Friday, January 9, 2015

ಹುಡುಕಾಟ - ಮಿಲನಿಯಮ್ - ೧ - ಪೂರ್ಣಚಂದ್ರ ತೇಜಸ್ವಿ

Hudukata - Millenium 1 - Poornachandra Tejasvi



"ಮಿಲನಿಯಮ್ ಸೀರೀಸ್" ತೇಜಸ್ವಿ ಯವರು ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಆ ಶತಮಾನದ ಅಪರೂಪದ ಕತೆಗಳನ್ನು ಆಯ್ದು ಬರೆದ ಪುಸ್ತಕಗಳು. ಈ ಕತಾ ಮಾಲಿಕೆಯಲ್ಲಿ ೧೬ ಪುಸ್ತಕಗಳಿವೆ. ಒಂದೊಂದು ಪುಸ್ತಕ ಒಂದು ಅಂಶವನ್ನು ಒಳಗೊಂಡ ಕಥೆಗಳನ್ನು ಸೇರಿಸಿ ಬರೆದಿದ್ದಾರೆ.

ಈ ಮಾಲಿಕೆಯ ಮೊದಲ ಪುಸ್ತಕ

ಹುಡುಕಾಟ

ಈ ಪುಸ್ತಕದಲ್ಲಿ ತೇಜಸ್ವಿಯವರು ೧೬ನೇ ಶತಮಾನದಲ್ಲಿ ಎಲ್ನ ಡರೋಡೋ ದಲ್ಲಿ ನಡೆದ ಚಿನ್ನದ ಗಣಿಯ ಹುಡುಕಾಟ ಮತ್ತು ಅದರಿಂದ ಆದ ತಕತ ಪಾತದ ಬಗ್ಗೆ ಬರೆದಿದ್ದಾರೆ.

ಮುನ್ನುಡಿಯಿಂದ:

ಜ್ಞಾನಕ್ಕೆ ನೀರಿನ ಗುಣ ಇದೆ. ನೀರನ್ನು ಕೊಡದಲ್ಲಿ ತುಂಬಿ ಮುಚ್ಚಿಡದೆ ಹೋದರೆ ಅದು ನಿರಂತರವಾಗಿ ತಗ್ಗಿನ ಕರೆದೆ ಹರಿಯುತ್ತಾ ಹೋಗುತ್ತದೆ. ಸಮುದ್ರ ಸೇರುವವರೆಗೂ ಹರಿಯುತ್ತಲೇ ಇರುತ್ತದೆ. ಪ್ರಪಂಚದಲ್ಲಿ ನಾವು ಕಂಡುಕೆಳರಿಯದಂಥ ಮಾಹಿತಿ ಕ್ರಾಂತಿ ಇಂಟರ್ನೆಟ್ ಜಾಲದೊಂದಿಗೆ ಆರಂಭವಾಗಿದೆ. ಹಿಂದೆಲ್ಲಾ ತಮಗೆ ಗೊತ್ತಿದ್ದನ್ನು ಇತರರಿಗೆ ತಿಳಿಸದೆ ತಮ್ಮಲ್ಲೇ ಮುಚ್ಚಿಟ್ಟಿಕೊಂಡು ಅದನ್ನೇ ಬಂಡವಾಳ ಮಾಡಿ ಇತರರನ್ನು ಶೋಷಿಸುತ್ತಿದ್ದರು. ಈಗಲೂ ಅದು ಸಂಪೂರ್ಣ ಅಳಿದಿದೆ ಎನ್ನುವಂತಿಲ್ಲ. ಆದರೆ ಈ ಶತಮಾನದ ಅಂತ್ಯದೊಂದಿಗೆ ಅದರ ಕಾಲವೂ ಕೊನೆಯಾಗುತ್ತದೆ. ಇಂಟರ್ ನೆಟ್ ಈ ಜ್ಞಾನದ ನೀರಿಗೆ ಕಟ್ಟಿದ್ದ ಕತ್ತೆಗಳನ್ನೆಲ್ಲಾ ಒಂದು ಕಡೆಯಿಂದ ದ್ವಂಸ ಮಾಡುತ್ತಿರುವುದನ್ನು ನೋಡಬಹುದು.

ಈ ಶತಮಾನದ ಅನೇಕರೊಂದಿಗೆ ಹೋಲಿಸಿದಾಗ ನಾನು ಹೆಚ್ಚು ಅದೃಷ್ಟವಂತನೆಂದು ಹೇಳಬಹುದು. ಬೆಲೆ ಕಟ್ಟಲಾಗದ ಅಕ್ಷಯ ನಿಧಿ ನನಗೆ ಅನುಭವಗಳ ಮೂಖಾಂತರ, ಅದಕ್ಕಿಂತ ನೂರುಮಡಿಯಾಗಿ ಪುಸ್ತಕಗಳ ಮೂಖಾಂತರ ದೊರಕಿತು. ದೂರದೇಶಗಳ ಬಗ್ಗೆ ಅಗಾಧ ವಿಶ್ವದ ಬಗ್ಗೆ, ಚಿತ್ರ ವಿಚಿತ್ರ ಸಂಸ್ಕೃತಿಗಳ ಮತ್ತು ಜನಗಳ ಬಗ್ಗೆ, ಅಸದೃಶ ಸಾಹಸಗಳ ಬಗ್ಗೆ, ಮಹಾ ಸಂಶೋದನೆಗಳ ಬಗ್ಗೆ ನಾವಾಗೇ ಅದರಲ್ಲಿ ತೊಡಗುವುದಕ್ಕಿಂತ ಆರಾಮಾಗಿ ಕುಳಿತು ಓದುವುದು ಬಹಳ ಕಡಿಮೆ ಖರ್ಚಿನಲ್ಲಿ ನಿರಾಯಾಸವಾದ ಕೆಲಸ. ಆದರೆ ನಮ್ಮ ದೇಶದ ಬಡತನದಿಂದಾಗಿ ಅದೂ ಸಹ ಅನೇಕರಿಗೆ ದುಬಾರಿಯಾಗಿದೆ ಕೈಗೆಟುಕದಂತಾಗಿದೆ. ಅದಕ್ಕೇ ನಾನು ಓದಿದ್ದನ್ನೆಲ್ಲ ನೆನೆಸಿಕೊಂಡು ನಾನು ಅದೃಷ್ಟವಂತ ಎಂದಿದ್ದು. ಈ ಪುಸ್ತಕದಲ್ಲಿ ನಾನು ಸಾದರಪಡಿಸಿರುವ ಒಂದೊಂದು ಲೇಖನದ ವಿಷಯ ವಿಚಾರಗಳನ್ನೂ ನೀವೇ ಸಂಗ್ರಹಿಸಬೇಕೆಂದಾದರೆ, ಅದು ಪುಸ್ತಕಗಳಿಂದಲೇ ಆದರೂ, ನಿಮಗೆ ಅನೇಕ ಸಾವಿರ ರುಪಾಯಿ ಮತ್ತು ಹಲವು ತಿಂಗಳುಗಳ ಕಾಲ ವ್ಯಹಿಸಬೇಕಾಗುತ್ತದೆ. ನಾನು ಪಟ್ಟ ಪಾಡು, ವ್ಯಹಿಸಿದ ಹಣ, ಕಳೆದಕಾಲ ನಿಮಗೂ ಬರದಿರಲಿ ಎಂದೇ 'ಮಿಲನಿಯಮ್' ಸರಣಿ ತರುತ್ತಿರುವುದು. ಪುಸ್ತಕ ತೆರೆಯುತ್ತಿದ್ದಂತೆಯೇ ಯಾವ್ಯಾವುದೋ ಕಾಲ ದೇಶಗಳ ಚಿತ್ರ ವಿಚಿತ್ರ ಘಟನಾವಳಿಗಳ ಪರಿಸರದಲ್ಲಿ ಯಾತ್ರಿಯಾಗಬಹುದು.

ಇಷ್ಟೆಲ್ಲ ಸಂಪರ್ಕ ಸಾಧನಗಳಲ್ಲಿ ಕ್ರಾಂತಿಯಾಗಿದ್ದರೂ, ಅನುಭವ, ಆಲೋಚನೆ, ವಿಚಾರ, ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರ ವಾಹಕಗಳೆಂದರೆ ಇಂದಿಗೂ ಪುಸ್ತಕಗಳೆ. ಕಾಲದ ಅಗ್ನಿಪರೇಕ್ಷೆಯನ್ನು ನಿರಾಯಾಸವಾಗಿ ಗೆದ್ದಿರುವ ಪುಸ್ತಕಗಳು ಜ್ಞಾನದ ನೀರನ್ನು ಕಡಿಮೆ ಅದೃಷ್ಟವಂತರತ್ತ ಸರ್ವದಾ ಹರಿಸುತ್ತ  ಬಂದಿರುವ ಗಂಗಾ ನದಿಗಲೆಂದೇ ಹೇಳಬಹುದು.









0 comments:

Post a Comment