Friday, October 19, 2012

ರುದ್ರಪ್ರಯಾಗದ ಭಯಾನಕ ನರಬಕ್ಷಕ - ಪೂರ್ಣಚಂದ್ರ ತೇಜಸ್ವಿ

Rudraprayagada Bhayanaka Narabhakshaka - Poornachandra Tejasvi



 

ಪುಸ್ತಕದ ಮುನ್ನುಡಿಯಿಂದ 

ಜಿಮ್ ಕಾರ್ಬೆಟ್  ರವರ ಸಾಹಸ ಸತ್ಯಕಥೆ "ರುದ್ರಪ್ರಯಾಗದ ನರಭಕ್ಷಕ" ಅದರ ವಸ್ತುವಿನಿಂದ ಮಾತ್ರವಲ್ಲದೆ ಗದ್ಯಶ್ಯಲಿಯಿಂದಲೂ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಖ್ಯಾತ ಕೃತಿಯಾಗಿದೆ. ಜಿಮ್ ಕಾರ್ಬೆಟ್  ರವರಿಗೆ ಸಾಹಿತ್ಯದಲ್ಲಿ ಚಿರಸ್ಥಾಯಿಯಾದ ಸ್ಥಾನ ದೊರಕಲು ಈ ಕೃತಿಯೂ ಒಂದು ಮೂಖ್ಯ ಕಾರಣವೆಂದೇ ಹೇಳಬಹುದು. ಎಂಟು ವರ್ಷಗಳ ಪರ್ಯಂತ ರುದ್ರಪ್ರಯಾಗದ ಆಜುಬಾಜಿನ ಐನೂರು ಚದರಮ್ಯಲಿ ಪ್ರದೇಶದಲ್ಲಿ ನಿರಂತರವಾಗಿ ನೂರಾರು ಕಗ್ಗೊಲೆಗಳನ್ನು ಮಾಡಿದ ಈ ಚಿರತೆಯಾ ಕುಯುಕ್ತಿ, ಚಾಣಾಕ್ಷತೆ, ಮನುಷ್ಯರ ನಡವಳಿಕೆ ತಿಳುವಳಿಕೆಗಳು ಅದನ್ನು ಈ ಕತೆಯ ಅಸಾಮಾನ್ಯ ಖಳನಾಯಕನನ್ನಾಗಿ ರೂಪಿಸಿದೆ.


ಸರ್ಕಾರದಿಂದ ಹಿಡಿದು ಸಾರ್ವಜನಿಕನಿಕರವರಿಗೆ ಎಲ್ಲರೂ ಇದು ಪ್ರಾನಿಯಲ್ಲವೆಂದೂ, ಯಾವುದೊ ಕ್ರೂರ ಪಿಶಾಚಿಯೇ ಪ್ರಾಣಿರೂಪ ಧರಿಸಿದೆ ಎಂದು ಯೋಚಿಸಿ ದಿಗ್ಬ್ರಾಂತರಾಗಿ ಕೈಕಟ್ಟಿ ಕುಳಿತರೆಂದರೆ ಈ ನರಬಕ್ಷಕ ಎಂಥ ಭೀಕರ ಕೊಲೆಪಾತಕಿಯಾಗಿರಬಹುದು ಯೋಚಿಸಿ! ಅಂಥ ಸನ್ನಿವೇಶದಲ್ಲೂ ಎಂದೆಗೆಡದೆ ಎಲ್ಲರಿಗೂ ಧೈರ್ಯ ಹೇಳುತ್ತಾ ಅಕ್ಷರಸಹ ಪ್ರಾಣದ ಹಂಗು ತೊರೆದು ಈ ನರಭಕ್ಷಕಕೊಲೆಗಳ ಸರಣಿಯನ್ನು ತಡೆಯಲು ಹೋರಾಡಿದ ಜಿಮ್ ಕಾರ್ಬೆಟ್  ಭಾರತ ರೂಪಿಸಿದ ಸರಳ, ಧೀರ, ಅಸಾಧಾರಣ ವ್ಯಕ್ತಿ. ಈತನ ಮುಗ್ದ ಪ್ರಾಮಾಣಿಕತೆ, ಅಲ್ಲಿನ ಜನಗಳಿಗೂ ಈತನಿಗೆ ಇದ್ದ ಪರಸ್ಪರ ಪ್ರೀತಿ ಗೌರವಗಳು ಈ ಪುಸ್ತಕಾದಾದ್ಯಂತ ಎಷ್ಟು ಚೆನ್ನಾಗಿ ಪ್ರತಿಬಿಂಬಿತವಾಗಿದೆ ಎಂದರೆ ಈ ಕೃತಿ ಸಾಹಸ ಕಥೆಗಿಂತಲೂ ಮಿಗಿಲಾಗಿ ನಮಗೆ ಘಾವಾ೯ಲಿನ ಜನರ ಸಾಮಾಜಿಕ ಕಾದಂಬರಿಯಂತೆ ಕಾಣುತ್ತದೆ. ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್  ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವನದ ಹಂಗು ತೊರೆದು ಕಾರ್ಬೆಟ್ ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘಾವಾ೯ಲಿನ ಮುಗ್ದ ರೈತರು ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.


ರುದ್ರಪ್ರಯಾಗದ ನರಬಕ್ಷಕ ಮೈ ನವಿರೇಳಿಸುವಂಥ ಸತ್ಯಕಥೆಯಾಗಿರುವಂಥೆಯೇ ಅದ್ಭುತ ಕಲಾಕೃತಿಯೂ ಆಗಿದೆ.




0 comments:

Post a Comment