Friday, August 4, 2017

ಕುಂಜಾಲು ಕಣಿವೆಯ ಕೆಂಪು - ಡಿಸೋಜ ನಾ

Kunjalu Kaniveya Kempu Hoovu  - Dsouza Na


ಮುನ್ನುಡಿಯಿಂದ:

೧೯೮೭ರಲ್ಲಿ ಈ ಕೃತಿ ಪ್ರಕಟವಾದಾಗ ನಾವು ಪರಿಸರದ ಬಗ್ಗೆ ಒಂದು ಬಗೆಯ ಅವ್ಗಜ್ಞೆಯನ್ನು ಬೆಳೆಸಿಕೊಂಡಿದ್ದೆವು. ಇಂದು ಈ ತಿರಸ್ಕಾರ ಮತ್ತೊ ಹೆಚ್ಚಾಗಿದೆ. ಇಂದು ಗಣಿಗಾರಿಕೆ, ನಗರ ನಿರ್ಮಾಣ, ಅಣೆಕಟ್ಟುಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ವ್ಯವಸಾಯ, ವಿದ್ಯುತ್ ಮಾರ್ಗಗಳು, ಕಾರ್ಖಾನೆಗಳು ಎಂದೆಲ್ಲ ಪರಿಸರದ ಮೇಲೆ ಅವ್ಯಾಹತವಾದ ದಬ್ಬಾಳಿಕೆ ನೆಡೆಯುತ್ತಿದೆ. ನಿರಂತರವಾದ ಈ ಪರಿಸರ ನಾಶ ನಮ್ಮ ಪಾಲಿಗೆ ಪರಿಸರ ಶಾಪವಾಗಿ ಪರಿಣಮಿಸಿದೆ. ನಾವು ಉಳಿಸಿಕೊಂಡುದಕ್ಕಿಂತ ಕಳೆದುಕೊಂಡಿರುವುದೇ ಅಧಿಕವಾಗಿದೆ.

ತಂದೆಯಾದವನು ಕಂಡ ಬದುಕನ್ನು ಮಗ ನೋಡಲು ಹೊರಟಾಗ ಅವನಿಗೆ ನಿರಾಸೆಯಾಗುತ್ತದೆ. ತನ್ನ ಸುತ್ತ ಒಂದು ವಿಷಾದದ ಛಾಯೆಯೇ ಕವಿದಿರುವದನ್ನೇ ಆತ ಕಾಣುತ್ತಾನೆ. ನಮ್ಮೆಲ್ಲರ ಕಥೆಯು ಇದೇ ಆಗಿದೆ ಅನ್ನುವುದು ಈ ಕಾದಂಬರಿಯ ಆಶಯ ಕೂಡ. 'ತರಂಗ' ಪತ್ರಿಕೆಯ ವಿಶೇಷಾಂಕದಲ್ಲಿ ಈ ಕಾದಂಬರಿ ಪ್ರಕಟವಾದಾಗ ಓದಿ ಮೆಚ್ಚಿಕೊಂಡವರು ಇಂದಿಗೂ ಇದನ್ನ ಮರೆತಿಲ್ಲ, ಆದರೆ ನಾವು ನಮ್ಮ ಪರಿಸರವನ್ನು ಮಾತ್ರ ಉಳಿಸಿಕೊಂಡು ಬಂದಿಲ್ಲ ಅನ್ನುವುದೇ ಒಂದು ದುರಂತವೇ ಸರಿ ಅನಿಸತ್ತದೆ ನನಗೆ.
 







0 comments:

Post a Comment