Sunday, February 23, 2014

Filled Under:
, ,

ಮಹಾನಗರ: IT'S A HUMAN ZOO - ಜೋಗಿ

Mahanagara: Its A Human Zoo - Jogi




ಮುನ್ನುಡಿಯಿಂದ  

ನಾನು ಬೆಂಗಳೂರು ಕುರಿತು ಬರೆಯಲು ಹೋರಾಟ ಕಾದಂಬರಿಗೆ ಮಾಡಿಕೊಂಡ ಸಿದ್ದತೆಗಳು, ಓದಿಕೊಂಡು ಪುಸ್ತಕಗಳು , ಮಾಡಿದ ತಿರುಗಾಟ, ಕೇಳಿಸಿಕೊಂಡ ಕತೆ ಇವೆಲ್ಲ ಸೇರಿಕೊಂಡು ನನ್ನೊಳಗೇ ಒಂದು ಮಹಾನಗರ ಸೃಷ್ಟಿಯಾದಂತೆ ಕಾನುತ್ತದೆ. ಬೆಂಗಳೂರನ್ನು ಒಂದು ಕಾದಂಬರಿಯಲ್ಲಿ ಹಿಡಿಯಲು ಸಾಧ್ಯವಾ ಎಂದು ಮೂರು ವರುಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಮಹಾನಗರದ ಕಷ್ಟಗಳು ಒಂದೆರಡಲ್ಲ. ಅದು ದಿನದಿನಕ್ಕೂ ಬದಲಾಗುತ್ತಲೇ ಇರುತ್ತದೆ. ಆತಂಕಗಳ ತೀವ್ರತೆ ಒಂದೇ ಆದರೂ, ರೂಪ ಮಾತ್ರ ಬೇರೆ ಬೆರೆ. ಮೆಟ್ರೋ, ರಸ್ತೆರಿಪೇರಿ, ಪ್ಲ್ಯ್ ಓವರ್, ಪೆಟ್ರೋಲ್ ಬೆಲೆ ಏರಿಕೆ, ರಿಯಲ್ ಎಸ್ಟೇಟ್ ದಂಧೆ, ಮತ್ತೆ ತಲೆಯೆತ್ತಿದ ರೌಡಿ ಪಡೆ, ದಿನೇದಿನೇ ಹೆಚ್ಚಿತ್ತಿರುವ ಆತ್ಮಹತ್ಯೆ, ಸಿಗದ ಉದ್ಯೋಗ, ಏರುತ್ತಿರುವ ಬೆಲೆ - ಹೀಗೆ ಸ್ಥಾವರವಾಗಿರುವ ಸಮಸ್ಯೆಯ ಜೊತೆ ಇತ್ತೀಚೆಗೆ ಸೇರಿಕೊಂಡದ್ದು ಬೀದಿ ನಾಯಿಗಳ ಭಯ, ಪ್ರಳಯದ ಆತಂಕ, ಜೋತಿಷಿಗಳ ಕಾಟ ಮತ್ತು ಕಸ.

ಮಹಾನಗರಕ್ಕೆ ಕಸ ಸೇರುತ್ತಲೇ ಇದೆ. ಅದು ಸಾಂಸ್ಕೃತಿಕ, ರಾಜಕೀಯ, ಆಧುನಿಕತೆ -- ಹೀಗೆ ವಿವಿಧ ಸ್ವರೋಪದ್ದಿರಬಹುದು. ಬಗೆಹರಿಯದ ವಿವಾದಗಳು, ಚುನಾವಣೆಯ ಭಯ, ಭ್ರಷ್ಟಾಚಾರ ಜೊತೆಗೇ ಬೆಂಗಳೂರು ಕಾಲ್ನಡಿಗೆಯಲ್ಲಿ ಸಾಗುವವರಿಗೆ ಮಾರಣಾಂತಿಕ ಆಗುತ್ತಿದೆ. ಬೆಂಗಳೂರಿನ ಮನಸ್ಸನ್ನು ಚರಿತ್ರೆ ಮತ್ತು ವರ್ತಮಾನದ ತಲ್ಲಣಗಳೊಂದಿಗೆ ಹಿಡಿಯುವುದು ನನ್ನ ಆಸೆ, ಅದಕ್ಕೆ ಪೂರ್ವಭಾವಿಯಾಗಿ ಮಾಡಿಕೊಂಡು ಒಂದಿಷ್ಟು ಟಿಪ್ಪಣಿಗಳು, ಅನಿಸಿಕೆಗಳು ಮತ್ತು ಗ್ರಹಿಕೆಗಳು ಇಲ್ಲಿವೆ.

ಕತ್ತಲಲ್ಲಿ ಬೆಳೆವುದೊಂದಿಗೆ ಕೆಲಸ ಎಂಬ ಗೋಪಾಲಕೃಷ್ಣ ಅಡಿಗರ ಕವಿತೆ ಸಾಲು. ಬೆಂಗಳೂರು ಕೂಡ ಕತ್ತಲಲ್ಲಿ ಬೆಳೆಯುತ್ತಿರುವಂತೆ ಭಾಸವಾಗುತ್ತಿದೆ. ಅಭಿವೃದ್ದಿ ಎಂಬುದು ಇಲ್ಲಿ ನಿರನ್ತರ. ಎಲ್ಲಿ ಅಭಿವೃದ್ದಿ ಕಾರ್ಯ ಶಾಶ್ವತವಾಗಿರುತ್ತದೋ ಆ ನಗರ ಜೀವಿಸಲು ಅನರ್ಹ ಅನ್ನಿಸಿ ಕೊಲ್ಲುತ್ತದೆ. ಅದು ಭವಿಷ್ಯಕ್ಕೆ ಕೂಡಿಸಲು ಜಿಪುಣನಂತೆ ವರ್ತಮಾನದಲ್ಲಿ ಉಪವಾಸ ಕೆದಹುವ ಹುನ್ನಾರ.

***********

ಮಹಾನಗರವನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಕಷ್ಟ. ಇಲ್ಲಿ ಬಡತನ, ಶ್ರೀಮಂತಿಕೆ ಎಂಬ ಪದಗಳಿಗೆ ಅರ್ಥವಿಲ್ಲ. ವಿದ್ಯಾವಂತ, ಅವಿವೇಕಿ ಎಂಬ ವರ್ಗೀಕರಣ ಸಲ್ಲ. ಸಾಮೂಹಿಕವಾಗಿ ಏನೂ ನಡೆಯದ, ಸಮೊಹ ಇದು, ರಾಜಕಾರನವೊಂದೇ ಇಲ್ಲಿಯ ಘಟನೆಗಳನ್ನು ನಿಯಂತ್ರಿಸುತ್ತಿದೆ; ವಿದ್ಯಮಾನವನ್ನು ನಿಯಂತ್ರಿಸುತ್ತಿದೆ; ಬದುಕನ್ನು ನಿಯಂತ್ರಿಸುವಂಥ ಶಕ್ತಿ ಯಾವುದೂ ಇಲ್ಲ, ಒಂದು ಮಹಸರೊವರದಲ್ಲಿ ತೇಲುತ್ತಿರುವ ಒಣಗಿದ ಎಳೆಗಳು ಹಾಗೆ ಇಲ್ಲಿ ಮಂದಿ ತೇಲುತ್ತಿರುತ್ತಾರೆ. ಎಲ್ಲೋ ಹುಟ್ಟಿದ ಒಂದು ಅಲೆ ಯಾರನ್ನೋ ಯಾವುದೊ ದಡದತ್ತ ತೆಲಿಸುತ್ತದೆ. ಸರೋವರ ಎಷ್ಟು ವಿಶಾಲವಾಗಿದೆ ಎಂದರೆ ಎಲೆಗಳಿಗೆ ತಾವು ಕೇಂದ್ರದತ್ತ ಚಲಿಸುತ್ತಿದ್ದೆವೋ ದಡದತ್ತಲೋ ಅನ್ನುವುದು ಗೊತ್ತೂ ಆಗುವುದಿಲ್ಲ. ಮಹಾನಗರ ಯೊಚಿಸುತ್ತದೆ. ನಾವು ಅದನ್ನು ನಮ್ಮದು ಅಂದುಕೊಳುತ್ತೇವೆ. ಮಹಾನಗರ ಆಜ್ಞಾಪಿಸುತ್ತದೆ , ನಾವು ಸ್ವಯಂ ಪ್ರೇರಣೆ ಅನ್ದುಕೊಲ್ಲುತ್ತೆವೆ. ಮಹಾನಗರ ಕೊಳ್ಳುತ್ತದೆ, ನಾವದನ್ನು ದೈವಲೀಲೆ ಅನ್ನುತ್ತೆವೆ.




0 comments:

Post a Comment