Wednesday, November 14, 2012

ಕಾಡಿನ ಕತೆಗಳು - ಪೂರ್ಣಚಂದ್ರ ತೇಜಸ್ವಿ

Kaadina Kathegalu - Poornachandra Tejasvi


Belandurina Narabhakshaka (Kaadina Kategalu - 1)
Pedachurina Rakshasa (Kaadina Kategalu - 2)
Jalahalliya Kurka (Kaadina Kategalu - 3)
Muniswami Mattu Magadi Chirathe (Kaadina KategaLu - 4)





ಕಾಡಿನ ಕತೆಗಳು - ಕಥಾಸಂಕಲನ


ಪುಸ್ತಕದ ಮುನ್ನುಡಿಯಿಂದ:-


ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ತಮ್ಮ ಅನುಭವಗಳನ್ನು ಬರೆದ ಕಾಲ ಚಾರಿತ್ರಿಕವಾಗಿ ಒಂದು ವಿಚಿತ್ರ ಪರ್ವಕಾಲವೆಂದು ಹೇಳಬಹುದು. ಹಿಂದೆ ಇಲ್ಲದ ಮತ್ತು ಮುಂದೆ ಬರದ 'ನ ಭತೋ ನ ಭವಷ್ಯತಿ' ಎನ್ನುವಂಥ ಚಾರಿತ್ರಿಕ ತಿರುವಿನಲ್ಲಿ ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇರಲಿಲ್ಲವೆಂದಲ್ಲ. ಹುಲಿ ಸಂಹರಸಿದ ಹೊಯ್ಸಳನಂಥ ಧೀರರ ಕತೆಗಳನ್ನು ನಾವು ಚರಿತ್ರೆಯಲ್ಲಿ ಕಾಣಬಹುದು. ಆದರೆ ಜನಸಂಖ್ಯೆ ಈಗಿನಂತೆ ಇರಲ್ಲಿಲ್ಲ. ಮತ್ತು ಕಾಡುಗಳಲ್ಲಿ ಹುಲಿ ಚಿರತೆಗಳ ಆಹಾರವಾದ ಇತರ ಪ್ರಾಣಿಗಳು ಹೇರಳವಾಗಿ ಇದ್ದವು ಹುಲಿ ಚಿರತೆಗಳಿಗೆ ಸಮಾಜ ಜೀವಿಯಾದ ಮನುಷ್ಯನನ್ನು ಹಿಡಿದು ತಿನ್ನಬೇಕಾದ ತುರ್ತು ಏನು ಇರಲ್ಲಿಲ್ಲ. ಅದ್ದರಿಂದ ಈ ಇಬ್ಬರು ಲೇಖಕರು ಹಿಂದೂ ನರಬಕ್ಷಕಗಳು ಹಾವಳಿ ಈ ಪ್ರಮಾಣದಲ್ಲಿ ಇರಲ್ಲಿಲ್ಲ.



ಬ್ರಿಟಿಷ್ ಸಾಮ್ರಾಜ್ಯದ ಪ್ರಾರಂಭಿಕ ದಿನಗಳಲ್ಲಿ, ಕೈಗಾರಿಕಾ ಕ್ರಾತಿ ತನ್ನ ಮೊದಲ ಹೆಜ್ಜೆ ಇಡಲು ಶುರು ಮಾಡಿದಾಗ ನರಭಕ್ಷಕ ಹುಲಿ ಚಿರತೆ ಸಿಂಹಗಳ ಘಟನೆಗಳನ್ನು ನೀವು ಹೆಚ್ಹಾಗಿ ಗಮನಿಸಬಹುದು. ಈ ಖಂಡಗಳಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಾ ನಾಗರೀಕತೆ ವಿಸ್ತರಿಸಿ ಕಾಡಿನ ವಿಸ್ತೀರ್ಣ ಕುಗ್ಗುತ್ತಾ ಹೋದಂತೆ ಕಾಡಿನ ಮಾಂಸಹಾರಿ ಪ್ರಾಣಿಗಳು ವಿವಿಧರೀತಿಯ ಒತ್ತಡಕ್ಕೆ ಸಿಕ್ಕಿಕೂಂಡವು. ಕಾರ್ಬೆಟ್ ಮತ್ತು ಆಂಡರ್ಸನ್ ಈ ಪ್ರಾಣಿಗಳು ನರಬಕ್ಷಕಲಾಗಳು ಅನೇಕಾನೇಕ ವೈಯ್ಯಕ್ತಿಕ ಕಾರಣಗಳನ್ನು ಕೊಡುತ್ತಾರಾದರೂ, ಈ ಕಾರಣಗಳಿಗೂ ನಾನು ಮೇಲೆ ಹೇಳಿದ ಚಾರಿತ್ರಿಕ ಸಂದರ್ಭ ಮೂಲಭೂತ ಕಾರಣ ಎಂದು ನನ್ನ ಭಾವನೆ. ಈ ಚಾರಿತ್ರಿಕ ಘಟ್ಟದಲ್ಲಿ ಬದುಕಿದ್ದವರಿಂದ ಮಾತ್ರ ಇಂಥ ಕೃತಿಗಳನ್ನು ರಚಿಸಲು ಸಾಧ್ಯ. ಈಗ ಹುಲಿಗಳೇ ಅವಸಾನದ ಅಂಚಿನಲ್ಲಿದ್ದು ಸರ್ಕಾರದ ಸಹಾಯಧನದಿಂದ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಇನ್ನು ನರಭಕ್ಷಕಗಳ ಸವಾಲನ್ನು ಎದುರಿಸಬೇಕಾದ ಸಂದರ್ಭ ಪುನರಾವರ್ತನೆಯಾಗುವುದು ಅಸಂಭವ. ಆದ್ದರಿಂದಲೇ ನಾನು ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ರ ಅನುಭವಗಳನ್ನು 'ನ ಭತೋ ನ ಭವಷ್ಯತಿ' ಅಂದು ಹೇಳಿದ್ದು.


ನಾನು ಹುಟ್ಟುವ ಎಲೆಗಾಗಲೇ ಶಿಕಾರಿ ಯುಗದ ಕೊಟ್ಟಕೊನೆಯ ತುದಿ ಬಂದಿತ್ತು. ಆದರು ಈ ಕತೆಗನನ್ನು ಆಸ್ವಾದಿಸಿ ಅನುಭವಿಸುವ ಮಟ್ಟಿಗಾದರೂ ನನಗೆ ಕಾಡಿನ ಅನುಭವಗಳು ಪರಿಚಯವಾಯ್ತು. ಕೆನೆತ್ ಆಂಡರ್ಸನ್ ಕತೆಗಳ ಹಿನ್ನಲೆ, ಪರಿಸರ, ಪಾತ್ರಗಳು ಎಲ್ಲ ನನ್ನ ಅನುಚವವೇ ಅನ್ನುವಷ್ಟು ಚಿರಪರಿಚಿತವಾದುದು. ಚೋರ್ಡಿ, ಶೆಟ್ಟಿಹಳ್ಳಿ. ಶಿಕಾರಿಪುರ, ಬೆಳ್ಳಂದೂರು ಎಲ್ಲಾ ನಾವು ಕೋವಿ ಹೆಗಲಿಗೀರಿಸಿಕೊಂಡು ಮಳೆ ಬಿಸಿಲೆನ್ನದೆ ತಿರುಗಾಡಿರುವ ಜಾಗಗಳು. ನಾವು ಕಾದಿಗಿಲಿದಾಗ ನರಬಕ್ಷಕಗಳ ಯುಗ ಮುಗಿತ್ತೆಂಬುದೊಂದನ್ನು ಬಿಟ್ಟರೆ ಮಿಕ್ಕಿದೆಲ್ಲ ನಾನೇ ಅನ್ದೆರ್ಸೋನ್ನರ ಜೊತೆ ಇದ್ದೆನೇನೋ ಎನ್ನುವಷ್ಟು ನನಗೆ ಗೊತ್ತು.





0 comments:

Post a Comment