Thursday, January 10, 2013

Filled Under:
, ,

ನಾಯಿ ನೆರಳು - ಎಸ್ ಎಲ್ ಭೈರಪ್ಪ

Naayi Neralu S L Bhyrappa




'ನಾಯಿ-ನೆರಳು' ಕಾದಂಬರಿ ಭಾರತಿಯ ಜನರ ಜೀವನ, ಭಕ್ತಿ, ಶ್ರದ್ದೆ ಮತ್ತು ಅವರಲ್ಲಿ ಮರೆಯಾಗುತ್ತಿರುವ ಭಾರತಿಯ ಸಂಸ್ಕೃತಿ ಬಗ್ಗೆ ಪುನರ್ಜನ್ಮ, ಕರ್ಮ, ಮತ್ತು ಸತ್ಯವನ್ನು ಆದಾರವಾಗಿಟ್ಟುಕೊಂಡು ಒಂದು ಸುಂದರ ಕಥೆಯನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಬರುವ ಅಚುತ್ಯನ ಪಾತ್ರ ಅಧುನಿಕ ಜೀವನ ಮುಖವಾದರೆ ಮಿಕ್ಕೆಲ್ಲ ಪಾತ್ರಗಳು ನಮ್ಮ ಪೂರ್ವಜರರನ್ನು ಪ್ರತಿನಿದಿಸುತ್ತದೆ.


ವಿಶ್ವೇಶ್ವರನು ಕ್ಷೆತ್ರಪಾಲನಾಗಿ ಜೋಹಿಸರ ಮನೀಯಲ್ಲಿ ಹುಟ್ಟುತ್ತಾನೆ, ಎರಡನೇ ವಯಸ್ಸಿನಿಂದ ಅವನು "ನನಗೆ ಮದುವೆಯಾಗಿದೆ. ಹೆಂಡ್ತಿ ಹೆಸ್ರು ವೆಂಕಮ್ಮ, , ಒಂದು ಗಂಡು ಮಗೂನೂ ಇದೆ" ಎಂದು ತನ್ನ ಹದಿನೆಂಟನೆ ವಯಸ್ಸಗುವರೆಗೂ ಹೇಳುತ್ತಿರುತ್ತಾನೆ. ಇವನಿಗೆ ಪ್ರೇತ, ಬೂತ ಹಿಡಿದೇ ಎಂದು, ಅದನ್ನು ಬಿಡಿಸಲು ನಾನ ರೀತಿಯ ಪ್ರಯತ್ವನ್ನು ಮಾಡುತ್ತಾರೆ. ಆದರೆ ಅಚ್ಚಣ್ಣಯ್ಯ ಬಂದು ಇವನು ನನ್ನ ಮಗನ ಪುನರ್ಜನ್ಮ ಎಂದಾಗ ಅಲ್ಲರಿಗೂ ಆಶ್ಚರ್ಯವಾಗುತ್ತದೆ. ವಿಶ್ವೇಶ್ವರ ತನಗೂ ಜೋಹಿಸರಿಗೂ ಯಾವುದೇ ಸಂಬಂದ ಇಲ್ಲ ಎಂದಮೇಲೆ ಅವನು ಅಚ್ಚಣ್ಣಯ್ಯನ ಜೋತೆ ಅವರ ಊರಿಗೆ ಹೊರಡುತ್ತಾನೆ. ವೆಂಕಮ್ಮನಿಗೆ ಗಂಡ ಸತ್ತು ಹುಟ್ಟಿ ಬಂದಿದ್ದಕೆ ಸಂತ್ಹೊಶವಾದರು, ಹದಿನೆಂಟು ವರ್ಷದ ಹುಡುಗನ ಜೊತೆ ಸಂಸಾರ ಹೇಗೆ ಮಾಡುವುದು ಎಂದು ಯೋಚನೆ. ಇದನ್ನು ಜೋಗಿನಾಥ ಬೆಟ್ಟದ ಜೋಗಯ್ಯನು ಆತ್ಮಕ್ಕೆ ವಯಸ್ಸಿಲ್ಲ, ದೇಹಕ್ಕೆ ಮಾತ್ರ ಎಂದು ಅವರ ಸಂಶಯವನ್ನು ನಿವಾರಿಸುತ್ತಾನೆ. ಆದರೆ ಅಚುತ್ಯನಿಗೆ ಹದಿನೆಂಟು ವರ್ಷದ ಹುಡುಗ ತನ್ನ ತಂದೆ ಎಂದು ಒಪ್ಪಿಕೊಳ್ಳಲು ನಾಚಿಕೆಯಾಗುತ್ತದೆ. ಬೆಂಗಳೂರಿನಲ್ಲಿ ಓದಿದ ಅಚುತ್ಯನು ವಿಶ್ವೇಶ್ವರನು ಮೋಸಗಾರ, ಅವನ ಮುಗ್ದ ತಾಯಿ ಮತ್ತು ಅಜ್ಜ-ಅಜ್ಜಿಯ ಅಸ್ತಿಯನ್ನು ಕಬಳಿಸಲು ಬಂದಿದ್ದಾನೆ ಎಂದು ತನ್ನ ಪ್ರೊಫೆಸರ್ ರಾಸ್ ರೊಂದಿಗೆ ವಿಮರ್ಶಿಸುತ್ತಾನೆ. ವಿಶ್ವೇಶ್ವರನು ಕರಿಯನ ಮಗಳನ್ನು ಬಸುರಿ ಮಾಡಿ ಅವಳೊಂದಿಗೆ ಹೊಡೀಹೊದಾಗ, ಅಚುತ್ಯನು ಯಾರಿಗೂ ತಿಳಿಯದ ಹಾಗೆ ವಿಶ್ವೇಶ್ವರನುನ್ನು ಜೈಲಿಗೆ ಹಾಕಿಸುತ್ತಾನೆ. ಮುಂದೆ ಕದಮ್ಬೈಯಲ್ಲಿ ನಡೆಯುವ ಘಟನೆಗಳು, ವಿಶ್ವೇಶ್ವರನು ಹುಟ್ಟಿನ ಗುಟ್ಟು, ಅಚುತ್ಯನಿಗೆ ಮಕ್ಕಳಾಗಾದಾಗ ಅಮ್ಮನ್ನು ಹುಡುಕುವುದು, ......... ಎಲ್ಲಾ ಪಾತ್ರಗಳು ತಮ್ಮ ಪ್ರೂವದಲ್ಲಿ ಮಾಡಿದ ಕರ್ಮಗಳ ಅನುಗುಣವಾಗಿ ಜೀವನವನ್ನು ಅನುಭವಿಸುತ್ತಾರೆ.


ಭೈರಪ್ಪನವರು ಇಲ್ಲಿ ನಮ್ಮ ಕರ್ಮಗಳನ್ನು ನಾಯಿಗೆ ಹೋಲಿಸಿ, ನಾವು ಮಾಡುವ ಕೆಲಸಳ ಕರ್ಮವು ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತದೆ ಎಂದು ಚಿತ್ರಿಸಿದ್ದಾರೆ. ಕಾಲೇಜಿನಲ್ಲಿ ಓದಿದ ಯುವ ಜನತೆ ತಮ್ಮ ತಂದೆ ತಾಯಿ ಮಾಡುವ ಕೆಲಸಗಳು ಅವ್ಯಜ್ಞಾನಿಕ ಮತ್ತು ಕುರುಡು ಸಿದ್ದಾಂತಗಳು ಎಂದುಕೊಳ್ಳುತ್ತಾರೆ. ಆದರೆ ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಈಗಿರುವ ಯುವ ಜನತೆ ಮಕ್ಕಳು ಹೊಳೆಯುವದೆಲ್ಲ ಚಿನ್ನ ಎನ್ನುವಂತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಭಾರತಿಯ ಸಂಸ್ಕೃತಿ ವ್ಯಜ್ಞಾನಿಕ ದೃಷ್ಟಿ ಇಂದ ಮತ್ತು ಜೀವನ ನಡೆಸುವ ದೃಷ್ಟಿಯಿಂದ  ಅದರ್ಶಮಯವದುದು.


'ನಾಯಿ-ನೆರಳು' ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ನನನ್ನು ಯೋಚನೆಗೆ ಮುಳಿಗಿಸಿದ್ದು ಒಂದು ಸಣ್ಣ ಪಾತ್ರ, ಪ್ರೊಫೆಸರ್ ರಾಸ್.  ಅವರು ಹೇಳುವ ಪ್ರಕಾರ ಪುನರ್ಜನ್ಮ ವ್ಯಜ್ಞಾನಿಕ ದೃಷ್ಟಿಂದ ಅಸಾದ್ಯ ಮತ್ತು ಅದನ್ನು ನಂಬಬಾರದು ಆದರೆ ಮರಿಯು ಮದುವೆಯಾಗದೆ ಏಸುವಿಗೆ ಜನ್ಮ ನೀಡುವುದು ಮಾತ್ರ ದೇವರ ಮೇಲಿನ ನಂಬಿಕೆ ಮತ್ತು ಅಂದನ್ನು ಮಾತ್ರ ನಂಬಬಹುದು ಎಂದು. ಇಲ್ಲಿ ನಾನು ನೋಡಿದ ದ್ವಂದ ವಾದ , ಯೇಸು ಮಾತ್ರ ನಿಜವಾದ ದೇವರು ಮತ್ತು ಭಾರತೀಯರು ನಂಬುವ ದೇವರು ಬರಿ ಕಲ್ಲುಗಳು ನಂಬಾರದು. ಈ ವಿಚಾರವು ಪಾತ್ರಕ್ಕೆ ಮಾತ್ರ ಸೀಮಿತವಾದ್ದು.




0 comments:

Post a Comment