Monday, August 25, 2014

ಅಚ್ಚರಿ - ಉಜ್ಜಿನಿ ರುದ್ರಪ್ಪ

Achhari - Ujjini Rudrappa



ಪತ್ರಕರ್ತ ಉಜ್ಜಿನಿ ರುದ್ರಪ್ಪ ತಮ್ಮಲ್ಲಿಯ ಕುತೂಹಲವನ್ನು ಜಾಗೃತವಾಗಿ ಇಟ್ಟುಕೊಂಡಿದ್ದರ ಕುರುಹು ಎಂಬಂತೆ 'ಅಚ್ಚರಿ' ಎಂಬ ಕೃತಿಯನ್ನು ನೀಡಿದ್ದಾರೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ತಮ್ಮ ಸುತ್ತಲಿನ ಪರಿಸರದಲ್ಲಿ ಇತರರಿಗೆ ಸಾಮಾನ್ಯ ಅನಿಸಬಹುದಾದ ವಿಷಯದಲ್ಲಿಯ ಅಚ್ಚರಿ ಅಂಶವನ್ನು ಗಮನಕ್ಕೆ ತರುತ್ತಾರೆ. ಅವರು ಹೇಳಿದ ಮೇಲೆಯೇ ಅದರ ಮಹತ್ವ ನಮಗೆ ಗೋಚರವಾಗುವುದು. ಸಾಂಕೇತಿಕವಾದ ಕರಫಲ್ ಭಾಷೆ ಇಂದು ವಿನಾಶದ ಹಾದಿಯಲ್ಲಿದೆ ಎಂದು ಅವರು ಬರೆದಿದ್ದಾರೆ. ಇದನ್ನು ಗೂಢಚರ್ಯದಂಥ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದರತ್ತ ಗಮನ ಸೆಳೆದಿರುವುದೇ ರುದ್ರಪ್ಪ ಅವರ ಮಹಾನ್ ಸಾಧನೆ. ಇಂಥ ಹಲವು ವಿಸ್ಮಯಗಳನ್ನು ಅವರು ಈ ಕೃತಿಯಲ್ಲಿ ನೀಡಿದ್ದಾರೆ. ಇದರ ಎರಡನೇ ಭಾಗದಲ್ಲಿ ಹದಿನೆಂಟು 'ಗಣ್ಯರು ಕಂಡಂತೆ ಕಾಂಚಾಣ'ವನ್ನು ಕಿರು ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಣದ ಕುರಿತ ಈ ಅನುಭವದ ಮಾತುಗಳು ಸಾಮಾನ್ಯರಿಗೆ ದಾರಿದೀಪದಂತೆ ಇವೆ.





0 comments:

Post a Comment