Wednesday, October 3, 2012

ಕಿರಗೂರಿನ ಗಯ್ಯಾಳಿಗಳು - ಪೂರ್ಣಚಂದ್ರ ತೇಜಸ್ವಿ

Kiragoorina Gayyaligalu - Poornachandra Thejasvi



ಕಿರಗೂರಿನ ಗಯ್ಯಾಳಿಗಳು ಪೂರ್ಣಚಂದ್ರ ತೇಜಸ್ವಿಯವರ ಕಥಾ ಸಂಕಲನ. ಇದರಲ್ಲಿ ಇರುವ ಕಥೆಗಳು


೧. ಕಿರಗೂರಿನ ಗಯ್ಯಾಳಿಗಳು
೨. ಕೃಷ್ಣೇಗೌಡನ ಆನೆ
೩. ಮಾಯಾ ಮೃಗ
೪. ರಹಸ್ಯ ವಿಶ್ವ


ಕಿರಗೂರಿನ ಗಯ್ಯಾಳಿಗಳು ಹೆಸರೇ ಹೇಳುವಂತೆ ಇದು ಕಿರಗೂರಿನ ಹೆಂಗಸರ ಕಥೆ. ಕಿರಗೂರಿನ ಹೆಂಗಸರು ತಮ್ಮ ಉಜ್ವಲ ಸೌಂದರ್ಯದಿಂದ ನೋಡಿದವರನ್ನು ಬೆಚ್ಚಿ ಬೀಳಿಸುತ್ತಿದ್ದರು. ಇಲ್ಲಿನ ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು. ಮೂರು ರಾತ್ರಿ ಮೂರು ದಿನ ಬೀಸಿದ ಬಿರುಗಾಳಿಂದ ಸೀಗೆಗೌಡರ ಮನೆ ಹತ್ತಿರ ಇದ್ದ ದೊಡ್ಡ ಮರ ಗಾಳಿ ಬೀಸಿದ ದಿಕ್ಕೆಗೆ ವಾಲಿಕೊಂಡಿತ್ತು. ಇದನ್ನು ಕಡಿಯಲು ಊರ ಹರಿಜನರ ಮಾರನು ಮತ್ತು ಸಿದ್ದನಿಗು ಸೀಗೆಗೌದರು ಹೇಳಿದರು. ಮರದ ಬೃಹದಾಕಾರ ಮತ್ತು ಜಟಿಲತೆ ಇಂದ ಮರವನ್ನು ಕಡಿಯಲಾಗಲ್ಲಿಲ್ಲ. ಶಂಕ್ರಪ್ಪನ ದುರುದ್ದೇಶದಿಂದ ಭ್ಯರಪ್ಪ, ಸುಬ್ಬಯ್ಯ, ಸೀಗೇಗೌಡ, ರಾಮಣ್ಣ ಮತ್ತು ಕಾಳೇಗೌಡ ಊರ ಪೋಲಿಸ್ ಸ್ಟೇಷನ್ನಲ್ಲಿ ರಾತ್ರಿ ಕಳೆದರು. ಇದು ಹರಿಜನರಿಂದ ಎಂದು ತಿಳಿದು ಮರ ಕಡಿಯಲು ಶಿಮೊಗ್ಗದಿಂದ ಸೋನ್ಸ್ ಮತ್ತು ಮಲಯಾಳಿಯನ್ನು ಕರೆಸಿದರು. ಹಾಗೋ ಹೀಗೋ ಮಾಡಿ ಮರ ಕಡಿದರು ಕಡಿದ ಮರ ಊರಳಿಸಲು ಹೋಗು ಭ್ಯ್ರಪ್ಪನ ಬೆನ್ನಿನ ಮೂಳೆಗೆ ಪೆಟ್ಟಾಯಿತು. ಕರಿಯ ಊರಿಗೆ ಮೂಳೆ ಹುಳುಕು ತೆಗೆದರು ಮರ ಕಡಿಯಲು ಹರಿಜನರ ಬದಲು ಬೇರೆಯವರಿ ಊಸ್ತೆವಾರಿ ಕೊಟ್ಟಿದ್ದರಿಂದ ಹುಳುಕು ತೆಗೆಯಲು ಒಪ್ಪಲ್ಲಿಲ್ಲ. ಇದರಿಂದ ಆದ ರಾದ್ದಾಂತ, ಹೆಂಗಸರ ಹಿಂಸಾಚಾರ, ಕಳ್ಳ ಬಟ್ಟಿ ಅಂಗಡಿ ದ್ವಂಸ, ಪ್ಪೋರ್ನಚಂದ್ರ ತೇಜಸ್ವಿಯವರು ಈ ಕಥೆಯಲ್ಲಿ ಚಿತ್ರಿಸಿದ್ದಾರೆ.


"ಮಾಯಾಮೃಗ" ಕತೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಂದ ರಾಷ್ಟ್ರದ ಅತ್ಯುತ್ತಮ ಹತ್ತು ಕತೆಗಳಲ್ಲಿ ಒಂದೆಂದು ಪರಿಗಣಿಸಿ "ಕಥಾ ರಾಷ್ಟ್ರೀಯ ಪ್ರಶಸ್ತಿ" ಕೊಡಲಾಗಿದೆ. "ಕೃಷ್ಣೇಗೌಡನ ಆನೆ" ಕತೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಮಲಯಾಳಿ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ.





1 comments:

  1. Love your writings as always. One of the greatest writer and soul.

    ReplyDelete