Tuesday, November 6, 2012

Filled Under:
, ,

ಕವಲು - ಎಸ್ ಎಲ್ ಭೈರಪ್ಪ

Kavalu - S L Bhyrappa





ಭೈರಪ್ಪನವರ ಕವಲು ಓದಿದ ಮೇಲೆ ಈ ಕಾದಂಬರಿ ೨೨ನೇ ಮುದ್ರಣ ಕಂಡಿರುವಲ್ಲಿ ಆಶ್ಚರ್ಯವಿಲ್ಲ ಅಂತ ಅನಿಸುತ್ತಿದೆ. ಇವತ್ತು ಪತ್ರಿಕೆಯಲ್ಲಿ ಓದಿದೆ ಬೆಂಗಳೂರಿನಲ್ಲಿ ಒಂದು ಹುಡುಗಿ ತನ್ನ ಪ್ರಿಯಕರನನ್ನು ಕೊಂದು, ಪೋಲಿಸ್ ರವರ ಮುಂದೆ ತನ್ನ ತಪ್ಪನ್ನು ನಗುಮುಕದಿಂದ ಒಪ್ಪಿಕೊಂಡಳು ಅಂತ. ಸ್ವಲ್ಪ ಹೆದರಿಕೆಯಾತ್ತು, ಕವಲು ಮತ್ತು ಈ ಸುದ್ದಿ, ಮದುವೆಯಾಗದ ಹುಡುಗರ ಪಾಡೇನು ಅಂತ. ಪ್ರೀತಿಸಿದ ಹುಡುಗರನ್ನು ಹುದುಗೊಇ ಕೊಲ್ಲುತ್ತಾಳೆ, ಮದುವೆಯಾದ ಹೆಂಡತಿ ಡೈವೋರ್ಸ್ನಲ್ಲಿ ಎಲ್ಲ ಕಿತ್ತಿಕೊಲ್ಲುತ್ತಲೇ, ಸ್ವಲ್ಪ ಮೈ ಜುಮೆನ್ನುತ್ತದೆ.


ಕವಲಿನಲ್ಲಿ ಬರುವ ಪಾತ್ರಗಳು ಯಾವುದೊ ಕಾಲ್ಪನಿಕ ಕಥೆಯಲ್ಲ, ಇದು ನಿಜಜೀವನದ ಕೈಕನ್ನಡಿ ಎನ್ನುವಂತಿದೆ, ಕವಲು ಬಿಡುಗಡೆಯಾದಾಗ ಕೆಲವು ಮಹಿಳ ಸಂಗಟನೆಗಳು ಈ ಕಾದಂಬರಿ ಮಹಿಳೆಯರ ವಿರುದ್ಧ, ಹೆಣ್ಣಿನ ಹವಹೆಲನ ಎಂತೆಲ್ಲ ಪ್ರತಿಬತನೆಗಳು ನಡೆದವು, ಯಾಕೆ ನಡೆದವು ಎಂದು ಪುಸ್ತಕ ಶುರು ಮಾಡಿದ ಮೇಲೆ ಗೊತ್ತಾಗುತ್ತದೆ, ಇದು ಕೆಲವು ಹೆಂಗಸರ ಅದರಲ್ಲೂ "ಸುಡೋ ಫೆಮಿನಿಸ್ಟ್" ಗಳ ಜೇಡರ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡ ಗಂಡಸರ ಮತ್ತು ಕಾನೂನಿನ ಕಾಯ್ದೆಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುವ ಕೆಲವು  ಮಹಿಳೆಯರ ನಡತೆಯನ್ನು ವಿವರಿಸುತ್ತದೆ,


ಇದರಲ್ಲಿ ಬರುವ ಎರಡು ಪಾತ್ರಗಳು ಇಳಾ ಮತ್ತು ಮಂಗಳ ಭಾರತ ಸಂಸೃತಿಯ ಮಹಿಳೆಯರು ದೌರ್ಜನ್ಯ, ಹಿಂಸೆ, ಮಾತ್ತು ತುಳಿತ್ತಕೊಳಗಾದವರು ಇದನ್ನು ಹೋಗಲಾಡಿಸಲು ಅಮೇರಿಕಾದಲ್ಲಿ ಮಹಿಳೆಯರಿಗಿರುವ ಸ್ವಾತಂತ್ರ್ಯ ಇಲ್ಲೂ ಬರಬೇಕು ಎನ್ನುವವರು. ಅವರಿಬ್ಬರೂ ಈ ಕಾದಂಬರಿಯಲ್ಲಿ ಬರಿ ಅಲ್ಲಿರುವ ಸ್ವಾತಂತ್ರ್ಯ ಬೇಕು ಆದರೆ ಅಲ್ಲಿರುವ ಮಹಿಳ ಕಾನೂನು, ಗಂಡಿನ ಹಿತರಕ್ಷಣೆ ಕಾನೂನು ಬೇಡ, ನ್ಯಾಯಾಲಯದಲ್ಲಿ ಮಾತ್ರ ಇವರನ್ನು ಭಾರತಿಯ ಮಹಿಳೆಯರ ರೀತಿ ಮತ್ತು
ನ್ಯಾಯಾಲಯದ ಹೊರಗೆ ಇವರನ್ನು ಹೊರದೇಶದ ಮಹಿಳೆಯರ ರೀತಿ ಗುರುತಿಸಬೇಕೆ ಎಂದು ಅವರ ವಾದ.


ನಾನು ಕಾರಂತರ ಮಹಿಳ ಶೋಷಣೆಗಳ ಬಗ್ಗೆ ಓದಬೇಕಾದರೆ, ಗಂಡಸರು ಅನುಭವಿಸುವ ಕಷ್ಟಗಳು, ಹೆಣ್ಣಿಂದ ಮೋಸಕ್ಕೆ ಹೊಳಗಾದವರ ಬಗ್ಗೆ ಯಾರು ಯಾಕೆ ಬರೆದಿಲ್ಲ ಅನಿಸುತ್ತಿತ್ತು, ಕವಲು ಓದಿದ ಮೇಲೆ ತಿಳಿಯಿತು ಅಂತ ಕಾದಂಬರಿಗಳು ಇವೆ ಅಂತ. ಒಂದು ಸಾಮಜದಲ್ಲಿ ಒಂದು ಕಾನೂನು ಮಾಡಿದರೆ ಅದನ್ನು ಊಪಯೋಗಿಸುವವರು ಮಾತ್ತು ದುರೂಪಯೊಗ ಮಾಡುವವರು ಇಬ್ಬರು ಇರುತ್ತಾರೆ, ಅದರಲ್ಲಿ ನಾವು ತೂಗಿ ಆಳತೆ ಮಾಡಿ ಜೀವನ ನಡೆಸಬೇಕು.


ಯಾವುದೇ ಕಾರಂತರ ಕಾದಂಬರಿ ಓದಿದ ಜನ ಭೈರಪ್ಪನವರ ಕವಲು ಓದಲೇಬೇಕು, ಯಾಕೆಂದರೆ ಸಮಾಜ ಒಂದು ನಾಣ್ಯದ ಎರಡು ಮುಖ ಇದ್ದಹಾಗೆ, ಕಾರತರ ಕದಮಬರಿ ಒಂದು ಮುಖವಾದರೆ ಕವಲು ಇನ್ನೊದು ಮುಖ. 




0 comments:

Post a Comment