Wednesday, April 8, 2015

ಮಲಯಾಳಂನ ಶ್ರೇಷ್ಠ ಕಥೆಗಳು - ಅನುವಾದಕರು: ಗಂಗಾಧರನ್ ಕೆ ಕೆ

Malayalamna Shreshta Kathegalu - K K Gangatharan 



ಸಣ್ಣ ಕಥೆಗಳೇ ಹಾಗೆ ಯಾವುದೇ ಒಂದು ವಿಷಯವನ್ನು ಬೇಸರಪದಡಿಸದೆ ನಮಗೆ ಒಳ್ಳೆ ಪಾಠವನ್ನು ಕಲಿಸುತ್ತವೆ. ಕನ್ನಡದಲ್ಲಿ ಮಾಸ್ತಿ ಬರೆದ ಸಣ್ಣ ಕಥೆಗಳು, ಚಿತ್ತಾಲರು ಕಲಿಸಿದ ವಿಷಯಗಳನ್ನು ಈಗಿನ ಯಾವ ಕಾದಂಬರಿಕಾರನು ಕಲಿಸಲಾರ. ಅದೇ ರೀತಿ ನಮ್ಮ ಬಯಲು ಸೀಮೆ ಕತೆಗಳಲ್ಲಿ ಬರುವ ಸಮಾಜ ಮತ್ತು ಜನಗಳ ಕೆಲಸ ಸಂಸ್ಕೃತಿ ಒಂದು ರೀತಿಯಲ್ಲಿ ಒಂದೇ ಆಗಿರುತ್ತಾವೆ, ಬರವಣಿಗೆ ಮತ್ತು ವಿಶ್ಲೇಷಣೆ ಬೇರೆ ಯಾದರು ಸ್ಥಳ ಮತ್ತು ಸಂಸ್ಕೃತಿ ಒಂದೇ ಆಗಿರುತ್ತವೆ. ಕನ್ನಡದ ಕತೆಗಳಲ್ಲಿ ರೊಟ್ಟಿ, ಚಟ್ನಿ, ಅನ್ನ ವಸ್ತುವಾಗಿ ಬಂದರೆ ಉತ್ತರ ಭಾರತದ ಕತೆಗಳಲ್ಲಿ ಸಮೋಸ, ಪರಾಟ ಇದ್ದರ ಕೇರಳದಲ್ಲಿ ಬಿರ್ಯಾನಿ, ಮೀನು ಕತೆಗಳ ಒಂದು ಅಗವಾಗಿ ಬಿಡುತ್ತವೆ. 

'ಗಂಗಾಧರನ್' ರವರು ಮಲಯಾಳಂನ ಕೆಲವು ಕಥೆಗಳನ್ನು ವಿವಿಧ ಲೇಖಕರಿಂದ ಆಯ್ದು  ಅನುವಾದಿಸಿ ಪುಸ್ತಕವಾಗಿ ಪ್ರಕಟಿಸಿದ್ದಾರೆ. "ಮಲಯಾಳಂನ ಶ್ರೇಷ್ಠ ಕಥೆಗಳು" ಪುಸ್ತಕದಲ್ಲಿ ಒಟ್ಟು ೨೫ ಕಥೆಗಳಿವೆ. ಇಲ್ಲಿ ಎಲ್ಲ ೨೫ ಕಥೆಗಳು ಶ್ರೇಷ್ಠ ಅಲ್ಲದಿದ್ದರೂ ಬಹುತೇಕ ಕಥೆಗಳು ತುಂಬ ಚೆನ್ನಾಗಿವೆ. ಇಲ್ಲಿ "ಬಂಗಾರಿ" ಕತೆಯಲ್ಲಿ ಬರುವ ಪಾತ್ರಗಳನ್ನು ವಿವರಿಸುವ ರೀತಿ ಮತ್ತು ಅದರ ಸುತ್ತ ಕಥೆ ಕಟ್ಟಿರುವ ರೀತಿ ತುಂಬ ಚೆನ್ನಾಗಿದೆ. ಬಂಗಾರಿ ಕಥೆ ಶುರುವಾಗುವುದು "ಕವಿಗಳೆಲ್ಲಾ ಸುತ್ತುವರಿದು ಮುಕ್ತ ಮನಸ್ಸಿನಿಂದ ಹೊಗಳುವಂತಹ ಸೌಂದರ್ಯ ಸಂಪತ್ತು, ಅಂಗಸೌಷ್ಟವಗಳು ಸಮ್ಮಿಲನಗೊಂಡ ಆಕರ್ಷಕ ವ್ಯಕ್ತಿತ್ವ ನನ್ನ ಬಂಗಾರಿಯದು ಎಂದೇನಾದರೂ ನೀವು ನಂಬಿದರೆ ಅದೊಂದು ದೊಡ್ಡ ತಪ್ಪಾದೀತು. ಸೌಂದರ್ಯೋಪಾಸಕರಾಗಿರುವ ನಮ್ಮ ಕವಿಪುಂಗವರಾರು ಬಂಗಾರಿಯನ್ನು ಕಂಡಿರಲು ಸಾಧ್ಯವಿಲ್ಲ"

ಅದೇ ರೀತಿ "ತಪ್ಪು ಯಾರದು" ಕತೆಯಲ್ಲಿ ಅನಿರೀಕ್ಷಿತ ರಜೆ ಸಿಕ್ಕಾಗ ಮಧ್ಯನವೇ ಮನೆಗೆ ಹೋದಾಗ ಮಗುವಿನ ಅಸಾಯಕ ಮತ್ತು ಕರುಣಾಜನಕ ದೃಶ್ಯ, ಗೋಡೆ ಕತೆಯಲ್ಲಿ ಬರುವ ಅಂತಸ್ತಿನ ವಿಚಾರ ಗಾಳದಲ್ಲಿ ಸ್ನೇಹಿತನಿಗೆ ಮೋಸ ಮಾಡುವ ಚಡ್ಡಿ ದೋಸ್ತು, .......... ಹೀಗೆ ಒಂದೊಂದು ಕತೆ ಒಂದೊಂದು ರೀತಿ ನಮನ್ನು ಒಂದು ಸಂಸ್ಕೃತಿಗೆ ಮತ್ತು ಒಂದು ಜನಾಂಗಕ್ಕೆ ಬಾಗಿಲನ್ನು ತೆರೆಸುತ್ತದೆ.

ಈ ಪುಸ್ತಕ ಇಲ್ಲಿ ಕೊಳ್ಳಬಹುದು






0 comments:

Post a Comment