Tuesday, August 5, 2014

ಏಳು ರೊಟ್ಟಿಗಳು - ಕೆ ಎನ್ ಗಣೇಶಯ್ಯ

Elu Rottigalu K. N. Ganeshaiah




ನಮ್ಮ ಇತಿಹಾಸ ಎಷ್ಟು ಕಲುಷಿತವಾಗಿದೆ ಎಂದರೆ ಯಾವುದು ನಿಜ ಯಾವುದು ಸುಳ್ಳು ಎಂದು ಹೇಳಲಾಗುವುದಿಲ್ಲ. ನಮ್ಮ ಭಾರತದ ಇತಿಹಾಸ ಬ್ರಿಟಿಷರು ಕಲುಷಿತ ಮಾಡಿ ಹೋದರು, ಈ ನಮ್ಮ ರಾಜಕಾರಣಿಗಳು ತಮ್ಮ ಮತ ಪೆಟ್ಟಿಗೆ ಉಳಿಸಿಕೊಳ್ಳಲು ಇನ್ನು ಅದನ್ನೆ ಮಾಡುತ್ತಿದ್ದಾರೆ. ನಿಜವಾದ ಇತಿಹಾಸದ ಬಗ್ಗೆ ಮುಂದೆ ಗೊತ್ತಾಗೊ ಬಗ್ಗೆ ನಗಂತೂ ಆಶಯ ಇಲ್ಲ, ಯಾಕೆಂದರೆ ಸಂಶೋಧನೆ ಮಾಡೊ ಉಸ್ತ್ತುಕತೆ ಇದ್ದರು ಯಾರು ಪ್ರೋಸ್ತಹ ಮಾಡೋಲ್ಲ ಇದರ ಬಗ್ಗೆ ಬರೆಯುತ ಹೋದರೆ ಈ ಲೇಖನ ಸಾಲೋದಿಲ್ಲ. ಗಣೇಶಯ್ಯನವರು ಬರೆದಿರುವ 'ಏಳು ರೊಟ್ಟಿಗಳು' ಐತಿಹಾಸಿಕ ಕಾದಂಬರಿ ಸ್ವತಂತ್ರ ನಂತರ ಹೈದರಾಬಾದ್ ನಲ್ಲಿ ನಡೆದಿರಬಹುದಾದ ಘಟನೆಗಳನ್ನು ಕುರಿತಾಗಿದೆ. 

ಗಣೇಶಯ್ಯನವರು ಬರೆದಿರುವ ಇತರೆ ಕಾದಂಬರಿಗಳಂತೆ ಇದುವೇ ಕಾಲ್ಪನಿಕ ಮಿಶ್ರಿತ ಇತಿಹಾಸ ಕಥ. ಸ್ವತಂತ್ರ ನಂತರ ಹೈದರಾಬಾದ್ ರಾಜ್ಯವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂದು ಹೈದರಾಬಾದ್ ನವಾಬರು ಪ್ರಯತ್ನಿಸಿದ್ದು ಎಲ್ಲರಿಗು ಗೊತ್ತಿದೆ. ಇದನ್ನು ತಡೆಯಲು ನೆಹರು ಸೇನೆಯನ್ನು ಕಳಿಸುತ್ತಾರೆ, ಸೇನೆ ಕಾರ್ಯಾಚರಣೆ ನಟರ ಹೈದರಾಬಾದ್ ಭಾರತದ ಭಾಗವಾಗುತ್ತದೆ, ಇದೆಲ್ಲ ಇತಿಹಾಸ. ಪರದೆ ಹಿಂದೆ ನಡೆದ ಘಟನೆಗಳು ಮತ್ತು ಅದರೊಳಗೆ ಒಂದು ರೋಚಕ ನಿಧಿ ಹುಡುಕುವ ಕಥೆಯನ್ನು ಸುಂದರವಾಗಿ ಮತ್ತು ಎಲ್ಲೂ ಅಧಿಕ ಅನಿಸದಂತೆ ಹಣೆದಿದ್ದಾರೆ. 

ಈ ಕಾದಂಬರಿ ಬರೆಯಲು  ಗಣೇಶಯ್ಯನವರು ಹೈದರಬಾದ್ ಇತಿಹಾಸದ ಬಗ್ಗೆ ಮಾಡಿರುವ ಅಧ್ಯಾನ ಶ್ಲಾಘನೀಯ. ನಿಜಾಮ್ ರ ನಿಜವಾದ ಕಥೆ ತಿಳಿಯಲು ಹೈದರಾಬಾದ್ ಗಲ್ಲಿ ಗಲ್ಲಿ ಸುತ್ತಿ ಘಟನೆಗಳನ್ನು ಕೂಡಿಹಾಕಿ ಮತ್ತು ಭಾರತದಲ್ಲಿ ನಿಷೇದಿತ ಪುಸ್ತಕದ ಜೆರಾಕ್ಸ್ ಪ್ರತಿ ಅಧ್ಯಾನ ಮಾಡಿ ಈ ಸುಂದರವಾದ ರೋಚಕ ಕಾದಂಬರಿಯನ್ನು ಬರೆದ್ದಿದ್ದಾರೆ. ಇಲ್ಲಿ ಗೋಪ್ಯವಾದ ನಿಶಿ ಇದೆ, ಇಂಟೆಲಿಜೆನ್ಸ್ ಆಫೀಸರ್ಸ್ ಇದಾರೆ, ಗುಪ್ತ ಸೈನಿಕರಿದ್ದಾರೆ, ... ಒಂದು ರೋಚಕ ಕಾದಂಬರಿಗೆ ಇನ್ನೇನು ಬೇಕು. 




0 comments:

Post a Comment