Saturday, July 19, 2014

ಗೂಢಾಚಾರಿಯ ಗುರು - ಎನ್ ನರಸಿಂಹಯ್ಯ

Goodachariya Guru - Narashimaiah N






ಕಾದಂಬರಿಯ ಹೆಸರೇ ಹೇಳುವಂತೆ ಇದೊಂದು ಪತ್ತೇದಾರಿ ಕಾದಂಬರಿ. ಈ ಕಾದಂಬರಿ ಹೆಣ್ಣು ಹೊನ್ನು ಮಣ್ಣು ಜನರಿಗೆ ಅದರಲ್ಲೂ ಸಂಬಂಧಿಕರಲ್ಲಿ ಮತ್ತು ಮಕ್ಕಳಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಈ ಕಾದಂಬರಿಯಲ್ಲಿ ನರಸಿಂಹಯ್ಯನವರು ತುಂಬ ಸರಳವಾಗಿ ಹೇಳಿದ್ದಾರೆ. ಆಂಗ್ಲ ಭಾಷೆಯ ಪತ್ತೇದಾರಿ ಓದುವವರಿಗೆ ನರಸಿಂಹಯ್ಯನವರು ಕಾದಂಬರಿ ತುಂಬ ಸರಳವಾದುದ್ದು ಮತ್ತು ನೆರವಾದುದ್ದು ಎನಿಸಬಹುದು, ಅದು ನಿಜ ಕೂಡ ಆದರೆ ಅವರ ಒಂದೊಂದು ಕಾದಂಬರಿಯು ಜೀವನಕ್ಕೆ ಒದೊಂದು ಪಾಠ ಹೆಲಿಕೊದುತ್ತದೆ. 

ಹರಿಯಪ್ಪ ಪತ್ತೇದಾರಿ ಮಧುಸೂದನನ್ನು ತಮ್ಮ ಜೀವಕ್ಕೆ ಆಪಾಯವಿದೆ ಎಂದು ಹುಡುಕಿಕೊಂಡು ಬರುತ್ತಾರೆ. ಹರಿಯಪ್ಪನನ್ನು ಕಾಫಿ ಕುಡಿಯುವಾಗ ವಿಷ ಬೆರಸಿ, ಟ್ಯಾಕ್ಸಿ ಯಲ್ಲಿ ಮತ್ತು ದೊಣ್ಣೆಯಿಂದ ಹೊಡೆದು ಸಾಯಿಸಲು ಪ್ರಯತ್ನಿಸಿದ್ದಾರೆ, ಇನ್ನು ಮುಂದೆ ಏನು ಕಾದಿಯೋ ಎಂದು ಜೀವಕ್ಕೆ ಹೆದರಿ ಮಧುಸೂದನನ್ನು ಕಂಡು ಅವರ ಸಮಸ್ಯೆಗೆ ಪರಿಹಾರ ಹುಡುಕಲು ಕೆಲುತ್ತಾರೆ. ಅವರ ತಮ್ಮ ಜೂಜಿನಲ್ಲಿ ಎಲ್ಲ ಅಸ್ತಿ ಕಳೆದುಕೊಂಡಿರುತ್ತಾನೆ, ಅವರ ಅಳಿಯ ತಾಗಿಯ ಮಗ ಮತ್ತು ಅವರ ತಂಗಿ ಸತ್ತ ಮೇಲೆ ಅವನ್ನು ತಂದು ಸಾಕಿ ಅವರ ಮಗಳಿಗೆ ಕೊಟ್ಟು ಮಾಡುವೆ ಮಾಡುತ್ತಾರೆ, ಇವರಿಬ್ಬರು ಮಧುಸೂದನ ಮುಂದೆ ಸಂಶಯಾಸ್ಪದ ವ್ಯಕ್ತಿಗಳು. ಹರಿಯಪ್ಪನವರು ತಮ್ಮ ಆಸ್ತಿಯಲ್ಲ ಅವರ ಮಗಳ ಹೆಸರಿಗೆ ಮತ್ತು ಮೊಮ್ಮೊಗು ಹುಟ್ಟಿದ ಮೇಲೆ ಅದಕ್ಕೆ ಸೇರುವಾಗೆ ವಿಲ್ ಬರೆದಿದ್ದಾರೆ, ಅದಕ್ಕೆ ಕೋಪಗೊಂಡ ಅಳಿಯ ಕೊಲೆಯ ಪ್ರಯತ್ನ ಮಾದಿರಬಹುದು.

ಕಾದಂಬರಿ ಯಾವ ಯಾವ ತಿರುವು ಪಡೆದುಕೊಳ್ಳುತ್ತದೆ ಮತ್ತು ಕೊಲೆ ಯತ್ನ ಮಾಡಿದವರು ಯಾರು ಎಂದು ಓದಿ ನೋಡಬೇಕು. ನರಸಿಂಹಯ್ಯನವರು ಕಾದಂಬರಿಗಳು ತುಂಬ ಕುತೂಹಲಕಾರಿಯಾಗಿ ಮತ್ತು ಸರಳವಾಗಿ ಮತ್ತು ಓದುವವರ ಬಹಳ ಸಮಯ ಹಾಳುಮಾದೆ ಶೀಗ್ರದಲ್ಲಿ ಮುಗಿಯುವ ಹಾಗೆ ಚೊಕ್ಕವಾಗಿ ಬರೆಯುತ್ತಾರೆ. 




0 comments:

Post a Comment