Sunday, April 27, 2014

Filled Under:
, ,

ಭೀಮಕಾಯ - ಎಸ್ ಎಲ್ ಭೈರಪ್ಪ

Bhimakaya - S L Bhyrappa





ಭೀಮಕಾಯ ಭೈರಪ್ಪನವರ ಎರಡನೆಯ ಕಾದಂಬರಿ. ಒಂದು ಒಳ್ಳೆಯ ಕಾದಂಬರಿ ಬರೆಯಲು ಎಷ್ಟು ಆಳವಾದ ಆಧ್ಯನ ಮಾಡಬೇಕು ಅನ್ನುವುದನ್ನು ತೋರಿಸಿದ್ದಾರೆ. ಎಷ್ಟು ಜನ ಲೇಖಕರು ತಮ್ಮ ನಾಲ್ಕನೆಯ ಅಥವಾ ಐದನನೆಯ ಕಾದಂಬರಿ ಬರೆಯುವಾಗ ಉತ್ತಮವಾಗಿ ಬರೆಯುತ್ತಾರೆ, ಆದರೆ ಬೈರಪ್ಪನವರು ಬರೆಯಲೇ ಹುಟ್ಟಿದವರು ಎನ್ನುವುದು ಈ ಕಾದಂಬರಿ ಓದಿದಿಯಾ ಮೇಲೆ ತಿಳಿಯುತ್ತದೆ. ಈ ಕಾದಂಬರಿಗೆ ಅವರು ಗರಡಿ ಕುಸ್ತಿ ಬಗ್ಗೆ ಎಷ್ಟು ಆಳವಾದ ಅಧ್ಯನ ಮಾಡಿರಬೇಕು ಎಂದು ಓದುದುತ್ತಾ ಓದಂತೆ ತಿಳಿಯುತ್ತದೆ ಮತ್ತು ಆಶ್ಚರ್ಯವು ಆಗುತ್ತದೆ. ಆಶ್ಚರ್ಯ ಯಾಕೆಂದರೆ ೧೯೫೮ರಲ್ಲಿ ಅವರು ಕುಸ್ತಿ ಬಗ್ಗೆ ಪೂರ್ತಿ ತಿಳ್ಕೊಂಡು ಮತ್ತು ಆದರೆ ಸುತ್ತ ಕಥ ಎಣೆಯೊದು ಅಷ್ಟು ಸುಲಬವಲ್ಲ. 

ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನಾವು ಕಾಲದಲ್ಲೂ ನೋಡಬಹುದು, ಒಬ್ಬರ ಯಶಸ್ಸು ಸಹಿಸದೆ ಇರುವವರು ಮತ್ತು ಅವರನ್ನು ತಪ್ಪು ದಾರಿಗೆ ಎಳೆಯುವವರು. ಇಲ್ಲಿ ಬರುವ ಸುಬ್ಬು ಒಳ್ಳೆಯ ಕುಸ್ತಿ ಪಟು, ಅವರು ತಂದೆ ಆಸೆ ಪಟ್ಟ ಹಾಗೆ ಕುಸ್ತಿಯಲ್ಲಿ ಪಳಗಿ ಸುತ್ತಾ ಮುತ್ತಾ ಊರಿನಲ್ಲಿ ಹೆಸರು ಗಳಿಸಿರುತ್ತಾನೆ. ಇದನ್ನು ಸಹಿಸದ ಬೇರೆ ಗರಡಿಯ ಹಳೆ ಕುಸ್ತಿ ಪಟುಗಳು ಇದರಲ್ಲಿ ಮಲ್ಲಾರಿ ಸುಬ್ಬುವನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಒಂದು ಯೋಜನೆ ಹಾಕುತ್ತನೆ. ಮಲ್ಲಾರಿಗೆ ಸುಬ್ಬು ಮೇಲೆ ಕೋಪ ಏಕೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವನನ್ನು ಸೋಲಿಸಿದ್ದ, ಸುಬ್ಬುವನ್ನು ಆಖಾಡದಲ್ಲಿ ಸೋಲಿಸಲು ಹಾಗುವುದಿಲ್ಲ ಎಂದು ಈ ಕೆಟ್ಟ ಯೋಜನೆ ಹಾಕುತ್ತಾನೆ, ಇದಕ್ಕೆ ಅವನು ಪುಟ್ಟನ ಸಹಾಯ ತೆಗೆದುಕೊಳ್ಳುತ್ತಾನೆ.

ಪುಟ್ಟ ಸುಬ್ಬುವನ್ನು ರಾಜಿಗೆ ಪರಿಚಯ ಮಾಡಿಸುತ್ತಾನೆ. ರಾಜಿ ಸುಬ್ಬುವನ್ನು ಮನಸಾರ ಪ್ರೀತಿಸುತ್ತಾಳೆ. ರಾಜಿಯ ಪರಿಚಯವಾದ ಮೇಲೆ ಸುಬ್ಬು ಕುಸ್ತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಬರುತ್ತಾನೆ. ಅವನು ಒಂದು ದಿನ ಯಾವತ್ತು ಸೋಲದ ಕುಸ್ತಿಯಲ್ಲಿ ಚೋಲಾವಾರ್ ಸಿಂಗ್ ನಾ ಹತ್ತಿರ ಸೊಲುತ್ತಾನೆ. ಮುಂದೆ ಸುಬ್ಬು ಹೇಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟು ಮತ್ತೆ ಗೆಲ್ಲುತ್ತಾನೆ ಎಂದು ನೀವು ಓದೆ ನೋಡಬೇಕು.

ನಮ್ಮ ಜೀವನದಲ್ಲೂ ಒಂದಲ್ಲ ಒಂದು ಬಾರಿ ಮ್ಯಲಾರಿಯಂತವರು ಸಿಗುತ್ತಾರೆ ಆದರೆ ನಾವು ನಮ್ಮ ಗುರಿ ತಪ್ಪಬಾರದು. ನಮಗೆ ಸರಿ ಯಾವುದು ತಪ್ಪು ಯಾವುದು ಎಂದು ತಿಳಿದು ಹೆಜ್ಜೆ ಹಾಕಬೇಕು. ತಪ್ಪು ಮಾಡಿ ತಿದ್ದಿಕೊಳ್ಳದೆ ಹೋದರೆ ನಮ್ಮ ಜೀವನಕ್ಕೆ ಆಪಾಯ. ಜೀವನದಲ್ಲಿ ಹೇಗೆ ತಾಪು ಮಾಡಿದರು ತಿದ್ದಿಕೊಳ್ಳಬಹುದು ಎಂದು ಸುಬ್ಬುವಿನ ಜೀವನದಿಂದ ತಿಳಿದುಕೊಳ್ಳಬಹುದು. 




0 comments:

Post a Comment