Friday, November 22, 2013

ಕನಕ ಮುಸುಕು - ಕೆ ಎನ್ ಗಣೇಶಯ್ಯ

Kanaka Musuku -  K. N. Ganeshaiah

ನಾಗೇಶ ಹೆಗಡೆರವರು ಬರೆದಿರುವ ಮುನ್ನುಡಿಯಿಂದ :
"ಕನಕ ಮುಸುಕು" ಕಾದಂಬರಿ ೨೦೦೫ರ ಕೊನೆಯಲ್ಲಿ "ಸುಧಾ" ವಾರಪತ್ರಿಕೆಯಲ್ಲಿ ವಾರವಾರವೂ ಬರತೊಡಗಿದಾಗ ಅದು ಕೇವಲ ಧಾರಾವಾಹಿಯಾಗಿ ಬರಲಿಲ್ಲ, ನಿಂತ ನೀರಂತಿದ್ದ ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಧಾರೆಯಾಗಿ ಬನ್ತು. ಕನ್ನಡ ಓದುಗರಿಗೆ ಮಿಂಚಿನ ಪುಳಕ ನೀಡುತ್ತ ಬಂತು.
ಅದುವರೆಗೆ ಕನ್ನಡದಲ್ಲಿ ಚಾರಿತ್ರಿಕ ಕಥಾನಕಗಳು ಅದೆಷ್ಟೋ ಬಂದಿದ್ದವು, ಮಾಸಲೆ ಸೇರಿಸಿದ ಪತ್ತೇದಾರಿ ಕಾದಂಬರಿಗಲಂತೂ ಲೆಕ್ಕವಿಲ್ಲದಷ್ಟು ಬಂದಿದ್ದವು. ಆದರೆ ಅವೆರಡರ ಸಂಗಮದಂತೆ ಐತಿಹಾಸಿಕ ಘಟನೆಗಳ ನೆಲೆಗಟ್ಟಿನಲ್ಲಿ ಇಂದಿನ ವಿದ್ಯಮಾನಗಳನ್ನು ರೋಚಕವಾಗಿ ಹೆಣೆದ ಚಾರಿತ್ರಿಕ ಥ್ರಿಲ್ಲರ್ ಮಾತ್ರ ನಮ್ಮ ಭಾಷೆಯಲ್ಲಿ ಇರಲ್ಲಿಲ್ಲ. ಈಚೆಗಷ್ಟೇ ಇಂಗ್ಲೀಷಿನಲ್ಲಿ ಡ್ಯಾನ್ ಬ್ರೌನನ "ಡಾ ವಿನ್ಸಿ ಕೋಡ್" ಹೆಸರಿನ ಚಾರಿತ್ರಿಕ ಥ್ರಿಲ್ಲರ್ ಜನಪ್ರಿಯತೆಯಾ ಉತ್ತುಂಗಕ್ಕೇರಿ ಭಾರತಿಯ ಓದುಗರ ಕೈಯಿಂದ ಕೈಗೆ ದಾಟುತ್ತಿದ್ದಾಗ "ನಮ್ಮ ಕಾದಮ್ಬರಿಕಾರರಿಗೇಕೆ ಇಂಥದ್ದೊಂದು ವಿಷಯ ಹೊಳೆಯುವುದಿಲ್ಲ?" ಎಂದು ಅನೇಕರು ಚರ್ಚಿಸಿದ್ದು ಉನ್ತು. ಚರ್ಚೆ ಇನ್ನು ಪೂರ್ತಿಗೊಳ್ಳುವ ಮೊದಲೇ,ಚರ್ಚೆ ಮೂಕ್ತಾಯ ಹಾಡುವಂತೆ ಕಾಣಿಸಿಕೊಂಡಿತು "ಕನಕ ಮುಸುಕು"

ಕನ್ನಡದ ಮಟ್ಟಿಗೆ ಹೊಸದೊಂದು ಮೈಲಿಗಲ್ಲು ಅನ್ನುವಂತೆ ಈ ಕಾದಂಬರಿಯಲ್ಲಿ ಅನೇಕ ಹೊಸತುಗಳಿವೆ. ಮೊದಲೆನೆಯದಾಗಿ ಗ್ರಂಥಕರ್ತರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು, ಇನ್ನೂ ವಿಶೇಷ ಉಪನ್ಯಾಸ, 'ಏಟ್ರಿ'ಯಂಥ ಜನಪರ ಸಂಘಟನೆಯ ಕೆಲಸ. ಅನೇಕ ಸಂಘ ಸಂಸ್ಥೆಗಳಿಗೆ ಸಲಹಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ.

ಇವರ ಈ ಚೊಚ್ಚಲ ಕಾದಂಬರಿಯ ಹಸ್ತಪ್ರತಿ ನನ್ನ ಕೈ ತಲುಪಿದಾಗ ನಾನು ಅದೇ ತಾನೆ 'ಸುಧಾ'ದ ಊಸ್ತುವಾರಿ ವಹಿಸಿಕೊಂಡಿದ್ದೆ. ನನ್ನ ಪತ್ರಿಕೆಗೆ ಹೊಸ ಹೊಳಪು ಕೊಡಬೇಕು, ಹೊಸ ಛಾಪು ಮೂಡಿಸಬೇಕು , ಎಳೆಯ ಪೀಳಿಗೆಯನ್ನು ಆಕರ್ಷಿಸಬೇಕು ಎಂಬೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಜೋಡಿಸುವಾಗ ತಾನಾಗಿ ಬಂಡ ಕೃತಿ ಇದು. ಪ್ರಸಿದ್ದ ವಿಜ್ಞಾನಿಯೆಂದು ಖ್ಯಾತಿ ಪಡೆದ ಡಾ. ಗಣೇಶಯ್ಯನವರ ಬಗ್ಗೆ ಗೊತ್ತಿತ್ತಾದರೂ ಇವರು ಕನ್ನಡ ಕಾದಂಬರಿ ಬರೆಯುತ್ತಾರೆಂಬುದೇ ಅಚ್ಚರಿಯ ಸಂಗತಿಯಾಗಿತ್ತು. ಕುತೂಹಲದಿಂದ ನಾಲ್ಕಾರು ಪುಟಗಳನ್ನು ಮಗುಚಿದಾಗ ಅಲ್ಲಿ ಬಳಸಿದ್ದ ಪ್ರಬುದ್ದ ಭಾಷೆ, ಚುರುಕಿನ ನಿರೂಪಣೆ ಮೊದಲ ನೋಟಕ್ಕೇ ಗಮನ ಸೆಳೆಯಿತು. ಮನೆಗೆ ಒಯ್ದು ಒಂದೇ ಕಂತಿನಲ್ಲಿ ಓದಿ ಮುಗಿಸಿದ್ದಾಯಿತು.

ಹೊಸ ಸಾಹಿತಿಯೊಬ್ಬರನ್ನು ಹೊಸ ರೀತಿಯಲ್ಲಿ ಓದುಗರಿಗೆ ಪರಿಚಯಿಸುವ ಮಾರ್ಗವನ್ನು ದಾ. ಗಣೇಶಯ್ಯ ನಮಗೆ ತೋರಿಸಿಕೊಟ್ಟರು. 'ಕನಕ ಮುಸುಕು' ಪ್ರಕಟಿಸುವ ಮೊದಲು ಅವರೇ ರಚಿಸಿದ ಇನ್ನೊಂದು ಐತಿಹಾಸಿಕ ನೀಳ್ಗತೆ 'ಶಾಲಭಂಜಿಕೆ'ಯನ್ನು ಅವರು ಪ್ರಕಟಣೆಗೆ ಕಳುಹಿಸಿದರು. ಅದು 'ಸುಧಾ'ದ ವಿಶೇಷ ಮೂಖಪುಟ ಕತೆಯಾಗಿ ಪ್ರಕಟವಾದಾಗ ಓದುಗರ ಅಪಾರ ಮೆಚ್ಚುಗೆ ಪಡೆಯಿತು. ಸಮಕಾಲೀನ ನೈಜ ವರದಿಯಿಂದ ಮೆಲ್ಲಗೆ ಗತಕಾಲಕ್ಕೆ ಜಾರಿಕೊಳ್ಳುವ ರೋಚಕ ಹಂದರದಿಂದಾಗಿ ಅದು ನೈಜ ಕತೆಯೆ, ಕಾಲ್ಪನಿಕ ಸೃಷ್ಟಿಯ ಎಂಬುದು ಮೊದಲ ಓದಿಗೆ ಗೊತ್ತಾಗದಂಥ ನೀರುಪಣಾ ಕೌಶಲವನ್ನು ಓದುಗರ ಮೆಲಕು ಹಾಕುತ್ತಿದ್ದಂತೆಯೇ ಹೊಸ ಕಾದಂಬರಿಕಾರನೊಬ್ಬನ ಆಗಮನಕ್ಕೆ ವೇದಿಕೆ ಸಜ್ಜಾಗಿತ್ತು. 'ಕನಕ ಮುಸುಕು' ಕೂಡ ಅಷ್ಟೆ ಮುಸುಕಿನ ಜೋಳದ ಮೂಲಸ್ಥಾನ ನಿಷ್ಕರ್ಷೆಯ ಬಗೆಗಿನ ಸಮಕಾಲೀನ ಸಮಸ್ಯೆಯೊಂದರ ಮುಡುಕು ತೆರೆಯುವ ಲೇಖನದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಸುದೀರ್ಘ ಕಥಾಹಂದಕ್ಕೊಂದು ಕೌತುಕದ ನೆಲೆಗಟ್ಟು ಸಿದ್ದವಾಗುತ್ತದೆ.

ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳು ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಓದುಗರ ಕುತೂಹಲವನ್ನು ಹಿಂದೆಯೂ ಅಲ್ಲಲ್ಲಿ ಕೆನೆಕಿದ್ದ, ಇಂದಿಗೂ ಒಗಟಾಗಿಯೇ ಉಳಿದ 'ಸಿರಿಭೂವಲಯ'ದ ಪರಿಕಲ್ಪನೆಯನ್ನು ತೀರ ಸಹಜವೆಂಬಂತೆ ಕಥೆಯಲ್ಲಿ ಸೇರಿಸಿದ್ದು, ತಾಳೆಗರಿಯ ಲಿಪಿಯಲ್ಲಿ ಅಂಕಾಕ್ಷರ ಸೂತ್ರಗಳ ಮೂಲಕ ಜೈನ ಸಿರಿಸಂಪತ್ತಿನ ಕೀಲಿಕೈಯನ್ನು ಬಚ್ಚಿಟ್ಟಿದ್ದು ಎಲ್ಲವೂ ಮೂಂದಿನ ಅಧ್ಯಾಯಾಕ್ಕಾಗಿ ಕಾಡು ಕೂರುವಂತೆ ಮಾದುತ್ತೆ. ಇಂದು ನೆನ್ನೆಗಳ ಮಧ್ಯೆ ತಾಕಲಾತವಾಡುತ್ತ ಘಟನೆಗಳು ತೆರೆದುಕೊಳ್ಳುತ್ತವೆ. ಸಿನಿಮಾ ರೀಲಿನಂತೆ, ನವೆಂಬರ್ 6 ರಿಂದ ಗಂಟೆ ಗಂಟೆ ಲೆಕ್ಕಾಚಾರದಂತೆ ಹತ್ತು ದಿನಗಳಲ್ಲಿ ಕಥೆಯನ್ನು ಮುಗಿಸುವ ಜಾಣ್ಮೆ ಕೂಡ ಕನ್ನಡದ ಈಚಿನ ಓದುಗರಿಗೆ ಹೊಸದೆಂದೇ ಹೆಲಬಹುದು. ಸೇಟಲೈಟ್ ಚಾನೆಲ್, ಸೆಲ್ ಫೊನೆ. ಈ-ಮೇಲ್, ನೆಟ್ ಚಾಟ್ ಗಳ  ಈ ಯುಗದಲ್ಲಿ ಕಾದಂಬರಿಯ ನಾಯಕಿಯೂ ಅಂಥದ್ದೇ ಹೈ -ಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾವೆಲ್ ಮಾಡುತ್ತ ಭೂತ=ಭವಿಷ್ಯಗಳನ್ನು ಬೆಸೆಯುವ ಕರಿಕಾರ್ತಿಯಾಗಿರುವುದು ಇಂಗ್ಲಿಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೋದ ಪೀಳಿಗೆಗೂ ಆಕ್ರಶಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದ್ದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ.
ಇವೆಲ್ಲವುಗಳ ಹಿಂದಿನ ಸೃಜನಶೀಲ ಮನಸ್ಸು ನಮ್ಮನ್ನು ಅಚ್ಚರಿಗೊಳಿಸಬೇಕು. ವಿಜ್ಞಾನಿಯೊಬ್ಬ ತನ್ನ ಸಂಶೋಧನ ಕ್ಷೇತ್ರದ ಮಾಹಿತಿಗಳನ್ನು ಥ್ರಿಲ್ ಕೊಡುವ ಕಥಾ ರೂಪದಲ್ಲಿ ಹಣೆಯುವುದು ಅಷ್ಟೇನು ಸವಾಲಿನ ಕೆಲಸವಾಗಲಾರದು. ಇಲ್ಲಿ ಹಾಗಲ್ಲ, ಇತಿಹಾಸದ ಗರ್ಭದಲ್ಲಿ ಅಡಗಿದ ಸಂಗತಿಗಳನ್ನು ಸಾಧಾರ ಹೊರಕ್ಕೆಳೆದು, ವರ್ತಾಮಾನದೊಂದಿಗೆ ಬೆರೆಸಿ ಕಲ್ಲತ್ಮಾಕ ಹೆನೆಗೆ ಮಾಡಿದ್ದು ಅಪರೂಪದ ಸಾಧನೆಯೇ ಸರಿ.
ಅಲ್ಲಲ್ಲಿ ಕಡೆದಿಟ್ಟ ಕಲ್ಲುಳುಗಳ ಅವಶೇಷಗಳಲ್ಲಿ ಗತಕಾಲದ ನಮ್ಮ ರೋಚಕ ಚರಿತ್ರೆಗಳು ಹೂತುಹೊಗಿವೆ; ಇಲ್ಲವೇ ನೀರಸ ಪಠ್ಯಗಳಾಗಿ ಶಿಕ್ಷಕರ ನೋಟ್ ಬುಕ್ ಗಳಿಂದ ವಿದ್ಯಾರ್ಥಿಗಳ ನೋಟ್ ಬುಕ್ ಗಳಿಗೆ ದಾಟಿ ಯಾರನ್ನು ತಟ್ಟದೆ ಸಾಗುತ್ತಿವೆ. ಚರಿತ್ರೆಯ ಬಗೆಗಿನ ಅಂಥ ಅಸಡ್ಡೆಯನ್ನು ನಿವಾರಿಸಿ ಹೊಸ ಸಂಶೋಧನೆಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇ ಪಕ್ಷ ಅಲಿದಿಳಿದ ಶಿಲ್ಲಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ತ್ರಿಲ್ಲೆರ್ಗಳ ಅಗತ್ಯ ತುಂಬಾ ಇದೆ. ಅದನ್ನು ಸಮಕಾಲೀನ ವಿಜ್ಞಾನಿಯೊಬ್ಬರು ತೋರೀಸಿಕೊಟ್ಟಿದ್ದಾರೆ. ಮುಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಹಿಸುವಂತೆ ಹೊಸ ದೇವಿಗೆ ಹಚ್ಚಿದ್ದಾರೆ.
ದಾ. ಗಣೇಶಯ್ಯ ಕನ್ನಡಕ್ಕೆ ದಕ್ಕಿದ ಹೊಸ ಆಸ್ತಿ.

ಮೂಲhttp://goo.gl/x3yM9L
ಡಾ. ಕೆ. ಎನ್. ಗಣೇಶಯ್ಯನವರು ಭಾರತದ ಪುರಾತನ ಮತ್ತು ಸವಿಸ್ತಾರವಾದ ಇತಿಹಾಸವನ್ನು ಅಡಿಗಲ್ಲಾಗಿ ಇಟ್ಟುಕೊಂಡು, ಇಂದಿನ ಮನುಷ್ಯನ ಅತಿ ಆಸೆಯನ್ನು ಕಟ್ಟಡದ ಇಟ್ಟಿಗೆಗಳಂತೆ ಬಳಸುತ್ತಾ ಅತ್ಯಂತ ರೋಚಕವಾಗಿ ಕಥೆಯನ್ನು ನಮಗೆ ಹೇಳುತ್ತಾ ಹೋಗುತ್ತಾರೆ. ಅವರಿಗೆ ಗೊತ್ತು ನಮ್ಮ ಕನ್ನಡದ ಓದುಗರಿಗೆ ತೀರ ಹೊಸ ಅಥವಾ ತೀರ ಹಳೆಯದನ್ನು ಹೇಳಿದರೆ ಓದಲಾರರು ಎಂದು. ಹಾಗಾಗಿ ಎಷ್ಟು ಬೇಕೋ ಹೊಸ ತಂತ್ರಜ್ಞಾನವನ್ನು ಬಳಸಿ ಭಾರತ/ಕರ್ನಾಟಕದ ಸಂಸ್ಕೃತಿ ಗೆ ಒಗ್ಗುವ ಹಾಗೆ ಕಥೆಯನ್ನು ಬಿಡಿಸಿಡುತ್ತಾರೆ. ಇನ್ನೊಂದು ಮುಖ್ಯವಾಗಿ ಹೇಳಬೇಕಾದ್ದು ಪ್ರತಿ ಕಾದಂಬರಿಗೆ ಇವರು ಮಾಡುವ ಸಂಶೋಧನೆ. ಇತಿಹಾಸದಲಿ ಎಲ್ಲೋ ಕರಗಿಹೋದ/ಮರೆಯಾದ ಸತ್ಯಗಳನ್ನು ಹೇಳುತ್ತಾ ಹೋಗುತ್ತಾರೆ. ಮೂಲತಹ ಕೃಷಿ ವಿಜ್ಞಾನಿಗಳಾಗಿರುವ ಇವರು ಸಸ್ಯ ಥಳಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. 'ಕಪಿ ಲಿಪಿ ಸಾರ' ದಲ್ಲಿ ಇವರು 'ಸಂಜೀವಿನಿ' ಯನ್ನು ಹುಡುಕುವ ಕಥೆಯನ್ನು ಹೇಳುತ್ತಾರೆ. ಅಷ್ಟೇ ಅಲ್ಲದೆ ರಾಮಾಯಣ ಆದಮೇಲೆ ಹನುಮಂತ ಎಲ್ಲಿ ಹೋದ? ಅಂಡಮಾನ್ ಗೆ ಅಂಡಮಾನ್ ಅಂತಾನೆ ಯಾಕೆ ಕರಿತಾರೆ?. ಹಾಗೂ ಜೀವ ವಿಜ್ಞಾದಲ್ಲಿ ಇತ್ತೆಚೆಗಾಗಿರುವ ಬೆಳವಣಿಗೆಗಳು ಇತ್ಯಾದಿಗಳನ್ನೂ ಬಳಸಿ ಸುಂದರವಾದ ಅಷ್ಟೇ ಕುತೂಹಲಕರವಾದ ಒಂದು ಲೋಕವನ್ನೇ ಸೃಷ್ಟಿಸುತ್ತಾರೆ.
ಇಷ್ಟೆಲ್ಲಾ ಹೇಳಿದಮೇಲೆ ನಾನು ಅವರ ಅಭಿಮಾನಿಯಾಗಿದ್ದೀನಿ ಅಂತ ಬಿಡಿಸಿ ಬೇರೆ ಹೇಳಬೇಕಾಗಿಲ್ಲ ಅಲ್ಲವೇ. ಹಾಗಾಗಿ ಮತ್ತೆರಡು ಪುಸ್ತಕ ತಂದಿರುವೆ ಇವರದೇ :) ಅದರಲ್ಲಿ ಒಂದನ್ನು ಮುಗಿಸಿರುವೆ. ಆ ಪುಸ್ತಕದ ಹೆಸರು 'ಕನಕ ಮುಸುಕು'. ಈ ಕಾದಂಬರಿಯ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕೆಂದರೆ, ಇಸ್ರೋ ಸಂಸ್ಥೆಯ ಚಿತ್ರ ಒಂದು ಕರ್ನಾಟಕದ ಸೋಮನಾಥ ಪುರದ ಸುತ್ತ ಅಸ್ವಾಭಾವಿಕ ದಿಬ್ಬಗಳನ್ನು ತೋರಿಸುತ್ತದೆ. ಇದನ್ನು ಅರ್ಥೈಸಲು ಹೋದಾಗ ಕೆಳಗಿನ ಕಥೆ ನಮ್ಮ ಮುಂದೆ ಹರಡಿಕೊಳ್ಳುತ್ತದೆ:

ಚಂದ್ರಗುಪ್ತ ಮೌರ್ಯ ಜೈನ ಸನ್ಯಾಸಿಯಾಗಿ ತನ್ನ ರಾಜ್ಯ ತ್ಯಜಿಸಿ ಉತ್ತರ ಭಾರದಿಂದ ದಕ್ಷಿಣ ಭಾರತಕ್ಕೆ ಜೈನ ಮತದ ಪ್ರಚಾರಕನಾಗಿ ಶ್ರವಣಬೆಳಗೊಳಕ್ಕೆ ಬರುತ್ತಾನೆ. ಇದು ನಾವೆಲ್ಲಾ ಓದಿರುವ/ಕೇಳಿರುವ ಸತ್ಯ. ಆದರೆ ಸ್ವಲ್ಪ ತಾರ್ಕಿಕವಾಗಿ ಯೋಚಿಸಿರುವ ಗಣೇಶಯ್ಯನವರು ಹಾಗೂ ಅಷ್ಟೇ ಆಳವಾಗಿ ಇದರ ವಿವರವನ್ನು ತಿಳಿದಿರುವ ಅವರು ಕೆಲವು ವಿಷಯಗಳನ್ನು ಗಮನಿಸಿದ್ದಾರೆ. ಹಲವಾರು ಶಾಸನಗಳು ಹೇಳಿರುವಂತೆ ಚಂದ್ರಗುಪ್ತ ಮೌರ್ಯನ ಜೊತೆ ಸುಮಾರು ೧೨೦೦೦ ಜೈನ ಮುನಿಗಳು ಬರುತ್ತಾರೆ!! ಯಾಕೆ? ಇಂತಹ ಪ್ರಶ್ನೆಗಳು ಕೊನೆಗೆ ಕೈ ಮಾಡಿ ತೋರಿಸುವ ಉತ್ತರ ಸುಮಾರು ೫೦೦ ಟನ್ ಚಿನ್ನದ ಕಡೆಗೆ. ಈ ಚಿನ್ನವನ್ನು ಮುಸುಕಿನಿ ಜೋಳದ ತೆನೆಯ ರೂಪದಲ್ಲಿ ಮುಸುಕಿನ ಜೋಳದ ತೆನೆಗಳ ಜೊತೆಗೆ ಉತ್ತಮ camouflage ಮಾಡಿ ತರುತ್ತಾರೆ . ಹಾಗಾಗಿ ಕನಕ ಮುಸುಕು.

ಚಂದ್ರಗುಪ್ತ ಮೌರ್ಯ ನಿಂದ ಶುರುವಾಗುವ ನಿಧಿಯ ರಹಸ್ಯ ಹೊಯ್ಸಳ ಸಾಮ್ರಾಜ್ಯ ದ ಶಕುಂತಲೆಯಲ್ಲಿ ಕೊನೆಗೊಳ್ಳುತ್ತದೆ. ಈ ನಿಧಿಯನ್ನು ಹುಡುಕಲು ಹೊರಡುವ ಕಾದಂಬರಿಯ ನಾಯಕಿ, ಆಕೆಯ ಗಂಡ, ಆಕೆಯ ಗುರು ಹಾಗೂ ಸಕಾರಣಗಳಿಗೆ ಇದನ್ನು ಮುಚ್ಚಿಡಲು ಪ್ರಯತ್ನಿಸುವ ಜೈನ ಧರ್ಮದ ಹಿರಿಯ ನಾಯಕರುಗಳು ಹಾಗೂ ಇಷ್ಟೆಲ್ಲಾ ಸಾಲದು ಎಂಬಂತೆ ನಾಯಕಿಯನ್ನು ಬೆನ್ನು ಹತ್ತುವ ಅಂತರಾಷ್ಟ್ರೀಯ ಕಳ್ಳರ ಗ್ಯಾಂಗ್. ಇನ್ನೇನು ಬೇಕು ಹೇಳಿ ಕಥೆಯನ್ನು ಇನ್ನಷ್ಟು ರೋಚಕವಾಗಿಸಲು? ಇಷ್ಟೆಲ್ಲಾ ಇದ್ದರು ಗಣೇಶಯ್ಯ ಕಥೆಯ ಮುಖ್ಯ ಲಹರಿಯನ್ನು ಬೇರೆ ಕಡೆಗೆ ಹರಿಯ ಬಿಡದೇ ಓದುಗನನ್ನು ಕಾದಂಬರಿ ಮುಗಿಯುವವರೆಗೂ ಕಟ್ಟಿ ಕೂರಿಸುತ್ತಾರೆ.
ನಾನು ಸುಮಾರು ೪ ವರ್ಷದ ಹಿಂದೆ ಬೆಂಗಳೂರಿನಬಳಿ ಇರುವ ದೇವರಾಯನ ದುರ್ಗಕ್ಕೆ ಹೋದಾಗ ಅಲ್ಲಿ ಒಬ್ಬ ಹೇಳಿದ್ದ ವಿಷ್ಣು ವರ್ಧನನ ಹೆಂಡತಿ ಶಾಂತಲೆ ಇಲ್ಲೇ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಳು ಎಂದು. ಆಗಿನಿಂದ ನನಗೆ ಒಂದು ವಿಷ್ಯ ಅರ್ಥ ಆಗಿರಲಿಲ್ಲ. ಬೇಲೂರುಹಳೆಬೀಡಿನಲ್ಲಿದ್ದ ಶಕುಂತಲೆಗೂ ಇಲ್ಲಿಗೂ ಏನು ಸಂಬಂಧ, ಇಲ್ಲಿ ಬಂದು ಸಾಯುವನ್ತದ್ದು ಏನಾಗಿತ್ತು? ಈ ಪ್ರಶ್ನೆ ಗೆ ಕನಕ ಮುಸುಕು ತಕ್ಕಷ್ಟು ಉತ್ತರ ಕೊಟ್ಟಿತು. ಇಷ್ಟೇ ಅಲ್ಲದೆ ಮುಸಿಕಿನ ಜೋಳದ ಇತಿಹಾಸ ಮತ್ತು ಅದು ಏಷ್ಯಗೆ ಬಂದ ಬಗೆಗೆ ಇಂದಿಗೂ ಇರುವ ಕಗ್ಗಂಟು ಗಳನ್ನೂ ಕುತೂಹಲಕಾರಿಯಾಗಿ ಕಥೆಯ ಮಧ್ಯದಲ್ಲಿ ಗೊತ್ತಿಲ್ಲದಂತೆಯೇ ನಮಗೆ ತಿಳಿಸುತ್ತಾರೆ. ಇದಲ್ಲದೆ ರಾಜಕಾರಣ ಮತ್ತು ಧರ್ಮ/ಜಾತಿ ಇವೆರಡರ ಮಧ್ಯ ಇರುವ ಬಿಡಿಸಲಾಗದ ನಂಟನ್ನು ತಿಳಿಯಾಗಿ ಹೇಳುತ್ತಾರೆ. ಜೈನ, ವೈಷ್ಣವ, ಶೈವ, ಇಸ್ಲಾಂ ಮತ್ತು ಕ್ರಿಸ್ತ ಧರ್ಮ ಗಳ ಹಿಂದಿನ ತಿಕ್ಕಾಟಗಳು ನೋಡ ಸಿಗುತ್ತವೆ. ಇಷ್ಟೆಲ್ಲಾ ಸಾಕಾಗುವುದಿಲ್ಲ ಎಂದರೆ ದೊಡ್ಡವರ ಸಣ್ಣತನಗಳು ಹಾಗೂ ನಿಮಗೆ cryptography ಬಗ್ಗೆ ಉತ್ಸಾಹವಿದ್ದರೆ ಹಿಂದಿನ ಕಾಲದಲ್ಲಿ ಬಳಸಿದ ಕೊಡೆಡ್ ಸಂದೇಶಗಳನ್ನು ಸೇರಿಸಿ ನಮ್ಮನ್ನು ಚಕಿತಗೊಳಿಸುತ್ತಾರೆ.


Sunday, November 17, 2013

ಮರಣದ ಮರ್ಮ - ಎನ್ ನರಸಿಂಹಯ್ಯ

Marnada Marma -  Narashimaiah N

 

 

ಮುನ್ನುಡಿಯಿಂದ :

ಸಾಂಸಾರಿಕ ಜೀವನದ ಚಕ್ರವು ಸುಗುಮವಾಗಿ ಉರುಳಲು ದಂಪತಿಯರ ಪರಸ್ಪರ ಹೊಂದಾಣಿಕೆಯ ಪ್ರೀತಿವಿಶ್ವಾಸ ಅಥತ್ಯವಶ್ಯಕ. ಒಬ್ಬರನ್ನೊಬ್ಬರು ಹೊಂದಿಕೊಂಡು ಹೋಗದ ಬಾಳು ಜೋಡೆತ್ತಿನ ಗಾಡಿಗೆ ಒಂಟಿ ಎತ್ತನ್ನು ಕಟ್ಟಿದಂತಾಗುವುದು. ಹಿರಿಯರು ನಿಶ್ಚಿಯ ಮಾಡಿದ ಹೆಣ್ಣು=ಗಂಡುಗಳನ್ನು ಮಾಡುವೆ ಮಾಡಿಕೊಳ್ಳುವ ಕಾಲ ತಪ್ಪಿ, ಗನ್ದುಹೆಣ್ಣುಗಳೇ ಪರಸ್ಪರ ಒಪ್ಪಿ ಮದುವೆಯಾಗುವ ಕಾಲವೀಗ ನಡೆಯುತ್ತಿದೆ.

ತಂದೆತಾಯಿಯರ ನಿರ್ಬಂಧಕ್ಕೊಳಗಾಗಿ ಬೇಡವಾದ ಹೆಣ್ಣುಗಳನ್ನು ಗಂಡುಗಳೇ ಆಗಲೀ, ಗಂಡುಗಳನ್ನು ಹೆಣ್ಣುಗಳೇ ಆಗಲಿ ಮದುವೆಯಾದರೆ ಆ ಸಂಸಾರ ಜೀವನದಲ್ಲಿ ಸಂತೋಷವಿರದೆ ಏನಾದರೊಂದು ಏರುಪೇರುಗಳ ತೊಡಕಿನ ಸಮಸ್ಯಗಳಿದ್ದೇ  ಇರುತ್ತದೆ. ಗಂದಹೆಂಡಿರಲ್ಲಿ ಪ್ರೀತಿವಿಶ್ವಾಸವಿದ್ದು ಜಗಳಗಳಾದರೆ ಗಂಡ ಹೆಂಡಿರ ಜಗಳ ಉಂಡು ಮಲದುವತನಕ ಎಂಬಂತೆ ಹಗಲು ಜಗಳ ಆಡಿದವರು ರಾತ್ರಿ ಪರಸ್ಪರ ಪ್ರೀತಿಯಿಂದ ಮಾತಾನಾಡುತ್ತಾ ಬೆಳಿಗ್ಗೆ ಆಡಿದ ಜಗಳವನ್ನು ಮರೆಯುವರು. ಪ್ರೀತಿವಿಶ್ವಾಸವಿಲ್ಲದವರಲ್ಲಿ ಯಾರೇನು ಕೆಲಸ ಮಾಡಿದರೂ ತಪ್ಪಾಗಿ ಕಾಣುವುದು.

ಈ ಪತ್ತೆದಾರಿ ಕಾದಂಬರಿಯನ್ನು ಅಂತಹ ಒಂದು ಸಮಸ್ಯೆಯನ್ನು ಉಪಯೋಗಿಸಿಕೊಂಡು ವಿಲಕ್ಷಣ ಸನ್ನಿವೇಶ, ಘಟನೆಯೊಡನೆ ಬರೆದಿತ್ತೇನೆ. ಅಂದಮಾತ್ರಕ್ಕೆ ಇವರ ಪಾತ್ರಪರಿಚಯಗಳು ಸಮಾಜದ ಯಾವ ವ್ಯಕ್ತಿಗೂ ಅನ್ವಯಿಸದು, ಕಥಾವಿವರಣೆ, ಪಾತ್ರ ಪರಿಚಯವು ನನ್ನ ಸ್ವಯಂ ಕಲ್ಪಿತವಾಗಿರುತ್ತೆ.



ನಾನೇಕೆ ಬರಯುತ್ತೇನೆ ? - ಎಸ್ ಎಲ್ ಭೈರಪ್ಪ

Naneke Bareyuthene - S L Bhyrappa

 

ಭೈರಪ್ಪನವರು ಕನ್ನಡದ ಬಹು ಜನಪ್ರಿಯ ಲೇಖಕರು. ಅವರು ನೈಜತೆಗೆ ಹತ್ತಿರವಾಗಿ ಬರಯುತ್ತಾರೆ, ಅವರು ಬರಯುವ ಕಠೋರ ಸತ್ಯ ಕೆಲವರಿಗೆ ಹಿಡಿಸುವುದಿಲ್ಲ. ಅದಕ್ಕಾಗಿ ಅವರನ್ನು ಹೀಗೆಳೆಯುದು ಸಾಮಾನ್ಯ. ನಾವು ಯಾವುದೇ ಒಬ್ಬ ಲೇಖಕರ ಬರವಣಿಗೆಯನ್ನು ಟೀಕಿಸುವ ಮುನ್ನ ಅವರು ಯಾಕೆ ಮತ್ತು ಯಾವ ದೃಷ್ಟಿಕೋನದಿಂದ ಬರೆದ್ದಿದ್ದಾರೆ ಎಂದು ತಿಳಿದಿಕೊಳ್ಳಬೇಕು. ಲಿಲಿಯುವ ಮುನ್ನವೇ ಎಲ್ಲಾರು ಊಹ ಫೋಹಗಳನ್ನೂ ಹುಟ್ಟು ಹಾಕಿ ಲೇಖಕರ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಾರೆ. ಈ ಪುಸ್ತಕ ಭೈರಪ್ಪನವರು ಅವರು ಯಾವ ವಿಷಯವನ್ನು ಇಟ್ಟಿಕೊಂಡು ಅವರ ಕಾದಂಬರಿಗಳನ್ನು ಬರೆದ್ದಿದ್ದಾರೆ ಎಂದು ವಿವರಿಸುತ್ತಾರೆ.

ಈ ಪುಸ್ತಕದಲ್ಲಿ ಅವರು ಕಳೆದ ಹತ್ತು ವರ್ಷಗಳಿಂದ ಬರೆದ ಲೇಖನಗಳ ಸಂಗ್ರಹವಿದೆ. ಅವರು ಬರೆದ ಸಂದರ್ಭ ಮತ್ತು ಕಾಲವನ್ನು ಬರೆದ್ದಿದ್ದಾರೆ.

ಪುಸ್ತಕದಿಂದ:

"ನಾವು ಇಂಥಹದೇ ಕಾರಣಕ್ಕಾಗಿ ಬರಯುತ್ತೇವೆಂದು ಎಲ್ಲ ಲೇಖಕರೂ ತಮ್ಮ ಜೀವನದುದ್ದಕ್ಕೂ ಮಾರ್ಗದರ್ಶಿಯಾಗುವಂಥ ಗುರಿಯನ್ನು ಖಚಿತಮಾಡಿಟ್ಟುಕೊಂಡಿರುವುದು ಸಾಧ್ಯವಿಲ್ಲ. ಉಳಿದವರ ಮಾತು ಹೋಗಲಿ ನನ್ನ ಬರವಣಿಗೆಯ ಗೊತ್ತುಗುರಿಗಳು ಇನ್ನು ಒಂದು ವಾರದ ನಂತರ ಯಾವ ಧಾಟಿಯಲ್ಲಿ ಹೋಗುತ್ತದೆ ಎಂದು ಈ ದಿನ ನಿಶ್ಚಯವಾಗಿ ಹೇಳಲಾರೆ. ಕಳೆದ ಹದಿನೇಳು ವರ್ಷದಿಂದ, ಎಂದರೆ ೧೯೫೯ ರಿಂದ ಬರೆಯುತ್ತಿದ್ದೇನೆ. ಈ ಅವದಿಯಲ್ಲಿ ನನ್ನ ಬರವಣಿಗೆಯ ಯಾಕೆ ಏನುಗಳನ್ನು ಹಲವು ಬಾರು ವಿಮರ್ಷಿಸಿಕೊಂಡಿದ್ದೇನೆ, ಬದಲಿಸಿಕೊಂಡಿದ್ದೇನೆ. ಎಷ್ಟೋ ಸಲ ನಾನು ಪ್ರಜ್ಞೆಯ ಮಟ್ಟದಲ್ಲಿ ಆಲೋಚಿಸಿದ್ದ ರೀತಿಯನ್ನು ಮೀರಿ ಕೃತಿಗಳು ಸ್ವರೂಪ ತೆಳೆದಿದೆ. ಅವುಗಳ ಹೊಸ ಬೆಳಕಿನಲ್ಲಿ ನನ್ನ ಬರವಣಿಗೆಯ ದಿಕ್ಕು ಯಾವುದು ಉಂಟು. ಈ ಅರ್ಥದಲ್ಲಿ ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಯ ಉತ್ತರವೂ ಸಮಗ್ರವಾಗಿ ನನಗೇ ಪೂರ್ತಿಯಾಗಿ ಅರಿವಿಗೆ ಬಂದಿಲ್ಲವೆಂದು ಹೇಳಬಹುದು. ನನ್ನ ಬರವಣಿಗೆಯ ಆರಂಭಬಿಂದುವಿನಿಂದ ಇದುವರೆಗೆ ಬದಲಾದ ಕೆಲವು ಮೂಖ್ಯ ತಿರುವುಗಳನ್ನು ಸಮೀಕ್ಷಿಸಿ ಈಗ ಯಾವ ನಿಲುವಿಗೆ ಬಂದಿರುವೆನೆಂದು ಸೂಚಿಸುವ ಪ್ರಯತ್ನವನ್ನಷ್ಟೇ ಇಲ್ಲಿ ಮಾಡುತ್ತೇನೆ "

ಭೈರಪ್ಪವನರ ಕಾಬರಿಗಳ ಇಂದಿರುವ ಮತ್ತು ಅವರ ಅನಿಸಿಕೆಗಳನ್ನು ತಿಳಿಯಬೇಕಾದರೆ ಈ ಪುಸ್ತಕವನ್ನು ಓದಲೆಬೇಕು


ವೇದವ್ಯಾಸರು ಮಹಾಭಾರತವನ್ನು ಬರೆದಿದ್ದು ಯಾಕೆ ? = ನಿರುಪಾಮಾ

Vedavyasaru Mahabharathavannu Baredaddu Eke? - Nirupama

 

ಭಾರತದ ಎಲ್ಲಾ ಜನರಿಗೆ ಮಹಾಭಾರತ ಮತ್ತು ರಾಮಾಯಣ ಮಹಾ ಕಥೆಗಳ ಬಗ್ಗೆ ಗೊತ್ತು ಆದರೆ ಭಾಹುತೇಕ ಜನರು ಇದೊಂದು ಕಥೆಯಾಗಿ ನೋಡುತ್ತಾರೆ ಹೊರತು ಇದು ನಮ್ಮ ಸುಖ ಜೀವನಕ್ಕೆ ದಾರಿ ಎಂದು ನೋಡುವುದಿಲ್ಲ, ಡಾ. ನಿರುಪಮರವರು ಮಹಾಭಾರತವನ್ನು ವೇದವ್ಯಾಸರು ವಿಶ್ವದ ಜನರಿಗೆ ಯಾಕೆ ಕೋಡಿಯಾಗಿ ಕೊಟ್ಟರು ಮತ್ತು ಅದರಲ್ಲಿ ಇರುವ ವಿಶೇಷ ಸಂದೇಶ ವನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ.

ವೇದವ್ಯಾಸರು ರಚಿಸಿರುವ ಮಹಾಬಾರತ ಒಂದು ಮಹಾಕಾವ್ಯ. ಇಲ್ಲಿ ಬರುವ ಶ್ರೀ ಕೃಷ್ಣ, ಅರ್ಜುನ, ದುರ್ಯೋದನ, ಕುಂತಿ, ಮತ್ತು ಇತರೆ ಪಾತ್ರಗಳಿಂದ ಹೇಳಿಸುವ ಜೀವನದ ದಾರಿ, ನಾವು ಹೇಗೆ ಜೀವನ ಮಾಡಬೇಕು, ಹೇಗೆ ಆದರ್ಶವಾಗಿರಬೇಕು ಇಲ್ಲಾದಿದ್ದರೆ ದುರ್ಯೋದನನ ರೀತಿ ದಾರಿತಪ್ಪುತ್ತರೆ. ಇಲ್ಲಿ ನಿರುಪಮರವರು ಬರೆಯುತ್ತಾರೆ

"ಮಹಾಭಾರತದಲ್ಲಿ ವೇದವ್ಯಾಸರು ಶ್ರೀ ಕೃಷ್ಣನ ಮೂಖದಿಂದ ಗೀತೋಪನಿಶತ್ತನ್ನು ನಿಕ್ಷಿಪ್ತಗೊಳಿಸಿ ಈ ಗ್ರಂಥಗೌರವವನ್ನು ಹೆಚ್ಚಿಸಿದ್ದಾರೆ. ಮಹಾಭಾರತದ ರಚನೆ ವೇದವ್ಯಾಸರ ಧರ್ಮಸಾಧನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಕಾಲ ಕಳೆದಂತೆ ನಾಗರಿಕತೆ ಬೆಳೆದಂತೆ ಯಾವುದೇ ಒಂದು ಕ್ಷೇತ್ರದ ಮೂಲ ವಿಸ್ತಾರಗೊಳ್ಳುತ್ತ ಹೊಸ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತ ಆಗಿ ಆಳತೆಗೆ ಮೀರಿ ಬೆಳೆಯುತ್ತ ಹೋಗುತ್ತಾರೆ. ಅದು ಜ್ಞಾನದ ಸಹಜ ಸ್ವಭಾವ. ಇದರಿಂದಾಗಿ ಅದು ಒಂದು ಹಂತದಲ್ಲಿ ಸಂಕೀರ್ಣಗೊಂಡು ಅಗಮ್ಯವಾಗಲಾರಂಭಿಸುತ್ತದೆ ಗೋದಲ ಗಳೇರ್ಪಟ್ಟು ಸಂದಿಗ್ಥತೆಯನ್ನೊಡ್ಡುತ್ತದೆ. ಹೀಗೆ ಗೋಜಲು ಗೋಜಲಾಗಿ ಬೆಳೆದದ್ದನ್ನು ಎಳೆಬಿಡಿಸಿ ಬೇರ್ಪಡಿಸುವುದು, ವರ್ಗೀಕರಿಸಿ ಕ್ರಮಬದ್ದ ಮಾಡುವುದು ಅನಿವಾರ್ಯವಾಗುತ್ತದೆ. ಇದು ಬಹು ಕಷ್ಟಸಾಧ್ಯವಾದ ಕಾರ್ಯ. ಹೀಗೆ ಹಿಂದೆ ಒಂದು ಕಾಲದಲ್ಲಿ ವೇದವು ಅಪಾರವಾಗಿ ಬೆಳೆದು ಕೀಂಕಾರಣ್ಯದಂತೆ ವ್ಯಾಪಿಸಿತು, ಅವುಗಳಲ್ಲಿ ಕ್ಲಿಷ್ಟತೆ, ಸಂದಿಗ್ಥತೆ ತೋರಿತು ಅದ್ವಿತೀಯ ಪ್ರತಿಭಾ ಸಂಪನ್ನರೂ, ಆಪಾರ ತಪೋನಿಧಿಯೂ ಆಗಿದ್ದು ವ್ಯಾಸಋಷಿ ಈ ಸಿಕ್ಕು ಸಿಕ್ಕಗಿದ್ದ ವೇದಸಾಹಿತ್ವವನ್ನು ವಿಂಗಡಿಸಿ, ಕ್ರಮಬದ್ದವಾಗಿ ಸುಗುಮವಾಗುವಂತೆ ಮಾಡಿ ವೇದವ್ಯಾಸರೆಂದು ಪ್ರಸಿದ್ದರಾದರು. "

ಹೀಗೆ ನಿರುಪಮರವರು ರಾಮಾಯಣ ಮತ್ತು ಮಹಾಭಾರತವನ್ನು ವಾಲ್ಮೀಕಿ ಮತ್ತು ವೇದವ್ಯಾಸರು ಏಕೆ ಬರೆದರು, ಅವರ ಉದ್ದೇಶಗಳೇನು ಎಂದು ಈ ಪುಸ್ತಕದಲ್ಲಿ ಬರೆದಿದ್ದಾರೆ.

 

 



Saturday, November 16, 2013

ಮೂಕಧಾತು - ಕೆ ಎನ್ ಗಣೇಶಯ್ಯ

Mooka Dhatu  - K. N. Ganeshaiah

 

 

ಮೂಖ ಧಾತು ಗಣೇಶಯ್ಯನವರ ಹೊಸ ಕಾದಂಬರಿ. ಗಣೇಶಯ್ಯನವರು ಚರಿತ್ರೆಯ ಘಟನೆಗಳನ್ನು ಮತ್ತು ತಮ್ಮ ಕಾಲ್ಪನಿಕ ಕಥೆ ಎಣೆಯುವ ಶಕ್ತಿಯನ್ನು ಊಪಯಗಿಸಿ ಕಣ್ಣಿಗೆ ಕಟ್ಟಿದಹಾಗೆ ಕಾದಂಬರಿಗೆ ಜೀವ ತುಂಬುತ್ತಾರೆ. ನಮ್ಮ ಅಂದರೆ ಭಾರತೀಯ ಸಂಸ್ಕೃತಿಯನ್ನು ಎಲ್ಲ ಪುಟಗಳಲ್ಲಿ ಎತ್ತಿ ಹಿಡಿಯತ್ತಾರೆ. ನಾನು ಒದುದಿದ ಬಹುಥೇಕ ಕಾದಂಬರಿಗಳು ಪ್ರಾಚೀನ ಭಾರತದ ಸಂಸ್ಕೃತಿಯನ್ನು ಹೀಗೆಳೆಯುವ ಪ್ರಯತ್ನ ಮಾಡಿದರೆ ಮತ್ತೆ ಕೆಲವರು ಭಾರತವನ್ನು ತೆಗಳಿದರೆ ಮಾತ್ರ ತಮ್ಮ ಕಾದಂಬರಿಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತವೆ ಅನ್ನೋ ರೀತಿಯಲ್ಲಿ ನಮ್ಮೆ ಭಾರತವನ್ನು ಬೆತ್ತಲೆ ಮಾಡಿ ನಿಲ್ಲಿಸುತ್ತಾರೆ. ಆದರ ಗಣೇಶಯ್ಯನವರ ಭಾರತದ ಅಧ್ಯತಿಮಿಕ,  ವೈಜ್ಞಾಯನಿಕ ಮತ್ತು ಸಾಂಸ್ಕ್ರುತಿಕ ಕೊಡಿಗೆಗಳನ್ನು ಎತ್ತಿ ಹಿಡಿಯುತ್ತಾರೆ. ಒಂದು ಕಾದಂಬರಿಯನ್ನು ಬರೆಯುವಾಗ ಅವರು ಮಾಡುವ ಆಳದ ಅಧ್ಯಯನ ಯಾರಿಗಾದರು ಬೆರಗು ಮೂಡಿಸುವಂಥದ್ದು. ಅವರು ಯಾದುದೆ ಮಾತನ್ನು ಗಾಳಿಯಲ್ಲಿ ಎತ್ತಿದ ಊಹ ಪೋಹಗಳಂತೆ ಬರವಣಿಗೆಯಲ್ಲಿ ಬಳಸುವುದಿಲ್ಲ, ಅವರ ಎಲ್ಲ ಮಾತುಗಳಿಗೂ ಪುಷ್ಟಿ ಮತ್ತು ಪುರವಗಳನ್ನು ಕೊದುತ್ತಾರೆ.
 

ಧಾತು(ಡಿಎನ್ಎ) ಎಲ್ಲ ಜೀವಗಳ ಒಂದು ಅತಿ ಮೂಖ್ಯ ಮತ್ತು ಮೂಲಭೂತ ಅಂಶ. ನಮ್ಮ ಬಹುತೆಕ ಕಾರ್ಯಗಳು, ಗುಣಗಳು, ಮತ್ತು ಚಟುವಟಿಕೆಗಳು ಈ ಧಾತುವಿನ ಮೇಲೆ ಅವಲಂಬಿಸಿರುತ್ತದೆ. ನಮ್ಮು ಅಸೆ, ಪ್ರೀತಿ, ಸ್ವಾರ್ಥ, ... ಇತರೆ ಗುಣಗಳು ನಮ್ಮ ಈ ಧತುವಿನಲ್ಲಿ ಇರುತ್ತದೆ ಎಂದು ವಿಜ್ಞಾಯನಿಗಳು ಸಂಶೋಡಿಸಿ ದೃಡಪಡಿಸಿರುತ್ತಾರೆ. ಈ ಕಾದಂಬರಿಯಲ್ಲಿ ಆ ಧಾತುವಿನ ಎಳೆಯನ್ನು ಇಟ್ಟಿಕೊಂಡು ಎಣೆದಿರುರುವ ಒಂದು ಒಳ್ಳೆಯ ಕಾದಂಬರಿ. ಇಲ್ಲಿ ಕ್ರಿ.ಶ. ೧೧೫ ರಲ್ಲಿ ಭಾರತದಲ್ಲಿ ಆಗುತ್ತಿದ್ದ ಬೌದ್ಧ ಧರ್ಮದ ಜನಪ್ರಿಯತೆ ಮತ್ತು ಅವರ ಸಂಶೋದನೆ ಇಂದ ಹಿಡಿದು ಈಗಿನ ೨೦೧೨ ರ ವರಗೆ ಕಥೆಯನ್ನು ಎಣೆದ್ದಿದ್ದಾರೆ. ನಮ್ಮ ಸ್ವರ್ಹ್ತ ಧಾತುವನ್ನು ನಿಷ್ಕ್ರಿಯಗೊಳಿಸಲು ನಗರ್ಜುನರು ಕಂಡು ಹಿಡಿದ್ದಿದ್ದ ಪುಡಿ ಮತ್ತು ಬೂದಿಗಳ ತಯಾರಿಕೆಯ ಪುಸ್ತಕಗಳು ರಾಜರಿದ ರಾಜರಿಗೆ ವರ್ಗವನಣೆಯಾಗಿ ಕೊನೆಗೆ ಚೀನಾ ದೇಶ ಸೇರುತ್ತದೆ. ಇದರ ರಹಸ್ಯ ತಿಳಿದ ಚೀನಾದವರು ಅದನ್ನು ಭೂಮಂಡಲಕ್ಕೆ ಹವಯಲ್ಲಿ ವೈರಸ್ ರೀತಿ ಹರಡಿ ಎಲ್ಲರ ಅದಿಪತಿಯಾಗಿ ಮೆರೆಯಬೇಕು ಎಂದು ವಿಜ್ಞಯನಿಗಳನ್ನು ಬಂದಿಸಿ ಅವರಿಂದ ಅದಕ್ಕೆ ಬೇಕಾಗುವ ಕಾರ್ಯಗಳನ್ನು ಮಾಡಿಸುತ್ತಾರೆ. ಅದು ಹೇಗೆ ಅಂತ್ಯವಾಗುತ್ತದೆ ಮತ್ತು ಅದರ ಇಂದೇ ಯಾರು ಯಾರು ಕೆಲಸ ಮಾದಿತ್ತಾರೆ ಎನ್ನುವುದನ್ನು ಕಾದಂಬರಿ ಓದಿ ತಿಳಿಯಬೇಕು.

ಹಿನ್ನುಡಿ ಇಂದ :

ಈ ಕಾದಂಬರಿಯಲ್ಲಿ ಮೂರು ವಿಷಯಗಳನ್ನು ನಾನು ಮುಖಾಮುಖಿಯಾಗಿ ತರಲು ಪ್ರಯತ್ನಿಸಿರುವುದನ್ನು ಓದುಗರು ಗಮನಿಸಿರುತ್ತಾರೆ. ಆದರೂ, ಅವನ್ನು ನಾನು ಮತ್ತೆ ಚರ್ಚೆಗೆ ತರಲು ಬಯಸುತ್ತೇನೆ.

೧. ದೇವರು, ಧರ್ಮ ಮತ್ತು ವಿಜ್ಞಾನ

ಧರ್ಮ ಮತ್ತು ವಿಜ್ಞಾನಗಳ ನಡುವೆ ಇರಬಹುದಾದ ಸಾಮರಸ್ಯ ಮತ್ತು ವೈರುಧ್ಯ ಹಲವು ರೀತಿಯ ಜಿಜ್ಞಾಸೆಗಳಿಗೆ ಕಾರಣವಾಗಿದ್ದು ಅದು ಎಂದಿಗೂ ಬಗೆಹರಿಯದ ಕಗ್ಗಂಟಾಗಿಯೆ ಉಳಿದಿದೆ-ಉಳಿಯುತ್ತದೆ. ಧರ್ಮ ಮತ್ತು ವಿಜ್ಞಾನಗಳೆ ರಡೂ ಸಹ ಸತ್ಯಾನ್ವೇಷಣೆಯ ವಿಭಿನ್ನ ದಾರಿಗಳಷ್ಟೆ ಎಂಬ ವಾದವು ಅವೆರಡರ ಸಾಮರಸ್ಯತೆಯನ್ನು ಸಮರ್ಥಿಸಿಕೊಂಡರೆ, ಆ ಸತ್ಯವನ್ನು ಹುಡುಕಲು ಅವು ಅನುಸರಿಸುವ ವಿಭಿನ್ನವಾದ ವಿಧಾನಗಳು ಅವುಗಳ ಮಧ್ಯದ ವೈರುಧ್ಯವನ್ನು ದೃಷ್ಟೀಕರಿಸುತ್ತವೆ. ಆದರೆ ಧರ್ಮವು ಆಧ್ಯಾತ್ಮಿಕ ರೂಪದಲ್ಲಿ ವಿಜ್ಞಾನದ ಎದುರು ನಿಂತಾಗ ಇಂತಹ ಹಲವು ವೈರುಧ್ಯಗಳು ಮಾಯವಾಗುತ್ತವೆ. ಅಷ್ಟೆ ಅಲ್ಲ, ಕೆಲವೊಮ್ಮೆಯಂತೂ ವಿಜ್ಞಾನ ಮತ್ತು ಆಧ್ಯಾತ್ಮಗಳ ನಡುವಿನ ಅಂತರವೂ ಸಹ ಕಡಿಮೆಯಾಗುತ್ತದೆ. ಉದಾಹರಣೆಗೆ,
ಕೆಲವು ವೇದ-ಉಪನಿಷತ್ತುಗಳಲ್ಲಿ ಕಂಡುಬರುವ ಪ್ರಕೃತಿಯ ವಿಸ್ಮಯದ ಹುಡುಕಾಟವು, ನಮ್ಮ ಅಸ್ತಿತ್ವದ ಅರ್ಥ ಅಥವ ಅದರ ಉದ್ದೇಶಕ್ಕಾಗಿ, ವಿಜ್ಞಾನಿಗಳು ತೊಡಗಿಕೊಳ್ಳುವ ಹುಡುಕಾಟದಿಂದ ಯಾವುದೇ ರೀತಿಯಲ್ಲಿ ಭಿನ್ನವೆನಿಸದು. ಇನ್ನು ವೃಕ್ಷಾಯುರ್ವೇದಗಳು, ಬೌದ್ಧ ಧರ್ಮದ ಆಧ್ಯಾತ್ಮಿಕತೆಯೊಂದಿಗೆ ಗುರುತಿಸಿಕೊಳ್ಳುವ ಯೋಗ, ಧ್ಯಾನಗಳಂತೂ ಆಯಾ ಕಾಲ ಘಟ್ಟಗಳ ವಿಜ್ಞಾನ ಭಂಡಾರಗಳೆಂದೆ ಪರಿಗಣಿಸಬಹುದು.

ಹೀಗಿದ್ದೂ, ವಿಜ್ಞಾನ ಮತ್ತು ಧರ್ಮಗಳು ಹಲವು ವಿಷಯಗಳಲ್ಲಿ ತದ್ವಿರುದ್ದ ದೃಷ್ಟಿಯನ್ನು ಹೊಂದಿರುವುದು ಎಲ್ಲರಿಗೂ ವಿದಿತ. ಅಂತಹ ಒಂದು ಅತೀ ಪರಿಚಿತ ವಸ್ತುವೆಂದರೆ- ದೇವರು!
ದೇವರು ಕೇವಲ ನಂಬಿಕೆಯೆ?
ಅಥವಾ..
ದೇವರು ನಾವರಿಯದ ಸತ್ಯದ ಪರಿಕಲ್ಪನೆಯೆ?
ಅಥವಾ...
ವಿಜ್ಞಾನದ ಭಾಷೆಯ ಕ್ಲಿಷ್ಟತೆಗೆ ಸಿಕ್ಕಿಹಾಕಿಕೊಂಡಿರುವ ನಮ್ಮ ನಾಗರೀಕತೆಯು,  ದೇವರ ಮೂಲ ಅರ್ಥವನ್ನು ನಿರೂಪಿಸಲಾಗದೆ ತೊಳಲಾಡುತ್ತಿದೆಯೆ? ಧರ್ಮಗಳು ಉಪಯೋಗಿಸುವ ದೇವರ ಬಗೆಗಿನ ವ್ಯಾಖ್ಯಾನವನ್ನು ವೈಜ್ಞಾನಿಕವಾಗಿಯೂ ವಿಶ್ಲೇಷಿಸ ಬಹುದೆ? ಅಂತಹ ಪ್ರಯತ್ನ ಮಾಡುವುದರಿಂದ ವಿಜ್ಞಾನದ ವಾಸ್ತವಿಕತೆಗೆ ಕುತ್ತು ಬರುವ ಸಂಭವವಿದೆಯೆ? ಇಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ ನಾನು ಡಾ| ಜೋಶಿಯ ವ್ಯಕ್ತಿತ್ವವನ್ನು ನಿರೂಪಿಸಿ ದ್ದೇನೆ.

೨. ಆಸೆ ಮತ್ತು ನಾಗರೀಕತೆ

ಆಸೆಯೆ ದುಃಖಕ್ಕೆ ಮೂಲ, ಆಸೆಯನ್ನು ತೊರೆದಾಗಲೆ ಮಾನವನಿಗೆ ಸುಖ, ಎಂದು ಬೌದ್ಧಧರ್ಮಾದಿಯಾಗಿ ಎಷ್ಟೋ ಧರ್ಮ-ಬೋಧನೆಗಳು ಸಾರಿವೆ, ಸಾರುತ್ತಿವೆ.  ಪ್ರಪಂಚದಾದ್ಯಂತ ಈ ನಂಬಿಕೆಯನ್ನು ಒಂದು ಪ್ರಮುಖವಾದ ಆದರ್ಶವೆಂದೂ ಪರಿಗಣಿಸಲಾಗಿದೆ. ಆಸೆಗಳು ಮಾನವನನ್ನು ಲೋಲುಪ್ತತೆಗೆ ನೂಕಿ, ಆತ ಪ್ರಕೃತಿಯ ಸಂಪತ್ತನ್ನು ಹಿಂಡಿ ಹೀರುವಂತೆ ಮಾಡಿ, ಇಡೀ ನಾಗರೀಕತೆಯನ್ನು ಮತ್ತು ಪ್ರಪಂಚವನ್ನು ವಿನಾಶದತ್ತ ಕರೆದೊಯ್ಯುತ್ತವೆ ಎನ್ನುವುದು ಈ ವಾದದ ಒಂದು ಪ್ರಮುಖ ಆಯಾಮ. ಪ್ರಸ್ತುತದಲ್ಲಿ ಪ್ರಪಂಚದ ಹಲವು ವಿದ್ಯಮಾನಗಳು ಇದಕ್ಕೆ ಪುರಾವೆ ಒದಗಿಸುತ್ತಿರು ವಂತೆಯೂ ಕಾಣುತ್ತಿದೆ.

ಆದರೆ ಆಸೆಗಳೆ ಮಾನವನ ಸೃಜನಾತ್ಮಕತೆಗೆ ಅಧಾರವಲ್ಲವೆ? ಮಾನವನಲ್ಲಿ ಆಸೆಗಳೆ ಇಲ್ಲದಿದ್ದಲ್ಲಿ ನಮ್ಮ ನಾಗರೀಕತೆಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವೆ? ವಿಕಾಸವಾದದ ಹಿನ್ನೆಲೆಯಿಂದ ನೋಡಿದಾಗ, ಯಾವುದೇ ಗುಣ ಆಯಾ ಪ್ರಬೇಧದ ಉನ್ನತಿಗೆ ಉಪಯೋಗವಾಗದಿದ್ದಲ್ಲಿ, ಅದು ವಿಕಾಸಗೊಳ್ಳದು. ಹಾಗಿರುವಾಗ, ಮಾನವ ನಲ್ಲಿ ವಿಶೇಷವಾಗಿ ವಿಕಾಸಗೊಂಡಿರುವ ಈ ಆಸೆಗಳಿಂದ ಮಾನವ ಸಮೂಹಕ್ಕೆ, ಸಮಾಜಕ್ಕೆ ಪ್ರಯೋಜನವಿದೆಯೆಂದು ಭಾವಿಸಬಹುದೆ? ಬಹುಶಃ ಇದರಿಂದಲೆ ಆಸೆ ರಹಿತ ಮಾನವರು (ನಿಸ್ವಾರ್ಥಿಗಳು) ಅಥವ ಮಿತ-ಆಸೆಗಳುಳ್ಳವರು ವಿರಳವಿರಬಹುದೆ? ಇಂತಹ ಪ್ರಶ್ನೆಗಳು ಆಸೆಗಳ ಬಗೆಗಿರುವ ಧಾರ್ಮಿಕ ವಾದಕ್ಕೆ ಪ್ರತಿರೋಧವನ್ನು ಒಡ್ಡುವುದು ಸಹಜ.

ಈ ದ್ವಂದಕ್ಕೆ ಉತ್ತರ ಹುಡುಕುವಲ್ಲಿ 'ಆಸೆ'ಗಳ ವ್ಯಾಖ್ಯಾನ ಅತಿ?ಮುಖ್ಯ, ಆದರೆ ಅದು ಬಹುಶಃ ಅಸಾಧ್ಯ. ನಮಗಿರುವ ಹಲವು ರೀತಿಯ ಸ್ವಾಭಾವಿಕ ಬಯಕೆಗಳಾದ - ಹಸಿವು, ದಾಹ, ಕಾಮ, ನಿದ್ದೆ, ಇಂತಹವು ನಮ್ಮ ಉಳಿವಿಗೆ, ಪುನರಾಭಿವೃದ್ದಿಗೆ ಪೂರಕವಾಗಿ ವಿಕಾಸಗೊಂಡಿರುವ ಅವಶ್ಯಕತೆಗಳು. ಆದರೆ, ಅವಕ್ಕೂ ಮಿಗಿಲಾಗಿ ಮಾನವಲ್ಲಿ ಉದ್ಭವಿಸುವ ಬಯಕೆಗಳು ಅಥವ ಆಸೆಗಳು, ಬಹುಪಾಲು ನಮ್ಮ ಚಿಂತನಾ ಶಕ್ತಿಯ ವಿಕಾಸದೊಂದಿಗೆ ಬೆಳೆದಿರುವ ಮನಸ್ಸಿನ ಲಹರಿಗಳು. ಹಾಗಾಗಿ ಮನಸ್ಸನ್ನು ಅಂತಹ ಆಸೆಗಳಿಂದ ಮುಕ್ತಗೊಳಿಸಬೇಕೆಂದರೆ ಆತನ ಯೋಚನಾಶೀಲತೆಯನ್ನೆ ಜಡವಾಗಿಸಬೇಕಾಗಬಹುದು. ಮಾನವ ಹಾಗೆ ಯೋಚನಾರಹಿತನಾದಲ್ಲಿ ಅವನ ಆವಿಷ್ಕಾರ ಶಕ್ತಿ ಕುಂದಿ, ನಾಗರೀಕತೆಗೆ ಆಪತ್ತು ಬರುವ ಸಾಧ್ಯತೆ ಇದೆ ಎನ್ನುವ ಅಂಶ ಧರ್ಮ ಬೋಧನೆಗಳನ್ನು ಕಣ್ಣುಮುಚ್ಚಿ ಸ್ವೀಕರಿಸಿರುವ ಸಮಾಜಕ್ಕೆ ಎಚ್ಚರಿಕೆಯನ್ನು ನೀಡುತ್ತದೆ. ಹಾಗಾಗಿ ವಿಜ್ಞಾನ, ಆಧ್ಯಾತ್ಮಿಕತೆ ಮತ್ತು ಧರ್ಮಗಳು ಈ ವಿಷಯವನ್ನು ಅತಿ ಸೂಕ್ಷ್ಮವಾಗಿ ಚರ್ಚಿಸಬೇಕಿದೆ.

೩. ಸ್ವಾರ್ಥ ಮತ್ತು ಜೀವ

ಸ್ವಾರ್ಥವನ್ನು ತುಚ್ಛವಾಗಿ ಕಾಣುವ ನಮ್ಮ ಸಂಸ್ಕೃತಿ ಅಚ್ಚರಿಪಡಬೇಕಾದ ವಿಷಯ ವೆಂದರೆ ಆ ಸ್ವಾರ್ಥವು ಎಲ್ಲ ಜೀವಿಗಳ ವಿಕಾಸಕ್ಕೆ ಇಂಧನವಾಗಿರುವುದಷ್ಟೆ ಅಲ್ಲದೆ, ವಿಕಾಸದ ಹಾದಿಯಲ್ಲಿ ಮಾನವ ಕಾಣಿಸಿಕೊಳ್ಳುವ ಗತಿಯನ್ನು ನಿರ್ಣಯಿಸುವ ಅಗೋಚರ ಶಕ್ತಿಯಾಗಿದೆ ಕೂಡ. ಆ ಸ್ವಾರ್ಥವಿಲ್ಲದಿದ್ದಲ್ಲಿ ನಾವು ನಮ್ಮ ಮಕ್ಕಳನ್ನು ಸಾಕಿ ಸಲಹುತ್ತಿರಲಿಲ್ಲ; ಅವರನ್ನು ಬೆಳೆಸಿ ಕಾಪಾಡುತ್ತಿರಲಿಲ್ಲ. ಅದು ನಮ್ಮೆಲ್ಲರ ಹುಟ್ಟಿಗೆ, ಉಳಿವಿಗೆ, ವಿಕಾಸಕ್ಕೆ, ಆಧಾರ. ಹೀಗಿರುವಾಗ ಆ ಸ್ವಾರ್ಥಕ್ಕೆ ಕಡಿವಾಣ ಹಾಕುವುದೆಂದರೆ? ಇದು ಪ್ರಕೃತಿ ನಿಯಮಕ್ಕೆ ವಿರೋಧ ಮಾಡಿದಂತೆ.

ಆದರೆ..ಮಾನವ ಜೀವವಿಕಾಸದ ಹೊರತಾಗಿ ನಾಗರೀಕತೆಯನ್ನು ನಿರ್ಮಿಸಿದ್ದಾನೆ, ಸಂಸ್ಕೃತಿಯನ್ನು ಬೆಳೆಸಿ ರೂಢಿಸಿಕೊಂಡಿದ್ದಾನೆ. ಅವನಲ್ಲಿ ಸಂಸ್ಕೃತಿಯ ವಿಕಾಸ, ಜೀವವಿಕಾಸಕ್ಕಿಂತ ವೇಗವಾಗಿ ನಡೆಯುತ್ತಿದೆ. ಈ ವಿಕಾಸದಲ್ಲಿ ಸ್ವಾರ್ಥಕ್ಕೆ ಜಾಗವಿಲ್ಲ, ಅದರ ಅವಶ್ಯಕತೆಯಿಲ್ಲ ಎಂದು ಕೆಲವರು ವಾದಿಸಬಹುದು. ಆದರೆ..

ಸಕಲ ಜೀವಿಗಳ ಪುನರಾಭಿವೃದ್ಧಿಗೆ ಮೂಲಾಧಾರವಾದ ಈ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ, ಅದು ಜೀವವನ್ನೇ ಬೆಳೆಯದ ಹಾಗೆ ಮಾಡಿದಂತೆ. ವಿಕಾಸದ ಕತ್ತು ಹಿಸುಕಿದಂತೆ. ಹಾಗಾಗಿ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ ಈ ಭೂಮಿಯ ಮೇಲೆ ಮಾನವನನ್ನೂ ಮೀರಿದ ಜೀವಪ್ರಭೆಯೊಂದು ವಿಕಾಸಗೊಳ್ಳುವುದನ್ನು ತಡೆದಂತೆ. ಆ ಹಕ್ಕು ನಮಗಿದೆಯೆ? ನಾವು ಅಂತಹ ವಿಕಾಸವಿರೋಧಿ ಕ್ರಮಗಳನ್ನು ಪ್ರೇರೇಪಿಸ ಬಹುದೆ? ಅದು ಪ್ರಕೃತಿವಿರೋಧವಲ್ಲವೆ?

ಇವೆಲ್ಲವೂ ಈ ಕಾದಂಬರಿಯ ರಚನೆಯ ಸಮಯದಲ್ಲಿ ನನ್ನಲ್ಲಿ ಮೂಡಿದ ಪ್ರಶ್ನೆಗಳು, ದ್ವಂದ್ವಗಳು. ಹಾಗಾಗಿ ಈ ಮೂರೂ ವಿಷಯಗಳನ್ನು ಸಾಧ್ಯವಾದಷ್ಟೂ ಮುಖಾಮುಖಿಯಾಗಿ ತರಲು ಪ್ರಯತ್ನಿಸಿದ್ದೇನೆ. ಇದೇ ಕಾರಣದಿಂದ ಇಲ್ಲಿ ಕತೆ ನಿಮಿತ್ತ ಮತ್ತು ಈ ವಿಷಯಗಳ ಮುಖಾಮುಖಿ ಚರ್ಚೆ ಈ ಕಾದಂಬರಿಯ ಮೂಲ ಉದ್ದೇಶ. ಆ ವಿಷಯಗಳೆ ಈ ಕಾದಂಬರಿಯ ಮನೆಯೊಳಗಿನ ಕುಟುಂಬದ ಜೀವಂತ ವ್ಯಕ್ತಿಗಳು. ಕತೆ ಕೇವಲ ಇಟ್ಟಿಗೆ, ಗೋಡೆ, ಸುಣ್ಣ.

ಈ ಮೂರೂ ವಿಷಯಗಳ ಇನ್ನೂ ಹಲವಾರು ಆಯಾಮಗಳನ್ನು ನಾನು ಕಾದಂಬರಿಯಲ್ಲಿ ಚರ್ಚಿಸುವ ಇಚ್ಛೆ ಇತ್ತಾದರೂ, ಅಂತಹ ಎಲ್ಲ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗದ ಕಾರಣ ಕೆಲವು ಕೋನಗಳ ಮಂಥನವನ್ನು ಓದುಗರಿಗೆ ಬಿಟ್ಟಿದ್ದೇನೆ. ಇದನ್ನು ಓದುಗರು ಗಮನಿಸುವರೆಂದು ಆಶಿಸುತ್ತೇನೆ.