Thursday, January 8, 2015

Filled Under:
, ,

ಧರ್ಮಶ್ರೀ - ಎಸ್ ಎಲ್ ಭೈರಪ್ಪ

Dharmashree - S L Bhyrappa



ಭೈರಪ್ಪನವರ 'ಧರ್ಮಶ್ರೀ' ಓದೋದಕ್ಕೆ ಶುರು ಮಾಡಿ ಮುಗಿಸೋದಕ್ಕೆ ತುಂಬಾನೇ ಸಮಯ ಹಿಡಿಯಿತು, ಓದುವ ಮಧ್ಯೆ ಬೇರೆ ಊರಿಗೆ ಹೋಗಬೇಕಾಯಿತು ಈ ಪುಸ್ತಕವನ್ನು ಮರೆತುಬಿಟ್ಟೆ, ಅದಕ್ಕೆ ಈ ಒಂದು ತಿಂಗಳಲ್ಲಿ ಯಾವುದೇ ಪುಸ್ತಕದ ಬಗ್ಗೆ ಮಾಹಿತಿ ಕೊಡಲಾಗಲ್ಲಿಲ್ಲ. ಪುಸ್ತಕ ಓದಿ ಮುಗಿಸಿದ ಮೇಲೆ ಮತ್ತು ಈಗ ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಗೂ ಇರುವ ಸಾಮ್ಯತೆ ನೋಡಿ ನನಗೆ ಆಶ್ಚರ್ಯವಾದ ಇರಲಿಲ್ಲ. ಭೈರಪ್ಪನವರು ಈ ಕಾದಂಬರಿ ಬರೆದುದು ೧೯೬೧ರಲ್ಲಿ.

'ಧರ್ಮಶ್ರೀ' ಭಾರತದಲ್ಲಿ ನಡೆಯುತ್ತಿರುವ ಮಾತಾಂತರ ಅದರಿಂದ ಸಮಜಾದಲ್ಲಿ ಆಗುತ್ತಿರುವ ಪರಿಣಾಮಗಳು ಮತ್ತು ಭಾರತೀಯ ಸಂಸ್ಕೃತಿ ಅವನತಿ ಬಗ್ಗೆ ತುಂಬ ಆಳವಾಗಿ ಅಧ್ಯಾಯನ ಮಾಡಿ ಒಂದು ಕಾದಂಬರಿಯ ಚೌಕಟ್ಟಿನಲ್ಲಿ ನೈಜ ಘಟನೆ ಘಟಿಸಿದಂತೆ  ಬರೆದಿದ್ದಾರೆ. ಮತಾಂತರದ ಬಗ್ಗೆ ನಾನು ಕೆಲವು ಪುಸ್ತಕಗಳನ್ನು ಓದಿದಾಗ ಸಾಮಾನ್ಯವಾಗಿ ಬರುವುದು ಒಂದು ಜಾತಿಯ ತೆಗಳಿಕೆ ಮತ್ತು ಅವರ ಜಾತಿಯನ್ನು ಹೊಗಳಿ ಅಟ್ಟಕ್ಕೇರಿಸಿ, ಅವರ ಜಾತಿಯೇ ಸರ್ವ ವಿದದಲ್ಲೂ ಶುದ್ದ ಎಂದು ಸಾಬೀತು ಮಾಡಲು ನಿಂತಿರುತ್ತಾರೆ, ಆದರೆ ಈ ಕಾದಂಬರಿಯಲ್ಲಿ ಹಿಂದೂ ಸಂಸ್ಕೃತಿಯ ಮಿತಿಯನ್ನು ಮತ್ತು ಅದನ್ನು ಬೇರೆ ಜಾತಿಯವರು ಹೇಗೆ ತಮ್ಮ ಸ್ವರ್ತಕ್ಕೆ ಉಪಯೋಗಿಸಿಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ. ಇಲ್ಲಿ ಬರಿ ಜಾತಿಯ ಮತ್ತು ಮತಾಂತರದ ಬಗ್ಗೆ ಅಲ್ಲದೆ ತಂಗಿ, ಸ್ನೇಹಿತರು, ತಂದೆ ತಾಯಿಗಳ ಜೊತೆ ಮತ್ತು ಸಮಾಜದ ಜೊತೆಗಿನ ಸಂಬಂಧಗಳ ಬಗ್ಗೆ ಒಂದು ಒಳನೋಟವನ್ನು ತೋರಿಸಿದ್ದಾರೆ.

ಇಲ್ಲಿ ಬರುವ ಸತ್ಯ ನಾರಾಯಣ ಹಿಂದೂ ಸಂಕೃತಿಯಲ್ಲಿ ಕಲಿತು ಅದರ ಬಗ್ಗೆ ಉಚ್ಚ ಭಾವನೆ ಇಟ್ಟುಕೊಂಡು, ಕ್ರೈಸ್ತ ಮತಾಂತರ ವಿರುದ್ದ ಹೋರಾಡಿ ಕೊನೆಗೆ ಅದೇ ಮತಕ್ಕೆ ಸೇರಿಕೊಳ್ಳುವ ಪರಿಸ್ಥಿತಿಯನ್ನು ಈ ಕಾದಂಬರಿಯಲ್ಲಿ ಭೈರಪ್ಪನವರು ಬರೆದ್ದಿದ್ದಾರೆ. ಸತ್ಯನಾರಾಯಣ ಹುಟ್ಟುವಾಗಲೇ ಅಪ್ಪ ಸಂಸಾರದ ಬಗ್ಗೆ ಆಸಕ್ತಿ ತೋರುತ್ತಿರಲಿಲ್ಲ. ಎಲ್ಲಿ ಮಗನ ಓದಿಗೆ ಪೆಟ್ಟು ಬೀಳುತ್ತೆಂದು ಮಗನನ್ನು ಅವಳ ಅಣ್ಣನ ಮನೆಗೆ ಕಳಿಸುತ್ತಾಳೆ. ಅಣ್ಣನ ಮನೆಯಲ್ಲಿ ನರಕಯಾತನೆ ಅನುಭವಿಸುವಾಗ ತಾಯಿ ಪ್ಲೇಗಿನಿಂದ ಸಾಯುತ್ತಾಳೆ. ಅಣ್ಣನ ಮನೆಯಲ್ಲಿ ಇದ್ದು ನರಕಯಾತನೆ ಅನುಭವಿಸುವುದಕ್ಕಿಂತ ಬೇರೆ ಊರ್ಗಿಗೆ ಹೋಗಿ ಭಿಕ್ಷೆ ಬೇಡಿ ಓದುವುದು ಮೇಲು ಆ ಊರಿನ ಮೇಸ್ಟ್ರಿನ ಸಹಾಯದಿಂದ ನರಸಪುರಕ್ಕೆ ಹೊಗುತ್ತಾನೆ. ಓದುನಲ್ಲಿ ಬುದ್ದಿವಂತನಾದ್ದರಿಂದ ಅವನಿಗೆ ಹೊಸ ಊರಿಗೆ ಹೊಂದಿ ಕೊಳ್ಳಲು ಜಾಸ್ತಿ ಸಮಯ ಹಿಡಿಯಲ್ಲಿಲ್ಲ. ಈ ಮಧ್ಯೆ ಅವನ ಬೇಟಿ ರಾಚಮ್ಮನ ಜೊತೆ ಆಗುತ್ತದೆ. ರಾಚಮ್ಮ ಪಕ್ಕದುರಿನವಳು, ಕ್ರಿಸ್ತ ಜಾತಿಗೆ ಸೇರಿದವಳು. ಮೊದಮೊದಲು ಹೊಂದಿಕೆ ಯಾಗದಿದ್ದರು ಮುಂದೆ ಅವರ ಸ್ನೇಹ ತುಂಬ ಗಟ್ಟಿ ಯಾಗುತ್ತದೆ.

ಮುಂದೆ ಸತ್ಯನಾರಾಯಣ ಮೈಸೂರಿಗೆ ಬಂದು ಓದೋದುಕ್ಕೆ ಶುರು ಮಾಡಿದಮೇಲೆ ಶಂಕರನ ಪರಿಚಯ ವಾಗುತ್ತದೆ. ಶಕಾರನ ಜೊತೆ ಭಾರತೀಯ ಸಂಸ್ಕೃತಿಯ ಬಗ್ಗೆ ಚರ್ಚಿಸಿ,  ಅವನಲ್ಲಿ ಸಂಸ್ಕೃತಿಯ ಬಗ್ಗೆ ಇರುವ ಪುಸ್ತಕಗಳ ಬಗ್ಗೆ ತಿಳಿದು ಅದರಲ್ಲಿ ಅರ್ಥವಾಗದ ವಿಷಯದ ಬಗ್ಗೆ ಕೇಳಿ ತಿಳಿದುಕೊಂಡು ಭಾರತೀಯ ಸಂಸ್ಕೃತಿ ಮತ್ತು ಅದರ ಆಳದ ಬಗ್ಗೆ ಹೆಮ್ಮೆ ಮತ್ತು ಗೌರವ ಹೆಚ್ಚುವಂತೆ ಮಾಡುತ್ತದೆ. ಮೈಸೂರಿನಲ್ಲಿ ನಡೆಯುತ್ತಿರುವ ಮತಾಂತರದ ವಿರುದ್ಧ ಶಂಕರನ ಜೊತೆ ಸೇರಿ ಹೋರಾದುತ್ತಾನೆ. ಶಂಕರ ಓದು ಮುಗಿಸಿ ಅರ್ ಎಸ್ಎಸ್ ನ ಒಂದು ವಿಭಾವನ್ನು ನೋಡಿಕೊಳ್ಳಲು ಬೇರೆ ಊರಿಗೆ ಆಗುತ್ತಾನೆ. ಇಲ್ಲಿ ಸತ್ಯನಾರಾಯಣ ಮತ್ತೆ ರಾಚಮ್ಮನನ್ನು ಬೇಟಿಯಾಗುತ್ತಾನೆ. ಅವಳ ಗಂಡ ದೇವಿ ಪ್ರಸಾದರು ಇನ್ವನ ಲೆಕ್ಚರರ್. ಅವರ ಸ್ನೇಹ ಇಲ್ಲಿ ಮುಂದುವರೆಯುತ್ತದೆ.

ಸತ್ಯ ನಾರಾಯಣನ ತಂಗಿ ತನ್ನ ಕಷ್ಟಗಳನ್ನು ಒಂದು ಅಂಚೆಯ ಮೂಲಕ ಇವನಿಗೆ ತಿಳಿಸುತ್ತಾಳೆ. ಈವರಗೆ ತಲೆಕೆಡಿಸಿಕೊಳ್ಳದ ಒಂದು ಜವಾಬ್ದಾರಿ ಅವನ ಹೆಗಲ ಮೇಲೆ ಬೀಳುತ್ತದೆ. ಅವನಿಗೆ ಅವನ ಸೋದರ ಮಾವನ ಹಿಂಸೆ ತಿಳಿದು ಅವನು ಆ ಕ್ಷಣ ಊರಿಗೆ ಒರದುತ್ತನೆ. ಅಲ್ಲಿ ಎಲ್ಲವನ್ನು ಸರಿಮಾಡಿ ಅವನು ತಂಗಿ ಶಕುಂತಲ ನನ್ನು ತನ್ನ ಸ್ನೇಹಿತ ನಜುವಿನ ಮನೆಯಲ್ಲಿ ಬೆಳೆಯಲು ಬಿಡುತ್ತಾನೆ. ಸತ್ಯನಾರಯಣನಿಗೆ ದೇವಿ ಪ್ರಸಾದರ ತಂಗಿ ಲಿಲ್ಲಿಯ ಪರಿಚಯ ವಾಗುತ್ತದೆ. ಅವಳು ನೋಡಲು ಮತ್ತ್ತು ಹಾವ ಭಾವದಲ್ಲೂ ಇವನ ತದ್ದವಿರುದ್ಧ. ಅವಳೊಂದಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಚರ್ಚಿಸಿ, ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಕೆಲವು ಪುಸ್ತಕಗಳನ್ನು ಓದಲು ಹೇಳುತ್ತಾನೆ.

ಲಿಲ್ಲಿ ಭಾರತಿಯ ಸಂಸ್ಕೃತಿಯ ಅಧ್ಯನ ಮಾಡಿ ಅದರ ಗುಣಗಳನ್ನು ಅರಿತು ತನ್ನ ಉಡುಗೆ ತೊಡುಗೆಗಳನ್ನೂ ಬದಲಿಸುತ್ತಾಳೆ. ಇವರಿಬ್ಬರ ಮಧ್ಯೆ ಇದ್ದ ಸ್ನೇಹ ಪ್ರೀತಿಯಾಗುತ್ತದೆ. ಒಬ್ಬರನೊಬ್ಬರು ಬಿಟ್ಟಿರಲು ಸಾಧ್ಯವಾದ ರೀತಿಯಲ್ಲಿ ಪ್ರೀತಿ ಬೆಳೆಯುತ್ತದೆ. ಲೀಲಿ ಹಿಂದುವಾಗಲು ಯಾವುದೇ ಮಾರ್ಗ ಇಲ್ಲ ಎಂದು ಯೋಚಿಸಿ ದುಃಖ ಪಡುತ್ತಾಳೆ. ಲಿಲ್ಲಿಯನ್ನು ಬಿಟ್ಟು ಜೀವನ ಮಾಡಲಾಗುವುದಿಲ್ಲವಲ್ಲ ಎಂದು ತಿಳಿದು ಅವನು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುತ್ತಾನೆ. ಮಾಡುವೆ ಯಲ್ಲ ಆಗಿ ಜೀವನ ಸಂತೋಷದ ಊಯ್ಯಲೇ ಯಲ್ಲಿ ತೇಲುತ್ತಿರುವಾಗ ಕೆಲವು ಕಹಿ ಘಟನೆಗಳು ನಡೆಯುತ್ತವೆ. ಅವನು ತನ್ನ ಮತ ಬಿಟ್ಟು ಬೇರೆ ಮಠಕ್ಕೆ ಬಂದು ತಪ್ಪು ಮಾಡಿದೆ ಎಂದನಿಸುತ್ತದೆ. ಅವನಿಗೆ ಮತ್ತು ಲಿಲ್ಲಿಗೆ ಮತ್ತೆ ಹಿಂದುವಾಗಲು ಆಸೆ ಇದ್ದರು ಮಾರ್ಗ ಯಾವುದು ಇಲ್ಲ ಎನಿಸುತ್ತದೆ. ಇದರಿಂದ ಅವನ ಅರೋಗ್ಯ ಕೆಡುತ್ತದೆ. ಲಿಲ್ಲಿ ಅವನ ಸ್ಥಿತಿ ನೋಡಲಾಗದೆ ಶಂಕರನಿಗೆ ಪತ್ರ ಬರೆಯುತ್ತಾಳೆ. ಶಂಕರ ಆರ್ಯ ಸಮಾಜದ ಬಗ್ಗೆ ಮತ್ತು ಅವರು ಮಾಡುವ ಶುದ್ದಿ ಬಗ್ಗೆ ವಿವರಿಸಿ ಹೇಳುತ್ತಾನೆ. ಶಂಕರ ಮತ್ತೆ ಹಿಂದುವಾಗುತ್ತಾನೆ, ಲಿಲ್ಲಿ ಧರ್ಮಶ್ರೀ ಯಾಗುತ್ತಾಳೆ.

ಇಲ್ಲಿ ನಾವು ನೋಡಬೇಕಾದುದ್ದು  ಮತ್ತು ತಿಳಿದುಕೊಳ್ಳ ಬೇಕಾದುದು ಹಿಂದೂ ಧರ್ಮದಿಂದ ಹೋಗಲು ಮತ್ತು ಅವರನ್ನು ಸ್ವಾಗತಿಸಲು ನೂರಾರು ಜನರು ಮತ್ತು ಮಾರ್ಗಗಳಿವೆ ಆದರೆ ಬೇರೆ ಮತದವರನ್ನು ಬರಮಾಡಿಕೊಳ್ಳಲು ಯಾವುದೇ ದಾರಿಗಳಿಲ್ಲ. ಬೇರೆ ದೇಶದ ಜನರು ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡು ಹಿಂದೂ ಸಮಾಜದ ಜೀವನ  ಮಾರ್ಗದಲ್ಲಿ ನೆದೆಬೇಕಾದರೆ ನಮ್ಮ ದೇಶದ ಜನ ಮಾತ್ರ ಅದರ ಬಗ್ಗೆ ಅಸಡ್ಡೆ ತೋರುತ್ತಾರೆ. ನಮಗೆ ನಮ್ಮ ಸಂಸ್ಕೃತಿಯಲ್ಲಿ ಆಸಕ್ತಿ ಕಳೆದುಕೊಳ್ಳಲು ಮೂಲ ಕಾರಣ ನಮ್ಮ ವಿಧ್ಯಾಭ್ಯಾಸ ಮತ್ತು ಶಿಕ್ಷಣ ಪದ್ಧತಿ. ಕಾನ್ವೆಂಟ್ ನಲ್ಲಿ ಓದಿ US ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಈ ವಿಶಾಲವಾದ ಸಂಸ್ಕೃತಿಯ ಬಗ್ಗೆ ಆಸಕ್ತಿ ಎಲ್ಲಿನದ ಬರಬೇಕು.

ನಾವು ಹುಟ್ಟಿನಿಂದ ಕೆಲಸ ಮಾಡಲು ಶಿಕ್ಷಣ ಮಾದುತ್ತೆಯೋ ಹೊರತು ನಮ್ಮ ಸಂಕೃತಿ, ನಮ್ಮ ರೀತಿ ನೀತಿ ಮತ್ತು ಜೀವನ ಕ್ರಮವನ್ನು ತಿಳಿದುಕೊಳ್ಳಲು ಅಲ್ಲ. ನಮ್ಮ ಓದುವ ಪಠ್ಯದಲ್ಲಿ ನಮ್ಮ ಸಂಸ್ಕೃತಿಯಯನ್ನು ತೆಗುಳುತ್ತಾರೆಯೋ ಹೊರತು ಯಾರು ಇದರ ವಿಶಾಲ ಪರಂಪರೆಯನ್ನು ವಿವರಿಸುವುದಿಲ್ಲ. ಇದೆಲ್ಲದರ ನಡುವೆ ಹಿಂದೂ ಮತದ ಮೇಲೆ ಮೇಲಿಂದ ಮೇಲೆ ನಡೆಯುತ್ತಿರುವ ಕೆಟ್ಟ ಪ್ರಚಾರ ನಮ್ಮ ಯುವ ಪೀಳಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಆಸಕ್ತಿ  ತೆಗೆದು ಕೊಳ್ಳದಿರಲು ಕಾರಣ. ನಮ್ಮ ಸಂಸ್ಕೃತಿ ಇನ್ನು ಸಾವಿರ ವರ್ಷ ಬಾಳಬೇಕಾದರೆ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಜನರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಿವರಿಸಬೇಕು.

ಇನ್ನೊಂದು ಅನಿಸಿಕೆ :- http://goo.gl/r6oIjV


















0 comments:

Post a Comment