Monday, February 24, 2014

Filled Under:
, ,

ಜೋಗಿ ಕಥೆಗಳು - ಜೋಗಿ ( ಗಿರೀಶ್ ರಾವ್ )

 Jogi Kathegalu - Jogi ( Girish Rao )



 ಮುನ್ನುಡಿಯಿಂದ:

ಈ ಸಂಕಲನದ ಒಂದು ಕಥೆ ನನಗೆ ತುಂಬಾ ಇಷ್ಟವಾದುದ್ದು, ಕನ್ನಡಿಯೊಳಗೆ ಗಳಗನಾಥರಿರಲಿಲ್ಲ, 'ಗಳಗನಾಥರು ಬೆಚ್ಚಿಬಿದ್ದರು' ಕಥೆಯ ಮೊದಲ ಸಾಲೇ ಕಥೆಗೆ ಒಂದು ತಯಾರಿಯನ್ನು ನೀಡುತ್ತದೆ. ತುಂಬಾ ಕೇಳಿದ ಹೆಸರು. ಕಥೆಯ ಮೊದಲ ಪ್ಯಾರಾದಲ್ಲಿ ಗಳಗನಾಥರು ಇನ್ನೂ ಬದುಕಿದ್ದಾರೆ. ಅವರ ಮಗಳಿಗೆ ಅವರ ಇರವಿದೆ/ ಭಯಾನಕ ಅಂದರೆ ತನ್ನನ್ನು ನೋಡಿಕೊಳ್ಳುವ ಕನ್ನಡಿಯಲ್ಲಿ ತನ್ನದೇ ಬಿಂಬವಿಲ್ಲ (ತನಗೆ ತಾನು ಕಾಣುತ್ತಿಲ್ಲ, ಪರರಿಗೆ ಕಾನುತ್ತಿದ್ದಿದೇನೆ ಎಂದೇ ....) ನಿಟ್ಟುಸಿರನ್ನೂ ಚೆಲ್ಲಿದೇ, ಎಲ್ಲೂ ಸಂಯಮದ ಒಂದು ಹಂತವನ್ನು ಮೀರದೇ ಕಥೆ ಮುಂದರಿಯುತ್ತದೆ. ಕಥೆಯ ಮೋರುಮುಕ್ಕಾಲು ಪಾಲು ಗಳಗನಾಥರು ಬದುಕೆಯೀದ್ದಾರೆ, ಯಾಕೆಂದರೆ ಶಾಸ್ತ್ರಿಗಳು ಅವರನ್ನೇ ಕುರಿತು ನೇರ ಮಾತನಾದುತ್ತಿದ್ದಾರೆ. ತಮ್ಮ ಮನೆಯ ಬಾಗಿಲು ತಟ್ಟುವವರೆಗೂ ಬದುಕಿದ್ದ ಗಳಗನಾಥರು ಮನೆ ಹೊಕ್ಕ ಕ್ಷಣ ಬದುಕಿದ್ದರೇ ?

ಇನ್ನೊಂದು ಕಥೆ ನನಗೆ ತುಂಬಾ ಇಷ್ಟವಾದುದ್ದು 'ಇನ್ನೊಬ್ಬ', ಮೊದಲ ಸಾಲಿನಲ್ಲೇ ಕಥೆ ಅನಾವರಣಗೊಳ್ಳುತ್ತದೆ. ಗೊರೊರಿನ ಪ್ರಜೆಗಳ ಪ್ರಕಾರ ಗೊರೂರು ರಾಮಸ್ವಾಮಿ ಅಯ್ಯಂಗಾರರೊ  ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರೊ ಜೀವದ ಗೆಲೆಯರು. ಮತ್ತೆ ಅದೇ, ತುಂಬಾ ಕೇಳಿದ ಹೆಸರು. ಒಮ್ಮೆಲೇ ಆಪ್ತವೆನಿಸುವ ಧಾತಿ. ಕಥೆ ನಿಧಾನವಾಗಿ ನುಸುಲುತ್ತದೆ. ಹರಡಿಕೊಂಡಂತೆಲ್ಲಾ ನಿಗೂಢವಾಗುತ್ತದೆ. ಇದ್ದವರು ಯಾರು, ಹೋದವರು ಯಾರು, ರಾಮಸ್ವಾಮಿ ಅಯ್ಯಂಗಾರರಷ್ಟೇ ಗೊಂದಲ ಒದುಗನಿಗೊ, ಪ್ರಶ್ನೆ ಕೇಳುವ ಮೇಷ್ಟ್ರಿಗೂ ಉಂಟಾಗುತ್ತದೆ. ಆದಂತೆ ಈ ರಾಮಸ್ವಾಮಿ ಅಯ್ಯಂಗಾರರು ಯಾರು? ಅವರ ಜೊತೆಗಿದ್ದ ಇನ್ನೊಬ್ಬ ಅಯ್ಯಂಗಾರರೇ ಕಥೆಯ ಶೀರ್ಷಿಕೆಯ ಇನ್ನೊಬ್ಬನೇ ಅಥವಾ ರಾಮಸ್ವಾಮಿಯಂತಾಗಲಿರುವ ಮೇಸ್ಟ್ರು ಆ ಇನ್ನೊಬ್ಬನೇ ?

ಎರಡೂ ಕಥೆಗಳಲ್ಲಿ ಕೊನೆಯ ನಾಲ್ಕು ಸಾಲುಗಳಲ್ಲಿ ಕಥೆಗೆ ತಣ್ಣನೆಯ ಒಂದು ತಿರುವಿತ್ತು ಜೋಗಿ ಎಲವನ್ನೂ ಕೊದವಿಕೊದೆದ್ದು ಬಿದುತ್ತರೆ. ಎಲ್ಲೂ ಯಾವದೇ ಭಾವೊದೇಗವಿಲ್ಲ. ಯಾವುದೇ ಧಾವಾತವಿಲ್ಲ. ಕಥೆಯನ್ನು ಒಂದಿ ಮುಗಿಸಿದ ಪುಟ ಅಗುಚಿದ ಮೇಲೆ ಮಾತ್ರ ಥಟ್ಟನೆ ಆವರಿಸುವ ಭೀತಿ ಒಂದೆರೆಕ್ಷಣ ಅಲ್ಲಾಡಿಸಿಬಿಡುತ್ತದೆ.

            **************

 ಸಣ್ಣ ಕಥೆಗಳಲ್ಲಿ ಹಲವಾರು ವಿಶಿಷ್ಟ ಪ್ರಯೋಗಗಳು ನದೆದಿವೆ.

ಅಗಷ್ಟೋ ಮಾಂಟೆರೊಸ್ಸೋನ ಒಂದು ಸಾಲಿನ ಒಂದು ಕಥೆ ನೆನಪಿಗೆ ಬರುತ್ತಿದೆ.

"ಅವನು ಎಚ್ಚೆತ್ತಾಗ ಡೈನೋಸಾರಸ್ ಇನ್ನೂ ಅಲ್ಲೇ ಇತ್ತು."

ಇನ್ನೊಂದು ಕಥೆ ನೆನಪಿಗೆ ಬರುತ್ತಿದೆ. ಇದೆ ಮೂರೇ ಸಾಲುಗಲಲ್ಲಿದೆ. ಇದು ವೈಯೆನ್ಕೆ ಹೇಳೆದ್ದು.

"ಕಾರಿನಲ್ಲಿ ಪೆಟ್ರೋಲು ಇದೆಯೇ ಎಂದು ನೋಡಲು ಬೆಂಕಿ ಕಡ್ಡಿ ಗೀರಿದ. ಪೆಟ್ರೋಲು ಇತ್ತು. ವಯಸ್ಸು ನಲವತ್ತು."

ಇವೆರಡು ಕಥೆಗಳಲ್ಲಿ ಒಂದು ಕ್ರಿಯೆಯಿದೆ. ಅನಿರೀಕ್ಷಿತ ತಿರುವುಗಲಿವೆ. ಸಣ್ಣ ಕಥೆಗೆ ಬೇಕಾಗುವ ಎಲ್ಲ ಸಾಮಗ್ರಿಗಳೂ ಇವೆ. ಪುಟಗಟ್ಟಲೆ ಬರೆದ ಕಥೆಗಳಿಂತಾ ಇವು ಎಷ್ಟೋ ಪ್ರಖರವಾಗಿವೆ. ಮತ್ತೆ ಮತ್ತೆ ತಿಣುಕಿಸುತ್ತವೆ.

ಕೆಲವರು ಹಠಕ್ಕೆ ಕೂತಂತೆ ಕಥೆಗಳ ಪಂಧಿಗಳನ್ನು, ಪಾಲಿಸಬೇಕಾದ ನಿಯಮಗಳನ್ನು ಮೊದಲೇ ಹರಡಿಕೊಂಡು ಕಥೆ ಬರೆಯುತ್ತಾರೆ. ಅಂದರೆ ಪೂರ ನಾಲ್ಕು ಸಾವಿರ ಪದಗಳಲ್ಲಿ ಒಂದೂ ಪೂರ್ಣವಿರಾಮವನ್ನಿಕ್ಕುವುದಿಲ್ಲ. ಅಥವಾ ಇಡೀ ಕಥೆಯನ್ನು ಕರ್ಮಣೀ ಪ್ರಯೋಗದಲ್ಲೇ ಬರೆಯುತ್ತರೆ. ಹೀಗೆ ಇದು ತಪಸ್ಸಿದ್ದಂತೆ. ಹಠದ ಮೇಲೆ ದೇವರನ್ನು ಒಲಿಸಿಕೊಳ್ಳುವ ಪರಿ. ಇನ್ನೊಂದು ಪರಿಯಿದೆ. ಕಥೆಯನ್ನು ಹರಿಯಬಿಟ್ಟು ಅದನ್ನೇ ಹಿಮ್ಬಾಲಿಸುವುದು. ಇದರ ಉದ್ದದ ಮೇಲೆ ದೇವರಾಣೆಗೂ ಕಥೆಗಾರನಿಗೆ ಹಿದಿತವಿರುವುದಿಲ್ಲ. ಅದು ಎರಡು ಸಾವಿರವೋ ಒಂದು ಸಾವಿರ ಪದಗಳಿಗೋ ಮುಗಿದರೂ ಮುಗಿಯಿತು, ಇಪ್ಪತ್ತು ಸಾವಿರ ಪದಗಳಿಗೆ ಮುಗಿದರೂ ಅಚ್ಚರಿಯಿಲ್ಲ. 






0 comments:

Post a Comment