Sunday, November 17, 2013

ವೇದವ್ಯಾಸರು ಮಹಾಭಾರತವನ್ನು ಬರೆದಿದ್ದು ಯಾಕೆ ? = ನಿರುಪಾಮಾ

Vedavyasaru Mahabharathavannu Baredaddu Eke? - Nirupama

 

ಭಾರತದ ಎಲ್ಲಾ ಜನರಿಗೆ ಮಹಾಭಾರತ ಮತ್ತು ರಾಮಾಯಣ ಮಹಾ ಕಥೆಗಳ ಬಗ್ಗೆ ಗೊತ್ತು ಆದರೆ ಭಾಹುತೇಕ ಜನರು ಇದೊಂದು ಕಥೆಯಾಗಿ ನೋಡುತ್ತಾರೆ ಹೊರತು ಇದು ನಮ್ಮ ಸುಖ ಜೀವನಕ್ಕೆ ದಾರಿ ಎಂದು ನೋಡುವುದಿಲ್ಲ, ಡಾ. ನಿರುಪಮರವರು ಮಹಾಭಾರತವನ್ನು ವೇದವ್ಯಾಸರು ವಿಶ್ವದ ಜನರಿಗೆ ಯಾಕೆ ಕೋಡಿಯಾಗಿ ಕೊಟ್ಟರು ಮತ್ತು ಅದರಲ್ಲಿ ಇರುವ ವಿಶೇಷ ಸಂದೇಶ ವನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ.

ವೇದವ್ಯಾಸರು ರಚಿಸಿರುವ ಮಹಾಬಾರತ ಒಂದು ಮಹಾಕಾವ್ಯ. ಇಲ್ಲಿ ಬರುವ ಶ್ರೀ ಕೃಷ್ಣ, ಅರ್ಜುನ, ದುರ್ಯೋದನ, ಕುಂತಿ, ಮತ್ತು ಇತರೆ ಪಾತ್ರಗಳಿಂದ ಹೇಳಿಸುವ ಜೀವನದ ದಾರಿ, ನಾವು ಹೇಗೆ ಜೀವನ ಮಾಡಬೇಕು, ಹೇಗೆ ಆದರ್ಶವಾಗಿರಬೇಕು ಇಲ್ಲಾದಿದ್ದರೆ ದುರ್ಯೋದನನ ರೀತಿ ದಾರಿತಪ್ಪುತ್ತರೆ. ಇಲ್ಲಿ ನಿರುಪಮರವರು ಬರೆಯುತ್ತಾರೆ

"ಮಹಾಭಾರತದಲ್ಲಿ ವೇದವ್ಯಾಸರು ಶ್ರೀ ಕೃಷ್ಣನ ಮೂಖದಿಂದ ಗೀತೋಪನಿಶತ್ತನ್ನು ನಿಕ್ಷಿಪ್ತಗೊಳಿಸಿ ಈ ಗ್ರಂಥಗೌರವವನ್ನು ಹೆಚ್ಚಿಸಿದ್ದಾರೆ. ಮಹಾಭಾರತದ ರಚನೆ ವೇದವ್ಯಾಸರ ಧರ್ಮಸಾಧನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಕಾಲ ಕಳೆದಂತೆ ನಾಗರಿಕತೆ ಬೆಳೆದಂತೆ ಯಾವುದೇ ಒಂದು ಕ್ಷೇತ್ರದ ಮೂಲ ವಿಸ್ತಾರಗೊಳ್ಳುತ್ತ ಹೊಸ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತ ಆಗಿ ಆಳತೆಗೆ ಮೀರಿ ಬೆಳೆಯುತ್ತ ಹೋಗುತ್ತಾರೆ. ಅದು ಜ್ಞಾನದ ಸಹಜ ಸ್ವಭಾವ. ಇದರಿಂದಾಗಿ ಅದು ಒಂದು ಹಂತದಲ್ಲಿ ಸಂಕೀರ್ಣಗೊಂಡು ಅಗಮ್ಯವಾಗಲಾರಂಭಿಸುತ್ತದೆ ಗೋದಲ ಗಳೇರ್ಪಟ್ಟು ಸಂದಿಗ್ಥತೆಯನ್ನೊಡ್ಡುತ್ತದೆ. ಹೀಗೆ ಗೋಜಲು ಗೋಜಲಾಗಿ ಬೆಳೆದದ್ದನ್ನು ಎಳೆಬಿಡಿಸಿ ಬೇರ್ಪಡಿಸುವುದು, ವರ್ಗೀಕರಿಸಿ ಕ್ರಮಬದ್ದ ಮಾಡುವುದು ಅನಿವಾರ್ಯವಾಗುತ್ತದೆ. ಇದು ಬಹು ಕಷ್ಟಸಾಧ್ಯವಾದ ಕಾರ್ಯ. ಹೀಗೆ ಹಿಂದೆ ಒಂದು ಕಾಲದಲ್ಲಿ ವೇದವು ಅಪಾರವಾಗಿ ಬೆಳೆದು ಕೀಂಕಾರಣ್ಯದಂತೆ ವ್ಯಾಪಿಸಿತು, ಅವುಗಳಲ್ಲಿ ಕ್ಲಿಷ್ಟತೆ, ಸಂದಿಗ್ಥತೆ ತೋರಿತು ಅದ್ವಿತೀಯ ಪ್ರತಿಭಾ ಸಂಪನ್ನರೂ, ಆಪಾರ ತಪೋನಿಧಿಯೂ ಆಗಿದ್ದು ವ್ಯಾಸಋಷಿ ಈ ಸಿಕ್ಕು ಸಿಕ್ಕಗಿದ್ದ ವೇದಸಾಹಿತ್ವವನ್ನು ವಿಂಗಡಿಸಿ, ಕ್ರಮಬದ್ದವಾಗಿ ಸುಗುಮವಾಗುವಂತೆ ಮಾಡಿ ವೇದವ್ಯಾಸರೆಂದು ಪ್ರಸಿದ್ದರಾದರು. "

ಹೀಗೆ ನಿರುಪಮರವರು ರಾಮಾಯಣ ಮತ್ತು ಮಹಾಭಾರತವನ್ನು ವಾಲ್ಮೀಕಿ ಮತ್ತು ವೇದವ್ಯಾಸರು ಏಕೆ ಬರೆದರು, ಅವರ ಉದ್ದೇಶಗಳೇನು ಎಂದು ಈ ಪುಸ್ತಕದಲ್ಲಿ ಬರೆದಿದ್ದಾರೆ.

 

 





0 comments:

Post a Comment