Wednesday, February 25, 2015

ಆಡುಕಳ - ಶ್ರೀಧರ ಬಳಗಾರ

Aadu Kala - Sridhar Balagaara 




ಇಂದ : ಕನ್ನಡ ಪ್ರಭ ದಿನಪತ್ರಿಕೆ

ವಿಮರ್ಶೆ - ವಾಸುದೇವ ಶೆಟ್ಟಿ 


ಸ್ವಾರ್ಥವು ಮನುಷ್ಯನ ಕ್ರಿಯಾಶಕ್ತಿಯನ್ನು, ಮನುಷ್ಯತ್ವವನ್ನು ಹೇಗೆ ಕಳೆದುಬಿಡುತ್ತದೆ, ವ್ಯಕ್ತಿಯ ಸ್ವಾತಂತ್ರ್ಯ ಹೇಗೆ ಹರಣವಾಗುತ್ತ ಹೋಗುತ್ತದೆ ಎಂಬುದನ್ನು ಶ್ರೀಧರ ಬಳಗಾರ ಅವರು ತಮ್ಮ ‘ಆಡುಕಳ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 

ಯಲ್ಲಾಪುರ ತಾಲೂಕಿನ ಬಿದ್ರಳ್ಳಿಯ ಮಣ್ಮನೆಯ ಕೃಷ್ಣಪ್ಪ ಮತ್ತು ದಶರಥ ಅಣ್ಣ ತಮ್ಮಂದಿರು. ದಶರಥ ತನ್ನ ಪಿತ್ರಾರ್ಜಿತ ಸ್ವತ್ತನ್ನು ಹಿಸ್ಸೆ ಮಾಡಿಕೊಂಂಡು, ಬಿದ್ರಳ್ಳಿಯ ಸಂಪರ್ಕಹೀನ ದ್ವೀಪದಂತೆ ಇದ್ದ ಆಡುಕಳದ ಆಸ್ತಿಯನ್ನು ಪಡೆದುಕೊಂಡ. ಹವ್ಯಕರಾದ ಇವರಿಗೆ ಕೃಷಿಯಲ್ಲಿ ಪ್ರೀತಿ ಇತ್ತು. ಆಡುಕಳದ ಪ್ರಶಾಂತ ಪರಿಸರ ಸ್ವಭಾವತಃ ನಿಸ್ಸಂಗಿಯಾಗಿದ್ದ ದಶರಥನಿಗೆ ಖುಷಿ ತಂದಿತ್ತು. ಆತನ ಕೃಷಿಗೆ ನೆರವಾಗಲೆಂದು ಅವರ್ಸಾ ಕಡೆಯ ಗಟ್ಟಿಮುಟ್ಟಾದ ಹೆಂಗಸು ಸಾವಿತ್ರಿಯನ್ನು ತಂದು ಮದುವೆ ಮಾಡಲಾಗಿತ್ತು. ಕೆಲವು ವರ್ಷದ ಸಂಸಾರದ ಬಳಿಕ ಸಾವಿತ್ರಿಗೆ ಮುಖದಲ್ಲಿ ಮೀಸೆ, ಗಡ್ಡ ಮೂಡಿ ಮನೆಯಿಂದ ಹೊರಬೀಳದಂತೆ ಆದಳು ಅವಳು. ಜನರ ಕುತೂಹಲದ ಪತ್ತೇದಾರಿತನ ಸಹಿಸದೆ ಅವಳು ಒಂದು ದಿನ ಮನೆ ಬಿಟ್ಟು ಯಾರಿಗೂ ಸಿಗದಂತೆ ಮಾಯವಾಗಿಬಿಡುತ್ತಾಳೆ. ಹೀಗೆ ಮಕ್ಕಳಿಲ್ಲದೆ ಒಂಟಿ ಜೀವನ ಸಾಗಿಸುತ್ತಿದ್ದ ದಶರಥನ ಫಲವತ್ತಾದ ಆಸ್ತಿಯ ಮೇಲೆ ಕೆಲವರ ಕಣ್ಣು ಬೀಳುತ್ತದೆ.

ಅವರಲ್ಲಿ ಅವನ ಅಣ್ಣ ಕೃಷ್ಣಪ್ಪ ಮತ್ತು ಅವನ ಹಿರಿಯ ಮಗ ಸೂರಣ್ಣ, ಖಾನಾವಳಿಯ ಗಂಗಣ್ಣ, ಮದ್ಗುಣಿ ಡಾಕ್ಟರು ಹೀಗೆ ಹಲವರು. ಆಡುಕಳದ ಒಂಟಿ ಮನೆಯಲ್ಲಿ ಏಕಾಂಗಿಯಾಗಿಯೇ ಉಳಿದ ದಶರಥನ ಮನೆಯನ್ನು ಕಳವು ಮಾಡಲು ಬಂದವರು ಏನೂ ಸಿಗದೆ ಸಿಟ್ಟಿನಿಂದ ಅವನನ್ನು ಬೆತ್ತಲುಗೊಳಿಸಿ ಒಂದು ಕಂಬಕ್ಕೆ ಕಟ್ಟುತ್ತಾರೆ. ಆತನ ಎಮ್ಮೆಯನ್ನು ಹೊಡೆದುಕೊಂಡು ಹೋಗುವ ಮೊದಲು ಅದರ ಕರುವನ್ನು ಅದೇ ಕಂಬಕ್ಕೆ ಕಟ್ಟಿ ಹೋಗುತ್ತಾರೆ. ಆ ಎಮ್ಮೆಯ ಕರುವು ತಾಯಿಯ ಮೊಲೆಯೆಂದು ದಶರಥನ ಶಿಶ್ನವನ್ನು ಸೀಬಿದ್ದಲ್ಲದೆ ಹಾಲು ಸಿಗದ್ದಕ್ಕೆ ತಲೆಯಿಂದ ಗುದ್ದಿ ಅವನ ಮರ್ಮಾಂಗವನ್ನು ಘಾಸಿಗೊಳಿಸುತ್ತದೆ. ಹೆಂಡತಿಯಿಲ್ಲದ ದಶರಥ ನಪುಂಸಕನೂ ಆಗಿಬಿಡುತ್ತಾನೆ. 

ಅವನನ್ನು ಆಸ್ಪತ್ರೆಗೆ ಸೇರಿಸಿ ಉಪಚರಿಸಿದವನು ಖಾನಾವಳಿಯ ಗಂಗಣ್ಣ. ದಶರಥ ಮತ್ತೆ ಆಡುಕಳಕ್ಕೆ ಹೋಗದಂತೆ ತನ್ನ ಹೊಟೇಲಿನಲ್ಲಿಯೇ ಒಂದು ರೂಮನ್ನು ಆತನಿಗೆ ಕೊಡುತ್ತಾನೆ. ಆತನ ಈ ಸೇವೆಯ ಹಿಂದೆ ಆಡುಕಳದ ಜಮೀನನ್ನು ಪಡೆದುಕೊಳ್ಳಬೇಕೆಂಬ ಉದ್ದೇಶವಿರುತ್ತದೆ. ಗಂಗಣ್ಣನು ದಶರಥನನ್ನು ಪುಸಲಾಯಿಸಿ ಆಡುಕಳದ ಜಮೀನು ಹೊಡೆದುಕೊಳ್ಳುತ್ತಾನೆ ಎಂಬ ಗುಮಾನಿ ಅಣ್ಣ ಗಂಗಣ್ಣನಿಗೆ ಮತ್ತು ಆತನ ಮಗ ಸೂರಣ್ಣನಿಗೆ ಬಡಿಯುತ್ತದೆ. ದಶರಥನಿಗೆ ತಮ್ಮಲ್ಲಿಯೇ ಬಂದು ಉಳಿಯುವಂತೆ ಅವರು ಸಲಹೆ ನೀಡುತ್ತಾರೆ. ಈ ನಡುವೆ ಆಡುಕಳದಲ್ಲಿ ವಿಲಕ್ಷಣಗಳು ಸಂಭವಿಸುತ್ತವೆ. ಜೇನುಕೊಯ್ಯಲು ಬಂದ ಬಕಾಲ ನಾಪತ್ತೆಯಾಗುತ್ತಾನೆ. ಹಳ್ಳ ಒಡೆದು ಮೀನು ರಾಶಿರಾಶಿಯಾಗಿ ಸಾಯುತ್ತವೆ, ಕಬ್ಬಿನ ಗಾಣ ಮಾಡಿದಾಗ ನೊಣಗಳು ಕಾಡುತ್ತವೆ. ತೋಟದ ಕೆಲಸಕ್ಕಿದ್ದ ಹುಮಾಟಿ ಇದೆಲ್ಲ ಯಕ್ಷಿಣಿಯ ಕಾಟ ಎಂದು ಸುದ್ದಿ ಹಬ್ಬಿಸಿದ. ಈ ನಡುವೆ ಹುಮಾಟಿಯ ಹೆಂಡತಿ ಕಾಮಾಕ್ಷಿಗೆ ಮೈಮೇಲೆ ದೇವಿ ಬರುವುದು ಶುರು ಆಗುತ್ತದೆ. ದಶರಥ ಜಮೀನು ಮಾರದಂತೆ ಸೂರಣ್ಣ ತನ್ನ ಅಕ್ಕ ಶಾರದೆಯಿಂದ ತಕರಾರು ಅರ್ಜಿ ಸಲ್ಲಿಸುತ್ತಾನೆ. ಈ ನಡುವೆ ಕೃಷ್ಣಪ್ಪ ಸಾಯುವ ಮೊದಲು ದಶರಥನನ್ನು ಮನೆಗೆ ಕರೆಯಿಸಿ ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರಿಗೆ ಕೊಡಬೇಡ ಎಂದು ತಮ್ಮನಿಗೆ ಹೇಳುತ್ತಾನೆ. ಜೊತೆಗೆ ತನ್ನ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಯಕ್ಷಿಣಿಯ ಮೂರ್ತಿಯನ್ನು ನೀಡಿ ಇದರ ಕಾಟದಿಂದಲೇ ನಿನಗೆ ಸುಖ ಇಲ್ಲ. ಅದನ್ನು ಆಡುಕಳದಲ್ಲಿ ಸ್ಥಾಪಿಸು ಎಂದು ಹೇಳುತ್ತಾನೆ. ಕಾಮಾಕ್ಷಿ ಕೂಡ ಮೈಮೇಲೆ ದೇವಿ ಬಂದಾಗ ದಶರಥನಿಗೆ ಭೂಮಿ ಮಾರದಂತೆ ತಾಕೀತು ಮಾಡುತ್ತಾಳೆ. ಅಪ್ಪ ಸತ್ತ ಬಳಿಕ ಸೂರಣ್ಣ ಚಿಕ್ಕಪ್ಪ ದಶರಥನನ್ನು ಪುಸಲಾಯಿಸಲು ನೋಡುತ್ತಾನೆ. ತಮ್ಮ ವಾಸುದೇವನಿಗೆ ಲಿಂಗಾಯತ ಹುಡುಗಿಯನ್ನು ತಂದು ಮದುವೆ ಮಾಡುತ್ತಾನೆ. ಇನ್ನೊಬ್ಬ ತಮ್ಮ ಪರಮೇಶ್ವರ ಪೇಟೆಯಲ್ಲಿ ಅಂಗಡಿ ಮಾಡುವ ತೆವಲಿಗೆ ಬಿದ್ದು ಮನೆಯಿಂದ ಹಣ ಕೇಳುತ್ತಾನೆ. ತನ್ನ ತಮ್ಮಂದಿರನ್ನು ಮನೆಯಿಂದ ಪ್ರತ್ಯೇಕ ಕಳುಹಿಸಬೇಕೆಂದು ಸಂಚು ಮಾಡುವ ಸೂರಣ್ಣ ಹಳೆಯ ಮನೆಯನ್ನು ಬೀಳಿಸುತ್ತಾನೆ. ಹೊಸ ಮನೆಯನ್ನು ಕಟ್ಟಿಸುವುದನ್ನು ಉದ್ದೇಶಪೂರ್ವಕವಾಗಿ ವಿಳಂಬಮಾಡುತ್ತಾನೆ. ಇದರಿಂದ ವಾಸುವೇವ ಮತ್ತು ಆತನ ಪತ್ನಿ ಕಿರಿಕಿರಿಯಾಗಿ ಕಲಘಟಗಿಗೆ ಹೋಗುತ್ತಾರೆ. ಸೂರಣ್ಣನ ಹೆಂಡತಿ ಭವಾನಿ ಎಲ್ಲ ಕುತಂತ್ರಗಳ ಹಿಂದಿನ ಮಿದುಳಾಗಿರುತ್ತಾಳೆ. 

ಕಾಮಾಕ್ಷಿಯ ಪೂರ್ವಾಪರ ಗೊತ್ತಿರುವ ಯಜ್ಞೇಶ್ವರರು ಅದನ್ನು ಬಹಿರಂಗ ಮಾಡುವುದಿಲ್ಲ. ಅವಳಿಗೆ ದೇವಿ ಬರುವುದು ಸುಳ್ಳೆನ್ನುವುದು ಅವರಿಗೆ ಗೊತ್ತಾಗುತ್ತದೆ. ಸಿನಿಮಾ ನಟ ಕಾಂತರಾಜನಿಂದ ಆಡುಕಳದಲ್ಲಿ ದೇವಾಲಯ ನಿರ್ಮಾಣವಾದರೆ ತನ್ನ ಅಸ್ಮಿತೆ ಹೋಗುವುದೆಂಬ ಭಯದಲ್ಲಿ ಅದನ್ನು ಮಂದಿರ ಮಾಡದೆ ಗುರು ಮನೆ ಮಾಡಿ ಎಂದು ಕಾಮಾಕ್ಷಿ ಮೈಮೇಲೆ ದೇವಿ ಬಂದಾಗ ಹೇಳುತ್ತಾಳೆ. ಸೂರಣ್ಣ ಆ ಗುರುಪೀಠದಲ್ಲಿ ತನ್ನ ಚಿಕ್ಕಪ್ಪ ದಶರಥನನ್ನು ಪ್ರತಿಷ್ಠಾಪಿಸಿ ಆತನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾನೆ. ದುರಾಶೆಯ ಫಲ ಎನ್ನುವಂತೆ ಭವಾನಿ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾಳೆ. ಎಲ್ಲದರಲ್ಲಿಯೂ ಲಾಭವನ್ನೇ ನೋಡುವ, ಆಡುಕಳದಂಥ ಬಂಗಾರದ ಜಮೀನಿಗಾಗಿ ಎಲ್ಲರಿಗೂ ಮೋಸಮಾಡಲು ಸಿದ್ಧನಾಗಿದ್ದ ಸೂರಣ್ಣ ಆ ಜಮೀನನ್ನೇ ನಿರ್ಲಕ್ಷಿಸಿಬಿಡುತ್ತಾನೆ. ಇವೆಲ್ಲದರಿಂದ ಬೇಸತ್ತ ದಶರಥ ಗುರುಪೀಠದಿಂದ ಮಾಯವಾಗಿಬಿಡುತ್ತಾನೆ. ಸೂರಣ್ಣ ಮಾತ್ರ, ಗುರುಗಳು ಉತ್ತರಕ್ಕೆ ಹೋಗಿದ್ದಾರೆ ಎಂದು ಹೇಳುತ್ತ ವಂಚನೆಯ ಪರದೆಯ ಮುಂದೆಯೇ ಬದುಕಲು ನಿರ್ಧರಿಸುತ್ತಾನೆ. ಬೆವರು ಹರಿಸಿ ಬರುವ ಹಣಕ್ಕಿಂತ ಅನಾಯಾಸವಾಗಿ ಬರುವ ಹಣವೇ ಆತನಿಗೆ ಆಕರ್ಷಣೆಯಾಗುತ್ತದೆ. ಉತ್ತರಕನ್ನಡದ ಹವ್ಯಕರ ಆಡುಭಾಷೆ ಮತ್ತು ಸ್ಥಳೀಯರ ಆಡುಭಾಷೆಯಲ್ಲಿ ಸಂಭಾಷಣೆಗಳು ಇಲ್ಲಿ ನಡೆಯುತ್ತವೆ. ಕನ್ನಡ ನಿಘಂಟುವಿಗೆ ಸೇರಬೇಕಾದ ಅದೆಷ್ಟೋ ಪದಗಳು ಈ ಕಾದಂಬರಿಯಲ್ಲಿದೆ. ಕೆಲವು ಕಡೆ ಕಾದಂಬರಿಯು ಶೈಲಿಯಲ್ಲಿ ಪತ್ತೇದಾರಿ ಸೀಮೆಯನ್ನು ಮುಟ್ಟಿ ಮರಳಿದೆ. ಸಾವಿತ್ರಿಯ ನಾಪತ್ತೆ, ದಶರಥನ ಮೇಲೆ ಹಲ್ಲೆ, ಮಂದಿರದಲ್ಲಿ ಆತನಿಗೆ ಚಿಕಿತ್ಸೆ ನೀಡುವ ದಷ್ಟಪುಷ್ಟ ಆಸಾಮಿಗಳು, ಯಾರೂ ಜೊತೆಯಾಗಿ ನಿಂತು ಮಾತನಾಡದಂತೆ ಜಾಗ್ರತೆ ವಹಿಸುವ ಭವಾನಿ, ಕಾಮಾಕ್ಷಿಯ ಮೈಮೇಲೆ ಬರುವ ದೈವ ಇವೆಲ್ಲ ಒಗಟೊಗಟಾಗಿ ಕಾಣಿಸುತ್ತವೆ. ಆಕಾಶಕ್ಕೆ ಏಣಿ ಹಚ್ಚಿದಂತೆ ತೋರುತ್ತದೆ. 

ಎಲ್ಲವನ್ನೂ ಗ್ರಹಿಸಬಲ್ಲವನಾಗಿದ್ದರೂ, ಬಂದಾಗ ನೋಡಿಕೊಳ್ಳೋಣ ಎಂಬ ಮನೋಭಾವದ ದಶರಥ, ಆತನಿಗೆ ಸಂಬಂಧಿಸಿದ ಎಲ್ಲ ದುರ್ಘಟನೆಗಳಿಗೂ ಸೂತ್ರಧಾರನಾದ ಸೂರಣ್ಣ ತಮ್ಮ ತಮ್ಮ ಮೂಲ ಶಕ್ತಿಯನ್ನು ಮರೆತದ್ದರಿಂದಲೇ ಕಾದಂಬರಿಯಲ್ಲಿ ಎಲ್ಲ ಕ್ರಿಯೆಗಳು ಜರುಗುತ್ತವೆ. ಮನುಷ್ಯನ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪ್ರತಿಯೊಬ್ಬನೂ ಸದಾ ಷಡ್ಯಂತ್ರವನ್ನು ಹೆಣೆಯುವುದರಲ್ಲಿ ತೊಡಗಿದಂತೆ ತೋರುವುದು. ಅದೇ ರೀತಿ ಪ್ರತಿ ವ್ಯಕ್ತಿಯೂ ತನ್ನ ಮಟ್ಟಿಗೆ ಒಬ್ಬ ಪತ್ತೇದಾರನಾಗಿರುತ್ತಾನೆ. ಇವೆಲ್ಲವೂ ಸ್ವಕೇಂದ್ರಿತವಾದಾಗ ವ್ಯಕ್ತಿತ್ವದ ಘನತೆ ಎಂಬುದು ಕುಸಿದು ಪಾತಾಳ ಸೇರುತ್ತದೆ. ಅದು ಸಾಮುದಾಯಿಕ ಉನ್ನತಿಯ ಉದ್ದೇಶವನ್ನು ಹೊಂದಿದಾಗ ಕ್ಷಮೆಗೆ ಅರ್ಹವಾಗುತ್ತದೆ. ಆದರೆ ಈ ಕಾದಂಬರಿಯಲ್ಲಿ ಕ್ಷಮೆಗೆ ಅರ್ಹರಾಗುವವರು ಯಾರೂ ಕಾಣುವುದಿಲ್ಲ. ಈ ದುರಂತವನ್ನು ಧ್ವನಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ.



ಈ ಪುಸ್ತಕ ಇಲ್ಲಿ ಕೊಳ್ಳಬಹುದು




Monday, February 16, 2015

ಗೌರ್ಮೆಂಟ್ ಬ್ರಾಹ್ಮಣ - ಅರವಿಂದ ಮಾಲಗತ್ತಿ

Government Brahmana  - Aravinda Malagatti    

 



ನಮ್ಮ ಸ್ನೇಹಿತ ನಮ್ಮ ಹತ್ತಿರ ಅವನ ಕಷ್ಟ ಹೇಳಿಕೊಂಡಾಗ ನಾವು ತಿಳಿದೋ ತಿಳಿಯದೆಯೋ "ನನಗೆ ಅರ್ಥವಾದುತ್ತೆ " ಎಂದು ಉದ್ಗರಿಸುವೆವು. ವಾಸ್ತವವಾಗಿ ನಮಗೆ ಅವರ ಕಷ್ಟದ ನಿಜವಾದ ಆಳ ಮತ್ತು ಅವನ ಸಂಕಟ ತಿಳಿಯುವುದಿಲ್ಲ, ನಮಗೂ ಅದೇ ರೀತಿಯ ಸನ್ನಿವೇಶ ಎದುರಾದರು ಎರಡು ಒಂದೆಯಲ್ಲ. ನಾವು ಬೇರೆಯವರ ಕಷ್ಟದ ಸನ್ನಿವೇಶಗಳಿಗೆ ಸ್ಪಂದಿಸುವಾದ ಎಲ್ಲೋ ಒಂದು ಕಡೆ ನಮ್ಮನ್ನು ನಾವೇ ಸಮಾದಾನ ಪಡಿಸುವ ಮಾತುಗಳನ್ನು ಆಡುತ್ತೇವೆ, ಉದಾಹರಣೆಗೆ ನಮ್ಮ ಸ್ನೇಹಿತ ತನ್ನ ಕೆಲಸ ಹೋಯಿತು ಅಥವಾ ಹೆಂಡತಿ ಜೊತೆ ಜಗಳ ತೀರ ಹೆಚ್ಚಾದಾಗ ಎಂದು ನಮ್ಮ ಹತ್ತಿರ ಹೇಳಿಕೊಂಡಾಗ ನಾವು ನಮ್ಮ ಮನಸ್ಸಿನಲ್ಲಿ ನಾವು ನನ್ನದು ಅದೇ ಪರಿಸ್ಥಿತಿ, ನನ್ನ ಜೊತೆಯಲ್ಲಿ ಇವನು ಇದ್ದಾನಲ್ಲ ಎಂದು ಒಂದು ಎಳೆಯ ಸಂತೋಷ ಮಿಂಚಿ ಹಾರಿಹೊದುತ್ತದೆ, ಅವನಿಗೆ ನಾವು ಎಲ್ಲಾ ಸರಿಹೋಗುತ್ತದೆ, ಇದು ಸ್ವಲ್ಪ ದಿನ ಮಾತ್ರ, ಕೂತು ಸಮಾಧಾನವಾಗಿ ಮಾತಾಡಿ ನೋಡು ಎಂಬೆಲ್ಲಾ ಸಮಾದನಪಡಿಸುವ ಮಾತುಗಳನ್ನ ಹೇಳಿದರು ಅದೆಲ್ಲ ತಮಗೆ ತಾವೇ ಹೇಳಿಕೊಳ್ಳುವ ಭರವಸೆಯ ಮಾತು.

ಇತ್ತಿಚೀನ ದಿನಗಳಲ್ಲಿ ಪರಿಶಿಷ್ಟ ಜಾತಿ ಜನಾಂಗಗಳಿಗೆ ಕೊಡುವ ಮೀಸಲಾತಿ ಬಗ್ಗೆ ತುಂಬಾ ಚರ್ಚೆಗಳು ನಡೆಯುತ್ತಿವೆ, ಆದರೆ ಪರ ಅಥವಾ ವಿರುದ್ಧ ವಿಚಾರದ ಬಗ್ಗೆ ಇಲ್ಲಿ ಪ್ರಸ್ತಾಪಿಸಲು ಇಷ್ಟ ಪಡುವುದಿಲ್ಲ. "ಗೌರ್ಮೆಂಟ್ ಬ್ರಾಹ್ಮಣ" ಎಂದು ಮೀಸಲಾತಿ ಮೇಲೆ ವಿಧ್ಯಾಭ್ಯಾಸ, ಕೆಲಸ ಮಾಡುವವರಿಗೆ ಹೇಳುತ್ತಾರೆ ಎಂದು ಅದೇ ಹೆಸರಿನ ಜೀವನ ಚರಿತ್ರೆ ಬರೆದಿರುವ ಪ್ರೊ. ಅರವಿಂದ ಮಾಲಗತ್ತಿ ಯವರು ಹೇಳುತ್ತಾರೆ. ಈ ಪುಸ್ತಕದಲ್ಲಿ ಅವರು ಪಟ್ಟ ಕಷ್ಟ ಮತ್ತು ಅವರಿಗೆ ಅವರ ಜಾತಿಯಿಂದ ಆದ ಅವಮಾನಗಳು ಮತ್ತು ಅದನ್ನೆಲ್ಲ ಮೀರಿ ಜೀವನದ ಹೇಗೆ ಯಶಸ್ಸಿವಿಯಾದರು ಎಂದು ತಿಳಿಸಿಕೊಡುತ್ತಾರೆ.

ನಾವು ಕೋಪ ಮಂಡುಕನ ರೀತಿ ನಮ್ಮ ಕಷ್ಟಗಳೇ ಜಾಸ್ತಿ ಮತ್ತು ಅವನ್ನು ಎದುರುಸಲು ಆಗುವುದಿಲ್ಲ ಎಂದು ಹೇಳಿಕೊಳ್ಳುವಾಗ ಬೇರೆಯವರ ಜೀವನದಲ್ಲೂ ಒಂದು ಸಾರಿ ಇಣುಕಿ ನೋಡಿ ಅವರು ಏನು ಕಷ್ಟಗಳನ್ನು ಎದುರಿಸಿದ್ದಾರೆ ಎಂದು ನೋಡಿದರೆ ಅವುಗಳ ಮುಂದೆ ನಮ್ಮ ಕಷ್ಟಗಳು ಏನೇನು ಅಲ್ಲ ಎಂದು ಗೊತ್ತಾಗುತ್ತದೆ. ಅರವಿಂದ ಮಾಲಗತ್ತಿಯವರ ಈ ಪುಸ್ತಕ ಓದುವಾಗ ನನಗೆ ದೇವನೂರು ಮಹಾದೇವರವರ "ಎದೆಗೆ ಬಿದ್ದ ಅಕ್ಷರ" ಜ್ಞಾಪಕ ವಾಗುತ್ತದೆ. ಮಾಲಗತ್ತಿ ಅವರ ಅಜ್ಜಿ ದೊಡ್ಡವರ ಮನೆಗೆ ಊಟಕ್ಕೆ ಹೋಗಿ ಸೆರಗಿನಲ್ಲಿ ಊಟವನ್ನು ಬಾಗಿಲು ಕಾಯುವವನಿಗೆ ಗೊತ್ತಾಗದ ರೀತಿ ಅಡಗಿಸಿಟ್ಟುಕೊಂಡು ಮಾಂಗೆ ತರುವ ವಿಚಾರ, ಶಾಲಾ ಕಾಲೇಜ್ ಗಳಲ್ಲಿ ಅದ ಅವಮಾನ, ತೋರಿಕೆಯ ಮುಂದುವರೆದ (pseudo progressive people) ತೋರಿಸುವ ಅಬದ್ಧ ಕಳಕಳಿ ಎಲ್ಲವನ್ನು ಮುಚ್ಚು ಮರೆಯಿಲ್ಲದೆ ಹೇಳುತ್ತಾರೆ.

ನಮ್ಮ ಸ್ವಯಂ ಸೃಷ್ಟಿತ ಶ್ರೀಮಂತರ ತೊದರೆಗಳನ್ನು ಪಕ್ಕಕಿಟ್ಟು ಈ ಪುಸ್ತಕವನ್ನು ಒಂದು ಬಾರಿ ಓದಿದರೆ ನಿಜವಾದ ಕಷ್ಟ ಏನು ಎಂದು ತಿಳಿಯುತ್ತದೆ.



ಈ ಪುಸ್ತಕ ಇಲ್ಲಿ ಕೊಳ್ಳಬಹುದು




Thursday, February 12, 2015

ನೇಹಲ - ಕೆ ಎನ್ ಗಣೇಶಯ್ಯ

Nehala K. N. Ganeshaiah




ಕನ್ನಡಿಗರು, ನಮ್ಮ ಜೀವನದಲ್ಲಿ "ಹಿತ್ತಲ ಗಿಡ ಮದ್ದಲ್ಲ" ಎಂಬ ಗಾದೆ ಕೇಳೆ ಇರ್ತಿವಿ, ಗಣೇಶಯ್ಯ ನವರ "ನೇಹಲ" ಕಥಾ ಸಂಕಲ ಓದುತ್ತಾ ಈ ಗಾದೆ ತುಂಬ ಕಾಡಿತು. ನಾವು ನಮ್ಮ ಇತಿಯಾಸ, ಐತಿಯಾಸಿಕ ಸ್ಥಳಗಳನ್ನು ಕಡೆಗನಿಸುವಸ್ಟು ಬೇರೆ ಯಾರು ಕಡೆಗಣಿಸುವುದಿಲ್ಲವೇನೋ. ಭಾರತದ ಇತಿಯಾಸದಲ್ಲೇ ಒಂದು ದೊಡ್ಡ ಸಾಮ್ರಾಜ್ಯ ಎಂದರೆ ವಿಜಯನಗರ ಸಾಮ್ರಾಜ್ಯ, ಆದರೆ ನಮಗೆ ಆದರೆ ಬಗ್ಗೆ ಎಷ್ಟು ಗೊತ್ತು ???? ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ, ಮುತ್ತು, ರತ್ನಗಳನ್ನು ಬೀದಿ ಬೀದಿಗಳಲ್ಲಿ ಮಾರುತ್ತಿದ್ದರು ಎನ್ನುವುದು ಬಿಟ್ಟರೆ ಪಾಲು ಬಿದ್ದ ಹಂಪಿ ದೇವಸ್ಥಾನಗಳು ಗೊತ್ತು. ಅಷ್ಟು ಶ್ರೀಮಂತ ಸಾಮ್ರಾಜ್ಯದ ಹಿಂದಿನ ಕಥೆ ಮತ್ತು ಅದರ ಆಡಳಿತ ಮತ್ತು ಅಷ್ಟು ವೈಭವದ ಹಿಂದಿನ ರಹಸ್ಯ ಕೆಲವು ಜನರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ನಮ್ಮ ಶಾಲಾ ಕಾಲೇಜ್ ನಲ್ಲೂ ಹತ್ತಾರು ಸಾಲುಗಳು ಬಿಟ್ಟರೆ ಏನು ಕಲಿಸುವುದಿಲ್ಲ. ಅದಕ್ಕೆ ಏನು ನಮ್ಮ ಹಿರಿಯರು ಹೇಳಿರುವುದು ದೇಶ ಸುತ್ತು ಕೋಶ ಓದು ಎಂದು. 

ನಾನು ಹಿಂದೆ ಬರೆದುರುವಹಾಗೆ ಗಣೇಶಯ್ಯ ನವರು ಇತಿಯಾಸಕ್ಕೆ ಒಂದು ಕಾಲ್ಪನಿಕ ಅಂಶ ಸೇರಿಸಿ ಎಲ್ಲೂ ಬೇಸರವಾಗದಂತೆ ನಮ್ಮ ಕಣ್ಣ ಮುಂದೆ ತೋರಿಸುತ್ತಾರೆ. ಇದನ್ನು ಓದಿದ ಬಳಿಕ ನಮ್ಮ ರಾಜ್ಯದ ಬಗ್ಗೆ, ಇದನ್ನು ಆಳಿದ ರಾಜರ ಬಗ್ಗೆ ಹುಡುಕಿ ಅವರ ಬಗ್ಗೆ ತಿಲಿಕೊಳ್ಳುವ ಕುತೂಹಲ ಹುಟ್ಟುತ್ತದೆ. ನಮ್ಮಲ್ಲಿ ಈ ರೀತಿ ಕುತೂಹಲ ಹುಟ್ಟಿಸುವ ಕಾದಂಬರಿಯಾ ಬರವಣಿಗೆ ಎಷ್ಟು ಚೆನ್ನಾಗಿರಬೇಕು. ಈ ಕಥಾಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಕೆಲವೊಂದು ಐತಿಯಾಸಿಕ ಘಟನೆಗಳನ್ನು ಆದರಿಸಿ ಮತ್ತೆ ಕೆಲವು ವಿಜ್ಞಾನದ ಪ್ರಯೋಗಗಳ ಮೇಲೆ ಕೆಂದ್ರಿಕೃತವಾಗಿವೆ. 

ಇಲ್ಲಿ ನನಗೆ ಇಷ್ಟವಾದ ಕಥೆ "ರಾಗ ಪಂಜರ". ಭಾರತದಲ್ಲೇ ವಿಶಿಷ್ಟವಾದ ದೇವಸ್ಥಾನ ವಿಜಯ ವಿಠಲ ದೇವಸ್ಥಾನ ಮತ್ತು ಅದರ ಸಂಗೀತ ಹೊರಡುವ ಕಂಬಗಳು. ಈ ದೇವಸ್ಥಾನದ ಹಿಂದೆ ಒಂದು ದೊಡ್ಡ ದುರಂತ ಕಥೆಯೇ ಇದೆ ಎಂದು ನನಗೆ ತಿಳಿದಿದ್ದು ಈಗಲೇ. ಶ್ರೀ ಕೃಷ್ಣದೇವರಾಯ ಕಳಿಂಗ ದೇಶದ ಮೇಲೆ ೬ ವರ್ಷ ಮಾಡಿ ಅದ್ರ ರಾಜ ಗಜಪತಿ ಯನ್ನು ಸೋಲಿಸುತ್ತಾನೆ. ಎಲ್ಲಿ ಕೃಷ್ಣದೇವರಾಯ ಹಿಂತುರಿಗಿದ ಮೇಲೆ ಕಾಲಿಗ ದೇಶದ ಜನ ತಿರುಗಿ ಬೀಳುವರೋ ಎಂದು ತಿಳಿದು ತಿಮ್ಮರಸು ಕಳಿಂಗ ರಾಜನ ಮಗಳಾದ ಜಗನ್ಮೊಹಿನಿಯನ್ನು ಕೃಷ್ಣದೇವರಾನನ್ನು ಮದಿವೆಯಾಗಲು ಒಪ್ಪಿಸುತ್ತಾನೆ. ಮಾಡುವೆಯಾಗಿ ಬಂದ ನಂತರ ಆ ವಿಜಯದ ಸಂಕೇತವಾಗಿ ವಿಜಯ ವಿಠಲ ದೇವಸ್ಥಾನವನ್ನು ಕಟ್ಟಿಸಲು ಹೇಳುತ್ತಾನೆ. ಜಗನ್ಮೊಹಿನಿ ತನ್ನ ರಾಜ್ಯದ ಸೋಲು ಮತ್ತು ತನ್ನ ತಂದೆಯ ಅವಮಾನದಿಂದ ಬೆಂದು ಕೃಷ್ಣದೇವರಾಯನ ಮಗನನ್ನು ವಿಷವಿಕ್ಕಿ ಕೊಲ್ಲುತ್ತಾಳೆ. ಇಲ್ಲಿ ಗಣೇಶಯ್ಯ ನವರು ವೆಂಕೋಬ ಎಂಬ ಪಾತ್ರವಾನು ಸೆರಿಸುತ್ತಾರೆ. ಅವನು ಜಗನ್ಮೊಹಿನಿಯ ಪ್ರಿಯತಮ ಮತ್ತು ಅವರಿಬ್ಬರೂ ಸೇರಿ ರಾಜನ ಮಗನನ್ನು ಕೊಲ್ಲಲ್ಲು ಸಂಚು ಹೂಡಿರುತ್ತಾರೆ ಎಂದು ಬರೆದಿದ್ದಾರೆ. ವೆಂಕೋಬ ನನ್ನು ಬಿಟ್ಟರೆ ಬೇರೆ ಯಲ್ಲ ಪತ್ರಗಳು ಇತಿಯಾಸದಲ್ಲಿ ಉಲ್ಲೇಕ ವಾಗಿರುವ ಪಾತ್ರಗಳೆ.

ಈ ಪುಸ್ತಕ ಇಲ್ಲಿ ಕೊಳ್ಳಬಹುದು