Sunday, June 21, 2015

ನಿಮ್ಮಷ್ಟು ಸುಖಿ ಯಾರಿಲ್ಲ - ವಿಶ್ವೇಶ್ವರ ಭಟ್

Nimmashtu Sukhi Yarilla - Vishweshwara Bhat

 

ಸ್ವಾಮಿ ಅನಾಮಧೆಯಪೂರ್ಣ ಎಂಬ ಹೆಸರಿನಲ್ಲಿ ನಾನು 'ಬತ್ತದ ತೆನೆ' ಎಂಬ ಅಂಕಣ ಬರೆಯುತ್ತಿದ್ದೆ, ನಂತರ ಅದೇ ಹೆಸರಿನಲ್ಲಿ ಪುಸ್ತಕವನ್ನು ಸಹ ಪ್ರಕಟಿಸಿದೆ ಈ ಕೃತಿಗೆ ಸಿಕ್ಕ ಪ್ರತ್ರಿಕ್ರಿಯೆ ಅಭೂತಪೂರ್ವ. ಈಗಲೂ ಅನೇಕರು ಕೃತಿಗೆ ಓದು ನೀಡಿದ ಸ್ಪೂರ್ತಿ ಬಗ್ಗೆ ಬರೆಯುತ್ತಿರುತ್ತಾರೆ.

ಇತ್ತೀಚಿಗೆ 'ಬತ್ತದ ತೆನೆ'ಯನ್ನು ಓದಿದ ಯೋಗಿ ದುರ್ಲಭಜೀ  ಅವರು. 'ಇಂತ ಕೃತಿ ಬಹಳ ಉಪಯುಕ್ತ. ನೀವು ಇದರ ಮುಂದಿನ ಭಾಗವನ್ನು ಬರೆಯಬೇಕು. ಜನರಿಗೆ ಉಪದೇಶಗಳನ್ನು ಕೊಡದೇ, ಸಲಹೆ. ಟಿಪ್ಸ್ ಗಳನ್ನೂ ಕೊಡುತ್ತಾ ಬದುಕಿನ ಪ್ರಮುಖ ಸಂಗತಿಗಳನ್ನು ಹೇಳಬೇಕು. ಅದಕ್ಕೂ ಮೊದಲು ಈ ಟಿಪ್ಸ್ ಗಳನ್ನು ನಿಮ್ಮ ಮೇಲೆ ಪ್ರಯೋಗಿಸಿಕೊಳ್ಳಬೇಕು. ಆಗ ಕೃತಿ ಶುಲ್ಕವಾಗುವುದಿಲ್ಲ. ಬೋಧೆಯಾಗುವುದಿಲ್ಲ. ಈಗ ಜನರಿಗೆ ಬೇಕಾಗಿರುವುದೇ ಇದು' ಎಂದರು.

ಅವರ ಮಾತುಗಳನ್ನು ಕೇಳಿದ ಬಳಿಕ ೩೦-೪೦ ಅಧ್ಯಾಯಗಳ ಶೀರ್ಷಿಕೆಗಳನ್ನು ಬರೆದಿಟ್ಟುಕೊಂಡೆ. ದುರ್ಲಭಜೀಯವರು  ಹೇಳಿದಂತೆ. ಈ ಪೈಕಿ ನಾನು ಎಷ್ಟು ಟಿಪ್ಸ್ ಗಳನ್ನು ಅಳವಡಿಸಿ ಕೊಂಡಿದ್ದೇನೆ ಎಂದು ನನ್ನನ್ನೇ ಕೇಳಿಕೊಂಡೆ. ಪೈಕಿ ನಾನು ಆಚರಿಸುತ್ತಿರುವ, ಪಾಲಿಸುತ್ತಿರುವ ಟಿಪ್ಸ್ ಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಅವುಗಳ ಬಗ್ಗೆ ಹೆಚ್ಚು ಕೊರೆಯದೇ, ಸಂಕ್ಷಿಪ್ತವಾಗಿ ಬರೆಯಲಾರಂಭಿಸಿದೆ.

ಅವರ ಪರಿಣಾಮಣವೇ ಈ ಕೃತಿ!

ಬಹಳ ಸಂದರ್ಭಗಳಲ್ಲಿ ನಾವು ಸುಲಭವಾದ. ಸರಳವಾದ ಸಂಗತಿಗಳನ್ನು ಕ್ಲಿಷ್ಟಮಾಡಿಕೊಂಡು ಪೇಚಾಡುತ್ತೇವೆ. ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದೊಂದೇ ಅಲ್ಲ. ಆಹ್ವಾನವನ್ನೂ ಮಾಡುತ್ತೇವೆ. ಸಣ್ಣ ಸಂಗತಿಗಳೇ ನಮಗೆ ಬೃಹದಾಕಾರವಾಗಿ ಕಾಡುತ್ತವೆ.

ಅಷ್ಟಕ್ಕೂ ಜೀವನ ಅಂದ್ರೆ ಇದೇನಾ? ಇಷ್ಟೇನಾ? ನಮ್ಮ ಬದುಕನ್ನು ಸುಂದರವಾಗಿ ಕಳೆಯಲು ನೂರಾರು ಮಾರ್ಗಗಳಿವೆ. ಮಾರ್ಗಗಳು ಅಷೆಲ್ಲಾ ಇರಲಿ ಬಿಡಿ. ಆದರೆ ಆ ಸೌಂದರ್ಯವನ್ನು ಬೇರೆಲ್ಲೂ ಅರಸಬೇಕಾಗಿಲ್ಲ. ಅದನ್ನು ಹುಡುಕುವ ಮಾರ್ಗವಿದ್ದರೆ ಒಂದೇ. ನಮ್ಮ ಸುಖವನ್ನು ಸೃಷ್ಟಿಸಿಕೊಳ್ಳಬೆಕಾದವರು ನಾವೇ. ಅದು ನಮ್ಮೊಳಗೇ ಇದೆ. ಅದೇ ನಮಗೆ ಗೊತ್ತಿಲ್ಲ ಅದಕ್ಕಾಗಿ ಎಲ್ಲೆಲ್ಲೋ ಹುಡುಕುತ್ತೇವೆ. ಯಾರನ್ನೋ ಹುಡುಕಿಕೊಂಡು ಹೊಗುತ್ತೇವೆ. ನಮ್ಮನ್ನು ನಾವು ಪದೇಪದೆ ಭೇಟಿ ಮಾಡಿದರೆ, ನಮ್ಮೊಡನೆ ಕುಳಿತು ವಿಚಾರ ವಿನಿಮಯ ಮಾಡಿಕೊಂಡರೆ ಎಲ್ಲವೂ ಸಲೀಸು. ಅದಕ್ಕಾಗಿ ನಾವು ನಮಗೆ ಸಿಗಬೇಕು. ಆಗಲೇ ನಮ್ಮ ಸುಖ ಎಲ್ಲಿದೆಯೆಂಬುದು ತಿಳಿದೀತು.

ಈ ಪುಸ್ತಕ ಓದಿದೆ ಬಳಿಕ ನಿಮ್ಮಲ್ಲಿರುವ ಸುಖ, ಸಂತಸ, ನೆಮ್ಮದಿ ನಿಮಗೆ ಸಿಗಲಿ. ಸಿಗುತ್ತದೆಂದು ಆಶಯ ನನ್ನದು. ಯೋಗಿ ದುರ್ಲಭಾಜೀ ಅವರು ಹೇಳುವುದೇನೆಂದರೆ, 'ನಮಗೆ ಬೇಕಿರುವುದು ಜೀವನದ ಕುರಿತಾದ ಸಿದ್ದಾಂತಗಳಲ್ಲ. ಸರಳವಾದ ಜೀವನ ಸೂತ್ರಗಳು. ಒಂದು ಎಳೆ ಸಿಕ್ಕರೆ ದಾರ, ದಾರದಿಂದ ಹಗ್ಗ ಮಾಡಿಕೊಳ್ಳುವ ಜಾಣ್ಮೆಯನ್ನು ಜೀವನವೇ ಕಲಿಸಿಕೊಡುತ್ತದೆ.'

ನನ್ನ ಪ್ರಕಾರ, ಈ ಕೃತಿ ಕೂಡ ಅಂಥ ಒಂದು ಸಣ್ಣ ಎಳೆ. ಅದನ್ನು ನೀವು ದಾರವನ್ನಾದರೊ ಮಾಡಿಕೊಳ್ಳಿ, ಹಗ್ಗವನ್ನಾದರೂ ಮಾಡಿಕೊಳ್ಳಿ ಒಟ್ಟಾರೆ ಏನಾದರು ಮಾಡಿಕೊಳ್ಳಿ ಅದು ನಿಮ್ಮ ಬದುಕನ್ನು ಹಸನುಗೊಳಿಸುವ ಚೆಂದದ 'ಸೂತ್ರ'ವಾಗಲಿ.




0 comments:

Post a Comment