Friday, January 9, 2015

ಜೀವನ ಸಂಗ್ರಾಮ - ಮಿಲನಿಯಮ್ - ೨ - ಪೂರ್ಣಚಂದ್ರ ತೇಜಸ್ವಿ

Jeevana Sangrama - Millenium 2 - Poornachandra Tejasvi



ಮುನ್ನುಡಿಯಿಂದ

ರಾಮನನೋಹಾರ ಲೋಹಿಯಾ 'ಮೂರ್ತ ಮತ್ತು ಅಮೂರ್ತ'ದ ಬಗ್ಗೆ ವಿಶ್ಲೇಷಿಸುತ್ತಾ 'ಹೆಚ್ಚು ತಿಳಿದ ಹಾಗು ನಾವು ತಿಲಿದಿಲ್ಲದಿರುವುದರ ಅರಿವು ಮತ್ತು ಮೊತ್ತವೂ' ಎಂದು ಹೇಳುತ್ತಾರೆ. ಆದ್ದರಿಂದ ನಮ್ಮ ಜ್ಞಾನ ಎನ್ನುವುದು ನಮ್ಮ ಅಜ್ಞಾನದ ಅರಿವಷ್ಟೇ' ಎಂದು ಹೇಳುತ್ತಾರೆ. ಅದ್ದರಿಂದ ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸುತ್ತಾ ಒಂದು ದಿನ ಪರಿಪೂರ್ಣತೆಯ ಹಂತವನ್ನು ಮುಟ್ಟುತ್ತೇವೆ ಎನ್ನುವುದು ಸುಳ್ಳು. ಅಪರಿಪೂರ್ಣತೆ ಜ್ಞಾನದ ಅನುಷಂಗಿಕ ಗುಣ. ಮನಸ್ಸು ಅರಿವಿನ ಹಾದಿಯಲ್ಲಿ ಮುಂದೂತ್ತುತ್ತಲೇ ಹೋಗುತ್ತದೆ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೊಮಾಂಚನಕ್ಕಾದರೂ ಮನಸ್ಸು ಮುಂದುವರಿಯುತ್ತದೆ. ಇಲ್ಲಿರುವ ವಿಚಾರಗಳೆಲ್ಲವೂ ಈ ಕಾರಣಕ್ಕಾಗೇ ನಾನು ತಿಳಿದವು. ಈ ಕಾರಣಕ್ಕಾಗೇ ನಾನು ನಿಮಗೆ ತಿಳಿಸುತ್ತಿರುವುದು.

ಚರಿತ್ರೆಯ ವಿಸ್ತಾರದಲ್ಲಿ ಆಸ್ಪೋಟಿಸಿ ಬಿದ್ದಂತೆ ಬಿದ್ದಿರುವ ನೂರಾರು ಸಂಗತಿಗಳನ್ನು ಅವುಗಳಿಂದ ಹೊಮ್ಮುವ ಅನೇಕ ಸೂಕ್ಷ್ಮ ಎಳೆಗಳ ಸಹಾಯದಿಂದ ನಿರಂತರ ಸರಣಿಯನ್ನಾಗಿ ಪರಿವರ್ತಿಸಿ ಕಥೆಯ ಚೌಕಟ್ಟಿಗೆ ಅಳವಡಿಸಲು ಇಲ್ಲಿ ಪ್ರಯತ್ನಿದ್ದೇನೆ. ಬಹುಶ: ಇವನ್ನೆಲ್ಲಾ ಅಭ್ಯಾಸ ಮಾಡುವಾಗಲೇ ನೂರಾರು ವಿಷಯಗಳಿಗೆ ಮನಸ್ಸು ಸೂಕ್ಷ್ಮವಾಗಿ ಕಾರ್ಯಕಾರಣ ಸಂಬಂಧವನ್ನು ಆರೋಪಿಸುತ್ತಲೇ ಅರ್ಥಮಾಡಿಕೊಳ್ಳುತ್ತಾ ಹೋಗುತ್ತದೆ ಎಂದು ಕಾಣುತ್ತದೆ. ತಿಳುವಳಿಕೆ, ಅರಿವು ಎಂದರೆ ಅವ್ಯವಸ್ಥೆಯಲ್ಲಿ ವ್ಯವಸ್ಥೆಯನ್ನು ಗುರುತಿಸುವುದೇ ಇರಬಹುದು. ಹೊಸ ವಿಚಾರಗಳ ಮೇಲೆದ್ದಂತೆಯೂ ನಮ್ಮ ವ್ಯವಸ್ಥೆಯ ಸೂತ್ರ ಬದಲಾಗುತ್ತಾ ಹೋಗಬಹುದು. ಬಹಳ ಸೂಕ್ಷ್ಮವಾಗುತ್ತಾ ಅವ್ಯಕ್ತವಾಗುತ್ತಾ ಹೋಗಬಹುದು. ಆದರೂ ಮನಸ್ಸು ಅವುಗಳಲ್ಲೊಂದು ಅಂತರ್ಗಾಮಿಯಾದ ಸಂಬಂಧ ಎಳೆಯನ್ನು ಸ್ಥಾಪಿಸುತ್ತಾಲೇ ಹೋಗುತ್ತದೆ. ಒಂದು ಪುಸ್ತಕಕ್ಕೆ ಹೆಸರು ಕೊಡುವಾಗ ಇವಿಷ್ಟೂ ಸಂಗತಿಗಳು ಏಕೆ ಇಲ್ಲಿ ಒಟ್ಟಾದುವು ಎಂದು ಯೋಚಿಸುತ್ತೇನೆ.

ಈ ಪುಸ್ತಕವನ್ನು 'ಜೀವನದ ಸಂಗ್ರಾಮ' ಎಂದು ಕರೆದರೆ ಇಲ್ಲಿರುವ ನೂರಾರು ವಿಚಾರ ಮತ್ತು ಘಟನೆಗಳ ಅಂತರ್ಗತ ಸಂಬಂಧ ನಿಮಗೆ ಹೊಳೆಯಬಹುದು ಎಂದು ತಿಳಿದ್ಡಿದ್ದೇನೆ







0 comments:

Post a Comment