Sunday, June 7, 2015

ನೂರೆಂಟು ಮಾತು - ವಿಶ್ವೇಶ್ವರ ಭಟ್

Noorentu Maatu - Vishweshwara Bhat



ವಿಶ್ವೇಶ್ವರ ಭಟ್ ರವರ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾದ "ನೂರೆಂಟು ಮಾತು" ಅಂಕಣದ ಸಂಗ್ರಹ ಈ ಪುಸ್ತಕದಲ್ಲಿದ. ಪ್ರತಿವಾರ ಬೇರೆ ಬೇರೆ ವಿಷಯ ಹುಡುಕಿ ಅರ್ಧ ಪುಟ ಓದುಗರಿಗೆ ನಿದ್ದೆ ಬರದಂತೆ, ಬೇರೆ ಪುಟ ತಿರುವದಂತೆ ಹಿಡಿದಿಡುವ ಕಲೆ ವಿಶ್ವೇಶ್ವರ ಭಟ್ ರಿಗೆ ಗೊತ್ತು. ಅವರ ಕೆಲವೊಂದು ವಿಷಯ ವಿವಾದಾತ್ಮಕ ಅನಿಸಿಕೊಂಡರು ಅವರ ಅಧ್ಯಯನದ ಆಳ ಕಮ್ಮಿಯಲ್ಲ.

ಅವರು ಈಗ "ಕನ್ನಡ ಪ್ರಭ" ಪತ್ರಿಕೆ ಬಿಟ್ಟ ಮೇಲೆ ಗುರುವಾರದ "ನೂರೆಂಟು ಮಾತು" ಅಂಕಣ ಇಲ್ಲದ ಪತ್ರಿಕೆ ಓದುವುದು ಗೌಡರ ಮನೆಯಲ್ಲಿ ಭಾನುವಾರ ಕೋಳಿ ಊಟ ಇಲ್ಲದಂತೆ. ಅವರು ವಿಜಯ ಕರ್ನಾಟಕ ಬಿಟ್ಟ ಮೇಲೆ ಅವರ ಓದುಗರು ತಮ್ಮ ಮನೆಯಲ್ಲಿ ಕನ್ನಡ ಪ್ರಭ ತರಿಸಲಾರಂಭಿಸಿದರು. ಈಗ ಯಾವುದೇ ಪತ್ರಿಕೆಯಲ್ಲಿ ಬರೆಯುತ್ತಿಲ್ಲ ಅಂದ ಮೇಲೆ ಅವರ ನಿಷ್ಠಾವಂತ ಓದುಗರು ಈ ಪುಸ್ತಕಗಳ ಮೊರೆ ಹೋಗಿದ್ದಾರೆ. ಅವರ ಒಂದೇ ಆಸೆ ಮತ್ತೆ ಗುರುವಾರ "ನೂರೆಂಟು ಮಾತು" ನಿಂದ ಶುರುವಾಗಲಿ ಎಂದು.




0 comments:

Post a Comment