Tuesday, September 11, 2012

Filled Under:
, ,

ಸರಸ್ವತಿ ಸಂಹಾರ - ಬೀchi

Saraswathi Samhaara - beechi


ನಾನು ಬೀchi ಬಗ್ಗೆ ಓದಿದ್ದು ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ. ನನ್ನ ಆಗಿನ ಅಭಿಪ್ರಾಯ, ಇವರು ಹಾಸ್ಯ ಸಾಹಿತಿ ಮತ್ತು ಕವಿ, ಅದೇ ಅಭಿಪ್ರಾಯ ಇಟ್ಟುಕೊಂಡು, ಬೀchi ಅವರ ಎಲ್ಲ (ಒಂದೆರಡು ಬಿಟ್ಟು) ಪುಸ್ತಕಗನ್ನು ತರಿಸಿದೆ.


“ಸರಸ್ವತಿ ಸಂಹಾರ” ಓದಿಲ್ಲಿಕೆ ಶುರು ಮಾಡುವ ಮುನ್ನ ನಾನು ಇದು ಹಾಸ್ಯ ಕಾದಂಬರಿ, ಯಾರೋ ಭಾಷೆಯನ್ನು ತಪ್ಪಾಗಿ ಬಳಸಿದ್ದಾರೆ ಅದಕ್ಕೆ “ಸರಸ್ವತಿ ಸಂಹಾರ” ಅಂತ ಹೆಸರು ಇಟ್ಟಿದ್ದಾರೆ. ಕಾದಂಬರಿ ಮುಗಿಸಿದ ಮೇಲೆ ತಿಳೀತು ಇದು ನಿಜವಾಗಲು ಸರಸ್ವತಿ ಎಂಬ ಹುಡುಗಿಯ ಸಂಹಾರ ಎಂದು.


ಉತ್ತರ ಕರ್ನಾಟಕ ಭಾಷೆ ಈ ಪುಸ್ತಕದ ಒಂದು ಮಹತ್ವಪೂರ್ಣ ಅಂಶ. ಅವರು ಆಡುವ ಮಾತು, ಅವರ ಬೈಗುಳ, ತುಂಬ ಚೆನ್ನಾಗಿ ಬರೆದಿದ್ದರೆ. ಈ ಕಾದಂಬರಿಯ ಕತೆ ನಮ್ಮ ಕಾಲಕ್ಕೆ ಪ್ರಸಕ್ತ ಎನಿಸದ್ದಿದರು , ಕೆಲವೊಂದು ಕಡೆ ಈ ರೀತಿಯ ಜನ ನಮ್ಮ ಸಮಾಜದಲ್ಲಿ ಇದ್ದಾರೆ. ಗೌರಮ್ಮನಂತ ಅತ್ತೆ ಯಾರಿಗಾದರೂ ಸಿಕ್ಕರೆ, ಆ ಹುಡುಗಿ ದೇವರ ಕಣ್ಣಲ್ಲಿ ಮಹಾಪಾಪ ಮಾಡಿದ್ದಾಳೆ ಅಂತಾನೋ ಇಲ್ಲ ಅವರ ಅಪ್ಪ ಬ್ರಹ್ಮನಂದರಾಯರು. ಅಮ್ಮ ಅಚ್ಚಮ್ಮ ಹಾಗು ತಾತ ಭಾಸ್ಕರಭಟ್ಟರು ಮಾಡಿದ ಮಹಾಪರಾದ. ಸರಸ್ವತಿಯಾ ಜೀವನ ಒಂದು ದುರಂತ, ಇದು ಅವಳು ಮಾಡಿದ ತಪ್ಪಲ್ಲ, ಅವರ ತಂದೆ, ಬರಿ ಅವರ ಕೊಟ್ಟ ಮಾತು ಹುಳಿಸಿಕೊಳ್ಳುವುದಕ್ಕೆ, ಬಾಳನಂತಹ ಕಟುಕನ ಜೊತೆ ಮದುವೆ ಮಾಡಿ ಕೊನೆಗೆ ನರಳಿ ಸಾಯುತ್ತಾರೆ. ಒಂದೆಡೆ ಭಾಸ್ಕರಭಟ್ಟರು ತಾವು ಹೇಳಿದ ಮುನ್ಸೂಚನೆ ಯನ್ನು ಬ್ರಹ್ಮನಂದರಾಯರು ಕೆಳಲ್ಲಿಲ್ಲ , ಸರಸ್ವತಿಯಾ ಬಾಳು ತನ್ನ ಮಗನಿಂದ ಹಾಳಾಗಿ ಹೊಹಿತಲ್ಲ ಅಂತ ಚಿಂತೆ ಮಾಡಿ ಮನೆ ಬಿಡುತ್ತಾರೆ, ಇತ್ತ ಅಚ್ಚಮ್ಮ ತಮ್ಮ ಮಗಳ ಬಾಳನ್ನು ಗೊತಿದ್ದು ಕಟುಕರ ಕೈಯಲ್ಲಿ ಕೊಟ್ಟೆನಲ್ಲ ಅಂತ ದಿನವಿಡೀ ಕೊರುಗಿ ಕೊನೆಗೆ ತನ್ನ ದತ್ತು ಮಗ ಗಣಪತಿಯಾ ಜೊತೆ ಕಾಶಿಗೆ ಹೋಗಲು ಸಿದ್ದರಾಗುತ್ತಾರೆ. ಊರಿಗೆ ಊರೇ ಗೌರಮ್ಮನ ಬುದ್ದಿ ಗೊತಿದ್ದರು ಅವಳ ಬಯೀಗೆ ಹೆದರಿ ಸುಮನಿರುತ್ತಾರೆ. ಬಾಳ ಹನು ಹೇಳಿದ್ದೆ , ಮಾಡಿದ್ದೆ ಅಂತ ಮನ ಬಂದಂತೆ ಅಮ್ಮನ ಸೆರಗಿನ ಹಿಂದೆ ನಿಂತು ಸರಸ್ವತಿಯ ಜೀವನ ನರಕ ಮಾಡುತ್ತಾನೆ. ಈಗಿನ ಕಾಲದಲ್ಲಿ ಜನರು ಗೌರಮ್ಮ ಮತ್ತು ಬಾಳನ ರೀತಿ ಇರದಿದ್ದರೂ , ಹೆಣ್ಣಿನ ಶೋಷಣೆ ಇದ್ದ ಇದೆ. ಇಲ್ಲಿ ತಂದೆ ತಾಯೀಯ ಅಸಯಕತೆ, ಸಮಾಜದ ಮೌನ, ಅತ್ತೆ ಗಂಡನ ದೌರ್ಜನ್ಯ ಎಲ್ಲವನ್ನು ಕಣ್ಣಿಗೆ ಕಟ್ಟಿದಹಾಗೆ ಬೀchi ಅವರು ಚಿತ್ರಿಸಿದ್ದಾರೆ. ಈ ಕಾದಂಬರಿ ನನ್ನ ಕನ್ನಡ ಸಾಹಿತ್ಯ ಓದುವ ಪ್ರರಂಬಕ್ಕೆ ನಾನ್ನುಡಿ ಯಗ್ಗಿದ್ದು ಕುಷಿಯ ವಿಚಾರ.


ನನ್ನ ಮೇಚ್ಚಿನ ಬೈಗುಳ “ಯಾವ ರಂಡೇಗಂಡ ಬರೆದಿದ್ದಾನೋ ಅಂತೀನಿ, ಅವನ ಹೆಂಡತಿ ರಂಡಿ ಆಗ. ಬರದವನ ಕೈಗೆ ಕರೆ ನಾಗರಹಾವು ಕಡಿಯ. ಅಕ್ಷರ ಕಲಿತ ಮುಂಡೆಗಂಡರದೇ ಈ ಕೆಲಸ, ಅದಕ್ಕೆ ನನ್ನ ಕೂಸಿಗೆ ಇದ್ಯ ಇಲ್ಲದಿದ್ದರೆ ಪೀಡನೆ ಹೋತು ಅಂತ ಸಾಲಿಗೆ ಕೆಳಸಲಿಲ್ಲ ನಾನು, ಇದನ್ನು ಬರದಾತನ ತಾಯೀ ಬಸಿರು ಸೀಳಿ  ಬೀಳಬಾರದಗಿತ್ತೆ, ಅವನ ಹೆಣ ಹೋಗ, ಅವನ್ನ ಸುಟ್ಟು ಬರೀ ಕೈಲಿ ಬರ, ನನ್ನ ಕೈಯಾಗೇನಾದರೂ ಅವನು ಸಿಕ್ಕಿಗಿಕ್ಕಿದ್ದ ಅವನ ವಂಶ ಉದ್ದಾರ ಮಾಡ್ತಿದ್ದೆ.”





0 comments:

Post a Comment