Tuesday, February 25, 2014

ನದಿಯ ನೆನಪಿನ ಹಂಗು - ಜೋಗಿ ( ಗಿರೀಶ್ ರಾವ್ )

Nadiya Nenapina Hangu - Jogi ( Girish Rao )




ಕಾದಂಬರಿ ನದಿಯ ಹಾಗೆ!

ನದಿ ಹುತ್ತಿವುದು ಒಂದು ಸಣ್ಣ ಸೆಲೆಯಾಗಿ, ಕ್ರಮೇಣ ಅದಕ್ಕೆ ಉಪನದಿಗಳು ಸೇರಿಕೊಳ್ಳುತ್ತವೆ. ಗುಪ್ತಗಾಮಿನಿಯಾಗಿ ಮತ್ತಾವುದೋ ಸೆಲೆ ಬಂದು ಕೂಡಿಕೊಳ್ಳುತ್ತದೆ, ಹೀಗೆ ತನ್ನನ್ನು ತೆಕ್ಕೆಗೆ ತೆಗೆದುಕೊಂಡು ನದಿ ಹರಿಯುತ್ತದೆ.  

ಕಾದಂಬರಿಯೂ ಹಾಗೆಯೆ. ನನ್ನ ಪ್ರಕಾರ ಸಣ್ಣಕತೆಯೆಂದರೆ ಶಿಕಾರಿ, ನಿಗೋಧದಲ್ಲಿ ಹೊಂಚಿ ಕುಳಿತವನು ಸುಳಿವೇ ತಿಳಿಯದೆ ಬರುವ ಮೃಗವನ್ನು ಕೆಡವಿ ಉರುಳಿಸುವುದು. ಕವಿತೆಯೆಂದರೆ ಬೆಸ್ತನ ಹಾಗೆ ಕಾಲದ ಹೊಳೆಗೆ ಗಾಳ ಹಾಕುತ್ತಾ ಕೂರುವುದು. 

ಆದರೆ ಕಾದಂಬರಿ ಹಾಗಲ್ಲ. ಅದರ ವಿಸ್ತಾರ ದೊಡ್ಡದು; ಅದು ಒಳಗೊಳ್ಳುವ ಸಂಗತಿಗಳೂ ಕೂಡಾ. ಅದು ಇಡೀ ಮನುಕುಲದ ಕತೆಯೂ ಹೊವ್ದು. ಹೀಗಾಗಿ ಕಾದಂಬರಿಯ ಕರ್ತೃ ಎಲ್ಲವನ್ನೂ ಔದಾರ್ಯದಿಂದ ಮತ್ತು ಅನುಮಾನದಿಂದ ಮತ್ತು ಅನುಮಾನದಿಂದ ನೋಡಬೇಕಾಗುತ್ತದೆ, ಚಂಚಲತೆಯ ಜೊತೆ ತನ್ಮಯತೆಯನ್ನೂ ಗಳಿಸಿಕೊಳ್ಳಬೇಕಾಗುತ್ತದೆ. 

ಆದರೆ ಈ ಕಾಲ ಕಷ್ಟದ್ದು. ನಮ್ಮ ಅನುಭವಗಳಲ್ಲಿ ಟೊಳ್ಳೆಷ್ಟು , ನಿಜವೆಷ್ಟು ಅನ್ನುವುದು ನಮಗೆ ಅರಿವಾಗದ ಕಾಲ. ನಮ್ಮನ್ನು ಯಾವ್ಯಾವ ಶಕ್ತಿಗಳೋ ನಿಯನ್ತ್ರಿಸುತ್ತವೆ. ಜಾತಿ, ರಾಜಕಾರಣ ಮತ್ತು ಧರ್ಮ ನಮ್ಮ ಶ್ರದ್ದೆಯನ್ನು ಮೀರಿ ವ್ಯಪಿಸಿದೆ. ಹಳ್ಳಿಗಳು ಕ್ರಮೇಣ ನಗರಗಳಾಗುತ್ತಿವೆ. ಟೀ. ವಿ. ಎಂಬ ಮಾಯೆ ಪ್ರತಿಯಬ್ಬರನ್ನೂ ವಿಶಿಷ್ಟವಾಗಿ ತಬ್ಬಿದೆ. ಎಲ್ಲೋ ಏನೋ ತಪ್ಪಿದೆ ಎಂಬ ಶಂಕೆಯಲ್ಲೇ ಸೃಜನಶೀಲತೆಯನ್ನು ಉಲಿಸಿಕೊಳ್ಳಬೇಕಾಗಿದೆ. ನದಿಯ ನೆನಪಿನ ಹಂಗು ಇಂಥ ಕಷ್ಟಕಾಲದಲ್ಲಿ ಹಿತ್ತಿದ ಕ್ರುತಿ. ಅದರ ಮೂಲಸೆಲೆ ಯಾವುದು ಅನ್ನುವುದು ನನಗೂ ಮರೆತು ಹೊಗಿದೆ. ನದಿಗೆ ನೆನಪುಗಳಿರುವುದಿಲ್ಲ ಅನ್ನುತ್ತಾರೆ. ಯಾಕೆಂದರೆ ಅದು ಎಲ್ಲವನ್ನೂ ತೊಳೆಯುತ್ತಾ ಸಾಗುತ್ತದೆ. ಆದರೆ ನದಿಯ ನೆನಪಿನ ಹಂಗಿನಿಂದ ನೀವ್ಯಾರೂ ಪಾರಾಗಲಾರಿರಿ ಅನ್ನುವುದು ನನಗೆ ಗೊತ್ತಿದೆ. ಇದ್ದ ನದಿಗಿಂತ ಗಾಢವಾಗಿ, ಇರದ ನದಿ ಕಾದುತ್ತದೆ. ನೋಡಿದ ಮುಖಕ್ಕಿಂತ ತೀವ್ರವಾಗಿ ನೋಡದ ಮುಖ ಕಾಡುವ ಹಾಗೆ!





Monday, February 24, 2014

ಜೋಗಿ ಕಥೆಗಳು - ಜೋಗಿ ( ಗಿರೀಶ್ ರಾವ್ )

 Jogi Kathegalu - Jogi ( Girish Rao )



 ಮುನ್ನುಡಿಯಿಂದ:

ಈ ಸಂಕಲನದ ಒಂದು ಕಥೆ ನನಗೆ ತುಂಬಾ ಇಷ್ಟವಾದುದ್ದು, ಕನ್ನಡಿಯೊಳಗೆ ಗಳಗನಾಥರಿರಲಿಲ್ಲ, 'ಗಳಗನಾಥರು ಬೆಚ್ಚಿಬಿದ್ದರು' ಕಥೆಯ ಮೊದಲ ಸಾಲೇ ಕಥೆಗೆ ಒಂದು ತಯಾರಿಯನ್ನು ನೀಡುತ್ತದೆ. ತುಂಬಾ ಕೇಳಿದ ಹೆಸರು. ಕಥೆಯ ಮೊದಲ ಪ್ಯಾರಾದಲ್ಲಿ ಗಳಗನಾಥರು ಇನ್ನೂ ಬದುಕಿದ್ದಾರೆ. ಅವರ ಮಗಳಿಗೆ ಅವರ ಇರವಿದೆ/ ಭಯಾನಕ ಅಂದರೆ ತನ್ನನ್ನು ನೋಡಿಕೊಳ್ಳುವ ಕನ್ನಡಿಯಲ್ಲಿ ತನ್ನದೇ ಬಿಂಬವಿಲ್ಲ (ತನಗೆ ತಾನು ಕಾಣುತ್ತಿಲ್ಲ, ಪರರಿಗೆ ಕಾನುತ್ತಿದ್ದಿದೇನೆ ಎಂದೇ ....) ನಿಟ್ಟುಸಿರನ್ನೂ ಚೆಲ್ಲಿದೇ, ಎಲ್ಲೂ ಸಂಯಮದ ಒಂದು ಹಂತವನ್ನು ಮೀರದೇ ಕಥೆ ಮುಂದರಿಯುತ್ತದೆ. ಕಥೆಯ ಮೋರುಮುಕ್ಕಾಲು ಪಾಲು ಗಳಗನಾಥರು ಬದುಕೆಯೀದ್ದಾರೆ, ಯಾಕೆಂದರೆ ಶಾಸ್ತ್ರಿಗಳು ಅವರನ್ನೇ ಕುರಿತು ನೇರ ಮಾತನಾದುತ್ತಿದ್ದಾರೆ. ತಮ್ಮ ಮನೆಯ ಬಾಗಿಲು ತಟ್ಟುವವರೆಗೂ ಬದುಕಿದ್ದ ಗಳಗನಾಥರು ಮನೆ ಹೊಕ್ಕ ಕ್ಷಣ ಬದುಕಿದ್ದರೇ ?

ಇನ್ನೊಂದು ಕಥೆ ನನಗೆ ತುಂಬಾ ಇಷ್ಟವಾದುದ್ದು 'ಇನ್ನೊಬ್ಬ', ಮೊದಲ ಸಾಲಿನಲ್ಲೇ ಕಥೆ ಅನಾವರಣಗೊಳ್ಳುತ್ತದೆ. ಗೊರೊರಿನ ಪ್ರಜೆಗಳ ಪ್ರಕಾರ ಗೊರೂರು ರಾಮಸ್ವಾಮಿ ಅಯ್ಯಂಗಾರರೊ  ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರೊ ಜೀವದ ಗೆಲೆಯರು. ಮತ್ತೆ ಅದೇ, ತುಂಬಾ ಕೇಳಿದ ಹೆಸರು. ಒಮ್ಮೆಲೇ ಆಪ್ತವೆನಿಸುವ ಧಾತಿ. ಕಥೆ ನಿಧಾನವಾಗಿ ನುಸುಲುತ್ತದೆ. ಹರಡಿಕೊಂಡಂತೆಲ್ಲಾ ನಿಗೂಢವಾಗುತ್ತದೆ. ಇದ್ದವರು ಯಾರು, ಹೋದವರು ಯಾರು, ರಾಮಸ್ವಾಮಿ ಅಯ್ಯಂಗಾರರಷ್ಟೇ ಗೊಂದಲ ಒದುಗನಿಗೊ, ಪ್ರಶ್ನೆ ಕೇಳುವ ಮೇಷ್ಟ್ರಿಗೂ ಉಂಟಾಗುತ್ತದೆ. ಆದಂತೆ ಈ ರಾಮಸ್ವಾಮಿ ಅಯ್ಯಂಗಾರರು ಯಾರು? ಅವರ ಜೊತೆಗಿದ್ದ ಇನ್ನೊಬ್ಬ ಅಯ್ಯಂಗಾರರೇ ಕಥೆಯ ಶೀರ್ಷಿಕೆಯ ಇನ್ನೊಬ್ಬನೇ ಅಥವಾ ರಾಮಸ್ವಾಮಿಯಂತಾಗಲಿರುವ ಮೇಸ್ಟ್ರು ಆ ಇನ್ನೊಬ್ಬನೇ ?

ಎರಡೂ ಕಥೆಗಳಲ್ಲಿ ಕೊನೆಯ ನಾಲ್ಕು ಸಾಲುಗಳಲ್ಲಿ ಕಥೆಗೆ ತಣ್ಣನೆಯ ಒಂದು ತಿರುವಿತ್ತು ಜೋಗಿ ಎಲವನ್ನೂ ಕೊದವಿಕೊದೆದ್ದು ಬಿದುತ್ತರೆ. ಎಲ್ಲೂ ಯಾವದೇ ಭಾವೊದೇಗವಿಲ್ಲ. ಯಾವುದೇ ಧಾವಾತವಿಲ್ಲ. ಕಥೆಯನ್ನು ಒಂದಿ ಮುಗಿಸಿದ ಪುಟ ಅಗುಚಿದ ಮೇಲೆ ಮಾತ್ರ ಥಟ್ಟನೆ ಆವರಿಸುವ ಭೀತಿ ಒಂದೆರೆಕ್ಷಣ ಅಲ್ಲಾಡಿಸಿಬಿಡುತ್ತದೆ.

            **************

 ಸಣ್ಣ ಕಥೆಗಳಲ್ಲಿ ಹಲವಾರು ವಿಶಿಷ್ಟ ಪ್ರಯೋಗಗಳು ನದೆದಿವೆ.

ಅಗಷ್ಟೋ ಮಾಂಟೆರೊಸ್ಸೋನ ಒಂದು ಸಾಲಿನ ಒಂದು ಕಥೆ ನೆನಪಿಗೆ ಬರುತ್ತಿದೆ.

"ಅವನು ಎಚ್ಚೆತ್ತಾಗ ಡೈನೋಸಾರಸ್ ಇನ್ನೂ ಅಲ್ಲೇ ಇತ್ತು."

ಇನ್ನೊಂದು ಕಥೆ ನೆನಪಿಗೆ ಬರುತ್ತಿದೆ. ಇದೆ ಮೂರೇ ಸಾಲುಗಲಲ್ಲಿದೆ. ಇದು ವೈಯೆನ್ಕೆ ಹೇಳೆದ್ದು.

"ಕಾರಿನಲ್ಲಿ ಪೆಟ್ರೋಲು ಇದೆಯೇ ಎಂದು ನೋಡಲು ಬೆಂಕಿ ಕಡ್ಡಿ ಗೀರಿದ. ಪೆಟ್ರೋಲು ಇತ್ತು. ವಯಸ್ಸು ನಲವತ್ತು."

ಇವೆರಡು ಕಥೆಗಳಲ್ಲಿ ಒಂದು ಕ್ರಿಯೆಯಿದೆ. ಅನಿರೀಕ್ಷಿತ ತಿರುವುಗಲಿವೆ. ಸಣ್ಣ ಕಥೆಗೆ ಬೇಕಾಗುವ ಎಲ್ಲ ಸಾಮಗ್ರಿಗಳೂ ಇವೆ. ಪುಟಗಟ್ಟಲೆ ಬರೆದ ಕಥೆಗಳಿಂತಾ ಇವು ಎಷ್ಟೋ ಪ್ರಖರವಾಗಿವೆ. ಮತ್ತೆ ಮತ್ತೆ ತಿಣುಕಿಸುತ್ತವೆ.

ಕೆಲವರು ಹಠಕ್ಕೆ ಕೂತಂತೆ ಕಥೆಗಳ ಪಂಧಿಗಳನ್ನು, ಪಾಲಿಸಬೇಕಾದ ನಿಯಮಗಳನ್ನು ಮೊದಲೇ ಹರಡಿಕೊಂಡು ಕಥೆ ಬರೆಯುತ್ತಾರೆ. ಅಂದರೆ ಪೂರ ನಾಲ್ಕು ಸಾವಿರ ಪದಗಳಲ್ಲಿ ಒಂದೂ ಪೂರ್ಣವಿರಾಮವನ್ನಿಕ್ಕುವುದಿಲ್ಲ. ಅಥವಾ ಇಡೀ ಕಥೆಯನ್ನು ಕರ್ಮಣೀ ಪ್ರಯೋಗದಲ್ಲೇ ಬರೆಯುತ್ತರೆ. ಹೀಗೆ ಇದು ತಪಸ್ಸಿದ್ದಂತೆ. ಹಠದ ಮೇಲೆ ದೇವರನ್ನು ಒಲಿಸಿಕೊಳ್ಳುವ ಪರಿ. ಇನ್ನೊಂದು ಪರಿಯಿದೆ. ಕಥೆಯನ್ನು ಹರಿಯಬಿಟ್ಟು ಅದನ್ನೇ ಹಿಮ್ಬಾಲಿಸುವುದು. ಇದರ ಉದ್ದದ ಮೇಲೆ ದೇವರಾಣೆಗೂ ಕಥೆಗಾರನಿಗೆ ಹಿದಿತವಿರುವುದಿಲ್ಲ. ಅದು ಎರಡು ಸಾವಿರವೋ ಒಂದು ಸಾವಿರ ಪದಗಳಿಗೋ ಮುಗಿದರೂ ಮುಗಿಯಿತು, ಇಪ್ಪತ್ತು ಸಾವಿರ ಪದಗಳಿಗೆ ಮುಗಿದರೂ ಅಚ್ಚರಿಯಿಲ್ಲ. 




Sunday, February 23, 2014

ಮಹಾನಗರ: IT'S A HUMAN ZOO - ಜೋಗಿ

Mahanagara: Its A Human Zoo - Jogi




ಮುನ್ನುಡಿಯಿಂದ  

ನಾನು ಬೆಂಗಳೂರು ಕುರಿತು ಬರೆಯಲು ಹೋರಾಟ ಕಾದಂಬರಿಗೆ ಮಾಡಿಕೊಂಡ ಸಿದ್ದತೆಗಳು, ಓದಿಕೊಂಡು ಪುಸ್ತಕಗಳು , ಮಾಡಿದ ತಿರುಗಾಟ, ಕೇಳಿಸಿಕೊಂಡ ಕತೆ ಇವೆಲ್ಲ ಸೇರಿಕೊಂಡು ನನ್ನೊಳಗೇ ಒಂದು ಮಹಾನಗರ ಸೃಷ್ಟಿಯಾದಂತೆ ಕಾನುತ್ತದೆ. ಬೆಂಗಳೂರನ್ನು ಒಂದು ಕಾದಂಬರಿಯಲ್ಲಿ ಹಿಡಿಯಲು ಸಾಧ್ಯವಾ ಎಂದು ಮೂರು ವರುಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಮಹಾನಗರದ ಕಷ್ಟಗಳು ಒಂದೆರಡಲ್ಲ. ಅದು ದಿನದಿನಕ್ಕೂ ಬದಲಾಗುತ್ತಲೇ ಇರುತ್ತದೆ. ಆತಂಕಗಳ ತೀವ್ರತೆ ಒಂದೇ ಆದರೂ, ರೂಪ ಮಾತ್ರ ಬೇರೆ ಬೆರೆ. ಮೆಟ್ರೋ, ರಸ್ತೆರಿಪೇರಿ, ಪ್ಲ್ಯ್ ಓವರ್, ಪೆಟ್ರೋಲ್ ಬೆಲೆ ಏರಿಕೆ, ರಿಯಲ್ ಎಸ್ಟೇಟ್ ದಂಧೆ, ಮತ್ತೆ ತಲೆಯೆತ್ತಿದ ರೌಡಿ ಪಡೆ, ದಿನೇದಿನೇ ಹೆಚ್ಚಿತ್ತಿರುವ ಆತ್ಮಹತ್ಯೆ, ಸಿಗದ ಉದ್ಯೋಗ, ಏರುತ್ತಿರುವ ಬೆಲೆ - ಹೀಗೆ ಸ್ಥಾವರವಾಗಿರುವ ಸಮಸ್ಯೆಯ ಜೊತೆ ಇತ್ತೀಚೆಗೆ ಸೇರಿಕೊಂಡದ್ದು ಬೀದಿ ನಾಯಿಗಳ ಭಯ, ಪ್ರಳಯದ ಆತಂಕ, ಜೋತಿಷಿಗಳ ಕಾಟ ಮತ್ತು ಕಸ.

ಮಹಾನಗರಕ್ಕೆ ಕಸ ಸೇರುತ್ತಲೇ ಇದೆ. ಅದು ಸಾಂಸ್ಕೃತಿಕ, ರಾಜಕೀಯ, ಆಧುನಿಕತೆ -- ಹೀಗೆ ವಿವಿಧ ಸ್ವರೋಪದ್ದಿರಬಹುದು. ಬಗೆಹರಿಯದ ವಿವಾದಗಳು, ಚುನಾವಣೆಯ ಭಯ, ಭ್ರಷ್ಟಾಚಾರ ಜೊತೆಗೇ ಬೆಂಗಳೂರು ಕಾಲ್ನಡಿಗೆಯಲ್ಲಿ ಸಾಗುವವರಿಗೆ ಮಾರಣಾಂತಿಕ ಆಗುತ್ತಿದೆ. ಬೆಂಗಳೂರಿನ ಮನಸ್ಸನ್ನು ಚರಿತ್ರೆ ಮತ್ತು ವರ್ತಮಾನದ ತಲ್ಲಣಗಳೊಂದಿಗೆ ಹಿಡಿಯುವುದು ನನ್ನ ಆಸೆ, ಅದಕ್ಕೆ ಪೂರ್ವಭಾವಿಯಾಗಿ ಮಾಡಿಕೊಂಡು ಒಂದಿಷ್ಟು ಟಿಪ್ಪಣಿಗಳು, ಅನಿಸಿಕೆಗಳು ಮತ್ತು ಗ್ರಹಿಕೆಗಳು ಇಲ್ಲಿವೆ.

ಕತ್ತಲಲ್ಲಿ ಬೆಳೆವುದೊಂದಿಗೆ ಕೆಲಸ ಎಂಬ ಗೋಪಾಲಕೃಷ್ಣ ಅಡಿಗರ ಕವಿತೆ ಸಾಲು. ಬೆಂಗಳೂರು ಕೂಡ ಕತ್ತಲಲ್ಲಿ ಬೆಳೆಯುತ್ತಿರುವಂತೆ ಭಾಸವಾಗುತ್ತಿದೆ. ಅಭಿವೃದ್ದಿ ಎಂಬುದು ಇಲ್ಲಿ ನಿರನ್ತರ. ಎಲ್ಲಿ ಅಭಿವೃದ್ದಿ ಕಾರ್ಯ ಶಾಶ್ವತವಾಗಿರುತ್ತದೋ ಆ ನಗರ ಜೀವಿಸಲು ಅನರ್ಹ ಅನ್ನಿಸಿ ಕೊಲ್ಲುತ್ತದೆ. ಅದು ಭವಿಷ್ಯಕ್ಕೆ ಕೂಡಿಸಲು ಜಿಪುಣನಂತೆ ವರ್ತಮಾನದಲ್ಲಿ ಉಪವಾಸ ಕೆದಹುವ ಹುನ್ನಾರ.

***********

ಮಹಾನಗರವನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಕಷ್ಟ. ಇಲ್ಲಿ ಬಡತನ, ಶ್ರೀಮಂತಿಕೆ ಎಂಬ ಪದಗಳಿಗೆ ಅರ್ಥವಿಲ್ಲ. ವಿದ್ಯಾವಂತ, ಅವಿವೇಕಿ ಎಂಬ ವರ್ಗೀಕರಣ ಸಲ್ಲ. ಸಾಮೂಹಿಕವಾಗಿ ಏನೂ ನಡೆಯದ, ಸಮೊಹ ಇದು, ರಾಜಕಾರನವೊಂದೇ ಇಲ್ಲಿಯ ಘಟನೆಗಳನ್ನು ನಿಯಂತ್ರಿಸುತ್ತಿದೆ; ವಿದ್ಯಮಾನವನ್ನು ನಿಯಂತ್ರಿಸುತ್ತಿದೆ; ಬದುಕನ್ನು ನಿಯಂತ್ರಿಸುವಂಥ ಶಕ್ತಿ ಯಾವುದೂ ಇಲ್ಲ, ಒಂದು ಮಹಸರೊವರದಲ್ಲಿ ತೇಲುತ್ತಿರುವ ಒಣಗಿದ ಎಳೆಗಳು ಹಾಗೆ ಇಲ್ಲಿ ಮಂದಿ ತೇಲುತ್ತಿರುತ್ತಾರೆ. ಎಲ್ಲೋ ಹುಟ್ಟಿದ ಒಂದು ಅಲೆ ಯಾರನ್ನೋ ಯಾವುದೊ ದಡದತ್ತ ತೆಲಿಸುತ್ತದೆ. ಸರೋವರ ಎಷ್ಟು ವಿಶಾಲವಾಗಿದೆ ಎಂದರೆ ಎಲೆಗಳಿಗೆ ತಾವು ಕೇಂದ್ರದತ್ತ ಚಲಿಸುತ್ತಿದ್ದೆವೋ ದಡದತ್ತಲೋ ಅನ್ನುವುದು ಗೊತ್ತೂ ಆಗುವುದಿಲ್ಲ. ಮಹಾನಗರ ಯೊಚಿಸುತ್ತದೆ. ನಾವು ಅದನ್ನು ನಮ್ಮದು ಅಂದುಕೊಳುತ್ತೇವೆ. ಮಹಾನಗರ ಆಜ್ಞಾಪಿಸುತ್ತದೆ , ನಾವು ಸ್ವಯಂ ಪ್ರೇರಣೆ ಅನ್ದುಕೊಲ್ಲುತ್ತೆವೆ. ಮಹಾನಗರ ಕೊಳ್ಳುತ್ತದೆ, ನಾವದನ್ನು ದೈವಲೀಲೆ ಅನ್ನುತ್ತೆವೆ.


ತೂಫಾನ್ ಮೇಲ್ - ಜಯಂತ ಕಾಯ್ಕಿಣಿ

Toofan Mail (Katha Sankalana) - Jayanta Kaykini




ಮುನ್ನುಡಿಯಿಂದ :

ಐದಾರು ವರ್ಷಗಳ ಹಿಂದೆ ಮುಂಬಯಿಯ ಬೀದಿಯಲ್ಲಿ ಡೊಂಬರ ಮಹಿಳೆಯೊಬ್ಬಳು  -- " ಶಾರುಖ್ ಖಾನ್ ನನ್ನ ಮಗ, ಹಿಂದೆಂದೋ ಜಾತ್ರೆಯಲ್ಲಿ ಕಲೆದುಹೊಗಿದ್ದ. ಅವನೇ ಖಂಡಿತ ಅಲ್ಲಗಳೆಯಲಾರ" -- ಎಂದು ಹಠ ಹಿಡಿದು ಒಂದು ಮಾಯಾ ಕೋಲಾಹಲವನ್ನೇ ಎಬ್ಬಿಸಿಬಿಟ್ಟಳು . ಅವನ ಮನೆಯೆದುರು ರಂಪ ಮಾದಿದಲು. ಕೋರ್ಟಿಗೆ ಹೋಗುತ್ತೇನೆಂದು ರೋಡಿಸಿದಳು. ಪೋಲೀಸರು ನಡುವೆ ಬಂದರು. ಜನ ಅವಳನ್ನು ಭ್ರಮಿತೆ ಅನ್ದರು. ಪತ್ರಿಕೆಗಳೂ ಈ ಸುದ್ದಿಯೊಂದಿಗೆ ಅವರದೆ ಆಟವಾಡಿದುವು. ಶಾರುಖ್ ಖಾನ್ ಮಾತ್ರ ಈ ಪ್ರಸಂಗದುದ್ದಕ್ಕೂ ಒಂದು ಬಗೆಯ ನಿರುಪಾಯ ಸಹಾನುಭೂತಿಯಲ್ಲಿ ಮೊಉನವಾಗಿದ್ದ. ನೀನು ಕೂಡ ನನ್ನ ತಾಹಿಯಂತೆ ಎಂದಾತ ಘನತೆಯಿಂದ ಹೇಳಲು ಯತ್ನಿಸುತ್ತಿರುವಂತೆ ಭಾದವಾಗುತ್ತಿತ್ತು. ಆದರೆ ಮಾತು ಎಲ್ಲವನ್ನೂ ಬೇರೆಯೇ ಆಗಿಸುತ್ತಿತ್ತು ನಂತರ ಎಲ್ಲ ಮರೆಯಾಯಿತು.

ಏಕಾಏಕಿ ಆ ತಾಯಿಗೆ ಹಾಗೇಕೆ ಅನಿಸಿತು? ಮತ್ತು ಈ ಅಪರಿಚಿತ ತಾಯಿಂದ ವಿಚಿತ್ರವಾದ ಅಷ್ಟೇ ತೀವ್ರವಾದ ಹಟ ಶಾರುಖ್ ಖಾನ್ ನನ್ನು ಈಗಲೂ ಹೇಗೆ ಆಳವಾಗಿ ಕುಲುಕುತ್ತಿರುಬಹುದು ?

ಕತೆಗಿಂತ ಮಿಗಿಲಾದ ಸತ್ಯ ಯಾವುದಿದೆ?

ನಾನು ಮುಂಬಯಿಂದ ಬಿಟ್ಟ ಮೇಲೆ - ( ಸದ್ಯ, ಅದು ನನ್ನನ್ನು ಬಿಟ್ಟಿಲ್ಲ ) -- ಕಳೆದೈದು ವರುಷಗಳಲ್ಲಿ ಈ ಹನ್ನೊಂದು ಕತೆಗಳನ್ನು ಬರೆದ್ದಿದ್ದೇನೆ ಎನ್ನುವುದು ನಂಗಂತೂ ಒಳ್ಳೆಯ ಸುದ್ದಿ! ಈ ಸಂಕಲವನ್ನು ಉಮೇದಿಯಿಂದ ಪ್ರಕಾಶಿಸುತ್ತಿರುವ ಪ್ರಕಾಶ್, ಪ್ರಭಾ ಕಂಬತ್ತಳ್ಳಿ, ಬೆನ್ನ ಹಿಂದೆ ಎರಡು ಉತ್ಸಾಹದ ಮಾತಾಡಿರುವ ಗಿರೀಶ್ ಕಾರ್ನಾಡ್, ತಮ್ಮ 'ಫ್ಯಾಂಟಮ್ ಲೇಡಿ" -- ಛಾಯಾಚಿತ್ರ ಸರಣಿಯ ಬಿಂಬಗಳನ್ನು ಹೂದಿಕೆಗೆ ಬಳಸಲು ಸಮ್ಮತಿ ಕೊಟ್ಟ ಕಲೆಗಾರ್ತಿ ಪುಷ್ಪಮಾಲ ಎನ್., ಅದನ್ನು ವಿನ್ಯಾಸಗೊಳಿಸಿದ ಶ್ರೀಪಾದ್, ಈ ಕತೆಗಳನ್ನು ಪ್ರಕಟಿಸಿದ ಕನ್ನಡ ಪ್ರಭ, ಲಂಕೇಶ್ ಪತ್ರಿಕೆ, ಸುಧಾ, ಪ್ರಜಾವಾಣಿ, ..... ಇವರೆಲ್ಲರ ಮಿತ್ರಋಣ ಈ ಪುಸ್ತಕದ ಹಿಂದಿದೆ .

ಸ್ಪೋರ್ತಿಯನ್ನೂ ಸ್ತೈರ್ಯವನ್ನು ಸೂಸುವ ಅಕ್ಕರೆಯ ಲೋಕ ಕಣ್ಣ ಮುಂದಿದೆ .