Wednesday, April 30, 2014

ಜನಿವಾರ ಮತ್ತು ಶಿವದಾರ - ಬಸವರಾಜ ಕಟ್ಟಿಮನಿ

Janivara Mattu Shivadara -  Basavaraja Kattimani



ನಿಜ ಹೇಳಬೇಕು ಅಂದ್ರೆ ನಾನು ಇದೆ ಮೊದಲು ತಿಲಿದುಕೊಳ್ಳುತಿರುವುದು ಜನಿವಾರ ಮತ್ತು ಶಿವದಾರ ಏನೆನ್ನುವುದು. ಜನಿವಾರ ಬ್ರಾಹ್ಮಣರು ಮಾತು ಶಿವದಾರ ಲಿಂಗಾಯತರು ಹಾಕುವುದೆಂದು. ಈ ರೀತಿಯ ಕಾದಂಬರಿ ಓದುತ್ತಿರುವುದು ಇದೆ ಮೊದಲು. ಈ ಇಬ್ಬರ ಜಾತಿಗಳ ನಡುವೆ ಇಂಥ ಒಂದು ದೊಡ್ಡ ಅಂತರ ಮತ್ತು ಸಮಸ್ಯ ಇರುವುದೆಂದು ಗೊತ್ತಿರಲ್ಲಿಲ್ಲ. ಬಸವರಾಜ ಕಟ್ಟಿಮನಿ ಇದನ್ನು ಬರೆದ್ದಿದ್ದು ೧೯೫೫ ಇಸವಿಯಲ್ಲಿ. ಈಗ ಇಷ್ಟು ಅಂತರ ವಿರಲಾರದು ಎಂದು ನನ್ನ ಅನಿಸಿಕೆ. ಈಗಿನ ಕಾಲಕ್ಕೆ ನಾನು ನೋಡಿರುವ ಜನರಲ್ಲಿ ಇಂಥ ಜಾತಿಪರತೆ ಕಡಿಮೆ ಇದ್ದರು ಮಾಡುವೆ ವಿಷಯದಲ್ಲಿ ಮಾತ್ರ ಇದು ಒಂದು ದೊಡ್ಡ ಅಂಶವೆಂದೆ ಹೇಳಬೇಕು. ಯಾವುದೇ ಮಾಡುವೆ ದೊಡ್ಡವರು ನಿಂತು ಮಾಡುವುದಾದರೆ ಇಂದಿಗೂ ತಮ್ಮ ಮಕ್ಕಳಿಗೆ ಸ್ವಜಾತಿ ವರ ಇಲ್ಲ ವಧು ವನ್ನೇ ನೋಡುವುದು. ಪ್ರೀತಿ ಎಂದರೆ ಅದು ಬೇರೆ ಮಾತು, ಈಗಿನ ಕಾಲದಲ್ಲಿ ವಿದ್ಯಾವಂತ ತಂದೆ ತಾಯಿ ಅಡ್ಡಿ ಮಾಡುವುದಿಲ್ಲ. ಜನಿವಾರ ಮತ್ತು ಶಿವದಾರ ಬರೆದ ಕಾಲದಲ್ಲಿ ಪ್ರೀತಿ ಪ್ರೇಮ ಎಂದರೆ ಮೂಗು ಮುರಿಯುವವರು ಮಾತು ಹೆಣ್ಣು ಎಂದರೆ ಒಂದು ದಡ್ಡ ಬಾರಾ ಎಂದು ತಿಳಿಯುತ್ತಿದ್ದರು. ಆಗಿನ ಕಾಲದ ಜಾತಿಯ ಘಷಣೆಯ ಒಂದು ನೋಟವೆ 'ಜನಿವಾರ ಮತ್ತು ಶಿವದಾರ' ಕಾದಂಬರಿ. 

ಇಲ್ಲಿ ಬರುವ ರಾಮಚಂದ್ರರಾಯನು ಒಬ್ಬ ಬಡ ಬ್ರಾಹ್ಮಣ, ಒಂದು ಇನ್ಸೂರೆನ್ಸ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನ ಸಂಬಳ ಮನೆಗೆ ಸಾಲುವುದಿಲ್ಲ ಅದರ ಮೇಲೆ ಅವನು ಬ್ರಾಹ್ಮಣನೆಂದು ಅವರ ಮೇಲಾಧಿಕಾರಿ ಲಿಂಗಪ್ಪ ತುಂಬಾ ಕಾಟಕೊಡುತ್ತಿರುತ್ತಾನೆ. ಇದರ ಮೇಲೆ ಅವನಿಗೆ ಒಬ್ಬ ತಮ್ಮ ವೆಂಕಟೇಶ ಮತ್ತು ತಂಗಿ ಶಾಂತನ ಚಿಂತೆ. ಅವನಿಗೆ ಶಾಂತನ ಮಾಡುವೆ ಚಿಂತೆ. ಯಾರೇ ಬಂದರು ವರದಕ್ಷಿಣೆ ಕೇಳುತ್ತಾರೆ, ಇವನ ಬಾಲಿ ಹಣವಿಲ್ಲ. ಏನು ಮಾಡುವುದು ಎಂದೇ ಚಿಂತೆ. ಅವರ ಅಪ್ಪ ಮಾಧ್ವರಾಯರು ನಿವೃತ್ತಿಯಾಗಿ ಮನೆಲಿದ್ದಾರೆ. 

ಶಾಂತಗೆ ಓದುವಾಸೆ. ಅವಳನ್ನು ಡಿಗ್ರಿ ಮಾಡಲು ಕಾಲೇಜ್ ಗೆ ಸೇರಿಸುತ್ತಾರೆ. ಅವರ ಮನೆ ಮುಂದೆ ಒಂದು ಕೋಣೆಯಲ್ಲಿ ಕೊಡಬಾವಿ ಎನ್ನುವ ಕವಿ ಅಧ್ಯಾಪಕರಾಗಿ ಕೆಲಸ ಮಾಡುತ್ತಾ ಶಾಂತನನ್ನು ಇಷ್ಟ ಪಡುತ್ತಾನೆ. ಇದನ್ನು ಅರಿತ ಶಾತ ಮತ್ತು ಅವಳ ಗೆಳತಿಯರು ಅವನನ್ನು ನೋಡಿ ಒಳಗೊಳಗೆ ನಗುತ್ತಿರುತ್ತಾರೆ. ಇದರ ಮಧ್ಯೆ ಅಲ್ಲಿರಲು ಸದಾನಂದ ಅವನ ಕೋಣೆಗೆ ಇರಲು ಬರುತ್ತಾನೆ. ಅವನು ನೋಡಲು ಅಂದಾವಾಗಿ ಮತ್ತು ಒಳ್ಳೆ ಸಂಬಾವಿತನಾಗಿ ಕಾಣುತ್ತಾನೆ ಶಾಂತಳಿಗೆ. ಸದಾನಂದನು ಒಬ್ಬ ಕವಿ. ಒಂದೇ ಕಾಲೇಜ್ ನಲ್ಲಿ ಇರುವುದರಿಂದ ಇಬ್ಬರ ಪರಿಚಯ ಸ್ನೇಹವಾಗಿ ಮತ್ತು ಮುಂದೆ ಪ್ರೀಥಿಯಾಗು ಬೆಳೆಯುತ್ತಾದೆ. ಅವರ ಪಡುವ ಕಷ್ಟ ಮತ್ತು ಮದುವೆಯಾಗಲು ಮಾಡುವ ದಿಟ್ಟತನ ಕಟ್ಟಿಮನಿಯವರು ಮನಸ್ಸಿಗೆ ನಾಟುವಂತೆ ಬರೆದಿದ್ದರೆ. ಇಲ್ಲಿ ಅರ್ ಎಸ್ ಎಸ್, ಸೋಷಲಿಸ್ಟ್, ಕಮ್ಯುನಿಸ್ಟ್ ಮತ್ತು ಇತರೆ ಎಲ್ಲಾ ರೀತಿಯ ವಿಭಿನ್ನ ಪಾತ್ರಗಳು ಬಂದು ಹೋಗುತ್ತವೆ, ಅದರ ಬಗ್ಗೆ ಇಲ್ಲಿ ಹೇಳುವುದಕ್ಕೆ ಹೋಗುವುದಿಲ್ಲ. ಈ ಕಾದಂಬರಿಯಲ್ಲಿ ನಮಗೆ ನಮ್ಮ ಜಾತಿಯ ಮೇಲೆ ಅಂಧ ಮೋಧ ಮಾತ್ತು ಬೇರೆ ಜಾತಿಯ ಮಳೆ ಈರ್ಷೆ ಎಲ್ಲ ಬರಿ ನೀರಿನ ಮೇಲಿನ ಗುಳ್ಳೆ ಮಾತು ವಿಧ್ಯವಂತರಾದ ನಾವು ಬದುಕನ್ನು ಪ್ರೀತಿಸಬೇಕೆ ಹೊರತು ಜಾತಿಯನಲ್ಲ ಎಂದು ತೋರಿಸಿದ್ದರೆ. 

ನಾನು ಇಲ್ಲಿ ಯಾವುದೇ ಜಾತಿ ಕೀಳು ಯಾವುದೊ ಮೇಲೆ ಎಂದು ಹೇಳಿಕ್ಕೆ ಹೋಗುವುದಿಲ್ಲ ಯಾಕೆಂದರೆ ಅದು ಅವರವರ ಭಾವಕ್ಕೆ ಬಿಟ್ಟಿದ್ದು. 





0 comments:

Post a Comment