ಪುಟಗಳ ಕಥೆಯನ್ನೇ ಕಟ್ಟಿ ಕೊಡುತ್ತದೆ . ಮೊದಲನೆಯದಾಗಿ ಪರಮೇಶ್ವರಯ್ಯ ತನ್ನ ನಿವೃತ್ತ್ಯಾತ್ಮಕ ಪ್ರವೃತ್ತಿಗೆ ಕಾರಣವಾದ ಮಂಜಯ್ಯನನ್ನು ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಮಗಳಿಗೆ, ತನ್ನ ಸೌಮ್ಯ ಪ್ರಕೃತಿಗೆ ವಿರುದ್ಧವಾಗಿ ನಾಲ್ಕು ಹೊಡೆದರೂ ಕೇಳದೇ ಹೋದಾಗ, ಮತ್ತೆ ನಿರ್ಲಿಪ್ತವಾಗುವ ಮೂಲಕ ಆದ ಅಪಚಾರಕ್ಕೆ ಪರೋಕ್ಷವಾಗಿ ಒಪ್ಪಿಗೆ ಕೊಟ್ಟಂತಾಯಿತೇ ? ಎರಡನೆಯದಾಗಿ ಅದೇ ಮಂಜಯ್ಯ ಒಂದು ಕೊಲೆ ಮಾಡಿ ಬಂದು ಸುಳ್ಳು ಸಾಕ್ಷಿಯನ್ನು ಹೇಳಲು ಕೇಳಿಕೊಂಡಾಗ , ಅದರಿಂದ ಮಗಳ ಬಾಳಿಗೆ ಎಲ್ಲಿ ಸಹಾಯವಾಗುತ್ತದೆಯೇನೋ ಎಂಬ ಭಾವನೆಯೂ ಬಂದೇ ಒಪ್ಪಿಕೊಂಡಿದ್ದೇ?


ಯೌವ್ವನದ ಆವೇಶದಲ್ಲಿ ಸ್ಫುರದ್ರೂಪಿ ಮಂಜಯ್ಯನನ್ನು ಮದುವೆಯಾಗುತ್ತೇನೆ ಎಂದು ಹಠ ಹಿಡಿದು , ಅಪ್ಪ ಅಣ್ಣ ಎಷ್ಟು ಹೇಳಿದರೂ ಕೇಳದೇ ಮದುವೆಯಾಗಿ ನಂತರ ಅವನಿಂದ ಮೋಸಕ್ಕೊಳಗಾದಾಗ ಅದೇ ಹಠದಿಂದ ಶಿಕ್ಷಕಿಯಾಗಿ ಬೇರೆಯಾಗಿಯೇ ಉಳಿದು ಮಾನಸಿಕವಾಗಿ ಬೆಳೆಯುವ ಸಾವಿತ್ರಿ ಒಂದರ್ಥದಲ್ಲಿ ದುರಂತ ನಾಯಕಿ . ಮುಂದೆ ತನ್ನ ತಾಯಿಯ ಬಗ್ಗೆ ಮಾತು ಕೆಟ್ಟ ಮಾತು ಬಂದಾಗ ತಾಯಿ ಸತ್ತ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವ ಆಕೆ , ಹಠದ ಪ್ರತೀಕವಾಗಿ ನಿಲ್ಲುತ್ತಾಳೆ. ನಾವು ಮಾತಾಡುವ ೯೦% ಭಾಗಕ್ಕಿಂತ ಹೆಚ್ಚು ಮಾತು ಕೇವಲ ’ವ್ಯರ್ಥ’ ಎಂದೂ , ಮಾತಿಗಿಂತಲೂ ಮೌನವೇ ಹೆಚ್ಚು ಸಶಕ್ತವಾಗಿ ಭಾವನೆಗಳನ್ನು ವ್ಯಕ್ತಪಡಿಸಬಲ್ಲದೆಂದೂ ಬಹು ಬೇಗ ಕಂಡುಕೊಂಡು ಪಾಲಿಸಿಕೊಂಡು ಬಂದ ರಾಮಕೃಷ್ಣಯ್ಯ ಅದ್ಭುತ ಆದರ್ಶವಾಗಿ ನಿಲ್ಲುತ್ತಾರೆ. ಮಾವನ ಅತಿ ಜಿಪುಣತನದ ಬಗ್ಗೆ ಮದುವೆಯ ದಿನವೇ ಹೇಸಿಕೆ ಹುಟ್ಟಿದರೂ ತೋರಿಸಿಕೊಳ್ಳದೇ , ಇದ್ದ ಒಬ್ಬನೇ ಮೊಮ್ಮಗನಿಗೂ ಮಾವ ವಾಸದ ಖರ್ಚನ್ನು ಕೇಳಿದಾಗ ಇದ್ದ ಜಮೀನು ಮಾರಿ ಋಣಮುಕ್ತನಾಗುವ ಆತನೇ ಮುಂದೆ ತನ್ನ ಕೈಯಾರೆ ದುಡ್ಡನ್ನು ಹಾಕಿ ಮಾವನ ಅಂತಿಮ ಕರ್ಮಗಳನ್ನು ನಿರ್ವಂಚನೆಯಿಂದ ಮಾಡಿ ಮತ್ತೆ ಋಣಮುಕ್ತ(?)ನಾಗುತ್ತಾನೆ. ತನ್ನ ಹೆಂಡತಿ ಇಷ್ಟು ವರ್ಷ ದಾಂಪತ್ಯ ಮಾಡಿದರೂ ಮೌಲ್ಯಗಳನ್ನು ಕಲಿಯಲಿಲ್ಲವೆಂದು ಹತಾಶೆಯಿಂದ ಸಂದರ್ಭಕ್ಕನುಸಾರವಾಗಿ ಹೊಡೆಯುವ ರಾಮಕೃಷ್ಣಯ್ಯ , ತನ್ನ ಮಗನೇ ಪರ-ಧನಕ್ಕೆ ಆಸೆ ಪಟ್ಟು ಅಜ್ಜನ ಆಸ್ತಿಯನ್ನು ಆಳುತ್ತೇನೆ ಎಂದಾಗಲೂ ಸ್ಥಿಮಿತ ಕಳೆದುಕೊಳ್ಳುವುದಿಲ್ಲ , ಮುಂದೊಮ್ಮೆ ಮಂಜಯ್ಯನ ಅಂತಿಮಸಂಸ್ಕಾರ ಮಾಡಬೇಕಾಗಿ ಬಂದಾಗಲೂ , ಮಗನೂ ಮಂಜಯ್ಯಂತೆಯೇ ಸ್ತ್ರೀಲೋಲನಾದಾಗಲೂ. ಎಲ್ಲರೂ ತಾತ್ವಿಕವಾಗಿ ವಿರೋಧಿಸಿದರೂ ಯಾವ ಸಿಟ್ಟಿನ ಪೂರ್ವಾಗ್ರಹವಿಲ್ಲದೇ ತನಗೆ ಅಷ್ಟೆಲ್ಲಾ ದ್ರೊಹ ಬಗೆದ ಮಂಜಯ್ಯನ ಕರ್ಮಗಳನ್ನು ಮಾಡಲು ಮುಂದಾಗುವ ರಾಮಕೃಷ್ಣಯ್ಯ, ಮನುಷ್ಯ ಹೀಗೂ ಇರಲು ಸಾಧ್ಯವೇ ಎನ್ನಿಸಿಬಿಡುತ್ತಾನೆ.



ಗಾಂಧಿಯಿಂದ ಬಹಳೇ ಪ್ರಭಾವಿತವಾಗಿ , ಸತ್ಯ ಮತ್ತು ಚಾರಿತ್ರ್ಯದ ಬಗ್ಗೆ ಆಗಾಗ ಆತ್ಮಾವಲೋಕನ ಮಾಡಿಕೊಳ್ಳೂತ್ತಿದ್ದರೂ , ಒಂದು ದುರ್ಬಲ ಕ್ಷಣದಲ್ಲಿ ಮೋಹದ ಬಲೆಯಲ್ಲಿ ಬಿದ್ದು ’ಸುಳ್ಳಾಡುವ ’ ಸತ್ಯನಾರಾಯಣಪ್ಪ ಅದರಿಂಟಾದ ಉದ್ಭವವಾದ ಸುಳ್ಳಿನ ಸರಪಳಿಯಿಂದ ಚಾರಿತ್ರ್ಯನಷ್ಟವಾಯಿತೆಂದು ಬಗೆದು ಇದಕ್ಕಿಂತ ಸಾವೇ ಶ್ರೇಷ್ಟವೆಂದು ತಿಳಿಯುತ್ತಾನೆ . ಆದರೆ ಸಾವಿನಿಂದ ಯಾವ ಪುರುಷಾರ್ಥವನ್ನೂ ಕಂಡುಕೊಂಡಂತಾಗುವುದಿಲ್ಲ ಎಂಬ ಜ್ಞಾನೋದಯ ಅಂತಿಮ ಕ್ಷಣದಲ್ಲಾಗಿ , ಕಾಯಿ-ಕಳ್ಳರಾಗಿದ್ದ ಒಂದು ಹಟ್ಟಿಯ ಜನರ ಅಭಿವ್ರದ್ದಿಗೆ ಉಳಿದ ಜೀವನ ಮುಡಿಪಾಗಿಡುವ ಮೂಲಕ ಬದುಕಿಗೆ ಅರ್ಥವನ್ನೂ , ಅವರ ಬಾಳಿಗೆ ಮಾರ್ಗವನ್ನೂ ಕಂಡುಕೊಳ್ಳುತ್ತಾನೆ .


ಕೆಟ್ಟದ್ದನ್ನು ಕೆಟ್ಟದ್ದು ಎಂದು ಹೇಳಲು , ಕೆಟ್ಟದ್ದನ್ನು ಕಲಾವಿದ ಚಿತ್ರಿಸುವುದು ತಪ್ಪಲ್ಲವಾದರೂ ಕೆಲವೊಮ್ಮೆ ಅಶ್ಲೀಲತೆಯು( ವೈಭವೀಕರಿಸದೇಹೋದರೂ ) ಅಗತ್ಯಕ್ಕಿಂತ ಜಾಸ್ತಿಯೇ ಕಥೆಯಲ್ಲಿ ಹಾಸುಹೊಕ್ಕಿದೆ ಎನ್ನಿಸುವುದು ಸುಳ್ಳಲ್ಲ.ಆ ಕಾರಣಕ್ಕಾಗಿಯೇ ಮಂಜಯ್ಯನ ಪಾತ್ರ ಬಹುಮುಖ್ಯವಾದರೂ ನಾನು ವಿಷ್ಲೇಶಣೆ ಮಾಡದೇ ಬಿಡುತ್ತಿದ್ದೇನೆ. ರಾಮಕೃಷ್ಣಯ್ಯ , ಪರಮೇಶ್ವರಯ್ಯನಂತಹ ಪಾತ್ರಗಳು ಹೇಗೆ ಮೇರು ವ್ಯಕ್ತಿತ್ವವನ್ನು ಪ್ರತಿನಿಧಿನಿಸುತ್ತವೆಯೋ ಹಾಗೆಯೇ ಮಂಜಯ್ಯನ ಪಾತ್ರ ಅತಿ ಹೀನವಾಗಿ ಭ್ರಷ್ಟತೆಯ ರಸಾತಳವನ್ನು ಮುಟ್ಟುತ್ತದೆ . ಒಟ್ಟಾರೆಯಾಗಿ ವಿವಿಧ ಪಾತ್ರಗಳ ಪ್ರಥಮ ಪುರುಷದಲ್ಲಿ (ಮಾಮೂಲಿ ಎಸ್.ಎಲ್.ಭೈರಪ್ಪನವರ ಶೈಲಿಯಂತೆ ) ಸಾಗುವ ಕಾದಂಬರಿಯು ಒದುಗನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತದೆ

ಮೂಲ :-  goo.gl/Q0P6k


Tuesday, May 28, 2013

ಮಂದ್ರ - ಎಸ್ ಎಲ್ ಭೈರಪ್ಪ

Mandra- S L Bhyrappa



ಯಾವುದೇ ಕಾದಂಬರಿಯನ್ನು ಒಮ್ಮೆ ಕೈಯಲ್ಲಿ ಹಿಡಿದರೆ ಮುಗಿಸುವವರೆಗೆ ಬಿಡಲಾರದ ಆಸಕ್ತಿ ಹುಟ್ಟಲು ಕಾರಣವೇನು ? ಅದರ ಭಾಷಾ ಪ್ರಯೋಗವೇ, ವಸ್ತುವೇ, ಕಥೆಯ ಹಂದರವೇ, ಪಾತ್ರಗಳ ನಡೆಯೇ ಎಂದು ನೋಡುವಾಗ, ಅದು ಯಾವುದೇ ಒಂದೆರಡು ಕಾರಣಗಳಿಗೆ ಸೀಮಿತವಾಗುವುದಿಲ್ಲ. ಅಂತಹ ಹಲವಾರು ಕಾರಣಗಳಿಂದಾಗಿ ಒಂದು ಕತಿ ಓದುಗರಲ್ಲಿ ಕಟ್ಟಿಕೊಡುವ ಒಟ್ಟಾರೆ ಅನುಭವ ಅಂದರೆ, ತಾದಾತ್ಮ್ಯ ಭಾವವೇ ಅದರ ಸಾಫಲ್ಯಕ್ಕೆ ಕಾರಣವಾಗುತ್ತದೆ. ಸಷ್ಟಿಪೂರ್ವದಲ್ಲಿ ಕವಿಯಲ್ಲಿ ಮೆತೋರುವ ರಸಭಾವಗಳು ಸಹದಯ ಓದುಗರಲ್ಲಿಯೂ ಅಂತಹದೇ ರಸ ಸಂವೇದನೆಗಳನ್ನು ಉದ್ದೀಪನಗೊಳಿಸುವುದು ಅಪೂರ್ವ ಸಿದ್ಧಿ. ಅಂತಹ ಸಿದ್ಧಿಯನ್ನು ಸಾಧಿಸಿರುವ ಬೆರಳೆಣಿಕೆಯ ಕವಿ/ಲೇಖಕರಲ್ಲಿ ಎಸ್.ಎಲ್.ಭೆರಪ್ಪ ಒಬ್ಬರು ಎನ್ನುವುದಕ್ಕೆ ಅವರ ಅಸಂಖ್ಯಾತ ಓದುಗರೇ ಸಾಕ್ಷಿ. ಅದರೊಂದಿಗೆ ಈಗ ಅವರಿಗೆ ಸಂದಿರುವ ಪ್ರತಿಷ್ಠಿತ ಸರಸ್ವತಿ ಸಮ್ಮಾನದ ಪುಷ್ಟಿಯೂ ದೊರೆತಿದೆ. ಈ ಸಮ್ಮಾನಕ್ಕೆ ನೇರ ಕಾರಣವಾಗಿರುವ ಅವರ ಮಂದ್ರದಲ್ಲಿ ಮೊದಲಿನಿಂದ ಕೊನೆಯವರೆಗೂ ಬೇರೆಲ್ಲಾ ರಸಭಾವಗಳಿಗಿಂತಲೂ ಸಾಂದ್ರವಾಗಿ ಹರಿಯುವ ಸಂಗೀತ ಝರಿಯಲ್ಲಿ ಸಹದಯ ಓದುಗರು ಮುಳುಗುತ್ತಾ ತೇಲುತ್ತಾ ಆರ್ದ್ರವಾಗುತ್ತಾರೆ.

ಜೀವನದ ವಿವಿಧ ಮಜಲುಗಳ ಸತ್ಯದರ್ಶನ ಮಾಡಿಸುತ್ತಾ ಮಂದ್ರದ ಚಿಕ್ಕ ದೊಡ್ಡ ಪಾತ್ರಗಳನ್ನು ಆವರಿಸುತ್ತಾ ಸಾಗುವ ವಿಶಾಲವಾದ ಸಂಗೀತದ ಹರವಿನಿಂದ ಈಚೆ ನಿಂತು ಇಲ್ಲಿನ ಸ್ತ್ರೀ ಪಾತ್ರಗಳ ಮೂಲಕ ಅಭಿವ್ಯಕ್ತವಾಗಿರುವ ವೌಲ್ಯ ಸಂಘರ್ಷದತ್ತ ಒಂದು ಕಿರು ನೋಟಬೀರುವ ಆಶಯ ಇಲ್ಲಿದೆ.

'ನನಗೆ ಯಾವ ಪಂಥದಲ್ಲಿಯೂ ವಿಶ್ವಾಸವಿಲ್ಲ' ಎನ್ನುವ ಭೆರಪ್ಪನವರು ಎಲ್ಲಾ ಪಂಥಗಳ ತಿರುಳನ್ನೂ ಸಾರವತ್ತಾಗಿ ಗ್ರಹಿಸಿ, ಅವೆಲ್ಲವನ್ನೂ ಮೀರಿನಿಂತು, ತನ್ನದೇ ಆದ ಸ್ವತಂತ್ರ ಹಾದಿಯಲ್ಲಿ ಸಾಗಿ ಬಂದಿದ್ದಾರೆ. ನಾಲಕ್ಕೂವರೆ ದಶಕಗಳಿಂದಲೂ ಸಾಹಿತ್ಯ ಸಷ್ಟಿಸುತ್ತಿರುವ ಭೆರಪ್ಪನವರನ್ನು ನಮ್ಮ ಪಾರಂಪರಿಕ ವೌಲ್ಯಗಳಲ್ಲಿರುವ ಗಟ್ಟಿತನ ಹಾಗೂ ಕಾಲಾಂತರದಲ್ಲಿ ಅದರ ಸುತ್ತಲೂ ಸಷ್ಟಿಯಾಗಿರುವ ಹಲವು ಆವರಣಗಳು ಬಹುವಾಗಿ ಕಾಡುತ್ತವೆ ಎನ್ನುವುದು ನನ್ನ ವೆಯಕ್ತಿಕ ಅನಿಸಿಕೆ. ಈ ಪಾರಂಪರಿಕ ವೌಲ್ಯಗಳು ಮಹಿಳೆಯರ ಮೇಲೆ ಹೇರಿರುವ ಒತ್ತಡಗಳು ಹಾಗೂ ಅವುಗಳಿಂದ ಹೊರಗೆ ಬರಲು ತವಕಿಸುವ ಆಧುನಿಕ ಮಹಿಳೆಯ ಇಬ್ಬಂದಿತನವನ್ನು ಇವರ ಹಲವು ಕತಿಗಳು ಬಿಚ್ಚಿಡುತ್ತವೆ. 'ವಂಶವಕ್ಷ'ದ ಕಾತ್ಯಾಯನಿಯಿಂದ ಹಿಡಿದು 'ಮಂದ್ರ'ದ ಮಧುಮಿತಾಳವರೆಗೆ ಈ ತಳಮಳ ಓದುಗರನ್ನು ಆರ್ದ್ರಗೊಳಿಸುತ್ತದೆ.

'ಮಂದ್ರ'ದಲ್ಲಿ ಅನೀತಿಯ ವೆಭವೀಕರಣವಾಗಿದೆ ಎನ್ನುವ ಆಪಾದನೆ ಅಲ್ಲಲ್ಲಿ ಕೇಳಿಬಂದಿದೆ. ಆದರೆ, ಯಾವುದು ನೀತಿ ? ಯಾವುದು ಅನೀತಿ ? ಇದನ್ನು ನಿರ್ಧರಿಸುವುದು ಸಮಾಜವೇ ಅಥವಾ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಅಂತಃ ಪ್ರಜ್ಞೆಯೇ ? ಸಮಾಜ ನಿರ್ಧರಿಸುವ ನೀತಿ ಸಂಹಿತೆ ಸಾರ್ವಕಾಲಿಕ ಸತ್ಯವಂತೂ ಅಲ್ಲ ಎನ್ನುವುದನ್ನು ನಮ್ಮ ಚರಿತ್ರೆ ನಮಗೆ ತಿಳಿಸುತ್ತಿದೆ. ಮಹಾಭಾರತದ ಆದಿ ಭಾಗದಲ್ಲಿ ಸಮಾಜಕ್ಕೆ ಒಪ್ಪಿತವಾದ ನಿಯೋಗ ಪದ್ಧತಿ ಹಾಗೂ ಕಾನೀನ ಮಕ್ಕಳು ನಂತರ ಚರ್ಚಾಸ್ಪದವಾಗುವುದನ್ನು ಭೆರಪ್ಪನವರ 'ಪರ್ವ' ಎತ್ತಿ ತೋರಿಸುತ್ತದೆ. ಪರ್ವ ಪ್ರಾರಂಭವಾಗುವುದೇ ಈ ಬದಲಾಗುತ್ತಿದ್ದ ವೌಲ್ಯಗಳ ಚರ್ಚೆಯಿಂದ ಎನ್ನುವುದನ್ನು ಗಮನಾರ್ಹ. ನಂತರ, ದುರ್ಯೋಧನ ತನ್ನ ತಂದೆಯ ಹುಟ್ಟಿನ ಹಿಂದಿರುವ ಸತ್ಯವನ್ನು ತಿಳಿದರೂ, ಪಾಂಡವರ ಹುಟ್ಟಿನ ಬೇರನ್ನೇ ಅಲ್ಲಾಡಿಸುತ್ತಾ , ಅದನ್ನೇ ತನ್ನ ನೀತಿ ಸಂಹಿತೆಯಾಗಿಸುತ್ತಾನೆ. ಈ ಹಿನ್ನೆಲೆಯಲ್ಲಿ, ವಂಶವಕ್ಷದ ಕಾತ್ಯಾಯನಿಯಿಂದ ಮಂದ್ರದ ಮಧುಮಿತಾಳವರೆಗಿನ ನಾಲಕ್ಕು ದಶಕಗಳ ಕಾಲಘಟ್ಟದಲ್ಲಿ ನಮ್ಮ ಸಮಾಜದಲ್ಲಿ ಬದಲಾಗುತ್ತಿರುವ ವೌಲ್ಯಗಳನ್ನೂ ಹಾಗೂ ಅವುಗಳಿಗೆ ಸ್ಪಂದಿಸುತ್ತಾ ತಮ್ಮ ಅಂತಃ ಪ್ರಜ್ಞೆಯನ್ನು ಗಟ್ಟಿಗೊಳಿಸುತ್ತಾ ಸಾಗಿರುವ ಮಹಿಳೆಯರ ನಾನಾ ಮುಖಗಳನ್ನೂ ತೆರೆದಿಟ್ಟಿರುವ ಭೆರಪ್ಪನವರ ಸಾಹಿತ್ಯದಲ್ಲಿರುವ ಒಳನೋಟ ನನಗೆ ಮುಖ್ಯವಾಗುತ್ತದೆ. ಸಮಕಾಲೀನ ಸಮಾಜಕ್ಕೆ ಒಪ್ಪಿಗೆಯಾಗಿರಲಿ ಬಿಡಲಿ ನಮ್ಮ ಸುತ್ತ ಮುತ್ತ ಕಾಣುವ ಮಹಿಳೆಯರ ನೆತಿಕ ಬಲವನ್ನು ಗುರುತಿಸಿ ಅದು, ವಿಕಾಸದ ಹಾದಿಯಲ್ಲಿರುವುದನ್ನು ಭೆರಪ್ಪನವರು ತಮ್ಮ ಸ್ತ್ರೀ ಪಾತ್ರಗಳ ಮೂಲಕ ದಾಖಲಿಸುತ್ತಾರೆ.

'ಮಂದ್ರ'ದಲ್ಲಿ ಪ್ರಧಾನ ಪಾತ್ರ ಸಂಗೀತವೇ ಎನ್ನುವುದು ಮೇಲಿನ ನೋಟಕ್ಕೇ ತೋರುವುದಾದರೂ , ಅದರ ಹಿಂದೆ ಮುಂದೆ ನಡೆಯುವ ನೀತಿ-ಅನೀತಿಗಳ ದೊಂಬರಾಟಗಳು ಓದುಗರನ್ನು ಬಹಳವಾಗಿ ಕಾಡುತ್ತವೆ. ಮೊದಲಿನಿಂದ ಕೊನೆಯವರೆಗೂ ಇಲ್ಲಿ ವಿಜಂಭಿಸುವುದು ಸಂಗೀತದ ಝೇಂಕಾರ. ಅದರ ಔನ್ನತ್ಯದಲ್ಲಿ ಮತ್ತೆಲ್ಲವೂ, ಪ್ರೇಮ-ಕಾಮಗಳೂ ಕುಬ್ಜವಾಗಿಬಿಡುತ್ತವೆ. ಮೋಹನಲಾಲನ ಕಾಮವಾಸನೆಯಂತೆಯೇ ಮಧುಮಿತಾಳ ವೈವಾಹಿಕ ಜೀವನದ ಹಂಬಲವೂ ಕೂಡ ವ್ಯಾವಹಾರಿಕ ಸ್ತರದಲ್ಲಿಯೇ ಉಳಿದುಬಿಡುತ್ತದೆ. ಬೇರೆಲ್ಲಾ ಭಾವಗಳನ್ನೂ ಮೀರಿ ನಿಲ್ಲುವುದು ಸಂಗೀತದ ಒಲವು. ಇದು ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಆವರಿಸಿಕೊಂಡು ಕುಣಿಸುತ್ತದೆ. ಮನೋಹರಿ ದಾಸ್ ಅಂತಹವರು ಕಲಾ ಪ್ರಪಂಚದಲ್ಲಿ ಅದರಲ್ಲಿಯೂ ಚಲನಚಿತ್ರರಂಗದಲ್ಲಿ ಸಾಮಾನ್ಯವಾಗಿ ಕಾಣುವುದರಿಂದ ವಿಶೇಷವೆನಿಸುವುದಿಲ್ಲ. ಎಲ್ಲೆಡೆಯೂ ಚರ್ಚೆಗೆ ಗ್ರಾಸವಾಗಿರುವುದು ಮಧುಮಿತಾಳ ಜೀವನದಲ್ಲಿ ನುಗ್ಗಿ ಬರುವ ಸುನಾಮಿಯಂತಹ ಅಲೆಗಳು. ಅದರಲ್ಲಿ ಅವಳು ಸಿಲುಕಿಯೂ ಸಿಲುಕದಂತೆ ತೇಲುತ್ತಾ ಮುಳುಗುತ್ತಾ ತನ್ನ ಮೂಲ ಗುರಿಯನ್ನು ಸಾಧಿಸುವುದು ಆಧುನಿಕ ಮಹಿಳೆಯಲ್ಲಿ ವಿಕಾಸವಾಗಿರುವ ಅಂತಃಸತ್ತ್ವದ ದ್ಯೋತಕವಾಗುತ್ತದೆ.

ಮಂದ್ರದಲ್ಲಿ ಪ್ರಮುಖವಲ್ಲದ ಪಾತ್ರ ಎಂದೆನಿಸುವ ಮೋಹನಲಾಲನ ಹೆಂಡತಿ ರಾಮಕುಮಾರಿಯ ಪಾತ್ರವೂ ಓದುಗರಲ್ಲಿ ಬೆರಗನ್ನೂ ಮೆಚ್ಚುಗೆಯನ್ನೂ ಸಷ್ಟಿಸುತ್ತಾ ಸಾಗುತ್ತದೆ. ಓದು-ಬರಹ ಕಾಣದ ಹಳ್ಳಿಯ ಬಡ ಹೆಣ್ಣು ರಾಮಕುಮಾರಿ ಮೋಹನಲಾಲನನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದು ಅವನಿಂದ ಪರಿತ್ಯಕ್ತಳಾಗಿ ದೂರವೇ ನಿಂತವಳು. ತನ್ನ ಸಂಸಾರ ಸಾಕಲು ಅಡಿಗೆ ಕೆಲಸಕ್ಕೆ ನಿಂತ ಮನೆಯ ಯಜಮಾನ, ಗೋರೆ ಅವಳಿಗೆ ಸುಲಭವಾಗಿ ಕೆಲಸ ಕೊಟ್ಟದ್ದೇ , ಅವಳು ಮಹಾಗಾಯಕ ಮೋಹನಲಾಲನ ಮಡದಿ ಎಂದು ತಿಳಿದಮೇಲೆ. ಸಂಗೀತಗಾರನ ವೆಯಕ್ತಿಕ ಬದುಕಿನ ಬಗ್ಗೆ ಚಿಂತಿಸದೆ, ಅವನು ತನ್ನ ಸಂಗೀತದಲ್ಲಿ ಹೊರಹೊಮ್ಮಿಸುವ ಉದಾತ್ತ ಭಾವದಲ್ಲಿ ಮಿಂದು ಪುಳಕಗೊಳ್ಳಬಲ್ಲಂತಹ ಸಂಗೀತ ಪ್ರೇಮಿ ಹಾಗೂ ಸಂಗೀತಗಾರರ ಪೋಷಕರಾದ ಗೋರೆಯವರದು ಉದಾತ್ತ ಪಾತ್ರ. ಅಂತಹ ಪ್ರಾಮಾಣಿಕ ಗಹಸ್ಥನಿಗೂ ತನ್ನಲ್ಲಿ ಕೆಲಸಕ್ಕಿರುವ ರಾಮಕುಮಾರಿಯೊಂದಿಗೆ ಸಂಬಂಧ ಬೆಳೆಸುವ ಆಸೆ ಚಿಗುರಿ ಅವಳನ್ನು ಕೇಳಿಯೂ ಬಿಡುತ್ತಾನೆ. ಬೇರೆ ಯಾವ ದಿಕ್ಕೂ ಕಾಣದಂತಹ ಪರಿಸ್ಥಿತಿಯಲ್ಲಿ, ತನ್ನ ಸಂಸಾರ ಸಾಗಲು ನೆರವಾದ, ಹಲವಾರು ವರ್ಷಗಳಷ್ಟು ಕಾಲ ಸಭ್ಯತೆಯ ಎಲ್ಲೆಯನ್ನು ದಾಟದಿದ್ದ ತನ್ನ ಧಣಿ ಗೋರೆಸಾಹೇಬರಲ್ಲಿ ಪರಮ ಪೂಜ್ಯ ಭಾವ ತೆಳೆದಿದ್ದ ರಾಮಕುಮಾರಿಗೆ ಒಮ್ಮಿಂದೊಮ್ಮೆಗೇ ಬಂದ ಅವನ ಬೇಡಿಕೆ ದಿಗ್ಭ್ರಮೆ ಹುಟ್ಟಿಸುತ್ತದೆ. ಅಂತಹ ವಿಷಮ ಪರಿಸ್ಥಿತಿಯನ್ನು ದಾಟಲು ಅವಳಿಗೆ ನೆರವಾಗುವುದು ಅವಳು ಕಟ್ಟಿಕೊಂಡು ಬಂದ ಪಾರಂಪರಿಕ ವೌಲ್ಯಗಳು.

ಈಗ, ಸಾಹಿತ್ಯಾಸಕ್ತರಲ್ಲಿ ಬಹು ಚರ್ಚಿತವಾಗಿರುವ ಮಧುಮಿತಾಳ ಪಾತ್ರ ಸಷ್ಟಿಯನ್ನು ನೋಡೋಣ. ಮಧುಮಿತಾ ತನ್ನ ಗುರುವಿನ ಕಾಮದಾಹಕ್ಕೆ ಬಲಿಯಾಗುವುದನ್ನು ಅವಳ ನೆತಿಕ ಪತನವೆಂದು ವಿಚಾರಗೋಷ್ಠಿಗಳಲ್ಲಿ ಹಾಗೂ ಸಂವಾದದಲ್ಲಿ ಕೇಳಿಬಂದದ್ದು ಆ ಪಾತ್ರ ಬೆಳೆದು ಬಂದ ನಿಲುವಿಗೆ ಸರಿ ಎನಿಸುವುದಿಲ್ಲ. ಆಗ ತಾನೇ ಕಾಲೇಜಿನ ಓದು ಮುಗಿಸಿದ್ದ ನವ ಯುವತಿ ಮನಸೋಲುವಂತಹ ಯಾವುದೇ ಬಾಹ್ಯ ಆಕರ್ಷಣೆ ಮೋಹನಲಾಲನಲ್ಲಿ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಹರೆಯ ಮೀರಿದ, ಹಲ್ಲುಗಳ ಮೂಲಕ ತಂಬಾಕಿನ ಒರಟು ವಾಸನೆ ಬೀರುವ ವಿಷಯ ಲಂಪಟನಾದ ಅರವತ್ತು ವರ್ಷಗಳ ಮುದುಕ ಮೋಹನಲಾಲ್. ಅವನು ಸಂಗೀತದಲ್ಲಿ ಸಾಧಿಸಿದ್ದ ಶಕ್ತಿ ಅಪ್ರತಿಮ. ಸ್ವರಗಳನ್ನು ಹಿಂಜಿ ಹಿಂಜಿ ರಾಗದ ರಸವನ್ನು ಹೊರತೆಗೆಯುವುದಷ್ಟೇ ಅಲ್ಲದೆ, ತಾನು ಸಾಧಿಸಿದ್ದನ್ನು ವಿದ್ಯಾರ್ಥಿಗಳಿಗೆ ಉಣಬಡಿಸಬಲ್ಲ ಸಮರ್ಥ ಗುರು. ಸಂಗೀತ ಸಾಧನೆಯನ್ನೇ ಜೀವನದ ಗುರಿಯಾಗಿಸಿಕೊಂಡ ಮಧುಮಿತಾಳಿಗೆ ಇದ್ದ ವಿಕಲ್ಪ ಎರಡೇ ಎರಡು. ಅಂತಹ ಗುರು ಹೇಳಿದ್ದಕ್ಕೆ ತಲೆ ಬಾಗುವುದು ಅಥವಾ ಸಂಗೀತ ಸಾಧನೆಗೆ ತಿಲಾಂಜಲಿ ಬಿಡುವುದು.

ಸಾಂಪ್ರದಾಯಿಕತೆಯ ಮಡಿಲಲ್ಲಿ, ಸುಖ-ಸಮದ್ಧಿಯ ತೊಟ್ಟಿಲಲ್ಲಿ ಬೆಳೆದ ಸುಸಂಸ್ಕತ ಮನೆತನದ ಮಧುಮಿತಾಳ ಜೀವನದಲ್ಲಿ ಬಂದ ಮೊದಲ ಸುನಾಮಿ ಅಲೆಯೇ ಮೋಹನಲಾಲನ ಕಾಮವಾಸನೆಗೆ ಆಹಾರವಾಗುವುದು. ಅವಳು ಅದಕ್ಕೆ ಒಪ್ಪುವುದು ಸುಲಭವಾಗಿರಲಿಲ್ಲ. ಗುರುವಿನ ನಿರ್ಲಜ್ಜ ಕಾಮನೆಗೆ ಅವಳಲ್ಲಿ ಮೊದಲು ಹುಟ್ಟಿದ್ದು ಕೋಪ-ಅಸಹ್ಯ-ಜಿಗುಪ್ಸೆ. ಸಂಗೀತ ಕಲಿಯದಿದ್ದರೆ ಏನಾಯಿತು ? ನೀತಿಯನ್ನೇ ಕಳೆದುಕೊಂಡು ಬದುಕಿದರೆ ಏನು ಸುಖ ? ಎಂಬ ಆಲೋಚನೆಯಲ್ಲಿ ಎರಡು ದಿನ ಕಳೆದು ಸಂಗೀತವನ್ನು ಮರೆತು, ಸಾಹಿತ್ಯಾಭ್ಯಾಸ ಮಾಡುವ ನಿರ್ಧಾರದಿಂದ ಕಾದಂಬರಿ ಓದಲು ತೊಡಗಿದ ಮಧುಮಿತಾ ಗುರುವಿನ ಮುಖ ಮುರಿಯಲಿಕ್ಕೆಂದೇ ತನ್ನ ಪಾಠಕ್ಕೆ ನಿಗದಿಯಾದ ದಿನ ಹೋಗಿ 'ಶಿಷ್ಯೆ ಅಂದರೆ ಮಗಳ ಸಮಾನ ಅಲ್ಲವೇ ?' ಎಂದು ಕೇಳುತ್ತಾಳೆ. ಅದಕ್ಕೆ ಮೋಹನಲಾಲನದು ತಣ್ಣಗಿನ ಪ್ರತಿಕ್ರಿ0ೆು. ಯಾವ ಭಾವಾವೇಶವೂ ಇಲ್ಲದ ಅದೇ ಕಾಮನೆ .. ಬಲವಂತವೇನೂ ಇಲ್ಲವೆಂದು ನಿರ್ಧಾರದ ಎಲ್ಲಾ ಭಾರವನ್ನೂ ಅವಳ ಮೇಲೇ ಹಾಕುವ ವ್ಯಾವಹಾರಿಕ ಚಾಣಾಕ್ಷತನ.

ಮತ್ತೆರಡು ದಿನಗಳಲ್ಲೇ, ಕಥೆ-ಕಾದಂಬರಿ ಓದುವುದು ಬರಡು ಎನಿಸಿ, ಬೇರೆ ಗುರುಗಳನ್ನು ಅರಸಿ ಅಲ್ಲಿಯೂ ನಿರಾಶಳಾಗಿ, ಮತ್ತೆ ಮತ್ತೆ , ಮೋಹನಲಾಲನಂತಹ ಗುರುವಿನಲ್ಲಿಯೇ ಸಂಗೀತ ಕಲಿಯಬೇಕೆನ್ನುವ ಅದಮ್ಯ ಆಸೆಯೇ ಹೆಚ್ಚಾಗಿ ಮನಸ್ಸು ಅವನು ಬಯಸಿದ ಅನಿವಾರ್ಯ ಸಂಬಂಧಕ್ಕೆ ಸಿದ್ಧವಾಗುತ್ತದೆ. ' ಇವನದು ನೇರವಾಗಿ ಭಾವ ಸಾಗರವನ್ನು ಹೊಗಿಸಿ ಮುಳುಗಿಸಿಬಿಡುವ ವಿಧಾನ... ಬೇರೆ ಯಾರ ಗಾಯನದಲ್ಲಿಯೂ ಈ ಶಕ್ತಿ ಇಲ್ಲ...ಉಜ್ಜುಗಿಸುವ ಕಸುವಿಲ್ಲ...' ಎಂದು ಮನಸ್ಸು ತನ್ನದೇ ವಾದವನ್ನು ಮುಂದಿಟ್ಟು , ಸಂಗೀತ ಒಂದು ಗಂಧರ್ವ ವಿದ್ಯೆ , ಹಾಗಾಗಿ ತಮ್ಮದು ಗಾಂಧರ್ವ ವಿವಾಹ ಎಂದುಕೊಳ್ಳುವ ಸಮರ್ಥನೆಗೆ ಬಂದು ಮುಟ್ಟುವಲ್ಲಿ ಆರು ತಿಂಗಳು ಕಳೆದುಹೋಗಿ, ತನ್ನ ಸಂಗೀತ ಸಾಧನೆಗೆ ಅಷ್ಟು ವಿಳಂಬವಾಯಿತು ಎಂದು ಕೊರಗುವ ಮಧುಮಿತಾಳ ನಿರ್ಧಾರದಲ್ಲಿ ಓದುಗರೂ ತನ್ಮಯತೆಯಿಂದ ಭಾಗಿಗಳಾಗುವಂತೆ ಮಾಡುವ ರಸಸಷ್ಟಿ ಭೆರಪ್ಪನವರ ಸಿದ್ಧಹಸ್ತದಲ್ಲಿ ನಳಪಾಕವಾಗಿಸಿದೆ. ಇಲ್ಲಿ ಯಾವ ಅನೀತಿಯೂ ಕಾಣುವುದಿಲ್ಲ.

ಅಷ್ಟರಲ್ಲಾಗಲೇ, ಚಂಪಾಳ ದಬ್ಬಾಳಿಕೆಯನ್ನು ಸಹಿಸಿ, ಮನೋಹರಿ ದಾಸಳಿಂದ ಅವಹೇಳನಕ್ಕೆ ಗುರಿಯಾಗಿ ಇನ್ನು ಯಾವುದೇ ರೀತಿಯ ಬಂಧನವೂ ಬೇಡವೆಂದು ನಿರ್ಧರಿಸಿದ್ದ ಮನೋಹರಲಾಲ, ಆಗಲೂ ಯಾವ ಭಾವಾವೇಶಕ್ಕೂ ಒಳಗಾಗುವುದಿಲ್ಲ. ಮತ್ತೆ, ವಿವಾಹಿತಳಾದ ಮಧುಮಿತಾಳನ್ನು ಅಮೆರಿಕದಲ್ಲಿ ತನ್ನ ಭಾವೋದ್ದೀಪನಕ್ಕೆ ಒತ್ತಾಯಿಸಿದಾಗಲೂ ತನ್ನ ಸ್ವಾರ್ಥ ಸಾಧನೆಯೊಂದೇ ಅವನ ಗುರಿ. ಮಧುಮಿತಾಳಿಗೆ ಮಾತ್ರ ತನ್ನ ಬಾಳಿನಲ್ಲಿ ಮತ್ತೊಮ್ಮೆ ಇನ್ನೂ ಬಲವಾಗಿ ಬಂದೆರಗಿದ ಸುನಾಮಿ ಅಲೆಯನ್ನು ತಡೆದುಕೊಳ್ಳುವ ತ್ರಾಣ ಉಳಿದಿರುವುದಿಲ್ಲ. ಅಲ್ಲಿಯೂ ಸಂಗೀತವೇ ಗೆಲ್ಲುತ್ತದೆ. ಆದರೆ ಅದಕ್ಕೆ ಎರವಾಗುವುದು ಅವಳ ಸಾಂಸಾರಿಕ ಬಂಧನ. ಇಬ್ಬಂದಿ ಜೀವನದ ಒತ್ತಡವನ್ನು ತಾಳಲಾಗದೆ, ಮತ್ತೆ ಸಂಗೀತಕ್ಕೇ ಪೂರ್ಣವಾಗಿ ಅರ್ಪಿಸಿಕೊಳ್ಳಲು ಸಂಸಾರ ತೊರೆದು ಬಂದ ಮಧುಮಿತಾಳಿಗೆ, ಗುರುವಿನ ನಿರಾಕರಣೆ ಮೊದಲಿಗೆ ಆಘಾತಕರವಾದರೂ, ಅಷ್ಟರಲ್ಲಿ ಪ್ರಬುದ್ಧತೆಗೆ ಏರಿದ್ದ ಅವಳ ಮನಸ್ಸು, ಅಂತಃಸತ್ತ್ವವನ್ನು ಬೆಳೆಸಿಕೊಂಡು ಕೊನೆಗೆ ಗುರಿಸಾಧಿಸುವಲ್ಲಿ ಸಾಫಲ್ಯ ಹೊಂದುತ್ತದೆ ಎನ್ನುವಲ್ಲಿ ಭೆರಪ್ಪನವರು ಕಟ್ಟಿಕೊಡುವ ರಸಪಾಕ ಪೂರ್ಣವಾಗುತ್ತದೆ.

ವೆಯಕ್ತಿಕ ಭದ್ರ ಜೀವನದ ಹಲವು ಸುಖ-ಸೌಕರ್ಯಗಳನ್ನು ಬಲಿತೆತ್ತು, ಸಂಗೀತದ ಸಾಧನೆಯಲ್ಲಿ ತನ್ನ ಗುರಿ ಸಾಧಿಸಿದ ಪರ್ವಕಾಲದಲ್ಲಿಯೂ ಮಧುಮಿತಾಳಿಗೆ ಗಂಡನ ನೆನಪು ಕಾಡುವುದು ಅವನ ಮೇಲಿನ ಪ್ರೇಮದಿಂದಲ್ಲ... ಅಲ್ಲಿಯೂ ವಿಜಂಭಿಸುವುದು ಸಂಗೀತ ಪ್ರೇಮವೇ.. ಗಂಡ ವಿಕ್ರಮ ತನ್ನಿಂದಾಗಿ, ಅವನಿಗೆ ಪ್ರಿಯವಾದ ಸಂಗೀತದಿಂದ ವಂಚಿತನಾದ ಎನ್ನುವಂತಹ ಅವಳ ಕೊರಗೂ ಕೂಡ ಸಂಗೀತ ಅವಳನ್ನು ಆವರಿಸಿರುವ ಆಳವನ್ನು ಸೂಚಿಸುತ್ತದೆ. ಮಧುಮಿತಾಳ ನಿರ್ಧಾರಗಳಿಗೆ ನೀತಿ ಸಂಹಿತೆಯನ್ನು ತೊಡಿಸಿ, ಕೋರ್ಟಿನಲ್ಲಿ ನ್ಯಾಯಾಧೀಶರಂತೆ ನಿರ್ಣಯಕ್ಕೆ ಕೂತರೆ, ಓದುಗ ಅಲ್ಲಿ ಸಿಗುವ ರಸಾನುಭವದಿಂದ ವಂಚಿತನಾಗುತ್ತಾನೆ. ಇದು, ನಾನು ಕಂಡು ಮೆಚ್ಚಿದ ಮಂದ್ರದ ಪಾರ್ಶ್ವ ನೋಟ.

ಯಾವುದೇ ಸಜನಾತ್ಮಕ ಕ್ರಿಯೆಯಲ್ಲಿ ಸಹದಯ ಓದುಗ ಅರಸುವುದು ಕಾವ್ಯ ಕಟ್ಟಿಕೊಡುವ ರಸಾನುಭವವನ್ನು. ಕವಿಗಳು (ಸಾಹಿತಿಗಳು) ಸಹಜವಾಗಿಯೇ, ತಾವು ಕಂಡು ಕೇಳಿ ಅರಿತ ಸಮಾಜ ದರ್ಶನವನ್ನು ತಮಗೆ ಒಗ್ಗಿದ ಪ್ರಕಾರದಲ್ಲಿ ಹೊರಗಿಡುತ್ತಾರೆ. ಅಲ್ಲಿ ಬಳಕೆಯಾಗುವ ತಂತ್ರ ಹಾಗೂ ಭಾಷೆ ವೆಯಕ್ತಿಕವಾದರೂ, ಒಂದು ಕತಿಯ ಅಂತಿಮ ಅಭಿವ್ಯಕ್ತಿ ಕತಿಕಾರನ ವೆಯಕ್ತಿಕ ನಿಲುವಿನ ಪ್ರತಿಬಿಂಬವಾಗಬೇಕಿಲ್ಲ. ಬಹಳಷ್ಟು ಬಾರಿ ಹಾಗೆ ಆಗುವುದೂ ಇಲ್ಲ. ಕತಿಕಾರ ತನ್ನ ಅನುಭವವನ್ನು ಸಾಕ್ಷಿಪ್ರಜ್ಞೆಯೊಂದಿಗೆ ನೋಡಿ ಅಭಿವ್ಯಕ್ತಿಸಿದಾಗ ಅದು, ಬಹುಜನರ ಹದಯವನ್ನು ತಟ್ಟುತ್ತಾ ಬಹುಕಾಲ ನಿಲ್ಲಬಲ್ಲದು. ಹಾಗಾಗಿಯೇ ಭೆರಪ್ಪನವರು, ಇಂದು ಬರುವ ಯಾವುದೇ ರೀತಿಯ ಋಣಾತ್ಮಕ ವಿಮರ್ಶೆಗಳಿಂದ ವಿಚಲಿತಗೊಳ್ಳದೆ, ಯಾವುದೇ ಕತಿಯು ಎಷ್ಟು ದಶಕಗಳು ನಿಲ್ಲುತ್ತವೆ ಎನ್ನುವುದರಿಂದ ಅದರ ವೌಲ್ಯ ನಿರ್ಧಾರವಾಗುತ್ತದೆ ಎನ್ನುತ್ತಾರೆ.

ಪ್ರಸಕ್ತ ಶಕೆಯ ಎಂಟನೆಯ ಶತಮಾನದಲ್ಲಿದ್ದ 'ಉತ್ತರ ರಾಮಚರಿತಂ' ಎಂಬ ಉತಷ್ಟ ನಾಟಕವನ್ನು ರಚಿಸಿದ ಕವಿ, ಭವಭೂತಿ ತನ್ನ ನಾಟಕದ ಪ್ರಾರಂಭದಲ್ಲಿ, *ಉತ್ಪತ್ಸ್ಯತೇಸ್ತಿ ಮಮ ಕೋಪಿ ಸಮಾನಧರ್ಮಾ ಕಾಲೋಹ್ಯಯಂ ನಿರವಧಿರ್ವಿಪುಲಾ ಚ ಪಥ್ವೀ - ಯಾರಿಗೆ ಸಹದಯತೆಯ ಅರಿವಿಲ್ಲವೋ ಅವರು ಈ ಕತಿಯಿಂದ ದೂರವಿರಲಿ. ಈ ಭೂಮಿಯೂ ವಿಶಾಲವಾಗಿದೆ. ಕಾಲಕ್ಕೂ ಕೊನೆಯೆಂಬುದಿಲ್ಲ (ನಿರವಧಿ). ನನಗೆ ಸಮಾನಧರ್ಮನಾದ ಯಾವನಾದರೂ ಸಹದಯ ಎಂದಾದರೂ (ಎಲ್ಲಿಯಾದರೂ) ಹುಟ್ಟಿಬರುವನು* ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ.

ನಮ್ಮ ರಾಷ್ಟ್ರಕವಿ ಕುವೆಂಪುರವರೂ, 'ನಾನೇರುವಾ ಎತ್ತರಕೆ ನೀನೇರಬಲ್ಲೆಯಾ ನಾನಿಳಿವಾ ಆಳಕ್ಕೆ ನೀನಿಳಿಯಬಲ್ಲೆಯಾ' ಎಂದು ವಿಮರ್ಶಕರತ್ತ ಸವಾಲು ಹಾಕಿದ್ದು ಎಲ್ಲಾ ಕಾಲದಲ್ಲಿಯೂ ಕವಿಗಳಿಗೂ ವಿಮರ್ಶಕರಿಗೂ ಇರುವಂತಹ ಸಂಬಂಧ ಎಂತಹುದೆಂಬುದನ್ನು ತಿಳಿಸುತ್ತದೆ. ಹಾಗಾಗಿ, ಅಂತಹ ವಿಮರ್ಶಕರನ್ನು ಹೊರತು ಪಡಿಸಿದರೂ, ತಮ್ಮ ಜೀವಿತಾವಧಿಯಲ್ಲಿಯೇ, ಸಹದಯರ ಪ್ರೀತಿಯನ್ನು ಪಡೆಯುವ ಲೇಖಕರು ವಿರಳವೆನ್ನುವುದು ಎಲ್ಲಾ ಕಾಲಕ್ಕೂ ಅನ್ವಯಿಸುವ ಮಾತು. ಅಂತಹ ಪ್ರೀತಿಗೆ ಭಾಜನರಾಗಿರುವ ಭೆರಪ್ಪನವರ ಮಂದ್ರದಲ್ಲಿ ಕಾಣುವ ಒಂದು ಪಾರ್ಶ್ವ ನೋಟವನ್ನು ಇಲ್ಲಿಡುವುದು ನನ್ನ ಆಶಯ.

ಮೂಲ:- http://tinyurl.com/mandrareview


Saturday, January 12, 2013

ಮರಳಿ ಮಣ್ಣಿಗೆ - ಶಿವರಾಮ ಕಾರಂತ



ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ಪಡೆದ ಸಾಹಿತ್ಯದಾಕರಗಳಲೊಂದು. ಈ ಕಾದಂಬರಿಯಲ್ಲಿ ಕಾರಂತರು ಕರಾವಳಿ ತೀರ ಪ್ರದೇಶದ ಐತಾಳ ಕುಟುಂಬವೊಂದರ ತಲೆಮಾರನ್ನು ಕೇಂದ್ರಬಿಂದುವಾಗಿರಿಸಿಕೊಂಡು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಎಣೆದಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿಯ ತೀರ ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೆ ಕರೆದೊಯ್ಯತ್ತದೆ.


ಕೋದಂಡರಾಮ ಐತಾಳರ ಮಗ ರಾಮ ಐತಾಳರು ನಾರಾಯಣ ಮಯ್ಯನವರ ಮಗಳು ಪಾರ್ವತಿಯನ್ನು ವಿವಾಹವಾಗುವುದರಿಂದ ಕಥೆಯು ಪ್ರಾರಂಭವಾಗುತ್ತದೆ. ಇವರೀರ್ವರ ಮದುವೆಯಾದ ಕಲವೇ ವರುಷಗಳಲ್ಲಿ ಇಬ್ಬರು ಬೀಗರು ಅಂದರೆ ಕೋದಂಡರಾಮ ಐತಾಳರು ಹಾಗೂ ನಾರಾಯಣ ಮಯ್ಯನವರು ಕಾಲವಶವಾಗಿಬಿಡುತ್ತಾರೆ. ಮನೆಯ ಜವಾಬ್ದಾರಿ ಹಾಗೂ ಅಪ್ಪನಿಂದ ಬಳುವಳಿಯಾಗಿ ಬಂದ ಪೌರೋಹಿತ್ಯದ ಕೆಲಸವು ರಾಮ ಐತಾಳರ ಹೆಗಲ ಮೇಲೆ ಬೀಳುತ್ತದೆ. ರಾಮ ಐತಾಳರದು ಸ್ವಲ್ಪ ಆಸೆಬುರಕ ಸ್ವಭಾವ, ಪೌರೋಹಿತ್ಯದಲ್ಲಿ ತಮಗೆ ಸಿಕ್ಕ ಯಾವ ವಸ್ತುವನ್ನೂ ಬಿಡದೆ ಎಲ್ಲವನ್ನೂ ಮನೆಗೆ ಬಾಚಿಕೊಂಡು ಬರುತ್ತಿರುತ್ತಾರೆ. ಚಿಕ್ಕವಯಸಿನಲ್ಲೇ ತನ್ನ ಗಂಡನನ್ನು ಕಳೆದಕೊಂಡು ರಾಮ ಐತಾಳರ ತಂಗಿ ಸರಸ್ವತಿ ತನ್ನ ತೌವರು ಮನೆಯಲ್ಲೇ ಇರುತ್ತಾಳೆ. ರಾಮ ಐತಾಳರು ಹಾಗೂ ಪಾರ್ವತಿ ದಂಪತಿಗಳಿಗೆ ಮಕ್ಕಳಾಗದ ಕಾರಣ ರಾಮ ಐತಾಳರು ಸತ್ಯಭಾಮೆ ಎನ್ನುವ ಕನ್ಯೆಯನ್ನು ವಿವಾಹವಾಗಿತ್ತಾರೆ. ಈ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ. ಆ ಮಗುವಿಗೆ ಲಕ್ಷ್ಮಿ ನಾರಾಯಣ (ಲಚ್ಚ) ಎಂಬ ಹೆಸರನ್ನು ಇಡುತ್ತಾರೆ. ಆ ಲಚ್ಚನೇ ಮರಳಿ ಮಣ್ಣಿಗೆ ಕಾದಂಬರಿಯ ಪ್ರಮುಖ ಪಾತ್ರಧಾರಿ. ಅವನು ಐತಾಳರ ಕುಟುಂಬಕ್ಕೆ ಕೀರುತಿ ತರುತ್ತಾನೋ ಇಲ್ಲ ಅಪಕೀರುತಿಯನ್ನು ತರುತ್ತಾನೋ ಅಲ್ಲದೆ ತನ್ನ ಪತ್ನಿಯಾಗಿ ಬರುವ ಸುಸಂಸ್ಕೃತ ಸಂಪ್ರಾದಯದ ಮನೆತನದ ಹುಡುಗಿ ನಾಗವೇಣಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದೇ ಈ ಕಾದಂಬರಿಯ ಪ್ರಮುಖ ತಿರುಳು.


ಕಾರಂತರು ಕಥೆಯನ್ನು ಎಳೆ ಎಳೆಯಾಗಿ ಬರೆದಿದ್ದಾರೆ. ಈ ಕಥೆಯಲ್ಲಿ ಕಡಲತೀರದ ಜನರ ಆಚಾರ-ವಿಚಾರವಿದೆ, ಕನ್ನಡ ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಹರಿದು ಬಂದಿರುವ ಹೊಸಹೊಸ ನುಡಿಮುತ್ತುಗಳಿವೆ, ಹಾಗೇನೇ ಪ್ರಾಯದ ಯುವಕರ ಕೆಡುಕಿನ ವಿಚಾರವೂ ಇದೆ, ಇವೆಲ್ಲಕ್ಕಿಂತ ಮಿಗಿಲಾಗಿ ಹೆಂಗಳೆಯರು ಹೊರಗಿನ ಕೆಲಸಕಾರ್‍ಯಗಳಲ್ಲಿ ಗಂಡಸರಿಗಿಂತ ಕಡಿಮೆ ಇಲ್ಲ ಎಂಬುದನ್ನು ತಿಳಿಸುವ ಮಾರ್ಮಿಕ ಸಂದೇಶವಿದೆ ಹಾಗೂ ಅವರು ಸಂಸಾರದಲ್ಲಿ ಅನುಭವಿಸುವ ಒಣ ನೋವುಗಳ ವ್ಯಾಕ್ಯಾನವಿದೆ. ನಿಜ ಹೇಳಬೇಕೆಂದರೆ ನಲವಿಗಿಂತ ನೋವೇ ಕಾರಂತರ ಈ ಕಥೆಯಲ್ಲಿದೆ. ಕೊನೆಯಲ್ಲಿ ನಗುವಿನ ಆಶಾಕಿರಣವೊಂದನ್ನು ಹುಟ್ಟಿಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.


ಮೂಲ:- http://goo.gl/u4DZv


ಮರಳಿ ಮಣ್ಣಿಗೆ ಕೃತಿಯು ಕಾರಂತರ ಮೊದ ಮೊದಲ ಬರವಣಿಗೆಗಳಲ್ಲಿ ಒಂದು. ೧೯೪೧ ನಲ್ಲಿ ಮೊದಲ ಮುದ್ರಣ ಕಂಡ ಈ ಪ್ರತಿ ಇಂದಿಗೂ ಕಾರಂತರ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿ ಕಾರಂತರು ತಮ್ಮನ್ನು ತೊಡಗಿಸಿಕೊಳ್ಳದ ವಿಷಯವೇ ಇಲ್ಲವೇನೋ.. ಬರವಣಿಗೆ, ಸಮಾಜ ಸೇವೆ, ಯಕ್ಷಗಾನ ಕಲೆ, ಪರಿಸರವಾದ, ಬಾಲವನ, ರಾಜಕೀಯ ಚಿಂತನೆ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಪಾಂಡಿತ್ಯ ಸಾಧಿಸಿದ್ದರು. ಅವರ ಬರವಣಿಗೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಕಾಳಜಿ ಹಾಗು ಪರಿಸರ ಪ್ರೇಮ ವ್ಯಕ್ತವಾಗುತ್ತಿತ್ತು… 'ಮರಳಿ ಮಣ್ಣಿಗೆ' ಸಾಮಾಜಿಕ ಕಾದಂಬರಿಯೂ ಅದಕ್ಕೆ ಹೊರತಾಗಿಲ್ಲ.



 ಸರಳವಾಗಿ ಹೇಳುವುದಾದರೆ 'ಮರಳಿ ಮಣ್ಣಿಗೆ' ಕಾದಂಬರಿ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಇದ್ದಂತಹ ಒಂದು ಗ್ರಾಮೀಣ ಕುಟುಂಬದ ಮೂರು ತಲೆಮಾರಿನ ಕತೆ. ಅಂದಾಜಿನ ಪ್ರಕಾರ, ಕತೆ ನಡೆದ ಕಾಲಮಾನ ೧೮೬೦ - ೧೯೪೦ ನಡುವಿನ ೬೦ - ೭೦ ವರ್ಷಗಳು. ದಕ್ಷಿಣ ಕನ್ನಡದ ಸಾಲಿಗ್ರಾಮ - ಕೋಟ ಸುತ್ತಮುತ್ತಲ ವ್ಯಾಪ್ತಿಯ ಹದಿನಾಲ್ಕು ಕೂಟ ಗ್ರಾಮಗಳಾದ ಕೋಡಿ, ಕನ್ಯಾನ, ಮಂದರ್ತಿ, ಹಂಗಾರುಕಟ್ಟೆ ಇತ್ಯಾದಿ ಊರುಗಳ ಹಿನ್ನಲೆಯಲ್ಲಿ, ಆ ಪ್ರದೇಶಕ್ಕೆ ಸೀಮಿತವಾಗಿರುವ 'ಕೋಟ' ಆಡು ಭಾಷೆಯನ್ನೇ ಬಳಸಿ, ಅತ್ಯಂತ ಸುಂದರವಾಗಿ ಪ್ರಾದೇಶಿಕ ವೈಶಿಷ್ಟ್ಯತೆ ಎತ್ತಿ ಹಿಡಿಯುತ್ತ, ಈ ಸಾಮಾಜಿಕ ಕಾದಂಬರಿಯನ್ನು ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದಾರೆ ನಮ್ಮ ಕಾರಂತರು. ಈ ಕಾದಂಬರಿ ಮೊದಲು ಪ್ರಕಟಣೆಗೊಂಡಿದ್ದು ೧೯೪೧. ತದ ನಂತರ ಸುಮಾರು ಬಾರಿ ಮರು ಪ್ರಕಟಣೆಗೊಂಡಿದೆ. ಒಂದು ಶತಕದಷ್ಟು ಹಿಂದಿನ ಪುಸ್ತಕವಾದರೂ, ಇದರಲ್ಲಿ ಎತ್ತಿ ಹಿಡಿದಂತಹ ವಿಚಾರಗಳು, ಮೌಲ್ಯಗಳು, ಸಮಸ್ಯೆಗಳು, ತರ್ಕ ತಾಕಲಾಟಗಳು ಇಂದಿಗೂ ಪ್ರಸ್ತುತವೇ ಆಗಿವೆ.

 ಕತೆ ಶುರುವಾಗುವುದು ಪಾರೋತಿಯ (ಪಾರ್ವತಿಯ ರೂಢಿನಾಮ) ಲಗ್ನದ ವಿವರಣೆಯೊಂದಿಗೆ. ಜೇಷ್ಠ ಮಾಸದ ಜೋರು ಮಳೆಯಲ್ಲೇ ಮದುವೆಯಾಗಿ ರಾಮ ಐತಾಳರ ಮನೆ ತುಂಬುವ ಪಾರೋತಿಯ ಮುಂದಿನ ಬಾಳೆಲ್ಲ ಬರಿ ಬಿಡುವಿಲ್ಲದ ದುಡಿತ. ಮನೆ ಒಳ ಹೊರ ಕೆಲಸಗಳನೆಲ್ಲ ಬರೋಬ್ಬರಿ ನಿಭಾಯಿಸಿ, ಗಂಡನ ಇಷ್ಟಾನಿಷ್ಟ, ಕೋಪ-ತಾಪ, ಧೂರ್ತತೆಯನೆಲ್ಲ ಸಹಿಸುತ್ತ, ನಿರಂತರ ನಿರ್ಲಕ್ಷ್ಯದಲ್ಲೇ ನೊಂದರು ತುಟಿ ಪಿಟಕ್ ಎನ್ನದೆ ಬೇರೆಯವರ ಹಿತಕ್ಕಾಗಿ ಒಂದೇ ಸಮ ದುಡಿವ ಪಾರೋತಿ, ಒಂದರ್ಥದ ಸತಿ ಸಾವಿತ್ರಿ, ಆದರ್ಶ ಪತ್ನಿ! ಸಂತಾನಕ್ಕಾಗಿ ಸದಾ ಹಂಬಲಿಸಿ ಅದು ಕೈಗೂಡದೆ ಮನ ನೊಂದಿರುವ ಹೆಣ್ಣಾದರೂ ಸವತಿಯ ಮಗನನ್ನು ಸ್ವಂತ ಕೂಸಿಗಿಂತ ಹೆಚ್ಚಾಗಿ ಹಚ್ಚಿಕೊಂಡಂತ ಮಾತೃ ಹೃದಯ ಉಳ್ಳವಳು. ಪಾರೋತಿಯ ಸಹವರ್ತಿ, ಹಿತೈಷಿ, ಸ್ನೇಹಿತೆ, ಸಮಾನದುಖಿ ಎಲ್ಲವೂ ಆಗಿರುವುದು ರಾಮ ಐತಾಳರ ಏಕಮೇವ ಸಹೋದರಿ ಬಾಲ ವಿಧವೆಯಾದ ಸರಸೋತಿ (ಸರಸ್ವತಿಯ ರೂಢಿನಾಮ). ಪಾರೋತಿಯಂತೆ ಹೊಲ ಮನೆ ಕೃಷಿ ಕೆಲಸದಲ್ಲಿ ಅವಿರತ ದುಡಿಮೆಯಲ್ಲೇ ಅಣ್ಣನ ಮನೆಗಾಗಿ ಜೀವ ಸವೆಸಿದರು, ಪಾರೋತಿಯಂತೆ ಮೂಕವಾಗಿ ನಿರ್ಲಕ್ಷ್ಯ ಸಹಿಸಲಾರಳು. ಕೆಲಸದಲ್ಲಿ ಗಟ್ಟಿಗಿತ್ತಿ, ಮಾತಲ್ಲಿ ಹದ ತಪ್ಪಳು ಆದರೆ ಏನೊಂದು ತಪ್ಪು ಎಂದು ಕಂಡಲ್ಲಿ ಅಣ್ಣನನ್ನು ಖಂಡಿಸದೆ ಇರಲಾರಳು... ತೀರ ಅಧರ್ಮ ಎನಿಸಿತೋ ಮನೆ ಬಿಟ್ಟು ಹೊರಟೇ ಬಿಟ್ಟಾಳು. ಸರಸೋತಿಯು, ಸಂಪ್ರದಾಯ ಮೀರದೆ ಕೆಂಪು ಸೀರೆ ಬೋಳು ತಲೆ ಒಂದು ಹೊತ್ತು ಊಟದ ಚೌಕಟ್ಟಲ್ಲೇ ಕಾಲ ಕಳೆದರು, ಆ ಕಾಲಮಾನಕ್ಕೆ ಅಪರೂಪವೆನಿಸುವ ನೇರ ನಡೆ ನುಡಿಗಳ ದಿಟ್ಟ ಮಹಿಳೆ, ಸಶಕ್ತೆ! 



 ಇನ್ನು ರಾಮ ಐತಾಳರು ತಮ್ಮ ಪರಂಪರಾಗತ ಕುಲಕಸುಬಾದ ಪೌರೋಹಿತ್ಯ ಪೂಜೆ ಪುನಸ್ಕಾರದ ಹೊರತು ಬೇರೆ ಯಾವ ಕೆಲಸಕ್ಕು ತಲೆ ಹಾಕರು. ಹಾಗಂತ ಮನೆಯ ಆಡಳಿತ, ಅಧಿಕಾರ, ದರ್ಬಾರು ಯಾರಿಗೂ ಬಿಟ್ಟು ಕೊಡರು. ಮನೆ ಹೆಂಗಸರ ದುಡಿಮೆಯನ್ನು ತಾವು ಗಂಟು ಕಟ್ಟುತ್ತ, ಅವರನ್ನೇ ನಿಕೃಷ್ಟವಾಗಿ ಕಾಣುತ್ತ ತಮ್ಮ ದೌಲತ್ತು ಮೆರೆಸುವಂತ ದುರುಳರು. ಇಂತಹ ರಾಮ ಐತಾಳರು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಶೀನ ಮೈಯ್ಯರ ಪಾರುಪತ್ಯದಲ್ಲಿ ಎರಡನೇ ಮದುವೆ ಮಾಡಿಕೊಂಡು ಸತ್ಯಭಾಮೆಯನ್ನು ಮನೆ ತುಂಬಿಸಿಕೊಳ್ಳುವರು. ಕಾಲಕ್ರಮದಲ್ಲಿ ಅವರಿಗಿಬ್ಬರು ಮಕ್ಕಳು ಆಗುವವು. ಅದೇ ರೀತಿ ರಾಮ ಐತಾಳರ ಮಗನಾದ ಲಕ್ಷ್ಮಣ, ಅವನ ಪತ್ನಿ ನಾಗವೇಣಿ ಹಾಗು ಸುಪುತ್ರ ರಾಮನ ಬದುಕಿನ ಆಗುಹೊಗುಗಳೇ ಮುಂದಿನೆರಡು ತಲೆಮಾರಿನ ಕತೆ.



 ರಾಮ ಐತಾಳರು ಆ ಕಾಲದ ದ್ವಂದ್ವದ ಪ್ರತೀಕ ಎನ್ನಬಹುದು. ಒಂದೆಡೆ ತಲೆತಲಾಂತರದಿಂದ ಬಂದ ರೂಢಿ ಪದ್ಧತಿ ಅನುಶಾಸನ ಕಟ್ಟುಪಾಡುಗಳ ಬಿಡಲಾಗದ ಪರಿಸ್ಥಿತಿ. ಇನ್ನೊಂದೆಡೆ ಬದಲಾವಣೆಯ ಗಾಳಿಯ ಒತ್ತಡಕ್ಕೆ ಸಿಲುಕಿ ಸಾಮಾಜಿಕ ಸ್ಥಾನ ಮಾನ ಮನ್ನಣೆ ಭದ್ರತೆಯ ಕಡೆಗೆ ಒಲವು, ಅದಕ್ಕಾಗಿ ತುಡಿತ. ಈ ತೂಗು ಮನಸ್ಥಿತಿಯಿಂದಾಗಿ ಮಗನನ್ನು ಪದ್ದತಿಯಂತೆ ಮಠ ಶಿಕ್ಷಣಕ್ಕೆ ಕಳುಹಿಸದೆ ಇಂಗ್ಲಿಷ್ ಶಾಲೆ ಸೇರಿಸಿದರೂ, ಎಲ್ಲೋ ಒಂದು ಅಳುಕು ಕಾಡುತ್ತದೆ. ಮಗ ಕೈ ತಪ್ಪಿ ಹೋದಮೆಲಂತೂ ಅಪರಾಧಿ ಪ್ರಜ್ಞೆ ಭಾದಿಸುತ್ತದೆ. ಅದೇ ತರಹ ಸಾಮಾಜಿಕವಾಗಿ ದೊಡ್ಡ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ರಾಮ ಐತಾಳರು ಶೀನ ಮೈಯರ ನಡುವಿನ ಪೈಪೋಟಿ, ಲಾಭದಾಯಕವಾದ್ದರಿಂದ ಬೆಂಗಳೂರಿನ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡರು ಆ ವೃತ್ತಿ ಬಗ್ಗೆ  ಒಂದು ಬಗೆಯ ತಾತ್ಸಾರ, ಕೃಷಿ ಆಧಾರಿತ ಬದುಕಿನ ಅನಿಶ್ಚಿತತೆ, ಕಷ್ಟ ನಷ್ಟ ಪರಿಪಾಟಲುಗಳ ಎಲ್ಲದರ ಬಗ್ಗೆಯು ವಿನೋದವಾಗಿ, ವಿಸ್ತಾರವಾಗಿ ಬರೆದಿದ್ದಾರೆ ಕಾರಂತರು.

 ಐತಾಳರ ಮಗ ಲಕ್ಷ್ಮಣ ಉರುಫ್ ಲಚ್ಚ ಮುಂದಿನ ಪೀಳಿಗೆಯ ಪರಮ ಸ್ವಾರ್ಥದ ಪ್ರತೀಕ. ಉಂಡು ತಿಂದ ಮನೆಗೂ, ಸಾಕಿ ಬೆಳೆಸಿದ ತಂದೆ ತಾಯಿಗಳಿಗೂ, ಕಟ್ಟಿಕೊಂಡ ಹೆಂಡತಿಗೂ, ಕಡೆಗೆ ತನಗೆ ಹುಟ್ಟಿದ ಮಗನಿಗೂ ಎರಡು ಬಗೆಯಲು ಹೇಸದ ಮೋಸಗಾರ. ಉನ್ನತ ಶಿಕ್ಷಣ ದೊರೆತಿದ್ದರು ಬದುಕಿನಲ್ಲಿ ದಾರಿ ತಪ್ಪಿದ ಯುವ ಜನಾಂಗದ ಪ್ರತಿನಿಧಿ. ಸಾಯುವ ಗಳಿಗೆವರೆಗೂ ಒಂದು ಹನಿ ಪಶ್ಚಾತ್ತಾಪವಿಲ್ಲದ ಸ್ವಲ್ಪ ಅತಿರೇಕವೇನೊ ಎಂಬಂತೆ ಚಿತ್ರಿತಗೊಂಡಿರುವ ದುಷ್ಟ ಪಾತ್ರ. ಸಾತ್ವಿಕ ಮನೆತನದಲ್ಲಿ ಹುಟ್ಟಿದರೂ, ಎಲ್ಲ ರೀತಿಯ ಸೌಕರ್ಯ ಸವಲತ್ತುಗಳಿದ್ದರೂ, ತನ್ನ ಇಂಗ್ಲಿಷ್ ಓದಿನ ಅಹಂಕಾರ ಹಾಗು ಹಳ್ಳಿ ಜೀವನದ ಬಗ್ಗೆಯ ತಾತ್ಸಾರದಿಂದಾಗಿ, ಪಟ್ಟಣ ಸೇರಿ ಕೆಟ್ಟು ತನ್ನ ಬಾಳನ್ನು ತಾನೇ ಹಾಳು ಮಾಡಿಕೊಂಡಂತ ಮೂಢಮತಿ. ಯಾವ ತಪ್ಪು ಮಾಡದ, ಕುಲೀನ ಮನೆತನದಲ್ಲಿ ಹುಟ್ಟಿದಂತಹ ಪತ್ನಿ ನಾಗವೇಣಿಗೆ ಕೊಡಬಾರದ ಕಷ್ಟಗಳೆಲ್ಲ ಕೊಟ್ಟು, ಪಡಬಾರದಂತ ಬಾಧೆಗೆ ನೂಕಿದ ಸ್ವಾರ್ಥಿ. ಅದೇ ಪೀಳಿಗೆಯ ಇನ್ನೊಂದು ಮುಖ ನಾಗವೇಣಿ. ತನ್ನದಲ್ಲದ ತಪ್ಪಿಗೆ ಕಡು ಶಿಕ್ಷೆ ಅನುಭವಿಸುತ್ತ, ಆದರೂ ಕರ್ತವ್ಯ ಬಿಟ್ಟು ಓಡದೆ, ತುಂಬಿದ ಮನೆಗೂ, ಮನೆಯ ಜನರಿಗೂ ನಿಸ್ವಾರ್ಥ ಸೇವೆಗೈವ ಒಳ್ಳೆ ಮನಸಿನಾಕೆ. ಒಂಟಿ ಮಹಿಳೆ ಎಂದು ಧೈರ್ಯಗೆಡದೆ ಮನೆ ಮತ್ತು ಮಗನನ್ನು ಉತ್ತಮ ರೀತಿಯಲ್ಲಿ ಸಂಭಾಳಿಸಿಕೊಂಡು ಹೋಗಿ, ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡ ಸಾಧ್ವಿ. ಈ ಕಾಲಮಾನದಲ್ಲಿ ನಡೆದಂತಹ ಅನೇಕ ನೈಜ ಘಟನೆಗಳಾದ ಗೇಣಿ ಪದ್ಧತಿಯಲ್ಲಿನ ಬದಲಾವಣೆ, ಪ್ಲೇಗು ಮಾರಿ ಹಾವಳಿ, ಊರು ಬಿಟ್ಟು ಪಟ್ಟಣ ಸೇರಿದ ಯುವಕರು ಹಾಗೇ ಊರಲ್ಲಿ ಹಿಂದೆ ಬಿಟ್ಟು ಹೋದಂತಹ ಮುದುಕರ ಸಂಕಟ ನೋವುಗಳು, ಕೃಷಿ ಬಗ್ಗೆಯ ಉದಾಸೀನ ಎಲ್ಲವೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಕಾರಂತರು. ಒಂದು ಹಂತದಲ್ಲಿ ಬರುವ ಪಾತ್ರವೊಂದು ಹೇಳುವ ಮಾತು "ನಮ್ಮೂರು ನೋಡಿದ್ದೀಯಾ ಈಗ? ನನ್ನಂಥ ಕಣ್ಣು ಕಾಣದ ಜಬ್ಬುಗಳ (=ಮುದುಕರು) ಮಾತ್ರ  ಇರುವ ಊರು." ಹೆಚ್ಚಿನ ಓದಿಗಾಗೋ ಇಲ್ಲ ಹೊಟ್ಟೆಪಾಡಿಗಾಗೋ ಪಟ್ಟಣ ಸೇರುವ ಯುವ ಜನಾಂಗ ಪೇಟೆಯ ಜೀವನಶೈಲಿಯ ಮೋಹಕ್ಕೆ ಒಳಗಾಗಿ, ತಾವು ಹುಟ್ಟಿ ಬೆಳೆದು ಹಿಂದೆ ಬಿಟ್ಟು ಬಂದತಹ ಚಿಕ್ಕ ಹಳ್ಳಿ ಅಥವಾ ಊರನ್ನು ಮರೆತೇ ಬಿಡುವುದು ಇಂದಿಗೂ ಅಷ್ಟೇ ಸತ್ಯವಲ್ಲವೇ?



 ಕೊನೆಯದಾಗಿ, ಮೂರನೇ ತಲೆಮಾರಿನ ಕಥೆ ರಾಮ ಐತಾಳರ ಮೊಮ್ಮಗ ರಾಮನದು. ರಾಮನು ತಂದೆಯ ಪರಿಚಯವೇ ಇಲ್ಲದೆ ಕಡು ಬಡತನದಲ್ಲಿ ಬೆಳೆದು, ಮಂಗಳೂರಿನ ಅಜ್ಜನ ಮನೆಯಲ್ಲಿ  ಕಷ್ಟದಲ್ಲೇ ಓದು ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮದ್ರಾಸಿಗೆ ಹೋಗಿರುತ್ತಾನೆ. ಸ್ವಾಭಿಮಾನಿ ರಾಮ ಮನೆಪಾಠ, ಸಂಗೀತ ಪಾಠ ಹೇಳಿಕೊಡುತ್ತ ಹೇಗೋ ತನ್ನ ಓದಿಗೆ ದಾರಿ ಕಂಡು ಕೊಂಡಿರುತ್ತಾನೆ. ಅಂತ ಸಮಯದಲ್ಲಿ ಸ್ವಾತಂತ್ರ್ಯ ಚಳುವಳಿ ಅವನನ್ನು ತೀವ್ರವಾಗಿ ಸೆಳೆಯುತ್ತದೆ. ಒಂದೆಡೆ ತಮ್ಮ ಬಡತನದ ಒತ್ತಡ, ತಾಯಿಯ ಅಪಾರ ನಿರೀಕ್ಷೆ.. ಇನ್ನೊಂದು ಕಡೆ ಗಾಂಧಿವಾದದ ಕಡೆ ಒಲವು. ಆದರೂ ದೇಶಪ್ರೇಮವು ತಾಯಿಪ್ರೇಮಕ್ಕಿಂತ ದೊಡ್ಡದೆಂದು ಭಾವಿಸಿ, ಇನ್ನೇನು ಮುಗಿದೇ ಹೋಯಿತು ಎಂಬಂತ ಘಟ್ಟದಲ್ಲಿದ್ದ ಓದನ್ನು ಅಲ್ಲಿಗೆ ನಿಲ್ಲಿಸಿ, ಪೂರ್ತಿಯಾಗಿ ತನ್ನನ್ನು ತಾನೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವನು. ಈ ಪಾತ್ರದ ಚಿತ್ರಣ ಕಾರಂತರ ನಿಜ ಜೀವನದ ವ್ಯಕ್ತಿತ್ವ ಹಾಗು ಕೆಲ ಘಟನೆಗಳ ಮೇಲೆ ಆಧರಿಸಿದೆ. ಮದರಾಸಿನಿಂದ ಮರಳಿ ತನ್ನ ಊರಿಗೆ ಬರುವ ರಾಮ ಅನೇಕ ಟೀಕೆ ಟಿಪ್ಪಣಿ ಅವಮಾನಗಳಿಗೆ ಒಳಗಾದರೂ ಎದೆಗುಂದದೆ, ಗ್ರಾಮೀಣ ಅಭಿವೃದ್ದಿ, ಸ್ವಜನ ಹಿತಚಿಂತನೆ, ಖಾದಿ ತಯಾರಿಕೆ ಪ್ರೋತ್ಸಾಹನೆ, ಕುಡಿತ ಚಟಗಳ ನಿವಾರಣೆ, ಭಾಷಣ ಮಾತುಕತೆ ಇತ್ಯಾದಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ತನ್ನ ಬಾಳಿನ ಗುರಿ ಕಾಣುತ್ತಾನೆ. ಒಂದು ಹಂತದಲ್ಲಿ ತನ್ನ ಓದು ಮುಂದುವರಿಸಿದರೂ, ಮತ್ತೆ ಮರಳಿ ಮಣ್ಣಿಗೆ ಬಂದು ತಲೆತಲಾಂತರದಿಂದ ಬಂದ ಕೃಷಿ ವ್ಯವಸಾಯಕ್ಕೆ ತನನ್ನು ತಾನೇ ತೊಡಗಿಸಿಕೊಂಡು ತನ್ನ ಜೀವನದ ಯಶಸ್ಸು ಕಾಣುತ್ತಾನೆ. ಇಂತ ರಾಮ ಅಂದಿಗೂ ಇಂದಿಗೂ ಎಂದೆಂದಿಗೂ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿ.

ಈ ಎಲ್ಲ ಪಾತ್ರಗಳ ಜೊತೆಗೆ ಇನ್ನೊಂದು ಅತ್ಯಂತ ಮನ ಸೆಳೆಯುವ ಹಾಗು ಬಹು ಮುಖ್ಯ ಪಾತ್ರವೆಂದರೆ ಕೋಟ ಸುತ್ತಮುತ್ತಲಿನ ಹಳ್ಳಿಗಾಡಿನ ಸುಂದರ ಪರಿಸರದ್ದು. ಕಡಲು, ದಂಡೆ, ಅಳುವೆ, ನದಿ ತೀರ, ಕೆರೆ, ತೋಟ, ಗದ್ದೆ, ಮನೆ, ಕೊಟ್ಟಿಗೆ, ಅಗೇಡಿ, ಅರಾಲು, ಚಪ್ಪರ ಹೀಗೆ ಹಲವಾರು ವಿಭಿನ್ನ ಚಿತ್ರಣಗಳು ಕತೆಯ ಜೊತೆಗೆ ಹಾಸುಹೊಕ್ಕಾಗಿವೆ… ದಕ್ಷಿಣ ಕನ್ನಡದ ಪಾರಂಪರಿಕ ವ್ಯವಸಾಯ ಪದ್ಧತಿ, ಜೀವನ ಶೈಲಿ ಹಾಗು ಜೀವನದ ಬಹು ಮುಖ್ಯ ಭಾಗವಾದ ಕಡಲಿನ ಬಗ್ಗೆ ಹಿಡಿದ ಕನ್ನಡಿಯಂತಿದೆ. ಸ್ವಲ್ಪ ಧೀರ್ಘವೇನೋ ಎನ್ನಿಸಿದರು, 'ಮರಳಿ ಮಣ್ಣಿಗೆ' ಯುವಕರೆಲ್ಲ ಓದಬೇಕಾದಂತ ಒಂದು ಉತ್ತಮ ಪುಸ್ತಕ. 
ಮೂಲ:- http://goo.gl/hF4UC


Thursday, January 10, 2013

ನಾಯಿ ನೆರಳು - ಎಸ್ ಎಲ್ ಭೈರಪ್ಪ

Naayi Neralu S L Bhyrappa




'ನಾಯಿ-ನೆರಳು' ಕಾದಂಬರಿ ಭಾರತಿಯ ಜನರ ಜೀವನ, ಭಕ್ತಿ, ಶ್ರದ್ದೆ ಮತ್ತು ಅವರಲ್ಲಿ ಮರೆಯಾಗುತ್ತಿರುವ ಭಾರತಿಯ ಸಂಸ್ಕೃತಿ ಬಗ್ಗೆ ಪುನರ್ಜನ್ಮ, ಕರ್ಮ, ಮತ್ತು ಸತ್ಯವನ್ನು ಆದಾರವಾಗಿಟ್ಟುಕೊಂಡು ಒಂದು ಸುಂದರ ಕಥೆಯನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಬರುವ ಅಚುತ್ಯನ ಪಾತ್ರ ಅಧುನಿಕ ಜೀವನ ಮುಖವಾದರೆ ಮಿಕ್ಕೆಲ್ಲ ಪಾತ್ರಗಳು ನಮ್ಮ ಪೂರ್ವಜರರನ್ನು ಪ್ರತಿನಿದಿಸುತ್ತದೆ.


ವಿಶ್ವೇಶ್ವರನು ಕ್ಷೆತ್ರಪಾಲನಾಗಿ ಜೋಹಿಸರ ಮನೀಯಲ್ಲಿ ಹುಟ್ಟುತ್ತಾನೆ, ಎರಡನೇ ವಯಸ್ಸಿನಿಂದ ಅವನು "ನನಗೆ ಮದುವೆಯಾಗಿದೆ. ಹೆಂಡ್ತಿ ಹೆಸ್ರು ವೆಂಕಮ್ಮ, , ಒಂದು ಗಂಡು ಮಗೂನೂ ಇದೆ" ಎಂದು ತನ್ನ ಹದಿನೆಂಟನೆ ವಯಸ್ಸಗುವರೆಗೂ ಹೇಳುತ್ತಿರುತ್ತಾನೆ. ಇವನಿಗೆ ಪ್ರೇತ, ಬೂತ ಹಿಡಿದೇ ಎಂದು, ಅದನ್ನು ಬಿಡಿಸಲು ನಾನ ರೀತಿಯ ಪ್ರಯತ್ವನ್ನು ಮಾಡುತ್ತಾರೆ. ಆದರೆ ಅಚ್ಚಣ್ಣಯ್ಯ ಬಂದು ಇವನು ನನ್ನ ಮಗನ ಪುನರ್ಜನ್ಮ ಎಂದಾಗ ಅಲ್ಲರಿಗೂ ಆಶ್ಚರ್ಯವಾಗುತ್ತದೆ. ವಿಶ್ವೇಶ್ವರ ತನಗೂ ಜೋಹಿಸರಿಗೂ ಯಾವುದೇ ಸಂಬಂದ ಇಲ್ಲ ಎಂದಮೇಲೆ ಅವನು ಅಚ್ಚಣ್ಣಯ್ಯನ ಜೋತೆ ಅವರ ಊರಿಗೆ ಹೊರಡುತ್ತಾನೆ. ವೆಂಕಮ್ಮನಿಗೆ ಗಂಡ ಸತ್ತು ಹುಟ್ಟಿ ಬಂದಿದ್ದಕೆ ಸಂತ್ಹೊಶವಾದರು, ಹದಿನೆಂಟು ವರ್ಷದ ಹುಡುಗನ ಜೊತೆ ಸಂಸಾರ ಹೇಗೆ ಮಾಡುವುದು ಎಂದು ಯೋಚನೆ. ಇದನ್ನು ಜೋಗಿನಾಥ ಬೆಟ್ಟದ ಜೋಗಯ್ಯನು ಆತ್ಮಕ್ಕೆ ವಯಸ್ಸಿಲ್ಲ, ದೇಹಕ್ಕೆ ಮಾತ್ರ ಎಂದು ಅವರ ಸಂಶಯವನ್ನು ನಿವಾರಿಸುತ್ತಾನೆ. ಆದರೆ ಅಚುತ್ಯನಿಗೆ ಹದಿನೆಂಟು ವರ್ಷದ ಹುಡುಗ ತನ್ನ ತಂದೆ ಎಂದು ಒಪ್ಪಿಕೊಳ್ಳಲು ನಾಚಿಕೆಯಾಗುತ್ತದೆ. ಬೆಂಗಳೂರಿನಲ್ಲಿ ಓದಿದ ಅಚುತ್ಯನು ವಿಶ್ವೇಶ್ವರನು ಮೋಸಗಾರ, ಅವನ ಮುಗ್ದ ತಾಯಿ ಮತ್ತು ಅಜ್ಜ-ಅಜ್ಜಿಯ ಅಸ್ತಿಯನ್ನು ಕಬಳಿಸಲು ಬಂದಿದ್ದಾನೆ ಎಂದು ತನ್ನ ಪ್ರೊಫೆಸರ್ ರಾಸ್ ರೊಂದಿಗೆ ವಿಮರ್ಶಿಸುತ್ತಾನೆ. ವಿಶ್ವೇಶ್ವರನು ಕರಿಯನ ಮಗಳನ್ನು ಬಸುರಿ ಮಾಡಿ ಅವಳೊಂದಿಗೆ ಹೊಡೀಹೊದಾಗ, ಅಚುತ್ಯನು ಯಾರಿಗೂ ತಿಳಿಯದ ಹಾಗೆ ವಿಶ್ವೇಶ್ವರನುನ್ನು ಜೈಲಿಗೆ ಹಾಕಿಸುತ್ತಾನೆ. ಮುಂದೆ ಕದಮ್ಬೈಯಲ್ಲಿ ನಡೆಯುವ ಘಟನೆಗಳು, ವಿಶ್ವೇಶ್ವರನು ಹುಟ್ಟಿನ ಗುಟ್ಟು, ಅಚುತ್ಯನಿಗೆ ಮಕ್ಕಳಾಗಾದಾಗ ಅಮ್ಮನ್ನು ಹುಡುಕುವುದು, ......... ಎಲ್ಲಾ ಪಾತ್ರಗಳು ತಮ್ಮ ಪ್ರೂವದಲ್ಲಿ ಮಾಡಿದ ಕರ್ಮಗಳ ಅನುಗುಣವಾಗಿ ಜೀವನವನ್ನು ಅನುಭವಿಸುತ್ತಾರೆ.


ಭೈರಪ್ಪನವರು ಇಲ್ಲಿ ನಮ್ಮ ಕರ್ಮಗಳನ್ನು ನಾಯಿಗೆ ಹೋಲಿಸಿ, ನಾವು ಮಾಡುವ ಕೆಲಸಳ ಕರ್ಮವು ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತದೆ ಎಂದು ಚಿತ್ರಿಸಿದ್ದಾರೆ. ಕಾಲೇಜಿನಲ್ಲಿ ಓದಿದ ಯುವ ಜನತೆ ತಮ್ಮ ತಂದೆ ತಾಯಿ ಮಾಡುವ ಕೆಲಸಗಳು ಅವ್ಯಜ್ಞಾನಿಕ ಮತ್ತು ಕುರುಡು ಸಿದ್ದಾಂತಗಳು ಎಂದುಕೊಳ್ಳುತ್ತಾರೆ. ಆದರೆ ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಈಗಿರುವ ಯುವ ಜನತೆ ಮಕ್ಕಳು ಹೊಳೆಯುವದೆಲ್ಲ ಚಿನ್ನ ಎನ್ನುವಂತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಭಾರತಿಯ ಸಂಸ್ಕೃತಿ ವ್ಯಜ್ಞಾನಿಕ ದೃಷ್ಟಿ ಇಂದ ಮತ್ತು ಜೀವನ ನಡೆಸುವ ದೃಷ್ಟಿಯಿಂದ  ಅದರ್ಶಮಯವದುದು.


'ನಾಯಿ-ನೆರಳು' ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ನನನ್ನು ಯೋಚನೆಗೆ ಮುಳಿಗಿಸಿದ್ದು ಒಂದು ಸಣ್ಣ ಪಾತ್ರ, ಪ್ರೊಫೆಸರ್ ರಾಸ್.  ಅವರು ಹೇಳುವ ಪ್ರಕಾರ ಪುನರ್ಜನ್ಮ ವ್ಯಜ್ಞಾನಿಕ ದೃಷ್ಟಿಂದ ಅಸಾದ್ಯ ಮತ್ತು ಅದನ್ನು ನಂಬಬಾರದು ಆದರೆ ಮರಿಯು ಮದುವೆಯಾಗದೆ ಏಸುವಿಗೆ ಜನ್ಮ ನೀಡುವುದು ಮಾತ್ರ ದೇವರ ಮೇಲಿನ ನಂಬಿಕೆ ಮತ್ತು ಅಂದನ್ನು ಮಾತ್ರ ನಂಬಬಹುದು ಎಂದು. ಇಲ್ಲಿ ನಾನು ನೋಡಿದ ದ್ವಂದ ವಾದ , ಯೇಸು ಮಾತ್ರ ನಿಜವಾದ ದೇವರು ಮತ್ತು ಭಾರತೀಯರು ನಂಬುವ ದೇವರು ಬರಿ ಕಲ್ಲುಗಳು ನಂಬಾರದು. ಈ ವಿಚಾರವು ಪಾತ್ರಕ್ಕೆ ಮಾತ್ರ ಸೀಮಿತವಾದ್ದು.