Thursday, May 1, 2014

ಎರಡು ದಂಡೆಗಳು - ಬಿ ಪಿಶಿವಾನಂದ ರಾವ್

Yeradu Dandegalu - B P Shivananda Rao



ಒಂದು ದೇಶಕ್ಕೆ ಶ್ರೇಷ್ಠತೆ - ಗೌರವ ಹುಟ್ಟಿಸಿ ಕೊಡುವುದು ಅಲ್ಲಿರುವ ಕಾರ್ಖಾನೆಗಳು, ಸೇತುವೆ, ಸುಂದರ ಕಟ್ಟಡ, ರಸ್ತೆಗಳಿಂದ ಅಲ್ಲ ಬದಲು ಅಲ್ಲಿ ಜೀವಿಸಿರುವ ಕ್ರಿಯಾಶೀಲ ಬುದ್ದಿಯ, ಸಮಜೋತ್ಕರ್ಷಕ್ಕಾಗಿ ಪ್ರಾಮಾಣಿಕವಾಗಿ ತುಡಿಯುವ-ದುಡಿಯುವ ಮನಸ್ಸುಳ್ಳ ವ್ಯಕ್ತಿಗಳಿಂದಾಗಿ ಎಂಬುದು ಒಂದು ಶ್ಲಾಘನೀಯ ಸೂತ್ರ. 

ಚದ್ರಗಿರಿ-ಧರ್ಮಾಪುರ ಎರಡು ದಂಡೆಗಳಲ್ಲಿರುವ ಊರುಗಳು. ಮಧ್ಯ ಕಲ್ಹಳ್ಳ ಇದೆ. ಎರಡೂ ಸ್ಥಳಗಳಲ್ಲಿರುವ ವ್ಯಕ್ತಿಗಳ ಅಂತರ್ ದೃಷ್ಟಿ ದುಡಿಯುವ ಕಾರ್ಯವೈಖರಿ, ಸ್ವಾರ್ಥ-ದ್ವೇಷ, ಅದು ಇತರರ ಮೇಲೆ ಬೀರಿದ ಪ್ರಭಾವ; ಇದು ನನಗೆ ಇಷ್ಟವಾದ ಕಥಾ ವಸ್ತುವೇ 'ಎರಡು ದಂಡೆ' - ಕಾದಂಬರಿ. ಎರಡು ವಿಭಿನ್ನ ಅಭಿರುಚಿಯ ಜನರ ಬದುಕಿನ ಇತಿಹಾಸದಲ್ಲಿ ದುರಂತದ ಜೊತೆ ಉತ್ಕರ್ಷದ ಬೆಳಕು ಅಡಗಿದೆ. ಆಯಾ ಸ್ಥಳಗಳ ಉತ್ಥಾನ-ಪತನಕ್ಕೆ ಇಲ್ಲಿನ ನಿತ್ಯ ನಿದರ್ಶನವೆಂದು ಮಾತ್ರ ಹೇಳಬಯಸುವೆ. 

ಈ ಕಾದಂಬರಿಯಲ್ಲಿ ತಮ್ಮ ಊರಿನ ಏಳ್ಗೆಗಾಗಿ ಮಾತ್ರವಲ್ಲ ಕೆಲವಾದರೂ ಸಾಮಾಜಿಕ ಕಾರ್ಯಕ್ರಮಗಳಿಂದ ಸಾಮೂಹಿಕ ಉತ್ಕರ್ಷನಾ ದೃಷ್ಟಿಯಲ್ಲಿ ದುಡಿಯುವ-ದುಡಿಸುವ ಆತ್ಮವಿಶ್ವಾಸ ಹೊಂದಿದ ಗೋಪಾಲರು. ಅದಕ್ಕೆ ಸಚೇತನಾ ಶಕ್ತಿಯಾಗಿ ನಿಂತ ಅವರ ಮಗಳ ದಿಟ್ಟ ನಿಲುವಿನ ಗಟ್ಟಿ ಹೆಜ್ಜೆ. ಇವರ ಬದುಕಿನ ಚಿತ್ರಣ ಒಂದು ಕಡೆ. ಎರಡನೆಯದೆಂದರೆ ತಮ್ಮ ತಮ್ಮಲ್ಲಿ ಕಚ್ಚಾಡಿಕೊಳ್ಳುತ್ತ  ಸ್ವಾರ್ಥ-ದ್ವೇಷ-ಜಾತಿಯ ನಿಂದನೆಗಳಿಂದ ಏನೂ ಪ್ರಗತಿ ಸಾಧಿಸಿಕೊಳ್ಳದೆ ಕೊನೆಗೂ ಕೂಪಮಂಡೂಕಗಳಾಗಿ ಊಳಿಯೋ ಪಕ್ಕದ್ದೇ ಊರಿನ ಜನರ ಕರ್ಮಕಾಂಡದ್ದೇ ಚಿತ್ರಣ. 




0 comments:

Post a Comment