Wednesday, September 19, 2012

ಸರಸಮ್ಮನ ಸಮಾಧಿ - ಶಿವರಾಮ ಕಾರಂತ

Sarasammana Samadhi - Shivarama Karanth

ಕಾರಂತರ ಸರಸಮ್ಮನ ಸಮಾಧಿ ಒಂದು ಹೆಣ್ಣಿನ ಶೋಷಣೆ ಅಥವಾ ಗಂಡಸಿನ ಹೆಣ್ಣಿನ(ಹೆಂಡತಿ)ಕಡೆ ಉದಾಸೀನದ ಕುರಿತು. ಸಮಾಜದಲ್ಲಿ ಬೇರೆ ಬೇರೆ ವರ್ಗದ, ಮನೆಯ ಮತ್ತು ಗಂಡನದಿರ ಮನೆಯಲ್ಲಿನ ಹೆಣ್ಣಿನ ಸ್ವಾತಂತ್ರ್ಯ, ಅವರ ಮನಸ್ಸಿನ ವ್ಯಥೆ, ಅವರು  ಅನುಸರಿಸುವ ಪದ್ಧತಿ, ಕಷ್ಟ ನಿವಾರಣೆಗೆ ಮಾಡುವ ಕಾರ್ಯಗಳು ನಿಜ ಜೀವನಕ್ಕೆ ಹತ್ತಿರವಾದ ರೀತಿಯಲ್ಲಿ ವಿವರಿಸುತ್ತಾರೆ. ಮೊದಮೊದಲು ಈ ಕಾದಂಬರಿ ಕ್ಲಿಷ್ಟಕರ ಎನಿಸಿದ್ದರು ಕಾದಂಬರಿ ಮುಗಿಸುವ ಹೊತ್ತಿಗೆ ತಿಳಿನೀರಿನ ಹಾಗೆ ಸ್ಪಸ್ಟವಾಗುತ್ತದೆ.

ಸರಸಮ್ಮ ಮೂಡಂಬೈಲಿನ ದೇವತೆ. ಆ ಊರಿನ ಜನ ಮತ್ತು ಸುತ್ತಮುತ್ತಲಿನ ಊರಿನ ಜನ ಸರಸಮ್ಮನ ಗುಡಿಗೆ ರಾತ್ರಿಯಲ್ಲಿ ಬಂದು ತೆಂಗಿನ ಕಾಯಿಯನ್ನು ಕೆರೆಗೆ ತೇಲಿ ಬಿಟ್ಟು ಯಾರು ಕಾಣದ ಹಾಗೆ ಹೋಗುತ್ತಾರೆ. ಈ ರೀತಿ ಮಾಡಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ. ಕಾದಂಬರಿಯಲ್ಲಿ ಬರುವ ಜಾನಕಿಯಾ ಗಂಡನ ಊದಾಸಿನ, ಸುನಾಲಿನಿಯಾ ಗಂಡನ ನಿರ್ಲಕ್ಷ್ಯ, ಭಾಗೀರಥಿಯಾ ಮಾವನ ಕೆಟ್ಟ ದೋರಣೆಯಿಂದ ಸರಸಮ್ಮ ಸಾಮಧಿಗೆ ಬಂದವರೇ. ಅವರ ಎಲ್ಲಾ ಆಸೆ ಪೂರೈಸದೆ ಹೋದರು ಸರಸಮ್ಮ ತರುತ್ತಾಳೆ. ಇಲ್ಲಿ ಬರುವ ಮೂಖ್ಯ ಪಾತ್ರ ಚಂದರಯ್ಯ  ಬೆಳ್ಯಮ್ಮನ ಬೂತ(ಪ್ರೇತ)ಆಸಕ್ತ್ಹಿಂದ ಸರಸಮ್ಮನ ಸಾಮಧಿಯತ್ತಿರ ಹೋಗಿದಾದರು, ಭಾಗೀರಥಿಯಾ ಮತ್ತು ಜಲಜಾಕ್ಷಿಯಾ ಪ್ರೀತಿ(ಆಕರ್ಷಣೆ)ಯಾ ಮಧ್ಯೆ ಮನಸ್ಸು ತೊಲಾಡುತ್ತದೆ.

ಇಲ್ಲಿ ನಾವು ನೋಡಬೇಕಾದ ಅಂಶ, ಇಲ್ಲಿ ಸಾಮಜದ ಹೆಣ್ಣಿನ ಮೇಲಿನ ಮೌಡ್ಯತೆ ಮತ್ತು ಗಂಡಸ್ಸಿನ "ಹೆಣ್ಣಿನ ಮನಸ್ಸು ಮತ್ತು ಶರೀರ ಸ್ವಂತ ಸ್ವತ್ತು" ಎಂಬ ದೋರಣೆ ಎಷ್ಟು ಕಠೋರ ಶಿಕ್ಷೆ ಹೆಣ್ಣಿನ ಪಾಲಿಗೆ ಅಂತ ವಿವರಿಸುತ್ತಾರೆ.

ಕೊನೆಯ ಸಾಲು: ಈ ಕಾದಂಬರಿಯಲ್ಲಿ ವಿವರಿಸಿರುವಾಗೆ ಸ್ಥಿತಿ ಈಗಿನ ನಗರಗಳಲ್ಲಿ ಇಲ್ಲವಾದರೂ, ಕೆಲ ಹಳ್ಳಿಗಳ ಕಡೆ ಇದೆ.




0 comments:

Post a Comment