Monday, June 23, 2014

Filled Under:
, ,

ನಿರಾಕರಣ - ಎಸ್ ಎಲ್ ಭೈರಪ್ಪ

Nirakarana - S L Bhyrappa



ಒಬ್ಬ ಮನುಷ್ಯ ಹುಟ್ಟಿದ ಮೇಲೆ  ಕಷ್ಟಗಳು ತಪ್ಪಿದ್ದಲ್ಲ. ಕಷ್ಟಗಳನ್ನು ನಿವಾರಿಸಲು ಇನ್ನು ಕಷ್ಟಗಳನ್ನು ಅನುಭವಿಸುತ್ತಾರೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಎಲ್ಲಾ ಪ್ರಯತ್ನ ಮಾಡಿದ ಮೇಲೆ ಕಷ್ಟ ತೀರದಿದ್ದರೆ ಕೆಟ್ಟ ದಾರಿ ಹಿಡಿಯುತ್ತಾರೆ, ಅಡ್ಡ ದಾರಿ ಹುಡುಕುತ್ತಾರೆ, ಇನ್ನು ಕೆಲವರು ಕಷ್ಟ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಒಳ್ಳೆ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಆಗುವುದಿಲ್ಲ, ಕೆಟ್ಟ ಕೆಲಸ ಮಾಡುವುದಿಲ್ಲ ಅಂಥವರು ಸನ್ಯಸವೊ ಇಲ್ಲ ವನವಾಸಕ್ಕೋ ಹೊರಟುಬಿಡುತ್ತಾರೆ. ಇಂತವರು ತಮ್ಮ ಜವಬ್ದಾರಿಯನ್ನು ಮುಗಿಸಿ ಇಲ್ಲವೇ ಬೇರೆಯವರಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಾರೆ. ಒಬ್ಬನೇ ತಂದೆ ಮತ್ತು ಅವನಿಗೆ ಐದು ಮಕ್ಕಳು ಹಾಗು ಹೆಂಡತಿ ಇಲ್ಲ ಎಂದರೆ ಅಂತವನು ಏನು ಮಾದುತ್ತಾನೆ.... ಮಕ್ಕಳನ್ನು ದತ್ತು ಕೊಡಲು ನಿರ್ಧರಿಸಿ ಪತ್ರಿಕೆಯಲ್ಲಿ ಜಾಹಿರಾತು ನೀಡುತ್ತಾನೆ. ಇದೆ ಭೈರಪ್ಪನವರ 'ನಿರಾಕರಣೆ'ಯಾ ಕಥೆ. 

ಬೇರೆ ದಾರಿ ಕಾಣದೆ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು ನರಹರಿ ತನ್ನ ಮಕ್ಕಳ ಬಳಿ ಹೆಚ್ಚು ಸಮಯ ಕಳೆಯಲೆಂದು ಪ್ರತಿ ದಿನ ಸಂಜೆ ಐದಕ್ಕೆ ಆಫೀಸ್ ಇಂದ ಹೊರಡಲು ನಿರದರಿಸುತ್ತಾನೆ. ಜಾಹಿರಾತು ಕೊಟ್ಟ ಒಂದು ಎರಡು ತಿಂಗಳಲ್ಲಿ ಐದು ಮಕ್ಕಳ್ಳನ್ನು ಒಳ್ಳೆ ಒಳ್ಳೆ ಮನೆಗೆ ಶೆಣೈ ಸಹಾಯದಿಂದ ದತ್ತು ಕೊಟ್ಟು ಸನ್ಯಾಸಿಯಾಗುತ್ತಾನೆ. ಸನ್ಯಾಸಿಯಾಗಿ ಅವನು ಊರೂರು ಅಲೆಯುತ್ತಾನೆ. ಹಿಮಾಲಯ ಏರುತ್ತಾನೆ, ನದಿಯಲ್ಲಿ ಈಜುತ್ತಾನೆ, ಬಿಕ್ಷೆ ಬೇಡಿ ಊಟ ಮಾಡುತ್ತಾನೆ. ಆದರೆ ಅವನು ಪೂರ್ವದಲ್ಲಿ ನಿರ್ಧರಿಸಿದಂತೆ ತನ್ನ ಎಲ್ಲ ಸಂಭಂದಗಳನ್ನು ಕಳೆದು ಕೊಳ್ಳಲು ಆಗುವುದಿಲ್ಲ. ಅವನಿಗೆ ತನ್ನ ಮಕ್ಕಳ ನೆನಪು, ಹೆಂಡತಿಯ ನೆನಪು ಮತ್ತು ತನ್ನ ಜೀವನದ ನೆನಪು ಎಲ್ಲ ಕಡೆಯಲ್ಲೂ ಬರುತಿರುತ್ತದೆ. ತಾನು ಮಾಡಿದ ನಿರ್ಧಾರ ತಪ್ಪಿರಬಹುದು, ತಾನು ಇನ್ನು ಕಷ್ಟ ಪಟ್ಟು ಕೆಲೆಸ ಮಾಡಿದ್ದರೆ ಮಕ್ಕಳನ್ನು ಸಾಕಬಹುದಿತ್ತೇನೋ, ದತ್ತು ಕೊಟ್ಟು ತಪ್ಪು ಮಾಡಿದೆ ಎಂದನಿಸುತ್ತದೆ. ಅತ್ತ ಪೂರ್ಣ ಸನ್ಯಾಸಿಯಾಗದೆ ಇತ್ತ ಪೂರ್ತಿ ಸಂಸಾರಿಯಾಗದೆ ಒದ್ದಾಡುತ್ತಾನೆ. ಕೊನೆಗೆ ಮತ್ತೆ ಮರಳಿ ಮುಂಬೈಗೆ ಬಂದು ಸೇರುತ್ತಾನೆ. 

ಅವನು ಬಂಡ ಮೇಲೆ ಮಕ್ಕಳ ನೆನಪು ಕಾಡುತ್ತದೆ. ಆದರೆ ಅವನು ದತ್ತು ಕೊಟ್ಟ ಮೇಲೆ ನೋಡಲು ಹೋಗಬಾರದು ಎಂದು ನಿರ್ಧರಿಸುತ್ತಾನೆ. ಅವನು ಕೆಲಸ ಮಾಡುವ ಹಾಸ್ಟೆಲ್ ನ ಲೆಕ್ಕ ಬರೆಯುವ ರಾಳೆ ಅವರಿಗೆ ತಿಳಿಯದ ಹಾಗೆ ಎಲ್ಲಾ ದತ್ತು ಮಕ್ಕಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರುತ್ತಾನೆ. ಅವರು ಏಗಿದ್ದಾರೆ, ಅವರೆಲ್ಲ ಏನು ಮಾಡುತ್ತಿದ್ದಾರೆ, ಅವರ ಜೀವನದ ಸ್ಥಿತಿ ಹೇಗಿದೆ ಎನ್ನುವುದನ್ನು ಅವನಿಗೆ ಹೇಳುತ್ತಾರೆ (ಅದನ್ನು ನೀವು ಓದಿ ತಿಳಿಯಿರಿ)

’ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ - ವಿದ್ಯುತ್‍ಶಾಕ್‍ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ’ ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ.

’ನೀರು ಹರಿಯದಿದ್ದಾಗಲೂ ಅದನ್ನು ನದಿ ಅನ್ನಬಹುದೇ?’

’ಇಲ್ಲ. ಅದು ಬರೀ ರೂಢಿಯ ಸಂಕೇತ. ಹರಿದರೆ ಮಾತ್ರ ಕಾಲ, ಹೆಪ್ಪುಗಟ್ಟಿದರೆ ಅಲ್ಲ..... ಉಷ್ಣ ಚಂಚಲ, ಶೀತ ಅಚಲ.’

ಹೆಪ್ಪುಗಟ್ಟಲೇಬೇಕೆಂದು ಬಯಲನ್ನು ನಿರಾಕರಿಸಿ ಬೆಟ್ಟವನ್ನು ಏರುತ್ತಾನೆ.

ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ಕಾದಂಬರೀ ಪ್ರಪಂಚದಲ್ಲಿ ಇದೊಂದು ವಿನೂತನ ಕೃತಿ.





0 comments:

Post a Comment