Sunday, March 2, 2014

ಕಲ್ಲು ಕರಗುವ ಸಮಯ - ಪಿ. ಲಂಕೇಶ್

Kallu Karguva Samaya - P. Lankesh



ಕಥೆಗಳು

೧. ದಾಹ
೨. ಕೃತಜ್ಞತೆ
೩. ಒಂದು ಬಾಗಿಲು
೪. ಕಣ್ಮರೆ
೫. ಮುಟ್ಟಿಸಿಕೊಂಡವನು
೬. ಸಹಪಾಠಿ
೭. ಉರಿದ ಊರಿನವರು
೮. ವೃಕ್ಷದ ವೃತ್ತಿ
೯. ತೋಟದವರು
೧೦. ಕಲ್ಲು ಕರಗುವ ಸಮಯ
೧೧. ಸ್ಟೆಲ್ಲಾ ಎಂಬ ಹುಡುಗಿ
೧೨. ದೇವಿ
೧೩. ಸುಭದ್ರ
೧೪. ಮೃಗ ಮತ್ತು ಸುಂದರಿ
೧೫. ಟಾಲ್ ಸ್ಟಾಯ್
೧೬. ಅಧಿಕಾರಿಗಳು ಮತ್ತು ಕೆಲಸದವರು
೧೭. ದಾಳಿ

ಲಂಕೇಶ್ ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಅತ್ಯದ್ಬುತ ಬರಹಗಾರರಲ್ಲಿ ಒಬ್ಬರು. ಗಣೇಶಯ್ಯ ನವರ ಶಾಲಬಂಜಿಕೆ ಓದಿದ ಮೇಲೆ ಮುಂದೆ ಯಾವ ಪುಸ್ತಕ ಓದಬೇಕು ಎಂದು ಹುಡುಕುತ್ತಿರುವಾಗ ನನ್ನ ಸ್ನೇಹಿತ ಪರಿಚಹಿಸಿಕೊಟ್ಟ ಪುಸ್ತಕ ಲಂಕೇಶ್ ರವರ "ಕಲ್ಲು ಕರಗುವ ಸಮಯ". ಇದನ್ನು ಓದಿದ ಮೇಲೆ ನಾನು ಲಂಕೇಶ್ ರವರ ಬರಹದ ಅಭಿಮಾನಿಯಾಗಿದ್ದೇನೆ ಮತ್ತು ಇದನ್ನು ಓದಲು ಸಲಹೆ ಕೊಟ್ಟ ಸ್ನೇಹಿತನಿಗೆ ಆಬಾರಿಯಗಿದ್ದೇನೆ. 

ಲಂಕೇಶ್ ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಅತ್ಯದ್ಬುತ ಬರಹಗಾರರಲ್ಲಿ ಒಬ್ಬರು. ಗಣೇಶಯ್ಯ ನವರ ಶಾಲಬಂಜಿಕೆ ಓದಿದ ಮೇಲೆ ಮುಂದೆ ಯಾವ ಪುಸ್ತಕ ಓದಬೇಕು ಎಂದು ಹುಡುಕುತ್ತಿರುವಾಗ ನನ್ನ ಸ್ನೇಹಿತ ಪರಿಚಹಿಸಿಕೊಟ್ಟ ಪುಸ್ತಕ ಲಂಕೇಶ್ ರವರ "ಕಲ್ಲು ಕರಗುವ ಸಮಯ". ಇದನ್ನು ಓದಿದ ಮೇಲೆ ನಾನು ಲಂಕೇಶ್ ರವರ ಬರಹದ ಅಭಿಮಾನಿಯಾಗಿದ್ದೇನೆ ಮತ್ತು ಇದನ್ನು ಓದಲು ಸಲಹೆ ಕೊಟ್ಟ ಸ್ನೇಹಿತನಿಗೆ ಆಬಾರಿಯಗಿದ್ದೇನೆ.

ಲಂಕೇಶ್ ರವರು ಸಾಮಾನ್ಯ ಜನರ ಸ್ಥಿತಿ ಮತ್ತು ಮನಸ್ಸಿನ ವೇದನೆಯನ್ನು ಯಾವುದೇ ಆಡಂಬರವಿಲ್ಲದ ತೀರ ಸರಳವಾಗಿ ಮನಸ್ಸಿಗೆ ತಟ್ಟುವಂತೆ ಬರೆದಿದ್ದಾರೆ. ಇಲ್ಲಿ ಬರುವ ಪಾತ್ರಗಳು ನಾವೆಲ್ಲ ನಿತ್ಯ ಜೀವನದಲ್ಲಿ ನೋಡುವ ಜನರು, ಟೈಪಿಸ್ಟ್ ಮೀರಾ , ಪುಸ್ತಕದ ಅಂಗಡಿಯ ನಿರ್ಮಲ, ಕೂಲಿ ಕೆಲಸದ ಚೆನ್ನಮ್ಮ .... ಇವರಲ್ಲ ನಮ್ಮ ನಿತ್ಯ ಜೀವನದ ಮುಂದೆ ಹಾದು ಹೋಗುವ ಜನರು. ಅವರು ಮಾಡುವ ಕೆಲಸದ ಹಿಂದೆ ಒಂದು ಅನಿವಾರ್ಯತೆ ಇರುತ್ತದೆ ಎಂದು ಯೋಚಿಸುವ ಸಮಯ ಕೂಡ ನಮಗೆ ಇರುವುದಿಲ್ಲ ಎಂದು ಅವರನ್ನು ನೋಡಿದ ಬಳಿಕ ಮರೆಥುಬಿದುತ್ತೆವೆ.

ಇಲ್ಲಿ ನನಗೆ ತುಂಬ ಪರಿಣಾಮ ಬೀರಿದ ಪಾತ್ರಗಳೆಂದರೆ ಚೆನ್ನಮ್ಮ ಮತ್ತು ರೈತ ಬಸಲಿಂಗ. ಇಲ್ಲಿ ಚೆನ್ನಮ್ಮನ ವಯಸ್ಸು ಮತ್ತು ಕೆಲೆಸ ಮಾಡುತ್ತಿರುವ ರೀತಿ ನೋಡಿ ಮನೆ ಕಟ್ಟಿಸುತ್ತಿರುವ ಮಾಲಿಕ ಕನಿಕರದಿಂದ ಅವಳ ಕಷ್ಟವನ್ನು ತಿಳಿದಿಕೊಂಡು ಅವಳ ಗುಡಿಸಲಿಗೆ ತನ್ನ ಮನೆ ಕಟ್ಟುತ್ತಿರುವ ಹಲಿಗೆಗಳಿಂದಾನೆ ಬಾಗಿಲು ಕಟ್ಟಿಸಲು ಮೇಸ್ತ್ರಿಗೆ  ಹೇಳುತ್ತಾನೆ. ಕಟ್ಟಿಸಿದ ಮೇಲೆ ಚೆನ್ನಮ್ಮ ಕೆಲಸಕ್ಕೆ ಬರುವುದನ್ನು ನಿಲ್ಲಿಸುತ್ತಾಳೆ. ತಾನು ಚೆನ್ನಮ್ಮನ ಕಣ್ಣಿರಿಗೆ ಮೋಸ ಹೋಗಿದೆನೆಂದು ತಿಳಿದು ಬೇಸರಗೊಂಡ ನಟರ ಚೆನ್ನಮ್ಮ ಕೆಲೆವ ದಿನಗಳನ ನಂತರ ಬಂದು ತನ್ನ ಬಾಗಿಲಿ ಯಾರೋ ಕದ್ದರು ಎಂದು ತನ್ನ ವ್ಯಥೆಯನ್ನು ಅವನ ಮುಂದೆ ಹೇಳುತ್ತಾಳೆ. ಕದ್ದವರು ಮೆಸ್ತ್ರಿಯೇ ಎಂದು ತಿಳಿದ ಮೇಲೆ ಮಾಲಿಕನಿಗೆ ಅವಳ ಮೇಲೆ ಸಿಟ್ಟು ಮತ್ತು ಜನರ ಸ್ವಾರ್ಥದ ಬಗ್ಗೆ ಹೇಸಿಗೆ ಉಂಟಾಗುತ್ತದೆ.

ಬಸಲಿಂಗ ಮೈ ಮುರಿದು ದುಡಿಯುವ ರೈತ. ಅವನಿಗೆ ಒಂದು ದಿನ ಇದಕ್ಕಿದ್ದಂತೆ ಎಡಗಣ್ಣು ನೋವಲು ಆರಮ್ಬಿಸುತ್ತಗೆ. ಕೆಲವು ವೈದ್ಯರಿಗೆ ತೋರಿಸಿದರು ಏನು ಪ್ರಯೋಜನ ಆಗುವುದಿಲ್ಲ. ಅವನಿಗೆ ಯಾರೋ ಒಬ್ಬರು ಸರ್ಕಾರಿ ವ್ಯದ್ಯಾರಾದ ಡಾ।। ತಿಮ್ಮಪ್ಪ ನವರನ್ನು ನೋಡಲು ಹೆಲುತ್ತರೆ. ಅವರಿಗೆ ತೋರಿಸಿದ ಮೇಲೆ ಅವರು ಆಪರೇಷನ್ ಮಾಡಿ ಎರಡು ವಾರ ಕಣ್ಣಿಗೆ ನೀರು ತೋಕದಂತೆ ಸಲಹೆ ನೀಡುತ್ತಾರೆ. ಮನೆಗೆ ಬಂದಮೇಲೆ ಅವನಿಗೆ ಡಾ।। ತಿಮ್ಮಪ್ಪ ನವರ ಕೀಳು ಜಾತಿಯಿಂದ ಬಂಡ ಮನುಸ್ಯ ಎಂದು ತಿಳಿದು ಅವರ ಮಾತನ್ನು ಮೀರಿ ನೀರಿನಲ್ಲಿ ಸ್ನಾನ ಮಾದುತ್ತಾನೆ. ಇದರಿಂದ ಅವನ ಎಡಗಣ್ಣಿನ ದೃಷ್ಟಿ ಹೊಗುತ್ತದೆ. ಅದೇ ರೀತಿ ಬಳಗಣ್ನುನಲ್ಲಿ ನೋವು ಕಾನಿಸಿಕೊಲ್ಲುತ್ತದೆ. ಪೇಟೆಯ ಎಲ್ಲಾ ಖಾಸಗಿ ವ್ಯದ್ಯರಿಗೆ ತೋರಿಸದ್ರು ಗುಣವಾಗ ಮೇಲೆ ಬೇರೆ ದಾರಿಯಿಲ್ಲದೆ ಡಾ।। ತಿಮ್ಮಪ್ಪ ನವರ ಹತ್ತಿರ ಬಂದು ತಾನು ವರ್ತಿಸಿದ ರೀತಿ ಮತ್ತು ತನ್ನ ಸ್ತಿತಿಯನ್ನು ಹೇಳಿಕೊಳ್ಳುತ್ತಾನೆ.  ಅವರು ಅವನಿಗೆ ಸಂಮದಾನ ಹೇಳಿ ಆಪರೇಷನ್ ಮಾಡುತ್ತಾರೆ.

ಈ ಕಾಥಾ ಸಂಕಲದಲ್ಲಿ ಬರುವು ಪಾತ್ರಗಳೇ ಹೀಗೆ, ನಾವು ನೋಡುವ ಜನರೆ. ಲಂಕೇಶ್ ರವರು ಪಾತ್ರಗಳ್ಳನ್ನು ಹುಟ್ಟುಹಾಕುವುದಿಲ್ಲ, ಅವರು ನಾವು ಕಡೆಗಣಿಸುವ ಜನರ ಹಿಂದಿನ ಬದುಕನ್ನು ನೊದುತ್ತಾರೆ. ಇದಕ್ಕಾಗಿಯೇ ಈ ಸಂಕಲನಕ್ಕೆ "ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ" ಸಿಕ್ಕಿದೆ.




0 comments:

Post a Comment