Sunday, February 23, 2014

ತೂಫಾನ್ ಮೇಲ್ - ಜಯಂತ ಕಾಯ್ಕಿಣಿ

Toofan Mail (Katha Sankalana) - Jayanta Kaykini




ಮುನ್ನುಡಿಯಿಂದ :

ಐದಾರು ವರ್ಷಗಳ ಹಿಂದೆ ಮುಂಬಯಿಯ ಬೀದಿಯಲ್ಲಿ ಡೊಂಬರ ಮಹಿಳೆಯೊಬ್ಬಳು  -- " ಶಾರುಖ್ ಖಾನ್ ನನ್ನ ಮಗ, ಹಿಂದೆಂದೋ ಜಾತ್ರೆಯಲ್ಲಿ ಕಲೆದುಹೊಗಿದ್ದ. ಅವನೇ ಖಂಡಿತ ಅಲ್ಲಗಳೆಯಲಾರ" -- ಎಂದು ಹಠ ಹಿಡಿದು ಒಂದು ಮಾಯಾ ಕೋಲಾಹಲವನ್ನೇ ಎಬ್ಬಿಸಿಬಿಟ್ಟಳು . ಅವನ ಮನೆಯೆದುರು ರಂಪ ಮಾದಿದಲು. ಕೋರ್ಟಿಗೆ ಹೋಗುತ್ತೇನೆಂದು ರೋಡಿಸಿದಳು. ಪೋಲೀಸರು ನಡುವೆ ಬಂದರು. ಜನ ಅವಳನ್ನು ಭ್ರಮಿತೆ ಅನ್ದರು. ಪತ್ರಿಕೆಗಳೂ ಈ ಸುದ್ದಿಯೊಂದಿಗೆ ಅವರದೆ ಆಟವಾಡಿದುವು. ಶಾರುಖ್ ಖಾನ್ ಮಾತ್ರ ಈ ಪ್ರಸಂಗದುದ್ದಕ್ಕೂ ಒಂದು ಬಗೆಯ ನಿರುಪಾಯ ಸಹಾನುಭೂತಿಯಲ್ಲಿ ಮೊಉನವಾಗಿದ್ದ. ನೀನು ಕೂಡ ನನ್ನ ತಾಹಿಯಂತೆ ಎಂದಾತ ಘನತೆಯಿಂದ ಹೇಳಲು ಯತ್ನಿಸುತ್ತಿರುವಂತೆ ಭಾದವಾಗುತ್ತಿತ್ತು. ಆದರೆ ಮಾತು ಎಲ್ಲವನ್ನೂ ಬೇರೆಯೇ ಆಗಿಸುತ್ತಿತ್ತು ನಂತರ ಎಲ್ಲ ಮರೆಯಾಯಿತು.

ಏಕಾಏಕಿ ಆ ತಾಯಿಗೆ ಹಾಗೇಕೆ ಅನಿಸಿತು? ಮತ್ತು ಈ ಅಪರಿಚಿತ ತಾಯಿಂದ ವಿಚಿತ್ರವಾದ ಅಷ್ಟೇ ತೀವ್ರವಾದ ಹಟ ಶಾರುಖ್ ಖಾನ್ ನನ್ನು ಈಗಲೂ ಹೇಗೆ ಆಳವಾಗಿ ಕುಲುಕುತ್ತಿರುಬಹುದು ?

ಕತೆಗಿಂತ ಮಿಗಿಲಾದ ಸತ್ಯ ಯಾವುದಿದೆ?

ನಾನು ಮುಂಬಯಿಂದ ಬಿಟ್ಟ ಮೇಲೆ - ( ಸದ್ಯ, ಅದು ನನ್ನನ್ನು ಬಿಟ್ಟಿಲ್ಲ ) -- ಕಳೆದೈದು ವರುಷಗಳಲ್ಲಿ ಈ ಹನ್ನೊಂದು ಕತೆಗಳನ್ನು ಬರೆದ್ದಿದ್ದೇನೆ ಎನ್ನುವುದು ನಂಗಂತೂ ಒಳ್ಳೆಯ ಸುದ್ದಿ! ಈ ಸಂಕಲವನ್ನು ಉಮೇದಿಯಿಂದ ಪ್ರಕಾಶಿಸುತ್ತಿರುವ ಪ್ರಕಾಶ್, ಪ್ರಭಾ ಕಂಬತ್ತಳ್ಳಿ, ಬೆನ್ನ ಹಿಂದೆ ಎರಡು ಉತ್ಸಾಹದ ಮಾತಾಡಿರುವ ಗಿರೀಶ್ ಕಾರ್ನಾಡ್, ತಮ್ಮ 'ಫ್ಯಾಂಟಮ್ ಲೇಡಿ" -- ಛಾಯಾಚಿತ್ರ ಸರಣಿಯ ಬಿಂಬಗಳನ್ನು ಹೂದಿಕೆಗೆ ಬಳಸಲು ಸಮ್ಮತಿ ಕೊಟ್ಟ ಕಲೆಗಾರ್ತಿ ಪುಷ್ಪಮಾಲ ಎನ್., ಅದನ್ನು ವಿನ್ಯಾಸಗೊಳಿಸಿದ ಶ್ರೀಪಾದ್, ಈ ಕತೆಗಳನ್ನು ಪ್ರಕಟಿಸಿದ ಕನ್ನಡ ಪ್ರಭ, ಲಂಕೇಶ್ ಪತ್ರಿಕೆ, ಸುಧಾ, ಪ್ರಜಾವಾಣಿ, ..... ಇವರೆಲ್ಲರ ಮಿತ್ರಋಣ ಈ ಪುಸ್ತಕದ ಹಿಂದಿದೆ .

ಸ್ಪೋರ್ತಿಯನ್ನೂ ಸ್ತೈರ್ಯವನ್ನು ಸೂಸುವ ಅಕ್ಕರೆಯ ಲೋಕ ಕಣ್ಣ ಮುಂದಿದೆ .




0 comments:

Post a Comment