Wednesday, December 26, 2012

ಭೈರಪ್ಪನವರ ಸರಸ್ವತೀ ಸಮ್ಮಾನ ಸ್ವೀಕಾರ ಭಾಷಣ - ನವದೆಹಲಿ, 16-11-2011





ಮಾನ್ಯ ಡಾ. ಕರಣಸಿಂಹರೆ, ಕೆ.ಕೆ. ಬಿಲರ್ಾ ಪ್ರತಿಷ್ಠಾನದ ಅಧ್ಯಕ್ಷರೆ, ಅದರ ನಿದರ್ೇಶಕರಾದ ಭಟ್ಟಾಚಾರ್ಯರೆ,
ನನ್ನ ಕಾದಂಬರಿ `ಮಂದ್ರ'ವನ್ನು 2010ರ ಸರಸ್ವತಿ ಸಮ್ಮಾನಕ್ಕೆ ಆರಿಸಿದ ಸಮಿತಿಗೆ ಧನ್ಯವಾದಗಳು. ಹಾಗೆಯೇ ಮೊದಲಿನಿಂದಲೂ ಭಾರತದ ಹಲವಾರು ಭಾಷೆಗಳಲ್ಲಿ ನನ್ನ ಸಾಹಿತ್ಯ ಜೀವನದ ಬೆನ್ನೆಲುಬಾಗಿರುವ ಅಸಂಖ್ಯ ಓದುಗರಿಗೆ ನಾನು ಋಣಿಯಾಗಿದ್ದೇನೆ.

ನನ್ನ ಜೀವನವನ್ನು ನೆನಸಿಕೊಳ್ಳದೆ ನನ್ನ ಸಾಹಿತ್ಯದ ಉಗಮ ಮತ್ತು ಬೆಳವಣಿಗೆಯನ್ನು ಕುರಿತು ಮಾತನಾಡುವುದು ಸಾಧ್ಯವಿಲ್ಲ. ಕನರ್ಾಟಕದ ಒಂದು ಹಿಂದುಳಿದ ಹಳ್ಳಿಯ ತೀರ ಬಡತನದ ಕುಟುಂಬದಲ್ಲಿ ನಾನು ಹುಟ್ಟಿದೆ. ದುಡಿಮೆ ಮತ್ತು ಪಾಲನೆಗಳೆಲ್ಲ ನನ್ನ ತಾಯಿಯದಾಗಿತ್ತು : ತಂದೆಯು ಅತ್ಯಂತ ಬೇಜವಾಬ್ದಾರಿಯ ಮನುಷ್ಯ. ನಾನು ಹತ್ತು ವರ್ಷದವನಾಗಿದ್ದಾಗ ನನಗೆ, ಹದಿನೈದು ದಿನದ ಹಿಂದೆ ಮದುವೆಯಾಗಿದ್ದ ಅಕ್ಕನಿಗೆ ಮತ್ತು ನನಗಿಂತ ಎರಡು ವರ್ಷಕ್ಕೆ ಹಿರಿಯನಾದ ಅಣ್ಣನಿಗೆ ಪ್ಲೇಗು ಬಡಿದು ಅವರಿಬ್ಬರೂ ಒಂದು ಗಂಟೆಯ ಅಂತರದಲ್ಲಿ ಸತ್ತುಹೋದರು. ಹೇಗೋ ನಾನು ಉಳಿದುಕೊಂಡೆ. ಎರಡು ವರ್ಷಗಳ ನಂತರ ತಾಯಿಯೂ ಪ್ಲೇಗಿನಿಂದ ಸತ್ತಳು. ನಾನು ನಾಲ್ಕು ಮೈಲಿ ದೂರದ ಒಂದು ಊರಿನಲ್ಲಿ ವಾರಾನ್ನ ಮಾಡಿಕೊಂಡು ಓದನ್ನು ಮುಂದುವರೆಸಿದೆ. ನನಗೆ ಹದಿನಾಲ್ಕು ವರ್ಷವಾಗಿದ್ದಾಗ ನಾಲ್ಕು ವರ್ಷ ವಯಸ್ಸಿನ ತಂಗಿ ಕಾಲರಾದಿಂದ ಸತ್ತಳು. ನನಗೆ ಹದಿನೈದು ವರ್ಷವಾಗಿದ್ದಾಗ ಆರು ವರ್ಷ ವಯಸ್ಸಿನ ನನ್ನ ತಮ್ಮನು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ನಾನೇ ಅವನ ಹೆಣವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಒಯ್ದು ಊರಿನ ತೋಟಿಯ ಸಹಾಯದಿಂದ ಸೌದೆಯನ್ನು ಒಟ್ಟಿ ಅವನನ್ನು ಸುಟ್ಟು ಹತ್ತಿರದ ಒಂದು ತೋಟದ ಬಾವಿಯಲ್ಲಿ ಸ್ನಾನ ಮಾಡಿದೆ.

ಈ ಅನುಭವಗಳೆಲ್ಲ ನನ್ನಲ್ಲಿ ಸಾವು ಎಂದರೇನು? ಅದರ ಅರ್ಥವೇನು? ಅದು ಯಾಕೆ ಬರುತ್ತದೆ? ಎಂಬ ಪ್ರಶ್ನೆಗಳಾಗಿ ಕಾಡತೊಡಗಿದವು. ನಾನು ಮೈಸೂರಿನಲ್ಲಿ ಇಂಟರ್ಮೀಡಿಯೆಟ್ ಓದುವಾಗ ತತ್ತ ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಯಾಮುನಾಚಾರ್ಯ ರನ್ನು ಕಂಡು ನನ್ನ ಈ ಪ್ರಶ್ನೆಗಳನ್ನು ತೋಡಿಕೊಂಡೆ. ಅವರು ಸಠೀಕಾ ಕಠೋಪನಿಷತ್ತಿನ ಕನ್ನಡ ಅನುವಾದದ ಒಂದು ಪುಸ್ತಕವನ್ನು ಕೊಟ್ಟು ಓದಲು ಹೇಳಿದರು. ಏಕಾಗ್ರತೆಯಿಂದ ಓದಿದರೂ ಅದು ನನ್ನ ಸಮಸ್ಯೆಗೆ ಉತ್ತರ ಕಾಣಿಸಲಿಲ್ಲ; ಯಮನು ನಚಿಕೇತನಿಗೆ ಬೋಧಿಸಿದ ಯಾವ ತತ್ತ ್ವವೂ ಅರ್ಥವಾಗಲಿಲ್ಲ. ಪ್ರಾಧ್ಯಾಪಕರನ್ನು ಮತ್ತೆ ಕಂಡು ಇದನ್ನು ಹೇಳಿದಾಗ ಅವರು, ``ಇವೆಲ್ಲ ತತ್ತ ್ವಶಾಸ್ತ್ರವನ್ನು ಕ್ರಮವಾಗಿ ಅಧ್ಯಯನ ಮಾಡಿದರೆ ಮಾತ್ರ ಅರ್ಥವಾಗುವ ವಿಷಯಗಳು. ನೀನು ಬಿ.ಎ.ಗೆ ತತ್ತ ್ವಶಾಸ್ತ್ರವನ್ನು ತೆಗೆದುಕೊ'' ಎಂದರು. ಹೀಗೆ ನಾನು ತತ್ತ ್ವಶಾಸ್ತ್ರದಲ್ಲೇ ಬಿ.ಎ. ಮತ್ತು ಎಂ.ಎ.ಗಳನ್ನು ಮಾಡಿದೆ. ಹೀಗೆ ಒಟ್ಟು ಹನ್ನೆರಡು ವರ್ಷ. ವಿದ್ಯಾಥರ್ಿಯಾಗಿ ನಾಲ್ಕು ವರ್ಷ, ಅಧ್ಯಾಪಕ ಮತ್ತು ಸಂಶೋಧಕನಾಗಿ ಎಂಟು ವರ್ಷ, ತತ್ತ ್ವಶಾಸ್ತ್ರದಲ್ಲೇ ಮುಳುಗಿದ್ದೆ. ಅಷ್ಟರಲ್ಲಿ ನನಗೆ ಪ್ರಿಯವಾಗಿದ್ದ, ತತ್ತ್ವಶಾಸ್ತ್ರದ ಒಂದು ಶಾಖೆಯಾದ ಸೌಂದರ್ಯ ಮೀಮಾಂಸೆಯಲ್ಲಿ ಆಸಕ್ತಿ ಬೆಳೆದು ಸತ್ಯ ಮತ್ತು ಸೌಂದರ್ಯವನ್ನು ಕುರಿತು ಸಂಶೋಧನೆ ಮಾಡಿ ಅನಂತರ ಸೌಂದರ್ಯ ಮತ್ತು ನೀತಿಯ ಅಧ್ಯಯನದಲ್ಲಿ ತೊಡಗಿದೆ. ಅಷ್ಟರಲ್ಲಿ ಎರಡು ವಿಷಯಗಳು ನನಗೆ ಅರಿವಾದವು:
(1) ಭಾರತ ಮತ್ತು ಪ್ರಾಚೀನ ಗ್ರೀಸ್ಗಳೆರಡರಲ್ಲೂ ವಿಶ್ವ ಅಥವಾ ಬ್ರಹ್ಮಾಂಡ ಮೀಮಾಂಸೆ, ಜ್ಞಾನಮೀಮಾಂಸೆ, ಮನಶ್ಶಾಸ್ತ್ರ ಮತ್ತು ನೀತಿ ಶಾಸ್ತ್ರಗಳನ್ನು ಒಳಗೊಂಡಿದ್ದ ತತ್ತ ್ವಶಾಸ್ತ್ರವು ಆಧುನಿಕ ಕಾಲದಲ್ಲಿ ಅವುಗಳೆಲ್ಲವನ್ನೂ ಕಳಚಿಕೊಂಡಿವೆ. ಖಭೌತ ವಿಜ್ಞಾನ, ಆಧುನಿಕ ಮನೋವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮಾನವ ಜನಾಂಗ ಶಾಸ್ತ್ರ, ನ್ಯಾಯಶಾಸ್ತ್ರ, ವೈದ್ಯ ವಿಜ್ಞಾನ, ತೌಲನಿಕ ಮತ ಧರ್ಮ ಶಾಸ್ತ್ರ ಮೊದಲಾದ ಜ್ಞಾನದ ಶಾಖೋಪಶಾಖೆಗಳ ಬೆಳವಣಿಗೆ ಯಿಂದ ತತ್ತ ್ವಶಾಸ್ತ್ರವು ತನ್ನ ವ್ಯಾಪ್ತಿಯನ್ನು ಕಳೆದುಕೊಂಡು ಮೌಲ್ಯ ಮೀಮಾಂಸೆಗೆ ಅಡಕಗೊಂಡಿದೆ. 

(2) ವೇದ ಮತ್ತು ಉಪನಿಷತ್ತುಗಳು ಭಾರತದ ತತ್ತ ್ವಶಾಸ್ತ್ರಕ್ಕೆ ಆಧಾರವಾಗಿದ್ದರೂ ನಮ್ಮ ರಾಷ್ಟ್ರದ ಜೀವನಾದರ್ಶಗಳನ್ನು ಜಿಜ್ಞಾಸೆಗೆ ಒಳಪಡಿಸಿ ಅವುಗಳಿಗೆ ಮೂರ್ತಸ್ವರೂಪ ಕೊಟ್ಟದ್ದು ರಾಮಾಯಣ ಮಹಾಭಾರತಗಳು. ವೇದಪಾರಮ್ಯವನ್ನು ತಿರಸ್ಕರಿಸುವ ಜೈನ ಬೌದ್ಧ ಧರ್ಮಗಳು ಕೂಡ ಉಪನಿಷತ್ ಯುಗಧರ್ಮದ ಜಿಜ್ಞಾಸೆಯಿಂದ ಹುಟ್ಟಿದವೇ. ಅವುಗಳು ಕೂಡ ತಮ್ಮವೇ ದೃಷ್ಟಿಯಲ್ಲಿ ರಾಮಾಯಣ ಮಹಾಭಾರತಗಳಿಂದ ಮೂರ್ತಗೊಂಡ ಮೌಲ್ಯಗಳನ್ನು ವಿನ್ಯಾಸಗೊಳಿಸಿಕೊಂಡವು. ಇವುಗಳನ್ನು ಅರ್ಥ ಮಾಡಿಕೊಳ್ಳುವ ವೇಳೆಗೆ ನಾನು ನನ್ನ ಪ್ರಥಮ ಮಹತ್ತ ್ವದ ಕೃತಿ `ವಂಶವೃಕ್ಷ'ವನ್ನು ಬರೆದಿದ್ದೆ. ಈ ಸಾಹಿತ್ಯ ಸೃಷ್ಟಿಯ ಅನುಭವವು,  ನಮ್ಮ ರಾಷ್ಟ್ರದ ಜೀವನಾದರ್ಶಗಳಿಗೆ ಮೂರ್ತ ಸ್ವರೂಪ ಕೊಟ್ಟದ್ದು ಸಾಹಿತ್ಯಕೃತಿಗಳಾದ ರಾಮಾಯಣ ಮಹಾಭಾರತಗಳು ಎಂಬ ಅರಿವಿನಲ್ಲಿ ಬೆರೆತು ಜೀವನದ ಅರ್ಥವನ್ನು ಹುಡುಕಲು ನನಗೆ ಸಾಹಿತ್ಯವೇ ತಕ್ಕ ಮಾಧ್ಯಮ. ತರಗತಿಯಲ್ಲಿ ನಾನು ಪಾಠ ಮಾಡುತ್ತಿದ್ದ ಶುಷ್ಕ ಪಾಂಡಿತ್ಯದ ತತ್ತ ್ವ ಶಾಸ್ತ್ರವಲ್ಲ ಎಂಬ ದಾರಿಯನ್ನು ತೋರಿಸಿತು.

ನಾನು ಬರೆಯಲು ಆರಂಭಿಸಿದಾಗಿನಿಂದ ಇದುವರೆಗೂ ಸಾಹಿತ್ಯ ನಿಮರ್ಿತಿಯು ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಹಾಗೆ ತೊಡಗಿಸಿಕೊಳ್ಳದ ಬರೆಹವು ಕೇವಲ ಬೂಸಾ ಎಂಬ ಒತ್ತಡವನ್ನು ಹಲವು ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳು ಹಾಕುತ್ತಿವೆ. ತತ್ತ ್ವಶಾಸ್ತ್ರದ, ಅದರಲ್ಲೂ ಮೌಲ್ಯ ಮೀಮಾಂಸೆಯ ಹಿನ್ನೆಲೆಯುಳ್ಳ ನನಗೆ ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಮೌಲ್ಯಗಳಲ್ಲಿ ನಂಬಿಕೆ ಇದೆ, ಬದ್ಧತೆಯೂ ಇದೆ. ಆದರೆ ಸಾಹಿತ್ಯವೆಂಬ ಮೌಲ್ಯವನ್ನು ಈ ಬೇರೆ ಮೌಲ್ಯಗಳಿಗೆ ಅಡಿಯಾಳು ಮಾಡಿ ದುಡಿಸಹೊರಟರೆ ಸಾಹಿತ್ಯವು ಸಾಹಿತ್ಯವಾಗಿ ಉಳಿಯುವುದಿಲ್ಲ, ಅಲ್ಲದೆ ಅದು ಪ್ರಚಾರಸಾಹಿತ್ಯವಾಗಿ ತೀರ ಅಲ್ಪಾಯುಷಿಯಾಗುತ್ತದೆ, ಎಂಬುದು ನನ್ನ ವಿಮಶರ್ಿತ ಶ್ರದ್ಧೆಯಾಗಿದೆ. ಸಾಹಿತ್ಯವೆಂಬುದೇ ಮೌಲ್ಯಾನ್ವೇಷಣಕ್ಕೆ ಅತ್ಯಂತ ವಿಶಾಲವಾದ ಸಾಧ್ಯತೆಗಳ ಕ್ಷೇತ್ರ. ಅದು ರಾಜಕೀಯ ಪಕ್ಷಗಳು ಮತ್ತು ಸಕ್ರಿಯವಾದಿಗಳು ಒತ್ತಾಯಿಸುವ ಮೌಲ್ಯಗಳನ್ನು ಅವುಗಳಿಗಿಂತ ಎತ್ತರವಾದ ಹಂತದಲ್ಲಿ ನಿಂತು ಜೀವನದ ಇತರ ಮೌಲ್ಯಗಳೊಡನೆ ಅವುಗಳ ಸಂಬಂಧವನ್ನು ಪರಿಶೀಲಿಸಿ ಬೆಳಕು ಚೆಲ್ಲಬೇಕು. ಸಾಹಿತ್ಯ ನಿಮರ್ಿತಿಯೊಂದರಿಂದಲೇ ಜೀವನದ ಅಶನವಸನಗಳ ನ್ಯಾಯ ಅನ್ಯಾಯಗಳ ವಾಸ್ತವ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಸಾಹಿತಿಯು ಸಕ್ರಿಯನಾಗಬಾರದೆಂಬ ನಿಷೇಧವಿಲ್ಲ: ಆದರೆ ಸಕ್ರಿಯನಾಗದವನು, ಸಕ್ರಿಯತೆಗೆ ಸಾಹಿತ್ಯ ನಿಮರ್ಿತಿಯನ್ನು ಅಡಿಯಾಳಾಗಿಸದವನು ನಿಮರ್ಿಸುವುದು ಸಾಹಿತ್ಯವೇ ಅಲ್ಲವೆಂಬ ಅಂಥ ಪ್ರಣಾಲಿಯಲ್ಲಿ ನನಗೆ ನಂಬಿಕೆ ಇಲ್ಲ. ತಮ್ಮ ಪ್ರಣಾಳಿಗೆ ಒಳಪಡದವರನ್ನು ಸಕ್ರಿಯವಾದಿಗಳು ಬೂಜ್ವರ್ಾ,
ಬಲಪಂಥೀಯ ಎಂಬ ಹೆಸರುಗಳಿಂದ ಹಳಿಯುತ್ತಾರೆ; ಸಾಮಾಜಿಕ ಸಮಸ್ಯೆಗಳು ಒಂದೆರಡು ದಶಕಗಳಲ್ಲಿ ಬದಲಾಗಿ, ಅವುಗಳಿಗೆ ಪರಿಹಾರವೆಂಬಂತೆ ಬರೆಯುವ ಸಾಹಿತ್ಯವು ಅನಂತರ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಉದ್ದಕ್ಕೂ ನಾನು ಗಟ್ಟಿಯಾಗಿ ನಿಂತು ನನ್ನ ಬೌದ್ಧಿಕ ಮತ್ತು ಸೃಷ್ಟಿಶೀಲತೆಯ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇನೆ. ಸರಸ್ವತೀ ಸಮ್ಮಾನವು ನನ್ನ ಇತ್ತೀಚಿನ ಕೃತಿಗಳಲ್ಲಿ ಮಂದ್ರವನ್ನು ಆರಿಸಿರುವುದು ನನಗೆ ಸಂತೋಷವನ್ನುಂಟು ಮಾಡಿದೆ. ಒಬ್ಬ ಸಂಗೀತಗಾರ, ಅವನ ಸುತ್ತಮುತ್ತಣ ಘಟನೆ ಹಾಗು ಪಾತ್ರಗಳ ಮೂಲಕ ಕಲೆಗೂ ಜೀವನದ ಇತರ ಮೌಲ್ಯಗಳಿಗೂ ಇರುವ ಸಂಬಂಧವನ್ನು ನಾನು ಈ ಕಾದಂಬರಿಯಲ್ಲಿ ಅನ್ವೇಷಿಸಿದ್ದೇನೆ. ಇಡೀ ಕಾದಂಬರಿ ಯಲ್ಲಿ ಸಂಗೀತವೇ ಒಂದು ಮುಖ್ಯ ಪಾತ್ರವಾಗಿದೆ. ಸಂಗೀತವೇ ಅತ್ಯಂತ ಶುದ್ಧವಾದದ್ದು. ಇತರ ಕಲೆಗಳಾದ ಚಿತ್ರ, ಶಿಲ್ಪ, ಸಾಹಿತ್ಯ ಮೊದಲಾದವುಗಳ ತುಲನೆಯಲ್ಲಿ ಭಾವ ಮತ್ತು ರಸಗಳನ್ನು ಪರಿಶುದ್ಧ ಅಂದರೆ ಹಸಿಯಾದ, ಆದ್ದರಿಂದ ಅತ್ಯಂತ ಶಕ್ತವಾದ ಸ್ವರೂಪದಲ್ಲಿ ವ್ಯಕ್ತಪಡಿಸುವಂಥದು. ಅದು ಎಲ್ಲ ಮೂಲ ಮತ್ತು ಮಿಶ್ರ ರಸಗಳನ್ನು ಸೃಷ್ಟಿಸಿಕೊಂಡು ಮಂದ್ರದ ಆಳದಿಂದ ತಾರತಾರದ ಎತ್ತರಕ್ಕೆ ಸಂಚರಿಸುತ್ತದೆ. ಮಂದ್ರವು ಸಮಗ್ರ ಅಂತಮರ್ುಖತೆಯ ಸ್ಥಿತಿ ; ಎಂದರೆ ಧ್ಯಾನ.

ನಮಸ್ಕಾರ,
ಎಸ್.ಎಲ್.ಭೈರಪ್ಪ



Wednesday, November 28, 2012

ಹೇಳಿ ಹೋಗು ಕಾರಣ - ರವಿ ಬೆಳೆಗೆರೆ

Heli Hogu Karana - Ravi Belegere




ಕೆಲವೊಮ್ಮೆ ಈ ರೀತಿ ಹಾಗುತ್ತದೆ, ತುಂಬಾ ಆಸೆ ಇಟ್ಟುಕೊಳ್ಳದೆ ಹೋದ ಚಿತ್ರ ಚೆನ್ನಾಗಿ ಮತ್ತೆ ತುಂಬಾ ಆಸೆ ಇಟ್ಟುಕೊಂಡ ಚಿತ್ರ ಸಪ್ಪೆಯಾಗುತ್ತದೆ. ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಮೊದಲೆನಯ ಸಾಲಿಗೆ ಸೇರುತ್ತದೆ. ಬೆಳೆಗೆರೆಯವರ ಕಾದಂಬರಿಗಳಲ್ಲಿ ಓದಿದ ಮೊದಲೆಯದು ಇದು. ನಾನು ತುಂಬಾನೇ ಅಂದ್ರೆ ತುಂಬಾನೆ ಆಂಗ್ಲ ಚಿತ್ರಗಳನ್ನು ನೋಡುತ್ತೇನೆ, ಈ ಕಾದಂಬರಿಯನ್ನು ಅಲ್ಲಿನ ಚಿತ್ರಗಳಿಗೆ ಹೋಲಿಸಿ ಹೇಳುವುದಾದರೆ, "Guilty Pleasure" ಚಿತ್ರದ ರೀತಿ. ಭೈರಪ್ಪನವರ ಕಾದಂಬರಿಗಳು ಜೇಮ್ಸ್ ಕ್ಯಾಮೆರೋನ್ ಮಾಡೋ ಚಿತ್ರಗಳ ಹಾಗೆ, ಮತ್ತು ಬೆಳೆಗೆರೆರವರ ಕಾದಂಬರಿಗಳು ಜಸ್ಟಿನ್ ಲಿನ್ ಚಿತ್ರಗಳ ರೀತಿ.


ಅಧುನಿಕ ಜಗತ್ತಿನ ಪ್ರೀತಿ, ಪ್ರೇಮ, ಜಗಳ, ಕಾಮ, ಕ್ರೋಧ ಎಲ್ಲಾವನ್ನು ನಮ್ಮಂಥವರ ಮನ ತಟ್ಟುವ ರೀತಿ ತುಂಬ ಚೆನ್ನಾಗಿ ಬರೆದಿದ್ದಾರೆ. ಹಿಮವಂತ ಬಡವನಾದರೂ ವ್ಯಕ್ತಿತ್ವ ಒಳ್ಳೆಯದು ಪ್ರಾರ್ಥನಾನನ್ನು ಡಾಕ್ಟರ ಓದಿಸಲು ದಿನ ರಾತ್ರಿ ದುಡಿಯುತ್ತ, ಹಗಲು ರಾತ್ರಿ ಅವಳ ನೆನಪಲ್ಲಿ ಕಳೆಯುತ್ತಾ ತನ್ನ ಮೋದಿನ ಜೀವನ ಬಗ್ಗೆ ಯೋಚಿಸುತ್ತಾನೆ. ಪ್ರಾರ್ಥನಾ ಹಿಮವಂತ ಕಷ್ಟಪಟ್ಟು ದುಡಿದು ಕೊಟ್ಟ ದುಡ್ಡಿನಿಂದ ದಾವಣಗೆರೆಯಲ್ಲಿ ಡಾಕ್ಟರ ಸೇರುತ್ತಾಳೆ. ಪ್ರಾರ್ಥನಾ ಹಾಸ್ಟೆಲ್ ನಲ್ಲಿ ಊರ್ಮಿಳ ಮತ್ತು ದೇಬಶಿಶ್ ಪರಿಚಯವಾಗುತ್ತದೆ. ಊರ್ಮಿಳ ಆಧುನಿಕ ಜಗತ್ತಿನ ದಿಟ್ಟ ಹುಡುಗಿ, ಸಿಗರೆಟ್ ಸೇದುತ್ತಾಳೆ, ವಾರಕೊಮ್ಮೆ ಕುಡಿಯುತ್ತಾಳೆ, ತಾನು ಯಾವ ಹುಡುಗರಿಗೂ ಕಮ್ಮಿಯಿಲ್ಲ ಅನ್ನೋ ರೀತಿಯಲ್ಲಿ ಜೀವನ ಸಾಗಿಸುತ್ತಾಳೆ. ಪ್ರಾರ್ಥನಾ ದೇಬಶಿಶ್ ಸಗಾತದಿಂದ ಬದಲಾಗುತ್ತಾಳೆ, ಇತ್ತ ಊರ್ಮಿಳ ಹಿಮವಂಥನ ಪರಿಚಯದಿಂದ ಬದಲಾಗುತ್ತಾಳೆ.
ಇಲ್ಲಿ ಪಾತ್ರಗಳ ಮೊಸವಿದೆ, ಕಾಮದ ವಾಸನೆಯಿದೆ, ಮನಸ್ಸಿನ ಗಟ್ಟಿತನವಿದೆ, ಸಾದಿಸಬೇಕೆಂಬ ಛಲವಿದೆ, ಆಹಂಕಾರವಿದೆ, ಬಲೆಗೆ ಬೀಳಿಸುವ ತಂತ್ರವಿದೆ. ಎಲ್ಲ ವರ್ಗದ ಓದುಗರಿಗೆ ಎನುಬೇಕೋ ಅದ್ದೆಲ್ಲಾ ಇದೆ.


ಮಾಟಾ ಮಂತ್ರ ಕೂಡ ಇದೆ. ಇದಿಲ್ಲದಿದ್ದರು ಕಾದಂಬರಿ ಚೆನಾಗಿರುತ್ತಿತ್ತು, ಇದರಿಂದ ಮತ್ತು ಕೆಲವು ವಿಷಯಗಳಿಂದ ಇದು ವಾಸ್ತವಕ್ಕೆ ಸ್ವಲ್ಪ ದೂರ ಅನಿಸುವುದುಂಟು. ಆದರೆ ಎಲ್ಲ ಹುಡುಗರು ತಾನು ಹಿಮವಂತ ಮತ್ತು ಬಿಟ್ಟು ಹೋದ ಹುಡುಗಿ ಪ್ರಾರ್ಥನಾ ಅನುಸುವುದರಲ್ಲಿ ಸಂಶಯವಿಲ್ಲ.


Friday, November 23, 2012

ಬೆಟ್ಟದ ಜೀವ - ಶಿವರಾಮ ಕಾರಂತ

Bettada Jeeva - Shivarama Karanth

 

 


 ತುಂಬಾ ದಿನಗಳ ಹಿಂದೆ ಶಿವರಾಮ ಕಾರಂತರ, "ಬೆಟ್ಟದ ಜೀವ" ಅನ್ನುವ ಚಿಕ್ಕ ಕಾದಂಬರಿಯೊಂದನ್ನ ಓದಲು ಶುರುಮಾಡಿದ್ದೆ. ಅದು ಕಾರಂತಜ್ಜರ ಮೇರುಕೃತಿಗಳಲ್ಲಿ ಒಂದೆಂಬುದನ್ನ ಕೇಳಿದ್ದೆ. ಅದು ಸುಮಾರು ನೂರೈವತ್ತು ಪುಟಗಳ ಚಿಕ್ಕ ಪುಸ್ತಕವಾದರೂ ಅದನ್ನ ಓದಿ ಮುಗಿಸಲು ಇಪ್ಪತ್ತು ದಿನಗಳಿಗೂ ಹೆಚ್ಚು ಸಮಯವಾಯ್ತು. ಅಷ್ಟೊಂದು ಸಮಯ ಹಿಡಿಯಲು ನನ್ನ ಕೆಲಸದ ಒತ್ತಡವಾಗಲಿ, ಪುಸ್ತಕವಾಗಲಿ ಕಾರಣವಾಗಿರಲಿಲ್ಲ, ಬದಲಾಗಿ ಓದುತ್ತಾ ಹೋದಂತೆಲ್ಲ ಎಲ್ಲಿ ಬೇಗನೆ ಮುಗಿದು ಬಿಡುವುದೊ ಅನ್ನುವ ಬೇಸರ ಅಷ್ಟೇ. ಹಾಗಾಗಿಯೇ ಮುಂದುವರೆದಂತೆಲ್ಲ ದಿನಕ್ಕೆ ಎರಡು-ಮೂರು ಪುಟಗಳನ್ನ ಮಾತ್ರ ಓದಿ ಮುಚ್ಚಿಡುತ್ತಿದ್ದೆ. ಒಮ್ಮೆ ಓದಿ ಮುಗಿಸಿದ ನಂತರ ಮತ್ತೆರಡು ಸಲ ಓದಿದೆ. ಕಾರಂತರಲ್ಲಿ ನಮ್ಮನ್ನ ಬರಹಗಳ ಮೂಲಕ ಕಟ್ಟಿಹಾಕುವ ಮಹತ್ತರವಾದ ಶಕ್ತಿಯಿತ್ತು. ಅದನ್ನ ಈ ಪುಸ್ತಕದಲ್ಲಿ ಹೆಚ್ಚಾಗಿಯೇ ತುಂಬಿದ್ದರು.

"ಬೆಟ್ಟದ ಜೀವ", ಬೆಟ್ಟದ ಪರಿಸರದಲ್ಲಿ ತೋಟ, ಗದ್ದೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ ವೃದ್ದ ದಂಪತಿಗಳ ಕಥೆಯಿದು. ಕಥೆಯ ಆಳ, ಎತ್ತರ ತುಂಬಾ ಚಿಕ್ಕದಿದ್ದರು ಅದನ್ನ ಬಿಂಬಿಸಿದ್ದ ರೀತಿ ಕಾರಂತರ ವಿಶೇಷತೆಗೆ ಸಾಕ್ಷಿ. ಪಶ್ಚಿಮ ಘಟ್ಟಗಳ ನಡುವೆ, ಸುಬ್ರಮಣ್ಯ ದ ಸಮೀಪ, ಕುಮಾರ ಪರ್ವತದ ತಪ್ಪಲಲ್ಲಿ ಮನೆಬಿಟ್ಟಿರುವ ಮಗನ ಅಗಲಿಕೆಯನ್ನ ಭರಿಸಿಕೊಂಡು, ಬದುಕಿನೆಡೆಗೆ ಉತ್ಸಾಹವನ್ನ ಕಳೆದುಕೊಳ್ಳದೆ, "ಸುಖ" ಎನ್ನುವ ಪದಕ್ಕೆ ಬೇರೆಯದೇ ಅರ್ಥ ಕಂಡುಕೊಂಡು ಬದುಕುವ ವೃದ್ದರ ಜೀವನಗಾಥೆಯನ್ನ ಕಾರಂತರು ನಮ್ಮೆದುರು ಬಿಡಿಸಿಟ್ಟಿದ್ದ ಪರಿ ಅದ್ಭುತವಾಗಿತ್ತು. ನಿಸರ್ಗದ ಸೊಬಗನ್ನ, ಅಲ್ಲಿಯ ಜನರ ಬದುಕನ್ನ, ಕಣ್ಣಿಗೆ ಕಟ್ಟುವಂತೆ ಪುಸ್ತಕದಲ್ಲಿ ಹೇಳಲಾಗಿತ್ತು. ಓದುತ್ತಾ ಸಾಗಿದಂತೆಲ್ಲ ಘಟ್ಟಗಳ ನಡುವಿನ ಸೌಂದರ್ಯ ರಾಶಿ ಸವಿದ ಅನುಭವವಾಗುತ್ತಿತ್ತು.

ಈಗ ಪುಸ್ತಕದ ಬಗ್ಗೆ ಪೀಠಿಕೆ  ಹಾಕಿದ್ದಕ್ಕೆ ಕಾರಣ ಇದೆ. ಈ ಪುಸ್ತಕ ಚಲನಚಿತ್ರವಾಗಿದೆ. ಹೌದು, ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಈ ಚಿತ್ರ ಮಾಡುವ ಮೊದಲು ಯಾರಾದರು ನನ್ನಲ್ಲಿ ಈ ಪುಸ್ತಕವನ್ನ ಆದರಿಸಿ ಚಲನಚಿತ್ರ ಮಾಡಬಹುದಲ್ವೆ ಅನ್ನುವ ಪ್ರಶ್ನೆ ಮಾಡಿದ್ದರೆ, ಖಂಡಿತ ಸಾದ್ಯವಿಲ್ಲ ಅನ್ನುವ ಉತ್ತರ ಬರುತ್ತಿತ್ತು. ಕಾರಣ ಕಾರಂತರು ವರ್ಣಿಸಿದ ರೀತಿಯಲ್ಲಿ ಪ್ರಕೃತಿಯನ್ನು ಮತ್ತು ಅಷ್ಟು ಚಿಕ್ಕ ಎಳೆಯಿರುವ ಕಥೆಯನ್ನ ತೆರೆಯ ಮೇಲೆ ಬಿಡಿಸಿದುವುದು ಸಾದ್ಯವಿಲ್ಲ ಅನ್ನುವ ಭಾವನೆ.

ಆದರೆ ಚಿತ್ರ ನೋಡಿ ಬಂದ ನಂತರ ನನ್ನ ಅನಿಸಿಕೆ ಬದಲಾಗಿದೆ. ಇಂತಹ ಅದ್ಬುತ ಕಾದಂಬರಿಯನ್ನ ಅದರ ಮೂಲಸ್ವರೂಪಕ್ಕೆ ತೊಂದರೆಯಾಗದಂತೆ ನಿರ್ದೇಶಕ ಶೇಷಾದ್ರಿ ತೋರಿಸಿದ್ದಾರೆ. ಅವರ ಈ ಪ್ರಯತ್ನ ಮೆಚ್ಚುವಂತದ್ದು. ಬೆಂಗಳೂರಿನ ಕಾಂಕ್ರಿಟ್ ಕಾಡನ್ನ ಮರೆತು, ನಮ್ಮ ಪಶ್ಚಿಮ ಘಟ್ಟಗಳ ಸುಂದರ ಕಾಡಿನೊಂದಿಗೆ ಮೈಮರೆತು ವಿಹರಿಸುವ ತವಕವಿದ್ದವರು ನೋಡಲೇಬೇಕಾದ ಚಿತ್ರವಿದು. ಚಿತ್ರದ ಕತೆ ಚಿಕ್ಕದಾದುದರಿಂದ ಸ್ವಲ್ಪ ಮಂದಗತಿಯಲ್ಲಿ ಸಾಗಿದರು, ತೆರೆಯ ಮೇಲೆ ಕಾಣುವ ಪ್ರಕೃತಿ ಸೌಂದರ್ಯದ ಶ್ರೀಮಂತ ದೃಶ್ಯಗಳು ಎಲ್ಲಿಯೂ ಬೇಸರವೆನಿಸದಂತೆ ನೋಡಿಕೊಳ್ಳುತ್ತವೆ. ಅನಂತ ಅರಸ್ ಅವರ ಛಾಯಾಗ್ರಹಣ ಚಿತ್ರದ ಯಶಸ್ಸಿನಲ್ಲಿ ಪ್ರಮುಕ ಪಾತ್ರ ವಹಿಸಿದೆ. ಗೊಪಲಯ್ಯನ ಪಾತ್ರದಲ್ಲಿ ಧತ್ತಾತ್ರೆಯ ಅವರು ವಯಸ್ಸು ಮರೆತು ನಟಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ. ಮಚ್ಚು-ಲಾಂಗುಗಳು ಗುಡುಗುವ ಇವತ್ತಿನ ಚಲನಚಿತ್ರಗಳ ಮದ್ಯೆ "ಬೆಟ್ಟದ ಜೀವ" ಚಿತ್ರ ವಿಶೇಷವಾಗಿ ಕಾಣುತ್ತದೆ. ಆದರೆ ಕೇವಲ ಎರಡು ಚಿತ್ರಮಂದಿರಗಳಲ್ಲಿ ಮಾತ್ರ ತೆರೆ ಕಂಡಿರುವುದು ಬೇಸರದ ಸಂಗತಿ. ಅದಕ್ಕೆ ಜನರ ಅಭಿರುಚಿಯ ಬಗ್ಗೆ ನಿರ್ಮಾಪಕರಿಗೆ ಇರುವ ಅಳುಕು ಕಾರಣವಿರಬಹುದು. ಅಪರೂಪವಾಗಿರುವ ಇಂತಹ ಚಿತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎನ್ನುವ ಆಶಯ ನಮ್ಮದು.
ಮೂಲ: http://goo.gl/72JEd
ಚಿತ್ರದ ಬಗ್ಗೆ: http://goo.gl/qNg9T


Wednesday, November 14, 2012

ಕಾಡಿನ ಕತೆಗಳು - ಪೂರ್ಣಚಂದ್ರ ತೇಜಸ್ವಿ

Kaadina Kathegalu - Poornachandra Tejasvi


Belandurina Narabhakshaka (Kaadina Kategalu - 1)
Pedachurina Rakshasa (Kaadina Kategalu - 2)
Jalahalliya Kurka (Kaadina Kategalu - 3)
Muniswami Mattu Magadi Chirathe (Kaadina KategaLu - 4)





ಕಾಡಿನ ಕತೆಗಳು - ಕಥಾಸಂಕಲನ


ಪುಸ್ತಕದ ಮುನ್ನುಡಿಯಿಂದ:-


ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ತಮ್ಮ ಅನುಭವಗಳನ್ನು ಬರೆದ ಕಾಲ ಚಾರಿತ್ರಿಕವಾಗಿ ಒಂದು ವಿಚಿತ್ರ ಪರ್ವಕಾಲವೆಂದು ಹೇಳಬಹುದು. ಹಿಂದೆ ಇಲ್ಲದ ಮತ್ತು ಮುಂದೆ ಬರದ 'ನ ಭತೋ ನ ಭವಷ್ಯತಿ' ಎನ್ನುವಂಥ ಚಾರಿತ್ರಿಕ ತಿರುವಿನಲ್ಲಿ ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇರಲಿಲ್ಲವೆಂದಲ್ಲ. ಹುಲಿ ಸಂಹರಸಿದ ಹೊಯ್ಸಳನಂಥ ಧೀರರ ಕತೆಗಳನ್ನು ನಾವು ಚರಿತ್ರೆಯಲ್ಲಿ ಕಾಣಬಹುದು. ಆದರೆ ಜನಸಂಖ್ಯೆ ಈಗಿನಂತೆ ಇರಲ್ಲಿಲ್ಲ. ಮತ್ತು ಕಾಡುಗಳಲ್ಲಿ ಹುಲಿ ಚಿರತೆಗಳ ಆಹಾರವಾದ ಇತರ ಪ್ರಾಣಿಗಳು ಹೇರಳವಾಗಿ ಇದ್ದವು ಹುಲಿ ಚಿರತೆಗಳಿಗೆ ಸಮಾಜ ಜೀವಿಯಾದ ಮನುಷ್ಯನನ್ನು ಹಿಡಿದು ತಿನ್ನಬೇಕಾದ ತುರ್ತು ಏನು ಇರಲ್ಲಿಲ್ಲ. ಅದ್ದರಿಂದ ಈ ಇಬ್ಬರು ಲೇಖಕರು ಹಿಂದೂ ನರಬಕ್ಷಕಗಳು ಹಾವಳಿ ಈ ಪ್ರಮಾಣದಲ್ಲಿ ಇರಲ್ಲಿಲ್ಲ.



ಬ್ರಿಟಿಷ್ ಸಾಮ್ರಾಜ್ಯದ ಪ್ರಾರಂಭಿಕ ದಿನಗಳಲ್ಲಿ, ಕೈಗಾರಿಕಾ ಕ್ರಾತಿ ತನ್ನ ಮೊದಲ ಹೆಜ್ಜೆ ಇಡಲು ಶುರು ಮಾಡಿದಾಗ ನರಭಕ್ಷಕ ಹುಲಿ ಚಿರತೆ ಸಿಂಹಗಳ ಘಟನೆಗಳನ್ನು ನೀವು ಹೆಚ್ಹಾಗಿ ಗಮನಿಸಬಹುದು. ಈ ಖಂಡಗಳಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಾ ನಾಗರೀಕತೆ ವಿಸ್ತರಿಸಿ ಕಾಡಿನ ವಿಸ್ತೀರ್ಣ ಕುಗ್ಗುತ್ತಾ ಹೋದಂತೆ ಕಾಡಿನ ಮಾಂಸಹಾರಿ ಪ್ರಾಣಿಗಳು ವಿವಿಧರೀತಿಯ ಒತ್ತಡಕ್ಕೆ ಸಿಕ್ಕಿಕೂಂಡವು. ಕಾರ್ಬೆಟ್ ಮತ್ತು ಆಂಡರ್ಸನ್ ಈ ಪ್ರಾಣಿಗಳು ನರಬಕ್ಷಕಲಾಗಳು ಅನೇಕಾನೇಕ ವೈಯ್ಯಕ್ತಿಕ ಕಾರಣಗಳನ್ನು ಕೊಡುತ್ತಾರಾದರೂ, ಈ ಕಾರಣಗಳಿಗೂ ನಾನು ಮೇಲೆ ಹೇಳಿದ ಚಾರಿತ್ರಿಕ ಸಂದರ್ಭ ಮೂಲಭೂತ ಕಾರಣ ಎಂದು ನನ್ನ ಭಾವನೆ. ಈ ಚಾರಿತ್ರಿಕ ಘಟ್ಟದಲ್ಲಿ ಬದುಕಿದ್ದವರಿಂದ ಮಾತ್ರ ಇಂಥ ಕೃತಿಗಳನ್ನು ರಚಿಸಲು ಸಾಧ್ಯ. ಈಗ ಹುಲಿಗಳೇ ಅವಸಾನದ ಅಂಚಿನಲ್ಲಿದ್ದು ಸರ್ಕಾರದ ಸಹಾಯಧನದಿಂದ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಇನ್ನು ನರಭಕ್ಷಕಗಳ ಸವಾಲನ್ನು ಎದುರಿಸಬೇಕಾದ ಸಂದರ್ಭ ಪುನರಾವರ್ತನೆಯಾಗುವುದು ಅಸಂಭವ. ಆದ್ದರಿಂದಲೇ ನಾನು ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ರ ಅನುಭವಗಳನ್ನು 'ನ ಭತೋ ನ ಭವಷ್ಯತಿ' ಅಂದು ಹೇಳಿದ್ದು.


ನಾನು ಹುಟ್ಟುವ ಎಲೆಗಾಗಲೇ ಶಿಕಾರಿ ಯುಗದ ಕೊಟ್ಟಕೊನೆಯ ತುದಿ ಬಂದಿತ್ತು. ಆದರು ಈ ಕತೆಗನನ್ನು ಆಸ್ವಾದಿಸಿ ಅನುಭವಿಸುವ ಮಟ್ಟಿಗಾದರೂ ನನಗೆ ಕಾಡಿನ ಅನುಭವಗಳು ಪರಿಚಯವಾಯ್ತು. ಕೆನೆತ್ ಆಂಡರ್ಸನ್ ಕತೆಗಳ ಹಿನ್ನಲೆ, ಪರಿಸರ, ಪಾತ್ರಗಳು ಎಲ್ಲ ನನ್ನ ಅನುಚವವೇ ಅನ್ನುವಷ್ಟು ಚಿರಪರಿಚಿತವಾದುದು. ಚೋರ್ಡಿ, ಶೆಟ್ಟಿಹಳ್ಳಿ. ಶಿಕಾರಿಪುರ, ಬೆಳ್ಳಂದೂರು ಎಲ್ಲಾ ನಾವು ಕೋವಿ ಹೆಗಲಿಗೀರಿಸಿಕೊಂಡು ಮಳೆ ಬಿಸಿಲೆನ್ನದೆ ತಿರುಗಾಡಿರುವ ಜಾಗಗಳು. ನಾವು ಕಾದಿಗಿಲಿದಾಗ ನರಬಕ್ಷಕಗಳ ಯುಗ ಮುಗಿತ್ತೆಂಬುದೊಂದನ್ನು ಬಿಟ್ಟರೆ ಮಿಕ್ಕಿದೆಲ್ಲ ನಾನೇ ಅನ್ದೆರ್ಸೋನ್ನರ ಜೊತೆ ಇದ್ದೆನೇನೋ ಎನ್ನುವಷ್ಟು ನನಗೆ ಗೊತ್ತು.



Tuesday, November 6, 2012

ಕವಲು - ಎಸ್ ಎಲ್ ಭೈರಪ್ಪ

Kavalu - S L Bhyrappa





ಭೈರಪ್ಪನವರ ಕವಲು ಓದಿದ ಮೇಲೆ ಈ ಕಾದಂಬರಿ ೨೨ನೇ ಮುದ್ರಣ ಕಂಡಿರುವಲ್ಲಿ ಆಶ್ಚರ್ಯವಿಲ್ಲ ಅಂತ ಅನಿಸುತ್ತಿದೆ. ಇವತ್ತು ಪತ್ರಿಕೆಯಲ್ಲಿ ಓದಿದೆ ಬೆಂಗಳೂರಿನಲ್ಲಿ ಒಂದು ಹುಡುಗಿ ತನ್ನ ಪ್ರಿಯಕರನನ್ನು ಕೊಂದು, ಪೋಲಿಸ್ ರವರ ಮುಂದೆ ತನ್ನ ತಪ್ಪನ್ನು ನಗುಮುಕದಿಂದ ಒಪ್ಪಿಕೊಂಡಳು ಅಂತ. ಸ್ವಲ್ಪ ಹೆದರಿಕೆಯಾತ್ತು, ಕವಲು ಮತ್ತು ಈ ಸುದ್ದಿ, ಮದುವೆಯಾಗದ ಹುಡುಗರ ಪಾಡೇನು ಅಂತ. ಪ್ರೀತಿಸಿದ ಹುಡುಗರನ್ನು ಹುದುಗೊಇ ಕೊಲ್ಲುತ್ತಾಳೆ, ಮದುವೆಯಾದ ಹೆಂಡತಿ ಡೈವೋರ್ಸ್ನಲ್ಲಿ ಎಲ್ಲ ಕಿತ್ತಿಕೊಲ್ಲುತ್ತಲೇ, ಸ್ವಲ್ಪ ಮೈ ಜುಮೆನ್ನುತ್ತದೆ.


ಕವಲಿನಲ್ಲಿ ಬರುವ ಪಾತ್ರಗಳು ಯಾವುದೊ ಕಾಲ್ಪನಿಕ ಕಥೆಯಲ್ಲ, ಇದು ನಿಜಜೀವನದ ಕೈಕನ್ನಡಿ ಎನ್ನುವಂತಿದೆ, ಕವಲು ಬಿಡುಗಡೆಯಾದಾಗ ಕೆಲವು ಮಹಿಳ ಸಂಗಟನೆಗಳು ಈ ಕಾದಂಬರಿ ಮಹಿಳೆಯರ ವಿರುದ್ಧ, ಹೆಣ್ಣಿನ ಹವಹೆಲನ ಎಂತೆಲ್ಲ ಪ್ರತಿಬತನೆಗಳು ನಡೆದವು, ಯಾಕೆ ನಡೆದವು ಎಂದು ಪುಸ್ತಕ ಶುರು ಮಾಡಿದ ಮೇಲೆ ಗೊತ್ತಾಗುತ್ತದೆ, ಇದು ಕೆಲವು ಹೆಂಗಸರ ಅದರಲ್ಲೂ "ಸುಡೋ ಫೆಮಿನಿಸ್ಟ್" ಗಳ ಜೇಡರ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡ ಗಂಡಸರ ಮತ್ತು ಕಾನೂನಿನ ಕಾಯ್ದೆಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುವ ಕೆಲವು  ಮಹಿಳೆಯರ ನಡತೆಯನ್ನು ವಿವರಿಸುತ್ತದೆ,


ಇದರಲ್ಲಿ ಬರುವ ಎರಡು ಪಾತ್ರಗಳು ಇಳಾ ಮತ್ತು ಮಂಗಳ ಭಾರತ ಸಂಸೃತಿಯ ಮಹಿಳೆಯರು ದೌರ್ಜನ್ಯ, ಹಿಂಸೆ, ಮಾತ್ತು ತುಳಿತ್ತಕೊಳಗಾದವರು ಇದನ್ನು ಹೋಗಲಾಡಿಸಲು ಅಮೇರಿಕಾದಲ್ಲಿ ಮಹಿಳೆಯರಿಗಿರುವ ಸ್ವಾತಂತ್ರ್ಯ ಇಲ್ಲೂ ಬರಬೇಕು ಎನ್ನುವವರು. ಅವರಿಬ್ಬರೂ ಈ ಕಾದಂಬರಿಯಲ್ಲಿ ಬರಿ ಅಲ್ಲಿರುವ ಸ್ವಾತಂತ್ರ್ಯ ಬೇಕು ಆದರೆ ಅಲ್ಲಿರುವ ಮಹಿಳ ಕಾನೂನು, ಗಂಡಿನ ಹಿತರಕ್ಷಣೆ ಕಾನೂನು ಬೇಡ, ನ್ಯಾಯಾಲಯದಲ್ಲಿ ಮಾತ್ರ ಇವರನ್ನು ಭಾರತಿಯ ಮಹಿಳೆಯರ ರೀತಿ ಮತ್ತು
ನ್ಯಾಯಾಲಯದ ಹೊರಗೆ ಇವರನ್ನು ಹೊರದೇಶದ ಮಹಿಳೆಯರ ರೀತಿ ಗುರುತಿಸಬೇಕೆ ಎಂದು ಅವರ ವಾದ.


ನಾನು ಕಾರಂತರ ಮಹಿಳ ಶೋಷಣೆಗಳ ಬಗ್ಗೆ ಓದಬೇಕಾದರೆ, ಗಂಡಸರು ಅನುಭವಿಸುವ ಕಷ್ಟಗಳು, ಹೆಣ್ಣಿಂದ ಮೋಸಕ್ಕೆ ಹೊಳಗಾದವರ ಬಗ್ಗೆ ಯಾರು ಯಾಕೆ ಬರೆದಿಲ್ಲ ಅನಿಸುತ್ತಿತ್ತು, ಕವಲು ಓದಿದ ಮೇಲೆ ತಿಳಿಯಿತು ಅಂತ ಕಾದಂಬರಿಗಳು ಇವೆ ಅಂತ. ಒಂದು ಸಾಮಜದಲ್ಲಿ ಒಂದು ಕಾನೂನು ಮಾಡಿದರೆ ಅದನ್ನು ಊಪಯೋಗಿಸುವವರು ಮಾತ್ತು ದುರೂಪಯೊಗ ಮಾಡುವವರು ಇಬ್ಬರು ಇರುತ್ತಾರೆ, ಅದರಲ್ಲಿ ನಾವು ತೂಗಿ ಆಳತೆ ಮಾಡಿ ಜೀವನ ನಡೆಸಬೇಕು.


ಯಾವುದೇ ಕಾರಂತರ ಕಾದಂಬರಿ ಓದಿದ ಜನ ಭೈರಪ್ಪನವರ ಕವಲು ಓದಲೇಬೇಕು, ಯಾಕೆಂದರೆ ಸಮಾಜ ಒಂದು ನಾಣ್ಯದ ಎರಡು ಮುಖ ಇದ್ದಹಾಗೆ, ಕಾರತರ ಕದಮಬರಿ ಒಂದು ಮುಖವಾದರೆ ಕವಲು ಇನ್ನೊದು ಮುಖ. 


Friday, October 19, 2012

ರುದ್ರಪ್ರಯಾಗದ ಭಯಾನಕ ನರಬಕ್ಷಕ - ಪೂರ್ಣಚಂದ್ರ ತೇಜಸ್ವಿ

Rudraprayagada Bhayanaka Narabhakshaka - Poornachandra Tejasvi



 

ಪುಸ್ತಕದ ಮುನ್ನುಡಿಯಿಂದ 

ಜಿಮ್ ಕಾರ್ಬೆಟ್  ರವರ ಸಾಹಸ ಸತ್ಯಕಥೆ "ರುದ್ರಪ್ರಯಾಗದ ನರಭಕ್ಷಕ" ಅದರ ವಸ್ತುವಿನಿಂದ ಮಾತ್ರವಲ್ಲದೆ ಗದ್ಯಶ್ಯಲಿಯಿಂದಲೂ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಖ್ಯಾತ ಕೃತಿಯಾಗಿದೆ. ಜಿಮ್ ಕಾರ್ಬೆಟ್  ರವರಿಗೆ ಸಾಹಿತ್ಯದಲ್ಲಿ ಚಿರಸ್ಥಾಯಿಯಾದ ಸ್ಥಾನ ದೊರಕಲು ಈ ಕೃತಿಯೂ ಒಂದು ಮೂಖ್ಯ ಕಾರಣವೆಂದೇ ಹೇಳಬಹುದು. ಎಂಟು ವರ್ಷಗಳ ಪರ್ಯಂತ ರುದ್ರಪ್ರಯಾಗದ ಆಜುಬಾಜಿನ ಐನೂರು ಚದರಮ್ಯಲಿ ಪ್ರದೇಶದಲ್ಲಿ ನಿರಂತರವಾಗಿ ನೂರಾರು ಕಗ್ಗೊಲೆಗಳನ್ನು ಮಾಡಿದ ಈ ಚಿರತೆಯಾ ಕುಯುಕ್ತಿ, ಚಾಣಾಕ್ಷತೆ, ಮನುಷ್ಯರ ನಡವಳಿಕೆ ತಿಳುವಳಿಕೆಗಳು ಅದನ್ನು ಈ ಕತೆಯ ಅಸಾಮಾನ್ಯ ಖಳನಾಯಕನನ್ನಾಗಿ ರೂಪಿಸಿದೆ.


ಸರ್ಕಾರದಿಂದ ಹಿಡಿದು ಸಾರ್ವಜನಿಕನಿಕರವರಿಗೆ ಎಲ್ಲರೂ ಇದು ಪ್ರಾನಿಯಲ್ಲವೆಂದೂ, ಯಾವುದೊ ಕ್ರೂರ ಪಿಶಾಚಿಯೇ ಪ್ರಾಣಿರೂಪ ಧರಿಸಿದೆ ಎಂದು ಯೋಚಿಸಿ ದಿಗ್ಬ್ರಾಂತರಾಗಿ ಕೈಕಟ್ಟಿ ಕುಳಿತರೆಂದರೆ ಈ ನರಬಕ್ಷಕ ಎಂಥ ಭೀಕರ ಕೊಲೆಪಾತಕಿಯಾಗಿರಬಹುದು ಯೋಚಿಸಿ! ಅಂಥ ಸನ್ನಿವೇಶದಲ್ಲೂ ಎಂದೆಗೆಡದೆ ಎಲ್ಲರಿಗೂ ಧೈರ್ಯ ಹೇಳುತ್ತಾ ಅಕ್ಷರಸಹ ಪ್ರಾಣದ ಹಂಗು ತೊರೆದು ಈ ನರಭಕ್ಷಕಕೊಲೆಗಳ ಸರಣಿಯನ್ನು ತಡೆಯಲು ಹೋರಾಡಿದ ಜಿಮ್ ಕಾರ್ಬೆಟ್  ಭಾರತ ರೂಪಿಸಿದ ಸರಳ, ಧೀರ, ಅಸಾಧಾರಣ ವ್ಯಕ್ತಿ. ಈತನ ಮುಗ್ದ ಪ್ರಾಮಾಣಿಕತೆ, ಅಲ್ಲಿನ ಜನಗಳಿಗೂ ಈತನಿಗೆ ಇದ್ದ ಪರಸ್ಪರ ಪ್ರೀತಿ ಗೌರವಗಳು ಈ ಪುಸ್ತಕಾದಾದ್ಯಂತ ಎಷ್ಟು ಚೆನ್ನಾಗಿ ಪ್ರತಿಬಿಂಬಿತವಾಗಿದೆ ಎಂದರೆ ಈ ಕೃತಿ ಸಾಹಸ ಕಥೆಗಿಂತಲೂ ಮಿಗಿಲಾಗಿ ನಮಗೆ ಘಾವಾ೯ಲಿನ ಜನರ ಸಾಮಾಜಿಕ ಕಾದಂಬರಿಯಂತೆ ಕಾಣುತ್ತದೆ. ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್  ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವನದ ಹಂಗು ತೊರೆದು ಕಾರ್ಬೆಟ್ ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘಾವಾ೯ಲಿನ ಮುಗ್ದ ರೈತರು ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.


ರುದ್ರಪ್ರಯಾಗದ ನರಬಕ್ಷಕ ಮೈ ನವಿರೇಳಿಸುವಂಥ ಸತ್ಯಕಥೆಯಾಗಿರುವಂಥೆಯೇ ಅದ್ಭುತ ಕಲಾಕೃತಿಯೂ ಆಗಿದೆ.


Tuesday, October 16, 2012

ಪಾಕ ಕ್ರಾಂತಿ ಮತ್ತು ಇತರ ಕಥೆಗಳು - ಪೂರ್ಣಚಂದ್ರ ತೇಜಸ್ವಿ

Paaka Kranti Mattu Itare Kathegalu - Poornachandra Tejasvi




"ಪಾಕ ಕ್ರಾಂತಿ ಮತ್ತು ಇತರೆ ಕತೆಗಳು" ತೇಜಸ್ವಿಯವರ ಕಥಾಸಂಕಲನ. ಇದ್ದರಲ್ಲಿ ಬರೆದಿರುವ ಲೇಖನಗಳು ಕತೆ ಎನ್ನುವುದಕ್ಕಿಂತ ಜೀವನದಲ್ಲಿ ನಡೆದ ಘಟನೆಗಳು ಎನ್ನಬಹುದು. ಇದು ಎಲ್ಲರ ಜೀವನದಲ್ಲಿ ಒಂದು ಬಾರಿ ನಡೆಯೋ ಘಟನೆಗಳು.

೧. ಪಾಕಕ್ರಾಂತಿ
೨. ಕಳ್ಳನ ಕತೆ
೩. ಸುವರ್ಣ ಸ್ವಪ್ನ
೪. ಪಿಶಾಚಿಗಳು
೫. ನಗು
೬. ಮಳೆಗಾಲದ ಚಿತ್ರ
೭. ಸಂತೆ
೮. ಮೃತ್ಯೋರ್ಮಾ


ಹೆಂಡತಿ ಮನೆಯಲ್ಲಿ ಇಲ್ಲ ಅಂದ್ರೆ ಆಗುವ ಅವಾಂತರಗಳು, ಊಟಕ್ಕೆ ಆಗುವ ಕಷ್ಟಗಳು, ಅಡುಗೆ ಮಾಡಲು ಹೋಗಿ ಏನನ್ನನ್ನೋ ಮಾಡಿ ಗೊಣಗುವುದು. ಇದು ಮಾಡುವೆ ಆದ ಎಲ್ಲರಿಗು ಒಂದಲ್ಲ ಒಂದು ದಿನ ಆಗುವ ಘಟನೆ. ಎಲ್ಲ ಗಂಡಸರು ಹೆಂಡತಿ ಮಾಡುವ ಅಡುಗೆ ಬಹಳ ಸುಲಬ ಕಾರ್ಯ ಮತ್ತು ಅದು ತಾನು ಮಾಡಬಲ್ಲ ಎಂದು ಅದ್ದುಕೊಂದಿರುತ್ತಾನೆ, ಅದು ಸುಳ್ಳೆಂದು ಗೊತ್ತಾಗುವುದು ಹೆಂಡತಿ ಒಂದು ವಾರ ಊರಲ್ಲಿ ಇಲ್ಲದಿರುವಾಗ.


ಇದೆ ರೀತಿ ಕ್ಲಾಸ್ಸಲ್ಲಿ ನಕ್ಕು ಮೇಡಂಕೈಯಲ್ಲಿ ಬೈಸಿಕೊಂಡಿದ್ದು , ಸಂತೆಯನ್ನು ನೋಡಿ ಆಶ್ಚರ್ಯದಿಂದ ನೋಡಿದ್ದು, ಮನೆಯಲ್ಲಿ ದೊಡ್ಡವರು ಸತ್ತಾಗ ಮಕ್ಕಳಿಗೆ ಅವರ ದೇವರ ಹತ್ತಿರ ಹೋಗಿದ್ದರೆಂದು ಹೇಳುವುದು ಯಾರ ಜೀವನದಲ್ಲಿ ಬೇಕಾದರೂ ಆಗಬಹುದು. ಆದ್ದರಿಂದಲೇ ನಾನು ಇದು ಕಥೆಗಳು ಅನ್ನುವುದುಕಿಂತ ಜೀವನದ ಘಟನೆಗಳು ಅನ್ನುವುದು.


Tuesday, October 9, 2012

ಕರ್ವಾಲೊ - ಪೂರ್ಣಚಂದ್ರ ತೇಜಸ್ವಿ

Karvalo -  Poornachandra Tejasvi

 

 

"ಕರ್ವಾಲೊ" ಕಾದಂಬರಿ, ಪೂರ್ಣಚಂದ್ರ ತೇಜಸ್ವಿ ಯಾಕೆ ಕನ್ನಡದ ಒಬ್ಬ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರು ಎಂಬುದನ್ನು ತಿಳಿಸುತ್ತದ್ದೆ. ಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿಯ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೊ ಕಾಲವಿಜ್ಞಾನಿಯಾಗಿ ರೂಪುಒಳ್ಳುವ ಅಚ್ಚರಿಯ ಕಥೆ. ಧರ್ಮ, ಧ್ಯಾನ, ತಪಸ್ಯಗಳಂತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡ ಎಲ್ಲ ಕಾದಂಬರಿಗಳಿಗಿಂತ ಸಂಪೂರ್ಣ ಬಿನ್ನವಾದ ಕೃತಿ. ತೆಜ್ವಸ್ವಿ ವಿವರಿಸುವ ಪರಿಸರ, ಗುಡ್ಡ ಗಾಡು ಪ್ರದೇಶದ ಜೀವನ, ಅಲ್ಲಿನ ಜನಗಳ ತೊಂದರೆಗಳು, ಪಡುವ ಕಷ್ಟಗಳನ್ನು ಕಣ್ಣಿಂದ ನೋಡಿದ ರೀತಿಯಲ್ಲಿ ವಿವರಿಸುತ್ತಾರೆ. ಕರ್ವಾಲೊ ಕಾಡಿನಲ್ಲಿ ನಡೆಯುವ ಒಂದು ಸಂಶೋದನೆ ಕೃತಿ.

ಈ ಕಾದಂಬರಿ ನೀವು ಯಾಕೆ ಓದಬೇಕು ಎಂಬುದಕ್ಕೆ ಸಾಕ್ಷಿ ಈ ಕಾದಂಬರಿ ಇಂಗ್ಲಿಷ್, ಹಿಂದಿ, ಮರಾಠಿ, ಮಲಯಾಳಂ ಮತ್ತು ಜಪಾನೀ ಭಾಷೆಗಳಲ್ಲಿ ಪ್ರಕಟವಾಗಿದೆ



Wednesday, October 3, 2012

ಕಿರಗೂರಿನ ಗಯ್ಯಾಳಿಗಳು - ಪೂರ್ಣಚಂದ್ರ ತೇಜಸ್ವಿ

Kiragoorina Gayyaligalu - Poornachandra Thejasvi



ಕಿರಗೂರಿನ ಗಯ್ಯಾಳಿಗಳು ಪೂರ್ಣಚಂದ್ರ ತೇಜಸ್ವಿಯವರ ಕಥಾ ಸಂಕಲನ. ಇದರಲ್ಲಿ ಇರುವ ಕಥೆಗಳು


೧. ಕಿರಗೂರಿನ ಗಯ್ಯಾಳಿಗಳು
೨. ಕೃಷ್ಣೇಗೌಡನ ಆನೆ
೩. ಮಾಯಾ ಮೃಗ
೪. ರಹಸ್ಯ ವಿಶ್ವ


ಕಿರಗೂರಿನ ಗಯ್ಯಾಳಿಗಳು ಹೆಸರೇ ಹೇಳುವಂತೆ ಇದು ಕಿರಗೂರಿನ ಹೆಂಗಸರ ಕಥೆ. ಕಿರಗೂರಿನ ಹೆಂಗಸರು ತಮ್ಮ ಉಜ್ವಲ ಸೌಂದರ್ಯದಿಂದ ನೋಡಿದವರನ್ನು ಬೆಚ್ಚಿ ಬೀಳಿಸುತ್ತಿದ್ದರು. ಇಲ್ಲಿನ ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು. ಮೂರು ರಾತ್ರಿ ಮೂರು ದಿನ ಬೀಸಿದ ಬಿರುಗಾಳಿಂದ ಸೀಗೆಗೌಡರ ಮನೆ ಹತ್ತಿರ ಇದ್ದ ದೊಡ್ಡ ಮರ ಗಾಳಿ ಬೀಸಿದ ದಿಕ್ಕೆಗೆ ವಾಲಿಕೊಂಡಿತ್ತು. ಇದನ್ನು ಕಡಿಯಲು ಊರ ಹರಿಜನರ ಮಾರನು ಮತ್ತು ಸಿದ್ದನಿಗು ಸೀಗೆಗೌದರು ಹೇಳಿದರು. ಮರದ ಬೃಹದಾಕಾರ ಮತ್ತು ಜಟಿಲತೆ ಇಂದ ಮರವನ್ನು ಕಡಿಯಲಾಗಲ್ಲಿಲ್ಲ. ಶಂಕ್ರಪ್ಪನ ದುರುದ್ದೇಶದಿಂದ ಭ್ಯರಪ್ಪ, ಸುಬ್ಬಯ್ಯ, ಸೀಗೇಗೌಡ, ರಾಮಣ್ಣ ಮತ್ತು ಕಾಳೇಗೌಡ ಊರ ಪೋಲಿಸ್ ಸ್ಟೇಷನ್ನಲ್ಲಿ ರಾತ್ರಿ ಕಳೆದರು. ಇದು ಹರಿಜನರಿಂದ ಎಂದು ತಿಳಿದು ಮರ ಕಡಿಯಲು ಶಿಮೊಗ್ಗದಿಂದ ಸೋನ್ಸ್ ಮತ್ತು ಮಲಯಾಳಿಯನ್ನು ಕರೆಸಿದರು. ಹಾಗೋ ಹೀಗೋ ಮಾಡಿ ಮರ ಕಡಿದರು ಕಡಿದ ಮರ ಊರಳಿಸಲು ಹೋಗು ಭ್ಯ್ರಪ್ಪನ ಬೆನ್ನಿನ ಮೂಳೆಗೆ ಪೆಟ್ಟಾಯಿತು. ಕರಿಯ ಊರಿಗೆ ಮೂಳೆ ಹುಳುಕು ತೆಗೆದರು ಮರ ಕಡಿಯಲು ಹರಿಜನರ ಬದಲು ಬೇರೆಯವರಿ ಊಸ್ತೆವಾರಿ ಕೊಟ್ಟಿದ್ದರಿಂದ ಹುಳುಕು ತೆಗೆಯಲು ಒಪ್ಪಲ್ಲಿಲ್ಲ. ಇದರಿಂದ ಆದ ರಾದ್ದಾಂತ, ಹೆಂಗಸರ ಹಿಂಸಾಚಾರ, ಕಳ್ಳ ಬಟ್ಟಿ ಅಂಗಡಿ ದ್ವಂಸ, ಪ್ಪೋರ್ನಚಂದ್ರ ತೇಜಸ್ವಿಯವರು ಈ ಕಥೆಯಲ್ಲಿ ಚಿತ್ರಿಸಿದ್ದಾರೆ.


"ಮಾಯಾಮೃಗ" ಕತೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಂದ ರಾಷ್ಟ್ರದ ಅತ್ಯುತ್ತಮ ಹತ್ತು ಕತೆಗಳಲ್ಲಿ ಒಂದೆಂದು ಪರಿಗಣಿಸಿ "ಕಥಾ ರಾಷ್ಟ್ರೀಯ ಪ್ರಶಸ್ತಿ" ಕೊಡಲಾಗಿದೆ. "ಕೃಷ್ಣೇಗೌಡನ ಆನೆ" ಕತೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಮಲಯಾಳಿ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ.



Saturday, September 29, 2012

ಅಬಚೂರಿನ ಪೋಸ್ಟಾಫೀಸು - ಪೂರ್ಣಚಂದ್ರ ತೇಜಸ್ವಿ

Abachurina Postoffice - Poornachandra Thejasvi

Abachoorina Postoffice
Avanati
Kubi Mattu Yiyaala
Tukkoji
Dare Devil Mustafa
Tabarana Kathe
Tyakta

 


ಅಬಚೂರಿನ ಪೋಸ್ಟಾಫೀಸು ಪೂರ್ಣಚಂದ್ರ ತೇಜಸ್ವಿಯವರ ಕಥಾ ಸಂಕಲನ.  ಈ ಸಂಕಲನದಲ್ಲಿ ಬರುವ ಕಥೆಗಳು:

ಅಬಚೂರಿನ ಪೋಸ್ಟಾಫೀಸು
ಅವನತಿ
ಕುಬಿ ಮತ್ತು ಇಯಾಲ
ತುಕ್ಕೋಜಿ
ಡೇರ್ ಡೆವಿಲ್ ಮುಸ್ತಫಾ
ತಬರನ ಕಥೆ
ತ್ಯಕ್ತ

ಅಬಚೂರಿನ ಪೋಸ್ಟಾಫೀಸು

ಭೋಬಣ್ಣ ಅಬಚೂರಿನ ಮೊದಲಿನ ಪೋಸ್ಟ್ ಆಫೀಸಿನ ಮೊದಲ ಕೆಲಸಗಾರ. ಸ್ವಲ್ಪ ಇಂಗ್ಲಿಷ್ ಗೊತ್ತಿದ್ದರಿಂದ ಮತ್ತು ಆ ಊರಿನಲ್ಲಿ ಯಾರಿಗೂ ಇಂಗ್ಲಿಷ್ ಗೊತ್ತಿಲ್ಲದ್ದರಿಂದ ಅವನಿಗೆ ಆ ಕೆಲಸ ಕೊಟ್ಟಿದ್ದು. ಈ ಕೆಲಸ ಸಿಗುವ ಮೊದಲು ತುಂಬಾ ಖುಷಿಯಗ್ಗಿದ್ದ, ಆನಾಥನಾದ  ಭೋಬಣ್ಣ ಮಾಚಮ್ಮನ ಮನೆಅಳಿಯನಾದ. ಈ ಮೊದಲು ಅಲ್ಲೀಜಾನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭೋಬಣ್ಣ ಪೋಸ್ಟಾಫೀಸು ಬರುವರೆಗೂ ಯಾವುದೇ ತೊಂದರೆಯಿಲ್ಲದೆ ಜೀವನ ಸಾಗುಸಿತ್ತಿದ್ದ. ಒಂದು ದಿನ ಅಲ್ಲೀಜಾನ್ ಮಗನಿಗೆ ಬಂದಿದ್ದ ಪತ್ರವನ್ನು ಕದ್ದು ನೋಡಿ ಅಲ್ಲಿದ್ದ ಬೆತ್ತಲೆ ಹೆಣ್ಣಿನ ಚಿತ್ರ ನೋಡಿ ತನ್ನ ಹೆಂಡತಿ ಈಗೆ ಇರಬಹುದ ಎಂದು ಮನಸಿನ್ನಲೇ ಯೋಚನೆ ಮಾಡುತ್ತಾನೆ. ಆ ದಿನದ ನಂತರ ಯಾವುದೇ ಪತ್ರ ಬರಲಿ ಅದು ಹೆಣ್ಣಿನ ಬೆತ್ತಲೆ ಚಿತ್ರ ಎಂದು ಹೂಯಿಸಿ ತೆಗೆದು ನೋಡುತ್ತಾನೆ. ದಿನ ದಿನ ಕಳೆಯುತ್ತಾ ಪ್ಪೋಸ್ಟ್ ಆಫೀಸಿನಲ್ಲಿ ಜನ ಪತ್ರ ಬರೆಸುವುದು, ಓದುವುದು, ಹರಟೆ ಹೊಡೆಯುವುದು ಜಾಸ್ತಿ ಹಾಗುತ್ತ ಬಂತು. ಯಾರು ತೆಗೆದುಕೊಂಡು ಹೋಗದ ಪತ್ರವನ್ನು ಜಾಯಿಕಾಯಿ ಪೆಟ್ಟಿಗೆ ಹಾಕುವುದು ನಿತ್ಯದ ಕಾರ್ಯ. ಒಂದು ದಿನ ಬೆಲಾಯದ ಮಗಳ ಕೆಟ್ಟ ಚಾಳಿಯ ಮೇಲೆ ಒಂದು ಪತ್ರ ಬರುತ್ತದೆ. ಬೆಲಾಯ ಆ ಸಮಯದಲ್ಲಿ ಊರಿನಲ್ಲಿ ಇರದ ಕಾರಣ ಪತ್ರವನ್ನು ಜಾಯಿಕಾಯಿ ಪೆಟ್ಟಿಗೆ ಹಾಕಿದ, ಆ ಪತ್ರವನ್ನು ಊರಿನ ಜನ ನೋಡಿ ಗುಸು ಗುಸು ಮಾತಾಡುವುದು, ಕೆಟ್ಟ ಮಾತನ್ನು ಹರಡವುದು ವಾಡಿಕೆಯಾಗಿತ್ತು. ಇದೆಲ್ಲ ಭೋಬಣ್ಣನ ಅತ್ತೆಗೆ ಇಷ್ಟವಾಗುತ್ತಿರಲ್ಲಿಲ್ಲ, ಅವರಿಗೆ ಇವನು ತನ್ನ ಹೆಂಡತಿ ಜೊತೆ ಬೇರೆ ಮನೆ ಮಾಡುತ್ತಾನೆ ಇದರಿಂದ ತಾನು ಒಂಟಿ ಯಾಗಬಹುದು ಎಂದು ಯೋಚಿಸಿ ಭೋಬಣ್ಣನನ್ನು ದ್ವೇಷಿಸುತ್ತಾಲೆ. ಬೆಲಾಯದ ಮಗಳ ಪತ್ರದ ವಿಷಯ ದೊಡ್ದಾಗಿ ಅವನನ್ನು ಹೊಡೆಯಲು ಊರಿನ ಜನರು ಬರುತ್ತಾರೆ, ಬಂದವರಲ್ಲಿ ಇಬ್ಬರು ಮೂವರನ್ನು ಹೊಡೆದುಊರು ಬಿಟ್ಟು ಓಡಿಹೋಗುತ್ತಾನೆ.

ಈ ಕಥಾ ಸಂಕಲದಲ್ಲಿ ಇರುವ ಎಲ್ಲ ಕಥೆಗಳು ಒಂದೊಂದು ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ನಮ್ಮ ಮುಂದೆ ಇಡುತ್ತಾರೆ, ಕುಬಿ ಮತ್ತು ಇಯಾಲದಲ್ಲಿ ರಾಜಕೀಯ ಮತ್ತು ಗೊಡ್ಡು ನಂಬಿಕೆ, ತುಕ್ಕೋಜಿಯಲ್ಲಿ ಗಂಡ ಹೆಂಡತಿ ಮಧ್ಯೆ ಬರುವ ವ್ಯಮನಸ್ಸು, ದರೆ ಡೆವಿಲ್ ಮುಸ್ತಫಾ ದಲ್ಲಿ ಜಾತಿ ಬಗ್ಗೆ ಮತ್ತು ತ್ಯಕ್ತದಲ್ಲಿ ಬದುಕಿನಬಗ್ಗೆ ವಿವರಿಸುತ್ತಾರೆ.


Friday, September 28, 2012

ಇನ್ನೊಂದೇ ದಾರಿ - ಶಿವರಾಮ ಕಾರಂತ

Innonde Daari - Shivarama Karanth




ಇನ್ನೊಂದೇ ದಾರಿ ಮೂರು ತಲೆಮಾರಿನ ಒಂದು ಸಂಸಾರದ ಕಥೆ. ಮೂರು ತಲೆಮಾರಿನ ಮನಸ್ಸಿನ ಯೋಚನೆ, ಸಾಮಾಜದ ಚಿಂತನೆ, ಅವರು ಯೋಚಿಸಿಸುವ ವಿಚಾರಗಳ ಅಂತರ ಮತ್ತು ಅವರ ಕಲ್ಪನೆಗಳ ವಿಸ್ತಾರ, ಇವೆ ಕಾರಂತರ 'ಇನ್ನೊಂದೇ ದಾರಿ'ಯ ಎಳೆ.


ಮೊದಲೆನೆಯ ತಲೆಮಾರು: ಹೊನ್ನಿ, ಸೋಮಯಾಜಿ, ವೆಂಕಮ್ಮ
ಎರಡನೇ ತಲೆಮಾರು - ಮಾದೇವ, ಪದ್ಮಾವತಿ, ನರಸಿಂಹ
ಮೂರನೇ ತಲೆಮಾರು - ಜಯರಾಮ, ಶ್ರೀರಾಮ


ಹೊನ್ನಿ ಒಂದು ಬಡ ಕುಟುಂಬದವಳು, ಮದುವೆಯಾದ ಗಂಡ ತುಂಬ ಶ್ರೀಮಂಥನಲ್ಲ ಆದರೆ ಅವನಿಗೆ ಹೆಣ್ಣಿನ ಚಪಲ. ಹೊನ್ನಿ ಗಂಡನ ಕೆಟ್ಟ ಗುಣಗಳನ್ನು ಯಾರ ಹತ್ತಿರವೂ ದೂರುತ್ತಿರಲ್ಲಿಲ, ಅವಳಿಗೆ ಅಪ್ಪ ಅಮ್ಮ ಕಳಿಸಿಕೊಟ್ಟ ನಡತೆ ಗುಣಗಳೇ ಅದಕ್ಕೆ ಕರಣ. ಅವಳ ಅತ್ತೆ(ಗಂಡನ ಅಕ್ಕ) ವೆಂಕಮ್ಮ ಮೊದಮೊದಲು ಅವಳನ್ನು ಕಾಣುತ್ತಿದ್ದ ರೀತಿ ಕೆಟ್ಟದ್ದಿದ್ದರು, ಮಾದೇಶ ಹುಟ್ಟಿದಮೇಲೆ ಬಾದಲಾಹಿತು. ಮಾದೇಶ ಇರುವ ಮೂರು ಅಂಗುಲ ಜಾಗದಲ್ಲಿ ದುಡಿದರು ಮೂರು ಜನಕ್ಕೆ ಏನೇನು ಸಾಲುವುದಿಲ್ಲ. ಮಾದೇಶ ಬೇರೆ ಬೇರೆ ಕೆಲಸ ಮಾಡಿದರು ಹೊಟ್ಟೆ ತುಂಬಿಸಲು ಕಷ್ಟ.


ಮಾದೇಶನಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಕಿತ್ತು ತಿನ್ನುತ್ತಿತ್ತು. ಇದೆ ವೇಳೆಗೆ ಆ ಊರಿನ ಉಪಾಧ್ಯಾಯಾರ ಸ್ನೇಹಿತರಿಗೆ ಮಕ್ಕಳಿಲ್ಲವಾದ್ದರಿಂದ, ಮಾದೇಶನ ಮೊದಲೆನೆಯ ಗಂಡು ಮಗುವನ್ನು ದತ್ತು ಮಾಡಿಕೊಳ್ಳುತ್ತಾರೆ. ನರಸಿಂಹ, ಮಾದೇಶನ ಮೊದಲನೆಯ ಮಗ, ಹೋದ ಮನೆ ನಾರ್ಣಪ್ಪಯ್ಯನವರದು ದೈವಭಕ್ತ ಕುಟುಂಬ. ಅಲ್ಲಿ ಬೆಳೆದ ನರಸಿಂಹ ದೈವಭಕ್ತಿ ಇದ್ದರು ಕೆಲವೊಂದು ಆಚರ ವಿಚಾರದ ಬಗ್ಗೆ, ಯಾಕೆ ಮಾಡುತ್ತಾರೆ, ಅದರ ಪ್ರಯೋಜನ ಏನು ಎಂದು ಪ್ರಶ್ನೆಗಳು, ಸಂಶಯಗಳು ಎದ್ದವು. ಇತ್ತ ಮಾದೇಶನಿಗೆ ನಾರ್ಣಪ್ಪಯ್ಯ ೩೦ ಎಕರೆ ಜಾಗವನ್ನು ಮತ್ತು ಮನೆಯನ್ನು ಕೊಟ್ಟು ಚೆನ್ನಾಗಿ ಬಾಳಲು ಅನವು ಮಾಡಿಕೊಟ್ಟರು. ಆ ೩೦ ಎಕೆರೆ ಲಾಡು ಜಾಗವನ್ನು ಒಳ್ಳೆ ಇಳುವರಿ ಬರುವ ಜಮಿನನ್ನಗಿ ಮಾಡಲು ಹಗಲು ರಾತ್ರಿ ಶ್ರಮಿಸಿದರು. ಮಾದೇಶನ ಚಿಕ್ಕಮಗ ಸೂರ್ಯ, ಅಜ್ಜಿಯ ಕಾಹಿಲೆ ಗುಣವಾಗಲಿ ಅಂತ ನರಸಿಂಹಮೂರ್ತಿ ಕರೆದುಬರುಲು  ಶಿವಮೊಗ್ಗಕ್ಕೆ ಹೋಗಿದ್ದಾಗ ತನ್ನ ಅಣ್ಣ ನರಸಿಂಹ ಸಿಕ್ಕಿದಾಗ ಹೇಳತೀರದ ಸಂತೋಷ ಪಟ್ಟನು. ಇಬ್ಬರು ಜೊತೆಗೂಡಿ  ವೈದ್ಯರನ್ನು ಕರೆದುಕೊಂಡು ಊರಿಗೆ ಬಂದಾಗ, ಎಲ್ಲರಿಗೆ ತಾವು ಕಳೆದುಕೊಂಡಿದ್ದ ಅಮೂಲ್ಯ ರಂಥ ಸಿಕ್ಕಿದಂತಾಗುತ್ತದೆ.


ನರಸಿಂಹನಿಗೆ ಎರಡು ಗಂಡು ಮಕ್ಕಳು. ಮೊದಲೆಯವನು ಶ್ರೀರಾಮ ಮತ್ತು ಎರಡೆನೆಯವನು ಜಯರಾಮ. ಇಬ್ಬರ ಯೋಚಿಸುವ ರೀತಿ ಬೇರೆ ಬೇರೆ. ಜಯರಾಮ ಎಲ್ಲವನ್ನು ಪ್ರಶ್ನಿಸುತ್ತಾನೆ, ದೇವರು, ಜಾತಿ, ಧರ್ಮ, ಆಚಾರ, ಎಲ್ಲದಕ್ಕೂ ಅವನ ವಿಚಾರಗಳೇ ಬೇರೆ, ಇದರಿಂದ ಅಪ್ಪ ನರಸಿಂಹ ಮತ್ತು ಹೆಂಡತಿಗೆ ತುಂಬ ನೋವಾಗುತ್ತದೆ. ಶ್ರೀರಾಮ ಬೆಂಗಳೂರಿನಲ್ಲಿ ಓದುತ್ತ ಕೆಲ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಾನೆ. ಅಪ್ಪ ಅಮ್ಮ ಮದುವೆಗೆ ಒಪ್ಪುದಿಲ್ಲ ಎಂದು ತಿಳಿದು ನ್ಯಾಯಾಲಯದಲ್ಲಿ ಮಾಡುವೆಯಾಗುತ್ತಾನೆ. ಇದನ್ನು ತಿಳಿದು ಅಮ್ಮ ಹಾಸಿಗೆ ಹಿಡಿಯುತ್ತಾಳೆ. ಜಯರಾಮ ಅಮ್ಮನ ಸ್ಥಿತಿ ನೋಡಿ ತಾನು ಮನೆಯಿಂದ ಹೊರಟರೆ ಸರಿ ಇರೋದಿಲ್ಲ ಎಂದು ತಿಳಿದು  ಮನೆಯಲ್ಲಿ ಇರಲು ತಿರ್ಮಾನಿಸುತ್ತಾನೆ. ಆದರೆ MA ಮುಗಿಸಲು ಒಂದೇ ವರ್ಷ ಇರಬೇಕಾದರೆ ಯಾಕೆ ಓದು ಬಿಡುತ್ತಿಯಾ ಎಂದು ಹೇಳಿ ಓದು ಮುಗಿಸಲು ಅಪ್ಪ ಕಳಿಸುತ್ತಾರೆ.


ಜಯರಾಮ ನೋಡುವ ದೃಷ್ಟಿ, ಮಾಡುವ ಕಾರ್ಯಗಳು, ಅವನು ಇಡುವ ವಾದಗಳು ಸಾಮಾಜ ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಅವರ ಯೋಚನೆಗಳು ಬದಲಾಗಬೇಕು, ಜಾತಿ ಪದ್ಧತಿ ಇಂದ ಹೊರಬರಬೇಕು, ಮೇಲು ಕೀಳು ಇರಬಾರದು, ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ಅವನು ವೇಶ್ಯಯಾ ಮಗ ಮತ್ತು ಮಗಳನ್ನು ತಂದು ಓದಿಸುವುದಾಗಲಿ, ಅನಾಥ ಮಗುವನ್ನು ಮಾಡುವೆ ಯಾಗದೆ ದತ್ತು ಪಡೆವುದಾಗಲಿ ಯಾರಿಗೂ ಇಷ್ಟವಾಗುವುದಿಲ್ಲ. ಅವನು ಯೋಚಿಸುವ ರೀತಿ, ಅಮ್ಮ ವೇಶ್ಯಯಾದರೆ ಅದರಲ್ಲಿ ಮಕ್ಕಳ ತಪ್ಪಿಲ್ಲ, ಮಕ್ಕಳು ಹುಟ್ಟಿದಾಗ ತಾವು ಇಂತವರ ಒಟ್ಟೆಯಲ್ಲಿ ಹುಟ್ಟಬೇಕು ಅಂತ ಕೇಳಿಕೊಂಡು ಬರುವುದಿಲ್ಲ, ಆದರು ಅವರನ್ನು ಸಾಮಜ ನೋಡುವ ರೀತಿ ಬೇರೆಯದೇ.


ಇಲ್ಲಿ ಕಾರಂತರು ಯಾವ ಯಾವ ಪೀಳಿಗೆ ಯಾವ ರೀತಿ ಯೋಚಿಸುತ್ತದೆ ಮತ್ತು ನಾವು ಯಾವ ರೀತಿಯಲ್ಲಿ ಯೋಚಿಸಬೇಕು ಎಂದು ಜಯರಾಮನ ಮೂಲಕ ಹೇಳುತ್ತಾರೆ. ಅವರ ದೃಷ್ಟಿಕೋನ ನಾವು ಬೆಳೆದಂತೆ ನಮ್ಮ ಅಚಾರ ವಿಚಾರಗಳು ಬೆಳೆಯಬೇಕು, ನಮ್ಮ ಸಂಸ್ಕೃತಿ ಬೆಳೆಯಬೇಕು, ನಾವು ಯೋಚಿಸುವ ರೀತಿ ಬದಲಾಗ ಬೇಕು ಅಂತ.



Wednesday, September 19, 2012

ಸರಸಮ್ಮನ ಸಮಾಧಿ - ಶಿವರಾಮ ಕಾರಂತ

Sarasammana Samadhi - Shivarama Karanth

ಕಾರಂತರ ಸರಸಮ್ಮನ ಸಮಾಧಿ ಒಂದು ಹೆಣ್ಣಿನ ಶೋಷಣೆ ಅಥವಾ ಗಂಡಸಿನ ಹೆಣ್ಣಿನ(ಹೆಂಡತಿ)ಕಡೆ ಉದಾಸೀನದ ಕುರಿತು. ಸಮಾಜದಲ್ಲಿ ಬೇರೆ ಬೇರೆ ವರ್ಗದ, ಮನೆಯ ಮತ್ತು ಗಂಡನದಿರ ಮನೆಯಲ್ಲಿನ ಹೆಣ್ಣಿನ ಸ್ವಾತಂತ್ರ್ಯ, ಅವರ ಮನಸ್ಸಿನ ವ್ಯಥೆ, ಅವರು  ಅನುಸರಿಸುವ ಪದ್ಧತಿ, ಕಷ್ಟ ನಿವಾರಣೆಗೆ ಮಾಡುವ ಕಾರ್ಯಗಳು ನಿಜ ಜೀವನಕ್ಕೆ ಹತ್ತಿರವಾದ ರೀತಿಯಲ್ಲಿ ವಿವರಿಸುತ್ತಾರೆ. ಮೊದಮೊದಲು ಈ ಕಾದಂಬರಿ ಕ್ಲಿಷ್ಟಕರ ಎನಿಸಿದ್ದರು ಕಾದಂಬರಿ ಮುಗಿಸುವ ಹೊತ್ತಿಗೆ ತಿಳಿನೀರಿನ ಹಾಗೆ ಸ್ಪಸ್ಟವಾಗುತ್ತದೆ.

ಸರಸಮ್ಮ ಮೂಡಂಬೈಲಿನ ದೇವತೆ. ಆ ಊರಿನ ಜನ ಮತ್ತು ಸುತ್ತಮುತ್ತಲಿನ ಊರಿನ ಜನ ಸರಸಮ್ಮನ ಗುಡಿಗೆ ರಾತ್ರಿಯಲ್ಲಿ ಬಂದು ತೆಂಗಿನ ಕಾಯಿಯನ್ನು ಕೆರೆಗೆ ತೇಲಿ ಬಿಟ್ಟು ಯಾರು ಕಾಣದ ಹಾಗೆ ಹೋಗುತ್ತಾರೆ. ಈ ರೀತಿ ಮಾಡಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ. ಕಾದಂಬರಿಯಲ್ಲಿ ಬರುವ ಜಾನಕಿಯಾ ಗಂಡನ ಊದಾಸಿನ, ಸುನಾಲಿನಿಯಾ ಗಂಡನ ನಿರ್ಲಕ್ಷ್ಯ, ಭಾಗೀರಥಿಯಾ ಮಾವನ ಕೆಟ್ಟ ದೋರಣೆಯಿಂದ ಸರಸಮ್ಮ ಸಾಮಧಿಗೆ ಬಂದವರೇ. ಅವರ ಎಲ್ಲಾ ಆಸೆ ಪೂರೈಸದೆ ಹೋದರು ಸರಸಮ್ಮ ತರುತ್ತಾಳೆ. ಇಲ್ಲಿ ಬರುವ ಮೂಖ್ಯ ಪಾತ್ರ ಚಂದರಯ್ಯ  ಬೆಳ್ಯಮ್ಮನ ಬೂತ(ಪ್ರೇತ)ಆಸಕ್ತ್ಹಿಂದ ಸರಸಮ್ಮನ ಸಾಮಧಿಯತ್ತಿರ ಹೋಗಿದಾದರು, ಭಾಗೀರಥಿಯಾ ಮತ್ತು ಜಲಜಾಕ್ಷಿಯಾ ಪ್ರೀತಿ(ಆಕರ್ಷಣೆ)ಯಾ ಮಧ್ಯೆ ಮನಸ್ಸು ತೊಲಾಡುತ್ತದೆ.

ಇಲ್ಲಿ ನಾವು ನೋಡಬೇಕಾದ ಅಂಶ, ಇಲ್ಲಿ ಸಾಮಜದ ಹೆಣ್ಣಿನ ಮೇಲಿನ ಮೌಡ್ಯತೆ ಮತ್ತು ಗಂಡಸ್ಸಿನ "ಹೆಣ್ಣಿನ ಮನಸ್ಸು ಮತ್ತು ಶರೀರ ಸ್ವಂತ ಸ್ವತ್ತು" ಎಂಬ ದೋರಣೆ ಎಷ್ಟು ಕಠೋರ ಶಿಕ್ಷೆ ಹೆಣ್ಣಿನ ಪಾಲಿಗೆ ಅಂತ ವಿವರಿಸುತ್ತಾರೆ.

ಕೊನೆಯ ಸಾಲು: ಈ ಕಾದಂಬರಿಯಲ್ಲಿ ವಿವರಿಸಿರುವಾಗೆ ಸ್ಥಿತಿ ಈಗಿನ ನಗರಗಳಲ್ಲಿ ಇಲ್ಲವಾದರೂ, ಕೆಲ ಹಳ್ಳಿಗಳ ಕಡೆ ಇದೆ.


Sunday, September 16, 2012

ಜುಗಾರಿ ಕ್ರಾಸ್ - ಪೂರ್ಣಚಂದ್ರ ತೇಜಸ್ವಿ

 Jugari Cross - K. P. Poornachandra Tejasvi





ಒಂದು ಒಳ್ಳೆಯ ಪತ್ತೇದಾರಿ ಕಾದಂಬರಿಗೆ ಬೇಕಾದ ಎಲ್ಲಾ ರುಚಿಗಳು ಈ ಕಾದಂಬರಿಯಲ್ಲಿ ಸಿಗುತ್ತದೆ. ಪ್ರೀತಿ, ಹಣ, ದರೋಡೆಕೋರರು, ವಂಚನೆ, ಕೊಲೆ, ಮೋಸ ಮತ್ತು ಬಹುಮುಕ್ಯವಾದ ನಿಧಿಯಾ ರಹಸ್ಯ. ಜುಗಾರಿ ಕ್ರಾಸ್ ನಾನು ಓದಿದ ತೇಜಸ್ವಿಯವರ ಎರಡನೇ ಕಾದಂಬರಿ. ಇದು ಓದಲು ಶುರು ಮಾಡುವವರು ಮುಗಿಸುವುದರ ಮೊದಲು ಪುಸ್ತಕವನ್ನು ಮುಚ್ಚಿಡಲು ಆಗುವುದಿಲ್ಲ ಯಾಕೆಂದರ ಈ ಕಾದಂಬರಿ ಆ ರೀತಿಯ ಉಸ್ತುಕತೆಯನ್ನು ನಮ್ಮ ಮನದಲ್ಲಿ ಸೃಷ್ಟಿಸುತ್ತದೆ.

ಜುಗಾರಿ ಕ್ರಾಸ್, ಕಾಡಿನ ನಡುವೆ ಬಂದು ಕೂಡುವ ನಾಲ್ಕು ದಾರಿಗಳ ಸರ್ಕಲ್. ಈ ಕಾಡಿನ ಮಧ್ಯೆ ಇರುವ ಜಾಗಕ್ಕೆ ಯಾಕೆ ಜುಗಾರಿ ಕ್ರಾಸ್ ಅಂತ ಹೆಸರಿಟ್ಟಿದ್ದಾರೆ ಅಂತ ನಾವು ಕಾದಂಬರಿ ನಡುವೆ ಗೊತ್ತಾಗುತ್ತದೆ, ಇಲ್ಲಿ ಕಾಡಿನಲ್ಲಿ ನೆಡೆವುವ ಕಳ್ಳ ಸಾಗಣೆ , ಕಳ್ಳ ಬಟ್ಟಿ, ಪೋಲೀಸರ ಲಂಚಕೊರಿಕೆ, ಈ ಕಾರಣಗಳೇ ಇದಕ್ಕೆ ಆ ಹೆಸರು. ಇಲ್ಲಿ ಬಂದುಹೋಗುವ ಸಣ್ಣ ಸಣ್ಣ ಪಾತ್ರಗಳು, ಮಾತಾಡದ ದ್ಯಾವಮ್ಮ ಮಗಳು, ದೇವಪುರದ ಸಿದ್ದಪ್ಪ, ಅಬ್ಬುಸಾಲಿ, ಈ ಕಥೆಯ ಮುಖ್ಯ ಭಾಗವಗುತ್ತಾರೆ. ಕಥೆಯ ನಾಯಕ ಮತ್ತು ನಾಯಕಿಯಂತಿರುವ ಸುರೇಶ, ಗೌರಿ,  ತೇಜಸ್ವಿಯವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಅಕ್ರಮ, ಅನಾಚಾರಗಳ ವಿಸ್ತೃತ ಚಿತ್ರಣದಲ್ಲಿ ಮೂಕ ಪ್ರೆಕ್ಷಕರಾಗುತ್ತಾರೆ .

ಅರಣ್ಯ ಅಧಿಕಾರಿಗಳು ಲಂಚ ಕೊಡಲೆಂದು ಜನರಿಗೆ ಕೊಡುವ ಕಾಟ, ಫೋನಿನಲ್ಲೇ ನಡಯುವ ಕಳ್ಳ ದಂದೆಗಳು, ಸರ್ಕಾರದ ಹಾರಜಿನಲ್ಲಿ ನೆಡುವ ಗಂಡಾಗುಂಡಿ, ತೆರಿಗೆ ಉಳಿಸಲು ಅಡ್ಡ ದಾರಿ ಇಡುವ ರೈತರು, ದುಡ್ಡಿಗಾಗಿ ಬಡ ರೈತರ ಜೀವ ಹಿಂಡುವ ದಲ್ಲಾಳಿಗಳನ್ನು ತೇಜಸ್ವಿಯವರು ಮನ ಮುಟ್ಟುವಂತೆ ಹೇಳುತ್ತಾರೆ.

ಸುರೇಶನು ತಾನು ಮಾರಿದ್ದ ಅರವತ್ತು ಸಾವಿರದ ಏಲಕ್ಕಿಗೆ ಜೀವನ್ ಲಾಲನು ಯಾಕೆ ಒಂದು ಲಕ್ಷದ ಅರವತ್ತು ಸಾವಿರ ಕೊಟ್ಟು ಅಂತ ಯೋಚಿಸುತ್ತಿರುವಾಗ ಶೆಸಪ್ಪನ ಕೊಲೆ ಯಾಗುತ್ತದೆ (ಕೊನೆಯಲ್ಲಿ ಅದು ಬರಿ ಕೊಲೆಯ ಹಲ್ಲೆ ಅಂತ ತಿಳಿಯುತ್ತೆ). ಸುರೇಶನ ಹಳೆಯ ಮಿತ್ರ ರಾಜಪ್ಪ ಸಿಕ್ಕಿ ಅವನು ಮಾಡುತ್ತಿರುವ ಹಳೆಗನ್ನಡ ಅನುವಾದಕ್ಕೆ ಇವನ ಸಹಾಯ ಕೋರಿ ಕೊಡುವ ಲಿಪಿಯನ್ನು ಓದಿದಾಗ ಕೆಂಪು ಕಾಲಿನ ರತ್ನದ ಜಾಗಕ್ಕೆ ಅದು ನಕ್ಷೆ ಎಂದು ತಿಳಿಯುದರಲ್ಲಿ ದುಡ್ಡು ದೊಜಲು ಶಾಸ್ತ್ರೀ ಕಳಿಸಿದ್ದ ಗೂಂಡಗಳಿಗೆ ಹೆದರಿ ಚಲಿಸುವ ಟ್ರೈನಿನಿಂದ ಹಾರುತ್ತಾರೆ.

ಇದೊಂದು ೨೪ ಗಂಟೆಯಲ್ಲಿ ನಡಯುವ ಘಟನೆಗಳನ್ನು ತೇಜಸ್ವಿಯವರು ಎಲ್ಲೂ ಬೇಸರವಾಗದಂತೆ ವಿವರಿಸಿದ್ದಾರೆ.


Tuesday, September 11, 2012

ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ

Chidambara Rahashya - K. P. Poornachandra Tejasvi


ಕ್ರಾಂತಿ, ಜಾತಿ ವೈಶಮ್ಯಾ, ಪ್ರೀತಿ, ಸ್ನೇಹ, ರಾಜಕೀಯ, ವಿದ್ಯೆ, ಸಾಮಾಜಿಕ ಅಸಮತೋಲನ ಮತ್ತು ವೈರುತ್ವ..... ಈ ಎಲ್ಲವನ್ನು ಒಂದು ಕಾದಂಬರಿಯಲ್ಲಿ ನೋಡಬೇಕಾದರೆ ನೀವು ಚಿದಂಬರ ರಹಸ್ಯವನ್ನು ಓದಲೇಬೇಕು. ಎಲ್ಲಾ ವಿಷಯಗಳನ್ನು ಎಲ್ಲೂ ಜಾಸ್ತಿ ಕಮ್ಮಿ ಆಗದಂತೆ ಅರ್ಥಗರ್ಬಿತವಾಗಿ ಸೊಗಸಾಗಿ ಪ್ರಕೃತಿಯ ಮಧ್ಯದಲ್ಲಿ ನಡೆಯುವ ಘಟನೆ, ದುರ್ಗತನೆಗಳನ್ನು ಈ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟಿದಹಾಗೆ ಹೇಳುತ್ತಾರೆ. ಇದು ಪತ್ತೇದಾರಿ ಕಾದಂಬರಿ ರೀತಿ ಮೊದಮೊದಲು ಅನಿಸಿದರು ಇದು ಪತ್ತೇದಾರಿ ಕಾದಂಬರಿಯಲ್ಲ, ಸ್ವಲ್ಪ ಹಾಳೆಗಳನ್ನು ತಿರುವಿದ ಮೇಲೆ ಇದು ಜನರ ಜಾತಿ ವೈಶಮ್ಯಾ ಕಾದಂಬರಿ ಅನಿಸಿದರು ಇದು ಆ ರೀತಿಯ ಕಾದಂಬರಿಯಲ್ಲ, ಮತ್ತೆ ಮೂಡನಂಬಿಕೆ, ಅಂತರ ಜಾತಿಯಾ ಪ್ರೀತಿ, ಸ್ನೇಹ ಅಂತ ಒಂದೊಂದು ಹಂತದಲ್ಲಿ ಅನಿಸಿದರು ಕೊನೆಯಲ್ಲಿ ನಮಗೆ ಅನಿಸುವುದು ಇದು ಇವೆಲ್ಲ ವಿಷಯಗಳನ್ನು ಒಳಗೊಂಡ ಒಂದು ಸಮಗ್ರ ಸಂಗ್ರಹ ಪುಸ್ತಕ.


ಚಿದಂಬರ ರಹಸ್ಯ ನಾಲ್ಕು ಸ್ನೇಹಿತರ(ರಾಮಪ್ಪ, ಚಂದ್ರ, ರಮೇಶ ಮತ್ತು ಜೋಸೆಫ್) ಕ್ರಾಂತಿಂದ ಶುರುವಾಗಿ, ಅಂಗಾಡಿ ಯಾಲಕ್ಕಿ ಕೃಷಿ ಉತ್ಪಾದನೆಯ ಕುಸಿತದ ಕಾರಣಗಳನ್ನು ಪತ್ತೆಹಚ್ಚಲು ಶುರುಮಾಡಿ ಜೋಗಿಹಾಳ್ರವರ ಸಾವಿನ ಸುತ್ತ ಇರುವ ಸಂಶಯಗಳನ್ನು ಹುಡುಕುತ್ತಾ, ಕೃಷ್ಣೇಗೌಡರ ಮನೆ ಮೇಲೆ ಬೀಳುವ ಕಲ್ಲುಗಳನ್ನು ಯಾರಿಂದ ಅಥವಾ ಅವರ ಆಳುಗಳು ಹೇಳುವಂತೆ ದೆವ್ವ ಬೂತಗಳಿಂದ ಅಂತನಾ ಎಂದು ತಲೆ ಬಿಸಿಲಲ್ಲಿದ್ದರೆ, ಊರಿನಲ್ಲಿ ಜಾಸ್ತಿಯಾಗುತ್ತಿರುವ ಮರಗಳ ಕಳ್ಳ ಸಾಗಣೆ ಮತ್ತು ಮುಸಲ್ಮಾನರ ಜನಸಂಖ್ಯೆ, ಸುಲೇಮಾನ್ ಬೇರಿಂದ ಅಂದಕ್ಕೆ ಅವನ್ನನ್ನು ಮಟ್ಟಾ ಹಾಕಬೇಕೆಂದು ರೂಪು ರೆಷೆಗಾನ್ನು ರಚಿಸುತ್ತಿರುವ ಆಚಾರಿ,  ಕಾಲೇಜಿನ ಅವಾಂತರಗಳು, ಪಟೇಲರ ನಾಸ್ತಿಕತೆ ಮತ್ತು ಅವರ ಯಲ್ಲಕ್ಕಿ ಹ್ಯಬ್ರಿಡಿನ ಹುಡುಕಾಟ, ಇವೆಲ್ಲದುರ ಮಧ್ಯೆ ರಫಿ ಮತ್ತು ಜಯಂತಿಯ ಪ್ರೀತಿ. ಇಲ್ಲಿ ತೇಜಸ್ವಿಯವರೇ ಕಥಾ ನಾಯಕರು ಯಾಕೆಂದರೆ ಅವರ ಶಬ್ದ ಪ್ರಯೋಗ, ಪಾತ್ರಗಳ ಸಂಬಂಧ ಜೋಡಣೆ, ಮತ್ತು ಸ್ಥಿತಿಗೆ ಪೂರಕವಾಗಿ ಬಳಸುವ ವಿಚಾರಗಳು ಯಾವ ಕಾದಂಬರಿಕಾರನನ್ನು ನಾಚಿಸುವನತದ್ದು.


ನಾನು ಓದಿರುವ ಯಾವ ಕಾದಂಬರಿಗಳಲ್ಲೂ ಇಷ್ಟು ಪತ್ರಗಳನ್ನು ಇಟ್ಟುಕೊಂಡು ಯಾವ ವ್ಯಕ್ತಿ ವಿಚಾರವು ವ್ಯತ್ಯ ವಾಗದಂತೆ ನೋಡಿಕೊಂಡಿರುವುದು ಇದೆ ಕಾದಂಬರಿಯಲ್ಲಿ, ತೇಜಸ್ವಿ ಒಬ್ಬರೇ ಇದನ್ನು ಮಾಡಲು ಶಕ್ಯ ವ್ಯಕ್ತಿಯಂತೆ ಅನಿಸುತ್ತದೆ. ಪ್ರಕೃತಿ ಮತ್ತು ಮನುಷ್ಯ ಪ್ರಾಣಿಯ ತುಚ್ಚ ಕಾರಣಗಳ ಹೊಡೆದಾಟಗಳ ಮಧ್ಯೆ ಪ್ರೀತಿ ಅರಳುವುದನ್ನು ನೋಡಬೇಕಾದರೆ ಈ ಕಾದಂಬರಿಯನ್ನು ಮೊದಲು ಓದಿ.


ಕಾದಂಬರಿಯಾ ಒಂದು ತುಣುಕು


ವೈರಫಿ ಮೆಲ್ಲಗೆ ಅವಳ ಆಲಿಂಗನವನ್ನು ಸಡಿಲಿಸಿ ಬಾಗಿ ಅವಳ ಲಂಗ ಕೊಂಚ ಎತ್ತಿದ. ಜಯಂತಿಗೆ ಸ್ವಲ್ಪ ಗಾಬರಿಯಾಯ್ತು . ರಫಿ ಬಿಡುಗಣ್ಣಿನಿಂದ ಅವಳ ದಂತದಂಥ ಕಾಲುಗಳನ್ನು ಒಮ್ಮೆ ನೋಡಿ ಲಂಗ ಬಿಟ್ಟ. ಜಯಂತಿ ನಕ್ಕಳು. ರಫಿಯೂ ನಕ್ಕ.

"ಏನು ರಫಿ?" ಎಂದಳು.

"ಎನಿಲಪ್ಪ" ಎಂದ ರಫಿ.

"ಅಲ್ಲ ಯಾಕೆ ಬಿಟ್ಟಿಟ್ಟೆ? ಬಯ್ತೀನಿ ಅಂತನ?"

"ಇಲ್ಲ ಜಯಂತಿ. ನೀನು ನನಗೆ ಸಿಕ್ಕಿದಿಯಾ ಅಂತ ಏನು ಮಾಡಿದ್ರೂ ನಂಬಿಕೇನೆ ಬರ್ತಿಲ್ಲ. ನನ್ನ ಫ್ರೆಂಡ್ಸ್ ಗೂ ಅಷ್ಟೇ. ಮೊನ್ನೆ ರಾತ್ರಿ ನನ್ನ ತಬ್ಬಿದ್ದು, ಮೋಹಿನಿ ದೆವ್ವಾ ಇರಬೇಕು ಅಂತ ಕೊನೆಗೆ ತೀರ್ಮಾನ ಮಾಡಿದ್ರು ಅವರೆಲ್ಲ. ಕಾಲು ತಿರುಗಾ ಮುರುಗಾ ಇತ್ತೋ ಸರಿಯಗಿತ್ತ್ಹೋ ನೋಡಿದಿಯೇನೋ ಅಂತ ಬಯ್ದರು. ಅದಕ್ಕೆ ಇವತ್ರು ನೋಡಿದ್ದು."
 




ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ

Mookajjiya Kanasugalu - Shivarama Karanth




ಈ ಕಾದಂಬರಿ ನಾನು ಎರಡೇ ದಿನಗಳಲ್ಲಿ ಮುಗಿಸಿದ್ದು, ನಾನು ನನ್ನ ಬಗ್ಗೆ ಹೊಗಳುವುದಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಕಾದಂಬರಿಯಾ ಹಿಡಿತ, ಮುಂದೆ ಏನಾಗುತದೆ ಎಂದು ತಿಳಿಯುವ ತವಕ, ಮತ್ತು ಕಾರಂತರ ಬರವಣೆಗೆಯಾ ಮೋಡಿ ಅಂತಹದ್ದು. ಈ ಕಾದಂಬರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿರುವುದಕ್ಕೆ ಕಾದಂಬರಿಗೆ ಸಂದ ತಕ್ಕ ಪ್ರಶಸ್ತಿ ಎಂದು ಹೇಳಬಲ್ಲೆ. ಕಾರಂತರು ಮುನ್ನುಡಿಯಲ್ಲಿ ಇಲ್ಲಿ ಯಾರು ನಾಯಕರಲ್ಲ, ನಾಯಕಿಯರಿಲ್ಲ, ಮೂಕಜ್ಜಿಯು ಸಹ ನಾಯಕಿಯಲ್ಲ ಎಂದು ಹೇಳುತ್ತಾರೆ. ಈ ಕಾದಂಬರಿಯಲ್ಲಿ ಎಲ್ಲ ಜನರು ಪ್ರಮುಖ ಪಾತ್ರವನ್ನು ಒಂದೊಂದು ಕಡೆ, ಒಂದೊಂದು ಬಾರಿ ವಹಿಸಿಕೊಳ್ಳುತ್ತಾರೆ, ಅದಕ್ಕೆ ಇರಬೇಕು ಕಾರಂತರು ಈ ಕಾದಂಬರಿಗೆ ಯಾವ ನಾಯಕ, ನಾಯಕಿ ಇಲ್ಲ ಅಂತ ಹೇಳಿರಬಹುದು.

ಈ ಕಾದಂಬರಿಯನ್ನು ಸುಬ್ಬರಾಯ ಅನ್ನುವವರು ನಮಗೆ ಕಾಥನಕ ರೂಪದಲ್ಲಿ ಹೇಳುತ್ತಾ ಹೋಗುತ್ತಾರೆ. ಅವರ ಜೀವನ, ಮನೆಯ ಹಾಗುಹೋಗುಗಳ ಬಗ್ಗೆ, ತನ್ನ ಸ್ನೇಹಿತರು, ಹೆಂಡತಿ, ಮಕ್ಕಳು ...... ಬಗ್ಗೆ ಹೇಳುತ್ತಾ ಜೀವನದ ಅರ್ಥ, ಸಮಾಜದ ಡೋಂಗಿತನ, ಜನರ ಅಂಜಿಕೆ, ಕಟ್ಟುಪಾಡುಗಳು, ದೇವರ ಬಗ್ಗೆ, ಸಾವಿರಾರು ವರ್ಷಗಳ ಒಂದು ಊರಿನ ಇತಿಯಾಸ, ... ಇಂತ ವಿಷಯಗಳ ಬಗ್ಗೆ ತಮ್ಮ ಅಜ್ಜಿಯತ್ತಿರ ಸತ್ಯ ಶೋದನೆಯೇ ಈ ಕಾದಂಬರಿಯ ಕಥಾವಸ್ತು. ಈ ಕಾದಂಬರಿಯು ೧೯೬೮ಯಲ್ಲಿ ಮೂದ್ರಿತವಾದರು, ಇದು ಆಧುನಿಕ ಜಗತ್ತಿನ ಕೈಗನ್ನಡಿಯಂತಿದೆ. ನಾಗಿಯಾ ರೂಪಹಾಂಕರ, ಜನ್ನನ ಹುಡುಗಿ ಲಂಪಟತನ, ಅನಂತರಾಯರ ಬೊಡ್ಡು ಸನ್ಯಾಸತ್ವ, ಸೀತೆಯ ದೇವರ ಮೇಲಿರುವ ಅಂಧ ನಂಬಿಕೆ, ಮತ್ತು ಸುಬ್ಬರಾಯನ ಸತ್ಯ ಶೋದನೆ, ಇವಕ್ಕೆಲ್ಲ ಕಳಶವಿದ್ದಂತೆ ಮೂಕಜ್ಜಿಯ ನಿರ್ಭಯ, ನಿರ್ಬೀತಿ, ಮತ್ತು ಅವರದೇ ಆದ ಸಮಾಜದ ಕಲ್ಪನೆ ಯಾರನ್ನು ಸಹ ಮೂಕವಿಸ್ಮಿತ ಮಾಡುತ್ತದೆ.

ಇಲ್ಲಿ ಮೂಕಜ್ಜಿಯು ತನ್ನ ಮೊಮ್ಮಗನಿಗೆ ದೇವರು ಒಬ್ಬನೇ, ಜನರು ತಮ್ಮ ತಮ್ಮ ಸ್ವಾರ್ಥಕ್ಕೆ ಬೇರೆ ಬೇರೆ ಹೆಸರುಗಳನ್ನ ಕೊಟ್ಟು, ದೇವರ ಹೆಸರಲ್ಲಿ ಅನಾಚಾರ, ಯುದ್ಧ, ಮತ್ತು ಸಮಾಜವನ್ನು ಒಡೆಯುತ್ತ ಹೇಗೆ ಬಂದರು ಅಂತ ಹೇಳುತ್ತಾರೆ. ಅಜ್ಜಿಯು ಗಂಡು ಹೆಣ್ಣಿನ ಪ್ರೀತಿ, ಪ್ರೇಮ, ಕಾಮ, ಕರ್ಮ, ಕರ್ತವ್ಯದ ಬಗ್ಗೆ ಹೇಳುವ ಮಾತು ಎಲ್ಲರಿಗೂ ಕಣ್ಣು ತೆರುಸುವಂತದ್ದು. ಅವರಿಗೆ ಬೂತ, ವರ್ತಮಾನ, ಭವಿಷ್ಯ ಎಲ್ಲ ಗೊತ್ತು ಆದರು ಅವರು ಆಕಾಶಕ್ಕೆ ಏಣಿ ಹಾಕಿ ಕೂರುವುದಿಲ್ಲ, ಅವರು ಸಮಾಜದ ಅಂಧರನ್ನು ಸರಿಯಾಗಿ ದಾರಿ ತೋರಿಸುಲು ಪ್ರಯತ್ನಿಸುತ್ತಾರೆ.

ಯಾವುದೇ ಪುಸ್ತಕ ಪ್ರೇಮಿಯು ಓದಬೇಕಿರುವ ಒಂದು ವಿಶಿಷ್ಟ, ಚಿರಂಜೀವಿ ಕಾದಂಬರಿ ಇದಾಗಿದೆ.


ಸರಸ್ವತಿ ಸಂಹಾರ - ಬೀchi

Saraswathi Samhaara - beechi


ನಾನು ಬೀchi ಬಗ್ಗೆ ಓದಿದ್ದು ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ. ನನ್ನ ಆಗಿನ ಅಭಿಪ್ರಾಯ, ಇವರು ಹಾಸ್ಯ ಸಾಹಿತಿ ಮತ್ತು ಕವಿ, ಅದೇ ಅಭಿಪ್ರಾಯ ಇಟ್ಟುಕೊಂಡು, ಬೀchi ಅವರ ಎಲ್ಲ (ಒಂದೆರಡು ಬಿಟ್ಟು) ಪುಸ್ತಕಗನ್ನು ತರಿಸಿದೆ.


“ಸರಸ್ವತಿ ಸಂಹಾರ” ಓದಿಲ್ಲಿಕೆ ಶುರು ಮಾಡುವ ಮುನ್ನ ನಾನು ಇದು ಹಾಸ್ಯ ಕಾದಂಬರಿ, ಯಾರೋ ಭಾಷೆಯನ್ನು ತಪ್ಪಾಗಿ ಬಳಸಿದ್ದಾರೆ ಅದಕ್ಕೆ “ಸರಸ್ವತಿ ಸಂಹಾರ” ಅಂತ ಹೆಸರು ಇಟ್ಟಿದ್ದಾರೆ. ಕಾದಂಬರಿ ಮುಗಿಸಿದ ಮೇಲೆ ತಿಳೀತು ಇದು ನಿಜವಾಗಲು ಸರಸ್ವತಿ ಎಂಬ ಹುಡುಗಿಯ ಸಂಹಾರ ಎಂದು.


ಉತ್ತರ ಕರ್ನಾಟಕ ಭಾಷೆ ಈ ಪುಸ್ತಕದ ಒಂದು ಮಹತ್ವಪೂರ್ಣ ಅಂಶ. ಅವರು ಆಡುವ ಮಾತು, ಅವರ ಬೈಗುಳ, ತುಂಬ ಚೆನ್ನಾಗಿ ಬರೆದಿದ್ದರೆ. ಈ ಕಾದಂಬರಿಯ ಕತೆ ನಮ್ಮ ಕಾಲಕ್ಕೆ ಪ್ರಸಕ್ತ ಎನಿಸದ್ದಿದರು , ಕೆಲವೊಂದು ಕಡೆ ಈ ರೀತಿಯ ಜನ ನಮ್ಮ ಸಮಾಜದಲ್ಲಿ ಇದ್ದಾರೆ. ಗೌರಮ್ಮನಂತ ಅತ್ತೆ ಯಾರಿಗಾದರೂ ಸಿಕ್ಕರೆ, ಆ ಹುಡುಗಿ ದೇವರ ಕಣ್ಣಲ್ಲಿ ಮಹಾಪಾಪ ಮಾಡಿದ್ದಾಳೆ ಅಂತಾನೋ ಇಲ್ಲ ಅವರ ಅಪ್ಪ ಬ್ರಹ್ಮನಂದರಾಯರು. ಅಮ್ಮ ಅಚ್ಚಮ್ಮ ಹಾಗು ತಾತ ಭಾಸ್ಕರಭಟ್ಟರು ಮಾಡಿದ ಮಹಾಪರಾದ. ಸರಸ್ವತಿಯಾ ಜೀವನ ಒಂದು ದುರಂತ, ಇದು ಅವಳು ಮಾಡಿದ ತಪ್ಪಲ್ಲ, ಅವರ ತಂದೆ, ಬರಿ ಅವರ ಕೊಟ್ಟ ಮಾತು ಹುಳಿಸಿಕೊಳ್ಳುವುದಕ್ಕೆ, ಬಾಳನಂತಹ ಕಟುಕನ ಜೊತೆ ಮದುವೆ ಮಾಡಿ ಕೊನೆಗೆ ನರಳಿ ಸಾಯುತ್ತಾರೆ. ಒಂದೆಡೆ ಭಾಸ್ಕರಭಟ್ಟರು ತಾವು ಹೇಳಿದ ಮುನ್ಸೂಚನೆ ಯನ್ನು ಬ್ರಹ್ಮನಂದರಾಯರು ಕೆಳಲ್ಲಿಲ್ಲ , ಸರಸ್ವತಿಯಾ ಬಾಳು ತನ್ನ ಮಗನಿಂದ ಹಾಳಾಗಿ ಹೊಹಿತಲ್ಲ ಅಂತ ಚಿಂತೆ ಮಾಡಿ ಮನೆ ಬಿಡುತ್ತಾರೆ, ಇತ್ತ ಅಚ್ಚಮ್ಮ ತಮ್ಮ ಮಗಳ ಬಾಳನ್ನು ಗೊತಿದ್ದು ಕಟುಕರ ಕೈಯಲ್ಲಿ ಕೊಟ್ಟೆನಲ್ಲ ಅಂತ ದಿನವಿಡೀ ಕೊರುಗಿ ಕೊನೆಗೆ ತನ್ನ ದತ್ತು ಮಗ ಗಣಪತಿಯಾ ಜೊತೆ ಕಾಶಿಗೆ ಹೋಗಲು ಸಿದ್ದರಾಗುತ್ತಾರೆ. ಊರಿಗೆ ಊರೇ ಗೌರಮ್ಮನ ಬುದ್ದಿ ಗೊತಿದ್ದರು ಅವಳ ಬಯೀಗೆ ಹೆದರಿ ಸುಮನಿರುತ್ತಾರೆ. ಬಾಳ ಹನು ಹೇಳಿದ್ದೆ , ಮಾಡಿದ್ದೆ ಅಂತ ಮನ ಬಂದಂತೆ ಅಮ್ಮನ ಸೆರಗಿನ ಹಿಂದೆ ನಿಂತು ಸರಸ್ವತಿಯ ಜೀವನ ನರಕ ಮಾಡುತ್ತಾನೆ. ಈಗಿನ ಕಾಲದಲ್ಲಿ ಜನರು ಗೌರಮ್ಮ ಮತ್ತು ಬಾಳನ ರೀತಿ ಇರದಿದ್ದರೂ , ಹೆಣ್ಣಿನ ಶೋಷಣೆ ಇದ್ದ ಇದೆ. ಇಲ್ಲಿ ತಂದೆ ತಾಯೀಯ ಅಸಯಕತೆ, ಸಮಾಜದ ಮೌನ, ಅತ್ತೆ ಗಂಡನ ದೌರ್ಜನ್ಯ ಎಲ್ಲವನ್ನು ಕಣ್ಣಿಗೆ ಕಟ್ಟಿದಹಾಗೆ ಬೀchi ಅವರು ಚಿತ್ರಿಸಿದ್ದಾರೆ. ಈ ಕಾದಂಬರಿ ನನ್ನ ಕನ್ನಡ ಸಾಹಿತ್ಯ ಓದುವ ಪ್ರರಂಬಕ್ಕೆ ನಾನ್ನುಡಿ ಯಗ್ಗಿದ್ದು ಕುಷಿಯ ವಿಚಾರ.


ನನ್ನ ಮೇಚ್ಚಿನ ಬೈಗುಳ “ಯಾವ ರಂಡೇಗಂಡ ಬರೆದಿದ್ದಾನೋ ಅಂತೀನಿ, ಅವನ ಹೆಂಡತಿ ರಂಡಿ ಆಗ. ಬರದವನ ಕೈಗೆ ಕರೆ ನಾಗರಹಾವು ಕಡಿಯ. ಅಕ್ಷರ ಕಲಿತ ಮುಂಡೆಗಂಡರದೇ ಈ ಕೆಲಸ, ಅದಕ್ಕೆ ನನ್ನ ಕೂಸಿಗೆ ಇದ್ಯ ಇಲ್ಲದಿದ್ದರೆ ಪೀಡನೆ ಹೋತು ಅಂತ ಸಾಲಿಗೆ ಕೆಳಸಲಿಲ್ಲ ನಾನು, ಇದನ್ನು ಬರದಾತನ ತಾಯೀ ಬಸಿರು ಸೀಳಿ  ಬೀಳಬಾರದಗಿತ್ತೆ, ಅವನ ಹೆಣ ಹೋಗ, ಅವನ್ನ ಸುಟ್ಟು ಬರೀ ಕೈಲಿ ಬರ, ನನ್ನ ಕೈಯಾಗೇನಾದರೂ ಅವನು ಸಿಕ್ಕಿಗಿಕ್ಕಿದ್ದ ಅವನ ವಂಶ ಉದ್ದಾರ ಮಾಡ್ತಿದ್ದೆ.”