Sunday, July 27, 2014

Filled Under:
, ,

ಮಾರ್ಜಾಲ ಸನ್ಯಾಸಿ - ಅ. ನ. ಕೃ

Maarjaala Sanyasi - A Na Krishnaraya




ಬೆಳ್ಳಿಗ್ಗೆ ಎದ್ದು ಯಾವುದೇ ಕನ್ನಡ ಚಾನೆಲ್ ಹಾಕಿದರೆ ಬರುವುದು ಅಂದಿನ ಜೋತಿಷ್ಯ, ಇದು ಒಂದಲ್ಲ ಎಲ್ಲಾ ಚನ್ನೆಲ್ ನಲ್ಲೂ ಕೂಡು, ಯಾಕೆ? ಯಾಕೆಂದರೆ ಚಾನೆಲ್ ಗೆ ಟಿ ಅರ್ ಪಿ ಬೇಕು ಮತ್ತು ಜನರಿಗೆ ತಮ್ಮ ಕಷ್ಟಗಳು ದೂರವಾಗಬೇಕು. ಒಂದು ಚಾನೆಲ್ ನಲ್ಲಿ ಬರುವ ಫೋನ್ ಕರೆಗಳನ್ನು ಆಲಿಸಿದರೆ ಒಬ್ಬರಿಗೂ ಒಂದೊಂದು ಕಷ್ಟಗಳು ಅದನ್ನು ನಿವಾರಿಸಲು ಕಾದಿ ಹುಟ್ಟು ಜನರು ಒಂದೊಂದು ಉಪಾಯಗಳನ್ನು ಹೇಳುತ್ತಾರೆ. ಅದನ್ನೆಲ್ಲಾ ಮಾಡಿದರೆ ಅವರ ಕಷ್ಟಗಳು ನಿವಾರಣೆಯಾಗುತ್ತದ, ಇಲ್ಲ ಮತ್ತೆ ಫೋನ್ ಮಾಡುವುದು ಯಾಕೆ? ಯಾಕೆಂದರೆ ಅವರಿಗೆ ತಮ್ಮ ಕಷ್ಟಗಳನ್ನು ನಿವಾರಿಸಲು ಆಸ್ವಷಣೆಗಳು ಬೇಕು ಮತ್ತು ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಒಂದು ಸುಲುಭ ಮಾರ್ಗ ಬೇಕು, ಇದನ್ನು ಅರ್ಥ ಮಾಡಿಕೊಂಡ ಚಾನೆಲ್ ಗಳು ಮತ್ತು ಸುಳ್ಳು ಜೋತಿಷ್ಯ ಶಾಸ್ತ್ರಿಗಳು ಗೊಡ್ಡು ಆಶ್ವಾಷನೆಗಳ್ಳನ್ನು ಕೊಟ್ಟು ಇಬ್ಬರು ದುಡ್ಡು ಮಾಡುತ್ತಾರೆ. ಇದೆ ಅ. ನ. ಕೃ ರವರ 'ಮಾರ್ಜಾಲ ಸನ್ಯಾಸಿಯ' ಕಥೆಯ ಎಳೆ. ನನಗೆ ಜೋತಿಷ್ಯದಲ್ಲಿ ನಬಿಕೆ ಇದ್ದರು ಪ್ರತಿ ದಿನ ಚನ್ನೆಲ್ ಗಳಲ್ಲ್ಲಿ ಹೇಳುವ ಊಹಾಪೋಹಗಳಲ್ಲಿ ಅಲ್ಲ.

ಮಹಾದೇವ ಶಾಸ್ತ್ರಿಗಳು ತುಂಬ ಮೇಧಾವಿಗಳು ಮತ್ತು ಜೋತಿಷ್ಯ ಹೇಳುವುದರಲ್ಲಿ ಅಷ್ಟೇ ನಿಪುನರು, ಅವರ ಮಗ ನರಹರಿ ಕೂಡ ಅಷ್ಟೇ. ನರಹರಿ ಮಾಡುವೆ ಮಾಡಿಕೊಳ್ಳಲು ಒಪ್ಪಿರುವುದಿಲ್ಲ ಯಾಕೆಂದರೆ ಅವನ ಭವಿಷ್ಯದಲ್ಲಿ ಮದುವೆಯಾದರೆ ಮರಣ ಎಂದು ಬರೆದಿರುತ್ತದೆ ಎಂದು ತಂದೆಗೆ ಹೇಳಿದಾಗ ಅವರು ಅವನ ಜಾತಕ ನೋಡಿ ನಿನ್ನ ಶಾಸ್ತ್ರ ತಪ್ಪಿ ಎಂದು ಹೇಳಿ ಮಾಡುವೆ ಮಾದಿಸುತ್ತಾರೆ. ಮಾಡುವೆಯಾದ ಮೇಲೆ ನರಹರಿ ಸಾಯುತ್ತಾನೆ. ತಂದೆಗೆ ತನ್ನ ತಪ್ಪು ಅರಿವಾಗಿ ಜೋತಿಷ್ಯ ಹೇಳುವುದನ್ನು ಬಿಡುತ್ತಾರೆ ಮತ್ತು ಅವರ ಆರೈಕೆಯನ್ನು ಸೇಸೋ ನೋಡಿಕೊಂಡು ಮಾವನ ಮನೆಯಲ್ಲಿ ಇರುತ್ತಾಳೆ/

ಕಷ್ಯಪ್ನವರ ಮಗ ಜೋತಿಷ್ಯದಲ್ಲಿ ತುಂಬ ಆಸಕ್ತಿ. ಕಷ್ಯಪ್ನವರು ಮಹಾದೇವಶಾಸ್ತ್ರಿಗಳ ಮನೆಗೆ ಹೋಗಿ ಅವರ ಮಗನಿಗೆ ಜೋತಿಷ್ಯ ಹೇಳಿಕೊಡಿ ಎಂದು ಒಪ್ಪಿಸುವಷ್ಟ್ರಲ್ಲಿ ಸಾಕುಸಾಕಗುತ್ತದೆ. ಸುಬ್ಬು ಕಷ್ಯಪ್ನವರ ಮಗ ಡಿಗ್ರಿ ಓದಿಕೊಂಡು ಮಹಾದೇವಶಾಸ್ತ್ರಿಗಳ ಮನೆಗೆ ಹೋಗಿ ಜೋತಿಷ್ಯ ಕಲಿಯುತ್ತಿರುತ್ತಾನೆ. ಅವರ ಸೊಸೆಗೆ ಲಕ್ಷ್ಮದೇವಿಗೆ ಸುಬ್ಬು ಮೇಲೆ ಇಷ್ಟವಾಗಿ ಶಾಸ್ತ್ರಿಗಳು ಮನೆಯಲ್ಲಿ ಇಲ್ಲವಾದಾಗ ಸುಬ್ಬುವನ್ನು ಮೋಹಿಸುತ್ತಾಳೆ. ಸುಬ್ಬುಗೆ ಮದುವೆಯಾಗಿಗಿದ್ದರು ಅವನು ಇದಕ್ಕೆ ಒಪ್ಪಿ ಗುರುದ್ರೋಹಕ್ಕೆ ಕೈ ಹಾಕುತ್ತಾನೆ.

ಲಕ್ಷ್ಮಿಯ ಮೋಹಕ್ಕೆ ಸಿಲುಕು ಅವನು ಮನೆ ಬಿಟ್ಟು ಅವಳೊಂದಿಗೆ ಬೊಂಬೆಗೆ ಹೋಗಿ ಜೋತಿಷ್ಯ ಹೇಳಲು ಶುರು ಮಾದುತ್ತಾನೆ. ಅವನ ಜೋತಿಷ್ಯಕೀ ಮರುಳಾಗಿ ಹೋಟೆಲ್ ಮಾಲೀಕರು ಸಿನೆಮಾ ತಾರೆಯರು. ಸ್ಟುಡಿಯೋ ಮಾಲೀಕರು, ನಿರ್ದೆಶಕರು ಮುಗಿಬಿಳುತ್ತಾರೆ. ಇದನ್ನು ಕಂಡ ಸುಬ್ಬು ಸುಳ್ಳು ಸುಳ್ಳು ಜೋತಿಷ್ಯ ಹೇಳಲು ಶುರು ಮಾಡುತ್ತಾನೆ. ಅವನು ಬೆಂಗಳೂರುರಿಗೆ ಅವರ ಅಮ್ಮನನ್ನು ನೋಡಲು ಬಂದಿರುವಾಗ ಲಕ್ಷ್ಮಿ ಸ್ಟುಡಿಯೋ ಮಾಲಿಕರೊಂಡಿಕೆ ಸಂಬಂಧ ಬೆಳೆಸುತ್ತಾಳೆ. ಸುಬ್ಬು ಅವರ ತಾಯಿಯ ಸಂಸ್ಕರ ಮುಗಿಸಿಕೊಂಡು ಬಾಂಬೆಗೆ ಹೋಗುವಾಗ ಅವನಿಗೆ ಲಕ್ಷ್ಮಿಯ ನಿಜ ಸ್ವರೋಪ್ಪ ತಿಳಿದು ದುಃಖಿಸುತ್ತಾನೆ.




0 comments:

Post a Comment