Wednesday, May 28, 2014

ಅಜ್ಞಾತ ಸುಂದರಿ - ಸೂರ್ಯದೇವರ ರಾಮಮೊಹನರಾವ್ ( ಕನ್ನಡಕ್ಕೆ - ಅಜ್ಜಂಪೂರ ಜೆ. ಸೂರಿ )

Agnyata Sundari - Suryadevavara Raamamohanrao 




ಈ ಕಾದಂಬರಿ ಓದುವಾಗ ನನ್ನನ್ನು "ಬೆಳದಿಂಗಳ ಬಾಲೆ" ಕನ್ನಡದ ಚಲನಚಿತ್ರ ತುಂಬಾ ನೆನಪಾಯಿತು. ಸಿನಿಮಾ ನೋಡುವ ಎಲ್ಲರು ಕನ್ನಡದ 'ಬೆಳದಿಂಗಳ ಬಾಲೆ' ಚಿತ್ರ ಗೊತ್ತು, ಯಾಕೆ ಅಂದ್ರೆ ಅದು ಅಂಥ ಒಂದು ಅಧ್ಬುತ ಚಿತ್ರ. ನೋಡಿಲ್ಲ ಅಂದ್ರೆ ದಯವಿಟ್ಟು ನೊಡಿ. ಈ ಕಾದಂಬರಿ ಆ ಚಿತ್ರವನ್ನು ಬಹುತೇಕ ಹೋಲುತ್ತದೆ ಕೊನೆಯಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಿದೆ ಮತ್ತು ಇಲ್ಲಿ ಇಬ್ಬರು ನಾಯಕಿಯರು. ಈ ಕಾದಂಬರಿ ಮೂಲತ: ತೆಲುಗು ಭಾಷೆಯದ್ದು ಇದನ್ನು ಕನ್ನಡಕ್ಕೆ ಅಜ್ಜಂಪೂರ ಜೆ. ಸೂರಿಯವರು ಅನುವಾದಿಸಿದ್ದಾರೆ. 

ಇಲ್ಲಿ ಬರುವ ಶ್ರೀಧರ್ ಎಂಬಿಎ ಮಾಡುತ್ತಿದ್ದಾಗ ಅಪರ್ಣನನ್ನು ಪ್ರೀತಿಸುತ್ತಿರುತ್ತಾನೆ ಅವಳು ಹೇಳದೆ ಹೋದರು ಇವನ್ನನ್ನು ಪ್ರೀತಿಸುತ್ತಾಳೆ. ಓದು ಮುಗಿಯುವ ಮುಂಚೆ ಅಪರ್ಣಳಿಗೆ ನೃತ್ಯ ಕಲೆಯಲ್ಲಿ ಆಸಕ್ತಿ ಮೂಡಿ ಅದರಲ್ಲಿ ತಲ್ಲೀನಳಾಗುತ್ತಾಳೆ. ನೃತ್ಯಕ್ಕೆಂದು ಅವಳು ದೇಶ ವಿದೇಶ ಸುತ್ತುತ್ತಿರುತ್ತಾಳೆ ಆದರೆ ಪ್ರೀತಿ ಮಾತ್ರ ಫೋನಿನಲ್ಲಿ ಮುಂದುವರೆಯುತ್ತಿರುತ್ತದೆ. ಈಗಿರುವಾಗ ಒಂದು ದಿನ ಶ್ರೀಧರನ ಫ್ಲಾಟ್ ಗೆ ಒಂದು ಅಪರಿಚಿತ ಹುಡುಗಿಯ ಫೋನ್ ಬರುತ್ತದೆ. ಅಲ್ಲಿಂದ ಶುರುವಾದ ಮಾತು ಪ್ರೀತಿಯ ಹತ್ತಿರತ್ತಿರ ಹೋಗುತ್ತದೆ. ಆ ಹುಡುಗಿಗೆ ಅಪರ್ಣಳ ಬಗ್ಗೆ ಗೊತ್ತಿದ್ದರು ಇವನ್ನನ್ನು ಪ್ರೀತಿಸುತ್ತಾಳೆ, ಅವರಿಬ್ಬರ ಮೇಲಿನ ಆಸುಯೇ ಇಂದಲ್ಲ ಶ್ರೀಧರನ ಒಳ್ಳೆಯ ಸ್ವಭಾವದ ಮೇಲಿನ ಅಭಿಮಾನದಿಂದ. ಇವನಿಗೂ ಈ ಅಪರಿಚಿತ   ಹುಡುಗಿ ಮೇಲೆ ಪ್ರೀತಿ ಚಿಗುರುತ್ತದೆ. ಅಪರ್ಣಳ ನಿರಂತರ ಸುತ್ತುವುದು, ಶ್ರೀಧರ್ ಇನ್ನು ಇವಳ ಹತ್ತಿರವಾಗುತ್ತಾನೆ. 

ಶ್ರೀಧರ್ ಏನೇ ಮಾಡಿದರು ಪೂಜಾಗೆ(ಅಪರಿಚಿತಳ ಹೆಸರು) ಗೊತ್ತಾಗುತ್ತದೆ. ಹೇಗೆ ಎಂದು ದಿನ ರಾತ್ರಿ ತಲೆ ಕೆಡಿಸಿಕೊಳ್ಳುತ್ತಾನೆ. ಆಗ ಅವನ ಮಿತ್ರ ಯೋಗಿ ಶ್ರೀಧರನ ವಿಷಯವಲ್ಲ ತಿಳಿದು ಅವಳು ಅವನ ಬಿಲ್ಡಿಂಗ್ ನ ಎದುರುಗಡೆ ಬಿಲ್ಡಿಂಗ್ ನಲ್ಲಿ ಇರಬಹುದು ಎಂದು ಹುಹಿಸುತ್ತಾರೆ. ಅವರು ಏನೇನೋ ಯೋಜನೆಗಳನ್ನು ಹಾಕಿದರು ಪೂಜಳನ್ನು ಹುಡುಕಲು ಹಾಗುವುದಿಲ್ಲ. ಮುಂದೆ ಅವರಿಬ್ಬರೂ ಬೇಟಿ ಮಾಡುತ್ತಾರೆ, ಏನಾಗುತ್ತದೆ ಎಂದು ಓದಿ ನೋಡಬೇಕು. 

ಕಾದಂಬರಿಯಲ್ಲಿ  ಎಲ್ಲಲ್ಲಿ ಕೆಲವು ಪಾತ್ರಗಳನ್ನೂ ಪ್ರಯತ್ನ ಪೂರಕವಾಗಿ ತುರುಕಿದ್ದಾರೆ ಎಂದು ಅನಿಸುತ್ತದೆ. ಮೇರಿ ಪಾತ್ರ ಏನಾಗುತ್ತದೆ ಎಂದೇ ತಿಳಿಯುವುದಿಲ್ಲ. ಯೋಗಿ ಅವನ ಹಳೆಯ ಪ್ರೀತಿಯನ್ನು ಹಿಂದೂ ಮುಂದು ನೋಡದೆ ಮತ್ತೆ ಒಪ್ಪಿಕೊಳ್ಳುತ್ತಾನೆ ಯಾಕೆ ಎಂದೇ ಹೇಳುವುದಿಲ್ಲ. ನಿರ್ಮಲಾಳ ಮಗು ಯೋಗಿಯನ್ನು ಯಾವ ರೀತಿ ಸ್ವೀಕರಿಸುತ್ತದೆ ಎಂದು ಹೇಳುವುದಿಲ್ಲ. ನಾನು ಓದಿದ ಮೊದಲ ತೆಲಗು ಕಾದಂಬರಿ ಇದು, ಅಲ್ಲಿನ ಕಾದಂಬರಿಕಾರರ ಬಗ್ಗೆ ಅಷ್ಟು ಗೊತ್ತಿಲ್ಲದ ಕಾರಣ ನಾನು ಇದರ ಬಗ್ಗೆ ಏನು ಖಂಡಿತಾಗಿ ಇದನ್ನು ನೀವು ಓದಬೇಕು ಎಂದು ಹೇಳಲಾರೆ. 




0 comments:

Post a Comment